ಒಟ್ಟು 10838 ಕಡೆಗಳಲ್ಲಿ , 131 ದಾಸರು , 5127 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜೀಸುವದು ನಾಭಿಯಾ ಸುರಗಂಗೆಯಂ ಶೇಧೀಭಿಯಾ ಪ ನೇತ್ರನ್ನದಯ ಪೂರ್ಣದಾ ಕಮಲಂ ಹಾರಿಸಿ ನೀಡುವ ಬುದ್ದಿ ವಿಮಲಂ ನೇ ಶ್ರೀ ವೆಂಕಟೇಶಂ ಸದಾ1 ಪೊಗಳಲಿಲ್ಲ ಮತಿ ಸಲ್ಲದೇ ಆಶ್ರಯಸಿ ನೆಲೆಗೊಳ್ಳದೇ ಭವಕಾದೆ ಪರಿಹಾರ ದಾ ಪರಿಯಂ ಕಾಣದೆ ಬೇಡಿ ಕೊಂಬೆ ಧೋರಿಯಂ ಶ್ರೀ ವೆಂಕಟೇಶಂ ಸದಾ 2 ಪಟನಾದೆ ನೆರೆ ಭಾಗ್ಯದೀ ನಡಲಂ ದೀಗಳಿ ಪಶ್ಚಾತ್ತಾಪ ಒಡಲಂ ಮನವಿಲ್ಲ ವೈರಾಗ್ಯ ದೀ ಮುಸುಕಿಷ್ಟು ದನಿವಾರ ದಾ ಕಡಲಂ ಮನಿಯೆ ಕಾಯೋ ಸಾಖರದಿಡಲಂ ಶ್ರೀ ವೆಂಕಟೇಶಂ ಸದಾ3 ಬಿದಿರೀಸಿ ವಢ ಮಾಡಿದೇ ಕೊನಿಯಿಂದ ಕಲಕ್ಯಾಡಿದೆ ಮುದವಿತ್ತೆ ಭಕ್ತಂಗದಾ ಮರಳಂ ಕಾವದು ಭಕ್ತಿಗಿಲ್ಲ ಹುರಳಂ ಶ್ರೀ ವೆಂಕಟೇಶಂ ಸದಾ 4 ಕಾಂತಿಚರಣಾಂಬುಜಭಾವ ಭಕ್ತಿಂದಲಿ ಶರಣಂ ಪೊಕ್ಕವರಿಂಗೆ ಜನ್ಮಮರಣಂ ಹರಿಸೂವದಯದಿಂದಲಿ ಸ್ಮರಣಂ ಮಾಡಲು ಪಾಪಹರಣಂ ಸಲೆ ಸಾಧ್ಯಸುರ ಸಂಪದಾ ಕರುಣ ಬೀರುತ ಕಾಯೋಯನ್ನಹರಣಂ ಶ್ರೀವೆಂಕಟೇಶಂ ಸದಾ 5 ಮಾನವ ತನುಂಪಡದೀಗ ಸದ್ಗತಿಯಾ ಗಡ ಹೊಂದಿ ವಿಷಯೇಚ್ಛೆಯಾ ಅಪರಾಧವನು ಗಣಿ ಸದಾ ಪಿತನಂ ತನ್ನಯ ಕಾಯೋ ಜ್ಞಾನ ಚ್ಯುತ ನಂ ಶ್ರೀ ವೆಂಕಟೇಶಂ ಸದಾ 6 ಮೆಚ್ಚಿ ಸುಮನ ನರಿಯೆನು ಯಂತ್ರಿಪ್ಪ ದಾಂನರಿಯೆನು ಗಜವಂ ತಾರಿಸಿದಂತೆಯನ್ನ ವೃಜಿನಂ ದಾಟೀ ಸುವಾ ಬಿರದಾ ಕುಜನಂ ಸೇರಿದಂತೆ ಯನ್ನಂ ಕಾಯೋದ್ವಿಜನಂ ಶ್ರೀ ವೆಂಕಟೇಶಂ ಸದಾ 7 ಸದನಂ ಸುದ್ಗುಣ ಗಾಣದಬ್ಜವದನಂ ಸ್ಪರ್ಧಿಸುತಿದನುಜರಾ ಕದನಂ ಕರ್ಕಶವಾಗಿ ಸೌಖ್ಯ ಪ್ರದನಂ ಭಾವಿಸುತಿಹ ಮನುಜರಾ ಸುಕುಮಾರ ಘನ ಶಾಮದಾ ಇದನಂ ಬಣ್ಣಿಪರಾರು ವೇದವಿದಿನಂ ಶ್ರೀ ವೆಂಕಟೇಶಂ ಸದಾ8 ಶಿಖಿ ಕೇತನಾ ಕಾಯ ಭಂಡಿಯವಾಧನು ಪ್ರಾರ್ಥನಾ ಪರಬ್ರಹ್ಮ ತುರುಗಾಯ್ವನೆಂದು ಪೊಗಳ್ವಾರಿಂತರಿವರೈ ಚರಿತದಾ ಗುರು ಮಹಿಪತಿ ಕಂದಸಲಹೋ ಸ್ಮರಿಸಲು ಅಷ್ಟಕವಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಜೋಪಚಾರರಾಜೋಪಚಾರರಾಜೀವನೇತ್ರ ನೀನವಧರಿಸು ಬೇಗ ಪಸಾವಿರದ ದಳವುಳ್ಳ ಕಮಲವೊಂದಕೆ ಶಕ್ತಿಸಾವಿರದ ಮೌಕ್ತಿಕದ ಸರಗಳೊಪ್ಪಿಹವುಕಾವಿಹುದು ಸಕಲ ದೇವಾತ್ಮಕದ ಶಾರದೆಯುನಾ ವಹಿಸಿ ತುರಿಯ ಕಲಶದ ಛತ್ರವೆಂದೆಂಬ 1ಆವಗವು ಸತ್ವಾದಿ ಗುಣಗಳಿಂದೊಪ್ಪಿರುವಆವರಣ ವಿಕ್ಷೇಪ ಶಕ್ತಿಯೆಂಬೆರಡುದೇವ ನಿನ್ನುಭಯ ಪಾಶ್ರ್ವದಲೊಲವುತಿಹ ಸರ್ವಭಾವದಿಂದುಭಯ ಚಾಮರವೆರಡರಿಂದ 2ಗಂಧರ್ವ ನಗರದಿಂದೈತಂದ ನಾರಿಯರುಛಂದದಿಂ ನರ್ತಿಸುತಲಿಹರೈವರಿವರುಒಂದಾಗಿ ಬಳಿಕಿವರ ಹೊಂದಿ ಮತ್ತೈವರಿರೆಹಿಂದೆ ನಾಲ್ವರುವೆರಸಿ ನಲಿವ ನರ್ತನವೆಂಬ 3ಪರವೆಂದು ನಾಭಿಯಲಿ ಪಶ್ಯಂತಿ ಹೃದಯದಲಿಸ್ವರವಿಹುದು ಕಂಠದಲಿ ಮಧ್ಯಮಾಖ್ಯೆಯಲಿಸ್ಫುರಿಸಿ ಮುಖಕಮಲದಲಿ ವೇದಶಾಸ್ತ್ರಗಳಾಗಿಮೆರೆವ ವೈಖರಿಯೆಂಬ ಗೀತವಿದ ಕೇಳು 4ತಾಳ ಮರ್ದಳೆ ಘಂಟೆ ಭೇರಿ ಶಂಖಗಳಿಂದಮೇಲಾದ ವೀಣೆ ವೇಣುಗಳ ರವದಿಂದಲಾಲಿಸುವ ಛಿಣಿ ಛಿಣೀ ಛಿಣಿಗಳೆಂಬವರಿಂದನೀಲ ಮೇಘಧ್ವಾನ ದಶನಾದದಿಂದ 5ಪರಿಪರಿಯ ಗತಿಯುಳ್ಳ ಚಿತ್ತವೆಂಬಶ್ವವನುವರ ಸತ್ವ ಗುಣವೆಂಬ ಹಲ್ಲಣವ ಬಿಗಿದುನಿರತ ಪರಮಾತ್ಮನೀಕ್ಷಣದ ಕಡಿವಾಣವನುಪಿರಿದಾಗಿಯಳವಡಿಸಿ ಮುಂದೆ ನಿಂದಿಹುದಾಗಿ 6ಒಲವುತಿಹ ಸುಖ ದುಃಖವೆರಡು ಘಂಟೆಗಳಿಂದನೆಲನ ಸೋಕುವ ಕಾಮ ಸುಂಡಿಲದರಿಂದಫಲ ಚತುಷ್ಟಯ ಪಾದ ಮೇಲು ಮಂಟಪದಿಂದಬಲುಮೆಯಹ ಮೂಲ ಕಾರಣವೆಂಬ ಗಜವು 7ಹಿಂದೆಮುಂದರುವರೊಂದಾಗಿ ವಹಿಸಿರಲದಕೆಹೊಂದಿಸಿದ ಚೌಕಿ ಮನವೆಂಬುದದರಲ್ಲಿಮಂದ ಮೃದು ಬಹು ವಿಷಯ ಸುಖದ ಹಾಸಿಕೆ ಹಾಸಿದಂದಳವಿದನುಭವದ ಕೊಂಬಿನಿಂದೊಪ್ಪಿರುವ 8ಆರು ನೆಲೆಯುಳ್ಳ ರಥವದಕೆ ಶಕ್ತಿಗಳೆಂಬಮೂರು ಕಲಶಗಳಲ್ಲಿ ನಾಲ್ಕು ಸತ್ತಿಗೆಯುಮೂರವಸ್ಥೆಗಳದರ ತುರಿಯವೆಂಬುದೆ ನಾಲ್ಕುಮೂರುಲೋಕವನಾಳ್ವ ಮಹಿಮ ನೀ ಪ್ರತಿಗ್ರಹಿಸು 9ನುಡಿವುದೆಲ್ಲವು ವೇದ ನಡೆವುದೆಲ್ಲವು ಶಾಸ್ತ್ರಬಿಡದೆ ನಿನ್ನಾಜ್ಞೆಯೊಳಗಿರೆ ಪುರಾಣದೃಢವಾಗಿ ನಿನ್ನ ಭಜನೆಯ ಮಾಳ್ಪ ದಿವಸವದುಕಡುಪುಣ್ಯವಾದ ಪಂಚಾಂಗವೆನಿಸುವದು 10ಉದಯದಲಿ ನಿನ್ನ ಸ್ಮರಣೆಯ ಮಾಡೆ ಪುಣ್ಯತಿಥಿಒದಗಿಸುವ ಸತ್ಕರ್ಮ ವಾರವೆನಿಸುವದುಅದರಲ್ಲಿಯನುಭವವೆ ನಕ್ಷತ್ರ ನಿನ್ನಲ್ಲಿಹುದುಗೆ ಜೀವನು ಯೋಗ ಹುದುಗುವದೆ ಕರಣ 11ಸಕಲ ವೇದಂಗಳಲಿ ಪ್ರತಿಪಾದಿಸಿದ ಫಲವುವಿಕಳವಿಲ್ಲದೆ ನಿನ್ನ ನಿಮಿಷ ಧ್ಯಾನಿಸಲುಸಕಲ ತೀರ್ಥಸ್ನಾನ ದಾನ ಜಪ ತಪ ಯಜ್ಞಸಕಲವೂ ಬಹುದೆಂಬ ಸರ್ವೋಪಚಾರ 12ಸುರ ಸಿದ್ಧ ಮುನಿವೃಂದ ನಿರತ ಸೇವಿತ ಚರಣಶರಣಾಗತೋದ್ದರಣ ಶರಧಿಜಾರಮಣತಿರುಪತಿಯ ಸ್ಥಿರವಾಸ ನಿರುಪಮ ಮಹಾಕರುಣಮರೆಯೊಕ್ಕೆ ಸಲಹೆನ್ನ ಪ್ರಾಣ ವೆಂಕಟರಮಣ 13ಓಂ ಜುನೇ ನಮಃ
--------------
ತಿಮ್ಮಪ್ಪದಾಸರು
ರಾಧಾರಮಣ ವಿಠಲ ನೀನಿವಳಸಾದರದಿ ಕಾಪಾಡೊ ಹರಿಯೇ ಪ ವೇದವೇದ್ಯನೆ ಪೂರ್ಣ ಬೋಧಸನ್ನುತ ನಿನ್ನಪಾದ ಭಜಕಳ ಬಿಡದೆ ಕಾಪಾಡೊ ಹರಿಯೇಅ.ಪ. ದಾಸದೀಕ್ಷೆಯಲಿ ಅಭಿಲಾಷೆ ಪೊಂದಿಹಳಿವಳುಶ್ರೀತ ತವ ಪಾದಾಬ್ಜ ದಾಸ್ಯವನೆ ಇತ್ತೂನೀಸಲಹೊ ಸುಜ್ಞಾನ ಭಕುತಿ ಭಾಗ್ಯವನಿತ್ತುಶೇಷಾದಿ ದಿವಿಜೇಡ್ಯ ವಾಸುದೇವಾಖ್ಯಾ 1 ನಿತ್ಯ ಮಂಗಳ ಮೂರ್ತೇಸತ್ಯಭಾಮಾ ಪತಿಯೆ ಪ್ರತ್ಯಹರ ನಿನ್ನ ಸ್ಮøತಿಇತ್ತು ಪಾಲಿಸು ಎಂದು ಪ್ರಾರ್ಥಿಸುವೆ ನಿನ್ನಾ 2 ಆಪನ್ನ ಪರಿಪಾಲಕಾಪಾಡ ಬೇಕಿವಳ ಗೋಪಾಲ ಬಾಲಾ 3 ಪತಿಯೆ ಪರದೈವವೆಂಬುನ್ನತದ ಮತಿಯಿತ್ತುಹಿತದಿಂದ ಮಧ್ವಮತ ತತ್ವಾಮೃತವನುಣಿಸೀಕೃತ ಕಾರ್ಯಳೆಂದೆನಿಸಿ ಹೃತ್ಸರೋಜದಿ ಚರಣಶತ ಪತ್ರ ತೋರಯ್ಯ ಶ್ರುತಿವಿನುತ ಹರಿಯೆ 4 ಘೋರ ದುರಿತಾಬ್ಧಿಯನು ಪಾರಗೈಸುವ ನಿನ್ನಕಾರುಣ್ಯಕೆಣೆಯುಂಟೆ ನೀರಜಾಕ್ಷಾಚಾರುಗುಣವಂತೆ ಬಾಲೆಯನು ಉದ್ಧರಿಸುಮಾರಾರಿ ಸಖ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ಪ ನಂದನಕಂದ ಮುಕುಂದಮುರಾರೆ ಇಂದಿವರಾಕ್ಷ ಗೋವರ್ದನಧಾರೆ ವೃಂದಾವನ ಸಂಚಾರ ವಿಹಾರೇ ಸಿಂಧುಶಯನ ಕ್ಷೀರಾಬ್ಧಿವಿಹಾರ 1 ಚಕ್ರಧರ ವೇಣುವಿನೋದ ಶಂಕರಾದಿ ವಂದಿತ ದಿವ್ಯಪಾದ ಬಿಂಕದಿಂದ ಕೊಳಲೂದುವನಾದ ಪಂಕಜಾದಿಗಳು ನಲಿವ ಸುಸ್ವಾದ 2 ಮಂದರಧರÀ ಗೋವರ್ಧನ ಧಾರಿ ಮಂದೆ ಗೋವತ್ಸವ ಕಾಯ್ವ ಶೌರಿ ಇಂದಿರೆಯರಸ ಶ್ರೀಹರಿಯೆ ಮುರಾರಿ ನಂದಯಶೋದೆಯ ಮೋಹದ ಶೌರಿ3 ವೃಂದಾವನದೊಳು ನಿಂದ ಗೋವಿಂದ ಮಂದಹಾಸ ಮುಖನಗೆ ಮೊಗದಿಂದ ಸುಂದರ ಗೋಪಿಯರೊಡಗೂಡಿ ಬಂದ ಮಂದರಧರ ಆನಂದ ಮುಕುಂದ 4 ಕಾಮನಪಿತ ಶ್ರೀ ಕಂಜಜನಾಭ ಕಾಮಿತ ಫಲಗಳ ಕರುಣಿಪ ಶ್ರೀಧ ಕಮಲನಾಭ ವಿಠಲ ನಿಮ್ಮ ಪಾದ ಕರುಣದಿ ನೆನೆವರ ಸಲಹುವಮೋದ 5
--------------
ನಿಡಗುರುಕಿ ಜೀವೂಬಾಯಿ
