ಒಟ್ಟು 625 ಕಡೆಗಳಲ್ಲಿ , 85 ದಾಸರು , 543 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿಗಳು (ಶ್ರೀ ಬ್ರಹ್ಮಣ್ಯತೀರ್ಥರು) ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ಪ ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ಅ.ಪ ಮೂಢವiತಿಗಳು ಬಂದು ಬೇಡಿ ಕೊಳ್ಳಲು ಕರುಣ ನೀಡಿ ನಿನ್ನವರನ್ನು ಕಾಯ್ದರೀತಿ ಗಾಢದಿಂದಲಿ ಬಂದು ಮೂಢನಾದೆನ್ನನು ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ . . 1 ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ ಹರುಷದಿಂದಲಿ ಬಂದ ಭಕ್ತಜನರ ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ ಹರುಷಪಡಿಸುವ ಗುರುವು ನೀನೆಂದು ನಾ ಬಂದೆ 2 ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ಸರ್ವಜನರನು ಕಾವೆ ಸರ್ವಕಾಲದಲಿ 3 ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ನರಹರಿಯ ಪಾದವನು ಸ್ಮರಿಸಿನಿತ್ಯ ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ 4 ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು ಅಣುಗನೆಂದೆನಿಸೆನ್ನ ಸಲಹಬೇಕೊ ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ ಘನ ಚರಣ ಸ್ಮರಣೆಯ ನೀಯೊ ಗುರುವೆ 5
--------------
ಬಾಗೇಪಲ್ಲಿ ಶೇಷದಾಸರು
ಯಾತರವ ನಾನೈಯ ಇಂದಿರೇಶ ಪ ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ ವಾಸಪಗೆ ಸಮರೆಂದು ದೋಶಿಗಳ ಪೊಗಳೀ ಕಾಸುಗಳಿಸಲು ದಾಸ ವೇಷ ಹಾಕಿದ ಶೂರ ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1 ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2 ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ ದೋಷವಾದವ ಮಾಡಿ ವ್ಯಾಸದಾಸರ ದ್ರೋಹ ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3 ಮಾನವರ ಬಹುಮಾನ ಸಾನುರಾಗದಿ ಬಯಸಿ ನಾನು ಮೋದಿಸುವೆ ಹೀನ ಮತಗಳ ಹುಳುಕು ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು4 ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ ನಿತ್ಯ ನೇಮವುಯನಗೆ ಈತರದ ಹರಿದಾಸ ಮಾತರಿಶ್ವಗೆ ದೂರ 5 ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ ಸೊಲ್ಲು ಏನು ಬಿಡೆದಿಹೆನಲ್ಲ ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6 ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ ಯೆಂತು ಪೇಳಲಿ ಜೀಯ ಸಂತ ಜಯಮುನಿ ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7
--------------
ಕೃಷ್ಣವಿಠಲದಾಸರು
ಯಾತವರ ನಾನಲ್ಲವೊ ಹರಿ ಬರಿದೆ ಖ್ಯಾತಿಯನು ತಂದಿತ್ತಿಯ ಪ ಮಾತುಗಳು ನಾಲುಕಾಡಿ ಸಭೆಯೊಳಗೆ ಪ್ರೀತಿ ಬಡಿಸುವೆನೊ ನರರ ರೀತಿಯಲಿ ಶ್ರುತಿ ಸ್ಮøತಿಗಳ ಪಠಿಸಿ ಶ್ರೀ- ನಾಥ ನಿನ್ನ ತೋಷಿಸಿದೆನೆ 1 ಜಪಮಣಿಗಳನು ತಿರುಹಿಸಿ | ಲೋಕರನ ಕಪಟಗೊಳಿಸುವೆನಲ್ಲದೆ ತಪ ಮಾಡಿದೆನೆ ಮನದಲಿ | ನಿನ್ನಯ ಕೃಪೆಯು ಉದಿಸುವ ತೆರದಲಿ 2 ದಾಸ ವೇಷವ ಧರಿಸಿದೆ ಕನಕದಾ- ವಾಸನೆಯಿಂದಲ್ಲದೆ ವಾಸುದೇವವಿಠಲ ಶರಣ ತಾ ಲೇಶವರಿಯೆನು ಕರುಣಿಸೊ 3
--------------
ವ್ಯಾಸತತ್ವಜ್ಞದಾಸರು
ಯಾರೆ ಹುಡುಗಿ ನೀನು ಬಂದವಳಿಲ್ಲಿಯಾರೆ ಹುಡುಗಿ ನೀನು ಪ ಯಾರೆ ಹುಡುಗಿ ನೀನು ಮೂರು ಬಾರಿಲಿ ಬಂದಿನೀರಜಾಂಬಕ ಕರವೀರದವಳೆ ನೀ 1 ಮಾನಿನಿ ಮಣಿಯೆ 2 ಏನು ಪೇಳಿದನಮ್ಮಾ ಅಚ್ಯುತಪ್ರಾಣದೇವನು ನಿಮ್ಮಾಏನು ಸೂಚಿಸಲೆಂದು ನೀನು ಪೇಳಿದರೀಗನಾನು ಶೋಧಿಸುವೆನೆ ದೀನರುದ್ಧಾರಳೇ 3 ಇಂದುಮುಖಿಯೆ ನೀನು ಸುಮ್ಮನೆನಿಂದ ಕಾರಣವೇನುಇಂದಿರೇಶನ ಸಖಿ ಒಂದು ಮಾತಾಡದೆ ನಿನ-ಗೊಂದಿಸುವ ಕರದಿಂದ ಮಹಾಸಕ 4
--------------
ಇಂದಿರೇಶರು
ರಕ್ಷಿಸು ಮಹಮಾಯೆ ಕರುಣ ಕ- ಟಾಕ್ಷದಿಂದಲಿ ತಾಯೆ ಪ. ದಾಕ್ಷಾಯಿಣಿ ದೈತ್ಯಾಂತಕಿ ವರ ನಿಟಿ- ಲಾಕ್ಷನ ರಾಮಿ ನಿರೀಕ್ಷಿಸು ಜನನೀಅ.ಪ. ವಾಸವಮುಖವಿನುತೆ ರವಿಸಂ- ಕಾಶೆ ಸುಗುಣಯೂಥೇ ಭಾಸುರಮಣಿಗಣಭೂಷೆ ತ್ರಿಲೋಕಾ- ಧೀಶೆ ಭಕ್ತಜನಪೋಷೆ ಪರೇಶೆ1 ಗುಹಗಣಪರಮಾತೆ ದುರಿತಾ- ಪಹೆ ದುರ್ಜನ ಘಾತೆ ಬಹುಕಾಮಿತಪ್ರದೆ ಭಜಕಜನೋರ್ಜಿತೆ ಮಹಿತೆ ಯೋಗಿಹೃದ್ಗುಹನಿವಾಸಿನಿಯೆ2 ಶುಂಭಾಸುರಮಥಿನಿ ಸುರನಿಕು- ರುಂಬಾರ್ಚಿತೆ ಸುಮನಿ ರಂಭಾದಿಸುರನಿತಂಬಿನೀ ಜನಕ- ದಂಬಸೇವಿತಪದಾಂಬುಜೆ ಗಿರಿಜೆ3 ಅಷ್ಟಾಯುಧಪಾಣಿ ಸದಾಸಂ- ತುಷ್ಟೆ ಸರಸವಾಣಿ ಸೃಷ್ಟಿಲಯೋದಯಕಾರಿಣಿ ರುದ್ರನ ಪರಾಕು ಕಲ್ಯಾಣಿ4 ನೇತ್ರಾವತಿ ತಟದ ವಟಪುರ- ಕ್ಷೇತ್ರಮಂದಿರೆ ಶುಭದಾ ಸುತ್ರಾಣಿ ಲಕ್ಷ್ಮೀನಾರಾಯಣಿ ಸ- ರ್ವತ್ರ ಭರಿತೆ ಲೋಕತ್ರಯನಾಯಕಿ5
--------------
ತುಪಾಕಿ ವೆಂಕಟರಮಣಾಚಾರ್ಯ
ರಂಗನ್ಯಾಕೆ ಬಾರ ತಂಗಿ ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ. ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ. ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ 1 ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವÀ ಶ್ರೀಹರಿಯನು ಕರೆದುತಾರೆ ರಮಣಿ 2 ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ3
--------------
ವಾದಿರಾಜ
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ರಾಮ ರಸಾಯನವಾ ಬನ್ನಿರಯ್ಯ ಸೇವಿಸುವಾಪ ಅವನಿಲಿ ನಾನಾವಿಪತ್ತದ ಪಡುವಾ | ಭವರೋಗ ಮೂಲ ಛೇದಿಸುವಾ 1 ಭ್ರಮೆಗೊಂಡು ಮತ್ತೆ ಜನ್ಮಕ ಬಾರದಿರುವಾ | ಅಮರತ್ವವನು ಬ್ಯಾಗ ಪಡೆವಾ 2 ಗುರು ಮಹಿಪತೀ ಪ್ರಭು ದಾಸರು ಮೆರೆವಾ | ವರಸಂಗದಲಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು
ರಾಮಾರ್ಯ ನಿಮ್ಮಂಘ್ರಿ ಕಮಲಗಳಿಗೆ ಕರವ ಕರುಣದಿ ನೋಡು ವೆಂಕಟ ಪ. ಬಾಹ್ಯ ಕರ್ಮವ ತೊರೆದು ಸರ್ವಗತನಾದ ನರ ಸಿಂಹನ ಪ್ರೀತಿಗಳಿಸುವ ಸ್ನೇಹದಿ ಮಹ್ಯಮರರಿಗೆ ವಿದ್ಯೆ ವಸ್ತ್ರಾನ್ನ ಪ್ರತಿ ದಿವಸ ಸಹ್ಯವಿಲ್ಲದೆ ಕೊಟ್ಟು ಮೋದಿಸುವ ವೆಂಕಟ1 ವಾಸುದೇವ ವಿಠಲನಂಘ್ರಿಗಳ ರಾ ಜೀವ ಮಧುಕರ ಮಧ್ವ ಶಾಸ್ತ್ರಜ್ಞನೇ ಅವ ದೇಶದೊಳಿದ್ದರೇನ್ಮರೆಯದೆ ನಿಮ್ಮ ಸೇವ ಸೇವಕರೊಳಗೆ ಎಣಿಸುವುದು ವೆಂಕಟ2 ಬಾಲಕನ ಬಿನ್ನಪ ಲಾಲಿಸಿ ಕರುಣದಿ ಗೋ ಪಾಲ ವಿಠಲನ ದಾಸರ ಮಗನೆಂದು ಪಾಲಿಪುದು ಪರಮ ಕರುಣಾಳು ಜಗನ್ನಾಥ ವಿಠಲ ಗಾಳೆನಿಪ ಪವಮಾನ ಗಾಯನನೆ ವೆಂಕಟ 3
--------------
ಜಗನ್ನಾಥದಾಸರು
ರುದ್ರ ಮಹದೇವ ವೀರಭದ್ರ ಭದ್ರ ಮಾರ್ಗೋಪದೇಶಿ ಅದ್ರಿಕುವರಿ ವಲ್ಲಭ ಪ ಕ್ಷುದ್ರ ಖಳರ ಉಪದ್ರವ ಪರಿಹರಿಸಿ ಉದ್ರೇಕ ಮಾಡು ಸುಜ್ಞಾನ ಭಕ್ತಿ ವೈರಾಗ್ಯವ ಕದ್ರುಜಧಾರಿ ರೌದ್ರ ಮೂರುತಿಯೆ ಅ.ಪ ಪೊಂದಿಸು ಹರಿಭಕ್ತರ ಸಂದಣಿ | ತ್ರಿಶೂಲಪಾಣಿ ವಂದಿಪೆನು ಸುರಾಗ್ರಣಿ ಬಂದಿಹ ವ್ಯಾಧಿಯ ಕಳೆಯೊ ಕಂದÀರ್ಪಹರ ಕರುಣಾಕರ ಶಿವನೆ 1 ದಾತ ಸಂಭೂತ ಭೂತಗಣಾಧೀಶ ವಿಖ್ಯಾತ ವಾತನೊಡೆಯನ ಗುಣ ಸಂಪ್ರೀತಿಯಲಿ ಪೊಗಳುವಂತೆ ಆತುರಮನ ನೀಡೊ ಯಾತರವನಲ್ಲವೊ 2 ನಿಟಿಲಾಕ್ಷಾಂಧಕಾಸುರ ಸಂಹಾರಿ | ಜಟಮಕುಟಧಾರಿ ಸ್ಪಟಿಕ ಹಾರಾಲಂಕಾರಿ ವಟು ವಿಜಯ ರಾಮಚಂದ್ರವಿಠಲನ ಸಂ ಪುಟದೊಳು ನಟಿಪಂತೆ ಪಟುತರ ಮಾಡೋ 3
