ಒಟ್ಟು 1970 ಕಡೆಗಳಲ್ಲಿ , 112 ದಾಸರು , 1271 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜುೀಂದ್ರಾಜುೀಂದ್ರಾಸುಜನ ಭಜಕಮನ ಚಕೋರಚಂದ್ರಾ ಪಶೈವಾದ್ವೈತದಪ್ಪಯ್ಯ ದೀಕ್ಷಿತರ ಸದ್ದು ಅಡಗಿಸಿದ'ದ್ಯಾ - ಸಮುದ್ರು 1ಎಮ್ಮೆ ಬಸವನ ಹೆಮ್ಮೆ ಮುರಿದುಆ ಕುಂಭೇಶ್ವರನನು ಒಲಿಸಿದ ಧೀರಾ 2ವ್ಯಾಸ ಮುನಿಕುವರ 'ಷ್ಣುತೀರ್ಥ ನೀಕೃಷ್ರ್ಣಾರ್ಪಣವೆಂದರು ಶ್ರೀಮಠಕೆ 3ರಾಶಿ ರಾಶಿ ಗ್ರಂಥಗಳ 'ರಚಿಸಿದದೇಶಕಾರ್ಯ 'ದ್ವಾಂಸರ ಪ್ರೀಯಾ 4ಮೂಲ ವೇಣುಗೋಪಾಲಕೃಷ್ಣ ನಿನ್ನಮೂಲರಾಮನ ಸೇವೆಗೆ ಕಳಿಸಿದ 5ಸರ್ವಕಲೆಗಳಲಿ ಪರಿಪೂರ್ಣನು ನೀ ಸರ್ವಶಾಸ್ತ್ರ ಸಂಪನ್ನ ಪ್ರಸನ್ನ 6ಶೈವಾದ್ವೈತರ ಗೆದ್ದು ಓಡಿಸಿಕಾವೇರಿತಟ ಪಾವನ ಮಾಡಿದಿ 7ಮಧ್ವ-ಮತಾಬ್ಧಿಗೆ ಪೂರ್ಣ ಸುಚಂದ್ರಾವಾದಿತಿ'ುರಮಾರ್ತಂಡ ಪ್ರಚಂಡಾ 8ತಾಪತ್ರಯ ಪರಿಹರಿಸಿ ಕೈಪಿಡಿಯೋಭೂಪತಿ'ಠ್ಠಲನ ಭಕ್ತಿವರ್ಯಾ 9ಶ್ರೀ ರಾಘವೇಂದ್ರರ ಸ್ತುತಿಪರ ಕೀರ್ತನೆಗಳು
--------------
ಭೂಪತಿ ವಿಠಲರು
ಜೋ ಜೋ ಜೋ ಜಗತ್ರಾಣ ಸುತ್ರಾಣ ಜೋ ಜೋ ಜೋ ಶುಭವಾಣಿಯ ರಮಣ ಜೋ ಜೋ ವೈಷ್ಣವ ಸಿದ್ಧಾಂತಿ ಶರಣ ಮುಖ್ಯಪ್ರಾಣ ಕಲ್ಯಾಣ ಪ. ಲೋಕಾ ಲೋಕ ಪರ್ವತಗಳ ಮ್ಯಾಲೆ ಏಕಾಕಾರದಿ ಪಾದಗಳೂರಿ ವ್ಯಾಕರಣಗಳ ದಿವಾಕರನಿದಿರಕಲಿ ಸ್ವೀಕರಿಸಿದ ಕರುಣಾಕರ ಮೂರ್ತಿ ಶ್ರೀಪತಿ ಕೃಷ್ಣನ ಸೇವಾನುಸಾರದಿ 1 ಕೋಪಾಟೋಪವ ಸಮರತಿ ತೋರಿ ಪಾಡಿದುಶ್ಯಾಸನ ವಕ್ಷೋವಿಧಾರಿ ದ್ರೌಪಧಿ ಕುಚಕಂಜ ಕುಟ್ಮಲಧಾ 2 ಸ್ವಾನಂದ ಪರಿಪೂರ್ಣ ಕೃಷ್ಣನ ದಾಸ ಆನಂದತೀರ್ಥ ತೋರುವ ಮಂದಹಾಸ ಶ್ರೀನಿಧಿ ವೆಂಕಟೇಶನ ನಂಬಿದವರ ತಾನೆ ಬಂದೊದಗಿ ಪಾಲಿಪ ದೇವಪ್ರವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜೋ ಜೋ ಜೋ ಜೋ ಗೋಪಿಯ ಕಂದಾಜೋ ಜೋ ಜೋ ಜೋ ಸಚ್ಚಿದಾನಂದಾಜೋ ಜೋ ಜೋ ಜೋ ಮಲಗೋ ಮುಕುಂದಾಜೋ ಜೋ ಇಂದಿರಾರಮಣ ಗೋ'ಂದಾ ಜೋ ಜೋ ಪಅಣುರೇಣು ತೃಣಕಾಷ್ಠ ಪರಿಪೂರ್ಣ ಜೋ ಜೋಪ್ರಣತಕಾಮದ ಪದ್ಮಜಾರ್ಜಿತ ಜೋ ಜೋಜಾಣೆರುಕ್ಮಿಣಿಯರಸಿ ಶ್ರೀಕೃಷ್ಣ ಜೋ ಜೋಜಾನಕಿ ಜೀವನ ಶ್ರೀರಾಮ ಜೋ ಜೋ 1ಸ್ಟೃಸ್ಥಿತಿಲಯ ಕಾರಣ ಜೋ ಜೋಇಟ್ಟಿಗೆ ಮೇಲ್ನಿಂತ 'ಠ್ಠಲ ಜೋ ಜೋಬೆಟ್ಟದ ತಿಮ್ಮಪ್ಪ ಶೆಟ್ಟಿಯೆ ಜೋ ಜೋದಿಟ್ಟ ಶ್ರೀ ಉಡುಪಿಯ ಕೃಷ್ಣನೆ ಜೋ ಜೋ 2ಜೋ ಜೋ ಶ್ರೀರಾಮದೂತ ಹನುಮಂತಾಜೋ ಜೋ ಜೋ ಭೀಮ ದ್ರೌಪದಿಕಾಂತಾಜೋ ಜೋಯತಿವರ ಆನಂದತೀರ್ಥಾಜೋ ಜೋ ಮೂರಾವತಾರ 'ಖ್ಯಾತ ಜೋ ಜೋ 3ಜೋ ಜೋ ಮಧ್ವ ಸಂತಾನ ಮುನಿವೃಂದಾಜೋ ಜೋ ಪ್ರಲ್ಹಾದ ವ್ಯಾಸ ರಾಜೇಂದ್ರಾಜೋ ಜೋ ಗುರುಸಾರ್ವಭೌಮಯತೀಂದ್ರಾಭೂಪತಿ'ಠ್ಠಲನ ಮೋಹದಕಂದಾ ಜೋ ಜೋ 4
--------------
ಭೂಪತಿ ವಿಠಲರು
ಜೋ ಜೋ ಜೋ ಜೋ ಸಹ್ಲಾದರಾಜ ಜೋ ಜೋ ಜೋ ಜೋ ಪ್ರಹ್ಲಾದನನುಜ ಜೋ ಜೋ ಜೋ ಜೋ ಜಾತರೂಪ ಶಯ್ಯಜ ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ ಮನುಜ ಮೃಗಾರ್ಯರ ಸುತನೆನಿಸಿಸುತ ಅಣುಗ್ರಾಮ ಬ್ಯಾಗವಾಟದಿ ಜನಿಸುತ ಮುನಿ ವರದೇಂದ್ರತೀರ್ಥರ ಸೇವಿಸುತ ಅನಿಲ ಸುಶಾಸ್ತ್ರವನರಿತ ಸುದಾತ 1 ಗುರುಧೇನುಪಾಲ ದಾಸಾರ್ಯರ ಮಮತ ಪರಿಪೂರ್ಣದಿಂದ ನೀ ಪರಮ ಪುನೀತ ಸಿರಿಜಗನ್ನಾಥವಿಠಲಾಂಕಿತ ಶರಧಿಜ ಭಾಗದಿ ಪಡೆದ ಪ್ರಖ್ಯಾತ 2 ಸರಸಿಜ ತುಲಸಿ ಸುಮಾಲೆ ಶೋಭಿತ ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ ಹರಿಕಥಾಮೃತ ಗ್ರಂಥ ವಿರಚಿತ ಪುರುಹೂತರಾರ್ಯರ ಪ್ರೇಮದ ಪೋತ 3 ಗುಣನಿಧಿ ದ್ವಾಪರದಲ್ಲಿ ಪುಟ್ಟುತ ಫಣಿವರ ಕೇತನ ಮೊರೆ ಲಾಲಿಸುತ ದಿನಮಣಿ ಜಾತನ ದಿವ್ಯ ವರೂಥ ಮಾನಿತ ಮಾನವಿ ಕ್ಷೇತ್ರ ನಿವಾಸ4 ಶ್ರೀ ನಿಧಿ ಶಾಮಸುಂದರ ದಾಸ ದುರಿತ ವಿನಾಶ ಹೀನ ಮತಾಖ್ಯ ಪನ್ನಗಕುಲವೀಶ 5
--------------
ಶಾಮಸುಂದರ ವಿಠಲ
ಜೋ ಜೋ ಜೋ ರಂಗ ಜೋ ಮುದ್ದು ರಂಗ ಜೋ ಜೋ ಮಂಗಳ ಮೂರುತಿ ರಂಗ ಜೋ ಜೋ ಪ ದೇವ ಪಾರಿಜಾತ ಪುಷ್ಪವ ತಂದ ದೇವಕಿ ದೇವಿಯ ಮೋಹಕ ಕಂದ 1 ಮಾವ ಕಂಸನ ಶಿರವನು ತಂದ ಹಾವಿನ ಹಡೆÀ ಮೇಲಿ ಕುಣಿಯುತ್ತ ನಿಂದ 2 ಕಾವೇರಿ ತೀರದಿ ನೆಲೆಯಾಗಿ ನಿಂದ ದೇವ ರಂಗೇಶವಿಠಲ ಅತಿ ಮೋಹದಿಂದ 3
--------------
ರಂಗೇಶವಿಠಲದಾಸರು
ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ ಧ್ರುವ ದೇಹದಂಡನೆ ಮಾಡಿದರೇನು ಬಾಹ್ಯಾರಂಜನೆ ದೋರಿದರೇನು 1 ಶಬ್ದ ಜ್ಞಾನ ಸೂರಾಡಿದರೇನು ಲಭ್ದಾ ಲಬ್ಧೇಲಾಡಿದರೇನು 2 ರಿದ್ದಿ ಸಿದ್ದಿಯ ದೋರಿದರೇನು ಗೆದ್ದು ಮಂತ್ರಾಂತ್ರಸೋಲಿಪರೇನು 3 ಗೀರ್ವಾಣ ಆಡಿದರೇನು ಭೂತ ಭವಿಷ್ಯ ಹೇಳಾಡಿದರೇನು 4 ವ್ರತ ತಪ ತೀರ್ಥಾಶ್ರೈಸಿದರೇನು ಕೃತ ಕೋಟ್ಯಜ್ಞಾವ ಮಾಡಿದರೇನು 5 ಯೋಗಾಯೋಗಾಚರಿಸಿದರೇನು ಭೋಗ ತ್ಯಾಗ ಮಾಡಿದರೇನು6 ಏನು ಸಾಧನೆ ಮಾಡಿದಫಲವೇನು ಖೂನ ದೋರದೆ ಮಹಿಪತಿಗುರುತಾನು7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನವಂತರ ಸಂಗವಿರಲು ಸ್ನಾನವ್ಯಾತಕೆ ಪ ನಾನು ಎಂಬುದ ಬಿಟ್ಟ ಮೇಲೆ ನರಕವ್ಯಾತಕೆ ಅ.ಪ. ಮೃತ್ತಿಕೆ ಶೌಚ ಮಾಡದವನ ಆಚಾರವ್ಯಾತಕೆಸತ್ಯವಾದಿ ಆಗದವನ ನಂಬಿಗೆ ಯಾತಕೆ ||ಚಿತ್ತಶುದ್ಧಿ ಇಲ್ಲದವನ ವೈರಾಗ್ಯವ್ಯಾತಕೆಉತ್ತಮ ಹಿರಿಯರಿಲ್ಲದಂಥ ಸಭೆಯು ಯಾತಕೆ 1 ಪತಿಯ ಆಜ್ಞೆ ಮೀರಿದವಳ ವ್ರತಗಳ್ಯಾತಕೆಸತಿಗೆ ಅಳುಕಿ ನಡಿಯುವವನ ಸಾಹಸವ್ಯಾತಕೆ ||ಯತಿಯ ನಿಂದೆ ಮಾಡುವವನ ಮತಿಯು ಯಾತಕೆಅತಿ ವಿರೋಧ ಬಡಿಸುವಂಥ ಅಣ್ಣನ್ಯಾತಕೆ 2 ಹರಿಕಥೆಯ ಕೇಳದವನ ಕಿವಿಯು ಯಾತಕೆಮುರಹರನ ಮೂರ್ತಿಯ ನೋಡದಂಥ ಕಂಗಳ್ಯಾತಕೆ ||ಮರುತ ಮತವ ಪೊಂದದವನ ಬಾಳ್ವೆ ಯಾತಕೆಎರಡಾರು ನಾಮವಿಡದ ಶರೀರವೇತಕೆ3 ತಂದೆ ತಾಯಿ ಮಾತು ಕೇಳದ ಮಕ್ಕಳ್ಯಾತಕೆಬಂಧು ಬಳಗ ಉಳ್ಳದವನ ಭಾಗ್ಯವ್ಯಾತಕೆ ||ಬಂದ ಅತಿಥಿಗನ್ನವನಿಕ್ಕದ ಸದನವೇತಕೆ ಗೋ-ವಿಂದನಂಘ್ರಿ ಸ್ಮರಿಸದಂಥ ನಾಲಿಗ್ಯಾತಕೆ 4 ಮಕ್ಕಳನ್ನ ಮಾರಿಕೊಂಬ ತಂದೆಯಾತಕೆರೊಕ್ಕಕಾಗಿ ಬಡಿದಾಡುವ ತಮ್ಮನ್ಯಾತಕೆ ||ಕಕ್ಕುಲಾತಿ ಬಡುವ ಸಂನ್ಯಾಸವ್ಯಾತಕೆಠಕ್ಕು ಭಕುತಿ ಮಾಡುವಂಥ ದಾಸನ್ಯಾತಕೆ 5 ಆಗಿ ಬರದವರ ಅನ್ನ ಉಣ್ಣಲ್ಯಾತಕೆರೋಗವಾದ ನರಗೆ ಹೆಣ್ಣಿನ ಭೋಗವ್ಯಾತಕೆ ||ಯೋಗಿಯಾದ ಮೇಲೆ ದ್ರವ್ಯದ ಆಶೆಯಾತಕೆಭಾಗೀರಥಿಯ ಮಿಂದ ಮೇಲೆ ಪಾಪವ್ಯಾತಕೆ 6 ವೇದವನ್ನು ಓದದಂಥ ವಿಪ್ರನ್ಯಾತಕೆಕಾದೊ ರಣಕೆ ಅಂಜುವಂಥ ಕ್ಷತ್ರಿಯನ್ಯಾತಕೆ ||ವಾದವನ್ನು ಮಾಡುವಂಥ ಬಂಟನ್ಯಾತಕೆಸಾಧುಗಳಿಗೆ ಎರಗದವನ ಶಿರವಿದ್ಯಾತಕೆ 7 ಯಾತ್ರೆ ತೀರ್ಥ ಮಾಡದಂಥ ಪಾದವ್ಯಾತಕೆಪಾತ್ರರ ಸಂಗವಾಗದವನ ಜನ್ಮವ್ಯಾತಕೆ ||ಸ್ತೋತ್ರಕೆ ಮರುಳಾಗುವವಗೆ ಸಾಧನ್ಯಾತಕೆಪಾರ್ಥ ಸಖನ ತಿಳಿಯದವನ ಜ್ಞಾನವ್ಯಾತಕೆ 8 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆಅರಿತು ವಿದ್ಯ ಪೇಳದ ಉಪಾಧ್ಯನ್ಯಾತಕೆ ||ಹರುಷವನ್ನು ತಾಳದಂಥ ಜ್ಞಾನಿ ಯಾತಕೆಕರಣ ಶುದ್ಧಿ ಇಲ್ಲದವನ ಸ್ನೇಹವ್ಯಾತಕೆ 9 ಗಾಣ ಕಟ್ಟಿದೆತ್ತಿಗೆ ಗೆಜ್ಜೆಯಾತಕೆ ||ರಾಣಿ ಇಲ್ಲದವನು ಮಾಡುವ ಬದುಕು ಯಾತಕೆತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ 10 ಧರ್ಮವಿಲ್ಲದೆ ರಾಜ್ಯ ಆಳುವ ಪ್ರಭುವಿದ್ದ್ಯಾತಕೆಮರ್ಮವರಿತು ನಡೆಯದಂಥ ಹೆಣ್ಣು ಯಾತಕೆ ||ನಿರ್ಮಲಾಂಗನಾದ ಮೋಹನ ವಿಠಲನ ಗುಣಕರ್ಮ ಕ್ರಿಯಾ ತಿಳಿದ ಮ್ಯಾಲೆ ನಿರ್ಣಯವ್ಯಾತಕೆ 11
--------------
ಮೋಹನದಾಸರು
ಟೀಕಾಚಾರ್ಯರ ಸ್ತೋತ್ರ ದಯದಿ ಪಾಲಿಸೋ ಜಯತೀರಥ ರಾಯಾ | ಅಕ್ಷೋಭ್ಯರ ತನಯಾ ಪ ಅತ್ಯಂತ್ಹರುಷದಿ ಎತ್ತಾಗಿರುತಿರಲೂ ಶ್ರೀ |ಆನಂದ ತೀರಥರೂನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ |ಗುರುರಾಯರು ಪೇಳಿದತತ್ವ ಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ 1 ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀದೇಶ ದೇಶದೋಳ್ ಸೈನ್ಯವನೇ ಚರಿಸೀ | ಹಣವನ್ನೇ ಗಳಿಸೀವಾಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀಶ್ರೀಶನಾಜ್ಞೆಯೊಳಿವರನೆ ಕರೆತರಿಸೀ |ಶಿಖೆ ಸೂತ್ರವ ತೆಗೆಸೀ2 ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾಕಂಡು ಭೇಟಿಯಾ ಮಾಡುತಲೇ ನಿಂದೂ | ಧೋಂಡೋ ರಘುನಾಥನಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ - ಪ್ರಚಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ 3 ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |ನಾನಾ ಬಗೆಯಿಂದಲಿಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನುಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ 4 ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳುವಾಸಿಪನೆಂಬೋ ಬಲು ಪ್ರಖ್ಯಾತಾ |ನಿಜಗುಣ ಗಣನೀತಾಬ್ಯಾಸರದಲೆ ಕೊಂಡಾಡಿದರೆ ನಿತ್ಯಾ | ಇಷ್ಟಾರ್ಥವನಿತ್ತಾ 5
--------------
ವ್ಯಾಸವಿಠ್ಠಲರು
ಟೀಕಾರ್ಯ - ಟೀಕಾರ್ಯ ಪ ಕಾಕು ಮತಗಳ ವಿ | ವೇಕದಿ ಖಂಡನ ಅ.ಪ. ಎತ್ತಾಗಿರುತಿರೆ | ಶಾಸ್ತ್ರಬೋಧ ಶ್ರುತಉತ್ತಮ ಸಂಸ್ಕøತಿ | ಪೊತ್ತು ಜನಿಸಿದೆ 1 ಲಕ್ಷವಿತ್ತನೀ | ಲಕ್ಷಿಸದಲೆ ಮುನಿತ್ರ್ಯಕ್ಷನಂಶರಿಂ | ಭಿಕ್ಷುಕನಾದವ 2 ಮಧ್ವಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹುಶುದ್ಧ ಸುಧೆಯ ನೀ | ಮೆದ್ದು ಉಣಿಸಿದೆ 3 ಮೌನಿ ಮಧ್ವಕೃತ | ಮಾನ ಲಕ್ಷಣಕೆಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ 4 ಪದ್ಧತಿಯಿಂದಲಿ | ವಿದ್ಯಾರಣ್ಯರಸದ್ದಡಗಿಸಿದೆಯೊ | ಬುದ್ಧಿ ಚಾತುರ್ಯ 5 ಯೋಗಿ ವರೇಣ್ಯನೆಕಾಗಿನಿ ತೀರಗ ಭಾಗವತರ ಪ್ರಿಯ 6 ಮಾವಿನೋದಿ ಗುರು | ಗೋವಿಂದ ವಿಠಲನಭಾವ ಕುಸಮದಿಂ | ದೋವಿ ಪೂಜಿಸುವ 7
--------------
ಗುರುಗೋವಿಂದವಿಠಲರು
ಡೌಲಿನ ಡೌಲ್ಯಾಕೆ ಮಾಡ್ತೀ ಕಾಲತೀರದ ಮೇಲೇನೆಂದು ಹೇಳ್ತೀ ಪ ಹೊಯ್ಮಾಲಿತನದ್ಹೊಲೆಕೆಲಸ ಮಾಡಿಕೂತಿ ಸೈಮಾಡಿ ಬರಕೊಟ್ಟದೆಲ್ಲ ಮರೆತಿ ಅ.ಪ ಕಾಯವೆಂಬ ಹೊಲ ಕೌಲಿಗೆ ಹಿಡಿದಿ ಮಾಯ ಮರವೆಯೆಂಬ ಮುಳ್ಳು ಬೆಳೆಸಿದಿ ಹೇಯವಿಷಯವೆಂಬ ಸೆದೆಯ ಕೆಡವಿದಿ ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ ಕಾವಲಾದೆಲೆ ಮೂಳಿ ನಿನ್ನ ಎಡಬಲದಿ ವಾಯಿದೆ ಸಮೀಪಬಂತು ಮುಂದೇನು ಹಾದಿ 1 ಕ್ರೋಧ ಎಂದೆಂಬ ಅಲಬು ಕಿತ್ತದೆ ಭೇದ ಎಂದೆಂಬುವ ಜೇಕು ತೋಡದೆ ವಾದವೆಂಬ ಬೋರೆ ಜಡ್ಡು ಕಡಿಯದೆ ಖೇದಯೆಂದೆಂಬ ಕರಿಕೆದಡ್ಡ ನಳಿಯದೆ ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ ಕಾದುವ ಒಡೆಯನಿಗೀಡೇನು ಮಾಡ್ದೀ 2 ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ ನಿತ್ಯ ನಿರ್ಮಲತೆಯೆಂಬ ಬಾಂದು ಒಡೆಸಿದಿ ಸತ್ಯ ಸನ್ಮಾರ್ಗೆಂಬ ಸೀಮೆಯ ಮುರಿದಿ ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ ಕರ್ತು ಶ್ರೀರಾಮನ ಅರ್ತು ಭಜಿಸಿದೆ ಯಮಗ್ವ್ಯೆರ್ಥ ತುತ್ತಾದಿ3
--------------
ರಾಮದಾಸರು
ತಂಗಳೊಡೆಯರು ತಂಗಳೊಡೆಯರೇ ನಿಮ್ಮ | ಮಹಿಮೆಗೇನೆಂಬೆಅಂಗವನೆ ಮರೆಮಾಚಿ | ಮಂಗಳವಕೊಂಡಾ ಪ. ನಾಮ ನಿರ್ದೇಶ ಜನ | ಸ್ತೋಮಕಾಕರವೆಂದುನಾಮವನೆ ತೊರೆಯುತ್ತ | ಗೂಢಭಾವದಲೀ |ಭೀಮ ತೀರದಿ ನಿಂದು | ತಪವ ಗೈಯ್ಯುತಲಿರುವೆಸೀಮೆ ಮೀರಿದ ಮಹಿಮ | ದಯೆದೋರೊ ಎನಗೆ 1 ಬೋಧ | ಮೋದದಿಂ ತಿಳಿಸುತ್ತಸಾಧನವ ಗೈಸೆನಗೆ | ಹೇದಯಾ ಪೂರ್ಣ 2 ವೈರಾಗ್ಯ ಹರಿ ಭಕುತಿ | ವೀರಮೂರುತಿ ಎನಿಸಿಮಾರನ್ನ ನೀ ಗೆಲಿದು | ಮೋಕ್ಷಕಾಮೀಸಾರತಮನೂ ಗುರೂ | ಗೋವಿಂದ ವಿಠಲೆಂದುಬಾರಿಬಾರಿಗೆ ಸ್ಮರಿಸಿ ಆನಂದ ಗೊಳ್ವಾ 3
--------------
ಗುರುಗೋವಿಂದವಿಠಲರು
ತದಿಗೆಯ ದಿವಸ (ಶೇಷ ದೇವರನ್ನು ಕುರಿತು) ರಂಭೆ : ನಾರೀಮಣೀ ನೀ ಕೇಳೆ ಈತ- ನ್ಯಾರೆಂಬುದನೆನಗೆ ಪೇಳೆ ಕ್ರೂರತನದಿ ತಾ ತೋರುವನೀಗ ಮ- ಹೋರಗನೆನ್ನುತ ಕೋರಿಕೆ ಬರುವದು1 ಒಂದೆರಡು ಶಿರವಲ್ಲ ಬಹು ಹೊಂದಿಹವು ಸಟೆಯಲ್ಲ ಕಂಧರದಲಿ ಕಪ್ಪಂದದಿ ತೋರ್ಪವು ಚಂದಿರಮುಖಿ ಯಾರೆಂದೆನಗರುಹೆಲೆ 2 ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ- ಸಾಮಾನ್ಯನೆ ಕಾಣೆ ಭೂಮಿಯ ಪೊತ್ತ ನಿರಾಮಯನಾದ ಸುಧೀಮನಿವನು ಜಾಣೆ 1 ವಾಸುದೇವಗೆ ಈತ ಹಾಸಿಗೆಯವ ನಿ- ರ್ದೋಷನಿವನು ಜಾಣೆ ಸಾಸಿರಮುಖದ ವಿಲಾಸನಾಗಿಹ ಮಹಾ- ಶೇಷನಿವನು ಕಾಣೆ 2 ಅದರಿಂದಲಿ ಕೇಳ್ ತದಿಗೆಯ ದಿವಸದಿ ಮಧುಸೂದನನಿವನ ಅಧಿಕಾನಂದದಿ ಒದಗಿಸಿ ಬರುವನು ಇದೆಯಿಂದಿನ ಹದನ 3 ಎಂದಿನಂತೆ ಪುರಂದರವಂದ್ಯ ಮು ಕುಂದ ಸಾನಂದದಲಿ ಅಂದಣವೇರಿ ಗೋವಿಂದ ಬರುವನೊಲ- ವಿಂದತಿ ಚಂದದಲಿ4 ಕಂಟಕಗಳು ಎಲ್ಲುಂಟೆಂಬಂತೆ ನೃಪ- ಕಂಠೀರವಗೈದ ಘಂಟಾನಾದದಿ ಮಂಟಪದೊಳು ವೈ- ಕುಂಠನು ಮಂಡಿಸಿದಾ 5 ಕಾಂತಾಮಣಿ ಕೇಳಿಂತೀಪರಿ ಶ್ರೀ- ಕಾಂತ ನತತಂಡ ಸಂತವಿಸುತ ಮಹಾಂತಮಹಿಮನೇ- ಕಾಂತಸೇವೆಯಗೊಂಡ 6 * * * ಪರಶಿವನನ್ನು ಕುರಿತು ರಂಭೆ :ಯಾರಮ್ಮಾ ಮಹಾವೀರನಂತಿರುವನು ಯಾರಮ್ಮಾ ಇವನ್ಯಾವ ಶೂರ ಯಾವ ಊರಿಂದ ಬಂದ ಪ್ರವೀರ ಆಹಾ ಮಾರಜನಕನ ವಿಸ್ತಾರಪೂಜೆಯ ವೇಳ್ಯ ಧೀರನಂದದಿ ತಾ ವಿಚಾರ ಮಾಡುವನೀತ1 ಕರದಿ ತ್ರಿಶೂಲವ ಧರಿಸಿ ಮತ್ತೆ ವರ ಕೃಷ್ಣಾಜಿನವನುಕರಿಸಿ ಹರಿ ಚರಣಸನ್ನಿಧಿಗೆ ಸತ್ಕರಿಸಿ ಆಹಾ ಜರಿಯ ದುಕೂಲವ ನಿರಿದುಟ್ಟುಕೊಂಡು ವಿ- ಸ್ತರವಾದ ತೋಷದಿ ಮೆರದು ನಲಿವ ಕಾಣೆ 2 ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ. ಈತನೀಗ ಪೂರ್ವದೊಳಗೆ ಭೂತನಾಥ ಸೇವೆಯೊಲಿದ ಓತು ವಿಷ್ಣುಭಕ್ತಿಯಿಂದ ಪೂತನಾದ ಪುಣ್ಯಪುರುಷಅ.ಪ. ತೀರವಾಯ್ತು ವೇಣು ತಾ ವಿ- ಉದಾರತನದಿ ರಾಮೇಶ್ವರಕೆ ಸಾರಗ್ರಹಿತ ಮುಕ್ತಿ ಪಥವನು ಕರುಣದಿಂದ ತೋರಿಸುವನು ವಿಷ್ಣುವೆಂದೆನುತ ಗಿರಿಯ ಪದಾರವಿಂದಸೇವೆಗೈದು ನಲಿವ ಚಾರುಚರಿತ 1 ಬರುವ ಕಾಲದಲ್ಲಿ ಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತ ಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆ ಚರಿಸುವ ತ್ರಿಕಾಲಪ್ರಜ್ಞನು ಇವನ ಗುಣವ- ಮಹತ್‍ಕಾರಣೀಕ ಕರುಣವುಳ್ಳ ವಿಷ್ಣುಭಕ್ತ 2 ಪ್ರಧಾನಿಯೆಂದು ನಡೆಸಿಕೊಡುವ ತೋಷಪಟ್ಟು ಇರುವ ಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತ ನಾನಾ ಉಪದ್ರವಗಳ ಬಿಡಿಸುವ ಧನಿಯ ಆಜ್ಞೆ ಬಂದು ಪೇಳಿ ಜನರ ಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಂದೆ ವಿಜಯರಾಯ ವ್ಯಾಳಿಗೆಬಂದ್ಯೊ ವಿಜಯರಾಯ ||ಹಿಂದೇಸು ಜನ್ಮವು ಮುಂದೇಸು ಜನ್ಮವುಒಂದು ತಿಳಿಯದೆಂದಿಗು ಯೆನ್ನಯ ಪ ಸೂರ್ಯನ ಸುತನಂತೆ ಅಲ್ಲಿ ಮಹಶೌರ್ಯ ದೂತನಂತೆ ||ಕಾರ್ಯಾಕಾರ್ಯವು ತಿಳಿಯದೆ ನಿನ ಪರಿಚಾರ್ಯನ ಯೆಳೆತಿರೆ ಭಾರ್ಯಳು ಮೊರೆಯಿಡೆ 1 ಮೋದ ತೀರ್ಥರೆಂ-ದೊದರಿದಳೊದರಿದಳ್ ವಿಜಯರಾಯರೆಂದು 2 ಕರಗಳನೇ ಕಟ್ಟಿ ಯೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠಲನ ಪದವ ತೋರಿಧರಿಗೆ ತಂದುಬಿಟ್ಟೆ ಕರುಣಾಳುವೆ ಯೆನ್ನ 3