ರಾಮ - ರಕ್ಕಸ ಸಂಕಲ ಭೀಮಮುನಿದರೆ ಲೋಕ ವಿರಾಮ | ಸಾಮಸನ್ನುತ ನಿಸ್ಸೀಮ ಪ ಕಾಮಿತಾರ್ಥ ಸುಮಹೋದಧೆ - ನಿಪ್ಕಾಮನ ಮಾಡೆಲೊ ವಾಮನ ಮೂರ್ತಿಅ.ಪ. ಧಾಮ ವೈರಿ ಸುತ್ರಾಮ ||ಕಾಮನಯ್ಯ ಕಮ | ನೀಯ ಮೂರುತಿಯೆಕಾಮಿಪೆ ನಿನ್ನನು | ಭೂಮ ಗುಣಾರ್ಣವ 1 ಪಾತಕ ಕಳೆಯೋ 2 ಬಾಲಾ - ಕೆಡಿಸಿದೆ ಗೋಪೆರ ಶೀಲಾ | ಜನನಿಗೆ ತೋರಿದೆ ಲೀಲಾವದನದಿ ಲೋಕ ವಿಶಾಲಾ | ಮಾವ ಕಂಸಗೆ ನೀ ಕಾಲಾ ||ಪಾಲು ಮೊಸರು ಬೆಣ್ಣೆ | ಲೀಲೆಯಿಂದಲಿ ಮೆದ್ದುಜಾಲತನದಿ ನಿಮ್ಮ | ಬಾಲರೆಂದ್ಹೇಳಿದೆ 3 ಶ್ರೀತಾಕೇಶಿ ನಿಷೂದನ ವೃಷ್ಟೀಶ | ಸೋಜಿಗವೇನಿದು ಸರ್ವೇಶಸಂತತ ಭಜಿಪರ ಅಘನಾಶ | ದಾಸ ಜನರ ಹೃತ್ತೋಷ ||ವಾಸವ ಮುಖ ದೇ | ವೇಶ ನಿನ್ನಯ ಪಾದಆಶ್ರಯ ದೊಳಗಿಟ್ಟು | ಪೋಷಿಸು ಎನ್ನ 4 ಕರ್ತಾ - ರಕ್ಷಿಸೆನ್ನ ತ್ರಿಜಗದ್ಭರ್ತ | ನೀ ಲೋಕೈಕ ಸಮರ್ಥಗುರು ಕರುಣದಿ ನಾನು ಕೃತಾರ್ಥ | ಒರೆವೆನೊ ನಾನೊಂದು ವಾರ್ತಾಆರ್ತೇಷ್ಟದ ಗುರು | ಗೋವಿಂದ ವಿಠಲಮೂರ್ತಿ ನೆಲಸೊ ಮಮ | ಹೃತ್ಕಮಲದಲಿ5
--------------
ಗುರುಗೋವಿಂದವಿಠಲರು
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
--------------
ವಿಜಯದಾಸ
ರಾಮ ನಾಮಕೆ ಸಮ ನಾಮವುಂಟೆ ಜಗದೀ ಪಾಮರರಘನಾಶಕೆ ಪ ಕಾಮಾರಿಯು ತನ್ನ ಭಾಮೆಗೆ ಬೋಧಿಸಿದೀ ನಾಮಕೆ ಸಮವುಂಟೇ ಅ.ಪ ಕೋಸಲಪತಿಯೆನಿಸೀ ಅಸುರೆಯ ಸಂಹರಿಸೀ ದುರುಳರಪಹರಿಸೀ ಮುನಿ ಸತಿಯನುದ್ಧರಿಸಿದ 1 ಸತಿಯನುಜರ್ವೆರೆಸೀ ದಿತಿಜರ ಕುಲವಳಿಸೀ ಸತಿಯಳ ನೆಲೆಯರಸೀ ದಿತಿಜಾಂತಕನೆನಿಸಿದ 2 ಶರಣನ ಪತಿಕರಿಸೀ ನರನಾಟಕ ನಡೆಸೀ ಕರುಣಾನಿಧಿಯೆನಿಸೀ ದೇವರದೇವ ರಘುರಾಮವಿಠಲನೆನಿಸೀ ಜನವನು ಪಾಲಿಸಿದಾ 3
--------------
ರಘುರಾಮವಿಠಲದಾಸರು
ರಾಮ ನಿನ್ನಯ ದಿವ್ಯ ನಾಮವೇ ಗತಿಯೆಂಬೆ ಪಾಮರನೆಂದೆನ್ನ ಪಾಲಿಸು ತಂದೆ ಪ. ಸುರರಾಜನಂಗಸಂಗವಗೈದು ಶಿಲೆಯಾದ ವರಮುನಿ ಗೌತಮನರಸಿಯು ನಿನ್ನ ಚರಣಾರವಿಂದ ಸಂಸ್ಪರ್ಶಮಾತ್ರದಿ ದಿವ್ಯ ತರುಣಿಯಾಗಿಹಳೆಂಬ ಪರಿಯ ನಂಬಿದೆನು 1 ಪ್ರಥಮ ವರ್ಣವು ಪಾಪ ತತಿಗಳ ತರಿವುದು ಜತನ ಮಾಡುವುದನ್ಯ ವರ್ಣವೆಂದೆನುತ ನಿತ್ಯ ಸಂಸ್ತುತಿಮಾಳ್ಪವದರಿಂದಾ- ಶ್ರಿತ ಕಲ್ಪತರು ನೀನೆ ಗತಿಯೆಂಬೆ ನಿರತಾ 2 ನಿತ್ಯ ನಿರ್ನಾಮಗೊಳಿಸು ಪನ್ನಗಾಚಲನಾಥ ಪರಿಪೂರ್ಣ ಕೃಪೆಯಿಂದ ಮನ್ನಿಸಿ ಮನಸನ್ನು ನಿನ್ನಲ್ಲಿ ಇರಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ಪ ಜಗದಭಿಮಾನ ಬಿಡಿಸಿ ಸುಗುಣ ಸಂತಸಂಗ ಪಾಲಿಸಿ ಸುಗುಣಾಂತರಂಗ ನಿನ್ನ ಸಗುಣ ಪೊಗಳಿಸೆನ್ನ ಮುಖದಿ 1 ಮದಮತ್ಸರಗಳನು ಬಿಡಿಸಿ ಸದಮಲ ಜ್ಞಾನಾನಂದದಿರಿಸಿ ಸದಮಲಾತ್ಮ ನಿಮ್ಮ ಮೂರ್ತಿ ಸದಾಯೆನ್ನ ನೇತ್ರದೊಳ್ನಿಲಿಸು 2 ಕಾಮಿತಂಗಳ ಕಡೆಹಾಯ್ಸಿ ಭೂಮಿ ಸೀಮೆ ಮೋಹ ತೊರೆಸಿ ಸ್ವಾಮಿ ಮಮಪ್ರಾಣದಾರ್ಯ ಶ್ರೀ ರಾಮದಾಸನೆನಿಸು ಒಲಿದು 3
--------------
ರಾಮದಾಸರು
ರಾಮ ಭಜನೆ ಮಾಡೋ ಮನುಜ ರಾಮ ಭಜನೆ ಮಾಡೋ ಪ ರಾಮ ರಾಮ ಜಯ ರಾಘವ ಸೀತಾ ರಾಮನೆಂದು ಸುಸ್ವರದಲಿ ಪಾಡುತಅ.ಪ ತಾಳವನು ಬಿಡಬೇಡ ಮೇಳವನು ಮರೆಬೇಡ ತಾಳಮೇಳಗಳ ಬಿಟ್ಟು ನುಡಿದರೆ ತಾಳನು ನಮ್ಮ ಇಳಾಸುತೆಯರಸನು 1 ಭೃತ್ಯ ಮನೋಭಾವದಲಿ ಸತ್ಯ ಜ್ಞಾನ ಅನಂತ ಬ್ರಹ್ಮನು ಹೃದ್ಗತನೆಂದರಿಯುತ ಭಕುತಿಯಲಿ 2 ಭಲರೆ ಭಲರೆಯೆಂದು ತಲೆದೂಗುವ ತೆರದಿ ಕಲಿಯುಗದಿ ವರಕೀರ್ತನೆಯಿಂದಲಿ ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 3
--------------
ವಿದ್ಯಾಪ್ರಸನ್ನತೀರ್ಥರು
ರಾಮ ರಕ್ಷಿಸೋ ಸೀತಾರಾಮ ಪಾಲಿಸೋ ಪ ಕಾಮನ ಪಿತನಿಸ್ಸೀಮ ಸಾಹಸಗುಣಧಾಮ ಮ- ಹಾತ್ಮ ಸುಧಾಮ ರಮಣನೆ ಅ.ಪ ದಶರಥ ಪ್ರಥಮ ಪುತ್ರ ತ್ರ್ರಿದಶ ಸ್ತುತಿಗೆ ಪಾತ್ರ ಕುಶÀಲವರು ನಿನ್ನ ಹಸು ಮಕ್ಕಳು ಪೂರ್ಣ ಶಶಿಮುಖಿ ಸೀತೆ ನಿನ್ನ ವಶವಾದವಳು 1 ಕೋಸಲಾಧಿಪನೊ ಹೇ ದೇವ ನೀ ಕೌಸಲ್ಯ ಜಠರಜನೊ ಶೇಷನ ಪೂರ್ವಜ ನಾಶರಹಿತ ಅಶೇಷ ಮುನಿಗಣಕೆ ತೋಷಪೂರಿತನಾದಿ 2 ದುಷ್ಟರ ಸಂಹಾರ ಮಾಡಿದಿ ನೀ ಶಿಷ್ಟರ ಉದ್ಧಾರ ಸೃಷ್ಟಿಯೊಳಗೆ ಲೇಶ ಕಷ್ಟವಿಲ್ಲದೆ ನೀನು ಸುಷ್ಟು ಮಾಡಿ ಅಖಿಳೇಷ್ಟ ಪ್ರದನಾದಿ 3 ದೀನರಕ್ಷಕ ನೀನು ಮಹಾತ್ರಾಣಿ ಇಂದ್ರನ ಸೂನು ವಾನರಾಧಿಪಹನು ಮನಮಾತನು ಮಾನಿಸಿದಿಯೊ ನೀನು 4 ದೇವಶ್ರೇಷ್ಠ ನೀನು ಉದ್ಧರಿಸಿದಿ ಮಾವ ಜನಕನನ್ನು ಕಾವಲಾಗಿರು ಯನಗಾವಾಗ್ಯನು ಶ್ರೀವತ್ಸಾಂಕಿತ ವೆಂಕಟಪತಿಯೆ 5
--------------
ಸಿರಿವತ್ಸಾಂಕಿತರು
ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಪ ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು 1 ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು 2 ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು3
--------------
ವಿಜಯದಾಸ
ರಾಮ ರಾಮ ರಾಮ ರಾಮಯೆಂದು ರಾತ್ರಿ ಹಗಲು---ಪ್ರೇಮದಿಂದ ಇಲ್ಲಿ ಬಂದು ಪ್ರತಿಗತಿ ಪಡಿಸಿಯಿಂದೂ ಪ ಕಾಮಿತ ಫಲದಾಯಕನೆಂದೂ ಕಮಲಗರ್ಭನ ಪಿತನೀತೆಂದೂ ನಿತ್ಯ ಕರ್ಮದಿಂದ 1 ಒಂದು ನಿಮಿಷ ಮರೆಯದೆಂದು ವಾಸುದೇವಾನಂದ ನೆಂದೂ ನಾಮ ನರೆ ತಂದೂ 2 ಸಿಂಧು ಶಯನ ಶ್ರೀನಿವಾಸ `ಹೊನ್ನವಿಠ್ಠಲೇಶಾ’ 3
