ಒಟ್ಟು 25998 ಕಡೆಗಳಲ್ಲಿ , 137 ದಾಸರು , 9262 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರಿಗೊಳಗಹುದೇನೆಲೊ ಬರಿ ದೂರಿಗೊಳಗಹುದೇನೆಲೊ ಹರಿಧ್ಯಾನವನು ನೀ ಮಾಡದೇ ಪ ಅಪರೂಪ ಜನ್ಮವು ಬಂದಿದೆ ಕಪಿಚೇಷ್ಟೆಗಳು ನಿನ್ನ ಹೊಂದಿದೆ ಜಪ ಶಾಸ್ತ್ರದೊಳು ಹೀಗೆಂದಿದೆ 1 ಕಟಪತನಗಳದ್ಯಾತಕೋ ಯಿದು ತ್ರಿಪುಟಿಯೊಳಗದು ನೀತಿಕೋರ ನ ಪರನಾಗಲಿದ್ಯಾಕೊ ನೋಡದ ಗುಪಿತದಿಂದಲಿ ಭಜಿಸದೆ 2 ನಾನು ನನ್ನದು ಎಂಬುವೇ ಅಲ್ಲಿ ಗೇನು ಬಂದರು ತಿಂಬುವೇ ಹಾನಿಗೊಳಗಾಗಿ ನಮ್ಮಯ ಶ್ರೀನಿವಾಸನ ಭಜಿಸದೆ 3 ಎಂಟುಗೇಣಿನ ದೇಹವು ಅದು [ಕುಂಟು]ಸೋಹಮಸ್ಮಿಯ ಭಾವವು ಕಂಟಕಾಂತಕ ತಲಸಿಮದ್ಗುರು ವುಂಟು ನಿನ್ನೊಳಗರಿಯದೆ 4
--------------
ಚನ್ನಪಟ್ಟಣದ ಅಹೋಬಲದಾಸರು
ದೃಢಚಿತ್ತದೊಳಗೆನ್ನ ಒಡೆಯನೀತಗೆ ಮುನ್ನ ಪಡಿಯೆನಿಪರಿನ್ನುಂಟೆ ಪೊಡವಿಯಲ್ಲಿ ಜನವಾರ್ತೆಯನೆ ಕೇಳಿ ವನಿತೆಯೊಳು ಖತಿತಾಳಿ ಇನಿತು ಕಾಡಿದ ಚಾಳಿಯೊರೆವೆ ಕೇಳಿ ಮಡಿವಳನ ನುಡಿಗಾಗಿ ಕಡುಮೂರ್ಖ ತಾನಾಗಿ ಅಡವಿಗಟ್ಟುವರೇನೆ ಮಡದಿಯನ್ನೆ ಧರ್ಮಪತ್ನಿಯುಮಂತು ಪೂರ್ಣಗರ್ಭವನಾಂತ ಅರ್ಧಾಂಗಿಯನ್ನುಳಿದ ನಿರ್ದಯಾತ್ಮ ದಯೆಯೆಂಬುದಿವನಲ್ಲಿ ತೋರದಿಲ್ಲಿ ಪ್ರಿಯರಾರು ಮತ್ತಿವಗೆ ಧಾತ್ರಿಯಲ್ಲಿ ಭಯವಿಲ್ಲ ಮಾತಿನೊಳು ನಯವದಿಲ್ಲ
--------------
ನಂಜನಗೂಡು ತಿರುಮಲಾಂಬಾ
ದೃಢತರದ ಭಕುತಿಯಾ ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು ಪರಮ ಪಾವನ ಸತ್ಯಜ್ಞಾನ ಶ್ರೀ ಗುರುವರನೇ ತವ ಚರಣಕೆರಗುವೆ ಪ ಕರ್ಮಗಳೊಂದು ನಾನರಿಯೇ ನಿನ್ನಯ ಪಾಲಿಗೆ ಇಂದು ಚರಣಗಳ ದ್ವಂದ್ವಕೆ ಮಾಡದಲೆ ಸಲಹೋ ಆನಂದತೀರ್ಥರ ಪೀಠಪೂಜನೇ 1 ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು ಜ್ಞಾನದ ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ 2 ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು ಹನುಮೇಶವಿಠಲನ ಸ್ಮರಣೆ ಎಂಬುವುದನ್ನು ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು ಜ್ಞಾನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ 3
--------------
ಹನುಮೇಶವಿಠಲ
ದೃಷ್ಟಿ ತಾಕಿತೆ ನಿನಗೆ ಶ್ರೀರಾಮ ಸುಂದರತರ ಮುಖ ಚಂದ್ರನ ನೋಡುತಲಿ ಸುಂದರಿಯರೆಲ್ಲ ಬಂದು ಕಂದ ನಿನ್ನ ಮುದ್ದಿಡಲು 1 ನೀಲ ಶುಭಕುಂತಲವ ನೀಲ ವೇಣಿಯರು ತಿದ್ದಿ ಲಾಲಿಸಿದ ಕಾರಣದಿಂ 2 ಮಂಗಳವಾದ ನಿನ್ನ ಕಂಗಳ ಢಾಳವನ್ನು ಅಂಗನೆಯರೆಲ್ಲ ನೋಡಿ ಹೆಂಗಿಸಿದ ಕಾರಣದಿಂ 3 ಮಾರಸುಂದರ ಸುಕು ಮಾರವರ ರೂಪವನು ಸಾರಸಾಕ್ಷಿಯರು ಕೂಡಿ ಮೀರಿಮಾತನಾಡಿದರಿಂ 4 ಮಾನವ ವಂದಿತನೆ ಮೌನಿಕುಲ ಸೇವಿತನೆ ಧೇನುಪುರ ವೆಂಕಟೇಶ ಶ್ರೀನಿವಾಸ ಪಾಲಿಸಲಿ 5
--------------
ಬೇಟೆರಾಯ ದೀಕ್ಷಿತರು
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1 ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2 ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3 ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4 ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5 ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6 ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7
--------------
ಶ್ರೀಪಾದರಾಜರು
ದೃಷ್ಟಿ ದೋಷವು ತಗಲಿತೆನ್ನ ಕಂದನಿಗೆ ಪ ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲು ಅ.ಪ ಸೇರು ಬೆಣ್ಣೆಯ ತಿಂದು ದೂರು ಕೇಳಿದೆನಿಂದು ಚಾರು ಮುಖಿಯರ ನೋಟ ಕ್ರೂರವೆಂದರಿ ಕಂದ ಈರೇಳು ಭುವನಗಳ ತಿಂದು ತೇಗುವ ದೇವ ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ 1 ಎಂದು ಕಾಣೆವು ಇಂಥಾ ಸುಂದರನ ನಾವೆಂದು ಮಂದಗಮನೆಯರ ನುಡಿ ಅಂದವಾಯಿತೆ ಕಂದ ಸಂದೇಹವಿಲ್ಲವರ ಶೃಂಗಾರಕೀ ಫಲವು ಜಲಧಿ ಮನುಮಥನ ಮನುಮಥನೆ ಗತಿ 2 ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು ನಾರಸಿಂಹಾದಿ ವರಮಂತ್ರಗಳ ಜಪವಾಯ್ತು ಭಾರಿ ಪುಸಿಯಾಯ್ತು ಜನನಿಯೊಲು ಹರಸಿದೀತನಲಿ ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ3
--------------
ವಿದ್ಯಾಪ್ರಸನ್ನತೀರ್ಥರು
ದೃಷ್ಟಿಯೊಳಗೆ ದೃಷ್ಟಿ ನಿಂತಿತು | ನೋಡಲಿನ್ನು ದೃಶ್ಯ ನಷ್ಟವಾಯಿತು | ಕಷ್ಟವೆಲ್ಲ ಕಡೆಗೆ ಸಾರಿ | ಅದೃಷ್ಟವನ್ನು ಮೀರಿ ನಿಂದು ನಿಷ್ಠೆಯಲ್ಲಿ ತುಷ್ಟಿಯಾಯ್ತು ನೀ ನೋಡು ಸಖಿಯೆ ಪ ಐದು ಮಂದಿ ಅಗಲಿ ಹೋದರೆ | ಐದಕೈದು ಕೂಡಿ ಬಂದು ಕೂಡದಾದರೆ | ಐದರೊಳಗೆ ನೋಡಲಿನ್ನು || ಐದು ಐದು ತಾನೆ ಅಲ್ಲ | ಐದನೇದರಲ್ಲಿ ನಿಂತೆನೇ | ನೀ ಕೇಳಿದೇನೆ ? 1 ಕರ್ಮವೆಲ್ಲ ಕಾಣದಾಯ್ತು | ಧರ್ಮವೊಂದು ಸರ್ವಕಾಲ ತೂಗಿ ನಿಂತಿತು |ಶರ್ವನಲ್ಲದಿನ್ನು ಮತ್ತೆ | ಉರ್ವಿಯಲಿ ಪೇಳದಾಗಿ ಪರ್ವತಾಗ್ರ ಭೂಮಿ ಒಂದು ನಿರ್ವಿಕಾರ ತೋರಿತಲ್ಲಾ 2 ಹಿಂದೆ ಎಂದು ಕಂಡಿದಿಲ್ಲ | ಈ ಸೋಜಿಗವನ | ಮುಂದೆ ದಾರಿಗುಸುರಲೀಗತೀ | ತಂದೆ ಭವತಾರಕನ | ಹೊಂದಿದವರ ಕೇಳಿದೇನೆ | ಎಂದು ಎಂದು ಹೀಗೆಂಬರೆ | ನೀ ಬಲ್ಲಿಯೇನೇ 3
--------------
ಭಾವತರಕರು
ದೇವ ಏನು ಬೇಡುವುದಿಲ್ಲ ನಾನು ನಿನ್ನ ಬೇಡುವೆ ಭವಭವದಿದನೆ ಕೊಡು ನೀನು ಪ ಶಿರ ನಿನ್ನ ಚರಣದಿ ಎರಗಲಿ ಕರ್ಣ ಹರಿಕಥೆಕೀರ್ತನೆ ಶ್ರವಣ ಮಾಡಲಿ ಪರಮಾತ್ಮಮೂರ್ತೆನ್ನ ನೇತ್ರ ನೋಡಲಿ ನಾಸಿಕ ಘ್ರಾಣಿಸಲಿ 1 ವÀದನ ನಿನ್ನನು ಸ್ತುತಿಸಲಿ ನಿನ್ನ ಜಿಹ್ವೆ ಕೊಂಡಾಡಲಿ ಹೃದಯವು ತವನಾಮ ತುಂಬಿಕೊಳ್ಳಲಿ ಮಧುಸೂದನನ ಪ್ರಸನ್ನತೆ ಮನವು ಬಯಸಲಿ 2 ಕರ ನಿನ್ನ ಚರಣಮಂ ನಿರುತ ಪೂಜಿಸಲಿ ದ್ವಯ ಚರಣಗಳುನುದಿನ ಯಾತ್ರೆಗೈಯಲಿ ಪರಿಪರಿ ತವಲೀಲೆಯೊಳು ಬುದ್ಧಿ ನಿಲ್ಲಲಿ ಎನ್ನ ಶರೀರ ಶ್ರೀರಾಮನ ಚರಣಕೊಪ್ಪಲಿ 3
--------------
ರಾಮದಾಸರು
ದೇವ ಕರುಣಾಳು ನೀ ಕಾವಲಾಗಿರುವುದಕೆ ಆವ ವೇತನ ಕೊಡುವೆ ಶ್ರೀ ವರನೆ ನಿನಗೆ ಪ. ರೂಢ ಕೈಪಿಡಿದು ಕಾಪಾಡುತಿಹ ಬಿರುದ ಪಾಡಿ ಪೊಗಳುತ ನಮಿಸಿ ಬೇಡಿಕೊಂಬುವೆನು ನಾ ಮಾಡಿದಪರಾಧಗಳು ನೋಡಲದ್ಭುತವು 1 ನಡೆ ತಪ್ಪು ನುಡಿ ತಪ್ಪು ನಿಂತಲ್ಲಿ ಬಹು ತಪ್ಪು ಖಡುಮೋಹ ಕೃತ ತಪ್ಪು ಕಾಮಕೃತ ತಪ್ಪು ