ಒಟ್ಟು 7149 ಕಡೆಗಳಲ್ಲಿ , 128 ದಾಸರು , 3568 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಪರಿಯಲಿ ವರ್ಣಿಸುವೆ ಕಳಾನಿಧಿಯಾನರಜನರು ಅರಿತವನ ಸ್ಮರಿಸಿರಯ್ಯಾ ಪಕಾಲುಗಳು ಹದಿನೆಂಟು ತೋಳುಗಳುಹತ್ತು ಕಣ್ಣಾಲಿಗಳು ಇಪ್ಪತ್ತ ಒಂದುಸಾಲಾಗಿ ರಂಜಿಸುವ ಶಿರಸಂಗಳೀರೈದುಮೇಲಾದ ಫಣಿಂಗಳಾರ ಹನ್ನೆರಡುನೀಳವಾಗಿಯೆ ಹೊಳೆವ ಕೋರೆದಾಡೆಗಳೆರಡುಗಾಳಿಯನು ಭೇದಿಸುವ ಬಾಲ ನಾಲ್ಕುಪೇಳಲೇನಿದನು ಕೇಳ್ ನಾಲಿಗೆಗಳ್ಹನ್ನೊಂದುಮೂರ್ಲೋಕದೊಡೆಯನ ಪೀಠದಲಿರಂಜಿಸುವ ದೇಹವೇಳು 1ಧರಣಿಯೊಳಗಿನ ಪರಿವಾರದವರಿಗೆಲ್ಲಪರಸ್ಪರನೆ ವೈರತ್ವ ಬೆಳೆಸಿಕೊಂಡಿಹುದೂಉರಗಮೂಷಕನಿಂಗೆ ಕರಿಮುಖಗೆ ಕೇಸರಿಗೆಗಿರಿಜೆ ಭಾಗೀರಥಿಗೆ ಉರಿನಯನ ಚಂದ್ರನಿಗೆಎತ್ತು ವ್ಯಾಘ್ರನ ತೊಗಲಗೆ ಮರೆಯ ಹೊಕ್ಕರೆ ಕಾಯ್ವನರಕೇಸರಿಯ ತೆರದಿ ಕರುಣಾಳು ಭಕ್ತವತ್ಸಲ ದೇವನಾ 2ಬಲಿದಾಗ್ನಿಸಖಸರ್ವ ನಿಳಯದೀವಿಗೆವೈರಿಹಲವು ನಾಸಿಕದ ಸಂಚಾರಿಯಾ ಹಾರದಲಿಬೆಳೆದ ದೇಹದ ಮೇಲೆ ಮಲಗಿ ನಿದ್ರೆಯಗೈವನಳಿನನಿಳಯಳ ರಮಣ ಜಲಜಾಕ್ಷಗೋವಿಂದನನುಜೆಯರಸ ಹಲವುಮಾತೇನು ಕೇಳ್ ತಲೆ ಮೇಲೊಂದುಕೊಂಬಿನ ಋಷಿಯ ಪಿತನ ಚರಣಕೆಕೆೈಂiÀ್ಯು ಮುಗಿದು ತಲೆಬಾಗಿ 3
--------------
ಗೋವಿಂದದಾಸ
ಪವಮಾನ ರಾಯಾ ಪಾವನ ಕಾಯಾ | ಕಾಯೋದಿವಿಷತ್ಪೂಜಿತ ಕವಿಜನ ಗೇಯ ಪಭಕ್ತವತ್ಸಲ ದೇವ ರವಿತೇಜ | ಸರ್ವೋ-ದ್ರಕ್ತ ಪ್ರಣತ ಜನ ಸುರಭೂಜ||ಶಕ್ತ ಲೋಕೈಕ ಅನಂತಜ |ಭುಕ್ತಿಮುಕ್ತಿದ ದಿತಿಜಾಹಿ ದ್ವಿಜರಾಜ1ದುರಿತಾಂಬುಧಿ ಘಾಗಜ ಕಾಳೀಶ | ಸರ್ವಸುರವಂದ್ಯ ಪದಕಂಜ ನಿರ್ದೋಷಾ ||ಪುರರಿಪುಪಿತ ಪಯೋಧರ ಭಾಸ | ಸಾರೆ-ಗರೆದು ಪೂರ್ತಿಸೊ ಯನ್ನ ಅಭಿಲಾಷಾ 2ಪೌಲಸ್ತ್ಯಾನುಜ ಮಾಠ ರಜ ರಕ್ಷ | ಶ್ರೀ ಗೋ-ಪಾಲನವನೆನೀಸುವದುಪೇಕ್ಷ ||ನೀಲೇಶ ತ(?)ಮಾಡದೆ ತಾ ರಕ್ಷ | ವಂದ್ಯಕಾಲಿಗೆರಗುವೆ ದುರ್ಜನ ಶಿಕ್ಷ3ಮಧುಸಖ ಪಾಲಾನುಜ ಪಾದಾರವಿಂದ |ಮಧುಕರ ದಂಡ ಮೇಖಲ ಧಾರ ||ವಿದುರಾಗ್ರಜ ನಂದನ ಸಂಸಾರಾರಣ್ಯ |ಸುಧನಂಜಯ ವೃಕೋದರ ಸಮೀರ4ಕುಟಿಲರಹಿತ ಋಜುಗಣಾಧೀಶ | ಶ್ರೀ ಧೂ-ರ್ಜಟಿವಂದ್ಯ ಭಕ್ತಿಯಿಂ ಪ್ರಾಣೇಶ ||ವಿಠಲನ್ನ ಭಜಿಸುತ್ತ ಸದ್ಭಾಷ್ಯವನ್ನು |ಪಠನೆ ಮಾಡಿಸೊ ದಯದಿಂದ ನಿಶಾ 5
--------------
ಪ್ರಾಣೇಶದಾಸರು
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು
ಪಾರ್ವತಿ ಜಗದ್ಭರಿತೇ ಮಹೇಶ್ವರಿ |ಶರ್ವನಂಗನೆ ಖ್ಯಾತೆ ಪಸರ್ವ ಸ್ವತಂತ್ರೆಶರ್ವಾಣಿಕಾಳಾಹಿವೇಣಿ |ಸರ್ವಜನರ ಮದ | ಗರ್ವ ನಿವಾರಿಣಿ ಅ. ಪಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ |ದುಷ್ಟಮರ್ದನ ಕಾರಿ |ಇಷ್ಟದಾಯಕಿಭವ| ಕಷ್ಟನಿವಾರಿಣಿಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ 1ಅಘನಾಶಿನಿ ದೇವೀ ಕಾತ್ಯಾಯಿನಿ |ಸುಗುಣರ ಸಂಜೀವಿ |ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ |ಅಗಲಬೇಡವೋ ತಾಯೇ ಮುಗಿವೆನು ಕರವಾ 2ಪರಮಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ |ತರಳಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನದಾಸನಿಗೊಲಿದು ||ಪಾರ್ವತಿ|| 3
--------------
ಗೋವಿಂದದಾಸ
ಪಾರ್ವತೀ ಪತಿಪಾಹಿ ಹರಹರ ಪಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ವದು ಕೇಶವನ | ಹರಹರ ||ಅ. ಪ||ವಿಜಯನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ ||ಮಜ ಭಾಪುರೆಅಂಬುಜಸುತ ನಂದನ |ಗಜಚರ್ಮಾಂಬರನೆ | ಹರಹರ 1ಜಾತವೇದಸಶಶಿತರಣಿನಯನ |ಮಾತರಿಶ್ವತನಯ ||ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ 2ಕ್ಷಿತಿಧರ ಶರ ಮನ್ಮಥಪುರಹರಣ| ಪ್ರಮಥಾಧಿಪ ಹರಿಣಾಂಕ ||ನತಿಸುವೆ ನಿನ್ನನು ಪ್ರತಿದಿನದಲಿ | ಸನ್ಮತಿ ಕರುಣಿಸು ತ್ವರಿಯಾ || ಹರಹರ3ಸುರಸೇವಿತ ಪದ ಅರವಿಂದಅನಘ|ಮುರರಿಪುಸುಖಕಪರ್ದಿ||ಚರಣವ ನಂಬಿದವರ ಭಯವಾರಿದ |ಮರುತಕುಶನಂದನನೆ || ಹರಹರ4ಖಟವಪಾಣಿಖಳಆಟವಿವಹ್ನಿಧೂ |ರ್ಜಟ ಹರ ಪ್ರಾಣೇಶ ||ವಿಠಲನ ಭಜನೆಯು ಘಟಿಕ ತಪ್ಪದಲೆ |ಘಟನೆ ಮಾಡಿಸುವುದೋ || ಹರಹರ 5
--------------
ಪ್ರಾಣೇಶದಾಸರು
ಪಾರ್ವತೀದೇವಿ ಸ್ತೋತ್ರ137ಪಾರ್ವತಿ ದಕ್ಷಕುಮಾರಿ ನಿನ್ನ | ಸಾರ್ವೆ ಸಂತತ ಕುಜನಾರೀ ||ಆಹಾ||ದೂರ್ವಾಸನರ್ಧಾಂಗಿ ಸರ್ವಜೆÕ ಯನ್ನಯ ||ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ಪದುರ್ಗೆ ಭವಾನಿ ರುದ್ರಾಣಿ ಗೌರಿ | ಸ್ವರ್ಗಜಿನಾರಾಧ್ಯ-ಮಾನಿ || ಸೇರೆದುರ್ಗುಣದವರ ಸುಜ್ಞಾನಿ | ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||ನಿರ್ಗುಣರಾದುತ್ತಮರ್ಗೆವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ 1ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | ಮಂಡೆಯವನಸೊಸೆ | ಯಮ್ಮಾ | ನಾಡೆಕಂಡು ಭಜಿಪೆನಿತ್ಯನಿಮ್ಮ |ಪಾದಪುಂಡರೀಕದ್ವಯವಮ್ಮಾ ||ಆಹಾ||ಉಂಡು ವಿಷವ ನಿನ್ನಗಂಡಬಳಲಿ ಕೈ |ಕೊಂಡೌಷಧ ತಂಡ ತಂಡದಲೆನಗೀಯೆ 2ಪಾವಕನೊಳು ಪೊಕ್ಕ ಪತಿವ್ರತೆ | ಯಾವಾಗ ಮಾನಿಸತ್ಕಥೆ | ಯಲ್ಲಿಭಾವನೆ ಕೊಡೆಪ್ರತಿಪ್ರತಿ | ಜಾವ ಜಾವಕೆ ಷಣ್ಮುಖಮಾತೆ ||ಆಹಾ||ಕೋವಿದರೊಡತಿ ಕೇಳಾವಾಗ ವೈರಾಗ್ಯ |ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ 3ಬೇಡಿದಭೀಷ್ಟವ ಕೊಡುವೆ | ದಯ ಮಾಡಿ ಭಕ್ತರಕರಪಿಡಿವೆ | ದೋಷಕಾಡುಳಿಯದಂತೆ ಸುಡುವೆ | ನಿನ | ಗೀಡೆ ಮಹದ್ಭಯಕಡಿವೆ ||ಆಹಾ||ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ 4ಮೇಶ ಪ್ರಾಣೇಶ ವಿಠ್ಠಲನೆ | ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |ಪೋಷಿಪುದೆನ್ನ ಸುಜಾಣೆ | ನೀನುದಾಸಿಸೆ ನಾನಾರಕಾಣೆ ||ಆಹಾ||ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |ಈ ಶರೀರದೊಳಿಹ್ಯಘಾಸಿಮಾಡುವನನ್ನು 5
--------------
ಪ್ರಾಣೇಶದಾಸರು
ಪಾಲಿಸು ಪರಮಪಾವನ ಪದ್ಮಾವತೀರಮಣಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲಪಾಹಿಪಾರ್ಥಸಾರಥಿ ಅ.ಪ.ಮದನಜನಕ ಮಹಿಮಾಂಬುಧಿ ನಿನ್ನಪದಕಮಲವ ನಾ ಸ್ಮರಿಸದೆ ಎನ್ನಮದಮುಖತನವನು ಒದರುವದೆನ್ನಪದುಮನಾಭ ರಕ್ಷಿಸು ನೀ ಮುನ್ನಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧಉದುಭವಿಸುವುದು ನಿಜವೇ ಭಕ್ತವಾತ್ಸಲ್ಯಇದಕೆ ನೀ ಊನ ತರುವೆ ಸಾಕು ಈ ಮರವೆಒದಗಿಸು ಸರ್ವಮನಸಿನೊಳ್ ಪುದು-ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತಮಧುಸೂದನ ಮಂದರಗಿರಿಧರ ನೀ-ರದ ನಿಭ ನಿರ್ಮಲ ನಿಜರೂಪಗುಣಸದನಾಚ್ಯುತ ರವಿಕುಲದೀಪ ನಿರ-ವಧಿ ಆನಂದ ರಸಾಲಾಪಬುಧಜನೋಪಲಾಲಿತ ಲೀಲಾಯತಉದಧಿಶಾಯಿ ಮಾನದ ಮಧುಸೂದನ 1ನಾಮಸ್ಮರಣೆಯೆ ನರಕೋದ್ಧಾರನೇಮವಿಲ್ಲೆಂಬುದು ನಿನ್ನ ವಿಚಾರಸಾಮಾರ್ಥದ ಗುಣಕೆಲ್ಲನುಸಾರಪಾಮರಮನಕಿದು ಈ ಗುಣಭಾರಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊಸಾಮಗಾನಲೋಲಸುಜನಸ್ತೋಮಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬತಾಮಸಪರಿಹರಿಸಿ ಜ್ಞಾನೋದಯದ ಸದಾನಂದಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆನೀ ಮಾಡುವುದೆಲ್ಲವು ಸಹಜಗುಣಧಾಮಾಶ್ರಿತ ನಿರ್ಜರಭೂಜಸುಜನಸ್ತೋಮಾರ್ಕಾಮಿತ ವಿಭ್ರಾಜಶ್ರೀಮಚ್ಛೇಷಾಚಲ ಮಂದಿರ ಸು-ತ್ರಾಮಾರ್ಚಿತ ಸದ್ರಾಮ ಶ್ರೀರಾಮ 2ಉಡುವ ಸೀರೆಯ ಸೆಳೆಯಲು ದ್ರುಪಜೆಯಕೊಡಲಿಲ್ಲವೆ ಬಹುವಸನ ಸಂತತಿಯಹಿಡಿಯವಲಕ್ಕಿಗೆ ದ್ವಾರಕ ಪತಿಯಕಡು ಸರಾಗವಾಯ್ತಿಂದಿನ ಪರಿಯಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟಕೊಡು ದಯವಿಟ್ಟು ಮುದದಿ ಕರುಣಾವುದಧಿಕಡುಲೋಭಿತನ ಬಿಡು ಮಹರಾಯಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತಕರ್ಮವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯಒಡೆಯ ಶ್ರೀ ಲಕ್ಷ್ಮೀನಾರಾಯಣನಡುನೀರೊಳು ಕೈಬಿಡುವೆಯ ನೀತೊಡಕೊಂಡ ಬಿರುದೇನಯ್ಯ ಈಕಡು ಕೃಪಣತನ ಸಾಕಯ್ಯಪೊಡವಿಯೊಳಗೆ ಪಡುತಿರುಪತಿಯೆಂಬದೃಢಕಾರ್ಕಳದೊಡೆಯ ಶ್ರೀನಿವಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸು ಪರಮೇಶಾ ಪಾಪವಿನಾಶಾಪಾಲಿಸು ಪಾರ್ವತೀಶಾಫಾಲಲೋಚನಫಣಿಭೂಷಣ ನತಜನಪಾಲನೆ ಪಾಪವಿಹಾರಣ ಕಾರಣ ಪನಿತ್ಯನಿರ್ಮಲ ಚಿತ್ತನೀಕ್ಷಿಸೋ ಎನ್ನನಿತ್ಯತೃಪ್ತನೆ ಖ್ಯಾತ ನಿತ್ಯನಂದನೆನೀಲಕಂಧರಶಶಿಧರನಿರ್ಮಲರಜತಾದ್ರಿ ನಿಲಯನೆ ವಿಲಯನೆ 1ಅಂಬಾ ವರದೇವ ಜಯ ಜಯವಿಶ್ವಕು-ಟುಂಬಿಲ ಸದ್ಭಾವಲಂಬೋದರ ಗುಹಜನಕ ಸದಾಶಿವನಂಬಿದೆ ಸಲಹೊ ಪ್ರಸೀತ ಸತ್ಪಾತ್ರ 2ಆಗಮಶ್ರುತಿಸಾರ ಭಕ್ತರಭವರೋಗಶೋಕವಿದೂರಯೋಗಿಗಳ ಹೃದಯ ಸಂಚಾರನೆ ಭವಬಂಧನೀಗಿಸು ಗೋವಿಂದ ದಾಸನ ಪೋಷನೆ 3
--------------
ಗೋವಿಂದದಾಸ
ಪಾಲಿಸು ಭಕ್ತವತ್ಸಲನೇ ನಿನ್ನಬಾಲಕನಂತೆನ್ನ ಸಲಹೋ ಶ್ರೀವರನೇ ಪಬಾಲ ಪ್ರಹ್ಲಾದ ಧ್ರುವನು ಚಂದ್ರಹಾಸಮೇಲಾದ ಮುಚುಕುಂದನಂತೆನ್ನ ಸತತ ಅ.ಪಸುರರುನಾರದರು ಕಿನ್ನರರುಮುನಿವರರು ವಸಿಷ್ಠ ವಾಲ್ಮೀಕಿ ಗೌತಮರುಗರುಡ ಗಂಧರ್ವ ಗಾಯಕ ಯಕ್ಷವಾಸುಕಿತರಣಿನಂದನ ಆಂಜನೇಯ ಜಾಂಬವರಂತೆ 1ನಳ ನಹುಷ ಸಗರಂಬರೀಷ ನಿನ್ನ ಒಲಿಸಿಭಗೀರಥ ಬಲಿಯುನಾಕೇಶಸಲಹೆಂದು ಹರಿಶ್ಚಂದ್ರರುಕ್ಮಾಂಗದ ವಿಭೀಷಣಗೊಲಿದಧರ್ಮಜ ಪಾರ್ಥ ಕರಿರಾಜನಂತೆ 2ಚರಣದಿ ಅಹಲ್ಯೆಯನು ಕಾಯ್ದೆ ನೀನುಪೊರೆದೆ ಶಬರಿಯನ್ನು ಕುಬುಜೆಯನೆನದೆಹರುಷದಿ ಎರಡೆಂಟು ಸಾವಿರ ತರುಣಿಯರೊಡಗೂಡಿಸೆರಗಿಗೆ ವರವಿತ್ತೆ ದ್ರುಪದನಂದನೆಗೆ 3ಸಿಂಧುಶಯನ ನಿನ್ನ ಕರುಣ ಎನ-ಗೆಂದಿಗೆ ತೋರುವೆ ಶ್ರೀಲಕ್ಷ್ಮೀರಮಣಮಂದರಧರಅರವಿಂದವದನಹರಿನಂದನ ಕಂದ ಗೋವಿಂದನೆ ದಯದಿ 4
--------------
ಗೋವಿಂದದಾಸ
ಪಾಲಿಸೆ ಶ್ರೀ ಗೌರೀ ಎನ್ನನು ಪಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ ಅ.ಪ.ಶರಣೆಂದವರನು ಪೊರೆವಳು ಎಂಬುವ |ಬಿರಿದು ನಿನ್ನದು ಎಂದರಿದೆನು ತ್ವರದಿಂ1ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |ಮನ್ಮಥನೆಂಬುವ ಬನ್ನಬಿಡಿಪ ಬಲು2ಕಾಣೆನು ಶಾಂತಿಯ ಏನೆಂಧೇಳಲಿ |ಪ್ರಾಣೇಶ ವಿಠಲನು ತಾನೆಯೇ ಬಲ್ಲನು 3
--------------
ಪ್ರಾಣೇಶದಾಸರು
ಪಾಲಿಸೆನ್ನ ಪಾರ್ವತೀಪತಿ ಪಾಲಿಸೆನ್ನನುಪಾಲಿಸೆನ್ನನು ಚೆಲ್ವ ಕಾಲಕಂದರ ಹರಪಾಲಯಮಾಂ ಶಿವಲೋಲವಿರೂಪಾಕ್ಷಪಶರನಾಮ ಸುರನ ಕುವರಿಯನಾಳಿದವನಹಿರಿಯ ಪಿತನ ಶಿರವ ತರಿದವನ ಸುತನಿಗೆತುರಗವಾದವನ ಜೆಹ್ವೆಯ ತುದಿಗೆ ಸಿಲುಕಿಮರುಳಾಗಿದ್ದವನ ಬಾಯ ತುತ್ತಾಗಿಮರೆಯೊಳಿದ್ದವನ ಕಾಯವಾಧರಿಸಿ ನೀಶಿರದೊಳು ತಾಳಿದೆಯಾ ಎನ್ನೊಡೆಯ1ಬಾಯೊಳಗಿಹ ರಮಣನ ಅನುಜನ ಮಾವನ ದಿನದಮೈಯವನ ಮಗನ ಶಿರದಾಯತವಾಗಿಪ್ಪನ ವೈ-ರಿಯ ನೇರಿದಾಯತಾಕ್ಷಿಯ ಪೆತ್ತನ ವಂಶವ ಮುರಿ-ದಾ ಯಾಗಗಳ ಕಿತ್ತವನ ಆತ್ಮಜನಿಗೆಆಯಾಮಾರ್ಗಣವಿತ್ತವನೆ2ಸರಸಿಜಮಿತ್ರನ ಸೂನುವಿನ ಕಂದನವರಪುರಂಧ್ರಿಯಮಾನವಕಾಯ್ದನಣ್ಣನಕರದೊಳಿದ್ದಾಯುಧವ ಪೆಗಲೊಳಾತುನರರ ರಕ್ಷಿಸಿ ಪೊರೆವ ದೇವನನೇರಿಚರಿಪ ಪಂಪಾಪುರವನಾಳ್ವ ಸದ್ಗುರುಚಿದಾನಂದ ದೇವಭಕ್ತರಕಾವ3
--------------
ಚಿದಾನಂದ ಅವಧೂತರು
ಪಾಲಿಸೆಮ್ಮ ಮುದ್ದು ಶಾರದೆ-ಎನ್ನ-ನಾಲಗೆಯಲಿ ನಿಲ್ಲಬಾರದೆ ಪಲೋಲಲೋಚನೆ ತಾಯೆ | ನಿರುತ ನಂಬಿದೆ ನಿನ್ನ ಅ.ಪಅಕ್ಷರಕ್ಷರ ವಿವೇಕವ-ನಿಮ್ಮ ಕುಕ್ಷಿಯೊಳೀರೇಳು ಲೋಕವ |ಸಾಕ್ಷಾದ್ರೂಪದಿಂದ ಒಳಿದು ರಕ್ಷಿಸು ತಾಯೆ 1ಶೃಂಗಾರಪುರ ನೆಲೆವಾಸಿನಿ-ದೇವಿ-ಸಂಗೀತ ಗಾನ ವಿಲಾಸಿನಿ |ಭೃಂಗಕುಂತಳೆ ತಾಯೆ-ಭಳಿರೇ ಬ್ರಹ್ಮನ ರಾಣಿ 2ಸರ್ವಾಲಂಕಾರಮಯ ಮೂರುತಿ-ನಿನ್ನಚರಣವ ಸ್ತುತಿಸುವೆ ಕೀರುತಿ |ವರದಪುರಂದರವಿಠಲನ ಸ್ತುತಿಸುತ3
--------------
ಪುರಂದರದಾಸರು
ಪಾಲಿಸೊ ವನಮಾಲಿ ಮುಂದೆನ್ನಬಾಲಕನಲೆಯಲೆಸದವನ ಪ.ಹದ್ದನೇರ್ವನಿರುದ್ಧ ನಿನ್ನಲ್ಲಿಬುದ್ಧಿ ನಿಲ್ಲದು ಶುದ್ಧ ವೃತ್ತಿಲಿಮುದ್ದುಮಕ್ಕಳು ಮುಗ್ಧರಲ್ಲೆಅಯ್ಯತಧ್ಯಾನಾಲಾಪ ಬಿದ್ದದ್ದಲ್ಲಯ್ಯ 1ತುಲಸಿ ಪುಷ್ಪಾಂಜಲಿ ತರಲಿಲ್ಲಹೊಳೆವಂಘ್ರಿಗರ್ಪಿಸಲು ಹೊತ್ತಿಲ್ಲಬಲು ಧನ ಬಹ ಕೆಲಸ ಕೈಕೊಂಡೆಕಲಿಕೂಡ ನಿರಯದ ಭೋಗುಂಡೆ 2ಆಡುವ ಮಾತು ಮಾಡಲರಿತರಿಯೆಬೇಡುವರಿಗುಣ ನೀಡಲಿಕ್ಕರಿಯೆಖೋಡಿಗೇನುಂಟು ಸುಖ ಹೇಳು ತಂದೆಹಾಡುವೆ ನಿನ್ನ ಕಾಡುವೆನಿಂದೆ 3ಹೆತ್ತ ತಾಯಿ ಕುತ್ತಿಗೊತ್ತಿದರಾರೊಮತ್ತೆ ತಂದೆ ಮಾರಲಿತ್ತರಿನ್ನಾರೊಪೃಥ್ವಿಪ ಸುಲಿದರೊತ್ತರೆಂಬುವರುಕರ್ತನೀನಿದ್ದೆನ್ನೆತ್ತುವರಾರು4ಕರುಣವಾರಿಧಿ ಕರುಣಿಸು ಗಡಪರಮಭಾಗವತರಿರುವಲ್ಲೆನ್ನಿಡುಪರಸನ್ನ ವೆಂಕಟರಸ ನೀ ಬಾರೊಮರಣ ಹೊಂದದ ಅರಮನೆಗೊಯ್ಯೊ 5
--------------
ಪ್ರಸನ್ನವೆಂಕಟದಾಸರು
ಪಾಹಿಪಾಂಡವಪಾಲಂ ಕೌರವ ಹರಣಂಬಾಹು ಪರಾಕ್ರಮ ಫಣಿಪತಿ ಶಯನಂಅಹಲ್ಯಾ ಶಾಪ ವಿಮೋಚನ ಚರಣಂ 2ಸಕಲ ವೇದ ವಿಚಾರಂ ಸರ್ವಜೀವಿ ನೇತಾರಂಮಕರಕುಂಡಲಧರಮದನಗೋಪಾಲಂಭಕ್ತವಿಪೋಷಣ ಪುರಂದರವಿಠಲಂ 3
--------------
ಪುರಂದರದಾಸರು
ಪಾಹಿಪಾರ್ವತೇ | ಪಾಲಿಸೆನ್ನ ಮಾತೇ ಪಪಾಹಿಲೋಕಭರಿತೇ |ಪಾಹಿಸುಗುಣ ಚರಿತೆ ||ಪಾಹಿಸುಂದರ ಖ್ಯಾತೆ |ಪಾಹಿಶಂಭು ಪ್ರೀತೆ 1ದೇವಿ ನಿನ್ನಪಾದ| ಸೇವೆಮಾಳ್ಪ ಮೋದ- |ನೀವುದೆನಗೆ ಸದಾ | ಮನ್ನಳೆ [?]2ನಾರದಾದಿವಂದ್ಯೆವಾರಿಜಾ ಸುಗಂಧೆಗೋವಿಂದದಾಸನ | ಪಾಲಿಸಂಬಾದೇವಿ 3
--------------
ಗೋವಿಂದದಾಸ