--------------
ಹೆನ್ನೆರಂಗದಾಸರು
ರಾಮ ರಾಮಯೆಂದು ನೇಮದಿಂದಲಿ ಪಾಡಿ ಪ್ರೇಮದಿ ನಮಿಸಿರಿ ಕಾಮನ ಪಿತನ ಪ ಭಾಮೆಗಕ್ಷಯ ವಿತ್ತು ಪ್ರೇಮದಿ ಸಲಹಿದ ಪಾದ ಸೇರೀ 1 ತನುಮನ ಧನದಿಂದ ಚನ್ನಕೇಶವನನ್ನು ಅನುದಿನ ಭಜಿಸಿ ಚಿನ್ಮಯಪಾದ ಸೇರಿ2 ಕರುಣದಿ ಭಕ್ತರ ಪೊರೆವ ಕೇಶವನ 3
--------------
ಕರ್ಕಿ ಕೇಶವದಾಸ
ರಾಮಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಸನ್ನುತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಮೋದ ತೀರ್ಥರ ಮತದಿ | ಉದುಭವಿಸಿ ಇರುತಿರ್ಪಸಾಧು ಕನ್ನಿಕೆ ಇವಳಾ | ವೇದಾಂತ ವೇದ್ಯಾ |ಮೋದದಾಯಕನಾಗಿ | ಶ್ರೀಧರನೆ ತರತಮವಭೇಧ ಪಂಚಕ ತಿಳಿಸಿ | ಕಾದುಕೋ ಬಿಡದೆ 1 ಅಹಿಕ ಪಾರತ್ರಿಕದಿ | ಬಹುಸಖ್ಯಗಳ ಕೊಟ್ಟುಮಹಿತ ನಿನ್ನಯ ನಾಮ | ರೂಪಕ್ರಿಯ ಗುತಾಮವಿಹಿತ ಮಾರ್ಗದಿ ತುತಿಸಿ | ತವಚರಣಕರ್ಪಿಸುವಮಹಭಾಗ್ಯ ಇವಳೀಗೆ | ಓದಗಿಸೋ ಹರಿಯೇ 2 ಅಡಿಗಡಿಗೆ ಬರುತಿರ್ಪ | ಕಡುವಿಘ್ನ ಪರಿಹರಿಸೊಕಡುದಯಾ ಪರಿಪೂರ್ಣ | ಕರಿವರದ ಕೃಷ್ಣಾ ಬಡವಿಪ್ರಗೊಲಿದಂತೆ | ಭಕುತ ಜನ ಪರಿಪಾಲಪಿಡಿಯುವುದು ಕೈ ಇವಳ | ಬಾಲ ಗೋಪಾಲ 3 ಕಲಿಯುಗದಿ ಸಾಧನವು | ಬಲುಕಷ್ಟವೆನಿಸಿಹುದುಕಲಿಮಲಾಪಹಗಂಗೆ | ಪಿತನ ಚರಣಾಬ್ಜಾಓಲುಮೆಯಿಂ ಭಜಿಪರ್ಗೆ | ಭವಭಂಧ ಪರಿಹಾರಅಳವಡಿಸೊ ಇವಳೀಗೆ | ತವನಾಮಕವಚಾ 4 ಕೋವಿದರ ಪರಿಪಾಲ | ಪಾವಮಾನಿಯ ಪ್ರೀಯನೋವು ಸುಖ ದ್ವಂದ್ವಗಳ | ಸಮತೆಯಲಿಯುಂಬಾಭಾವವನೆ ಕರುಣಿಸುತ | ಭವವ ನುತ್ತರಿಸೆಂದುದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು