ಒಟ್ಟು 14471 ಕಡೆಗಳಲ್ಲಿ , 133 ದಾಸರು , 7276 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿ ಪಾಲಿಸಿವಳಾ ಪ ಬುದ್ಧಿಯಲಿ ನೆಲಸಿದ್ದು | ವಿದ್ಯೆ ಪಾಲಿಸುತಾ ಅ.ಪ. ಏಸೊ ಜನ್ಮದ ಪುಣ್ಯಾ | ರಾಶಿವದಗಿತೊ ಕಾಣೆಆಶಿಸುತ್ತಿಹಳಿವಳು | ದಾಸದೀಕ್ಷೆಯನುಆಸು ಸ್ವಪ್ನದಲಿ ಕೈ | ಲಾಸ ವಾಸನಿಂದಲಿಲೇಸು ವರ ಪಡೆದಿಹಳು | ಮೇಶ ಮಧ್ವೇಶಾ 1 ಮಧ್ವ ರಮಣನೆ ಕೇಳೊ | ಮಧ್ವಮತ ಪದ್ಧತಿಯುಬುದ್ಧಿಯಲಿ ನಿಲ್ವಪರಿ | ತಿದ್ದಿ ಹೇಳುವುದೋ |ಶ್ರದ್ಧೆಯಲಿ ಹರಿ ಗುರೂ | ಶುದ್ಧ ಸೇವೆಲಿ ಭವದಅಬ್ಧಿಯನೆ ದಾಟಿಸೋ | ಸಿದ್ಧ ಮುನಿವಂದ್ಯಾ 2 ನಿತ್ಯ ಮಂಗಳನೇ 3 ಮಾವಿನೋದಿಯೆ ಹರಿಯೆ | ಕಾವ ಕರುಣೀ ಎಂದುಓದಿ ನಿನ್ನಡಿಗಳಿಗೆ | ಧಾವಿಸುತ್ತಿಹೆನೋ |ನೀವೊಲಿದು ಕನ್ಯೆಯನು | ಕೈ ಪಿಡಿದು ಪಾಲಿಪುದುದೇವ ದೇವೋತ್ತಮನೆ | ಲಕ್ಷ್ಮಿ ನರಹರಿಯೆ 4 ಕಾಕು ಜನಗಳ ಸಂಗನೀ ಕೊಡದೆ ಕಾಯೊ ಹರಿ | ಲೋಕೇಶ ವಂದ್ಯಾ |ಲೋಕ ಗುರು ಗೋವಿಂದ | ವಿಠಲ ಮದ್ಭಿನ್ನಪವನೀ ಕೊಟ್ಟು ಕನ್ಯೆಯನು | ಉದ್ಧರಿಸೊ ಹರಿಯೇ 5
--------------
ಗುರುಗೋವಿಂದವಿಠಲರು
ಪರಿ ಬಹಳ ನಿಷ್ಠುರದ ವಚನಗಳನಾಡುವರು ಜನರು ಪ ಎಷ್ಟು ತಪವನೆ ಮಾಡಿ ಪಡೆದೆನೊ ನಾನಿನ್ನ ಕಷ್ಟವಾಯಿತು ನಿಂದೆ ನುಡಿಯ ಕೇಳುವುದು ಅ.ಪ ಕೊಂಡು ಪೋಗಲಿ ಬೆಣ್ಣೆ ಪಾಲು ಧದಿ ಭಾಂಡಗಳ ದುಂಡು ನಗುಮೊಗ ಚೆಲುವ ನಿನ್ನ ಮಗನು ಕಂಡರೆಮ್ಮನು ಮೋರೆ ತಿರುಗಲೇಕೆ ಇಂಥಾ ಪುಂಡು ಹುಡುಗನೆ ನಿನ್ನ ಮಗನೆಂದು ದೂರುವರು 1 ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ ತುರುಕರುಗಳೆಲ್ಲ ಬಲು ಕೃಶವಾದವಮ್ಮ ಹರಿವ ಯಮುನಾಜಲದೊಳ್ ಆದ ಅವಿವೇಕವನು ಅರುಹಲೆಮ್ಮಯ ಮನವು ಜರಿವುದೆಂದಾಡುವರು 2 ಸಂಸಾರ ಮೋಹವನು ತೊರೆದು ಎನ್ನಲಿ ಮನದ ಸಂಶಯವ ಬಿಡಿ ಬಿಡಿ ಪ್ರಸನ್ನರಾಗಿರಿ ಎಂದ ಧ್ವಂಸವಾಯಿತು ಎಮ್ಮ ಅಭಿಮಾನ ಇವ ಚಂದ್ರ ವಂಶಕೆಂತಹ ಕೀರ್ತಿ ತಂದನೆಂದಾಡುವರು 3
