ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿಕ್ಷಾಂ ದೇಹಿಮೇ ಸ್ವಾಮಿನ್ ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ ಆರುಮಂದಿ ಶತ್ರುಗಳಿರುವರು ಬಲು ಕ್ರೂರರಿವರು ಎನ್ನನು ಬಿಡರೊ ದೂರ ಕಳುಹಲಾಹಾರವು ಸಾಲದು ಶಮ ದಮ 1 ನಮ್ಮವರಿರುವರು ಹತ್ತುಮಂದಿಗಳು ಸುಮ್ಮನಿರರು ಒಂದರಘಳಿಗೆ ಸಮ್ಮತಿಗೊಡದಿರೆ ಬಳಲಿಸುವರು ಇವ ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ 2 ಕತ್ತಲೆಯಲಿ ಬಂದಿರುವೆನು ಹೊಟ್ಟೆಯು ಹತ್ತಿ ಹೋಯಿತೊ ಹಸಿವಿನಲಿ ಎತ್ತ ಸುತ್ತಿದರೂ ತುತ್ತನು ಕಾಣೆನೊ ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ 3
--------------
ವಿದ್ಯಾಪ್ರಸನ್ನತೀರ್ಥರು
ಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ | ಹರಿ ಭಕುತಿ ಎಂಬಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ ಪ ತ್ರ್ಯಕ್ಷಸು ಸನ್ನುತೆ | ಮೋಕ್ಷದ ಶ್ರೀಹರಿಶಿಕ್ಷಿಸುಭಕುತಿಯ | ಪಕ್ಷಿಯ ಮಾತೇ ಅ.ಪ. ಪತಿ ಸಿರಿ | ವಸುದೇವ ಸುತನನಯಶವ ನುಡಿ ಪದ | ಬಿಸಜದಿ ಭಕುತಿಯ 1 ಮೂರ್ತಿ | ಕೇಳ್ವುದು ಶರಣಾರ್ತಿಮಾನಾಭಿಮಾನ ನಿನ್ನದು ಗಾಯತ್ರಿ | ನರಹರಿ ಗುರು ಭಕ್ತಿ ||ಕ್ಷೋಣಿಯೊಳಗೆ ಸ | ತ್ತ್ರಾಣಿ ಭಾರತಿಯೆಮಾಣದೆನಗೆ ಜಗ | ತ್ರಾಣನ ಭಕುತಿಯ 2 ಸತಿ ಕಾಳೀ||ಸಾರತ ಮನು ಗುರು | ಗೋವಿಂದ ವಿಠಲನಚಾರು ಚರಣ ಸ | ದ್ಭಕುತಿಯು ಎಂಬ 3
--------------
ಗುರುಗೋವಿಂದವಿಠಲರು
ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ | ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ1 ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ | ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ 2 ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ 3 ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು | ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು 4 ಭಿಕ್ಷೆ ಬೇಡಲುಂಟು 5
--------------
ಭೀಮಾಶಂಕರ
ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ ಹಗಲು ಇರಳು ಎಡೆಬಿಡದಲೆ ಪೊಗಳುತ ತವ ನಾಮ ಮಹಿಮೆಯ ಜಗದೀಶನೆ ನಿನ್ನ ಚರಣ ಯುಗಳಲಿ ಬಹು ಭಕ್ತಿ ಮನ ಬಗಿ ಬಗಿಯಲಿ ನಲಿದಾಡುವ 1 ನಿತ್ಯನೆ ಸರ್ವೋತ್ತಮನೇ ಮುಕ್ತಿಪ್ರದನೇ ಪರಮಾತ್ಮನೇ ಉತ್ತಮ ವೃತ್ತಿಯಾನಿತ್ತು ನೇತ್ರದಿ ತವ ನೋಡುತ ವರ ಸ್ತೋತ್ರ ದಿನಾ ಪಾಡುತಿರುವೆ 2 ಎನ್ನಪರಾಧಗಳನ್ನು ಮನ್ನಿಸಿ ಸಲಹಯ್ಯಾ ಜೀಯಾ ಹನುಮೇಶವಿಠಲರಾಯಾ ನಿನ್ನ ಸ್ಮರಣೆಯಲ್ಲಿ ಕಾಲ ವನ್ನು ಕಳೆಯುತಿರುವ ದಿವ್ಯ 3
--------------
ಹನುಮೇಶವಿಠಲ
ಭಿಡೆ ಇನ್ನ್ಯಾತಕೆ ಹೊಡಿ ಹೊಡಿ ಡಂಗುರ ಪೊಡವಿ ತ್ರಯದಿ ಹರಿ ಅಧಿಕೆಂದು ಪ ಅಡಿಯ ದಾಸರ ಕರದ್ಹಿಡಿದು ಬಿಡದೆ ಬಲು ಸಡಗರದಾಳುವ ನಿಜಧಣಿಯೆಂದು ಅ.ಪ ನಂದಕಂದ ಗೋವಿಂದ ಮುಕ್ಕುಂದ ಭಕ್ತ ಬಂಧು ಎಂದು ಕೈತಾಳವಿಕ್ಕುತ ತಂದೆ ತನ್ನ ಪಾದನ್ಹೊಂದಿ ಭಜಿಪರ ಬಂಧ ಛಿಂದಿಪ ಪರದೈವವೆಂದು ನಲಿಯುತ 1 ಸ್ಮರಿಪ ಜನರ ಮಹದುರಿತಪರ್ವತವ ತರಿದು ಪೊರೆವ ಸಿರಿದೊರೆಯೆಂದೊದರುತ ನೆರಳುಯೆಂದು ಮೈಮರೆದು ಕೂಗುತ 2 ಶರಣಾಗತರ ತನ್ನ ಹರಣದಂತೆ ಕಾಯ್ವ ಕರ ಮೇಲಕೆತ್ತಿ ಮರೆಯ ಬಿದ್ದವರ ಪರಮ ಬಡತನವ ಭರದಿ ಕಳೆದನೆಂದು ಒರೆದು ಸಾರುತ 3 ಸಾಗರಶಾಯಿ ತನ್ನ ಬಾಗಿ ಬೇಡುವರ ಬೇಗ ಕ್ಷೇಮನೀಯ್ವ ಭಾಗ್ಯದರಸನೆಂದು ನೀಗದ ಕಷ್ಟದಿ ಕೂಗಲು ತಡೆಯದೆ ಸಾಗಿ ಬರುವ ಭವರೋಗವೈದ್ಯನೆಂದು 4 ಅಚ್ಯುತಗಿಂ ಭಕ್ತರಿಚ್ಛೆ ಪೂರೈಸಲು ಹೆಚ್ಚಿನವಿರಲ್ಲೆಂದು ಬಿಚ್ಚಿ ಹೇಳುತ ಇಚ್ಛಜಪಿತ ಮಹಸಚ್ಚಿದಾನಂದ ಸರ್ವಕ್ಹೆಚ್ಚು ಹೆಚ್ಚು ಶ್ರೀರಾಮನೆ ಎನ್ನುತ 5
--------------
ರಾಮದಾಸರು
ಭೀಮ ಲಾಲಿ ಭಾರತ ಕುಲಾಂಬುಧಿ ಸೋಮ ಗುಣನೆ ಲಾಲಿ ಪ ಲಾಲಿ ಯಾದವ ಪದಾಂಭೋಜ ಮಧುಕರನೆಲಾಲಿ ಮುನಿವರತನಯ ಸುತನ ಗೆಲಿದವನೆಲಾಲಿ ಕರೆವೆನು ಬಾರೋ ಮಧ್ವ ಮುನಿವರನೆ ಲಾಲಿ ಅ.ಪ. ಲಾಲಿ ಕಾಲ್ಗಡಲರುಳಿ ಕುಣಿತ ನಿಜಚರಣಾಲಾಲಿ ಮಧ್ಯದೊಳುಟ್ಟ ಕನಕಮಯ ವಸನಾಲಾಲಿ ಕೊರಳೊಳಗಿಟ್ಟ ಹಾರಗಳ ಸದನಾಲಾಲಿ ಕಿವಿಯೊಳು ಹೇಮಕುಂಡಲಾಭರಣಾ ಲಾಲಿ 1 ಲಾಲಿ ಕರಯುಗ ಶೋಭಿತ ಕಂಕಣಾಭರಣಾಲಾಲಿ ಲೋಕವ ಮೋಹಿಸುವ ಮಂದಹಾಸನಾಲಾಲಿ ತರುಣಿರೂಪ ಶೃಂಗಾರ ಸದನಾಲಾಲಿ ತಾಂಬೂಲರಸಭಾಸ ನಿಜವದನಾ ಲಾಲಿ 2 ಲಾಲಿ ನರ್ತನಾ ಕೃತಾಲಯ ಚರಣಗಮನಾಲಾಲಿ ನಿಜ ಕಾಮಿನಿ ಸಂಕಟ ಹರಣಾಲಾಲಿ ಕೀಚಕಲಾಲಿ ಇಂದಿರೇಶ ಮಾಧವನ ತೋರಿದನ ಲಾಲಿ 3
--------------
ಇಂದಿರೇಶರು
ಭೀಮ ಶಾಮ ಕಾಮಿನಿಯಾದನು ಪ ಭೀಮ ಶಾಮ ಕಾಮಿನಿಯಾಗಲು ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆಅ.ಪ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು 1 ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು ಆಲೋಚನೆಯಿಂದಲಿ ನಾಚಿಕೆ ತೋರುತಲಾ ಚೆನ್ನೆ ಪೋಗಲು ಕರ ಚಾಚಿದನು 2 ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು ಕಳವಳಿಸಿದ ನಾ ಗೆಲಲಾರೆನಿಂದು ವಲಿಸಿಕೊ ಎನ್ನ ಲಲನೆಯ ಕರುಣಾ- ಜಲಧಿಯೆ ನಾರೀ ಕುಲಮಣಿಯೆ ಬಳಲಿಸದಲೆ ನೀ ಸಲಹಿದಡೇ ವೆ- ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ- ಖಳನಾ ಮಾತಿಗೆ ತಲೆದೂಗುತಲಿ ಅ- ನಿಳಜನೆನ್ನ ನೀ ಸಲಹೆಂದ 3 ಮೌನಿ ದ್ರೌಪದಿ ಮೌನದಲ್ಲಿ ಹೀನನಾಡಿದಾ ಊನ ಪೂರ್ಣಗಳು ಮನೋಭಾವವ ಧೇನಿಸಿ ನೋಡುತ್ತ ಹೀನಕೆ ತಿಳಿದಳು ಮನದಲಿ ದೀನವತ್ಸಲ ಕರುಣವು ಮೀರಿತು ಕಾನನದೊಳ್ಕಣ್ಣು ಕಾಣದಂತಾಯಿತು ಏನು ಮಾಡಲೆಂದು ಜಾಣೆಯು ಚಿಂತಿಸಿ ಅನಿಲಗೆ ಬಂದು ಮ-ಣಿದಳು4 ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ ಸಲ್ಲದೆ ಆತನ ಹಲ್ಲನು ಮುರಿದು ಹಲ್ಲಣವ ಹಾಕಿ ಕೊಲ್ಲುವೆ ನಾನೀಗ ತಲ್ಲಣಿಸದಿರೇ ಗೆಲ್ಲುವೆನೆ ಪುಲ್ಲನಾಭ ಸಿರಿನಲ್ಲನ ದಯವಿ- ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ ಸಲ್ಲಿಸಿ ಕೊಡುವನು ಬಲ್ಲಿದ ನಮಗೆ ಮಲ್ಲಿಗೆ ಮುಡಿಯಾ ವಲ್ಲಭಳೆ 5 ಎಂದ ಮಾತಿಗಾನಂದ ಮಯಳಾಗಿ ಬಂದಳಾ ಖಳನ ಮಂದಿರದೊಳು ನೀ- ನೆಂದ ಮಾತಿಗೆ ನಾನೊಂದನು ಮೀರೆನು ಕಪಟ ಸೈರಂಧಿರಿಯೂ ಕುಂದಧಾಭರಣವ ತಂದು ಕೊಡಲು ಆ- ನಂದದಿಂ ಪತಿಯ ಮುಂದೆ ತಂದಿಟ್ಟಳು ಮಂದರೋದ್ಧರನ ಚಂದದಿ ಪೊಗಳುತ ಇಂದು ಸುದಿನವೆಂದ ಭೀಮ6 ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ ಇಟ್ಟೋಲೆ ತೂಗಲು ಬಟ್ಟ ಕುಚ ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ- ದಿಟ್ಟಂಥ ಈರೈದು ಬೆಟ್ಟುಗಳುಂಗರ ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ ಕಟ್ಟುಗ್ರದ ಜಗ ಜಟ್ಟಿಗನು 7 ತೋರ ಮೌಕ್ತಿಕದ ಹಾರ ಸರಿಗೆ ಕೇ ಯೂರ ಪದಕ ಭಂಗಾರ ಕಾಳಿಸರ ವೀರ ವಿದ್ರುಮದ ಭಾಪುರಿ ಉ- ತ್ತಾರಿಗೆ ವರ ಭುಜಕೀರುತಿಯು ಮೂರೇಖೆಯುಳ್ಳ ಉದಾರ ನಾಭಿವರ ನಾರಿ ನಡು ಉಡುಧಾರ ಕಿಂಕಿಣಿ ಕ- ಸ್ತೂರಿ ಬೆರಸಿದ ಗೀರುಗಂಧವು ಗಂ- ಬೂರ ಲೇಪ ಶೃಂಗಾರದಲಿ8 ವಂಕಿ ದೋರ್ಯವು ಕಂಕಣ ಒಮ್ಮೆಯೀ- ಚಾಪ ಭ್ರೂ ಅಲಂಕಾರ ಭಾವ ಪಂಕಜಮಾಲೆ ಕಳಂಕವಿಲ್ಲದಲೆ ಸಂಕಟ ಕಳೆವ ಪಂಕಜಾಂಘ್ರಿ ಝಂಕಾರಕೆ ಲೋಕ ಶಂಕಿಸೆ ನಾನಾ- ಅಂಕುರ ವೀರ- ಕಂಕಣ ಕಟ್ಟಿದ ಬಿಂಕದಿಂದಲಾ- ತಂಕವಿಲ್ಲದೆಲೆ ಕಂಕಾನುಜ 9 ಕಂಬು ಕೊರಳು ದಾಳಿಂಬ ಬೀಜ ದಂತ ದುಂಬಿಗುರುಳು ನೀಲಾಂಬುದ ಮಿಂಚೆಂ- ದೆಂಬ ತೆರದಲಾ ಅಂಬಕದ ನೋಟ ತುಂಬಿರೆ ಪವಳ ಬಿಂಬಾಧರ ಜಂಬೀರ ವರ್ಣದ ಬೊಂಬೆಯಂತೆಸೆವ ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು ಹಂಬಲಿಸಿದ ತಾ ಸಂಭ್ರಮದಿ 10 ಸಂಧ್ಯಾದೇವಿಯೊ ಇಂದ್ರನ ರಾಣಿಯೊ ಚಂದ್ರನ ಸತಿಯೋ ಕಂದರ್ಪನಾಕರ- ದಿಂದ ಬಂದ ಅರವಿಂದದ ಮೊಗ್ಗೆಯೊ ಅಂದ ವರ್ಣಿಪರಾರಿಂದಿನಲಿ ಇಂದು ರಾತ್ರಿ ಇದೆ ಎಂದಮರಮುನಿ ಸಂದೋಹ ಕೊಂಡಾಡೆ ಇಂದುಮುಖಿಯೊಡ ನಂದು ತಾ ನಾಟ್ಯದ ಮಂದಿರಕೆ ನಗೆ- ಯಿಂದ ಬಂದ ಕುಂತಿನಂದನನು11 ಭಂಡ ಉಡಿಯಲಿ ಕೆಂಡವೊ ಪರರ ಹೆಂಡರ ಸಂಗ ಭೂಮಂಡಲದೊಳೆನ್ನ ಗಂಡರು ಬಲು ಉದ್ದಂಡರು ನಿನ್ನನು ಕಂಡರೆ ಬಿಡರೋ ಹಂಡಿಪರೋ ಲಂಡ ಬಾಯೆಂದು ಮುಕೊಂಡು ಕೈದುಡುಕಿ ಅಂಡಿಗೆಳೆದು ಅಖಂಡಲನ ಭಾಗ್ಯ ಮಂಡೆ ಮೊಗ ಗಲ್ಲ ಡುಂಡು ಕುಚ ಮುಟ್ಟಿ ಬೆಂಡಾದನು 12 ಸಾರಿಯಲ್ಲ ಮಕಮಾರಿಯಿದೆನುತ ಶ- ರೀರ ವತಿ ಕಠೋರವ ಕಂಡು ಜ- ಝಾರಿತನಾಗಿ ನೀನಾರು ಪೇಳೆಂದು ವಿ- ಕಾರದ್ಯಬ್ಬರಿಸಿ ಕೂರ್ರನಾಗಿ ತೋರು ಕೈಯೆಂದು ಸಮೀರನು ಎದ್ದು ವಿ ಚಾರಿಸಿಕೋ ಎನ್ನ ನಾರಿತನವೆಂದು ವೀರ ಮುಷ್ಟಿಯಿಂದ್ಹಾರಿ ಹೊಡೆಯಲು ಕ್ರೂರನು ರಕ್ತವ ಕಾರಿದನು 13 ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ- ಸೂರೆಯಾಯಿತು ಪರನಾರೇರ ಮೋಹಿಸಿ ಪಾರಗಂಡವರುಂಟೆ ಶರೀರದೊಳಿದ್ದ ಮಾರುತೇಶ ಹೊರಸಾರಿ ಬರೆ ಧೀರ ಭೀಮರಾಯ ಭೋರಿಡುತ ಹಾರಿ ಕೋರ ಮೀಸೆಯನೇರಿಸಿ ಹುರಿಮಾಡಿ ನಾರಿಮಣಿ ಯಿತ್ತ ಬಾರೆಂದು ಕರೆದು ಸಾರಿದನು ನಿಜಾಗಾರವನು 14 ಸರಸವು ನಿನಗೆ ವಿರಸವು ಆಯಿತು ಕರೆಸೆಲೊ ಈ ಪುರದರಸಾ ಕಳ್ಳನ ನರಸಿಂಹನ ನಿಜ ಅರಸಿಗೆ ಮನವನು ಮಂದರ ಅರಸನೆ ಅರಸಿ ನೋಡುತಿರೆ ವರೆಸಿದನಾ ಜೀವ ದೊರಸೆಯ ಖೂಳನ ಬೆರೆಸಿ ಸವಾಂಗ ಸಿರಿ ವಿಜಯವಿಠ್ಠಲ ಅರಸಿನ ಲೀಲೆಯ ಸ್ಮರಿಸುತಲಿ 15
--------------
ವಿಜಯದಾಸ
ಭೀಮರಾಯನ ನಂಬಿ ಭೀಮಸೇನನಭೀಮಭವವಾರಿಧಿಯ ಬೇಗದಾಟುವರೆ ನಮ್ಮ ಪ. ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದುಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ 1 ಜರಾಸಂಧನ ಕೂಡೆ ವರ ಯುದ್ಧವನ್ನೆ ಮಾಡಿಸರಕು ಮಾಡದೆ ಕೊಂದ ಧಾರುಣಿಯೊಳಗೆ ನಿಂದ 2 ಸತಿ ಕೃಷ್ಣೆಯಬಾಧಿಸೆ ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ3 ಕಡುತೃಷೆಗೆ ದುಶ್ಶಾಸನನೊಡಲ ಬಗಿದು ರಕ್ತಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ 4 ಭೀಮ ತನ್ನ ಮರೆಹೊಕ್ಕ ಸುಜನರ ಕಾವಸ್ವಾಮಿ ಶ್ರೀಹಯವದನ ರಾಮನಾಣೆ ಸತ್ಯವಿದು 5
--------------
ವಾದಿರಾಜ
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಭೀಮಸೇನ ಭಾಮಿನಿಯಾದನು ಪ. ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ಅ.ಪ. ರಾಜಾಧಿರಾಜನು ಗಜಪುರದಲ್ಲಿಜೂಜಾಡಿ ತಮ್ಮ ರಾಜ್ಯವನು ಸೋತುವಿಜಯಮುಖ್ಯ ಅನುಜರೊಡಗೂಡಿಭುಜಂಗಶಾಯಿಯ ಭಜಿಸುತ್ತಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆವ್ಯಾಜದಿಂದ ರೂಪಮಾಜಿಕೊಂಡು ಪೋಗೆರಾಜ ಮತ್ಸ್ಯನೊಳು ಭೋಜನ ಮಾಡುತ್ತಪೂಜಿಸಿಕೊಂಬೋ ಸೋಜಿಗವೇನಿದು1 ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲುಮುನ್ನಿನ ಸಂಗತಿ ಪೇಳಿದಳುಆಣಿಮುತ್ತಿನಂಥಾ ವಾಣಿಯ ಕೇಳಲುಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನುಪ್ರಾಣ ನೀನೆನಗೆ ವೇಣಿ ಹಾಕೆನುತಪಾಣಿ ಪಿಡಿದು ಕರೆತಂದಳಾಗ2 ಈಶ ಕೇಳೊ ಪರದೇಶದಿಂದೊಬ್ಬಳುಕೇಶಕಟ್ಟುವಂಥ ವೇಷದಿ ಬಂದಳುಸಾಸಿರಮುಖದ ಶೇಷನೀರೂಪವಲೇಶವು ತಾ ವರ್ಣಿಸಲರಿಯನುವಾಸಮಾಡುವೆನು ಮಾಸಯೀರಾರುಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿದೋಸನು ಪೇಳಲು ಮೀಸೆಯ ತಿರುವುತಮೀಸಲೆನಗೆಂದು ತೋಷಿಸಿದ 3 ನಾರಿ ಅಕ್ಕನಲ್ಲಿ ಸೇರಿಕೊಂಡಿಹಳುಮೋರೆಯ ನೋಡಲು ಭಾರಿ ಗುಣವಂತೆತೋರುತಲಿದೆ ಎನ್ನ ಸೇರಿದ ಮೇಲನು-ಚಾರಿ ಎನಿಸುವೆ ಮೀರಿದ್ದಕ್ಕೆವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದುಬಾರಿ ಬಾರಿಯಾಕೆ ಮೋರೆ ನೋಡುತಿರೆನೀರೆ ಆ ಕ್ರೂರನ್ನ ಘೋರರೂಪಕಂಜಿಮೋರೆ ತೋರದೆ ಗಂಭೀರದಿಂದಿರೆ 4 ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆಪುಕ್ಕಟೆ ಅನ್ನಕೆ ಸಿಕ್ಕುವರೆ ನೀನುಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆಸಕ್ಕರೆದುಟಿಸವಿ ದಕ್ಕಿಸುವೆರಕ್ಕಸ ನಿನಗೆ ದಕ್ಕುವಳೆ ನಾನುಮುಕ್ಕಣ್ಣನಾದರು ಲೆಕ್ಕಿಸದಾ ಪತಿಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ 5 ಭಂಡಕೀಚಕನುದ್ದಂಡತನ ಕೇಳುಮಂಡೆ ಹಿಕ್ಕುವಳೆಂದು ಕಂಡಕಂಡ ಬಳಿಪುಂಡು ಮಾಡುವನು ಗಂಡಕಂಡರೆ ತಲೆಚಂಡನಾಡುವನು ಖಂಡಿತದಿಮಂಡಲಾಧಿಪನ ಹೆಂಡತಿ ನೀನಮ್ಮಉಂಡಮನೆಗೆ ಹಗೆಗೊಂಡಳೆನ್ನದಿರುಲಂಡನಿಗೆ ಬುದ್ಧಿ ದಂಡಿಸಿ ಪೇಳದೆಹಿಂಡಿಕೊಳ್ಳದಿರು ದುಂಡುಮುಖ 6 ತರಳ ನಿನ್ನಯ ದುರುಳತನದಬೆರಳ ಸನ್ನೆಯು ಗರಳವಾಯಿತೆಸರಳ ಗುರಿಗೆ ಕೊರಳ ಕೊಡದೆಪುರದೊಳಿರದೆ ತೆರಳೊ ನೀಅರಳಮೊಗ್ಗೆಯ ಹೆರಳಿಗ್ಹಾ ಕುತಕುರುಳು ತಿದ್ದುವ ತರಳೆಯ ಕಂಡುಇರಳು ಹಗಲು ಬಾರಳು ಎನ್ನುತಮರುಳುಗೊಂಡರೆ ಬರುವಳೆ 7 ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲುನಷ್ಟವಾಗುವುದು ಅಷ್ಟೈಶ್ವರ್ಯವುಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನುಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕದುಷ್ಟರ ಎದೆಯ ಮೆಟ್ಟಿ ಸೀಳುವೆನುಗುಟ್ಟಿಂದ ನಾರಿಯ ಕೊಟ್ಟುಕಳುಹಲುಪಟ್ಟದ ರಾಣಿಯೊಳಿಟ್ಟುಕೊಂಬೆ 8 ಕರವ ಬಾಚಿದನುಬಾಚಿ ಹಿಕ್ಕುವಂಥ ಪ್ರಾಚೀನವೇನಿದುವಾಚನಾಡು ಮೀನಲೋಚನೆ ಎನ್ನಲುಆಚರಿಸಿ ಮುಂದುತೋಚದೆ ಖಳನವಿಚಾರಿಸಿಕೊ ಶ್ರೀಚಕ್ರಪಾಣಿ 9 ಪೊಡವಿಪತಿಗಳ ಮಡದಿ ನಾನಾಗಿಬಡತನವು ಬಂದೊಡಲಿಗಿಲ್ಲದೆನಾಡದೊರೆಗಳ ಬೇಡುವುದಾಯಿತುಮಾಡುವುದೇನೆಂದು ನುಡಿದಳುಕೇಡಿಗ ಕೀಚಕ ಮಾಡಿದ ಚೇಷ್ಟೆಗೆಕಡಲಶಾಯಿ ಕಾಪಾಡಿದ ಎನ್ನನುಆಡಲಂಜಿಕೇನು ಷಡುರಸಾನ್ನದಅಡುಗೆ ರುಚಿಯ ನೋಡುವರೇ 10 ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-ದಾಡುವ ಮಾತನು ಬಾಡಿದ ಮುಖವನೋಡಿದನಾಕ್ಷಣ ತೊಡೆದು ನೇತ್ರವಬಿಡುಬಿಡು ದುಃಖ ಮಾಡದಿರುಪುಡುಕಿ ನಿನ್ನನು ಹಿಡಿದವನನ್ನು ಬಡಿದು ಯಮಗೆ ಕೊಡುವೆ ನೋಡೀಗತಡವ ಮಾಡದೆ ಗಾಢದಿ ಪೋಗು ನೀಮಾಡಿದ ಚಿಂತೆ ಕೈಗೊಡಿತೆಂದು 11 ಶಶಿಮುಖಿ ಕೇಸರಿ ಗÀಂಧವದಾಸಿಯರಿಂದ ಪೂಸಿಕೊಂಡುಹಾಸುಮಂಚದಲ್ಲಿ ಬೀಸಿ ಕೊಳುತಲಿಗಾಸಿ ಪಡುತಿರೆ ಆ ಸಮಯದಲಿಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆಈಸು ಸಂಶಯ ಬೇಡ ಭಾಷೆ ಕೊಟ್ಟೆ 12 ನಳಿನಮುಖಿಯು ಪೇಳಿದ ಮಾತನುಕೇಳಿ ಹರುಷವ ತಾಳಿದನಾಕ್ಷಣಖಳನು ಹೊನ್ನಿನ ಜಾಳಿಗೆಯ[ತೊಟ್ಟಿನ್ನುಳಿಯದಲೆ] ರತಿಕೇಳಿಗಿನ್ನುಕಾಳಗದ ಮನೆಯೊಳಗೆ ಬಾರೆಂದುಪೇಳಿದ ಸುಳುವು ಪೇಳಲು ಭೀಮಗೆಖಳನ ಕಾಯವ ಸೀಳುವವೇಳೆ ಬಂತೆನ್ನುತ ತೋಳ ಹೊಯಿದ 13 ನಾರಿಯಿನ್ಯಾವಾಗ ಬರುವಳೋಯೆಂದುದಾರಿಯ ನೋಡುವ ಚೋರ ಕೀಚಕನುತೋರಿದ ಠಾವಿಲಿ ಸೇರುವ ಬೇಗನೆಊರೊಳಗಾರು ಅರಿಯದಂತೆಕ್ರೂರನು ಮೋಹಿಪತೆರದಿ ಎನಗೆನಾರಿಯ ರೂಪ ಶೃಂಗರಿಸು ನೀನೆಂದುವಾರಿಜಮುಖಿಯ ಮೋರೆಯ ನೋಡಲುನೀರೆ ದ್ರೌಪದಿ ತಾ ನಾಚಿದಳು14 ಬಟ್ಟ ಮುಖಕೆ ತಾನಿಟ್ಟಳು ಸಾದಿನಬಟ್ಟು ಫಣೆಯಲಿ ಇಟ್ಟು ಕಣ್ಣಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ ಬೆರಳಿಗಿಟ್ಟಳು ಉಂಗುರವಿಟಪುರುಷರ ದೃಷ್ಟಿತಾಕುವಂತೆ15 ಮುತ್ತಿನ ಮೂಗುತಿ ಕೆತ್ತಿದ ವಾಲೆಯುಇತ್ತೆರÀ ಬುಗುಡಿಯು ನೆತ್ತೀಗರಳೆಲೆಚಿತ್ರದ ರಾಕಟೆ ಉತ್ತಮಕ್ಯಾದಿಗೆಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾಹಸ್ತದ ಕಡಗವು ಮತ್ತೆ ಚೂಡ್ಯ ವಂಕಿಮುತ್ತಿನ ಹಾರವು ರತ್ನದ ಪದಕವುಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲುಹಸ್ತಿನಿಯೋ ಈಕೆ ಚಿತ್ತಿನಿಯೊ16 ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧತೊಡೆದು ತಾಂಬೂಲ ಮಡಿಸಿಕೊಡುತಪ್ರೌಢನ ಸ್ತ್ರೀರೂಪ ನೋಡಲು ಖಳನುಕೊಡದೆ ಪ್ರಾಣವ ಬಿಡನೆಂದಳುಮಾಡಿದ್ಯೋಚನೆ ಕೈಗೂಡಿತು ಇಂದಿಗೆನೋಡು ಆ ಕೃಷ್ಣನು ಹೂಡಿದ ಆಟವಮಡದಿ ನೀನೆನ್ನ ಒಡನೆ ಬಾರೆಂದುನಡೆದ ಖಳನ ಬಿಡಾರಕೆ 17 ಇಂದುಮುಖಿ ಅರವಿಂದನಯನದ ಮಂದಗಮನೆಯು ಬಂದಳು ಎನ್ನುತನಂದನತನಯನ ಕಂದನ ಬಾಧೆಗೆಕಂದಿ ಕುಂದಿ ಬಹು ನೊಂದೆನೆಂದಹಿಂದಿನ ಸುಕೃತದಿಂದಲಿ ನಿನ್ನೊಳಾ-ನಂದವಾಗಿಹುದು ಇಂದಿಗೆ ಕೂಡಿತುಕುಂದದಾಭರಣ ತಂದೆ ನಾ ನಿನಗೆಚಂದದಿಂದಿಟ್ಟು ನೀನಂದವಾಗೆ18 ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊವಲಭರ್ತಾಕಂಡರೆ ಹಲ್ಲು ಮುರಿವರೊಬಲ್ಲವ ನಿನಗೆ ಸಲ್ಲದು ಈ ಕಾರ್ಯಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟಕೊಲ್ವಬಗೆ ಗೆಲ್ಲಲಾರೆನೆಂದುಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲುಕಲ್ಲೆದೆಯಲ್ಲ್ಲಿರೆ ಖೂಳ ನೊಂದ 19 ನಾರಿಯೊ ನೀನೇನು ಮಾರಿಯೊ ಇನ್ನೊಂದುಬಾರಿ ನೀ ಎನಗೆ ಮೋರೆ ತೋರಿಸೆಂದಧೀರನ ಸಮೀಪಬಾರದೆ ಓಡುವದಾರಿಯ ನೋಡುತಿರಲಾಗಬಾರದಂಥಾ ಪರದಾರರ ಮೋಹಿಪಕ್ರೂರಗೆ ಈ ರೂಪ ಘೋರವಾಗಿಹುದುಸಾರದ ಮಾತಿದು ಯಾರಾದರೇನೀಗಮಾರನ ತಾಪವ ಪರಿಹರಿಸುವೆ 20 ಸಮೀರಜ ಗುದ್ದಲು ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ 21 ಕೆಟ್ಟ ಕೀಚಕ ತಾ ತೊಟ್ಟ ಛಲದಿಂದಬೆಟ್ಟದಂಥ ದೇಹ ಬಿಟ್ಟಿನ್ನವನಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲುಭ್ರಷ್ಟನ ನೋಡುವುದೇನೆಂದಳುಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆಕೃಷ್ಣನ ದಯದಿ ಕಷ್ಟವು ಹಿಂಗಿತುಪಟ್ಟಣಕೀಸುದ್ದಿ ಮುಟ್ಟದ ಮುಂಚೆಗುಟ್ಟಲಿ ಪೋಗುವ ಥಟ್ಟನೆಂದ 22 ಅರಸಿ ನಿನ್ನೊಳು ಸರಸ ಬೇಕೆಂದಪುರುಷನ ಜೀವ ಒರೆಸಿ ಕೊಂದೆನುಹರುಷದೀ ಪುರದರಸು ನಮ್ಮನುಇರಿಸಿಕೊಂಡೊಂದೊರುಷವಾಯಿತುಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದುಸರಸಿಜಾಕ್ಷಿಯು ಕರೆಸಿ ನಿನ್ನೊಳಗಿರಿಸದಿದ್ದರೆ ಹಯವದನನಸ್ಮರಿಸಿ ಗದೆಯನು ಧರಿಸುವೆ23
--------------
ವಾದಿರಾಜ
ಭೀಮಸೇನನ ಸ್ತ್ರೀವೇಷ ಭೀಮನು ಸರ್ವಜನಾ ಮೋಹಿಸುವಂಥಕಾಮಿನಿ ರೂಪವ ತೊಟ್ಟನು ಪ ಸೋಮ ಸಮಾನನ ತಾಮರಸಾಂಬಕಹೇಮಾಂಬರ ಕಂಠೀಮಣಿ ಗಣ ಸು -ತ್ರಾಮ ಕಾಮಿನಿಯಾ ಮೋಹಿಪ ಅಬಿ -ರಾಮರೂಪ ನಿಸ್ಸೀಮ ಬಲಾಢ್ಯ ಅ.ಪ. ಬಟಕುಚಪಟ ಕರಪುಟದಿಂದ ಹಿಗ್ಗಿಸಿ ತೀಡುತ ಅಂ-ಗುಟ ತುದಿಲೆಳೆದೆಳೆದುಟಿ ರಕ್ತಿಮೆಯನು ನೋಡುತಕುಟಿಲಾಳಕನ್ಯಾವರಿಸುತ ಪಟುಮಾತಾಡುತವಿಟರಿಗೆ ಸ್ಮರಸಂಕಟವನು ಹೃದಯದಲೂಡುತ ಪುಟ್ಟಚಂಡ ಹಾರಿಸಿ ನಟನೆ ಮಾಡುವಾ -ರ್ಭಟಕಂಜಿಹ ವಿಟಪಟಲ ಹಾಂಗಿರಲದುವಟುರಿದ್ದರು ಯತಿ ಮಠಮಂದಿರ ಲಂ -ಪಟವ ಬಿಟ್ಟ ಮಿಟಿಮಿಟಿ ನೋಡುವರೋ 1 ಕರಿಕಲಭಗಮನ ಸೊರಗಿದ ಕಟಿಕಂಠೀರವುವಿಠಲ ನಯನಜತ ಎರಳೆಗಳ್ ಮನೆಯನು ಸೇರವುಸರಸ ಸ್ವರದಿಂದ ಪರಿಭ್ರಮಿಸಿತು ಕಲಕಿರವುಸುರನರವರ ಸುಂದರಿಯರ ಚಲುವಿಕೆ ಮಾರವು ಹೆರಳ್ ಬಂಗಾರವು ಮಲ್ಲಿಗೆ ಸರಗೀ ಸರಹರಳ್ ಕಂಕಣ ಬಳೆ ಸರಳ್ ಬೆರಳುಂಗುರಅರಳ್ ಮಲ್ಲಿಗೆ ಸರ ಕೊರಳ್ ಗಂಧವ ಕಂಡುಮರುಳ್‍ಗೊರಡ ಜನ ಹಗಲಿರುಳು ಧೇನಿಪರೊ 2 ಮೃಗಮದತಿಲಕವು ಮುಗುಳ್ ನಗೆಮೊಗ ಬಿಂಬಾಧರಖಗಯುಗದಂದದಿ ಝಗಝಗಿಸುತಿಹ ಪಯೋಧರಅಘಹರ ರಾಜಗೋಪಗ ಸಖ ಪಾರ್ಥ ಸಹೋದರಬಗೆ ಬಗೆಯಲಿ ಮನದಗ ಅಘಹರನ ಕೃತಾದರಮುಗುಳ್ ಮಲ್ಲಿಗೆ ಸರ ತೆಗೆತೆಗೆದ್ಹಾಕುತಸೊಗಸು ಸುಗುಣರೂಪ ತಗುಬುಗಿಲೆನುತಿರೆಜಗದ ಜನರ ಮನ ಭುಗಿಭುಗಿಲೆನುತಿರೆಬಗೆ ಬಗೆಯಲಿ ಒಂದ್ಹಗಲ್ಯುಗವಾಗೆ 3
--------------
ರಾಜಗೋಪಾಲದಾಸರು
ಭೀಮಾ ಭವಭಯಕತಿದೂರಾ ಭೀಮಾಶಂಕರನವತಾರಾ |ಭೀಮಾತೀರದಲಿಹ ವಾಯುಕುಮಾರಾ ಸಮರಂಗಣಧೀರಾ 1 ಮಾಯಾ ಮಾಯಾ ಪಾಶದ ಸಂಗಮವನು ಬಿಟ್ಟಾ |ಲಂಕಾಪುರಿ ಸುಟ್ಟಾ 2 ಶರಣಾಗತ ಭಕ್ತರ ಕಾವಾ | ಶರಣ ಜನರಂತರ್ಭಾವಾ | ಶರಣಾ ಬ್ರಹ್ಮಾದಿಗಳಿಗೆ ಮಹದೇವಾ ಸಂಜೀವನ ತಾವಾ 3 ಕರ್ತಾ ನೆಲವಿಗಿ ಪುರದೊಳಗೆ | ಕರ್ತಾ ರಾಮರ ಸ್ಥಳದೊಳಗೆ | ಕರ್ತಾನುಷ್ಠಾನಿಕ ಸೇವಕರಿಗೆ | ಭಾವನ ಇದ್ಧಾಂಗೆ 4 ರಾಮಾ ಲಕ್ಷ್ಮಣನ ಬಂಧೂ | ರಾಮನ ಸೇವಕನೆಂದೂ |ರಾಮಾಶಂಕರ ಭೇದಿಲ್ಲೆಂದೂ | ತಿಳಿದವ ಸುಖಸಿಂಧೂ 5
--------------
ಭೀಮಾಶಂಕರ
ಭೀಮಾನದೀ ತೀರಾವಾಸ ಪಾಹಿ ಪಾಹಿ ಪಾಂಡುರಂಗ ಪ ಜಾರಚೋರನೆಂಬರೆಂದು ಜಾರಚೋರನೆಂದು ನಿನ್ನ ಪುಂಡರೀಕ ಮುನಿಕರೆದ ||ಪಾಂಡುರಂಗ|| 1 ಅನ್ಯ ಭೋಗಗಳನು ಬಿಟ್ಟು ನಿನ್ನ ಪಾದವ ಧ್ಯಾನಿಸುವರ ತೋರಿಸುವೇ ಚಿಹ್ನೆಯಿಂದ ||ಪಾಂಡುರಂಗ|| 2 ರಾಜೇಶ ಶ್ರೀಹಯಮುಖ ಜ್ಞಾನಶೂನ್ಯಾರ್ತರ್ಗೆ ಸಾಯುಜ್ಯವಿತ್ತು ಪೊರೆವ ವಿಠಲ- ನೆಂದು ಭೂಮಿಯೊಳು ಮೆರೆವ ||ಪಾಂಡುರಂಗ|| 3
--------------
ವಿಶ್ವೇಂದ್ರತೀರ್ಥ
ಭುಜಗ ಭೂಷಣ ಪಾಹಿ ಪ ಗಜ ಅಜಿನಾಂಬರ ಅ.ಪ. ಗಿರಿಜೆಯ ಮನೋಹರ | ಸುರಪತಿ ಗುರುವರಕರುಣದಿಂದಲಿ ತವ | ಚರಣ ಸ್ಮರಣೆ ಕೊಡು 1 ಪಂಚಸುವದನನೇ | ಸಂಚಿತಪ ಕೆಡಿಪನೇಪಂಚ ಬಾಣನ ಪಿತ | ಮಂಚ ಪದಾರ್ಹನೆ 2 ತ್ರಿಶೂಲ ಡಮರುಗಾ | ಭಸುಮಾದಿ ಭೂಷಿತಾದಶ ಶಿರ ಮದಹರ | ನಿಶಿಚರ ಗುರುವರ3 ಪಕ್ಷೀಂದ್ರ ವಂದ್ಯರಾ | ಅಕ್ಷಾರಿ ಹರಿವರಾಕುಕ್ಷ್ಯುದ್ಭವ ಹರ | ದಕ್ಷಾದ್ವರ ಹರ 4 ವಿಷಧಿಯೋಳುದಿಸಿದಾ | ವಿಷಗಣ ಭುಜಿಸಿದಾವಿಷಕಂಠನೆನಿಸಿದ | ನಿಶಿಚರ ವರಪ್ರದ 5 ಗಗನೇಶಾ ಜನಕಾ | ಮೃಗಾಂಕ ಶ್ರೀ ಶುಕಾನಗಪಗೆ ಪೋಷಕ | ಷಣ್ಮುಖ ಜನಕಾ 6 ತ್ರೈರೂಪಾ ತ್ರಿನಯನಾ | ಗುರು ಗೋವಿಂದ ವಿಠಲನಾನಿರುತದಿ ಸ್ಮರಣಾ | ಭರಣ ಶೋಭನ 7
--------------
ಗುರುಗೋವಿಂದವಿಠಲರು
ಭುವನ ತ್ರಾಣ ಸದ್ಭವ ಪ್ರವೀಣ ಪ ಶ್ಲೋಕ : ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ | ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ || ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ1 ಪದ: ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ | ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ | ಮಾಡಿದೆನಯ್ಯಾ | ಮುಂದೇನೋ ಉಪಾಯ 2 ಶ್ಲೋಕ: ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು | ಜೀವಾತ್ಮಗೆ ಪೇಳ್ವಿರೊ || ಶ್ರೀ ವತ್ಯಾಂಕÀನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ | ಪದ: ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ | ನಾ ಭ್ರಮಿಸಿದೆ ಬುದ್ಧಿಸಾಲದೇ || ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ | ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ | ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ 2 ಶ್ಲೋಕ : ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ | ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು || ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ | ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ 3 ಪದ: ವನಧಿ ಲಂಕಾಪುರವ ನೈದಿದೀ|| ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ | ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ | ಆರ್ಭಟಿಸಿ | ರಕ್ಕಸರ ಸೀಳಿದಿ 3 ಶ್ಲೋಕ : ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ | ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ || ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ 4 ಪದ: ಯೋಗ್ಯವ | ಬದಲು ಕಾಣದೆ ದೇವಾ ಸದ್ಭಾವ | ನೋಡಿ | ಗಂಧಮಾದನವ | ಭವ | ಮೊರೆ ಐದಿವರವ 4 ಶ್ಲೋಕ : ಸಂತುಷ್ಟನಾಗಿ ಸ್ವಯಂ | ನಿಂತ್ಹಾಂಗೆ ನೀ ಹುಟ್ಟಿದಿ | ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ | ಪದ: ಭೀಮಾಸೇನನೆಂಬುವರು | ಧೃತರಾಷ್ಟ್ರನ್ನ ಸುತರು | ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು || ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು | ಸುರತರು | ಮೋಕ್ಷ ಮಾರ್ಗವ ತೋರು 5 ಶ್ಲೋಕ : ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ | ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ | ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ | ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ 6 ಪದ : ದ್ರುಪದಜೆ ಎನಿಸಿದಳು | ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು | ಧೀರನೆನವೆ ಹೃದಯದೊಳು ಹಗ ಲಿರುಳು | ಭಜನೆಗಳಿಪ್ಪನಂಘ್ರಿಗಳು || 6 ಶ್ಲೋಕ : ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ | ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ || ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ | ಪದ : ಸೂನು | ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು | ವರ ಪಡೆದನು | ಭಾವೀ ಶಿಷ್ಯ ನಿನ್ನನು | ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು | ತುರ್ಯಾಶ್ರಮವನು ಯಿನ್ನು 7 ಶ್ಲೋಕ : ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ | ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ || ಗರ್ವೋಚಿÀಸಲ್ಲೋಕಕೆ | ಚೂಡಾಮಣಿ ಪದ: ರಜತಪೀಠ ಪುರದಲ್ಲಿ | ನೀ ಕಲಿಯುಗದಲ್ಲಿ | ಇರುವಿ ಮತ್ತೊಂದರಲ್ಲಿ | ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ8
--------------
ವಿಜಯದಾಸ