--------------
ಮೋಹನದಾಸರು
ತಾಪ ಬ್ರಹ್ಮೇತಿ ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ಪ ಸಿಂಧು ಕಾವೇರಿ ಕೃಷ್ಣವೇಣಿ ಗೋದೆ ತುಂಗೆ ನರ್ಮದಾ ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ1 ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ ವಿಕಳಮತಿಯಲಿಟ್ಟು ವರನಾದರೇನು ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ 2 ಜ್ಞಾನದಲ್ಲಿ ಪರರಿಗೆ ನ್ಯಾಯ ಪೇಳಿದರೇನು ಹಾನಿ ನೆನೆಸಿ ಕೀರ್ತಿಯ ಪಡೆದರೇನು ಧ್ಯಾನದಲಿ ಮಾನಸ ಪೂಜೆ ಮಾಡಿದರೇನು ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ 3 ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು ಪಾತ್ರಾಪಾತ್ರನರಿದು ನಡೆದರೇನು ಗಾತ್ರವನು ಬಳಲಸಿ ನೇಮ ಮಾಡಿದರೇನು ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ 4 ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು ಗಡಿಗಿ ಅಲ್ಲದೆ ಅದು ಪರುಶಾಗೋದೆ ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ 5
--------------
ವಿಜಯದಾಸ
ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ ನರಸಿಂಹಾರ್ಯ ಶೇವಿತಗೆ ಅ.ಪ ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ ಮಾರುತಾತ್ಮಜಗೆ 1 ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ ಛಂದದಲಿ ಪಡೆದಂಥ ಭೀಮಗೆ 2 ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ ಪಾತ್ರನಿಗೆ 3
--------------
ಕಾರ್ಪರ ನರಹರಿದಾಸರು