--------------
ವಿಜಯ ರಾಮಚಂದ್ರವಿಠಲ
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ ಹರಿಯರಾಣಿ ಭುಜಗವೇಣಿ ಪರಿಪರಿಯ ಕ್ಲೇಶಗಳಳಿವ ದುರಿತದೂರನ ಕರಪಿಡಿಯುತ ಬಾ ಪರಿ ವೈಭವದಿ 1 ವಂದಿಸುವೆ ನಿನ್ನ ಪದಕೆ ಅಂಬುಜಾಕ್ಷಿ ಕರುಣವ ಮಾಡಿ ಕಂಬು ಕಂಧರನೊಡಗೂಡುತ ಬಾ ಸಂಭ್ರಮ ಸೂಸುತಲಿ 2 ಗೆಜ್ಜೆ ಪೈಜನಿ ಪಾಡಗರುಳಿಯು ಸಜ್ಜಾಗಿಹ ಕಾಲುಂಗುರ ಧ್ವನಿಯ ಮೂರ್ಜಗದೊಡೆಯನ ಕರಪಿಡಿಯುತ ಬಾ ಸಜ್ಜನ ರಕ್ಷಕಳೆ 3 ನಡುವಿಗೆ ನವರತ್ನದ ಪಟ್ಟಿ ಬಿಡಿಮುತ್ತುಗಳುದುರುವ ಪೀತಾಂಬರ ಬಡನಡÀು ಬಳುಕುತ ಅಡಿ ಇಡು ಬಾ ನಿ- ನ್ನೊಡೆಯನ ಕೂಡುತಲಿ 4 ಕರದಲಿ ಕಂಕಣ ಹಾಸರ ಬಳೆಗಳು ಬೆರಳಲಿ ಉಂಗುರ ಥಳಥಳಿಸುತಲಿ ಗರುಡಗಮನ ನೊಡಗೂಡುತ ಬಾ ಬಾ ಗರುವವು ಮಾಡದಲೆ5 ವಂಕಿನಾಗಮುರುಗಿ ಕರದಲಿ ಬಿಂಕದಿ ಪಿಡಿದಿಹ ತಾವರೆ ಕುಸುಮವು ಪಂಕಜಾಕ್ಷನೊಡಗೂಡುತ ಮನ ಶಂಕೆಯು ಮಾಡದಲೆ6 ಕಠ್ಠಾಣಿಸರ ಪದಕಗಳ್ಹೊಳೆಯುತ ಕಟ್ಟಿದ ಉಂಗುರಡ್ಡಿಕಿ ಶೋಭಿಸುತ ಚಿತ್ತಜನಯ್ಯನನೊಡಗೂಡುತ ಬಾ ಮತ್ತೆ ಹರುಷದಲಿ 7 ಥಳಥಳಿಸುವ ಗಲ್ಲಕೆ ಅರಿಶಿನವು ನಲಿಯುವ ಮೂಗುತಿ ಮುಖುರ ಬುಲಾಕು ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ ಘಳಿಲನೆ ಬಾರಮ್ಮ 8 ಕುರುಡಿ ಬಾವಲಿ ಬುಗುಡಿ ಚಂದ್ರ ಮುರುವಿನ ಕಾಂತಿ ಮುಗುಳ್ನಗೆ ಮುಖವು ಉರುಗಾದ್ರೀಶನ ಕರಪಿಡಿಯುತ ಬಾ ಕರೆ ಕರೆ ಮಾಡದಲೆ 9 ಘಣೆಯಲಿ ಕುಂಕುಮ ಬೈತಲೆ ಬಟ್ಟು ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು ಎಳೆಬಾಳೆಯ ಸುಳಿಯಂದದಿ ಬಳುಕುತ ಘಳಿಲನೆ ಬಾರಮ್ಮ10 ಕೆಂಪಿನ ರಾಗುಟಿ ಜಡೆ ಬಂಗಾರವು ಸಂಪಿಗೆ ಮಲ್ಲಿಗೆ ಸರಗಳ ಮುಡಿದು ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ ಸಂತಸ ತೋರಮ್ಮ11 ಇಂದಿರೆ ಶ್ರೀರಮೆ ಭಾರ್ಗವಿಯೆ ನಂದತ್ರಯಾ ಸದಾಸುಶೀಲೆ ಸುಗಂಧಿ ಸುಂದರಿ ಮಂದಗ ಮನೆಯೆ ಚಂದದಿ ಬಾರಮ್ಮ 12 ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ ಛತ್ರ ಚಾಮರದರ್ಪಣ ಪಿಡಿದು ನೃತ್ಯಗಾಯನ ಮಾಡುತ ಕರೆವರು ಸತ್ವರ ಬಾರೆನುತ 13 ಶ್ರಮ ಪರಿಹರಿಸೆನುತಲಿ ಬೇಡುವೆನು ಮಮತೆಲಿ ಕರಗಳ ಮುಗಿಯುತ ಬೇಡಲು ಕಮಲನಾಭ ವಿಠ್ಠಲನೊಡನೆ ಶ್ರೀ- ಕಮಲೆಯು ಬರುತಿಹಳು14
--------------
ನಿಡಗುರುಕಿ ಜೀವೂಬಾಯಿ