ಒಟ್ಟು 5094 ಕಡೆಗಳಲ್ಲಿ , 122 ದಾಸರು , 3288 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶುಭಾಮಲಕಾಯ ಋಜುಗಣಾಭರಣಾನಂದ ಮುನಿರಾಯಹರಿಗುಣಗಣವಾರಿಧಿಮಗ್ನನೆ ಜಯಪರಮಪದಜÕನೆ ಜಯತು ಸದಾ ಜಯ ಪ.ಶುಕ್ಲರುಧಿರನಿರ್ಲಿಪ್ತ ಪರತತ್ವಕ್ಲುಪ್ತನೆ ತ್ರಿಜಗವ್ಯಾಪ್ತಅಕ್ಲೇಶಾನ್ವಿತ ಮಾಯಾಮನಹರಅಜÕಜನೋದ್ಧರ ಜಯತು ಸದಾ ಜಯ 1ಶಲ್ಯರಾಜನ ಭಟಹಾರಿ ಮಹಾವಾತ್ಸಲ್ಯಾಂಕಿತ ಸುಖಕಾರಿಬಾಲ್ಯತನದಿ ಜಗದ್ಗುರುವೆನಿಸಿದೆ ಕೈವಲ್ಯದಾಯಕ ಪ್ರಭು ಜಯತು ಸದಾ ಜಯ 2ಸೂತ್ರಾರ್ಥದ ಧೀ ಮಾತ್ರದೇಹಿ ವಿಧಾತೃ ಜನಕ ಪದಪ್ರೇಮಪಾತ್ರಪೌತ್ರ ಪ್ರಸನ್ನವೆಂಕಟಪತಿ ಪೂರ್ಣವೇತೃ ನಂಬಿದೆ ಜಯತು ಸದಾ ಜಯ 3
--------------
ಪ್ರಸನ್ನವೆಂಕಟದಾಸರು
ಶರಣು ಶ್ರೀನಿವಾಸ | ಪಾಲಿಸು |ಶರಣ ಜನರ ಪೋಷಾರಿಪಕರುಣದಿ ನಿನ್ನಯ ಚರಣವ ನಂಬಿದ |ಶರಣನಭವಭಯ ದುರಿತವ ಕಳೆಯುವಅ.ಪನಂಬಿದವರ ಪೊರೆವಾ | ಭಕ್ತ ಕು | ಟುಂಬಿ ವಾಸುದೇವಾ |ಕಂಬುಕಂಧರಕಮ | ಲಾಂಭಕ ಶ್ರೀವರಶಂಭು ಸಖನೆ | ಶುಕ್ಲಾಂಬರಧರಹರಿ||ಶರಣು||1ಪದ್ಮನಾಭಎನ್ನ | ಪಾಲಿಸು | ಪದ್ಮಾವತಿರಮಣಾ |ಪದ್ಮನಯನ ಮುಖ | ಪದ್ಮವ ತೋರಿಸುಪದ್ಮೋದ್ಭವನುತ | ಪದ್ಮಮಾಲಾಧರ ||ಶರಣು||2ತಿರುಪತಿ ಗಿರಿವಾಸಾ |ಕಾಣಿಕೆ| ಬರಲತಿ ಸಂತೋಷಾ |ಪರಿಪರಿ ವಿಧದಲಿ | ಹರಕೆಯ ತರಿಸುವ |ಉರಗಶಯನ ಗೋ | ವಿಂದನೆ ಶ್ರೀಹರಿ ||ಶರಣು||3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಶರಣು ಸಕಲ ಪ್ರಾಣನಾಥಸರಸಿಜಭವ ಪದವಿಭೋಕ್ತಮೂರವತಾರಿಮುಖ್ಯಪ್ರಾಣಹರಿಪರಾಯಣ ತೇ ನಮೊ ಪ.ತುತ್ತಿಸಿನನ ಬಿಸುಟು ಜಗದಕರ್ತರಘು ಪುಂಗವನ ಪದದಿಭಕ್ತಿ ಬಲಿದು ಇತರ ವಿಷಯಚಿತ್ತನಾಗದ ಸುಗುಣಧೀಹತ್ತು ಹೆಡಕಿನವನ ವನವಕಿತ್ತು ಸಭೆಯನುರುಹಿ ಭಯವಬಿತ್ತಿಜನನಿಕುಶಲ ಒಡೆಯಗಿತ್ತ ಹನುಮ ತೇ ನಮೊ 1ಮುಪ್ಪಿನವಳ ಮಗನನರಿದು ಕೃಷ್ಣಾರ್ಪಣವನೆ ಮಾಡಿನೃಪರಕಪ್ಪಹೊರಿಸಿ ತಂದು ಮಖಕೆಒಪ್ಪಿಸಿದ ಅಗ್ರಜಾತಗೆಭೂಪನಣ್ಣನ ಅಣುಗರನ್ನುಅಪ್ಪಳಿಸಿ ತಮಸಕೆ ಕಳುಹಿತಪ್ಪದೆಂದೂ ರಂಗ ಸೇವೆಯೊಳಿಪ್ಪ ಶ್ರೀಭೀಮ ತೇ ನಮೊ 2ವಿಷ್ಣುಭಟರ ಮತಿಗೆ ಕಲಿಯುವೇಷ್ಟಿಸಿರಲು ಬ್ರಹ್ಮಸೂತ್ರಸ್ಪಷ್ಟ ತಿಳುಹಿ ತಾತ್ವಿಕ ಜನಶ್ರೇಷ್ಠಿ ನೆರಹಿ ಮಿಥ್ಯರಭ್ರಷ್ಟವಚನ ನೀಕರಿಸಿ ನಿಜೇಷ್ಟಮತರ ಹೊರೆದೆ ಗುರುವರಿಷ್ಟ ಮಧ್ವಪ್ರಸನ್ನವೆಂಕಟಕೃಷ್ಣ ಮತ್ಯ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ಶರಣುಹರಿಆನತ ಜನಾಶ್ರಯದುರಿತಕರಿಕಂಠೀರವಶರಣುಸಿರಿಭೂವರಾಹದೇವನೆಶರಣು ವರಯಜ್ಞಾತ್ಮಕ ಪ.ಅನಿಮಿಷರುಸನಕಾದಿಮುನಿಗಳುಅನುದಿನದಿ ಸ್ತುತಿಗೈಯಲುದನುಜಹೇಮಾಂಬಕನ ಕೃತ್ಯಕವನಿ ಬಳಲಿ ಮೊರೆಯಿಡುತಿರೆಘನಕೃಪಾಂಬುಧಿ ಕ್ಷೀರವಾರಿಧಿಮನೆಯಲರಿದತಿ ವೇಗದಿವನಜಭವ ನಾಸಾಪುಟದಿ ನೀಜನಿಸಿದಗಣಿತ ಮಹಿಮನೆ 1ಲೀಲೆಯಿಂದಣುವಾಗಿ ಅಮರರಜಾಲಕಚ್ಚರಿಯಾಗಲುಮೇಲೆ ಗಿರಿಯಂತಾದೆ ಹರಿಯೆ ತಮಾಲ ವರ್ಣಾಂಕಿತ ಮುಖಬಾಲಚಂದ್ರಸಮಾನ ಕೋಡನೆ ವಿಶಾಲ ವಿಮಲ ಚರಿತ್ರನೆಬಾಲ ಸುಬ್ರಹ್ಮಣ್ಯ ದ್ವಿಜವರಶೀಲಪಾಲಿತ ಚರಣನೆ 2ವ್ಯಗ್ರ ಪ್ರಳಯಾಂಬುಗಿಳಿದುಘನಘರ್ಘರರ್ಘರ ಧ್ವನಿಗಳಿಂಶೀಘ್ರ ವೈರಿಯ ಸದೆದು ಕೋಡಾಗ್ರದಲಿಮಹಿನೆಗಹಿದೆಸ್ವರ್ಗಜನರಿಂದಮಿತ ಸ್ತುತಿಯನವಗ್ರಹಿಸಿ ವರಕರುಣದಿಉಗ್ರತೇಜ ಪ್ರಸನ್ವೆಂಕಟಗಗ್ರನಿಲಯ ನಮೊ ಹರೆ 3
--------------
ಪ್ರಸನ್ನವೆಂಕಟದಾಸರು
ಶಾಂಭವಿ ನಿನ್ನ ಪಾದಾರವಿಂದದಿಂದೆಕಾಂಬುವೆ ಕರಣೇಂದ್ರಿಯ ವ್ಯಾಪಕ ತಾಯಿ ತಂದೆಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅಷ್ಟದಳದಕಮಲಮಧ್ಯದಲ್ಲೀ |ಸ್ಪಷ್ಟ ತೋರುವವೆರಡೂ ದಳದಲ್ಲೀ |ಮುಟ್ಟಿ ನೋಡುವರು ಮಹಾತ್ಮರು ಅಲ್ಲೀ |ಬಟ್ಟ ಬಯಲಿನ ಹಾದಿ ಬೆಳಗಿಲ್ಲೀ1ಭೃಕುಟದಾಚಿಯಲಿ ಹತ್ತಂಗುಲ ಸ್ಥಾನಾ |ತ್ರಿಕೂಟ ಶ್ರೀಹಾಟ ಗೋಲ್ಹಾಟ ಕಾರಣಾ |ಜೌಟ ಪೀಠದಿಂದ ಧ್ಯಾನಾ |ಪ್ರಕಟವಾಗುವಳುಭ್ರಮರಗುಂಫಾ ಸ್ಥಾನಾ2ಏಕಾಕಾರೀ ಬ್ರಹ್ಮಾಂಡ ಪಿಂಡ ಮೀರಿ |ಓಂಕಾರ ನಾದ ಬಿಂದು ಕಲಾಧಾರಿ |ಲೋಕೋದ್ಧಾರಕ ಶಕ್ತಿ ಅವತಾರೀ | ಶಾಕಂಬರಿಶಂಕರಗೆ ಶಂಕರೀ ಶಾಂಭವಿ ನಿನ್ನ ಪಾದಾರವಿಂದದಿಂದೆ3
--------------
ಜಕ್ಕಪ್ಪಯ್ಯನವರು
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
--------------
ಗೋವಿಂದದಾಸ
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
--------------
ಪ್ರಾಣೇಶದಾಸರು
ಶಿವಸುಖ ದಾರಿಯ ನೋಡಣ್ಣಾ |ಅದು ಕೂದಲ ಎಳೆಕಿಂತ ಬಲು ಸಣ್ಣಾಪಭವದಲಿ ಮುಳುಗಿಹ ಪ್ರಾಣಿಯ ಕಾಣದೆ |ಘವ ಘವಿಸುವ ಚಿನ್ನದ ಬಣ್ಣಾಅ.ಪ.<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||ಘೋಷ ಸುಶಬ್ದದ ದಶಮದ್ವಾರದಿ |ಭಾಸುರಪರಮಣು ದ್ವಾರಣ್ಣಾ1ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು |ಶೂನ್ಯಕೆ ಬೆಳಗುತ್ತಿಹುದಣ್ಣಾ || ಈ ಜಗವೆಲ್ಲವುಮೃಗಜಲದಂದದಿ | ಸಚ್ಚಿತ್ಸೂರ್ಯನ ಕಿರಣಣ್ಣಾ2ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿಬಗೆಯಣ್ಣಾ || ಘನಗುರು ಶಂಕರ ತನ್ಮಯನಾಗಿಹ |ಚಿನುಮಯ ಗುರುತವೆ ನಿಜವಣ್ಣಾ3
--------------
ಜಕ್ಕಪ್ಪಯ್ಯನವರು
ಶಿಷ್ಯನು ಶಿಷ್ಯನು ಎಂದು ತುಂಬಿಯಿಹುದುಜಗ ಶಿಷ್ಯನದ್ಯಾತರಶಿಷ್ಯಶಿಷ್ಯನಾದರೆ ತನುಮನವನರ್ಪಿಸಿ ದೃಢದಲಿಶಿಷ್ಯನಾದರೆ ಸಚ್ಛಿಷ್ಯಪಹೇಳಿದಲ್ಲಿಗೆ ಹೋಗಿ ಹೇಳಿದುದನೆ ಮಾಡಿ ಬಾಲನಂತಿಹನವಶಿಷ್ಯಕಾಲತ್ರಯಗಳಲಿಗುರುಪೂಜೆವಂದನೆ ತಪ್ಪದೆ ನಡೆಸುವವಶಿಷ್ಯಬಾಲೆಸುತರು ಬಂದರಾದರೆ ತನ್ನಂತೆ ಬಾಳ್ವೆ ಮಾಡೆಂಬವಶಿಷ್ಯ1ಮಾನವನಾಗಿ ಆರೇನೆಂದರೆ ಅಭಿಮಾನ ಹಿಡಿಯದವಶಿಷ್ಯಹೀನ ಕೆಲಸಗಳ ಮಾಣಿಸುತೆಲ್ಲವ ತಾನೆ ದೂರನಹಶಿಷ್ಯಏನಿದು ನಿನ್ನ ಹಣೆಯ ಬರಹವೆಂದೆನೆ ಯೋಚನೆಗೊಳಗಾಗದವಶಿಷ್ಯ2ದೇಹಾಭಿಮಾನವನು ಗುರುಪಾದವಕೊಪ್ಪಿಸಿ ಶಠತೆಯ ಕಳೆದವಶಿಷ್ಯಕರುಣಾಳು ಸದ್ಗುರು ತತ್ವ ಜ್ಞಾನವ ಹೇಳೆ ಆಲಿಸಿ ನಲಿವವಶಿಷ್ಯಅರಿತು ಮನಕೆ ಜ್ಞಾನವ ತಂದು ಅದರಂತೆ ನಡೆವವಶಿಷ್ಯಗುರುಚಿದಾನಂದ ಸದ್ಗುರು ವಾಕ್ಯದಿ ಗುರುವಾದವನವಶಿಷ್ಯ3