--------------
ವಿದ್ಯಾಪ್ರಸನ್ನತೀರ್ಥರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಪರಿ ನಡಿಯುತ ಪುಣ್ಯವಂತರಾದ ಪ ಹರುಷಾದಿ ಆಚರಿಸುತಾ ಪಾದ ಬಿಡದೆ ನಿಜಭಕ್ತಿಯಲಿರುವಂಥ 1 ಪರಿಪರಿ ಶೋಧಿಸಿ ಮಹಿಮೆ ಸ್ಥಿರವಾಗಿ ಮನದಲ್ಲಿ ತಿಳಿದು ಸಿದ್ಧಿಸಿದಂಥಾ 2 ಇಷ್ಟದಿಂದ ಅತಿಯೋಗ್ಯರ ಕೂಡಿ ಶ್ರೇಷ್ಠ ಜ್ಞಾನಾಧಿಕ ನಿಷ್ಠಾರು ಎನಿಸಿದ ಶಿಷ್ಟ ಮಾನವ ಸಾಧು ಸಜ್ಜನರಾದಂಥ 3 ಮಾನವನಾಗುವದೇ ಘನಸಾರವನೆ ಗ್ರಹಿಸಿ ಮಾನಿತರೆನಿಸೀದ ಮಹಿಮರಾದಂಥಾ 4 ಭೂಮಿಪಾಲಕನಾದ `ಹೆನ್ನೆವಿಠ್ಠಲನ’ ಪ್ರೇಮದಿ ಹೇದಯಾದಿ ಪ್ರಣಿತಾರ್ಥವು ಹಿಡದು ಸ್ವಾಮಿ ನೀನೇಗತಿ ಸಕಲಾವು ನೀನೆಯೆಂಬೊ5
--------------
ಹೆನ್ನೆರಂಗದಾಸರು
ಪರಿಪಾಲಯ ಕಂಸಾರೆ ಪ ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ | ಪರಮ ಪುರುಷ ಶೌರೇ ಮುರಾರೇ ಅ.ಪ. ಪಾದ ಜಲಜನಾಭನಾದ ಸುಲಲಿತ ಮಹಿಮ ಹರೇ ಮುರಾರೆ 1 ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ | ಕುಂಡಲಧರ ಹರೇ ಮುರಾರೇ 2 ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ ದುಷ್ಟಕುಲಾಂತಕನೇ ಶ್ರೀ ಕೃಷ್ಣ 3
--------------
ವಿಜಯದಾಸ
ಪರಿಪಾಲಿಸು ಎನ್ನನು| ಶ್ರೀ ಜಗದಂಬ| ಪರಿಪಾಲಿಸು ಎನ್ನನು ಪ ಕರುಣಾಶರಧಿ ಶಂಕರಿ| ಕಮಲವ ಸ್ಮರಿಸಿ ಬೇಡುವೆ ಅ.ಪ ರುಧಿರಬೀಜಸಂಹಾರಿಣಿ|| ವಧಿಸಿ ಶುಂಭ ನಿಶುಂಭ ದೈತ್ಯರ|| ಮಹಿಯನು ಪೊರೆದ ಮಾತೆ1 ಲಂಬೋದರ ಜನನಿ| ಶ್ರೀ ಜಗದಂಬ| ಕÀಂಬುಕಂಧರೆ ಸುಗುಣಿ|| ರುದ್ರಾದ್ಯಮರ ವಂದಿತೆ|| ಸುಮನೋಹರೆಯೆ ಶಂಕರಿ2 ಅರುಣಾಸುರನ ವಧಿಸಿ| ಮೆರೆವ ನಂದಿನಿನದಿಯ ಮಧ್ಯದಿ ಲಾಲಿಸಿ ಪೊರೆವ ಜನನಿ 3 ದುಷ್ಟದಾನವ ಮರ್ದಿನಿ|| ನೆಷ್ಟು ಪೊಗಳಿದರೆನಗಸಾಧ್ಯವು|| ಸೌಭಾಗ್ಯದಾಯಿನಿ 4 ಶಂಕರಿ ಘನಸುಗುಣಿ|| ಗೆಲಿದು ಮೆರೆಯುವ|| ಕಿಂಕರನ ಮನದಿಷ್ಟವೀಯುತ 5
--------------
ವೆಂಕಟ್‍ರಾವ್
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ ಧರ್ಮಪಥವನು ತೋರಿ ಉದಾರಿ ಪ ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ ನಿರಯಾ ಪಾತ್ರರ ಸಲಹಿದಿನೀ 1 ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ ವನಜನಾಭನ ಸ್ತಪಿಸಿದ ನೀ 2 ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ ಚರಿಪ ಜ್ಞಾನಿಯೆ ನಮಿಸುವೆನು 3
--------------
ಶಾಮಸುಂದರ ವಿಠಲ
ಪರಿಪಾಹಿ ಗುರು ರಾಘವೇಂದ್ರ ಪ ಶರಣರ ಪೊರೆಯಲು | ವರ ಮಂತ್ರಾಲಯಪುರದಲಿ ನೆಲಿಸಿಹೆ | ಕರುಣಿಗಳರಸಅ.ಪ. ಪಿತನ ಬಾಧೆಗೆ ಲವ | ವ್ಯಥೆಯನು ಪಡದಲೆರತಿಪತಿ ಪಿತನೆ ಸ | ರ್ವೋತ್ತಮನೆಂದೂರದೆ 1 ದ್ವಿತಿಯ ಯುಗದಲಿ | ದೈತ್ಯನಲ್ಲುದಿಸುತಸೀತೆಯ ರಮಣನ | ಪ್ರೀತಿಯ ಪಡೆದೆಯೋ 2 ದ್ವಾಪರದಲಿ ಪ್ರ | ತೀಪನ ಸುತನೆನಿಸೀ ಶ್ರೀಪತಿ ಕೃಷ್ಣನ | ಪ್ರೀತಿಯ ಪಡೆದೇ 3 ಇಷ್ಟವಿಲ್ಲದ ಪುಣ್ಯ | ಎಷ್ಟೂ ಗಳಿಸಿ ನೀವುಶಿಷ್ಟರ ಪಾಲಿಸೆಂದು | ಕೃಷ್ಣನ ಮೊರೆಯಿಟ್ಟೆ 4 ವ್ಯಾಸರಾಯರಾಗಿ | ಭೂಸುರ ಸುಜನರಕ್ಲೇಶವ ಹರಿಸಿದೆ | ದಾಸಕೂಟಕೆ ಹಿರಿಯಾ 5 ಶ್ರೀಶನರಹರಿ | ವ್ಯಾಸ ರಾಮಾ ಕೃಷ್ಣಈಸು ರೂಪಗಳಲ್ಲಿ | ವಾಸವು ವೃಂದಾವನದಿ 6 ಪರಿಪರಿ ವಿಧ ನಿಮ್ಮ | ಚರಣವ ಸ್ಮರಿಸುವನರರ ಮನೋರಥ | ಹರಿಯ ಕರುಣಿಪ 7 ಸರಸಿಜಾಸನ ಮುಖ | ಸುರಪ ದೇವರ್ಕಳಲ್ಲಹರಿಯನು ಚರರೆಂಬಾ | ವರಮತಿ ಪಾಲಿಸೋ8 ಭವ ಭಯ ಹರಿಸೀ 9
--------------
ಗುರುಗೋವಿಂದವಿಠಲರು
ಪರಿಭವ ತಾಪಹರಣ ಪ ದಯದಿ ಯುವತಿಯಕುಲ ಉದ್ಧಾರಣ ಜವದಿ ಕರಿಧ್ರುವಬಂಧಮೋಚನ ಯುವತಿಗಕ್ಷಯವಿತ್ತು ಒಲಿದು ಹಯವ ಪಿಡಿದು ರಥವ ನಡೆಸಿದ ಭುವನ ಬ್ರಹ್ಮಾಂಡ ಸೂತ್ರಧಾರಕ ಶಿವಸುರಾರ್ಚಿತ ಪೊರೆ ಸುಹೃದಯ ಅ.ಪ ಪತಿತಪಾವನ ಶ್ರೀಶಕೇಶವ ಸಹಸ್ರಾಕ್ಷಶಯನ ಮಾಧವ ಭೋಗ ಗರುಡಗಮನ ಪತಿತಪಾವನೆ ಇಂದಿರೆಂiÀi ಜೀವ ಜಗದಾದಿದೇವ ಯತಿತತಿನುತ ಪವಿತ್ರನಾಮ ಕ್ಷಿತಿಸುತೆಪತಿ ಪವಿತ್ರ ಮಹಿಮ ಸತಿಯರವ್ರತಹರ ಜಿತಮಹಮುಪ್ಪುರ ಕೃತ್ರಿಮ ಮುರಹರ ಮಥನಸಾಗರ ನುತಿಪರ್ಹಿತಕರ ಸುಪಥರಾಧಾರ ಹಿತದಿ ಪೊರೆಯೆನ್ನ ಕರುಣಾನಿಕರ 1 ನಿರುತ ಜನರ ಕಲ್ಪತರು ನೀನು ಭಯಭಕ್ತಿಯಿಂದ ಸ್ಮರಿಸಿ ಬೇಡ್ವರ ಪರಮಸುರಧೇನು ಸುರಗಂಗಾಜನಕ ಶರಣು ಸಜ್ಜನರಮಿತ ದಯಾ ಪರನು ವಿಶ್ವರಕ್ಷಕನು ಮರಣರಹಿತ ಮದನತಾತ ಶುಭ ಸಚ್ಚರಿತ ದುರುಳ ಸಂಹರ ಶರಣುಮಂದಾರ ಸುಗುಣರೋದ್ಧಾರ ಶರಣಭಜಕರ ವರಸುಖಕರ ಕರಣಿಸಭವನೆ ತ್ವರಿತ ಸುವರ 2 ಕುಸುಮನಯನ ಸ್ವತಂತ್ರ ಮಹಲೀಲ ದಿವಕೋಟಿ ಪ್ರಭಾಕರ ಕುಸುಮಗಾತ್ರ ಮಹತಂತ್ರ ಮಾಯಜಾಲ ಗೋವರ್ಧನೋದ್ಧಾರ ಕುಸುಮಧರ ಕುರುಕುಜನಕುಲಕಾಲ ಗೋಪಾಲಬಾಲ ಕುಸುಮನಾಭ ಕೌಸ್ತುಭಾಂಬರ ಅಸಮ ತುಲಸಿಮಾಲಾಲಂಕಾರ ಒಸೆದು ದಾಸನ ಪುಸಿಯೆಂದೆನಿಸದೆ ಹಸನುಮತಿಯಿತ್ತು ಪೋಷಿಸನುದಿನ ಎಸೆವ ತವಪಾದ ನಂಬಿ ಮರೆಬಿದ್ದ ಅಸಮದಯಾನಿಧಿ ಮಮ ಶ್ರೀರಾಮ 3
--------------
ರಾಮದಾಸರು
ಪಲಿಮಾರು ಮಠದ ಶ್ರೀರಘುವರ್ಯರ ಕೃತಿಗಳು ಯುಗ್ಮ ಉಡುಪಿನ ಕೃಷ್ಣನೇ 1 ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾ ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ2 ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ ಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ 3 ಮೊಸರು ಭಾಂಡವನೊಡೆದು ಬೆಣ್ಣೆಯನಸುನಗುತಲೀ ಭಕ್ಷಿಸೀ ಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ4 ಸತಿ ನುಡಿದಳು 5 ವಿತತ ವೈಭವ ಈ ಪರಿಯಲಿಪ್ರತಿಮೆಯನ್ನೇ ಮಾಡಿಸಿ ಸತತ ಪೂಜೆಯ ಮಾಳ್ಪರೀ ಅತಿ ಪ್ರೀತಿಯಿಂದಲಿ ಕೊಡು ಎನಗೆ 6 ಪರಿ ಪೇಳೆ ವಿಶ್ವ-ಕರ್ಮನಿಂದಾ ಮಾಡಿಸಿ ಕಮಲನಾಭನು ಇತ್ತು(ದ್ದು) ಅದರಲಿ ವಿಮಲ ಪೂಜೆಯ ಕೊಂಡನು 7 ಶರಧಿ ತೀರದಲಿತ್ತನು8 ನಾವೆಯಲ್ಲಿ ಗೋಪಿಚಂದನ ಸಂವೃತಾರ್ಚಯು ಬರುತಿರೆ ನಾವೆಯೊಡೆಯಲು ಮಧ್ವಮುನಿಪನು ಭಾವದಿಂದಲೆ ತಂದನು 9 ಅವರರೊಡೆಯ ಶ್ರೀ ಮರುತಪತಿತತ್ ಪ್ರತಿಷ್ಠೆಯ ವಿರಚಿಸಿ ಕುಮುದ ಬಂಧು ಕ್ಷೇತ್ರದಲಿ ನಿ-ನ್ನಮಿತ ಪೂಜೆಯ ಮಾಡಿದ 10 ನನ್ನ ಹಿರಿಯರ ಪುಣ್ಯ ಫಲಿಸಲು ನಿನ್ನ ಪೂಜೆಯ ಮಾಡುತಧನ್ಯನಾದೆನು ಮುಕ್ತಿ ಕರಗತ ಎನ್ನಗಾಯಿತು ಕೃಷ್ಣನೇ 11 ಮಧ್ವಪೂಜಿತ ರಕ್ಷಿಸೆನ್ನನು ಸಾಧ್ವಸೋಝ್ಝಿತ ಸದ್ಗುಣ ಸಾಧ್ವಲಂಕೃತ ವೇಷ ಮುಕ್ತಿ ಪ-ದಾಬ್ಜನೇ ರಘುತಿಲಕನೇ 12
--------------
ಅನ್ಯದಾಸರು
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಪವಮಾನ - ಪವಮಾನ - ಪವಮಾನ ಪ ಪ್ರಧಾನ ಮರುತ ನಿ | ನ್ನಾಧೀನವು ಜಗ ನಿನ | ಗೇನು ಬೇಡೆ ಸುಜ್ಞಾನ ವೀವುದೆಂ | ದಾ ನಮಿಸುವೆನೊ |ಗಾನ ಲೋಲ ಹರಿಗಾನಕೆ ಮನ್ಮನ | ಪೋಣಿಸುತನುದಿನ | ಪಾಲಿಸು ಪ್ರಾಣಾ ಅ.ಪ. ಮಣಿ ಭವ ಸಿಂಧು ಇಂದಿರೆ ಲೋಲನಅಂದ ಪದಾಬ್ಜಾನಂದದಿ ತುತಿಪಾನಂದೈಶ್ವರ್ಯವ ಇಂದೆ ಪಾಲಿಸಿ ಪೊರಿಮಂದಜಾಸನ ಸರಿ | ವಂದೇ ಅಸುರಾರಿ 1 ವಜ್ರ ಗರ ಅಧ್ವರ ಕರಿ ಸಿರಿ ಭೃಂಗ ಸಿರಿ ರಂಗನ ತೋರಿಸು ಎಂಬೆನು ಜೀಯಾ | ನಮಿಸುವೆನು ಹರಿಪ್ರಿಯಾ 2 ಕಲಿ ಪ್ರಾಬಲ್ಯ | ದೈತ್ಯರು ಎಲ್ಲ ವೈರಂಗಳೆಲ್ಲಸಾಧಿಸೆ ಬಲ್ಲ | ಮಣಿಮನ ಸೊಲ್ಲ | ಕೇಳುತಲೆಲ್ಲ ಬರುತಿಲ್ಲೆಲ್ಲ | ದುರ್ಮತಗಳ ಬೀರುತ ಬರುತಿರಲು |ಜಗಪುಸಿ ಎನಲು | ದೇವರಿಲ್ಲೆನಲು | ಐಕ್ಯ ಪೇಳಲುಜ್ಞಾನವಳಿಯಲು | ಸಜ್ಜನ ನೋಯಲು | ಮನವು ಕರಗಲುಹರಿಯು ಪೇಳಲು | ನೀ ಬರೊಸೊಲ್ಲು | ಎಲ್ಲೆಲ್ಲು | ಎಲ್ಲೆಲ್ಲು ||ತಪವನು ಮಾಡಲು | ನಡುಮನೆ ದ್ವಿಜನುವರ ಕೊಟ್ಟನು ತಾನನಂತೇಶ್ವರನುಕಂಬದ ಮೇಲೇ ರೋರ್ವ ಪೇಳಿದನುನಿನ್ನವತಾರ ವಿಚಾರವನು |ನೀನರಿದಂದೇ | ನಿನ್ನಿಂದೇ | ನಿನ್ನಿಂದೇ ||ದ್ವಿಜನಲಿ ಬಂದೆ | ಹುರಳಿಯ ತಿಂದೆ | ತಿಂತ್ರಿಣಿಯಿಂದೆ ಋಣ ತೀರಿ ತೆಂದೆ | ಹರಿ ಪ್ರೇಕ್ಷರಿಂದೆ | ಸನ್ಯಾಸ ಪೊಂದೆ ಗಂಗೆಯ ತಂದೆ | ಎನ ತಂದೆ | ಎನ ತಂದೇ ||ವ್ಯಾಸರ ಕಂಡುಪದೇಶವಗೊಂಡೆ | ಹೇ ಸಮೀರ ದು-ರ್ಭಾಷ್ಯವ ಖಂಡಿಸಿ ಶ್ರೀಶ ಸರ್ವೋತ್ತಮಆ ಶಿವ ಮುಖ ಹರಿ | ದಾಸರೆಂದು ಮ |ತೀ ಸಮಸ್ತ ಜಗ ಲೇಸು ಸತ್ಯವೆಂದುಪದೇಶಿಸಿದೆ ಗುರುವರ್ಯ | ಗುರುವರ್ಯ ||ಇಪ್ಪತ್ತು ಒಂದೆ | ಕು ಭಾಷ್ಯವ ಜರಿದೆಮುವತ್ತಾರೊಂದೆ | ಗ್ರಂಥವ ಮಾಡ್ಡೆಶಿಷ್ಯರಿಗ್ಹೇಳ್ದೆ | ಮಾಯವ ಜರಿದೆಉಡುಪಿಗೆ ಬಂದೆ | ಗೋಪಿಯಲಿಂದೆಕೃಷ್ಣನ ತಂದೆ | ಇಲ್ಲೆ ನಿಲಿಸಿದೆಅಷ್ಟ ಯತಿಗಳಿಗೆ | ಪಟ್ಟವಗಟ್ಟುತ | ಕೃಷ್ಣನಪೂಜೆ ನಿರ್ದಿಷ್ಟದಿ ನಡೆಸಿದೆ | ದುಷ್ಟಾದ್ವೈತವಕುಟ್ಟಿ ಸುಜನರುಗ | ಳಟ್ಟುಳಿ ಕಳೆಯೆ ವ |ರಿಷ್ಟರನೆಲ್ಲರ | ಕಟ್ಟಾಳೆನಿಸಿದೆ ||ದಿಟ್ಟ ಮೂರುತಿ ಜಗಜಟ್ಟಿ ಭೀಮಆನಂದತೀರ್ಥ ಗುರು ಗೋವಿಂದ ವಿಠಲನಹೃದದಿಷ್ಟಾನದಿ ತೋರಿಸೆಂದು ತವಪಾದಾಬ್ಜಕೆ ಶಿರ ಇಟ್ಟು ಬೇಡ್ವೆ ಋಜುವರ್ಯಗುರುವರ್ಯ | ಔದಾರ್ಯ | ಔದಾರ್ಯ 3
--------------
ಗುರುಗೋವಿಂದವಿಠಲರು
ಪವಮಾನ ಜಗದ ಪ್ರಾಣ ಸಂಕರುಷಣ ಭವನೇ ಭಯಾರಣ್ಯದಹನ ಪ ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರೀಯ ಅ.ಪ. ಹೇಮ ಕಚ್ಚುಟ ಉಪವೀತ-ಧರಿಪ ಮಾರುತ ಕಾಮಾದಿ ವರ್ಗರಹಿತ ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನರಾಧಿಪುದಕೆ ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ ಪಾಮರ ಮತಿಯನು ನೀ ಮಾಣಿಪುದು 1 ವಜ್ರ ಶರೀರ ಗಂಭೀರ-ಮಕುಟಧರ ದುರ್ಜನವನ ಕುಠಾರ ನಿರ್ಜರಮಣಿ ದಯಾ ಪಾರಾ-ವಾರ ಉದಾರ ಸಜ್ಜನರಘ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆಮಾಡಿದೆ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ- ಮೂರ್ಜನದಲಿ ಭವವರ್ಜಿತನೆನಿಸೊ 2 ಪ್ರಾಣ ಅಪಾನ ಉದಾನ-ವ್ಯಾನ ಸಮಾನ ಆನಂದ ಭಾರತೀರಮಣ ನೀನೆ ಯಾಮ ಯಾಮಕೆ ಜ್ಞಾನ ಧನಪಾಲಿಪ ವರೇಣ್ಯ ನಾನು ನಿರುತದಲಿ ಏನೇನನೆಸಗಿದೆ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ ಕೊಡುವುದು ಭಾನು ಪ್ರಕಾಶ 3
--------------
ವಿಜಯದಾಸ
ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ ಸ್ತವನಗೈಯುವ ಮಾನವರೊಳಧಮ ನಾನು ಪವಮಾನ ಪಾಲಿಸೆನ್ನ ಅ.ಪ ಪತಿ ಶಿವ ಮುಖ ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ ನತ ಬಂಧು ತತ್ವಾಧಿ ಪತಿಗಳೊಳುತ್ತಮ ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ - ನೀರಜ ಪತಿಯಪಾದದ್ವಯ ಅತಿಹಿತದಲಿ ಸೇವಿಸಿ ಲವಣಾರ್ಣವ ಶತಯೋಜನವ ಲಂಘಿಸಿ ರಾಕ್ಷಸಕುಲ ಹತಗೈಸಿ ಪುರದಹಿಸಿ ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ 1 ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ ಷ್ಟರನನುಜ ವೃಕೋದರ ನಾಮದಲಿಯವ ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ ಹರಿಸಿ ದುಶ್ಯಾಸÀನಾದ್ಯರನೆಲ್ಲರಣದೊಳು ದುರುಳದುರ್ಯೋಧನನಸಾನುಜಗಣ ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ 2 ಮಣಿಮಂತ ಮೊದಲಾದದನುಜರು ಹರಿದ್ವೇಷ - ವನು ಮಾಡಲೋಸುಗವನಿಯೊಳುದ್ಭವಿಸಿ ನಿ - ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ ದನುಜಾರಿಯಾಙÁ್ಞದಿ ಮುನಿಮಧ್ಯ ಸತಿಯಲ್ಲಿ ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ 3
--------------
ವರದೇಶವಿಠಲ
ಪವಮಾನ ಪಾವನ ಚರಿತ ಪದ್ಮ ಭವನ ಪದಾರ್ಹನೆ ನಿರುತ ಅಹ ಪ ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ ರವತಾರಾತ್ಮಕ ತತ್ವ ದಿವಿಜನಿಯಾಮಕ ಅ.ಪ. ಪ್ರಾಣೋಪಾನ ವ್ಯಾನೋದಾನ ಹೇ ಸ ಮಾನ ರೂಪಕನೆ ವಿಜ್ಞಾನ ತತ್ವ ಗೀರ್ವಾಣ ಅಹ ಸೇನಾಧಿಪತಿ ನಿನ್ನ ಜ್ಞಾನಸಾರದಲಿಪ್ಪ ಮಾನವರನು ಕಾಯೋ ಮೌನಿ ಧ್ಯಾನಗಮ್ಯ 1 ನಾಗಕೂರ್ಮ ದೇವದತ್ತ ಕೃಕಳ ಯೋಗಿವರಿಯ ಮುಕ್ತಾಮುಕ್ತ ಕ್ಲುಪ್ತ ಭೋಗಗಳೀವ ಸುಶಕ್ತಾ ತಲೆ ಬಾಗಿ ಬೇಡುವೆ ಸರ್ವೋದ್ರ್ರಿಕ್ತ ಅಹ ಜಾಗುಮಾಡದೆ ನಿಜ ಭಾಗವತರೊಳಿಡೊ ಮೈಗಣ್ಣಪದನಾಳ್ದ 2 ಮೂರುಕೋಟಿ ರೂಪಧರನೆ ಲೋಕ ಧಾರಕ ಲಾವಣ್ಯಕರನೆ ಸರ್ವ ಪ್ರೇರಕ ಭಾರತಿವರನೆ ತ್ರಿಪು ರಾರಿಗೆ ವಜ್ರಪಂಜರನೆ ಆಹ ನೀರಜ ಜಾಂಡದಿ ಮೂರೇಳು ಸಾವಿರ ದಾರು ನೂರು ಜಪ ಬೇರೆ ಬೇರೆ ಮಾಳ್ಪ 3 ಆಖಣಾಶ್ಮ ಸಮಚರಣ ಪದ್ಮ ಲೇಖರ ಮಸ್ತಕಾಭರಣ ಕಲ್ಪ ಶಾಖೆಯಂತೆ ಅತಿಕರುಣಾದಿಂದ ಈ ಖಂಡದೊಳು ಮಿಥ್ಯಾವರಣ ಆಹಾ ನೀ ಖಂಡಿಸಿದಿ ದಂಡ ಮೇಖಲ ಭೂಷಣ ಆಖುವಾಹನಪಿತ ಆಖಂಡಲರ್ಚಿತ 4 ಶ್ರೀವಲ್ಲಭಗೆ ಪ್ರತಿಬಿಂಬನಾಗಿ ಜೀವವೇದ ಕಾಲಸ್ತಂಭಗತ ಆವಾಗ ಹರಿರೂಪ ಕಾಂಬ ಶಕ್ತ ನೀ ಒಬ್ಬನಹುದೋ ನಾನೆಂಬೆ ಆಹಾ ವಿಭವ ಜಗ ನಿತ್ಯ 5 ದಕ್ಷಿಣಾಕ್ಷಿಗತ ವತ್ಸಾ ರೂಪಿ ದಕ್ಷನಹುದೋ ಪರಮೋಚ್ಚಾ ಚಾರು ತ್ರ್ಯಕ್ಷಾದಿ ಸುರರೊಳಧ್ಯಕ್ಷಾ ಸರ್ವಾ ಪೇಕ್ಷರಹಿತನೆ ಸ್ವೇಚ್ಛಾ ಆಹಾ ಮೋಕ್ಷಾದಿ ದ್ವಾತ್ರಿಂಶ ಲಕ್ಷಣ ಪುರುಷ ನಿ ರೀಕ್ಷಿಸಿ ಕರುಣದಿ ರಕ್ಷಿಸೋ ಎನ್ನನು 6 ಮೂಲೇಶನಂಘ್ರಿ ಸರೋಜ ಭೃಂಗ ಏಳೇಳು ಲೋಕಾಧಿರಾಜಾ ಇಪ್ಪ ತ್ತೇಳು ರೂಪನೆ ರವಿತೇಜಾ ಲೋಕ ಪಾಲಕರಾಳ್ವ ಮಹೋಜಾ ಆಹಾ ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ ಪಾಳು ಭಕ್ತಿ ಜ್ಞಾನವಾಲಯ ಕರುಣಿಸು 7 ಅಧಿಭೂತ ಅಧ್ಯಾತ್ಮಗತನೇ ವಿಮಲ ಅಧಿದೈವರೊಳು ಪ್ರವಿತತನೆ ಕಲಿ ವದನದಿ ನಿಲಿಸೋ ಮಾರುತನೆ ಆಹಾ ಬದರಿಕಾಶ್ರಮದೊಳು ಹದಿನಾರು ಸಾವಿರ ಸನ್ನುತ 8 ಮಾತರಿಶ್ವ ಮಹಾಮಹಿಮ ಸರ್ವ ಚೇತನ ಹೃದ್ಗತ ಹನುಮ ಭೀಮ ಭೂತಳದೊಳು ಮಧ್ವ ನಾಮಾದಿಂದ ಜಾತನಾಗಿ ಜಿತಕಾಮಾ ಆಹಾ ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಿಳ ಗೆದ್ದ ಸೀತಾರಮಣ ಜಗನ್ನಾಥ ವಿಠ್ಠಲ ದೂತ 9
--------------
ಜಗನ್ನಾಥದಾಸರು