ಒಟ್ಟು 10034 ಕಡೆಗಳಲ್ಲಿ , 132 ದಾಸರು , 5388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ಧ್ರುವ ವೃಥಾ ಅಭಾವ ನೀ ಹಿಡುವರೆ ಸ್ವತ:ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವರು ಕಣ್ಣಾರೆ 1 ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ 2 ಅನುಭವಕಿದರಿಟ್ಟು ಬಾಹುದು ಖೂನ ಹೇಳವ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿತೇಜನೊಂದೇ ತಾನಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯದು ಕುಲಾಂಬುನಿಧಿ ಪೀಯೂಷಕ್ಷಕರ ಪಂಚಸಾಯಕಾನಂತ ಕಮನೀಯ ರೂಪಾ ಕಮಲಾಯತಾಕ್ಷನೆ ಬ್ರಹ್ಮ, ವಾಯು, ಸುರಮುನಿ ಮುಖ್ಯಧ್ಯೇಯ ವಿಷ್ಣೋ ಪ ಗೋತ್ರಾರಿ ಪುತ್ರನಿಜಮಿತ್ರ ಸುಪವಿತ್ರ ಚಾ ಕಳತ್ರ ಶುಭಗಾತ್ರಗತಿ ಸತ್ರತ್ರಿನೇತ್ರನುತ ಸಕಲಜಗ ಸೂತ್ರ ನೋಟಕ ತೋತ್ರವೇತ್ರ ಪಾಣೆ 1 ಭವ ಭವ ಭಂಗ ವರಗೋಪಾಂಗನಾ ಅಂಗ ಸಂಗಲೀಲಾರತ ಭುಜಂಗ ಪರಿಯಂಕ ಸುರ ತುಂಗ ಗಂಗಾಜನಕ ಸರ್ವಾಂತರಂಗ ಹರಿ ಮಂಗಳಾತ್ಮಕ ತಿರುವೆಂಗಳೇಶಾ 2 ನಂದಕಂದ ಶ್ರೀ ಮುಕುಂದ ದುರಿತಾಂಧ ಅರ ವಿಂದಭಾಂಧವ ದಿತಿ- ಜವೃಂದ ವ್ಯಾಳಖಗೇಂದ್ರ ತಂದೆ ಮಹಿಪತಿ ನಂದನ ಪ್ರಿಯ ಗೋವಿಂದ ಆ ನಂದ ಕಂದನೆ ಸಿಂಧುಶಯನ ದೇವಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯದುನಂದನ ಬುಧಚಂದನ ಭವಬಂಧನ ದಮನಾ ಪ ಮಧುಸೂದನ ವಿಧುರಂಜನ ಕಮಲಾಕರಭವನಾ ಅ.ಪ ಅಜವಂದಿತ ಗಜಸೇವಿತ ಕರುಣಾರಸ ಭರಿತ ಸುಜನಾನತ ಭಜಕಾನ್ವಿತ ಜಗದೀಶ್ವರ ಮಹಿತಾ 1 ಪುರುಷೋತ್ತಮ ಪದವಿಕ್ರಮ ದನುಜಾವಳಿ ಭೀಮಾ ಪರಮೋತ್ತಮ ಶರಧಿಸಮಾಯುತ ಮಾಂಗಿರಿಧಾಮಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯದುನಾಥ ಯದುನಾಥ ಮುದದಿಂದಲಿ ಪೊರೆ ಪದುಮಿಣಿ ವಲ್ಲಭ ಪ. ಪೊಡವಿಯೊಳಗೆ ಪಡುಗಡಲೆಡೆವಾಸ ತಡವೇತಕೆ ಪಾಲ್ಕಡಲಶಯನ ಪೊರೆ 1 ಅಣುಮಹ ಕಾಲಾತ್ಮಕ ಸರ್ವೇಶ್ವರ ಗುಣಗಣಪೂರ್ಣನೆ ಸರ್ವವ್ಯಾಪಕ 2 ಚಿಂತನೆದೂರ ಅಚಿಂತ್ಯ ಮಹಿಮ ಗುಣ ವಂತ ಅನಂತ ಮಹಂತ ಕಾಲಾಂತಕ 3 ಸ್ಥಾವರ ಜಂಗಮ ಜೀವರ ಬಿಂಬ ಶ್ರೀ ಪಾವಮಾನಿ ಮತ ಸುಜನೋದ್ಧಾರಕ 4 ಬಾಲರೂಪ ಕಡಗೋಲ ಪಿಡಿದ ಗೋ ಪಾಲಕೃಷ್ಣವಿಠ್ಠಲ ಉಡುಪೀಶ 5
--------------
ಅಂಬಾಬಾಯಿ
ಯದುಪತಿ ನಮಗಾಗಲಿ | ನಿನ್ನಲಿ ರತಿ ಪ ಅನುಭವಿಗಳ ಸಂಗತೀ 1 ಮರೆಯದೆ ಇಂಥಾ ಮತಿ2 ಸ್ವಾಂತ ಧ್ವಾಂತ ಶ್ರೀದವಿಠಲಾ | ಪ್ರಾಂತಕೆ ನೀನೇ ಗತೀ 3
--------------
ಶ್ರೀದವಿಠಲರು
ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ. ಭುಜದಲೊತ್ತಿದ ಶಂಖಚಕ್ರಾಂಕಿತವನ್ನು ನಿಜ ದ್ವಾದಶನಾಮ ಧರಿಸಿಪ್ಪರಾ ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ ಸುಜನರಂಗಣವ ಪೊಗದೆ ಬನ್ನಿರೆಂದು 1 ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ ಲೇಪಿಸಿ ಹರಿಹರರೊಂದೆಂಬ ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2 ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತಲೊಮ್ಮೆ ಕರಗಳ ಮುಗಿದು ನ - ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3 ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ- ದಿರಕೆ ಪೋಗಿ ಪೋಗಿ ನಿರ್ಬಂಧಿಸಿ ಬರಿದೆ ಬೈದು ಬಳಲಿಸುವ ಪಾಪಿಗಳ ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4 ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನುತ ಉನ್ನತ ಹರಿದಿನ ವ್ರತವನಾಚರಿಪ ಪ್ರ- ಸನ್ನರ ಗುಣವ ಕೆಣಕದೆ ಬನ್ನಿರೆಂದು 5 ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು ಚಿಮ್ಮುತ ಚೀರುತ ಬೊಬ್ಬೆಗಳಿಡುತ ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6 ಕೇಶವ ಹರಿ ಅಚಲಾನಂದವಿಠಲನ್ನ ಶೇಷಗಿರಿಯ ತಿರುಮಲೇಶನ ದಾಸರ ದಾಸರ ದಾಸನೆಂದೆನಿಸುವ ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7
--------------
ಅಚಲಾನಂದದಾಸ
ಯಮುನೇ ದುರಿತೋಪಶಮನೇ ಪ ಶರಣೆಂಬೆ ತವ ಪಾದಾಂಬುರುಹ ಯುಗಳಿಗೆ ದಿವಾ ಕರತನಯೆ ಸಪ್ತಸಾಗರ ಭೇದಿನೀ ಹರಿತೋಷ ಲಾಭ ಸುಂದರಿ ಸುಭಗೆ ನಿನ್ನ ಸಂ ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ 1 ಮಕರಾದಿ ಮಾಸದಲಿ ವಿಖನಸಾವರ್ತ ದೇ ಶಕೆ ಬಂದು ವಿಜ್ಞಾನ ಭಕುತಿಯಿಂದಾ ತ್ರಿಕರಣದ ಶುದ್ಧಿಯಲಿ ಸಕೃತ ಸ್ನಾನದ ಗೈಯೆ ಸಕಲ ಸುಖವಿತ್ತು ದೇವಕೀಸುತನ ತೋರಿಸುವೆ 2 ಕನಕಗರ್ಭಾವರ್ತವೆನಿಪ ದೇಶದಲಿ ಸ ಜ್ಜನರ ಪಾಲಿಪೆನೆಂಬ ಅನುರಾಗದಿ ಪ್ರಣವಪಾದ್ಯಗೆ ವಿಮಲ ಮುನಿಯಂತೆ ನಿರುತ ಕುಂ ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ 3 ಜಮದಗ್ನಿ ಮುಖ್ಯ ಸಂಯಮಿಗಳನುದಿನದಿ ಆ ತಮ ತಮ್ಮೊಳಗೆ ರಮಾರಮಣ ದಾಮೋದರನ ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು 4 ಪಿಂಗಳಾಧಿಷ್ಠಿತೆ ಶುಭಾಂಗಿ ಸುಮನವನಿತ್ತು ಕಂಗೊಳಿಸು ಎನ್ನಂತರಂಗದಲ್ಲಿ ತುಂಗ ಸುಮಹಿಮ ಜಗನ್ನಾಥ ವಿಠಲನ ಸುಗು ಣಂಗಳ ತುತಿಪುದಕೆ ಮಂಗಳ ಮತಿಯನೀಯೇ 5
--------------
ಜಗನ್ನಾಥದಾಸರು
ಯಾಕ ಸ್ಮರಸದೀ ಮನಸಿಗೇ ಪ ಯಾಕ ಸ್ಮರಸದೀ ಮನಸಿಗೆ | ಲೋಕದೊಳು ತನ್ನ ಸುಖಗೆ | ಮಾಕಾಂತ ನಡಿಗಳ ಮರೆಹೊಕ್ಕು | ವಿ ವೇಕ ಸೌಖ್ಯ ಪಡಿಯದೀಗ 1 ಉತ್ತಮ ಸಂಗವ ನೆರೆಮಾಡಿ ತನ್ನ | ಚಿತ್ತದ ಚಂಚಲ ನೀಡ್ಯಾಡೀ | ನಿತ್ಯದಿ ಗುರು ಹಿರಿಯರ ಶೇವೆಯಲಿ| ಹೊತ್ತು ಸಾರ್ಥಕ ಕಳಿಯದು ನೋಡು 2 ಸಣ್ಣ ದೊಡ್ಡವರಿಂದ ಭಲರೇಯಾ ಯಂದು | ಮನ್ನಿಸಿಕೊಳ್ಳದೇ ಅವರ ಕೈಯ್ಯಾ | ಕುನ್ನಿಯ ಛೀ ಸುಡು ಸುಡು ಯಂದು | ನಿನ್ನ ಜನ್ಮಕೆನಿಸುವದು ಬಲು ಕುಂದು 3 ವಿಹಿತವೇ ಅಹಿತವೆಂದು ಬಗೆವದು ತನ್ನ | ಸ್ವಹಿತವೇ ಅಹಿತೆಂದಾಚರಿಸುವುದು | ಇಹಪರ ಲೋಕಕ ಸಲ್ಲದು ಆಗಿ | ಕುಹಕ ಬುದ್ಧಿಯಿಂದಲೇ ಬಾಳುದು 4 ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ | ಕೇನೋ ಮುಂದಣಗತಿ ಶಿವಬಲ್ಲಾ | ಅನುಮಾನ ವಿಲ್ಲಿದರೊಳು ಕಂಡು ಕೇಳಿ | ಘನಗುರು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕಿಂತುಪೇಕ್ಷಿಸುವಿ ಪರಮ ಕರು- ಣಾಕರ ಶಿಕ್ಷಿಸುವಿ ಪ. ಹಿಂದಿನಾಪತ್ತುಗಳ ಸಮಯದಿ ನೀ ಬಂದೆನ್ನ ಕಾಯ್ದುದಿಲ್ಲವೆ ತಂದೆ ನೀನೆಂದು ನಂಬಿದ ಮೇಲೆನ್ನ ನೀನು ಇಂದಿಂತುಪೇಕ್ಷಿಪುದೆ 1 ಭವರೋಗಹಾರಿ ನಿನ್ನ ಭಕ್ತನಿಗಿಂಥ ಭವಣೆಯು ನಿಲುವುದುಂಟೆ ಕವಿ ಸನಕಾದ್ಯರಂತೆ ದೈಹಿಕ ದು:ಖ ಸಹಿಸಲು ಶಕ್ತಿಯುಂಟೆ 2 ಸೈರಿಸಲಾರೆ ಇನ್ನು ವೇದನೆಯಾ ಶೌರೀ ನೀ ದಯದೋರಿನ್ನು ಬರಗರಸಮಂಡನ ಕೃಪಾಕಟಾಕ್ಷ ದೋರೊ ಸುರಾರಿಖಂಡನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾಕಿಷ್ಟು ದಯವಿಲ್ಲ ಎನ್ನಮೇಲೆನೀ ಕರುಣಿಸಿದರಾಗದ ಕಾರ್ಯವುಂಟೆ ಪ ಬಾಲೆಗೊಲಿದು ಹಾಲಕುಡಿದವನೆಂದೆನೆಸೂಳೆಯ ಮನೆಗೆ ನಾ ಹೋಗೆಂದೆನೆಲೋಲಾಕ್ಷಿಯ ಕುಚದೊಳೆ ಮಾತಾಡೆಂದೆನೆಚೋಳನಂತೆ ಹೊನ್ನ ಮಳೆಯ ಕರೆಯೆಂದೆನೆ1 ಊರುಗಲ್ಲೊಳು ಕನ್ನವ ಕೊಯಿದನೆಂದನೆಊರನೆ ಕೈಲಾಸಕ್ಕೊಯಿಯೆಂದೆನೆಕ್ರೂರ ಬಾಣನ ಬಾಗಿಲ ಕಾಯ್ದನೆಂದೆನೆನೀರ ಮಂಡೆಯೊಳು ಪೊತ್ತವನೆಂದು ಪೇಳ್ದೆನೆ 2 ಮಲ್ಲಗಾಳಗವನು ಮಾಡಿದನೆಂದೆನೆಬಿಲ್ಲಿನಿಂ ಬಡಿಸಿಕೊಂಡವನೆಂದೆನೆಎಲ್ಲರರಿಯೇ ತಿರಿದುಂಡವನೆಂದನೆಕಲ್ಲುಮನವೇ ಕೆಳದಿರಾಮೇಶ್ವರಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಯಾಕುಪೇಕ್ಷಿಸುವಿ ಕರುಣೈಕನಿಧಿ ನರಸಿಂಹ ವೈರಿ ಪುಂಜನನ ಶ್ರೀಕರನೆ ನೀನೆನಗೆ ಶರಣೆಂದು ನಂಬಿದೆನು ಸಾಕಬೇಕಯ್ಯ ದಾಸರನು ಪ. ಹುಡುಗ ಪ್ರಲ್ಹಾದ ಜಗದೊಡೆಯ ನೀನಹುದೆಂಬ ನುಡಿಯಲಾಲಿಸುತವನ ಪಿತನು ಕಡಿವೆನೆಂದೆದ್ದು ಮುಂದಡಿಯಿಟ್ಟು ಮುಂದರಸಿ ದೃಢ ಮುಷ್ಟಿಯಿಂದ ಖಂಬವನು ಬಡಿಯುತಿರೆ ಶತಕೋಟಿ ಸಿಡಿಲಂತೆ ಗರ್ಜಿಸುತ ಘುಡುಘುಡಿಸಿ ಬಂದು ದೈತ್ಯನನು ಪಿಡಿದೆತ್ತಿ ತೊಡೆಯ ಮೇಲ್ ಕೆಡಹಿ ದಶನಖದಿಂದ ಒಡಲ ಬಗೆದನೆ ನೀಚರನು 1 ನರಸಿಂಹನೆಂಬ ಈರೆರಡು ವರ್ಣವ ಜಪಿಸೆ ದುರಿತ ದೂರೋಡುತಿಹವೆಂದು ಸರಸಿಜೋದ್ಭವ ಶಂಭು ಸುರನಾಥ ಮುಖ್ಯಮುನಿ ವರರು ಕೊಂಡಾಡುತಿಹರಿಂದು ಅರಿತದನು ತ್ವತ್ಪಾದ ಸರಸಿಜವೆ ಶರಣೆಂದು ದೊರೆ ನಿನ್ನ ನಂಬಿಕೊಂಡಿಹೆನು ಅರಿಭಾವ ಸಾಧಿಸುವ ದುರುಳರನು ಪಿಡಿದವರ ಕರುಳ ತೆಗೆದೆತ್ತಿ ಬೀರದನು 2 ಅತಿ ಸೂಕ್ಷ್ಮಯಂದಗ್ನಿ ಗತಿಯನ್ನುಪೇಕ್ಷಿಸಲು ವಿತತವಾಗುವುದು ಕ್ಷಣದೊಳಗೆ ಜತನ ಮಾಡುವರದರ ಗತಿಯನಳಿಸುವುದು ಸ- ಮ್ಮತವಾಗಿರುವುದು ಜಗದೊಳಗೆ ಪತಿತಪಾವನ ಶೇಷಗಿರಿರಾಜ ನೀ ಯೆನಗೆ ಗತಿಯಾಗಿ ಸಲಹುವುದರಿಂದ ವಿತಥಾಭಿಲಾಷೆಯಾತತಾಯಿಗಳ ತ್ವರೆಯಿಂದ ಹತಮಾಡಿಸು ಶ್ರೀ ಮುಕುಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾಕೆ ಕಳವಳವೋ-ಮಾನಸ ನಿನಗ್ಯಾಕೆ ಕಳವಳವೋ ಪ ಶ್ರೀಕಳತ್ರನು ಜಗದೇಕ ನಾಯಕ ನಿರಲ್ಯಾಕೆ ಅ.ಪ. ಹೊಟ್ಟೆಯೊಳಿರಲನ್ನ ವಿಟ್ಟು ಕಾಪಾಡಿದ ಸೃಷ್ಠಿಪಾಲಕ ಪರಮೇಷ್ಠಿಜನಕ ನಿರೆ 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೇ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪವರದ ವಿಠ್ಠಲಾ ಪದ್ರಕ್ಷಕ ನಿರಲ್ಯಾಕೆ ಕಳವಳವೋ 3
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಳವಳವೋ-ಮಾನಸ ನಿನಗ್ಯಾಕೋ ಕಳವಳವೋ ಪ ತ್ರೀಕಲತ್ರನು ಜಗದೇಕನಾಯಕನಿರಲ್ಯಾಕೆ ಅ.ಪ ಹೊಟ್ಟೆಯೊಳಿರನ್ನವಿಟ್ಟು ಕಾಪಾಡಿದ ಸೃಷ್ಟಿ ಪಾಲಕ ಪರಮಷ್ಠಿ ಜನಕನಿರಲು 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೆ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪÀ ವರದವಿಠಲಾಪದ್ರಕ್ಷಕನಿರಲು 3
--------------
ವೆಂಕಟವರದಾರ್ಯರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಯಾಕೆ ನಿನಗೆ ಮನವೆ ವ್ಯಥೆಯು ಎಷ್ಟು ಲೋಕನಾಯಕ ಶ್ರೀಲೋಲ ಲಕ್ಷ್ಮಯ್ಯಾ ರಮಣ ಶ್ರೀಕಪರೇಯಾ ನಿನ್ನನ್ನೇ ಸ್ಮರಿಸುವುದು ಬಿಟ್ಟೂ ಪ ಹಲವು ಹಂಬಲಿಸಿದರೇನು ಫಲಾ ವ್ಯರ್ಥಾ ಬಳಲುವದೊಂದೇ ಅಲ್ಲದೆ ಬಾಧೆಯಿಂದಾ ಅಜ ಬ್ರಹ್ಮಾಂಬರದ ವರ-----ಆರಾರಿಗ್ವಶನಲ್ಲಾ ನಳಿನಾನಾಭನಾ ದಿವ್ಯನಾಮಾ ಭಜನೆಯ ತೊರೆದು 1 ಹರಿಶ್ಚಂದ್ರಾ ನಳರಾಜಾ-------ದಶರಥ ಮೊದಲು ಪುರಾಕೃತ ಕರ್ಮಾದಿ ಭಂಗಾ ಬಡಲಿಲ್ಲೇನೋ ಅರಿತೂನೀ ಹೃದಯಾದಿ ಅನ್ಯಚಿಂತನೆ ಹಿಡಿದು ಪರಮಾತ್ಮ ಪರಬ್ರಹ್ಮನ ಪಾದಧ್ಯಾನವೇ ಬಿಟ್ಟು 2 ಧರೆಯೊಳಾಧಿಕನಾದ ಧೋರಿ 'ಹೊನ್ನವಿಠಲನ’ ಚರಣವೇ ಗತಿಯೆಂದು ಚಿತ್ತಾದಲೆ ಸ್ಥಿರವಾಗಿ ಪೂಜಿಸಿ ಸೇವೆಯನೆ ಮಾಡಿ ಪರಮಹರುಷದಿಂದ ಪಡೆಯಾದೆ ಹರಿಕರುಣಾ 3
--------------
ಹೆನ್ನೆರಂಗದಾಸರು