--------------
ಚಿದಾನಂದ ಅವಧೂತರು
ಶೋಭನ ಶೋಭನವೆ ನಮ್ಮಶ್ರೀ ಭೂದೇವಿಯರ ಅರಸು ವೆಂಕಟಗೆ ಪ.ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗಇಂದಿರೆ ಹರುಷದಿಂದುದಿಸಿ ಬಂದು ||ಮಂದಾರ ಮಾಲೆಯ ಹಾಕಿದ ದೇವಗೆಕಂದರ್ಪಕೋಟಿ ಲಾವಣ್ಯ ಮೂರುತಿಗೆ 1ಜನಕನ ಮನೆಯಲ್ಲಿ ರಾಜಾಧಿರಾಜರುಎಣಿಕೆಯಿಲ್ಲದೆ ಬಂದಿರಲಾಗಿ ||ಸನಕಾದಿವಂದ್ಯನ ಕಂಡು ಸಂತೋಷದಿಜನಕಜೆ ಮಾಲೆಯ ಹಾಕಿದ ರಾಮಗೆ 2ರುಕುಮನು ಶಿಶುಪಾಲಗೀವೆನೆಂಬ ಮಾತಿಗೆಸಕಲ ರಾಯರು ಬಂದಿರಲಾಗಿ ||ಭಕುತಿ ವತ್ಸಲನ ಕಂಡು ಸಂತೋಷದಿರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ 3ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯುಮಿತ್ರವಿಂದಾ ಲಕ್ಷಣಾ ಜಾಂಬವತಿ ||ಮತ್ತೆ ಸೋಳಾಸಾಸಿರ ಗೋಪಿಕೆಯರಪ್ರತ್ಯಕ್ಷವಾಳಿದ ಕಲ್ಯಾಣಗೆ 4ಪದ್ಮದೇಶದಲೊಬ್ಬ ದೇವಾಂಗನೆಯುಪದ್ಮಮುಖಿಯು ಶ್ರುತಕೀರ್ತಿಯಾಗಿ ||ಪದ್ಮನಾಭ ಶ್ರೀ ಪುರಂದರವಿಠಲಗೆಪದ್ಮಾವತೀ ಪ್ರಿಯ ಶ್ರೀನಿವಾಸಗೆ 5
--------------
ಪುರಂದರದಾಸರು
ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನಉಡುಪಿನಿಲಯಾಗೇ ಪಸುಮನಸರಾಳ್ದವನ ವರಜ ಬಾ |ಕಮಲೆಸದನಮುಖಕಂಜರವಿಬಾ |ವಿಮಲ ಗುಣಾರ್ಣವನೀಲಜಲದನಿಗಾತ್ರಾ ಬಾ ||ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |ವಹನ ಪತತ್ರಾ ಬಾ ನತಜನ ಮಿತ್ರಾ ಬಾಹಸಿಯಾ ಜಗುಲೀಗೇ 1ಅಷ್ಟನಾಮ ಒಪ್ಪುವನೇ ಬಾ |ದುಷ್ಟ ದಿತಿ ಸುತ ಮದಹರಣಾ ಬಾ |ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |ಅಕ್ಷರಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ 2ಮಾತುಳರಿಪುವನಅನಳಬಾ |ಶ್ವೇತವಹನ ರಥಸಾರಥಿಬಾ |ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||ಗೋಕುಲ ತ್ರಾತಾ ಬಾ ಲೋಕೈಕದಾತಾಬಾ |ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾಹಸಿಯಾ ಜಗುಲೀಗೇ 3ವಾಮನ ಕೇಶವ ಹಯಮುಖ ಬಾ |ಭೀಮವಿನುತನಿಃಸೀಮಾ ಬಾ |ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||ದಶರಥ ರಾಮಾ ಬಾ ಬಾಣವಿರಾಮಾ ಬಾ |ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾಹಸಿಯಾ ಜಗುಲೀಗೇ 4ಕಂದರ್ಪಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |ಮಂದೇತರಮುದಘಟಜ ಪ್ರಮುಖ ಮುನಿವಂದ್ಯಾ ಬಾ ||ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ 5ಕ್ಷಿತಿಧರ ಜಿನಧರ ಸಖನೇ ಬಾ |ಅತುಳಮಹಿಮನೆ ಅಜಿತನೇ ಬಾ |ಸತಿಗಮರ ಸದನದಕುಸುಮತಂದಚ್ಯುತನೇ ಬಾ ||ಮೂರುತಿ ಸುತನೆ ಬಾ ಲೋಕ ವಿತತನೆ ಬಾ |ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ 6ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |ಮಾಣದೆಭಕ್ತರ ಪೊರವುತಿಹನೆ ಸತ್ರಾಣಾ ಬಾ ||ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |ನಿಜ ವಿಜ್ಞಾನಾ ಬಾನಿತ್ಯಕಲ್ಯಾಣಾ ಬಾಹಸಿಯಾ ಜಗುಲೀಗೆ 7
--------------
ಪ್ರಾಣೇಶದಾಸರು
ಶ್ರೀ ಅಚ್ಯುತಾನಂತ ಗೋವಿಂದ ಸ್ತೋತ್ರ42ಪ್ರೋಚ್ಯಸುಗುಣಾರ್ಣವ ಶ್ರೀಶನಿರ್ದೋಷಅಚ್ಯುತಾನಂತ ಗೋವಿಂದಾಯ ನಮಃ || ಪಪ್ರಾತರುದಿತಾರ್ಕ ನಿಭ ತೇಜಸ್ವಕಾಂತಿಮಾನ್ರತ್ನ ಛವಿ ಜ್ವಲಿಸುವ ಕಿರೀಟಿಯೆ ಶರಣುಪ್ರತತ ಪ್ರಜ್ವಲ ಮಂಡಲೋಪಮ ಕುಂಡಲಗಳುವಿತತ ಮಹಿಮನೆ ನಿನ್ನ ಕಿವಿಯಲಿ ಪೊಳೆಯುತೆ 1ರಾಜರಾಜೇಶ್ವರನೆ ಸರ್ವಾಯುಧೋಪೇತನಿಜಬಲಾಮಿತ ಶಕ್ತ ಚತುರ್ಬಾಹು ಶರಣುಭಜಕರಕ್ಷಕ ಶಂಖಚಕ್ರಧರದೇವನೆತ್ರಿಜಗದೀಶನೆ ವಿಪೋಪರಿಸಂಸ್ಥಸ್ವಾಮಿ2ಅನಂತ ನಿತ್ಯನೆ ನಿನ್ನನ್ನ ಸರ್ವದೇವತೆಗಳುಸನಕಾದಿ ಮುನಿವರರು ಉಪಾಸಿಪರು ಶರಣುಘನವರದ ಅಭಯದನೇ ಸರ್ವ ಲೋಕವಕಾಯ್ವವನಜಭವಪಿತ ನಮೋ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಆಂಗೀರಸ ನಾಮ ಸಂವತ್ಸರ ಸ್ತೋತ್ರ149ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹÀರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪಸೂರ್ಯಛಾಯಾಸೂನುಸೂರಿಸಾಧುಗಳಿಗೆಕಾರ್ಯಾನುಕೂಲ ಸರ್ವೇಷ್ಟ ಪೂರೈಸುವನುಕ್ರಿಯಾ ರೂಪದಿ ವಿಷ್ಣುವರವಾಯು ದೇವನೊಳು ಇರುತಸಂವತ್ಸರ ನಾಯಕರೋಳು ಕ್ರಿಯೆಗಳ ಮಾಡಿಸುವ 1ನರಹರಿಯ ಒಲುಮೆ ಶನಿರಾಜನಲಿ ಬಹು ಉಂಟುನರಕ್ಷೇಮೋಪಾಯ ಅಂದು ದಶರಥಗೆ ಪೇಳಿದ ಪಾದ್ಮದಿಹರಿನಾಮೋಚ್ಛಾರಣೆ, ಶನಿಕೃತ ನೃಹರಿ ಸ್ತೋತ್ರ ಪಠಣದಿಪಾರುಗಾಣುವರು ಸಾಧು ಸಜ್ಜನ ಭಕ್ತರು 2ಅನಂದಮಯ ಹರಿಯು ಆಂಗೀರಸ ಸಂವತ್ಸರದಿಜನರಿಗೆ ಯೋಗ್ಯತಾನುಸಾರ ಸುಖವನ್ನೇಈವಜನರಿಗೆ ಆದಿಯಲಿ ಸುಕ್ಷೇಮ ಕಾಲವು ಕಥೆಯಲ್ಲಿ ದುರ್ಭಿಕ್ಷನೂತನ ವಸ್ತು ಉತ್ಪತ್ತಿ, ಧಾನ್ಯಾದಿಗಳು ಸಮೃದ್ಧಿ ಇದ್ದರೂ ಕ್ಷಾಮ 3ಬ್ರಹ್ಮಪಾರ ಸ್ತೋತ್ರವ ಕಂಡು ಋಷಿಗೆ ಉಪದೇಶಿಸಿದಬ್ರಾಹ್ಮಣೌಷಧಿ ಪತಿಯು ಸುಧಾಮೂರ್ತಿ ಚಂದ್ರಮಹಿಗೆ ಅಹ್ಲಾದವ ನೀವನು ಮಂತ್ರಿಸ್ಥಾನವ ವಹಿಸಿಅಜಸ್ಪತಿ, ಬೃಹಸ್ಪತಿ, ಶನಿಕುಜಗೋಪಾಲಸರ್ವರಿಗೂ ನಮೋ ನಮೋ 4ರಸನೆ ಲೋಲ್ಯಾಟವಾಹನಆಟೋಪ ಹೆಚ್ಚಿದರೂರಸನೆ ಸಹ ಭಕ್ತಿಯೂ ಸಹ ಹೆಚ್ಚುವುದು ಮದುವೆ ಜನನ ಕಡಿಮೆಶಾಸ್ತ್ರ, ವಿಜ್ಞಾನ, ವಿಷ್ಣು ಸಹಸ್ರನಾಮ ಪ್ರತಿಪಾದ್ಯಸರಸಿಜಾನನತಾತಪ್ರಸನ್ನ ಶ್ರೀನಿವಾಸನಲಿ ಶರಣು ಶರಣಾದೆ5ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕಂಚಿ ಕಾಮಾಕ್ಷಿ82ಶರಣು ಶರಣು ಶರಣು ಶರಣು ಕಾಮಾಕ್ಷಿಶರಣು ಮೋಹಿನಿಮಾವಾಣಿಶರ್ವಾಣಿಪಹರಿಸಿರಿಸರಸ್ವತಿ ಸಹ ಪ್ರಜ್ವಲಿಸುವೆಗಿರಿಜೆ ಶರಣು ಕಂಚಿನಿಲಯೆ ಸತತಕಾಯೆ ಅ ಪಏಕಾತ್ಮಾನಂದಮಯನಿಖಿಳಗುಣಾರ್ಣವಜಗಜ್ಜನ್ಮಾದಿಗಳಿಗೆ ಮುಖ್ಯ ಕಾರಣೆ ವ್ಯಾಪ್ತೆಅಕಳಂಕ ಪುಂಸ್ತ್ರೀಗಾತ್ರೆ ಚಿನ್ಮಯೆ ವೃಂದಾರಕರಿಗೆಪೀಯೂಷಕರುಣಿಸಿ ಉಣಿಸಿದೆ1ಭಾಮಾ ರುಕ್ಮಿಣಿ ಸೀತಾ ಸೋಮಸೋದರಿ ರಮೆಕಮಲಾಸನಾದಿ ಸುಮನಸವಂದಿತೆ ತ್ರಾತೆಕಮಲನಾಭನ ಸೇವೆ ವನಮಾಲೆ ಚಾಮರಾದ್ಯಮಿತ ರೂಪದಿ ಮಾಳ್ಪ ಮಹಾಲಕ್ಷ್ಮೀ ನಮೋ ನಮೋ 2ಪಕ್ಷಿವಾಹನ ಸಾಕ್ಷಿ ಚೇತಾನಿರ್ಗುಣ ಅಧೋಕ್ಷಜ ಸರ್ವಾಂತರಾತ್ಮನ ತೀವ್ರಪ್ರೇಕ್ಷಿಸೊ ಜ್ಞಾನ ಭಕುತಿ ಮತಿ ಎನಗಿತ್ತುರಕ್ಷಿಸೆ ಸರಸ್ವತಿ ಫಣಿರ ಪಕ್ಷಿಪ ನುತೆ 3ಹೇಮಅಂಕುಶಪಾಶಇಕ್ಷುದಂಡವು ಪುಷ್ಪಕೋಮಲಹಸ್ತ 2 ನಾಲ್ಕಲ್ಲಿ ಶೋಭಿತವುಕಾಮಿತವರಪ್ರದೆ ಕಾತ್ಯಾಯನಿ ಉಮಾಹೈಮವತಿಯೆ ಶಿವೆ ದಯಮಾಡಿ ಪೊರೆಯೆನ್ನ 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ ತತ್ ಶಕ್ತಿ ಪ್ರದರ್ಶಯನ್ಸೂತ್ರವು ಮಣಿಗಳೊಳಂತೆ ಧಾರಕಹರಿವೃತತಿಜಪಿತ ವಿಷ್ಣು ಪ್ರಸನ್ನ ಶ್ರೀನಿವಾಸಗತಿಪ್ರಿಯತರೆ ಶಿವೆ ಸತತ ಪಾಲಿಸೆ ಎನ್ನ5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕಂಚೀಪುರ ನರಸಿಂಹ9ಶರಣಂ ಶರಣಂ ಪಾಲಯ ಮಾಂ ಪವರಕಂಚೀಪುರ ಯೋಗನೃಕೇಸರಿಪಾಲಯ ಮಾಂ ಅ .ಪಪೂರ್ಣ ಅದೋಷ ಸುಚಿನ್ಮಯ ನೃಹರೇಪೂರ್ಣಾನಂದ ಭೋ ಏಕಾತ್ಮ 1ಮತ್ಕುಲದೇವ ಶ್ರೀ ವೆಂಕಟಕೃಷ್ಣವರದ ಕೃಪಾಂಬುಧೆ ಪಾಲಯ ಮಾಂ 2ಯೋಗಕ್ಷೇಮಂ ಮಮವಹ ಸ್ವಾಮಿಕಾಮಿತಫಲದ ದಯಾನಿಧೆ ಭೂಮನ್ 3ಮೀನಾದಿದಶ ಅನಂತ ಸುರೂಪಅನುಪಮ ಸುಖಮಯ ಪಾಲಯ ಮಾಂ 4ಮಂದಜಭವಪಿತ ಪ್ರಸನ್ನ ಶ್ರೀನಿವಾಸಇಂದಿರಾಪತಿ ನರಸಿಂಹ ನಮಸ್ತೆ 5ಶ್ರೀ ಚಿಂತಲವಾಡಿ ನರಸಿಂಹ
--------------
ಪ್ರಸನ್ನ ಶ್ರೀನಿವಾಸದಾಸರು