ಒಟ್ಟು 7503 ಕಡೆಗಳಲ್ಲಿ , 128 ದಾಸರು , 4808 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಜತಗಿರೀಶ್ವರ ಮಹಾನುಭಾವ ಗಜಚರ್ಮಾಂಬರ ನಮೋ ನಮೋ ಪ ವಿಜಯರಾಮಾರ್ಚಿತ ಪದಕಮಲ ಅಜಸುತ ಸೇವಿತ ನಮೋ ನಮೋ ಅ.ಪ ವಾರಣಾಸಿ ಸುಕ್ಷೇತ್ರ ನಿವಾಸ ಪರಮೋಲ್ಲಾಸ ನಮೋ ನಮೋ ಭೂರಿ ವೈಭವಾನಂದ ವಿಲಾಸ ರವಿಶತಭಾಸಾ ನಮೋ ನಮೋ 1 ನಾದಾಲಂಕೃತ ವರದಾತಾ ಶ್ರೀ ಗೌರಿಯುತ ನಮೋ ನಮೋ ಭಾಗೀರಥೀಪ್ರಿಯ ಲೋಕನುತ ದೇವೇಂದ್ರಾತ ನಮೋ ನಮೋ2 ಮಂಗಳದಾಯಕ ಶಶಿಶಿಖರ ಸಂಗವಿದೂರಾ ನಮೋ ನಮೋ ಮಾಂಗಿರಿ ಶೃಂಗವಿರಾಜಿತಶಂಕರ ಶರಣಶುಭಂಕರ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಜತಪೀಠವೆ ಭೂ ವೈಕುಂಠ ಇಲ್ಲಿ ಮಧ್ವ ಪುಷ್ಕರಿಣಿಯೆ ವಿರಜೆ ಅಲ್ಲಿ ರಾಜಿಪರಷ್ಟಮಹಿಷಿಯರು ಇಲ್ಲಿ ರಾಜಿಪರಷ್ಟಯತಿಗಳು ಪ ಅಲ್ಲಿ ಎಲ್ಲರೊಳಿರುವದು ಭಕ್ತಿ ಇಲ್ಲಿ ಎಲ್ಲಿ ನೋಡಲು ವಿರಕ್ತಿ ಅಲ್ಲಿಪ್ಪ ಜನರಿಗೆ ಮುಕ್ತಿ ಭುಕ್ತಿ 1 ಅಲ್ಲಿ ಮತ್ತಿಲ್ಲ ಜನರಿಗೆ ಪುಣ್ಯ ಇಲ್ಲಿ ಲಭಿಸುವುದೆಲ್ಲವೂ ಪುಣ್ಯ ಅಲ್ಲಿ ಹೋದವರಿಗಿಲ್ಲಾಗಮನವು ಇಲ್ಲಿ ಬಂದವರಿಗಿಲ್ಲ ಮರು ಜನನ 2 ಪೂಜೆಯ ವೈಕುಂಠದೊಳಗೆ ಸರ್ವಜನರು ಮಾಡಬೇಕೆಂದಿಹರು ರಾಜೇಶ ಹಯಮುಖಕೃಷ್ಣ ಮಧ್ವಾಚಾರ್ಯರೊಬ್ಬರ ಪೂಜೆಗೊಂಬ 3
--------------
ವಿಶ್ವೇಂದ್ರತೀರ್ಥ
ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ 1 ಮಣಿಪ್ರಚುರ ಮುತ್ತಿನ ಮುಕುಟ ಸು | ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ| ಕೌಸ್ತುಭ ಸೂರ್ಯನಗೆಲ್ಲ್ಲೆ | ವನಮಾಲೆ ಹರಿಮಣಿ ಪದಕ ಪಾ | ವನ ಪೀತಾಂಬರ ಮಿನಗುವ ಕಾಂಚಿ | ಝಣ ಝಣ ಮಹಾ | ಧ್ವನಿ ಚರಣ ಭೂಷಣವಾಗಿಯೂ ಮಾ | ನಿನಿ ಕೂಡಾ 2 ಎತ್ತಿದ ಶ್ವೇತಾತಪತ್ರ ಚಾಮೀಕರ | ವಿತ್ತ ನಭ ತುಳುಕುತ್ತಲಿರೆ ಧ್ವಜ | ಮಾತ್ರ ಬಂದಾಗಿ ತೂಗುತ್ತಿರಲು | ಸುತ್ತಲು ಊದುವ ತುತ್ತುರಿ ಶಂಖ | ವತ್ತಿ ಬಾರಿಸುವ ಮತ್ತೆ ವಾದ್ಯಗಳು | ತುತ್ತಿಸುವ ಮುನಿ | ಉತ್ತಮ ಜನ ಬಾ | ಗುತ್ತ ವಡನೆ ಬರುತಿರಲು 3 ವಸು ರುದ್ರಾದಿತ್ಯ ವಸುಜನರ ಪಾ | ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ ರಸ ನಾಮಕ ಹರುಷದಿಂದ | ನಸುನಗುತ ನೀಕ್ಷಿಸಿಕೊಳುಂತ ಆ | ಲಸ ಮಾಡದೆ ರಂ | ಜಿಸುವ ಲೀಲಾಮಾನಸ ವಿಗ್ರಹ ಮೆ | ಚ್ಚಿಸಿದ ಜನರ | ವಶವಾಗಿಪ್ಪ ರಾಕ್ಷಸ ರಿಪು 4 ವನಧಿ ಚಿನ್ಮಯ ಉ | ಭಯಾ ಭಯ ಹಾರೆ | ಪಯೋವಾರಿ ನಿಧಿ | ಶಯನ ಚತುರ್ಬೀದಿಯಲಿ ತಿರುಗಿ | ಪ್ರೀಯದಿಂದಲಿ ಸ | ತ್ಕ್ರಿಯವಂತ ಜಯ ಜಯ ಪ್ರದಾ | ಸಾರಥಿ ನಿ | ರಯ ವಿದೂರ ವಿಜಯವಿಠ್ಠಲ ಸಾ | ಹಾಯವಾಗುವ ಗಿರಿಯ ವೆಂಕಟರಾಯ ಬಂದಾ 5
--------------
ವಿಜಯದಾಸ
ರಥವನೇರಿದ ರಥಿಕನಾರೇ ಪೇಳಮ್ಮಯ್ಯ ಕಥಿತಧ್ಯಾತ ಸಂಸ್ತುತ ವಿತತಾನತ ಹಿತಕರ ದಿವಿಷÀತ್ಪತಿ ಕಾಣಮ್ಮ ಪ ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ. ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ ಆಟದೆ ಕುರುಜ ಮಹಾಟವಿ ಸವರಿ ಕಿ ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1 ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2 ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
--------------
ಜಗನ್ನಾಥದಾಸರು
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ ಟೀಕಾಕೃಧ್ಯ ತಿವರನಮ್ಮ ಅ.ಪ ಸ್ವೀಕರಿಸಿ ಮಾರುತನವತರಿಸಿ ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ ಕೇಳುತಲನುದಿನದಿ ಮಹಿಮ ಸುರಪತಿಯು ಕಾಣಮ್ಮ 1 ದೇಶಪಾಂಡ್ಯರಕುವರ ಕೇಳಲು ಗುರುವಚನ ಸಂಸಾರ ಸುಖವನ ಜಯ ತೀರಥರಮ್ಮ 2 ಸ್ಥಾಪಿಸಿದರು ಮುದದಿ ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ ಗೆಲಿದ ಪ್ರಸಿದ್ಧ ಕಾಣಮ್ಮ 3 ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ ಶ್ರವಣಕೆ ಪೀಯೂಷ ಭವಬಾಧೆ ಬಿಡಿಸಿದ ಶ್ರೀಮಳಖೇಡ ಸುಧಾಮ ಕಣಮ್ಮ4 ತೋಷಿತ ಬುಧನಿಕರ ಪಾವನತರಚರಿಯ ಶರಣುಜನಕೆ ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
--------------
ಕಾರ್ಪರ ನರಹರಿದಾಸರು
ರಥಾರೂಢ ವೆಂಕಟಗಿರಿನಾಯಕ ಪಥವ ತೋರೊ ಬೇಗ ಮುಂದಿನ ಪಥವ ತೋರೊ ಬೇಗ ಪ. ಪೃಥಾ ಕುಮಾರನ ರಥಾಶ್ವ ನಡಸುತ ಕಥಾಕ್ರಮದಿ ಮನೋರಥಾವ ಸಲಿಸಿದ ಅ.ಪ. ರಮಾಕಮಲಭವ ಉಮಾರಮಣ ಶ್ರೀ- ಕ್ಷಮಾದಿ ನಾಯಕ ವಂದ್ಯ ನಮೋ ನಮೋಯೆಂದೊದರುವೆ ಅನುದಿನ ಕಮಲ ಪಾಲಿಸು 1 ನೃಪಾಧಮನು ಲಸದುಪಾಯದಿಂದಲಿ ಅಪಾಯ ಚಿಂತನೆ ಮಾಡುತಿರೆ ತಪೋನಿಧೀಶನದಪಾರ ಮಹಿಮನೆ ಕೃಪಾಕಟಾಕ್ಷದಿ ಸುಪಾದ ತೋರಿದ 2 ಅಡಾವಡಿಯಿಂದ ಧಡಾಧಡನೆ ಬಂದು ಒಡೆಯ ನಿನ್ನಡಿಗಳ ಮೇಲೆ ತನು ಕೆಡಹಿದ ಮ್ಯಾಲೆ ತಡವ್ಯಾತಕೊ ಪದ ಕೊಡೋ ಮೂಡಲಗಿರಿ ಒಡೆಯ ಶ್ರೀನಿಧೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ರಮಾಸಮುದ್ರನ ಕುಮಾರಿ ನಿನ್ನಸರಿ ಸಮಾನರ್ಯಾರಮ್ಮ ಪ ಉಮೇಶ ಮೊದಲಾದ ಅಮರ ನಿಕರವು ಪಾದ ಕಮಲ ಭಜಿಪುದು ಅ.ಪ ಕರುಣಾವಾರಿಧಿಯೆಂದು ಶರಣ ಜನರು ನಿನ್ನ ಸ್ಮರಣೆ ಮಾಡುತ ಲಿಪ್ಪರೆ ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ 1 ಅಪಾರ ಮಹಿಮನ ವ್ಯಾಪಾರಗಳ ತಿಳಿದು ಕಾಪಾಡುವೇ ಜಗವಾ ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ ತಾಪತ್ರಯವ ಪೇಳಿ ಕಾಪಾಡಬೇಕಮ್ಮ 2 ವಾಸವ ವಂದಿತ ಸಿರಿಶೇಷವಿಠ್ಠಲನೊಳು ವಾಸವ ಮಾಡುವಳೆ ಘಾಸೀ ಮಾಡದೆ ಎನ್ನ ಈ ಸಮಯದೊಳು ವಾಸುದೇವಗೆ ಪೇಳಿ ಪೋಷಿಸಬೇಕಮ್ಮ 3
--------------
ಬಾಗೇಪಲ್ಲಿ ಶೇಷದಾಸರು
ರಮೆಯರಸ ರಕ್ಷಿಸೋ ನಮಿತಜನರ ಕಲ್ಪದ್ರುಮ ಸುಮನೋಹರ ಪ ಅಮಿತ ಸುಗುಣ ಪೂರ್ಣ-ಶಮಲವರ್ಜಿತ ಹೃ- ತ್ಕಮಲ ದ್ಯುಮಣಿ ನಿಸ್ಸೀಮಮಹಿಮ ಸಂಪೂರ್ಣಕಾಮ ಹರಿ1 ಅಘ ಸಂ- ಕಷ್ಟಹರಿಸಿ ಸಂತುಷ್ಟಿಯನೀವ ನಿರ್ದುಷ್ಟಫಲಪ್ರದ 2 ಉರಗಾದ್ರಿವಾಸವಿಠಲ ದೇವ ಹರೇ ಕರೆ ನಿನ್ನ ಬಳಿ ಸಿರಿ ವೆಂಕಟೇಶನೆ ದೊರೆ-ಪೊರೆ ನಿನ್ನ್ಹೊರತು ನಾನರಿಯೆ 3
--------------
ಉರಗಾದ್ರಿವಾಸವಿಠಲದಾಸರು
ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1 ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2 ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3 ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4 ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5 ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6 ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7 ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8 ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
--------------
ಇಂದಿರೇಶರು
ರಾಘವೇಂದ್ರ ಗುರುರಾಯ ರಮಣೀಯ ಕಾಯ ಭೃಂಗ ಭವ ಭಂಗ ಪ ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ ಆಡಿ ಕೊಂಡಾಡಲು ಬಲು ಗೂಢವಾಗಿದೆ ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ 1 ನಾಮಾಭಿವಿಡಿದು ಉಮಾಪತಿ ಪರಿಯಂತ ಈ ಮನ ಎರಗಲಿ ಯಾಮ ಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು 2 ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪÀ ವಿಷಯ ಚಿಂತಿಸಿ ಬೇಡುವುದು ಲೋಕಾಂತದ ಸುಖವು ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ 3 ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ ದ್ವಾರಿಜದೊಳು ನಿಲಿಸಿ ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ 4 ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ ಪರಬೊಮ್ಮ ವಿಜಯವಿಠಲ ನಾ ತುಮ್ಮದೊಳಚಿನಪ ಜ್ಞಾನೋತ್ತುಮ ತುಂಗಭದ್ರವಾಸ 5
--------------
ವಿಜಯದಾಸ
ರಾಘವೇಂದ್ರಂ ಭಜೇಹಂ ||ಶ್ರೀ|| ಪ ಆಗಮಚಯ ವಿಜ್ಞಾನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ 1 ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ 2 ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ3
--------------
ವಿಜಯದಾಸ
ರಾಘವೇಂದ್ರ ರಾಯರೆಂಬೋ ಮಹಾಯೋಗಿವರರ ನೋಡೈ ಪ ಭಾಗವತರು ಶಿರಬಾಗಿ ಕರೆಯಲತಿವೇಗದಿ ರಥದೊಳು ಸಾಗಿಬರುವ ಶ್ರೀ ಅ.ಪ. ಮಿನಗುವ ಘನವಾಹನಗಳ ರಥ ಶೃಂಗರವೋ ಕರದೊಳುಕನಕಛಡಿ ಕೊಡಿಗಳನುಪಮ ಭಾರವೊಅನಿಳ ನಿಗಮದಿ ನಿಪುಣ ಸುಜನರ ಪರವಾರವೋ ಪರಸ್ಪರಪಣದ ವೇದ ಘೋಷಣ ಸುಸ್ವರ ಗಂಭೀರವೋಘನ ಗುಣ ಗಣಮಣಿ ಮುನಿರಾಯನ ಮನದಣಿಯ ಪಾಡಿ ಕುಣಿಕುಣಿದಾಡಿ ಶಿರವಮಣಿಸುವರೋ ಗುಣವೆಣಿಸುವರೋ ದ-ಕ್ಷಿಣದಿಂ ತೆರಳಿ ವರುಣನ ಬೀದಿಯೊಳು 1 ಧರಣಿ ಸುರವರನಿಕರ ಕುಮುದೋದಯ ಚಂದ್ರನ ಮದ (ನ) ದು-ರ್ಧರ ದ್ವಿರದನ ತೆರಸಿ ಮೆರೆದ ಅಪ್ರತಿಮ ಮುನೀಂದ್ರನಸರಸ ಸುಧಾ ಪರಿಮಳ ಬೆರೆದ ಸುಗುಣಸಾಂದ್ರನ ಧರೆಯೊಳುಸಿರಿ ವಿಜಯೀಂದ್ರರ ಕುವರನೆನಿಪ ಸುಧೀಂದ್ರನಸರಸಿಜ ಸಂಭವ ಶರಣ್ಯ ಸುಂ-ದರ ನಿಜಾಂಘ್ರಿ ಭಜಕರ ಭಾಗ್ಯೋದಯಸುರರ ಸುರಭಿಗೆ ಸಮರೆಂದು ಸಾರಿ ಡಂಗುರ ಹೊಯಿಸುತ್ತ ಉತ್ತರ ಬೀದಿಯೊಳು 2 ವೆಗ್ಗಳ ವಾದ್ಯಗಳ ಸುವಾದ್ಯವೋ ಆರುತಿಯಬೆಳಗುವರು ಹಗಲ ದೀಪಗಳಗಾಧವೋಇಳೆಯೊಳು ಜನುಮ ಸಫಲವೆಂಬುವರ ವಿನೋದವೋ ಹಾಸ್ಯದಲಲಿನೆಯರಡಿ ಘಿಲಘಿಲಕೆಂಬುವ ನಟನ ಭೇದವೋಭಳಿರೆ ಭಳಿರೆ ಭಜಿಸುವರ ಭಕುತಿಬಲಿಗೊಲಿದ ಇಂದಿರೇಶನ ಕರದರಗಿಳಿಯೊ ನಳಿಯೊ ನಳಿನಾಂಘ್ರಿಯುಗದಿನಲಿಯುತ ಸುರರಾಜನ ಬೀದಿಯೊಳು 3
--------------
ಇಂದಿರೇಶರು
ರಾಘವೇಂದ್ರ ವಿಠಲ | ಪೊರೆಯ ಬೇಕಿವನ ಪ ಯೋಗಿಯನೆಗೈಯುತ್ತ | ಯೋಗಮಾರ್ಗದಲಿ ಅ.ಪ. ಪತಿ ಪ್ರಿಯನೇ 1 ಉತ್ತಮ ಸುಸಂಸ್ಕತಿಯ | ಪೊತ್ತು ಶ್ರಮಿಸುತ್ತಿಹಗೆಭಕ್ತಿ ಜ್ಞಾನಗಳನ್ನೆ | ಇತ್ತಿವನ ಸಲಹೋ |ಕರ್ತ ನೀನೆಂಬಮತಿ | ವ್ಯಕ್ತಿಗೈ ಇವನಲ್ಲಿಭಕ್ತಪರಿಪಾಲಕನೆ | ಅವ್ಯಕ್ತಮಹಿಮಾ 2 ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಭರ್ಮಗರ್ಭನ ಪಿತನೆ | ಪೇರ್ಮೆಯಲಿ ಪೊರೆಯೋಕರ್ಮಗಳ ಮಾಳ್ಪಲ್ಲಿ | ನಿರ್ಮಮತೆ ನೀಡಯ್ಯನಿರ್ಮಲಾತ್ಮನೆ ಹರಿಯೆ | ಧರ್ಮಗಳ ಗೋಪ್ತಾ 3 ಸಾರ | ಉಣಿಸಿವಗೆ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವವ್ಯಾಪ್ತನೆ ದೇವಸರ್ವ ಪ್ರೇರಕ ಹರಿಯೆ | ಸರ್ವಾಂತರಾತ್ಮಾದುರ್ನಿಭಾವ್ಯನೆ ಗುರು | ಗೋವಿಂದ ವಿಠಲನೆದರ್ವಿ ಜೀವಿಯ ಪೊರೆಯೆ | ಬಿನ್ನವಿಪೆ ಹರಿಯೇ 5
--------------
ಗುರುಗೋವಿಂದವಿಠಲರು
ರಾಘವೇಂದ್ರ ಸ್ವಾಮಿಗಳ ಸ್ತೋತ್ರ ವೃಂದಾವನ ನೋಡಿರೋ - ಗುರುಗಳವೃಂದಾವನ ಪಾಡಿರೋ ಪ ವೃಂದಾವನ ನೋಡಿ - ಆನಂದ ಮದವೇರಿಚೆಂದದಿ ದ್ವಾದಶ ಪೌಂಡ್ರಾಂಕಿತಗೊಂಬ ಅ.ಪ ತುಂಗಭದ್ರಾ ನದಿಯ ತೀರದಿ ಇದ್ದತುಂಗ ಮಂಟಪ ಮಧ್ಯದಿಶೃಂಗಾರ ತುಲಸಿ ಪದ್ಮಾಕ್ಷ ಸರಗಳಿಂದಮಂಗಳಕರ ಮಹಾ ಮಹಿಮೆಯಿಂದೊಪ್ಪುವ 1 ಕರ ಮಹಾಮಹಿಮೆಯಿಂದೊಪ್ಪುವ 2 ಸಿಂಧು ನಿತ್ಯ ಸನ್ನಿಧಿಯಿಂದ ನಿರುತ ಪೊಜೆಯಗೊಂಬ 3
--------------
ವೆಂಕಟೇಶವಿಟ್ಠಲ
ರಾಘವೇಂದ್ರ ಹರಿ ವಿಠಲ | ಕಾಪಾಡೊ ಇವಳಾ ಪ ಭೋಗಿ ಶಯನನೆ ಹರಿಯೆ | ನಾಗಾರಿವಾಹಾ ಅ.ಪ. ಮಂತ್ರಮಂದಿರ ಧೊರೆಯ ಅಂತರಂಗದಿ ಭಜಿಪಸತತದಿ ವಿಜಯಾರ್ಯ | ಚಿಂತೆಯಲ್ಲಿಹಳಾ |ಅಯೆ ಸತ್ಸುಕೃತದಿಂ ಹರಿದಾಸ್ಯ ಕಾಂಕ್ಷಿಪಳಮಾತೆ ಕೈ ಪಿಡಿ ಹರಿಯೇ | ಸಂತರುದ್ಧರಣಾ 1 ಭಾವದಲಿ ತವ ಮಹಿಮೆ | ಸ್ತವನಗೈಯ್ಯುವ ಕಾರ್ಯದಿವಸ ದಿವಸದಿ ವೃದ್ಧಿ | ಭಾವವನೆ ಪೊಂದೀಕವನ ರೂಪದಿ ಪ್ರವಹ | ಭುವಿಯೊಳಗೆ ಹರಿವಂತೆಹವಣಿಸೋ ಶ್ರೀಹರಿಯೇ | ಪವನ ವಂದಿತನೆ 2 ಭವ ಭಂಗ | ಕಾರುಣ್ಯಪಾಂಗ 3 ಭವ ಶರಧಿ | ದಾಟಿಸೋ ಹರಿಯೇ 4 ಕೈವಲ್ಯಪ್ರದ ಪುರುಷ | ದೇವದೇವೇಶ ಹರಿಗೊವತ್ಸನದಿಗಾವು | ಧಾವಿಸುವ ತೆರದೀನೀವೊಲಿಯು ತಿವಳಿಗೆ | ಭಾವದಲಿ ಮೈದೋರೊಭಾವಜನಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು