ಒಟ್ಟು 4835 ಕಡೆಗಳಲ್ಲಿ , 124 ದಾಸರು , 3413 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವಿಜಯೀಂದ್ರ ತೀರ್ಥರ ಚರಿತೆ110ಪ್ರಥಮ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿ ಯಿಂ ಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಹಂಸ ಲಕ್ಷೀಮಶ ನಾಭಿಭವ ಸನಕಾದಿಮಹಂತರ ಸೂರಿಗಳಗುರುಪರಂಪರೆಯಮಹಾ ಪುರುಷೋತ್ತ ಮದಾಸ ಶ್ರೀಮಧ್ವವನದೃಹ ಪಾದಗಳಲ್ಲಿ ನಾ ಶರಾಣು ಶರಣಾದೆ 1ಅರವಿಂದನಾಭ ನರಹರಿ ಮಾಧವತೀರ್ಥಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥಪರವಿದ್ಯಾಕುಶಲ ಶ್ರೀ ವಿದ್ಯಾದಿರಾಜರಜಯೀಂದ್ರರ ಚರಣಂಗಳಲಿ ನಾ ಶರಣು 2ಕೋವಿದಶಿರೋಮಣಿ ಕವೀಂದ್ರ ವಾಗೀಶರುಭಾವುಕಾಗ್ರಣಿ ರಾಮಚಂದ್ರ ವಿಭುದೇಂದ್ರದೇವ ಹರಿಪ್ರಿಯ ಜಿತಾಮಿತ್ರ ಯತಿವರರು ರಘುನಂದನದೇವಿ ತುಳಸೀಪತಿಯ ಒಲಿಸಿಕೊಂಡ ಸುರೀಂದ್ರರು 3ಈ ಸರ್ವ ಗುರುಗಳಚರಣಕಮಲಗಳಲ್ಲಿನಾ ಸರ್ವದಾ ಶರಣು ಶರಣೆಂಬೆ ಮುದದಿವ್ಯಾಸಮುನಿ ಪ್ರಿಯಮಿತ್ರ ಶ್ರೀಸುರೇಂದ್ರರಕರಸರಸಿಜದಿಜಾತ ವಿಜಯೀಂದ್ರರಲಿ ಶರಣು ನಾ 4ವಿದ್ಯಾಧಿರಾಜ ಸುತ ರಾಜೀಂದ್ರತೀರ್ಥರಪದ್ಮ ಕರದುದಯ ಜಯಧ್ವಜರಹಸ್ತವೃತತಿಜೋತ್ಪನ್ನ ಪುರುಷೋತ್ತಮ ಮಹಾಮಹಿಮಯತಿಕುವರ ಸೂರಿವತ ಬ್ರಹ್ಮಣ್ಯತೀರ್ಥ 5ಬ್ರಹ್ಮಣ್ಯತೀರ್ಥಾಖ್ಯ ಖಗಕರದಿ ಅರಳಿತುಮಹಿಯಲಿ ಪ್ರಖ್ಯಾತ ವ್ಯಾಸಮುನಿಅಬ್ಜಬಹುಮಂದಿ ಈ ಸುಮನ ಪರಿಮಾಳಾಕರ್ಷಿತರುಬ್ರಹ್ಮವಿದ್ಯಾ ಮಕರಂದದಿ ಮೋದಿಸಿದರು 6ಪೂರ್ವಜನ್ಮದಿ ನಾರದರಿಂದ ಉಪದಿಷ್ಟವ್ಯಾಸರಾಜರು ಶ್ರೀಪಾದರಾಜರಲಿಸರ್ವವಿದ್ಯಾ ಕಲಿತು ವಾದಿಗಜಹರಿ ಆಗಿತತ್ವ ಬೋಧಿಸಿ ಸಜ್ಜನರ ಕಾಯ್ದಿಹರು 7ಋಜುಮಾರ್ಗದಲಿ ಇರುವ ಯತಿವಟು ಗೃಹಸ್ಥರುನಿಜಭಕ್ತಿ ಶ್ರದ್ಧೆಯಿಂದಲಿ ಶ್ರೀವ್ಯಾಸ-ರಾಜರಲಿ ವಿದ್ಯಾಭ್ಯಾಸ ಮಾಡಲು ಆಗಪ್ರಜಾಪೇಕ್ಷೆ ಭಿನೈಸಿದ ವಿಪ್ರಶಿಷ್ಯ 8ಆವಿಪ್ರೋತ್ತಮನಿಗೆ ಪ್ರಜಾ ಅನುಗ್ರಹ ಮಾಡಿಪ್ರವರ ಪುತ್ರನ ತಮ್ಮ ಮಠಕ್ಕೆ ಕೊಡಬೇಕುಅವರಜರು ಸಂತತಿ ಅಭಿವೃದ್ಧಿಗೆ ಇರಲುಈ ವಿಧದಿ ಹೇಳಿದರು ಶ್ರೀ ವ್ಯಾಸಮುನಿಯು 9ಕೊಟ್ಟವರ ತಪ್ಪದೇ ವಿಪ್ರಪತ್ನಿಗೆ ಶಿಶುಹುಟ್ಟುವ ಸಮಯದಲಿ ಗುರುಗಳು ಕೌಶೇಯತಟ್ಟೆಯ ಕಳುಹಿಸಿ ಭೂಸ್ಪರ್ಶ ಇಲ್ಲದÀಲೇಹುಟ್ಟಿದ ಮಗುವನ್ನು ಹಿಡಿಯ ಹೇಳಿದÀರು 10ಶ್ರೀಮಠಕ್ಕೆ ವಿಪ್ರನು ಆ ಬಾಲಕನನ್ನುನೇಮಿಸಿದ ರೀತಿಯಲಿ ಒಪ್ಪಿಸಿ ಅಲ್ಲಿರುಕ್ಮಿಣಿನಾಥ ವಿಠಲನ ಪೆಸರಿಂದವಿಮಲವಟು ವಿದ್ಯಾರ್ಥಿ ಸನ್ಯಾಸಿ ಆದ 11ವಿಟ್ಠಲಾಚಾರ್ಯನು ಶ್ರೀ ವ್ಯಾಸರಾಜರಲಿಶಿಷ್ಠವಿಲ್ಲದೇ ಅಷ್ಟು ಶಾಸ್ತ್ರ ಕಲಿತು ಚತುಃಷಷ್ಟಿ ವಿದ್ಯಾದಲ್ಲಿ ಸಹನಿಪುಣನಾಗಿಅಷ್ಟ ದಿಕ್ಕುಗಳಲ್ಲಿ ಪ್ರಖ್ಯಾತನಾದ 12ಇದರಲ್ಲೇನು ಆಶ್ಚರ್ಯ ಇಲ್ಲ ಸ್ವಾಭಾವಿಕವುದೇವತೆಗಳು ಧರಣಿಯಲ್ಲಿ ಜನಿಸಿದರೂಶಕ್ಯಾತ್ಮನ ಸರ್ವ ಅಣಿಮಾದಿ ಐಶ್ವರ್ಯಇದ್ದು ಸುವ್ಯಕ್ತ ವಾಗುವವು ಗುರುಕೃಪದಿ 13ಈ ವಿಠಲನೇವೇ ವಿಜಯೀಂದ್ರ ನಾಮದಲಿಭುವಿಯಲ್ಲಿ ಬೆಳಗಿದನು ಸುರರಲ್ಲಿ ಶ್ರೇಷ್ಠದೇವತಾ ಕಕ್ಷದವರಾದ ಶ್ರೀವ್ಯಾಸಮುನಿಪ್ರವರ ಸುರಗಣ ವಾದಿರಾಜರ ಸಮೇತ 14ಸರಸಿಜಾಸನಪಿತ &ಟಜquo; ¥ಸÀನ್ನ ಶ್ರೀ ನಿವಾಸನು&ಡಿಜquo;ಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ15 ಪ-ಇತಿ ಪ್ರಥಮ ಕೀರ್ತನೆ ಸಂಪೂರ್ಣಂ-ದಿತೀಯ ಕೀರ್ತನೆವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂದ ಶರಣಾದೆಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಶ್ರೀಮನೋಹರ ರಂಗನಾಥನ ಸೇವಿಸಲುಶ್ರೀಮಠ ಜರುಗಿತು ರಂಗ ಕ್ಷೇತ್ರಕ್ಕೆಸೋಮಪುಷ್ಕರಿಣಿಯಲಿ ಕಾವೇರಿ ಮಧ್ಯದಲಿಕಾಮಿತಪ್ರದ ಶ್ರೀಶರಂಗ ಇರುತಿಹನು 1ಕಾವೇರಿ ತೀರದಲ್ಲಿ ಶ್ರೀತುಳಸಿವನ ಬೆಳಸೆಆವನಸಮೀಪದಲಿ ವ್ಯಾಸಮುನಿ ಮಠವುದುರ್ವಾದ ಖಂಡನ ಸಿದ್ಧ್ದಾಂತ ಸ್ಥಾಪನದೇವತಾರ್ಚನೆ ಹರಿಕೀರ್ತನೆ ವೈಭವವು 2ಒಂದು ದಿನ ಶ್ರೀ ವ್ಯಾಸರಾಯರು ನೋಡಿದರುತಂದು ಪೂಜೆಗೆ ಇಟ್ಟ ತುಳಸೀದಳಗಳುಇಂದಿರಾಪತಿಗರ್ಪಿತವಾದ ನಿರ್ಮಾಲ್ಯಎಂದು ತಿಳಕೊಂಡರು ವಿಚಾರ ಮಾಡಿದರು 3ತಿಳಿಯ ಬಂತು ಅಂದು ಪ್ರಾತಃಕಾಲದಲಿತುಳಸೀಗೆ ಬಂದುರು ಸುರೇಂದ್ರ ಮಠದವರುತುಳಸಿ ಕೊಡುವುದಿಲ್ಲ ಎನೆ ಪೋದರು ಆ ಬಾಹ್ಮಣರುಪೇಳಿದರುಗುರುಸುರೇಂದ್ರರಿಗೆವೃತ್ತಾಂತ4ಭಾವುಕ ಶಿರೋಮಣಿವಿಜ್ಞಾನಸೂರಿಗಳುತಾವು ಕುಳಿತಲ್ಲೇ ಸುರೇಂದ್ರ ಸ್ವಾಮಿಗಳುಭವಜನಯ್ಯನಿಗೆವನತುಳಸಿ ಪೂರಾವುಭಾವಶುದ್ಧದಿ ಅರ್ಪಿಸಲು ಹರಿಕೊಂಡ 5ಶ್ರೀ ಸುರೇಂದ್ರರ ಈ ಮಹಿಮೆಯ ಶ್ಲಾಘಿಸಿಬೇಗವ್ಯಾಸರಾಯರು ತಾವೇವೆ ಪೋಗಿಕುಶಲ ಸಂಭಾಷಿಸಿ ತಮ್ಮ ಮಠಕ್ಕೆ ಬಂದುಶ್ರೀಶಾರ್ಚನೆ ಚರಿಸಲು ಆಹ್ವಾನ ಮಾಡಿದರು 6ಸೂರಿವರ ರಾಜೇಂದ್ರ ರವೀಂದ್ರರುಎರಡು ಈ ಗುರುಗಳಿಂದಲಿ ಬಂದ ಮಠಗಳುಎರಡು ಸ್ವಾಮಿಗಳು ಶ್ರೀವ್ಯಾಸ ಸುರೇಂದ್ರರಹರಿಪೂಜೆ ವೈಭವವು ವರ್ಣಿಸಲು ಅಶಕ್ಯ 7ಥಳಥಳಿಪ ಬ್ರಹ್ಮವರ್ಚಸ್ಸು ಮುಖಕಾಂತಿಯುಎಲ್ಲ ಶಾಸ್ತ್ರಜ್ಞಾನ ಪ್ರವಚನ ಪಟುತ್ವಶೀಲತ್ವ ಸೌಲಭ್ಯ ಬಾಲ್ಯ ಚಟುವಟಿಕೆಯುಸೆಳೆದವು ಸುರೇಂದ್ರರ ವಿಠಲನ ಬಳಿಗೆ 8ರಮೆಯರಸನ ಪೂಜೆತತ್ವಬೋಧÀವು ಮಾಳ್ಪತಮ್ಮ ಸಂಸ್ಥಾನದ ಉನ್ನತ ಸ್ಥಾನಕ್ಕೆತಮ್ಮ ನಂತರ ವಿಜಯೀಂದ್ರರೇ ಸರಿ ಎಂದುನೇಮಿಸಿದರು ಮನದಿ ಸುರೇಂದ್ರ ಗುರುವು 9ಅಪರೋಕ್ಷದಲು ಈವಿಠಲನ ಯೋಗ್ಯತೆಆ ಪುಣ್ಯ ಶ್ಲೋಕರು ಅರಿತು ತಾವುಅಪೇಕ್ಷಿಸುವಂತ ವಸ್ತು ಬÉೀಕೆಂದರುಶ್ರೀಪನ ಇಚ್ಫೆಯನರಿತು ವ್ಯಾಸರಾಯರಲ್ಲಿ 10ಕೇಳುವ ವಸ್ತು ಬಿಟ್ಟು ಬೇರೆ ಏನೂ ಕೊಡುವೆಕೇಳÉಲಾರೆನು ಬೇರೆ ಕೊಳ್ಳೆನು ಬೇರೆಇಲ್ಲ ವೆಂದರೆ ಊಟ ಮಾಡಿಕೊಡುತ್ತÉೀನೆ ಈಲೀಲಾ ವಿನೋದ ಮಾತುಗಳು ಕ್ರೀಡಾರ್ಥ 11ವಿಮಲ ವಿರಜಾ ಸಮ ಕಾವೇರಿ ಮಧ್ಯದಲಿರಮಾಯುಕ್ ರಂಗನಾಥನು ಹನುಮಸೇವ್ಯರಾಮ ಪೂಜಿಸಿದಂಥ ರಾಮನು ಪಟ್ಟಾಭಿರಾಮ ಶ್ರೀ ಗೋಪಾಲಕೃಷ್ಣನ ಮುಂದೆ 12ಶ್ರೀಶನ ಈ ಬಹುರೂಪ ಸನ್ನಿಧಿಯಲ್ಲಿಭೂಸುರ ವಿದ್ವಾಂಸರ ಸಭೆ ಮಧ್ಯದಲಿವ್ಯಾಸಮುನಿದತ್ತ ವಿಠಲನ ಸುರೇಂದ್ರರುಸುಸ್ವಾಗತದಿಂದ ಸ್ವೀಕಾರ ಮಾಡಿದರು 13ವಿಜಯೀಂದ್ರ ತೀರ್ಥ ಶುಭತಮ ನಾಮವಿತ್ತರುವಿಜಯಶೀಲರಾಗಿ ವಿಜಯೀಂದ್ರರುನಿಜತತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತದುರ್ಜನ ದುರ್ವಾದ ಚೂರ್ಣ ಮಾಡಿದರು 14ಬ್ರಹ್ಮ ದಶರಥ ರಾಮಚಂದ್ರನು ಅರ್ಚಿಸಿದಭೂಮಾದಿ ಗುಣಗಣಾರ್ಣವ ದಯಾನಿಧಿಯುಕಮಲೆ ಸೀತಾಸೇವ್ಯ ಮೂಲರಾಮನ್ನಸಮ್ಮುದದಿ ಶ್ರೀವಿಜಯೀಂದ್ರರು ಪೂಜಿಸಿದರು 15ಸರಸಿಜಾಸನಪಿತ &ಟಜquo; ಪ್ರಸÀನ್ನ ಶ್ರೀನಿವಾಸ&ಡಿಜquo; ನುಬರೆಸಿದ ಶ್ರೀಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ16-ಇತಿದ್ವಿತೀಯಕೀರ್ತನೆ ಸಂಪೂರ್ಣಂ-ವಿಜಯೀಂದ್ರ ತೀರ್ಥರ ಪದಯುಗದಿನಿಜಭಕ್ತಿಯಿಂಶರಣಾದೆ ಸತತಅಬ್ಜಸಂಭವ ಜನಕ ಅಂಬುಜಾಲಯಪತಿರಾಜರಾಜೇಶ್ವರಗೆ ಪ್ರಿಯತಮ ಯತೀಂದ್ರ ಪಧರೆಯೊಳುತ್ತಮ ಕುಂಭಕೋಣಾಖ್ಯ ನಗರದಿಹರಿದ್ವೇಷಿಯ ಗೆದ್ದು ಅವನ ಮಠ ತೋಟಸ್ಪರ್ಧೆ ಫಣವಾದ್ದವ ತಮ್ಮಲ್ಲಿ ಸೇರಿಸಿಕೊಂಡಧೀರ ವಿಜಯೀಂದ್ರರ ಚರಣಕಾನಮಿಪೆ 1ಸಾರಂಗಹಸ್ತವರಾಹಚಕ್ರಪಾಣಿ ರಾಮಮಂಗಳಾಂಬಿಕೆಯುತ ಕುಂಭೇಶ್ವರತುಂಗಮಹಿಮಳು ಕಾವೇರಿ ಸುಧಾಸರಸ್ಸುಈ ಕುಂಭಕೋಣದ ಮಹಿಮೆ ಏನೆಂಬೆ 2ಸಂಕ್ರಂದಸ್ಮರಮೊದಲಾದ ಜಗತ್ತಿಗೆ ಗುರುವಾದಮಂಗಳಾಂಬಿಕೆ ಕುಂಭೇಶ್ವರರ ನೃಹರಿ ಸಾನಿಧ್ಯರಭಂಗವಿಲ್ಲದೆ ಪ್ರತಿದಿನ ಸೇವಿಸುವರುಸುರೇಂದ್ರಮಠ ಗುರುವು ವಿಜಯೀಂದ್ರರು 3ಭಸ್ಮಧರನು ಸರ್ವೊತ್ತ ಮನೆಂದು ವ್ಯರ್ಥದಿದುಸ್ತರ್ಕ ಮಾಡಿದ ಜಗನ್ಮಿಥ್ಯಾವಾದಿಅಪ್ಪಯ್ಯನ ಮತವ ತೃಣದಂತೆ ಮಾಡಿದತತ್ವವಾದ ಅಸಿಯಿಂದ ವಿಜಯೀಂದ್ರ ಜಯಶೀಲ 4ಸ್ವಪಕ್ಷ ಪರಪಕ್ಷ ಸರ್ವವಿದ್ವಾಂಸರುಈ ಪುಣ್ಯಶ್ಲೋಕರ ಮಹಿಮೆ ಕೊಂಡಾಡಿತಪ್ಪದೇ ಆಗಾಗ ಬಂದು ಮರ್ಯಾದೆಅರ್ಪಿಸಿ ಪೋಗುವರು ಕೃತಕೃತ್ಯಮನದಿ 5ಬಾದರಾಯಣಿ ಮಾಧ್ವ ಗ್ರಂಥಗಳನುಸರಿಸಿವೇದ ವಿರುದ್ಧ ಮತ ಖಂಡನ ಗ್ರಂಥಗಳುಚತುರೋತ್ತರ ಶತಮೇಲ್ ತತ್ವ ಬೋಧಕವಾದಗ್ರಂಥಗಳ ರಚಿಸಿದರು ಉತ್ತಮ ರೀತಿಯಲಿ 6ಅಂಬುಶಾಯಿ ಸರ್ವ ಮುಕ್ತಾಮುಕ್ತ ಆಶ್ರಯನುಅಂಭ್ರಣೀಪತಿ ಶ್ರೀಮನ್ನಾರಾಯಣಗಂಭೀರ ಶಬ್ದಾರ್ಥ ನಿರ್ವಚನ ಮಾಡಿಹರುಅಂಬುಜನಾಭ ಒಲಿವ ಪಠಿಸಿದರೆ 7ಮಧ್ವಮತ ಪರಿಮಳ ಸುಗಂಧ ಭುವಿಯಲಿ ಹರಡೇಸುಧಾದಿ ಉದ್ಗ್ರಂಥ ಪ್ರವಚನದಿ ಪಟುವುಸುಧೀಂದ್ರ ಯತಿವರಗೆ ಸಂಸ್ಥಾನ ಕೊಟ್ಟರುಮಧ್ವಮತೋದ್ಧಾರ ವಿಜಯೀಂದ್ರ ಗುರುರಾಟ್ 8ಸದ್ಭಕ್ತಿಯಿಂಶುಚಿ ಅಧಿಕಾರಿ ಇವರ ನರಸಿಂಹಾಷ್ಟಕವಪಠಿಸೆ ಭೂತ ಪ್ರೇತ ಪಿಶಾಚಾದಿಗಳ ಉಚ್ಫಾಟನವುಚೋರ ವ್ಯಾಧಿ ಮಹಜ್ವರ ಭಯಾದಿ ಕಷ್ಟಗಳು ನಿವಾರಣಸಂಧ್ಯಾಕಾಲ ಪಠನದಿ ಸದ್ಭಕ್ತಿಗೆ ಒಲಿದು ಕಾಯ್ವ ಶ್ರೀ ನರಸಿಂಹ 9ಐವತ್ತು ಮೇಲೈದು ವರ್ಷ ಸಂಸ್ಥಾನದಿನಿರ್ವಿಘ್ನ ಪೂಜಾ ಶಿಷ್ಯೋ¥ದೇಶದೇವ ಲಕ್ಷೀಶಗೆ ತಮ್ಮ ಸೇವೆ ಸಮರ್ಪಣೆ ಮಾಡಿಪವಿತ್ರತಮ ಸುಸಮಾಧಿಯನ್ನು ಹೊಂದಿದರು 10ಶಾಲಿವಾಹನಶಕ ಹದಿನೈದು ನೂರು ಹದಿನಾಲ್ಕನೇ ವರ್ಷ ಜೇಷ್ಠಬಹುಳಶೀಲತಮ ಭವದಿತ್ರಯೋದಶಿ ದಿನದಿಮಾಲೋಲ ನಾರಾಯಣಪುರಯೈದಿದರು 11ಮತ್ತೊಂದು ಅಂಶದಲಿ ಕುಳಿತು ವೃಂದಾವನದಿಉತ್ತಮ ಶ್ಲೋಕ ನಾರಾಂiÀiಣನ ಧ್ಯಾನಿಸಿಒಲಿದು ಸೇವಿಸುವರಿಗೆ ಸÀತತ ಔದಾರ್ಯದಲ್ಲಿಇತ್ತು ವರಗಳ ಸದಾ ಸಂರಕ್ಷಿಸುತಿಹರು 12ಮೂಲರಾಮನ ವಿಮಲ ಭಾವದಲಿ ಅರ್ಚಿಸಿಕುಳಿತು ವೃಂದಾವನದಿ ಧ್ಯಾನಿಸುವ ಇವರುಮೂಲ ವೃಂದಾವನ ಮಾತ್ರದಿ ಅಲ್ಲದೇಅಲ್ಲಲ್ಲಿ ಇವರು ಮೃತಿಕೆಯಲ್ಲಿಯೂ ಇಹರು 13ವಿಜಯೀಂದ್ರರಾಯರ ವೃಂದಾವನದಲಿವಿಜಯಸಖ ಸರ್ವ ಜಗಜ್ಜನ್ಮಾದಿಕರ್ತಅಜಭವಾದಿಗಳಿಂದಸೇವ್ಯಶ್ರೀನರಹರಿ ಇಹನುವಿಜಯೀಂದ್ರಗುರುಅಂತರ್ಯಾಮಿವಾಂಛಿತಪ್ರದನು14ಶ್ರೀಶನ ಸಾನಿಧ್ಯ ಪೂರ್ಣ ಇರುವುದರಿಂದಶ್ರೀಶನೊಲಿಮೆ ಪೂರ್ಣಪಾತ್ರ ಇವರಲ್ಲಿಶ್ರೀ ಸುಧೀಂದ್ರಾದಿಗಳು ದೇವವೃಂದದ ಜನರುಭೂಸುರರು ಪ್ರತಿದಿನ ಬಂದು ವಂದಿಪರು 15ವೃಂದಾವನ ದರ್ಶನ ಸೇವೆ ಪಾದೋದಕಕುಂದುಕೊರತೆ ಇರುವ ಧಾರ್ಮಿಕ ಇಷ್ಟದವುಎಂದಿಗೂ ಎನ್ನ ಕುಂದುಗಳ ಎಣಿಸದೆಬಂದು ಪ್ರತಿಕ್ಷಣ ಕಾಯುತಿಹರು ಶರಣು ಶರಣಾದೆ 16ವಿ ಎಂದರೆ ವಿಠಲ ಜ್ಞಾನಮುದವೀವಜ ಎಂದರೆ ಜಯವು ಪುಟ್ಟು ಸಾವಿಲ್ಲಯೀ ಎಂದರೆ ಜ್ಞಾನಕರ್ಮ ಪೂಜಾಫಲವುಇಂದ್ರ ಎಂದರೆ ಐಶ್ಚರ್ಯ ಸುಖವೀವ 17ಸಿಂಧೂರವರದ ಶ್ರೀಕರ ಪುರುಷೋತ್ತಮಬಿಂದುಮಾಧವ ಶ್ರೀಧರ ರಾಮಚಂದ್ರಸೈಂಧವಾಸ್ಯನು ಅಚ್ಯುತಾನಂತ ಗೋವಿಂದಎಂದಿಗೂ ಎಮ್ಮನು ಕಾಯ್ವ ಗುರುಚರಿತೆ ಪಠಿಸೆ 18ಅಂಬರೀಷ ರಕ್ಷಕನು ಅಜಾಮಿಳ ವರದನುಕಂಬದಲಿ ತೋರಿ ಪ್ರಹ್ಲಾದನ್ನ ಕಾಯ್ವವನುಈ ವೃಂದಾವನ ಗುರುಚರಿತೆ ಪಠಿಸುವರಿಗೆಸೌಭಾಗ್ಯವೀವನು ಸುಧಾಮಗೊಲಿದವನು 19ನಾರಾಯಣವಾಸುದೇವ ಸಂಕರುಷಣಪ್ರದ್ಯುಮ್ನ ಅನಿರುದ್ಧ ಲಕ್ಷ್ಮೀ ಸಮೇತವರವಾಯು ಭಾರತೀ ಸುರವೃಂದ ಸಹಿತಇರುತಿಹ ವಿಜಯೀಂದ್ರರಲಿ ಅಭಯವರದ 20ಸೌಂದರ್ಯಸಾರ ಜಗದೇಕವಂದ್ಯನು ಭೈಷ್ಮೀಸತ್ಯಾಸಮೇತವರಅಭಯದ ಅಜಿತಇಂದಿರಾಪತಿ ಕೃಷ್ಣಗರ್ಪಿತ ಈ ಗುರುಚರಿತೆಸುದರ್ಶನ ಕಂಬುಧರ ಅಖಿಲಪ್ರದ ಹರಿಗೆ 21ಸರಸಿಜಾಸನಪಿತ &ಟಜquo; ಪ್ರಸನ್ನ ಶ್ರೀ ನಿವಾಸ &ಡಿಜquo; ನುಬರೆಸಿದ ಶ್ರೀ ಪ್ರಸನ್ನ ರಾಘವೇಂದ್ರ ವಿಲಾಸತರುವಾಯ ಈ ಪರಮಗುರು ವಿಜಯೀಂದ್ರ ಗುರುಚರಿತೆಹರಿಸಿರಿವಾಯುಗುರುಪ್ರೀತಿಕರ ಶುಭದ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಠಲ ಹೃಷಿಕೇಶನೆ ನತಜನಪೋಷ ವಾಸುಕೀಶಯನಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಸವನುತ ರಜಿತೇಶ ನಮಿತಪದಕ್ಲೇಶಹರಣ ಜಗದೀಶ ಜನಾರ್ದನಅ.ಪನೀರೊಳಿಳಿದು ಮತ್ಸ್ಯಾವತಾರದಿಂದಲಿನಲಿದುಘೋರತಮನ ಗೆಲಿದುಚಾರುವೇದವ ತಂದೆ ಧೀರ ಕಮಠನಾದಿಕೇಸರಿಯಾಕಾರವನೇತಾಳಿಸಾರಿ ಕಂಬದಿ ಮೈದೋರುತ ತರಳಗೆಧೀರನ ಸೀಳಿದೆನಾರಮೃಗೇಶನೆ1ಬಲಿಯೊಳ್ ದಾನವ ಬೇಡಿ ನೆಲನಈರಡಿಮಾಡಿಛಲದಿ ಬಂಧಿಸಿ ಬಲಿಯ ತಲೆಯ ಮೆಟ್ಟಿದೆ ವಾಮನಾಛಲದಭಾರ್ಗವರಾಮ ಧರಣಿಜೆಗೊಲಿದನೆರಘುರಾಮ ಕೊಳಲನುಡಿಸಿ ಗೋವುಗಳೊಡನಾಡಿದೆತ್ರಿಪುರನ ಸತಿಯರ ವ್ರತವ ಪರಿಹರಿಸಿದಕಪಟಮೋಹನರೂಪನಿಪುಣಾ ಬೌದ್ಧಾವತಾರಕಪಟದೀ ಹಯವೇರಿ ಬಂದಾ ನಿಪುಣಕಲ್ಕ್ಯಾವತಾರೀ ಗುಪಿತದಿ ಸರ್ವಾ ವ್ಯಾಪಕನೆನಿಸಿದೆಕಪಟನಾಟಕಗೋವಿಂದದಾಸನ ಪ್ರಿಯಾ3
--------------
ಗೋವಿಂದದಾಸ
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು
ಶ್ರೀ ವೆಂಕಟೇಶ ಸಲಹು ವೆಂಕಟೇಶಭಾವಿಕ ಸೇವಕ ಭವಭಯನಾಶ ಪ.ಸುರಾರಿ ಗಜಗಳೆಂಬ ಗಣಕೆಕಂಠೀರವಕರಿರಾಜ ಸಂಕಟ ಛಿತ್ತ ದೇವಪರಮಭಾಗವತರ ಸಮೂಹ ಸಂಜೀವನಪುರಹರವರಮತ್ತವೃಕ( ಷ?)ಮಥನ 1ವನಜಭವ ಸವಿೂರರೊಡೆಯ ಶ್ರೀರಮಣಮುನಿ ಹೃದಯಾಲಯ ಪರಿಪೂರ್ಣಫಣಿವರಶಾಯಿಪರಾತ್ಪರಅಗಣಿತಗುಣಗಂಭೀರ ಜಗದದಾತ2ಶುಕಶೌನಕ ಸನಕಾದಿ ದೇವಋಷಿಸಕಳ ಸುರಭೂಸುರ ರಾಜಾಧೀಶಭಕುತವತ್ಸಲಬಾದರಾಯಣಹರಿಹಯಮುಖ ಪ್ರಸನ್ವೆಂಕಟ ಗಿರಿನಿಲಯ 3
--------------
ಪ್ರಸನ್ನವೆಂಕಟದಾಸರು
ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು
ಶ್ರೀ ಶುಕ್ರಾಚಾರ್ಯ ಸ್ತೋತ್ರ93ಶ್ರೀಶಪ್ರಿಯ ಭೃಗುವಂಶಜಾತ ಶುಕ್ರಾಚಾರ್ಯನೀ ಸಲಹೋ ಎನ್ನನ್ನ ನಮೋ ನಮೋ ನಮಸ್ತೇ ಪಶ್ರೀ ಪದ್ಮನಾಭಜನು ಸುಪವಿತ್ರ ವಿಧಿಸುತಭೃಗು ಅಪತ್ಯನುಕವಿತತ್ಪುತ್ರರತ್ನನು ಶುಕ್ರಈ ಪುಣ್ಯ ಶ್ಲೋಕ ಶುಕ್ರಾಚಾರ್ಯ ಉಷನ ಶ್ರೀಪಪ್ರಿಯನಿಗೆ ನಮೋ ಮಂತ್ರ ತಂತ್ರ ಮಹಾಕವಿಗೆ 1ದೈತ್ಯಮಂತ್ರಿಯೇ ಸರ್ವಶಾಸ್ತ್ರ ಪ್ರವಾರ್ತಾರದೈತ್ಯಾನಂ ಪರಮಂ ಗುರುಂ ಪ್ರಭುಸ್ತಾರಾ ಗಣಾನಾಂಮಹಾದ್ಯುತಿಯೇ ನಮೋ ಎನ್ನ ಪೀಡೆಗಳ ಪರಿಹರಿಸಿದಯದಿಪಾಲಿಸೆನ್ನನ್ನು ಹರಿಭಕ್ತ್ಯಾದಿಗಳಿತ್ತು 2ಅಕಳಂಕಅಜಪಿತಪ್ರಸನ್ನ ಶ್ರೀನಿವಾಸನುಶುಕ್ರನೆಂದೆಣಿಸುವನುಶೋಕರಹಿತನಾದ್ದರಿಂದಶ್ರೀಕರಾರ್ಚಿತ ಈ ಶುಕ್ರ ನಿನ್ನೋಳ್ ಪ್ರಕಾಶಿಪನುಶುಕ್ರನ್ನ ಒಲಿಸೆನಗೆ ಶುಕ್ರಾಭಿದ ಮಹಾಯಶನೇ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶುಕ್ಲನಾಮ ಸಂವತ್ಸರ ಸ್ತೋತ್ರ147ಶುಕ್ಲ ಸಂವತ್ಸರದ ಮುಖ್ಯ ಸ್ವಾಮಿಯು ಸುಖಪೂರ್ಣ ಶೋಕಾದಿದೋಷ ದೂರ ಶ್ರೀ ಉಪೇಂದ್ರನಿಗೆ ಆನಮಿಸುವೇ ಪ.ದೇವಗುರುಬೃಹಸ್ಪತಿ ದೇವೇಂದ್ರ ಮೊದಲಾದ ಸರ್ವ ದೇವ ವಿಧಶಿವ ವಿಧಸೇವ್ಯಶ್ರೀ ಲಕ್ಷ್ಮೀಶ ಸರ್ವೇಶನು ತಾನೆಈ ವರುಷರಾಜ ಶುಕ್ರನೊಳು ಮತ್ತು ವರುಷನಿತ್ಯನಾಯಕರುಸಚಿವ ಸೇನಾ ಸಸ್ಯ ರಸ ನಿರಸಾಧಿ ಪತಿಗಳೊಳಾಗಿರುವ 1ಇದ್ದು ಶೃತಿಗಳ ನಡೆಸಿ ಲೋಕ ಜನರಿಂದ ವಿಹಿತಾ ವಿಹಿತಸಾಧನ ಗೈಸಿ ಸಜ್ಜನರಿಗೆ ಕಷ್ಟ ಬಾರದೇ ಕಾಯುವಸಾಧು ಸಾಧನ ಮಾಳ್ಪದಕೆ ಅನುಕೂಲ ಶುಕ್ಲ ಸಂವತ್ಸರಸಂತಾಪ ಸಿಡಿಲು ಗಾಳಿ ಔಷ್ಣವ ಜಯಿಸಬಹುದು ಹರಿದಯದಿ 2ಚೌರ್ಯ ಅಸತ್ಯ ನಿಂದಾ ನಿಷ್ಠುರ ದುಷ್ಟ ತನಾದಿಗಳುಸಂತ್ಯಜಿಸಿಪತಿತಾಯಿ ತಂದೆಗುರುಸೇವಾಹರಿಪೂಜೆಕಾಯವಾಙ್ಮನದಿಂದ ಮಾಳ್ಪರಿಗೆ ಮಧ್ವಹುದಬ್ಜಗನುತೋಯಜಾಸನ ಪಿತ ಪ್ರಸನ್ನ ಶ್ರೀನಿವಾಸ ಒಲಿದು ಸಂರಕ್ಷಿಸುವನು 3| ಶ್ರೀ ಕೃಷ್ಣಾರ್ಪಣಮಸ್ತು |
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯ ಸಂಧರ ಚರಿತ್ರೆ127ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿಭೃತ್ಯನಾ ಎಂದೆಣಿಸಿನಿತ್ಯಪಾಲಿಸುವುದುಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆವಿಧಿಸನಕಮೊದಲಾದಗುರುಪರಂಪರೆಗೆಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1ಪದ್ಮನಾಭನರಹರಿಮಾಧವಅಕ್ಷೋಭ್ಯರಪದ್ಮಾಂಘ್ರಿಗಳ ನಮಿಸಿ ಜಯತೀರ್ಥರವಿದ್ಯಾಧಿರಾಜರಪಾದಪಂಕಜಕ್ಕೆರಗಿವಿದ್ಯಾಧಿರಾಜರು ಈರ್ವರಿಗೂ ನಮಿಪೆ 2ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆರಾಮಚಂದ್ರರಿಗೆ ಆ ಯತಿವರರಹಸ್ತಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 4ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5ಸತ್ಯಬೋಧಾರ್ಯರ ಕರಕಮಲ ಸಂಜಾತಸತ್ಯಸಂಧರ ಮಹಿಮೆ ಬಹು ಬಹು ಬಹಳವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯುಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯಹಾವೇರಿಯವರು ಈ ಯತಿವರಮಹಂತದೇವ ಸ್ವಭಾವರು ವೇದಾಂತ ಕೋವಿದರುಸರ್ವದಾ ಹರಿನಾಮ ಸಂಸ್ಮರಿಸುವವರು 7ರಾಮಚಂದ್ರಾಚಾರ್ಯ ಸರ್ವಪ್ರಕಾರದಲುತಮ್ಮ ಸಂಸ್ಥಾನ ಪೀಠಾರ್ಹರು ಎಂದುನೇಮದಿಂ ಪ್ರಣವೋಪದೇಶ ಅಭಿಷೇಕಸಂಮುದದಿ ಮಾಡಿದರು ಸತ್ಯಬೋಧಾರ್ಯ 8ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತಧರೆಯಲ್ಲಿಜ್ಞಾನಿಶ್ರೇಷ್ಠರು ಎಂದು ಸ್ತುತಿಕೊಂಡಧೀರ ಗುರುವರ ಸತ್ಯಸಂಧರಿಗೆ ನಮಿಪೆ 9ಸತ್ಯಂ ವಿದಾತಂ ನಿಜಭೃತ್ಯಭಾಷಿತಂಅಂದು ಕಂಬದಿ ತೋರ್ದಹರಿಪ್ರಹ್ಲಾದನಿಗೆಇಂದುವಟುರೂಪದಿ ಬಂದು ವಿಠ್ಠಲ ಸತ್ಯಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10ವಿಠ್ಠಲನ್ನ ವಂದಿಸಿ ಪಂಡರೀಪುರದಿಂದಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರುವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದುನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದುಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12ಶ್ರೀವಿಷ್ಣುಪಾದಮಂದಿರದ ಮುಖದ್ವಾರಅವಿವೇಕದಲಿ ಗಯಾವಾಳರು ಬಂಧಿಸಲುಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರುವಿಶ್ವವಿಷ್ಣು ವಷಟ್ಕಾರನು ವಲಿದ 13ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆಈ ರೀತಿ ಅದ್ಬುತವು ಜರುಗಿದ್ದು ಕಂಡುಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14ತಮ್ಮ ತಪ್ಪುಗಳನ್ನು ಮನ್ನಿಸೆಕ್ಷಮೆಬೇಡಿತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆಹೇಮರತ್ನಾದಿಗಳಕಾಣಿಕೆಅರ್ಪಿಸಿನಮಿಸಿ ಪೂಜಿಸಿದರು ಗಯಾವಾಳರು 15ಸೂರಿಕುಲ ತಿಲಕರು ಸತ್ಯ ಸಂಧಾರ್ಯರುಹರಿಪೂಜೆ ಮಾಡುವಾಗಹರಿಶಿರಿ ವಾಯುಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆಬರುವುದು ನೋಡುವ ಯೋಗ್ಯ ಭಕ್ತರಿಗೆ 16ಶ್ರೀಹರಿಅರ್ಚನೆಗೆ ಸ್ವಾಮಿಗಳು ಕುಳಿತರುಬ್ರಾಹ್ಮಣ ಮಹಾಪುರುಷ ಓರ್ವನು ಬಂದಸಹಸ್ರದಳ ಸುಂದರತರ ಕಮಲಪುಷ್ಪವಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17ಪ್ರಣವಅಷ್ಟಾಕ್ಷರಿ ಮೊದಲಾದ ಮಂತ್ರಗಳಆಮ್ನಾಯಋಗ್ ಯಜುಸ್ಸಾಮಾಥರ್ವಣದಅನುಪಮ ಮಹಾ ಇತಿಹಾಸ ಎರಡರಸಾರವಿಷ್ಣು ಸಹಸ್ರನಾಮಗಳಿರುತಿವೆಯು 18ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳಶ್ರೀ ಕೃಷ್ಣ ಸುಪ್ರೀತಿಕರವ್ಯಾಖ್ಯಾನಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣುಸೂರಿವರಧೀರರು ಸತ್ಯ ಸಂಧಾರ್ಯ 19ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿವೃಂದಾವನದಿ ಕೂಡುವಕಾಲಬರಲುಭೂದೇವಿಪತಿವಕ್ತ್ರದಿಂದುದಿತಸಾಧು ಸುಪವಿತ್ರ ತೀರಕ್ಕೆ ಬಂದಿಹರು 20ಹದಿನೇಳು ನೂರು ಹದಿನಾರನೇ ಶಾಲಿ ಶಕಆನಂದ ಸಂವತ್ಸರ ಜೇಷ್ಠ ಶುದ್ಧದ್ವಿತೀಯಪುಣ್ಯತಮ ದಿನದಲ್ಲಿ ಶ್ರೀಹರಿಯಪಾದಯೆಯ್ದಿದರು ಈ ಗುರುವರಮಹಂತ21ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿದೊಡ್ಡದಲ್ಲದ ಗ್ರಾಮಮಹಿಷಿಎಂಬುವಲಿಕ್ರೋಡಜಾ ತೀರಸ್ಥ ವೃಂದಾವನಸದನಮಾಡಿ ಕುಳಿತರು ಮತ್ತೊಂದು ಅಂಶದಲಿ 22ವೃಂದಾವನದೊಳು ಇಹ ಸತ್ಯಸಂಧರೊಳುನಿಂತಿಹನು ಸತ್ಯಸಂಧನು ಮುಖ್ಯವಾಯುವಾತದೇವನೊಳು ಸತ್ಯಸಂಧ ನಾಮಾವಿಷ್ಣುಸತ್ಯಜ್ಞಾನಾನಂತಾನಂದ ವಾಯು ಇಹನು 23ವೃಂದಾವನಸ್ಥರ ಈ ರೀತಿ ತಿಳಿಯುತ್ತಬಂದು ಸೇವಿಸುವವರಿಗೂ ಸ್ಮರಿಸುವವರಿಗೂಕುಂದುಕೊರತೆನೀಗಿಇಷ್ಟಾರ್ಥ ಲಭಿಸುವವುಇಂದಿರಾಪತಿ ದಯಾಸಿಂಧು ಪಾಲಿಸುವನು 24ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'ಮೀನಕಮಠಕ್ರೋಡನೃಹರಿವಟುಪರಶುದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25 ಪ|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸುಧಾಮ ಚರಿತ್ರೆಶ್ರೀ ಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನೂ ಪಘೋರದಾರಿದ್ಯ್ರದ ಬಾಧೆಯೊಳಿರುತಲಿಚಾರುಸಚ್ಚರಿತೆಯ ಆಗರವಾಗಿಹ ಅ.ಪ.ಶೀಲ ಸದ್ಗುಣವತಿಯು ಸುಸೀಲೆಯುಸತಿಮಣಿ ಪತಿವ್ರತೆಯುಬಾಲಕ ಸಲಹಲು ಕಡು ಕಷ್ಟ ಬಡುತಲಿ ಶ್ರೀಲೋಲನ ಧ್ಯಾನದಿ ಕಾಲಕಳೆಯುತಲಿಹಳು 1ಮನದಲಿ ಯೋಚಿಸುತ ಅನುನಯದೊಳುಪತಿಗೆ ತಾ ನುಡಿದಳೆಂದೂಅನುಭವಿಸಲಾರೆಘನದಾರಿದ್ರ್ಯವನುಸಂ ಮ್ಮಂಧಿಗಳು ಸ್ನೇಹಿತರಲ್ಲವೇ ನಿಮಗೆ 2ಅಂದ ಮಾತನು ಕೇಳುತ ಕುಚೇಲ ತಾಹಿಂದೆ ಗುರುಕುಲ ವಾಸದಿನಂದ ಬಾಲನ ಕೂಡ ಹೊಂದಿದ ಸ್ನೇಹವತಂದು ಸ್ಮರಣೆಗೆ ಶ್ರೀ ಕೃಷ್ಣ ಸಖನು ಎಂದಾ 3ಕಡುಹರುಷದಿ ಸತಿಯುಒಡನೆ ತಂದು ಪ್ರಥಕು ತಂಡುಲವ ನೀಡೀಕಡಲೊಡೆಯಪಾದದರುಶನ ಕೊಂಡು ನೀವಸಡಗರದಲಿ ಬನ್ನಿರೆಂದು ಕಳುಹಿದಳು 4ಭರತ ಮಾರ್ಗದಿ ಹರಿಯಾಸ್ಮರಿಸುತಲೆ ಮನದೊಳು ಪೂಜಿಸುತಸುರ ವೈಭವದಲಿ ಮೆರೆಯುವ ದ್ವಾರಕಾಪುರವನುನೋಡುತ ಬೆರಗಾಗಿ ನಿಂದನು 5ಚಾರರೊಡನೆ ಪೇಳಿದಾಶ್ರೀ ಕೃಷ್ಣನ ಬಾಲ್ಯದಸಖತಾನೆಂದುದೂರದಿ ಬಂದು ದ್ವಾರದಿ ನಿಂದಿಹುದನುಅರುಹಿರಿ ಹರಿಗೆಂದು ಕಳುಹಿದನವರನು 6ವಾರುತಿಯನು ಕೇಳುತಾಶ್ರೀಕೃಷ್ಣ ತಾ ವಿಪ್ರನೆಡೆಗೆ ಬರುತಾಕರಪಿಡಿದವನ ಕರೆತಂದನರಮನೆಗೆ ತಾವರಸಿಂಹಾಸನದಲ್ಲಿ ಕುಳ್ಳಿರಿಸಿದನಾಗ 7ದೂರದ ದಾರಿಯನು ನಡೆದು ಬಂದಶ್ರಮ ಪರಿಹಾರಕೆಂದುನಾರಿ ರುಕ್ಮಿಣಿ ನೀರ ನೆರೆಯ ಪಾದವ ತೊಳೆದುಭಾರಿ ಉಪಚಾರ ಮಾಡುತಿದ್ದನು ಕೃಷ್ಣಾ 8ಮಡದಿ ಮಕ್ಕಳ ಕ್ಷೇಮವ ವಿಚಾರಿಸಿಕಡು ಸಂಭ್ರಮವ ತೋರುತಷಡುರಸದನ್ನವ ಮಡದಿ ರುಕ್ಮಿಣಿ ಬಡಿಪೆಸಡಗರದಲಿ ಸುಭೋಜನವ ಮಾಡಿಸಿದನು 9ಅಂದಿನಿರುಳು ಕಳೆಯೇತಂದಿಹುದೇನುಕಾಣಿಕೆತಮಗೆನುತಾಚಿಂದೆ ಬಟ್ಟೆಯೊಳಿದ್ದ ಪ್ರಥಕು ತಂಡುಲವ [ಅವಲಕ್ಕಿ]ಬ್ರಹ್ಮಾಂಡದೊಡೆಯ ತಾ ಕೊಂಡೆ ಸಂಭ್ರಮದಿಂದ 10ಪ್ರಥಕು ತಂಡುಲವ ಕೊಂಡುಸುಧಾಮನ ಭಕುತಿ ಭಾವನೆ ಕಂಡುಅತುಲ ಐಶ್ವರ್ಯದ ಸುಖ ಸಂಪದವಿತ್ತುಮುಕುತಿ ನೀಡಿದ ನಮ್ಮ ಭಕುತ ವತ್ಸಲ ಕೃಷ್ಣಾ 11ಮಂಗಲಂ ಮಚ್ಛಕೂರ್ಮವರಹ ನರಸಿಂಹ ಸುಂದರ ವಾಮನಮಂಗಲಂ ಭ್ರಗುರಾಮ ದಶರಥ ತನಯಗೆಮಂಗಲಂಸಿರಿಕೃಷ್ಣ ಬೌದ್ಧ ಸುಕಲ್ಕಿಗೆ 12ಮಂಗಲಂ ಪ್ರದ ಚರಿತ್ರೆಯಾಭಕುತಿಯಿಂ ಪೇಳಿ ಕೇಳಿದ ಜನಕೆಹಿಂಗದೆ ಸಕಲ ಸೌಭಾಗ್ಯ ಸಂಪದ ವೀವಾಅಂಗಜಪಿತ ತಂದೆಸಿರಿವಿಠಲ ಸ್ವಾಮಿ 13ಶ್ರೀಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನುನೀರಜನಾಭನ ಕರುಣೆಯಿಂದಲಿ ತಾಭೂರಿಸಂಪದಸಿರಿಭೋಗಿಸುತಿದ್ದನು 14ಶ್ರೀ ಸುಧಾಮ ಚರಿತ್ರ ಸಂಪೂರ್ಣಂ
--------------
ಸಿರಿವಿಠಲರು
ಶ್ರೀ ಸೌಭಾಗ್ಯ ಸಪ್ತತ್ರಿಂಶತಿ71ಶರಣುವಿಧಿವಾಣೀಶ ಶರಣು ಧೃತಿ ಶ್ರಧ್ದೇಶ |ಶರಣು ಋಜುವರ್ಯರಲಿ ಶರಣು ಶರಣಾದೆ ಪಮೀನಕೂರ್ಮಕ್ರೋಡನರಸಿಂಹ ವಟುರೂಪರೇಣುಕಾತ್ಮಜ ರಾಮ ಶ್ರೀ ಕೃಷ್ಣ ಜಿನಜ ||ವಿಷ್ಣು ಯಶಸ್ಸುತ ಅಜಿತ ಶ್ರೀಶನಿಗೆ ಪ್ರಿಯತಮ |ಅನುಪಮ ಜೀವೋತ್ತಮರ ಚರಣಕಾನಮಿಪೇ 1ಪುರುಷವಿಧಿ ಕಾಲವಿಧಿ ವಾಸುದೇವೋತ್ಪನ್ನ |ವಿರಿಂಚ ಮಹತ್ತತ್ವತನು ಅನಿರುದ್ಧ ಜಾತ ||ನಾರಾಯಣ ನಾಭಿ ಕಮಲಜ ಚತುರ್ಮುಖನು |ಸರಸ್ವತೀಪತಿ ರುದ್ರ ತಾತನಿಗೆ ನಮಿಪೆ 2ಈ ನಾಲ್ಕು ಬ್ರಹ್ಮನ ಅವತಾರದಲಿ ಶುಕ್ಲ |ಶೋಣಿತಸಂಬಂಧ ಇಲ್ಲವೇ ಇಲ್ಲ ||ಜ್ಞಾನಾದಿ ಐಶ್ವರ್ಯದಲಿ ಯಾರು ನಾಲ್ಮುಗಗೆ |ಎಣೆ ಇಲ್ಲ ಹದಿನಾಲ್ಕು ಲೋಕದಲಿ ಎಲ್ಲೂ 3ಭಯವು ಅಜ್ಞಾನವು ಸಂಶಯವು ಇವಗಿಲ್ಲಸತ್ಯ ಲೋಕಾಧಿಪನ ಸುರರ ಅಧ್ಯಕ್ಷ ||ಹಯಮುಖ ತ್ರಿವೃತ್ತುರೀಯ ಹಂಸ ಇತರಾಸೂನು |ತೋಯಜಾಕ್ಷಕೇಶವನ ಪ್ರಥಮ ಪ್ರತಿಬಿಂಬ4ಜಗಜ್ಜನ್ಮಾದ್ಯಷ್ಟಕ ಕರ್ತನ ನಿಯಮನದಿ |ಜಗವ ಪಡೆದಿಹ ಬ್ರಹ್ಮಸತ್ವವಿಗ್ರಹನು ||ಖಗಪ ಭುಜಗಪ ಶಿವಾದ್ಯನಂತ ಜೀವೋತ್ತಮನು |ಅಘರಹಿತತಾರಕಗುರುಶತಾನಂದ5ಅವನಿಯಲಿ ಅವತಾರ ಬ್ರಹ್ಮದೇವನಿಗಿಲ್ಲ |ಭಾವಿ ಬ್ರಹ್ಮನು ಮುಖ್ಯವಾಯುದೇವ ||ದೇವೀಜಯಾ ಸಂಕರುಷಣಾತ್ಮಜನು ಈ |ಭುವಿಯಲ್ಲಿ ತೋರಿಹನು ಹರಿಯಪ್ರಥಮಾಂಗ6ಧೃತಿಪ್ರಭಂಜನವಾಯುಸ್ಮರಭರತ ಗುರುವರನು |ಮಾತರಿಶ್ವನುಸೂತ್ರಪವಮಾನ ಪ್ರಾಣ ||ಎದುರು ಸಮರಿಲ್ಲ ಈ ಬ್ರಹ್ಮ ಧಾಮನಿಗೆಲ್ಲೂ |ಸದಾ ನಮೋ ಭಾರತೀರಮಣ ಮಾಂಪಾಹಿ 7ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ |ಪ್ರತಿಷ್ಠಿತವೂ ಜೀವರ ದೇಹಕಾಧಾರ ||ತ್ರಾತಪೋಷಕ ಸರ್ವವಶಿ ಪ್ರಜ್ಞಾಶ್ರೀದನು |ತತ್ವಾದಿ ದೇವ ವರಿಷ್ಠ ಚೇಷ್ಟಕನು 8ಶ್ರೀಶ ಹಂಸಗೆ ಪ್ರಿಯಶ್ವಾಸಜಪ ಪ್ರವೃತ್ತಿಸುವ |ಬಿಸಜಜಾಂಡವ ಹೊತ್ತು ಕೊಂಡು ಇರುತಿಹನು ||ಅಸಮ ಸಾಮಥ್ರ್ಯದಿ ಸರ್ವ ಕ್ರಿಯೆ ಮಾಡಿಸುವ |ಶಾಸ್ತನಾಗಿಹ ಪಂಚಅವರಪ್ರಾಣರಿಗೆ9ಬಲ ಜ್ಞಾನಾದಿಗಳಲ್ಲಿ ಹ್ರಾಸವಿಲ್ಲವು ಇವಗೆ |ಎಲ್ಲ ಅವತಾರಗಳು ಸಮವು ಅನ್ಯೂನ ||ಶುಕ್ಲಶೋಣಿತಸಂಬಂಧ ಇಲ್ಲವೇ ಇಲ್ಲ |ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 10ವಾಯುದೇವನ ಒಲಿಸಿಕೊಳ್ಳದ ಜನರಿಗೆ |ಭಯ ಬಂಧ ನಿವೃತ್ತಿಯು ಸದ್ಗತಿಯು ಇಲ್ಲ ||ಮಾಯಾಜಯೇಶನಪರಮಪ್ರಸಾದವು |ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 11ಶ್ರೀರಾಮಚಂದ್ರನು ಒಲಿದ ಸುಗ್ರೀವಗೆ |ಮಾರುತಿಯ ಒಲಿಸಿಕೊಂಡವನವನೆಂದು ||ಮಾರುತಿಯ ಒಲಿಸಿಕೊಳ್ಳದ ವಾಲಿ ಬಿದ್ದನು |ಕರ್ಣನೂ ಹಾಗೇವೇ ಅರ್ಜುನನು ಗೆದ್ದ 12ರಾಮನಿಗೆ ಸನ್ನಮಿಸಿ ವನದಿ ದಾಟುತ ಹನುಮ |ಶ್ರಮರಹಿತನು ಸುರಸೆಯನು ಜಯಿಸೆಸುರರು||ಪೂಮಳೆ ಕರೆಯಲು ಸಿಂಹಿಕೆಯನು ಸೀಳಿ |ಧುಮುಕಿದ ಲಂಕೆಯಲಿ ಲಂಕಿಣಿಯ ಬಡಿದ 13ರಾಮ ಪ್ರಿಯೆಗುಂಗುರವ ಕೊಟ್ಟು ಚೂಡಾರತ್ನ |ರಾಮಗೋಸ್ಕರ ಕೊಂಡು ವನವ ಕೆಡಹಿ ||ಶ್ರಮ ಇಲ್ಲದೆ ಅಕ್ಷಯಾದಿ ಅಧಮರ ಕೊಂದು |ರಾಮ ದೂತನು ಹನುಮ ಲಂಕೆಯ ಸುಟ್ಟ 14ಶ್ರೀರಾಮನಲಿ ಬಂದು ನಮಿಸಿ ಚೂಡಾಮಣಿಯ |ಚರಣದಿ ಇಡೆ ರಾಮ ಹನುಮನ ಕೊಂಡಾಡಿ ||ಸರಿಯಾದ ಬಹುಮಾನ ಯಾವುದು ಇಲ್ಲೆಂದು |ಶ್ರೀರಾಮ ತನ್ನನ್ನೇ ಇತ್ತಾಲಿಂಗನದಿ 15ಮೂಲ ರೂಪವನೆನೆದ ಲಕ್ಷ್ಮಣನ ಎತ್ತಲು |ಕೈಲಾಗದೆ ರಾವಣನು ಸೆಳೆಯೆ ಆಗ ||ಲೀಲೆಯಿಂದಲಿ ಎತ್ತಿ ರಾಮನಲಿ ತಂದನು |ಬಲವಂತ ಹನುಮ ಶೇಷಗುತ್ತಮತಮನು 16ಮೃತ ಸಂಜೀವಿನಿಯಾದಿ ಔಷಧಿ ಶೈಲವನು |ತಂದು ಸೌಮಿತ್ರಿ ಕಪಿಗಳಿಗೆಅಸುಇತ್ತ ||ಮುಂದಾಗಿ ಪೋಗಿ ಶ್ರೀರಾಮ ಬರುವುದು ಪೇಳಿ |ಕಾಯ್ದ ರಾಮಾನುಜನ ಅಗ್ನಿ ಮುಖದಿಂದ 17ಇತರರು ಮಾಡಲು ಅಶಕ್ಯ ಸೇವೆ ಹನುಮ |ಗೈದಿ ಮೋಕ್ಷವು ಸಾಲ್ದು ಏನು ಕೊಡಲೆನ್ನೆ ||ಸದಾ ಸರ್ವ ಜೀವರಿಂದಧಿಕ ಭಕ್ತಿ ಒಂದೇ |ಕೇಳ್ದ ಶ್ರೀರಾಮನ್ನ ವೈರಾಗ್ಯ ನಿಧಿಯು 18ಗಂಡು ಶಿಶು ಬೀಳಲು ಗುಂಡು ಪರ್ವತ ಒಡೆದು |ತುಂಡು ನೂರಾಯಿತು ಕಂಡಿಹರು ಅಂದು ಬೋ - ||ಮ್ಮಾಂಡದಲಿ ಪ್ರಚಂಡ ಭೀಮಗೆ ಸಮ |ಕಂಡಿಲ್ಲ ಕೇಳಿಲ್ಲ ನೋಡಿ ಭಾರತವ 19ಉಂಡು ತೇಗಿದಗರಳತಿಂಡಿಯ ಭೀಮನು |ಉಂಡು ಹಾಲಾಹಲವ ಹಿಂದೆ ಈ ವಾಯು ||ಹಿಂಡಿ ಸ್ವಲ್ಪವ ಮುಕ್ಕಣ್ಣಗೆ ಕೊಟ್ಟನು |ಬಂಡುಮಾತಲ್ಲವಿದುಕೇಳಿವೇದವನು20ಅರಗು ಮನೆಯಿಂದ್ಹೊರಟು ಸೇರಿ ವನವನು ಅಲ್ಲಿ |ಕ್ರೂರ ಹಿಡಿಂಬನ ಕೊಂದವನ ಸೋದರಿ ||ಭಾರತೀ ಯಕ್ಸ ್ವರ್ಗ ಶಿಕಿಯು ಹಿಡಿಂಬಿಯಕರಪಿಡಿದ ಭೀಮನು ಅನುಪಮ ಬಲಾಢ್ಯ 21ಬಕ ಕೀಚಕ ಜರಾಸಂಧಾದಿ ಅಸುರರು |ಲೋಕ ಕಂಟಕರನ್ನ ಕೊಂದು ಬಿಸುಟು ||ಲೋಕಕ್ಕೆ ಕ್ಷೇಮವ ಒದಗಿಸಿದ ಈ ಅಮಿತ |ವಿಕ್ರಮಭೀಮನಿಗೆ ಸಮರಾರು ಇಲ್ಲ22ಕಲಿಕಲಿಪರಿವಾರ ದುರ್ಯೋಧನಾದಿಗಳ |ಬಲವಂತ ಭೀಮನು ಬಡಿದು ಸಂಹರಿಸಿದ ||ಕಲಿಹರ ಸುಜನಪಾಲ ಭೀಮ ಸಮ್ರಾಟನ |ಕಾಲಿಗೆ ಎರಗುವೆ ದ್ರೌಪದೀ ಪತಿಗೆ 23ಮಾಲೋಲ ಕೃಷ್ಣನ ಸುಪ್ರೀತಿಗಾಗಿಯೇ |ಬಲ ಕಾರ್ಯಗಳ ಮಾಡಿ ಅರ್ಪಿಸಿದ ಭೀಮ ||ಕಲಿಯುಗದಿ ಈ ಭೀಮ ಅವತಾರ ಮಾಡಿಹನು |ಕಲಿಮಲಾಪಹ ಜಗದ್ಗುರು ಮಧ್ವನಾಗಿ 24ಹನುಮಂತನ ಮುಷ್ಠಿ ಭೀಮಸೇನನ ಗದೆ |ದಾನವಾರಾಣ್ಯವ ಕೆಡಹಿದ ತೆರದಿ ||ಆಮ್ನಾ ಯಸ್ಮøತಿ ಯುಕ್ತಿಯುತ ಮಧ್ವ ಶಾಸ್ತ್ರವು |ವೇನಾದಿಗಳ ಕುಮತ ತರಿದು ಸುಜನರ ಕಾಯ್ತು 25ಇಳೆಯ ಸುಜನರ ಭಾಗ್ಯಶ್ರುತಿಪುರಾಣಂಗಳು |ಪೇಳಿದಂತೆಕೊಂಡಯತಿರೂಪ ವಾಯು ||ಮೇಲಾಗಿ ಇದ್ದ ನಮ್ಮ ಅಜ್ಞಾನ ಕತ್ತಲೆಯ |ತೊಲಗಿಸಿದನು ಈ ಮಧ್ವಾಖ್ಯಸೂರ್ಯ26ದುರ್ವಾದ ಕುಮತಗಳು ಸಜ್ಜನರ ಮನ ಕೆಡಿಸೆ |ತತ್ವವಾದವ ಅರುಪಿ ಸಜ್ಜನರ ಪೊರೆದ ||ಮೂವತ್ತು ಮೇಲೇಳು ಗ್ರಂಥ ಚಿಂತಾಮಣಿ |ಸುವರ್ಣಕುಂದಣಪದಕ ಯೋಗ್ಯರಿಗೆ ಇತ್ತ27ದುಸ್ತರ್ಕ ದುರ್ಮತ ಬಿಸಿಲಿಲ್ಲಿ ಬಾಡುವ |ಸಸಿಗಳು ಸಾತ್ವಿಕ ಅಧಿಕಾರಿಗಳಿಗೆ ||ಹಸಿ ನೀರು ನೆರಳು ಈ ಮಾಧ್ವ ಮೂವತ್ತೇಳು |ಸಚ್ಛಾಸ್ತ್ರಪೀಯೂಷಗೋಕಲ್ಪ ತರುವು28ಮೂಢ ಅಧಮರ ದುಷ್ಟ ಮತಗಳ ಸಂಪರ್ಕದಿ |ಈಡಿಲ್ಲದ ಮೋದಪ್ರದ ಜ್ಞಾನ ಕಳಕೊಂಡು ||ಬಡತನದಿ ನರಳುವ ಸಜ್ಜನರ ಪೋಷಿಪುದು |ನೋಡಿ ಈಸುರಧೇನುಮಾಧ್ವ ಮೂವತ್ತೇಳ29ಬಿಲ್ವಪ್ರಿಯ ಶಿವ ಈಡ್ಯ ಸಾರಾತ್ಮ ಕೃಷ್ಣನ |ಚೆಲ್ವಉಡುಪಿಕ್ಷೇತ್ರದಲಿ ನಿಲ್ಲಿರಿಸಿ ||ಎಲ್ಲ ಭಕ್ತರಕಾವಸುಖಮಯ ಜಗತ್ಕರ್ತ |ಮೂಲ ರಾಮನ ಸಾಧು ಜನರಿಗೆ ಕಾಣಿಸಿದ 30ಮಹಿದಾಸ ಬೋಧಿಸಿದ ತತ್ವವನು ವಿವರಿಸುತ |ಮಹಂತಪೂರ್ಣಪ್ರಜÕಬದರೀಗೆ ತೆರಳಿ ||ಮಹಿಶಿರಿಕಾಂತ ಶ್ರೀ ವ್ಯಾಸನ ಬಳಿ ಇಹನು |ಅಹರಹ ಪ್ರೇಮದಿಂಸಂಸ್ಮರಿಸೆತೋರ್ವ 31ರಾಮ ಕೃಷ್ಣವ್ಯಾಸ ಜಾನಕೀಸತ್ಯಾ |ರುಕ್ಮಿಣೀಅಂಭ್ರಣಿಪ್ರಿಯತಮ ಹನುಮ ||ಭೀಮ ಮಹಾ ಪುರುಷೋತ್ತಮ ದಾಸರಿಗೆ |ನಮಿಪೆ ವಿಪಶೇಷ ಶಿವಾದ್ಯಮರ ಸನ್ನತರ್ಗೆ 32ಚತುರ್ಮುಖ ವರವಾಯು ಸರಸ್ವತಿ ಭಾರತಿಗೆ |ಸದಾ ಶ್ರೀಹರಿಯಲ್ಲಿ ಭಕ್ತಿ ಅಚ್ಛಿನ್ನ ||ಅತಿರೋಹಿತ ಜ್ಞಾನ ಪ್ರಾಚುರ್ಯರಾಗಿಹರು |ಸಾಧಾರಣವಲ್ಲ ಋಜುಗಳ ಮಹಿಮೆ 33ಋಜುಗಳರಾಜೀವಚರಣಗಳಿಗಾ ನಮಿಪೆ |ಭುಜಗಶಯ್ಯನಲಿ ಭಕ್ತಿ ಸಹಜ ಇವರಲ್ಲಿ ||ಭುಜಗಭೂಷಣಾದಿಗಳಿಗಧಿಕತಮ ಬಲಜ್ಞಾನ |ತ್ರಿಜಗಮಾನ್ಯರು ತ್ರಿಗುಣ ತಾಪವರ್ಜಿತರು 34ಅಪರೋಕ್ಷಋಜುಗಣಕೆ ಅನಾದಿಯಾಗಿಯೇ ಉಂಟು |ತಪ್ಪದೇ ಶತಕಲ್ಪ ಸಾಧನವ ಗೈದು ||ಶ್ರೀಪನಅಪರೋಕ್ಷಇನ್ನೂ ವಿಶೇಷದಿ |ಲಭಿಸಿ ಕಲ್ಕ್ಯಾದಿಸುನಾಮಧರಿಸುವರು35ಕಲ್ಕ್ಯಾದಿ ಪೆಸರಲ್ಲಿಪ್ರತಿಒಂದು ಕಲ್ಪದಲು |ಅಕಳಂಕ ಇವರು ಬಹು ಸುವಿಶೇಷ ಸಾಧನದಿ ||ಭಕ್ತ್ಯಾದಿ ಗುಣಕ್ರಮದಿ ಅಧಿಕ ಅಭಿವ್ಯಕ್ತಿಯಿಂ |ಮುಖ್ಯ ವಾಯು ಬ್ರಹ್ಮಪದವ ಪೊಂದುವರು 36ಈ ಬ್ರಹ್ಮಾದಿಗಳೊಳು ಇದ್ದು ಕೃತಿಮಾಡಿಸುವ |ಶಿರಿಸಹ ತ್ರಿವೃನ್ನಾಮ ಪ್ರಸನ್ನ ಶ್ರೀನಿವಾಸ ||ಸುಹೃದ ಸೌಭಾಗ್ಯದಗೆ ಜಯ ಜಯತು ಅರ್ಪಿತವು |ಹರಿವಾಯು ನುಡಿಸಿದಿದು ಜಯತು ಹರಿವಾಯ 37
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಆನಂದಮಯಸ್ತೋತ್ರ40ಪೂರ್ಣ ಸುಗುಣಾರ್ಣವನೆಅನಘಪರಮೇಶ್ವರನೆಆ ನಮಿಪೆ ಶ್ರೀರಮಣಆನಂದಮಯವಿಷ್ಣುಪನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶನಿಷ್ಕಳನು ನೀ ಸದಾಕೈವಲ್ಯಸುಖದಆಗಮಸುಶಾಸ್ತ್ರೈಕ ವಿಜÉÕೀಯ ಪರಬ್ರಹ್ಮಅಂಗಾಂಗ್ಯಭಿನ್ನ ಆನಂದ ಸಂಪೂರ್ಣ 1ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿಬ್ರಹ್ಮಆನಂದಮಯನೀ ಇತರರಲ್ಲಬ್ರಹ್ಮಪರಿಪೂರ್ಣಹರಿಸರ್ವನಾಮದಿ ನೀನೆಬಹುರೂಪ ಸರ್ವಸ್ಥ ಈಶ್ವರಆನಂದಮಯ2ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬರುದ್ರನು ದೇವೇಂದ್ರ ಸುರಗುರುವಿಪ್ರಇಂಥ ಯಾರೂ ವಸ್ತು ಯಾವುದೊ ಅಲ್ಲವುಆನಂದಮಯನೀನು ವಿಷ್ಣು ಪರಬ್ರಹ್ಮ3ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳುಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ 4ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಆನಂದಮಯಎಂಬ ಐದು ಶಬ್ದಂಗಳು 1ಆನಂದಮಯಶಬ್ದದಿಂದ ಗ್ರಹಿಸಲುಬೇಕುಆನಂದಮಯಬ್ರಹ್ಮ ನೀನೆ ಇತರರು ಅಲ್ಲ5ಶಿರ ಬಾಹುದ್ವಯ ಮಧ್ಯಚರಣಅಂಗಾಂಗಗಳುಪೂರ್ಣಆನಂದಮಯಎಂದೂ ಅಭಿನ್ನಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮಶೃತಿಯು ಬಹುಸಾರುತಿದೆ ಸುಖಮಯನು ಎಂದು 6ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನಮನೋಮಯ ಸಂಕರ್ಷಣನು ವಿಜ್ಞಾನಮಯನುಅನಘಮಾಯಾರಮಣ ಪರವಾಸುದೇವ ನೀಆನಂದಮಯಶ್ರೀಶ ನಾರಾಯಣ ಬ್ರಹ್ಮ7ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ 8ಅಧಿಕಾರಿ ಆನಂದಪ್ರಚುರಬಹುರೂಪ ನೀಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನುಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ 9ಆನಂದಮಯನೀನೆ ಆನಂದೋದ್ರೇಕದಿಂಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀಆನಂದಮಯಇತರ ಲೋಕಚೇಷ್ಟಕರಿಲ್ಲ10ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದುಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ 11ಸತ್ಯ ಸತ್ಸøಷ್ಟಿಕರ್ತ ಜೀವನಪ್ರದನುಸರ್ವ ಪ್ರವರ್ತಕನು ಸಂಹಾರಕರ್ತಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನದೇಶಾದಿಪರಿಚ್ಛೇದ ಶೂನ್ಯವು ಆನಂತ 12ಅನ್ನಮಯದಿಂ ಸೃಷ್ಟಿ ಸಂಹಾರಜೀವನವುಪ್ರಾಣಮಯ ಶಬ್ದ ಸಹ ಜೀವನಪ್ರದವುಮನೋಮಯ ಶಬ್ದದಿಂ ಸಾಮಾನ್ಯಜ್ಞಾನವುವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ 13ಆನಂದಮಯಶಬ್ದದಿಂದಲಿ ಜÉÕೀಯವುಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ 14ಆನಂದಮಯಆನಂತಂ ಬ್ರಹ್ಮ ಎಂದೀ ರೀತಿಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥಆನಂದಮಯಮೊದಲಾದ ಶಬ್ದಗಳಿಂದಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ 15ಆತ್ಮ ನೀಆನಂದಮಯಇತರರು ಅಲ್ಲಆನಾತ್ಮರು ಸಂಪೂರ್ಣಸ್ವತಂತ್ರರು ಅವರುಚೇತನಾಚೇತನದಸತ್ತಾನಿನ್ನಿಂದಲೇಆನಂತ ನೀ ಸರ್ವಗನು ಆಸಮ ಪ್ರಭು ಐರ 16ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ 17ತಮೇವಂ ವಿದ್ವಾನಮೃತ ಇಹಭವತಿನಾನ್ಯಃ ಪಂಥಾ ಅಯನಾಯ ವಿದ್ಯತಾಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ 18ಆನಂದಪ್ರಚುರ ಪೂರ್ಣಾನಂದಮಯ ನೀನೆಆನಂದ ತರತಮದಿ ಜೀವರಲಿ ಉಂಟುಅತ್ಯಂತ ಭೇದವು ನಿನಗೂ ಜೀವರಿಗೂಅನಂತ ಅಪರಿಮಿತ ಆನಂದಿ ನೀನೆ 19ರುದ್ರನ ಶತಗುಣಿತ ಆನಂದ ನಾಲ್ಮೊಗನಒಂದು ಆನಂದವು ಎಂಬುವುದು ಶೃತಿಯುಆನಂದ ಪರಿಮಿತವು ಜೀವರಿಗೆ ಈ ರೀತಿಆನಂದ ಅಪರಿಮಿತ ನಿನ್ನಯ ಸ್ವರೂಪ 20ಸುಖಮಯ ನಿನ್ನಪರಿಮಿತಾನಂದಾದಿಗಳನುಸಾಕಲ್ಯತಿಳಿದವರು ಇಲ್ಲವೇ ಇಲ್ಲಸಾಕಲ್ಯಶಬ್ದಗಳು ಪೊಗಳಲರಿಯವು ನಿನ್ನಏಕಸುಖಮಯ ನೀನು ಜೀವರಿಗೆ ಭಿನ್ನ 21ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳುಜೀವೇಶ ಐಕ್ಯವನು ಬೋಧಿಸುವವಲ್ಲವುಸರುವಿಚಾರ ನಿರ್ಣಯದಿ ಭೇದಬೋಧಕವೆ 22ಜೀವರಿಗೆ ಜನ್ಮಜೀವನಸತ್ತಾದಾತನುಸರ್ವಾಶ್ರಯ ಸರ್ವನಿಯಾಮಕನು ಆತ್ಮಜೀವರು ಪರಬ್ರಹ್ಮಜ್ಞಾನದಿಂ ಪೊಂದುವಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ 23ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾಸರ್ವದೊಳು ಇರುವಂಥ ಸರ್ವೇಶ್ವರಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂಸರ್ವ ನೀನೆಂದೆನಿಸಿಕೊಂಬೆಯೊ ದೇವ 24ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯುಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ 25ಸರ್ವಜಡ ಚೇತನದಿ ಅಂತರ್ನಿಯಾಮಕನುಸರ್ವಜಗದಾಧಾರ ಏಕ ಬಹುರೂಪತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ 26ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನಶೃತ್ಯನುಸಾರವಿಲ್ಲದ ಅನುಮಾನದುಸ್ತರ್ಕದಿಂದಲಿ ಲಭಿಸದು ಯಾರಿಗೂಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ 27ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆಬದ್ಧರಂತೇ ಮುಕ್ತಜೀವರಿಗೂ ಭಿನ್ನಮುಕ್ತರಿಗೆ ಅವರವರ ಆನಂದ ಅನುಭವವುಅಧೀನ ನಿನ್ನಲ್ಲಿಆನಂದಮಯಶ್ರೀಶ28ಸದಮಲ ಬ್ರಹ್ಮ ನಿನ್ನ ಪರೋಕ್ಷಜ್ಞÕನಿಗೆಪದುಮಸಂಭವ ಸಹ ನೀನು ಸಹ ಇದ್ದುಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆಹೇ ದಯಾನಿಧೇ ನಮೋ ಆನಂದಪೂರ್ಣ 29ಅನ್ನ ಪ್ರಾಣ ಮನೋವಿಜ್ಞಾನಆನಂದಮಯಪರಿಣಾಮ ಅಭಿಮಾನರಹಿತ ಅಧಿಕಾರಿಆನಂದ ಪ್ರಚುರನೇ ಲೋಕಚೇಷ್ಟಕ ನೀನೆಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ 30ವನಜಾಸನಾದಿಗಳು ಆನಂದಮಯರಲ್ಲನಿನ್ನಿಂದ ಉಪಜೀವ್ಯ ಭಿನ್ನರು ಅವರುಆಮ್ನಾಯದಿಂ ವೇದ ದುಸ್ತರ್ಕಕತಿ ದೂರಆನಂದಮಯವಿಷ್ಣು ಮುಕ್ತರಿಗೂ ಆಶ್ರಯನು31ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಎನ್ನ ಒಳಹೊರಗಿದ್ದು ನೀನೆ ನುಡಿದೀ ಗ್ರಂಥನಿನಗೆ ಅರ್ಪಣೆ ಸುಹೃದನಿತ್ಯಸಂತೃಪ್ತ32
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕಾಂತೊಲಿದ ದಾಸ | ರೀ ಕಲಿಯುಗದಲ್ಲಿ |ಲೇಖಾಂಶರಹುದೇ ತಂಗೀ ||ಶೋಕಬ್ಯಾಡೆಲೆ ನರಲೋಕ ಉಳಿದರೆಂದು |ಈ ಕಂಭದೊಳಗಿಹರೇ ಹೇ ನೀರೇ ಪಆ ಸೇತೂ ಮೊದಲಾದ ಹಿಮಾಶೈಲಪರಿಯಂತ|ಸೂಸಿಹದಿವರ ಕೀರ್ತಿ ||ಯೇಸು ಬಗಿಯಲಿಂದ ಸೋಸಿ ನೋಡಿದರನ್ನ |ಪಾಸಟಿ ಯನಿಸದಲ್ಲೇ | ಯೇ ನಲ್ಲೇ 1ನರಮೋಹನಾರ್ಥವಾದರು ಲೌಕೀಕೆಂಬುದೂ |ಅರಿಯಾರು ಸ್ವಪ್ನದಲ್ಲೀ ||ಧರಿಯೊಳಖಿಲ ಸಜ್ಜನರು ಪರೀಕ್ಷಿಸಿಹರು |ಬರಿದೆ ಸ್ತವನವಲ್ಲಾವೆ | ಕೇಳಲವೇ2ಹರಿಕೃಪಿನೋಡುಇವರಿಗೆ ಜನರು ಎಷ್ಟು |ಜರಿದಾರು ಮನ್ನಿಪರೂ ||ಕರಣತ್ರಯದ ಶುದ್ಧರೆರಡು ಮಾರ್ಗವ ಬಲ್ಲ |ವರು ನಿತ್ಯಾಚರಿಸಿದರೂ | ಹಿರಿಯಾರೂ 3ಇವರಂದ ನುಡಿಯನು ಭವಕೆ ತಂದರೆ ಲೇಶ |ಭವದುಃಖವಾಗದಲ್ಲಾ ||ಜವದೊರವದು ಮುಕ್ತಿ ಜವನ ಬಾಧಿಲ್ಲಾಶು |ಕವಿಕುಲ ತಿಲಕರಿಗೇ | ನೀ ಯರಗೇ 4ಖಳಹ ಪ್ರಾಣೇಶ ವಿಠ್ಠಲನ ಚರಿತೆ ಪದಗಳಲಿ ಬಣ್ಣಿಸಿ ಸಂತತೀ |ನಿಲಸಿ ಜ್ಞಾನಿಗಳನ್ನು ತಲಿ ತೂಗಿಸಿದರು ಪೇ |ಳಲು ಎನ್ನ ಮತಿ ಸಾಲದೂ | ಸತ್ಯವಿದೂ 5
--------------
ಪ್ರಾಣೇಶದಾಸರು
ಶ್ರೀಕೃಷ್ಣಲೀಲಾ ಕೀರ್ತನೆಗಳು38iÀುಶೋದೆ ಮಜ್ಜಿಗೆ ಮಾಡುತಂ ಮುದದಿಂ-ದಶೋಕನಮಲ ಸುಲೀಲೆಯನು ||ವಿಶೇಷ ಭಕ್ತಿಂಧಾಡುವಳಾ ಕಥಾ-ರಸ ಯಥಾಮತಿ ರಚಿಸುವೆನು ಪಹತ್ತವತಾರದಿ ಮತ್ತರ ಶಿಕ್ಷಿಸಿಉತ್ತಮರನು ಸಂತೈಸಿದನು ||ಭೃತ್ಯಭವಾರ್ಣವಬತ್ತಿಸುವಿವನನುಎತ್ತುವೆನತಿ ಧನ್ಯಳು ನಾನು 1ನದಿಜನಕನ ಕೊಡದುದ ಕದೊಳೆರೆವೆನುಮದನಪಿತನ ಸಿಂಗರಿಸುವೆನು ||ವದನತೆರದೆನ್ನ ಬೆದರಿಸಿದನ ಬಲುಹದದಿಂದಿರು ಎಂದಾಡುವೆನು 2ಅಣು ಮಹತ್ತೇ ಕಾಲಕೆ ತಿಳಿಯದೆದಣಿದೆನು ಪಾದಗಳನುಕಟ್ಟಿ||ಜನನಿಗೆ ಸಿಕ್ಕದನೆಂಬರ ತೋರಿಸಿಧನಪಜರ ಪೊರೆದ ಮರಕುಟ್ಟಿ 3ಅಗಣಿತರೂಪಿವನಂಗದಿ ಕಂಡಳುಜಗದಂಬೆಂಬರು ಸಜ್ಜನರು ||ಮಗುವೆಂದನುದಿನ ಮುದ್ದಿಸಿ ಕೊಂಕಳೊ-ಳಗಿಡುವೆ ಯನಗೇನೆಂಬುವರೊ 4ಮೀನಾಂಬರೆ ಈ ಪರಿಯಿಂದಲಿ ಶ್ರೀಪ್ರಾಣೇಶ ವಿಠಲನ ಪಾಡುವಳು ||ಈ ನುಡಿಯಾದರದಿಂ ಕೇಳಲುಭವಕಾಣರು ಪರದಲಿ ಸುಖ ಬಹಳ 5
--------------
ಪ್ರಾಣೇಶದಾಸರು
ಶ್ರೀಗುರು ಎಂಥಾ ದಯವಂತನಿಹ ನೋಡೆಈಗ ಋಣವ ಕಳೆದೆನೆನಲು ಆನಂದವಹುದು ನೋಡೆಪಕರೆಯುತ ಸನಿಹಕೆ ಚರಣವ ಶಿರದಲಿಟ್ಟನು ನೋಡೆಹರುಷ ಉಕ್ಕುತ ಎನ್ನ ಮುಖವ ನೋಡಿದ ನೋಡೆಪರಮಾತ್ಮನು ನೀತಿ ಎಂದುಪರಿಪರಿ ಹೇಳಿದ ನೋಡೆಅರೆಮರೆಯೆಲ್ಲವು ನೀ ಬ್ರಹ್ಮನೆಂದು ಆಡಿದ ಕರ್ಣದಿ ನೋಡೆ1ತೋರುವುದೆಲ್ಲವು ನೀನೆ ಎಂದು ತಿಳುಹಿದ ಎನ್ನನು ನೋಡೆದಾರಾಸುತ ಸಹೋದರರೆಂಬರ ದಾರಿಯ ಬಿಡಿಸಿದ ನೋಡೆಮೂರು ಗುಣಗಳ ಮಂದಮತಿಗಳ ಮುಂದುಗೆಡೆಸಿದ ನೋಡೆಕಾರಣಕಾರ್ಯವ ಕಳೆದ ಅವಿದ್ಯದ ಕಷ್ಟವ ಕಳೆದ ನೋಡೆ2ಷಟ್ಚಕ್ರಂಗಳ ದಾಟಿಸಿ ಎನ್ನುನು ಶ್ರೇಷ್ಠನ ಮಾಡಿದ ನೋಡೆಅಡರಿಸಿ ಮೇಲಕೆ ಸಹಸ್ರಾರದಿ ಆನಂದಿಸಿದನು ನೋಡೆಕಿಡಿಯುಗುಳುವ ಕೋಟ್ಯಾದಿತ್ಯರ ಬೆಳಕನು ತೋರಿದ ನೋಡೆಮೃಡಚಿದಾನಂದ ಸದ್ಗುರು ಬ್ರಹ್ಮದಿ ಮುಕ್ತನು ಮಾಡಿದ ನೋಡೆ3
--------------
ಚಿದಾನಂದ ಅವಧೂತರು
ಶ್ರೀನಿವಾಸನೆ ಏಳು ಶ್ರೀನಿಕೇತನ ಏಳುಗಾನಲೋಲನೆ ಏಳು ಸಾನುರಾಗದಲಿಏಳಯ್ಯ ಬೆಳಗಾಯಿತು ಪನಂಬಿದೆ ತಂದೆ ಮುದ್ದುಮೋಹನ ವಿಠ್ಠಲ ಏಳುಸುಂದರ ಶ್ರೀ ಉರುಗಾದ್ರಿವಾಸ ವಿಠ್ಠಲ ಏಳುಇಂದುಸಿರಿಉರುಗಾದ್ರಿವಾಸ ವಿಠ್ಠಲ ಏಳುಇಂದಿರಾಪತಿತಂದೆ ವೆಂಕಟೇಶ ವಿಠ್ಠಲನೆ1ಆನಂದಮಯಅಂತರಾತ್ಮ ವಿಠ್ಠಲ ಏಳುನವನೀತಧರ ತಾಂಡವ ಕೃಷ್ಣ ವಿಠ್ಠಲ ಏಳುಜಗವ ಮೋಹಿಪಜಯಾಪತಿವಿಠ್ಠಲ ಏಳುಸಮರ್ಯಾರೋ ನಿನಗಿನ್ನು ಶಾಂತೀಶ ವಿಠ್ಠಲ ಏಳಯ್ಯ 2ಗಂಗೆಯ ಪಡೆದ ಗಜವರದ ವಿಠ್ಠಲ ಏಳುಮಂಗಳ ಮಹಿಮ ಶೇಷಶಯನ ವಿಠ್ಠಲ ಏಳುಗರುಡನೇರುತ ಪೊರೆದಹರಿವಿಠ್ಠಲ ನೀ ಏಳುನಿರುತಪೊರೆ ಎಮ್ಮ ಧೃವವರದ ವಿಠ್ಠಲ ಏಳಯ್ಯ 3ಪರಿಪಾಲಿಪ ಗುರುವಾಸುದೇವ ವಿಠ್ಠಲ ಏಳುವರಪಾಲಿಪ ವರದ ಲಕ್ಷ್ಮೀಶ ವಿಠ್ಠಲ ಏಳುಪದ್ಮನಾಭಪ್ರದ್ಯುಮ್ನ ವಿಠ್ಠಲ ಏಳುಮುದ್ದುಮಖದ ವರದ ವೆಂಕಟೇಶ ವಿಠ್ಠಲನೇ 4ಸಜ್ಜನರ ಪ್ರಿಯ ಶ್ರೀ ಸುಙ್ಞÕನ ವಿಠ್ಠಲ ಏಳುಶಾಮಸುಂದರ ಕೃಷ್ಣ ಶ್ರೀನಾಥ ವಿಠ್ಠಲ ಏಳುಭಯಹಾರಿಭಾರತೀಶವಿಠ್ಠಲ ನೀ ಏಳುಪರಿಸರನೊಡೆಯ ಶ್ರೀ ವರಹ ವಿಠ್ಠಲನೆ 5ಜ್ಞಾನನಿಧಿಆನಂದಮಯವಿಠ್ಠಲ ನೀ ಏಳುಸಜ್ಜನ ಪ್ರಿಯ ಶ್ರೀಪ್ರಾಜÕ ವಿಠ್ಠಲ ಏಳುಜಗನ್ಮೋಹನ ಜಗದ್ಭರಿತ ವಿಠ್ಠಲ ಏಳುವಿಶ್ವಮೂರುತಿ ವಿಜ್ಞಾನಮಯ ವಿಠ್ಠಲನೇ 6ವಿಷ್ಣುಮೂರುತಿ ಕ್ರಷ್ಣದ್ವೈಪಾಯನ ವಿಠ್ಠಲ ಏಳುಅಕ್ಷರೇಢ್ಯನೆ ಲಕ್ಷ್ಮೀಶ ವಿಠ್ಠಲ ಏಳುಕಂಟಕಹಾರಿ ಶ್ರೀವೆಂಕಟೇಶ ವಿಠ್ಠಲ ಏಳುಸರಸೀಜಾಕ್ಷನೆ ಸಲಹೋ ಶ್ರೀರಮಣ ವಿಠ್ಠಲನೆ 7ದುರುಳರ ಮಡುಹಿದ ವರದ ವಿಠ್ಠಲ ಏಳುಕಂಜಾಕ್ಷ ಪನ್ನಗಶಯನ ವಿಠ್ಠಲ ಏಳುದಾರಿತೋರುವ ದಾಮೋದರ ವಿಠ್ಠಲ ನೀ ಏಳುಸರಸಿಜನಾಭನೆಪೊರೆಎನ್ನ ವಿಠ್ಠಲ8ಕಂಜಾಕ್ಷ ಕಮಲನಾಥ ವಿಠ್ಠಲ ಏಳುಮುರಮರ್ದನನೆ ಏಳು ಮುರಳೀಧರ ವಿಠ್ಠಲದಯದಿ ಪಾಲಿಪ ದಯಾನಿಧೆ ವಿಠ್ಠಲ ನೀ ಏಳುಅಚ್ಚುತಹರಿಕೃಷ್ಣ ಕ್ರೇತಜÕ ವಿಠ್ಠಲ9ಜ್ಞಾನಿಗಳರಸ ಆನಂದ ವಿಠ್ಠಲ ಏಳುಭಾಗವತಪ್ರಿಯ ಭಾರ್ಗವೀಶ ವಿಠ್ಠಲ ಏಳುಕರ್ತೃ ಶ್ರೀ ಪುರುಷೋತ್ತಮ ವಿಠ್ಠಲ ನೀ ಏಳುಮುರವೈರಿ ಮಧುರಾನಾಥ ವಿಠ್ಠಲನೆ 10ರಮೆಯರಸನೆ ರಮಾಧವ ವಿಠ್ಠಲ ನೀ ಏಳುಕರುಣಾಳುಹರಿಕಾರುಣ್ಯ ವಿಠ್ಠಲ ಏಳುಎದುರಿಲ್ಲ ನಿನಗೆ ಯದುಪತಿ ನೀ ಏಳುಉದ್ಧರಿಸೆನ್ನಉದ್ಧವವರದ ವಿಠ್ಠಲನೆ11ಗೋಪಿಕಾಲೋಲ ಗೋಪೀನಾಥ ವಿಠ್ಠಲ ಏಳುವೆಂಕಟೇಶ ವೈಕುಂಠಪತಿ ವಿಠ್ಠಲ ಏಳುಶ್ರೀನಿಕೇತನ ಶ್ರೀಕಾಂತ ವಿಠ್ಠಲ ಏಳುಧನ್ಯನಾದೆನೋ ದೇವ ಧನ್ವಂತ್ರಿವಿಠ್ಠಲ 12ಶ್ರೀಧರಪೊರೆವೇದವತೀಶ ವಿಠ್ಠಲ ಏಳುಸಾಧುಗಳರಸನೆ ಭಕ್ತವತ್ಸಲ ಏಳುಮೇಧಿನಿಯೊಳು ನಿನ್ನ ಪೋಲುವರ್ಯಾರಿಲ್ಲಸಾದರದಿಂ ಕೇಳೋ ನೀ ಎನ್ನಸೊಲ್ಲ 13ರನ್ನ ಮಂಟಪದೊಳಗೆ ಚಿನ್ನದ ತೊಟ್ಟಿಲೊಳುಕನ್ನೆಯರು ತೂಗಿ ಪಾಡಿದರೊ ಗೋವಿಂದಕರುಣಾಸಾಗರ ಕೃಷ್ಣ ಕಡು ನಿದ್ರೆ ಸಾಕೆಂದುಕಮಲಾಕ್ಷಿ ಸ್ತುತಿಸುವಳು ಕಮಲನಾಭವಿಠ್ಠಲಏಳಯ್ಯ ಬೆಳಗಾಯಿತು 14
--------------
ನಿಡಗುರುಕಿ ಜೀವೂಬಾಯಿ