ಒಟ್ಟು 9833 ಕಡೆಗಳಲ್ಲಿ , 131 ದಾಸರು , 5664 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಗನೆಂದಾಡಿಸುವಳು ಮೊಗ ನೋಡಿ ನಗುವಳು ಪ ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ ಕಾಲಲಂದುಗೆ ಗೆಜ್ಜೆ ತೋಳ ಮಣಿಯ ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯುಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1 ಬಣ್ಣ ಸರವಲ್ಲಾಡೆ ವರ ರನ್ನ ನೇವಳದಹೊನ್ನ ಗಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2 ಪೊಡವಿಯ ಈರಡಿ ಮಾಡಿದ ದೇವನಕುಡಿಬೆರಳನೆ ಕರದಲಿ ಪಿಡಿದುಅಡಿಯಿಡು ಮಗನೆ ಮೆಲ್ಲಡಿಯಿಡು ಎನುತಲಿನಡೆಗಲಿಸುವ ಪುಣ್ಯವೆಂತು ಪಡೆದಳಯ್ಯ 3 ಕುಕ್ಷಿಯೊಳು ಈರೇಳು ಜಗವನ್ನು ಸಲಹುವನರಕ್ಷಿಪರು ಉಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡ ಎನುತಲಿರಕ್ಷೆ ಇಡುವ ಪುಣ್ಯವನೆಂತು ಪಡೆದಳಯ್ಯ 4 ಶಂಖ ಚಕ್ರ ಗದಾ ಪದುಮಧಾರಕನಪಂಕಜ ಮಿತ್ರ ಶತಕೋಟಿ ತೇಜನಸಂಖ್ಯೆಯಿಲ್ಲದಾಭರಣಗಳ ತೊಡಿಸಿಯಲಂಕರಿಸುವ ಪುಣ್ಯವೆಂತು ಪಡೆದಳಯ್ಯ 5 ಸಾಗರಶಯನನ ಭೋಗೀಶನ ಮೇಲೆಯೋಗ ನಿದ್ರೆಯೊಳಿಪ್ಪ ದೇವನನುಆಗಮ ನಿಗಮಗಳರಸಿ ಕಾಣದ ವಸ್ತುವನುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 6 ವಾಹನ ದೇವರ ದೇವನಹಚೆನ್ನಾದಿಕೇಶವನನೆಂತು ಪಡೆದಳಯ್ಯ7
--------------
ಕನಕದಾಸ
ಮಂಗಲಂ ಗುರುರಾಜಗೆ ಮಂಗಲ ಪರಮಾನಂದಸ್ವರೂಪಗೆ ಪ ಜೀವÀಪರಮರೈಕ್ಯವ ತಿಳುಹಿಸುವಾ ದೇವನೆ ನೀನೆನ್ನುತ ಬೋಧಿಸುವಾ ಸಾವು ಸಂಕಟಗಳ ಮೂಲವ ಕಡಿಯುವಾ ಪಾವನಾತ್ಮ ಘನಜ್ಞಾನರೂಪಗೆ 1 ಶೋಧಿಸಿ ದೇಹತ್ರಯಗಳ ಕಳಹಿ ಬಾಧರಹಿತ ಪರಮಾತ್ಮನ ಅರಿವನು ಬೋಧಿಸಿ ಅನುಭವದಲಿ ನೆಲೆಸಿದಗೆ 2 ತೋರಿಕೆ ಅನಿಸಿಕೆ ಎನಿಸುವ ದ್ವೈತವ ಧೀರತನದಿ ಸುಳ್ಳೆಂದು ತಿಳಿಸುವಾ ನಾರಾಯಣಗುರುವರನ ಕೃಪಾಪ್ರಿಯ ಪೂರಣಬ್ರಹ್ಮಸ್ವರೂಪ ಶಂಕರಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮಂಗಲಂ ಮಂಗಲಂ ಕುಮಾರಗೆ ಮಂಗಲಂ ಪ ವಾಹನ ಗುಣಸಾರ ಕುಮಾರಗೆ1 ಅಂಬರ ಮಣಿ ಸುಗುಣಾಂಬುಧಿ ಗುಹನಿಗೆ 2 ಕೋವಿದನಿಗೆ ದಾಸ ಜನರ ರಕ್ಷಕಗೇ 3
--------------
ಬೆಳ್ಳೆ ದಾಸಪ್ಪಯ್ಯ
ಮಂಗಲ ಮಾನವಿ ನಿಲಯ ಕವಿಗೇಯ ಗುರುರಾಯ ಗುರುರಾಯ ಪಿಡಿಕೈಯಾ ಪ ಪರಮ ಕರುಣದಲಿ ವಿರಚಿತ ಶ್ರೀ ಮ- ದ್ಹರಿಯ ಕಥಾಮೃತ ಗ್ರಂಥ ಶುಭ್ರ ಚರಿತ ಜಗನ್ನಾಥ ಜಗನ್ನಾಥ ಪ್ರಖ್ಯಾತ1 ಮೇದಿನಿ ಸುರರಿಗೆ ಮೋದಮುನಿ ಮತದ ಭೇದ ಪಂಚಕ ಸುಬೋಧ ಪ್ರದರಾದ ಸ- ಮೋದ 2 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ಶುಭನಿಲಯ ನರಹರಿಯ ಸುಪ್ರೀಯ ಸುಪ್ರೀಯ ದಾಸಾರ್ಯ 3
--------------
ಕಾರ್ಪರ ನರಹರಿದಾಸರು
ಮಂಗಲಂ ಮುಚಕುಂದ ವರದ ಹರಿಗೆಮಂಗಲಂ ಪ್ರಲ್ಹಾದ ವರದ ನರಹರಿಗೆ ಪಮಂಗಲಂ ಮಾಧವಗೆ ವಂಗಲಂ ಶ್ರೀಧರಗೆಮಂಗಲಂ ಗಿರಿಧರ ಕಾವೇರಿರಂಗನಿಗೆಮಂಗಲಂ ಶ್ರೀಪಾಂಡುರಂಗನಿಗೆ ಭವಭಂಗಸಂಗೀತ ಪ್ರಿಯನಾದ ಪಾಂಡುರಂಗನಿಗೆ 1ಮಂಗಲಂ ಅಕ್ರೂರವರದ ಶ್ರೀಕೃಷ್ಣನಿಗೆಮಂಗಲಂ ಪುಂದಲೀಕ ವರದ 'ಠ್ಠಲಗೆಮಂಗಲಂ ದ್ರುವರಾಜ ವರದನಾರಾಯಣಗೆಮಂಗಲಂ ಮಧ್ವಮುನಿಗೊಲಿದ ವ್ಯಾಸರಿಗೆ 2ಪುರಂದರ'ಠ್ಠಲಗೆ ಸಿರಿ'ಜಿಯ'ಠ್ಠಲಗೆಗೋಪಾಲ'ಠ್ಠಲ ಮೋಹನ'ಠಲಗೆಜಗನ್ನಾಥ'ಠಲಗೆ ಪ್ರಾಣೇಶ'ಠ್ಠಲಗೆಶ್ರೀಪತಿ'ಠ್ಠಲ ಭೂಪತಿ'ಠ್ಠಲಗೆ 3
--------------
ಭೂಪತಿ ವಿಠಲರು
ಮಂಗಳ ಮಂಗಳಾರತಿ| ಬೆಳಗುವೆನೀಗ| ಶೃಂಗರಿಸುತ ಸುಮ| ಸಂದೋಹದಿ ಪ ಮಂಗಲವನು ಹಾಡಿ| ಇಂಗಿತವನು ಬೇಡಿ| ಮಂಗಳಾತ್ಮಕಿ ದೇವಿಯ ಪಾದಕೆ ಅ.ಪ ಅಜಭವ ಸುರನರ| ತ್ರಿಜಗಪೂಜಿತ ಪಾದ| ಭಜಿಸುತ ಮನದೊಳು| ಮೊದಲೊಂದಿಸಿ|| ಪಾದ ಪೂಜೆಯ ಮಾಡಿ| ನಿಜಭಕ್ತಿಯಿಂದಲಿ| ಜಯ ಜಯವೆನ್ನುತ 1 ಮಂದರಧರ ನಿನ್ನ| ದ್ವಂದ್ವಪಾದಗಳನ್ನ| ಚಂದದಿ ಪೂಜಿಸಿ| ಭಜಿಸುತಲಿ|| ಕಂದರ್ಪನಯ್ಯನೆ| ಸಿಂಧುಶಯನನೆ| ಇಂದಿರೇಶನಿಗಾ| ನಂದದಿಂದಲಿ 2 ಮತ್ಸ್ಯವ ತಾರಿಗೆ| ಕೂರ್ಮಗೆ ವರಾಹಗೆ| ನರಹರಿ ರೂಪಗೆ| ವಾಮನಗೆ|| ಯಾದವಕುಲದೀಪ| ಮುರಲಿ ಕೃಷ್ಣಗೆ3 ಕಲ್ಕಿಸ್ವರೂಪದಿ| ಮೆರೆವವಗೆ|| ದಶವಿಧರೂಪದಿ| ಧರೆಯನು ಪೊರೆದ| ವಿಜಯವಿಠಲ ನಮ್ಮ| ಗುರುವೆಂಕಟೇಶಗೆ 4
--------------
ವೆಂಕಟ್‍ರಾವ್
ಮಂಗಳ ಕರಿಗಿರಿ ನರಹರಿಗೇ | ಜಯಮಂಗಳ ಶರಣರ ಪೊರೆವನಿಗೇ ಪ ಕಣ್ಣ ತೆರದು ಗಿರಿ ಬೆನ್ನೊಳು ಪೊತ್ತಗೆಮಣ್ಣನು ಅಗಿಯುತ ಚಿಣ್ಣಗೊಲಿದಗೇ 1 ಚಿನ್ನ ವಟುಪು ಆದ ಘನ್ನ ಪರಶುಧರಮನ್ನು ಜರೂಪಗೆ ಕೃಷ್ಣ ಮೂರುತಿಗೇ2 ಬೆತ್ತಲೆ ನಿಂತಗೆ | ಉತ್ತಮ ಕಲ್ಕಿಗೇಹತ್ತಾವತಾರ ಗುರು ಗೋವಿಂದ ವಿಠಲಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಕೃಷ್ಣ ಯೋಗೀಂದ್ರ ದಿವ್ಯಮಂಗಳ'ಗ್ರಹ ನಿನ್ನ ನೆನಹು ಸರ್ವ ಪನಿನ್ನ ಚರಿತೆಗೇಳಿ 'ಗ್ಗಿ ಜೀ'ಪರಿಗೆನಿನ್ನೊಲವನು ಬಯಸುವ ಧನ್ಯಗೆನಿನ್ನ ಭಕತರ ಸಂಗತಿಯೊಳಿರುವರಿಗೆನಿನ್ನ ಮೂರುತಿಗಂಡು ನ'ುಪ ಮಹಾತ್ಮಗೆ 1ನಿನ್ನ ವಾಗಮೃತಪಾನದಿ ಮತ್ತರಾದರ್ಗೆನಿನ್ನ ಸೇವೆಗೆ ಮೈಗೊಟ್ಟಿರುವರಿಗೆನಿನ್ನ ಚರಣ ಸೋಕಿದೆಡೆಯೊಳಿರುವರಿಗೆನಿನ್ನಂಗ ಸಂಗ ಮರುತಪೂತದೇಹರ್ಗೆ 2ಕರುಣದಿಂ ಚಿಕನಾಗಪುರದಿ ವಾಸುದೇವಾರ್ಯಗುರುವಾಗಿ ನರಸಾರ್ಯನೆಂದೆನಿಸಿತಿರುಪತಿಯರಸನೆ ಕೃಷ್ಣಯೋಗೀಂದ್ರ ಶ್ರೀಕರ ರಾಮದಾಸಾರ್ಯನೆಂದರಿತೆಮಗೆಲ್ಲಾ 3
--------------
ತಿಮ್ಮಪ್ಪದಾಸರು
ಮಂಗಳ ಜಯ ಜಯ ಜಯ ಮಂಗಳ ಪ. ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ ಮಂಗಳ ದೇವಿಯರರಸನಿಗೆ ಮಂಗಳ ಮನುಮಥಪಿತನಿಗೆ ಮಂಗಳ ಮಂಗಳ ಮಹಿಮಗೆ ಮಂಗಳ 1 ಅಚ್ಚುತಾನಂತ ಗೋವಿಂದಗೆ ಮಂಗಳ ಸಚ್ಚÀರಿತ್ರನಿಗೆ ಸಕಲ ಮಂಗಳ ಸಚ್ಚಿದಾನಂದ ಸ್ವರೂಪಗೆ ಮಂಗಳ ಅಚ್ಚಹೃದಯನಿಗೆ ಅತಿ ಮಂಗಳ 2 ಕೇಶವ ನಾರಾಯಣನಿಗೆ ಮಂಗಳ ಕೇಶಿಸೂದನನಿಗೆ ಅತಿ ಮಂಗಳ ಶೇಷಶಯನ ಹೃಷೀಕೇಶಗೆ ಮಂಗಳ ವಾಸುದೇವನಿಗೆ ಸಕಲ ಮಂಗಳ 3 ದಾನವವೈರಿ ದೆಸೆದೆಸೆಗಳಿಗೆ ಮಂಗಳ ಹೀನಕುಲದವಗೆ ಹೆಚ್ಚು ಮಂಗಳ ಆನಂದತೀರ್ಥಮುನಿಯ ಮುದ್ದುಕೃಷ್ಣಗೆ ಶ್ರೀನಾರಿಯೆತ್ತುವ ಶುಭಮಂಗಳ 4 ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ ನಗಧರ ಕೂರ್ಮಗೆ ಅತಿಮಂಗಳ ಜಗತಿಯನೆತ್ತದ [ವರಾಹಗೆ]ಮಂಗಳ ಮಗುವ ಕಾಯಿದ ನೃಸಿಂಹಗೆ ಮಂಗಳ 5 ದಾನವ ಬೇಡಿದ ಸ್ವಾಮಿಗೆ ಮಂಗಳ ಕ್ಷೋಣಿಶಾಂತನಿಗೆ ಸಕಲ ಮಂಗಳ ಜಾನಕೀರಮಣ ರಾಮಗೆ ಮಂಗಳ ಶ್ರೀನಂದಾಚ್ಯುತನಿಗೆ ಶುಭಮಂಗಳ 6 ಬುದ್ಧವತಾರ ಶ್ರೀಬದ್ಧಗೆ ಮಂಗಳ ಸದ್ಧರ್ಮ ಮೂಲಸ್ವಾಮಿಗೆ ಮಂಗಳ ಮಧ್ವವಲ್ಲಭ ಹಯವದನರಾಯನಿಗಿಂಥ ಶುದ್ಧಸ್ವಭಾವಗೆ ಶುಭಮಂಗಳ 7
--------------
ವಾದಿರಾಜ
ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ
ಮಂಗಳಂ ಜಯ ಜಯ ಮಂಗಳಂ ಪ ಪರಮಾಸನದಲಿ ಕುಳಿತವಗೆ ಪರತತ್ವವ ತಾ ತಿಳಿದವಗೆ ಕರುಣದಿಂದ ದುರಿತಾವಳಿಗಳನು ಸ್ಮರಿಸಿದ ಮಾತ್ರದಿ ಪರಿಹರಿಸುವಗೆ 1 ಪೊಡವಿಯಲಿ ಶೋಭಿಸುವವಗೆ ಕಡಲಶಯನನ ಭಕ್ತನಿಗೆ ಅಡಿಗಳ ಬಿಡದೆ ಭಜಿಪ ಸುಜನರಿಗೆಲ್ಲ ಕಡುತರ ಜ್ಞಾನವ ನೀಡುವಗೆ 2 ಸತ್ಯಧೀರರ ಕುವರನಿಗೆ ಸತ್ಯಜ್ಞಾನನೆಂದೆನಿಸುವಗೆ ಅತ್ಯಾದರದಿಂದ ರಾಮನ ಧ್ಯಾನಿಸಿ ಪ್ರತ್ಯಕ್ಷವ ಕರೆಸಿರುವವಗೆ 3 ಕಾಮಕ್ರೋಧವ ಬಿಟ್ಟವಗೆ ಪ್ರೇಮ ಆಶೆಗಳ ಸುಟ್ಟವಗೆ ಧೂಮಕೇತು ಸಖ ಸೂನುವಾಹನನ ನೇಮದಿಂದ ಆರಾಧಿಪಗೆ 4 ದಂಡ ಕಮಂಡಲ ಪಿಡಿದವಗೆ ಪಂಡಿತರಿಂದತಿ ಪೂಜಿತಗೆ ಕೊಂಡಾಡಿದರ್ಯಮ ದಂಡನೆ ತಪ್ಪಿಸಿ ಶೊಂಡನಾದ ನರಹರಿ ತೋರ್ಪಗೆ 5
--------------
ಪ್ರದ್ಯುಮ್ನತೀರ್ಥರು
ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ಮೂರುತಿಗೆ ಪ ಅಂಗುಟಾಗ್ರದಿ ಗಂಗೆಯ ಪಡೆದ ಗಾತ್ರ ಶ್ರೀ ರಂಗನಿಗೆ ಅಂಗಜರಿಪು ಧನು ಭಂಗವ ಮಾಡಿ ಸೀ- ತಾಂಗನೆಯಳ ಕರಪಿಡಿದವಗೆ 1 ವರಮತ್ಸ್ಯಗೆ ಗಿರಿಧರ ಕ್ರೋಢಗೆ ತರುಳನ ರಕ್ಷಿಸಿ ಧರೆಯ ಬೇಡಿದಗೆ ಪರಶು ಧರಿಸಿದ ರಾಮಕೃಷ್ಣಗೆ ಧರಿಸದೆ ವಸನವ ತುರಗನೇರಿದಗೆ 2 ಕರಿವರ ಕರೆಯಲು ಭರದಿ ಬಂದವಗೆ ಸ್ಮರಿಪರ ಭಯ ಪರಿಹರಿಸುವ ದೇವಗೆ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ರೂಪಗೆ 3
--------------
ಕಾರ್ಪರ ನರಹರಿದಾಸರು
ಮಂಗಳಂ ಜಯ ಮಂಗಳಂ ಲಿಂಗಾಕಾರದ ಪರಶಿವಗೆ ಪ ರಜತಾದ್ರಿಪುರದೊಳು ನಿಂದವಗೆ ಭಜಕರ ಸಲುಹಲು ಬಂದವಗೆ ನಿಜಸುರ ಸೇವಿತ ಗಜಚರ್ಮಾಂಬರ ತ್ರಿಜಗ ವಂದಿತನಾದ ಪರಶಿವಗೆ1 ಬಾಣನ ಬಾಗಿಲ ಕಾಯ್ದವಗೆ ತ್ರಾಣದಿ ತ್ರಿಪುರವ ಗೆಲಿದವಗೆ ಕಾಣದ ಅಸುರಗೆ ಪ್ರಾಣಲಿಂಗವನಿತ್ತು ಮಾಣದೆ ಭಕ್ತರ ಸಲುಹುವಗೆ 2 ಗಂಗೆಯ ಜಡೆಯೊಳು ಧರಿಸಿದಗೆ ಸಿಂಗಿಯ ಕೊರಳೊಳು ನುಂಗಿದಗೆ ತಿಂಗಳ ಸೂಡಿಯೆ ಅಂಗ ಭಸ್ಮಾಂಗದಿ ಕಂಗಳು ಮೂರುಳ್ಳ ಕೃಪಾಂಗನಿಗೆ 3 ಅಸ್ಥಿಯ ಮಾಲೆಯ ಧರಿಸಿದU É ಹಸ್ತದಿ ಶೂಲವ ಪಿಡಿದವಗೆ ವಿಸ್ತರವಾಗಿಯೆ ಭಸ್ಮಸುವಾಸಿಗೆ ಸತ್ಯದಿ ವರಗಳನಿತ್ತವಗೆ 4 ಅಂಬಿಕಪತಿಯೆಂದೆನಿಸಿದಗೆ ತ್ರಿ- ಯಂಬಕ ಮಂತ್ರದಿ ನೆಲೆಸಿದಗೆ ನಂಬಿದ ಸುರರಿಗೆ ಬೆಂಬಲವಾಗಿಯೆ ಇಂಬಾದ ಪದವಿಯ ತೋರ್ಪವಗೆ 5 ಪಂಚಾಕ್ಷರದೊಳು ಒಲಿದವಗೆ ಪಂಚಮ ಶಿರದೊಳು ಮೆರೆವವಗೆ ಪಾತಕ ಸಂಚಿತ ಕರ್ಮವ ವಂಚಿಸಿ ಭಕ್ತರ ವಾಂಛಿತವೀವಗೆ 6 ಪಾಶುಪತವ ನರಗಿತ್ತವಗೆ ಶೇಷಾಭರಣವ ಹೊತ್ತವಗೆ ಕಾಶಿಗಧಿಕವಾಗಿ ಕೈವಲ್ಯವಿತ್ತು ವಿ- ಶೇಷದಿ ಜನರನು ಸಲುಹುವಗೆ7 ಯಕ್ಷ ಸುರಾಸುರ ವಂದಿತಗೆ ದಕ್ಷನ ಮಖವನು ಕೆಡಿಸಿದಗೆ ಕುಕ್ಷಿಯೊಳೀರೇಳು ಜಗವನುದ್ಧರಿಸಿಯೆ ರಕ್ಷಿಸಿಕೊಂಬಂಥ ದೀಕ್ಷಿತಗೆ 8 ಕಾಮಿತ ಫಲಗಳ ಕೊಡುವವಗೆ ಪ್ರೇಮದಿ ಭಕ್ತರ ಸಲಹುವಗೆ ಭೂಮಿಗೆ ವರಾಹತಿಮ್ಮಪ್ಪನ ದಾಸರ ಸ್ವಾಮಿಯೆಂದೆನಿಸುವ ಈಶನಿಗೆ 9
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಪ. ನಿತ್ಯ ಮಂಗಳ ನಗಧÀರ ಕೂರ್ಮಗೆ ಅತಿ ಮಂಗಳ ಜಗವವನುದ್ಧರಿಸಿದ ವರಾಹಗೆ ಮಂಗಳ ಮಗುವ ಕಾಯ್ದ ನರಸಿಂಹನಿಗೆ 1 ದಾನವ ಬೇಡಿದ ವಾಮನಗೆ ಮಂಗಳ ಕ್ಷೋಣಿಪರನು ಕೊಂದಗೆ ಮಂಗಳ ಜಾನಕಿ ರಮಣ ರಾಮಗೆ ಮಂಗಳ ಜ್ಞಾನಿಗಳ ಕಾಯ್ದ ಗೋಪಾಲಗೆÀ 2 ಬುದ್ಧ ರೂಪದಲಿಹ ದೇವಗೆ ಮಂಗಳ ಮಧ್ವವಲ್ಲಭ ಹಯವದನಗೆ ಮಂಗಳ ಉದ್ಧರಿಸುವ ದೇವರ ದೇವಗೆ 3
--------------
ವಾದಿರಾಜ