ಒಟ್ಟು 1884 ಕಡೆಗಳಲ್ಲಿ , 108 ದಾಸರು , 1151 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ನಿನ್ನಯ ಬಾಲಕೃಷ್ಣನ ಚೇಷ್ಟೆಯ | ತಾಳಾಲಾರೆನು ನೀನು ಕರೆದು ಪೇಳದಿದ್ದರೆ ಬುದ್ಧಿಯ 1 ಮನೆಮನೆಗಳ ಪೊಕ್ಕು ಪೊಕ್ಕು ಪಾನ ಮಾಡುವ ಬಾಲನು | ಮಾನಿನೀಯರು ಕಂಡು ತಡೆದರೆ ಸ್ತನವ ಪಿಡಿದು ಮುದ್ದಿಪ 2 ಬೆಳಕು ಇಲ್ಲದ ಎಡೆಯಲ್ಲಿದ್ದರು ಹೊಳೆವನೇ ಸುರಧೀಪತಿ | ಉಳಿಯದಂತೆ ಕದ್ದು ಮೆದ್ದವ ಬಾಲನೆಂಬುದು ಉಚಿತವೆ 3 ಪರಿ ತನ್ನನೆಂದರೆ ಪರಮ ಹರುಷವ ಮಾಡುವ 4 ಮಣಿ ಏನು ಮಹಿಮೆಯ ಬಲ್ಲನೇ ರಘುತಿಲಕನೇ 5
--------------
ಅನ್ಯದಾಸರು
ಗೋಪಿ : ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು ಮಾಡುವೇಜಾಣ ಪ ಕೃಷ್ಣ : ನೀರೆ ಗೋಪಿಯೆ ನಿನ್ನ ದ್ವಾರದೊಳಿರುವೆ ತೋರದೆನ್ನನು ನೀನು ಭಾರಿ ಬಳಲಿರುವೆ ನೀರೆ 1 ಗೋಪಿ : ಹತ್ತಿರದಲ್ಲಿದ್ದು ನೀನು ಇತ್ತೆನಗೆ ತೋರದಂತೆ ನಿನ್ನನು ``ವೇಣು 2 ಕೃಷ್ಣ : ಅಕ್ಷಿಯೊಳಗೆ ನಿನ್ನ ಸಾಕ್ಷಿಯಾಗಿರುವೆ ಕುಕ್ಷಿ ತುಂಬಿರುನೆ | ನೀರೆ 3 ಗೋಪಿ : ಆರು ಬಾಗಿಲು ನೀಗಿ ಜೋರಗಂಡಿಯೊಳ್ ಪೋಗಿ ಮಾಡುವೆ ||ವೇಣು|| 4 ಕೃಷ್ಣ : ಮನುಮುನಿ ಜನರೆಲ್ಲಾ ವಿನಯದಿಂ ಪಿಡಿದು ಘನಸುಖ ಪಡುವರು ಮನದೊಳಗರಿದು ||ನೀರೆ|| 5 ಗೋಪಿ : ಆಗಮ ಸಂಚಿತ್ತ ಭೋಗ ಸಂಸಾರವನ್ನೆಲ್ಲಾ ಜರೆನಿಸಿದೆಲ್ಲಾ ||ವೇಣು || 6 ಕೃಷ್ಣ : ನಿಮಿಷ ಮಾತ್ರದಿ ಸುಖವ ಮನದೇಸ್ಮರಿಸಿ ಅಮಮ ಘನಾನಂದ ರಮಿಸು ಸ್ವಸುಖವಿ ||ನೀರೆ|| 7 ಗೋಪಿ : ಕಣ್ಣ ಸನ್ನೆಯ ಮಾಡಿ ಅನ್ಯರ್ಮನ್ಮನೆಗಳಲ್ಯೋಡಿ ಮಾತುಗಳಾಡುವೆ ||ವೇಣು || 8 ಕೃಷ್ಣ : ಧೊರೆಯಾಗಿರುವೆ ನಾನು ತಿರಿದುಣ್ಣಲರಿಯೆ ಅರಿವಿನಿಂದರಿಯೆ || ನೀರೆ|| 9 ಕಂತು ಪಿತನೆ ನಿನ್ನ ಭ್ರಾಂತಿ ಹತ್ತಿತು ಎನಗೆ ಗುರುವರ ||ವೇಣು || 10
--------------
ಶಾಂತಿಬಾಯಿ
ಗೋಪಿ ನಿನ್ನ ಮಗನು ಬಂದು ತಾಪಿಸಿದ ಮಕ್ಕಳನ್ನುಪ. ಕೋಪಿಸಬ್ಯಾಡವೆ ನೀನು ಭೂಪತಿಗ (ಳಿಗ್ಯೇಳೆ) ನುಅ. ಪ. ಕಂಡವರ ಮನೆಯೊಳಿವನು ಪುಂಡುತನವ ಮಾಡಿದದುಮಕ್ಕಳೆಂಬುವನು ದಿಂಡೆತನವ ಮಾಡಿದನು 1 ಹಿತ್ತಿಲ ಬಾಗಿಲೊಳ್ಬಂದು ಒತ್ತಿದ ಹಾಲನ್ನೆ ತಂದವೃತ್ತಪಯೋಧರಿಯರ ಮುತ್ತಿನ ಹಾರವ ಕಳೆದ 2 ಬೆಣ್ಣೆಗಳ ಕದ್ದು ತಿಂದು ಮಣ್ಣಿನ ಭಾಂಡವನೊಡೆದಹೆಣ್ಣುಗಳ ಬೆನ್ನ ಬಡಿದ ಸಣ್ಣ ಮೊಲೆಗಳ ಪಿಡಿದ 3 ನಿದ್ರೆ ಹೊತ್ತಿನೊಳು ಬಂದು ಕ್ಷುದ್ರತನವ ಮಾಡುತ್ತನಿಂದಸದ್ದು ಮಾಡದಿರೆಯೆಂದ ಮುದ್ದು ಕೊಡುವೆ ನಿನಗೊಂದ 4 ಸಿರಿ ಹಯವದನ ಬಂದ 5
--------------
ವಾದಿರಾಜ
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1 ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2 ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ 3 ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4 ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5 ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು 6 ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
--------------
ವಿಜಯದಾಸ
ಗೋವಿಂದ ಗೋವಿಂದ ಗೋಕುಲಾನಂದ ದೇವೇಶ್ವರಾನಂದ ಪಾದಾರವಿಂದ ಪ ಲಾವಣ್ಯ ಪರಿಪೂರ್ಣ ಸಚ್ಚಿದಾನಂದ ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ ನೀನೆನ್ನ ತಾಯ್ತಂದೆ ಲೋಕಾಭಿರಾಮಾ ನೀನೆನ್ನ ಕರುಣದಲಿ ಕಾಯೋ ಶ್ರೀರಾಮ 1 ಮಂಗಳಾಂಗನು ನೀನು ಕಮಲಾಯತಾಕ್ಷ ಮಂಗ ಮೂಢನು ನಾನು ಸಿರಿದೇವಿ ಪಕ್ಷ ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋವಿಂದ ನಮೋ ಗೋವಿಂದ ಪ ಮಂದ ಮನವೇ ನೀನು ಅಂದು ನೋಡೆಲೊ ಒಮ್ಮೆ ಅ.ಪ ತಂದೆ ಗೋವಿಂದ ಎನ್ನೆಲೊ ಮನವೆ ಬಂದ ಬಂಧನವೆಲ್ಲವ ಕಳೆವ ಕುಂದುನಿಂದೆಗಳಿಲ್ಲದೆ ಕಾಯ್ವ ಹಿಂದೆ ಮುಂದೆ ತಾನೆ ನಿಂತಿರುವ ಆಹ ಸಿಂಧುಶಯನ ತನ್ನನ್ಹೊಂದಿ ಭಜಿಪರನ್ನು ಕಂದರೆನ್ನುತಾನಂದದಿ ಸಲಹುವ 1 ಎಲ್ಲಿ ಕರೆದರಲ್ಲೆಬರುವ ಸೊಲ್ಲು ಸೊಲ್ಲಿನೊಳಗೇ ನಿಂತಿರುವ ಅಲ್ಲಿಇಲ್ಲಿ ಎಂದೆಂಬ ಹೇವ ಇಲ್ಲ ಮಲ್ಲಮರ್ದನ (ಉಂ) ಚಲುವ ಆಹ ಪುಲ್ಲನಯನ ತನ್ನ ನಿಲ್ಲದೆ ಭಜಿಪರ ಲಲ್ಲೆನಿಂತುಕೊಂಡುಲ್ಲಾಸದಿ ಕಾಯುವ 2 ಇವರವರೆಂಬುವ ಭಾವ ದೇವ ಮಾವ ಮರ್ದನಗಿಲ್ಲೆಲವೋ ದಿವ್ಯಭಾವ ಭಕ್ತರ ಪಿಡಿದು ಕರೆವ ಕಾವ ಜೀವದಿ ಬಿಡಿದನುದಿನವು ಆಹ ಜಾವಜಾವಕೆ ಶ್ರೀರಾಮನ ಚರಣವ ಭಾವಿಸಿ ಭಜಿಪರ ಭಾವದೋಳ್ ಬೆರೆತಿರುವ 3
--------------
ರಾಮದಾಸರು
ಗೋವಿಂದ ವಿಠಲ ನಿನ್ನ ವಂದಿಸುವೆ ಸ್ವಾಮಿನೀ ಒಲಿದು ರಕ್ಷಿಸುವುದು ಜೀವಿ ಇವ ಬಹುಕಾಲಸಾವ ಸಾವ ನಿನ್ನ ಸೇವೆಯೊಳಗೆ ಇಟ್ಟು ಕಾವುದು ನಿರುತ ಪ. ಆವ ಈ ಯುಗದಲ್ಲಿ ನಿನ್ನ ವಿಷಯರಾಗಿಈವ ಸುಜನರು ಸ್ವಲ್ಪರು ತಾ ವ್ಯಾಪಿಸಿ ಇಹರುಅಸುರರೆ ಬಹುಳಾಗಿ ಆವದವಸ್ಥೆಗಳಲಿನೀ ವರವನು ಕಲಿಗೆ ಇತ್ತ ಕಾರಣ ಉಪಜೀವರ ವ್ಯಾಪಾರಈ ವಿಧದಲಿ ತಳೆದು ನಿನ್ನ ಹುಡುಕುತಲಿನ್ನುಜೀವಿ ಸಾತ್ವಿಕನು ಮೊರೆಯಿಡಲು ಬಿನ್ನಯಿಸಿದೆನೊ 1 ಏನು ಸಾಧನವನು ಖೂಳವನು ಕಂಡಿನ್ನುನೀನು ವಂದಿಸಿವೆಂದರೆ ಜ್ಞಾನಭಕುತಿ ಉಳ್ಳಜ್ಞಾನಿಗಳಲಿವಗೆ ನಾನು ಕಂಡೆನು ಭಕುತಿಯಕ್ಷೋಣಿಯಲಿ ಭಕುತಿ ನಿನ್ನಲಿ ಪುಟ್ಟಲಿಬಹುದುಜ್ಞಾನಿಗಳ ದುರ್ಲಭ ನೀನು ಒಲಿವುವ ಅವಗೆನಾನವರಲಿ ಭಕುತೀವೆ ನಾನಾಸಾಧನ ಫಲವಿದೆ ನೋಡಾ 2 ಪ್ರಾರ್ಥಿಸುವೆ ನಾ ನಿನ್ನ ಪ್ರೇರಣೆಯ ಅನುಸಾರಕೀರ್ತಿ ನಿನ್ನದು ಜಗದೊಳು ಪಾತ್ರ ಇವನೆಂದುನಿನ್ನ ಚಿತ್ತದಲಿ ಇತ್ತೆ ಸಾರ್ಥಕನ ಮಾಡು ಚೆಂ ಸ್ವಾ ?ಕೀರ್ತನೆಯ ಮಾಡಿಸು ನಿನ್ನ ಪರವಾಗಿ ನಿಜಸ್ಫೂರ್ತಿಸಖರಂಗ ಗೋಪಾಲವಿಠಲ ಶ್ರುತಿಶಾಸ್ತ್ರಾರ್ಥವನುಸಾರ ಪ್ರಾಪ್ತಿ ನೀನಾಗಿವಗೆ3
--------------
ಗೋಪಾಲದಾಸರು
ಘನನಂದನ ರಾಮಚಂದ್ರ ಪ ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು ಕಂದನಿಗಾನಂದ ಬೀರಿ ಅಂದವಾದ ಪಾದತೋರು1 ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2 ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3
--------------
ಶಾಮಶರ್ಮರು
ಚರಣಕಮಲವನು ತೋರೋ ಪ ಮನವೆಂಬ ಮನೆಯನು ನಿರ್ಮಲಗೊಳಿಸು ತನುಮನಧನದಾಶೆಯ ನೀ ಬಿಡಿಸೊ 1 ಆರು ಮಂದಿಯು ಯನ್ನ ಗಾರುಮಾಡುವರು ಪಾರಗಾಣಿಸು ಬೇಗ ಶ್ರೀ ರಾಮದೇವ 2 ದಶರxಸುತ ನೀನು ಶಶಿಮುಖಕಾಂತನು ಶಶಿಧರನುತನೀ ಅಪಮಸಾಹಸನೊ 3 ಮೂರಾವತ್ಸೇಗಳಲ್ಯು ದೂರಾಪೋಗದೆ ನೀ ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4 ಸಿರಿವತ್ಸಾಂಕಿತ ನೀನು ತರಣಿಸುತನ ಸರವ ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5
--------------
ಸಿರಿವತ್ಸಾಂಕಿತರು
ಚರಣಕೆರಗುವೆ ಕೃಷ್ಣಾ ಪರಿಹರಿಸು ಜನ್ಮವನುಶರಣಜನಬಂಧು ನೀನು ಕೃಷ್ಣಾ ಪಕರುಣನಿಧಿಯಡಿಗೊಮ್ಮೆ ಶಿರವೆರಗಿದವರು ಭವಶರಧಿಯೊಳು ಬೀಳರೆಂದೂ ಕೃಷ್ಣಾ ಅ.ಪಹಲವು ದೇಹಂಗಳಲಿ ಮಾಡಿದಘ ವೃಂದಗಳುಬಲವಂದಡವಕೆ ಲಯವು ಕೃಷ್ಣಾಜಲಜಸಂಭವ ತೊಡಗಿ ಶಲಭಾಂಕದೊಳಗೊಂದನುಳಿಯದೇ ಪ್ರಾಣಿಗಳಲಿ ಕೃಷ್ಣಾತೊಳಲಿ ಬಂದೆನು ನೀನು ನಿರ್ಮಿಸಿದ ಪರಿಯಲ್ಲಿತೊಲಗಿಸಿನ್ನೀ ಭವವನು ಕೃಷ್ಣಾನಳಿನಾಕ್ಷ ನಿನ್ನ ಪ್ರಾದಕ್ಷಿಣವು ಬಳಿಕಾಯ್ತುನಿಲಿಸೆನ್ನ ನಿನ್ನಡಿಯೊಳು ಕೃಷ್ಣಾ 1ಜನನ ಜನನಗಳಲ್ಲಿ ಕಿವಿಮುಚ್ಚಿ ತಲೆವಾಗಿನಿನಗೆರಗಿದವನಾದೆನು ಕೃಷ್ಣಾಗಣನೆುಲ್ಲದ ಜನ್ಮಗಳಲಿನಿತು ನಮಿಸಿದರೆಗಣನೆಗೊಳದಿಪ್ಪುದೇನು ಕೃಷ್ಣಾಅಣು ಮಾತ್ರದವನಾಗಿ ಘನತರದವಿದ್ಯೆಯಲಿಮನಮುಳುಗಿ ಬಹು ನೊಂದೆನೋ ಕೃಷ್ಣಾಯೆಣಿಸದಪರಾಧ ಕೋಟಿಗಳ ಭವ ಭೀತನನುಅನುಪಮನೆ ಕೊಡು ಗತಿಯನು ಕೃಷ್ಣಾ 2ಮರೆಯೊಕ್ಕವರ ಕಾಯ್ವ ಬಿರಿದು ನಿನ್ನದು ದೇವಮರೆಯೊಕ್ಕೆನೆಂದೆನೀಗ ಕೃಷ್ಣಾಮರಳಿ ನುಡಿವರೆ ಗುಣಗಳಡಿಮೆಟ್ಟುತಿವೆ ಬೇಗಸ್ಮರಣೆದೊರಕೊಳ್ಳದಾಗ ಕೃಷ್ಣಾಸೆರೆಯವನ ಬಂಧುಗಳು ಬಿಡಿಸುವರು ಕಂಡಾಗಸೆರೆಯವನಿಗುಂಟೆ ಯೋಗ ಕೃಷ್ಣಾತಿರುಪತಿವಿಹಾರಿ ದುರಿತಾರಿ ವೆಂಕಟರಮಣಕರವಿಡಿಯೆ ಸದ್ಗತಿ ಸರಾಗ ಕೃಷ್ಣಾ 3ಓಂ ವಿದುರಾಕ್ರೂರಾಯ ನಮಃ
--------------
ತಿಮ್ಮಪ್ಪದಾಸರು
ಚರಣವದೋರಿ ಸಲಹೋ ಮುರಾರಿ | ಧರಿಯೊಳು ಸಾರಿದವರ ಸಹಕಾರಿ ಪ ಸುರಧೇನು ನೀನು | ಕರೆದುಂಬೆ ನಾನು | ಸುರತರು ನೀನು | ಆಶ್ರಯಿಸುವೆ ನಾನು 1 ಸುರಮಣಿ ನೀನು | ಅರ್ಥಾರ್ಥಿ ನಾನು | ದೊರೆಯನ್ನ ನೀನು | ಸುಖಿಸುವೆ ನಾನು 2 ಗುರುಮಹಿಪತಿ ಪ್ರಭು | ಪರದೈವ ನೀನು |
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಿಯ ಪೇಳುವೆನು ಚರಿಯ ಪೇಳುವೆವು ಪ. ಕೃಷ್ಣ ಬಂದೆಮ್ಮಾಲಯದೊಳು ಲೂಟಿಗೈದಿಪನೆ ಅ.ಪ. ಗುಲ್ಲು ಮಾಡದೆ ಘುಲ್ಲ ಲೋಚನ ಮೆಲ್ಲಡಿ ಇಡುತ ಬಂದೂ ಗಲ್ಲಕೆ ಮುತ್ತು ಕೊಟ್ಟು ಎಮ್ಮಾ ಗಲ್ಲ ಪಿಡಿಯುವನೆ ಶ್ರೀಕೃಷ್ಣ ಗುಲ್ಲು ಮಾಡುವನೆ ಯಶೋದೆ 1 ನೆಲುವಿಲಿದ್ದ ಬೆಣ್ಣೆ ಕದ್ದ ಚೆಲುವ ಕೃಷ್ಣನೆ ದೇವಾ ಛಲದಿ ಪಿಡಿಯಾಪೋದರೆಮ್ಮಾ ಅಣಕ ಮಾಡುತ್ತಾ ಮುರಾರಿ ಪರಾರಿಯಾದನೇ ಯಶೋದೆ 2 ಹಿರಿಯಕಾಲದ ಸಾಲಿಗ್ರಾಮ ಕರಿಯ ಕಲ್ಲೆಂದು ಶ್ರೀ ಕೃಷ್ಣ ಭರದಿ ಬಾಯೊಳ ನುಂಗಿ ಜಗಕೆ ತಾನ್ಹಿರಿಯನೆಂಬುವನೆ ಯಶೋದೆ ಹಿರಿಯನೆಂಬುವನೆ 3 ಗೊಲ್ಲಸತಿಯೇರೊಡನೆ ಪೋಗಿ ಮೆಲ್ಲ ಮೆಲ್ಲನೆ ಶ್ರೀಕೃಷ್ಣ ಚೆಲ್ಲಿಮೊಸರ ಗಡಿಗೆಯೊಡೆದು ಸಲ್ಲಾಪತೋರೆಂಬುವನೆ ಯಶೋದೆ ಸರಸತೋರೆಂಬುವನೆ 4 ಸಿರಿರಮಣನ ಕರೆದು ನೀನು ಬರೆಯ ಬೇಕಮ್ಮಾ ಬುದ್ಧಿ ಥರವೆಯಮ್ಮಾ ಕೂಡಿ ತರಳಾ ಸರಸವಾಡುವುದು ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಚರ್ಯಗಳಿಂದನಾ ಗ್ರಹಬಾಧನೆಯು ಎಲ್ಲಿನೋಡು ಪ ಗುರುಕರುಣಾಪೂರ್ಣರಾಗಿರುತ ನೀನಿರುತದಲಿ ಪರಮ ಪ್ರೀತಿ ನಿಷ್ಟ ಗರಿಷ್ಟರಾಗಿ ಪರಮ ಹರುಷದಿ ಇರುವ ಭಾವಜ್ಞರನ ಪೊರೆವ ಭಾವಗವೇ ಗ್ರಹಗಳಾಗಿ 1 ಗ್ರಹವೇ ನಿಮ್ಮನುಗ್ರಹವು ಇಹಪರಕ್ಕೆರಡಕ್ಕೂ ಸಹಾಜವಾಗಿ ತೋರುವವು ಶಬ್ಧಮಾತ್ರ ಮಹಾದೇವ ನಿಮ್ಮ ಕರುಣಮಹಿಮೆಯನ್ನು ಈ ಪರಿ ಮಹಿಯೊಳಗೆ ಚರಿಸುವಂಥಾ 2 ಆವನಾರನ ಗತಿಯು ಆವನಾರನ ರೀತಿಯು ಆವನಾರನ ಸ್ಥಿತಿಯು ಅರಿತು ಇರುವಾ ಭಾವ ಭಾವಗಳಿಂದ ಫಣಿಯ ಲಿಖಿತಗಳಂತೆ ಯಾವ ಕಾಲ-----ಇರುವಾ 3 ಸೂತ್ರಧಾರನು ನೀನು ಸಕಲವನು ಇನ್ನು ಈ ಗಾತ್ರಗಳಿಗೆಲ್ಲ ಕಾರಣ ಕರ್ತನಾಗಿ ಮಾತ್ರದಲಿ ಪ್ರಾಣಿಗಳನ್ಯತಾಥ್ಯ------- ಪಾತ್ರ ನೀನಲ್ಲವೇನೈ 4 ದೂರು-----ತ್ರವೆ ಅವರಿಗಾಧಾರ ನೀನಾಗಿ --------------------------- `ಹೊನ್ನವಿಠ್ಠಲ' ದನುಜಮರ್ದನದೇವ --------------------- 5
--------------
ಹೆನ್ನೆರಂಗದಾಸರು
ಚಿಂತೆ ಮಾಡುವುದ್ಯಾಕೆ ಮನವೆ ನೀನು ಕರ್ಮ ಎಂದಿಗಾದರೂ ಬಿಡದು ಪ ಮಗÀನಾರು ನೀನಾರು ಪೇಳೊ ಸಿದ್ಧ ನಿಗಮಾರ್ಥಗಳಿಂದ ಸಜ್ಜನರ ಕೇಳೊ ತಗಿದು ಕಳಿ ಶೋಕದ ಗೋಳು ನಿತ್ಯ ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ 1 ಸಾಹನಶಕ್ತಿಯನ್ನು ಮಾಡೊ ಬರಿದೆ ಸ್ನೇಹ ಮಾಡಿದರಿಂದ ಜ್ಞಾನಕ್ಕೆ ಕೇಡು ತಾಹಾದು ಸ್ಥಿರವೆಂದು ನೋಡೊ ನೀನೂ ಮಾಹಪದವಿಗೆ ಬಂದೆ ಸುದೃಢವೆ ಬೇಡು2 ವಿರಕ್ತಿ ತೊಡು ತೊಡು ಬಿಡದೆ ಎಂದು ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ ವಾರವಾರಕೆ ಹೀಗೆ ಕೆಡದೇ ಶ್ರಿಂ ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ 3
--------------
ವಿಜಯದಾಸ
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ 1 ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ2 ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು3 ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ4 ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ 5 ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ 6 ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ7
--------------
ವಿಜಯದಾಸ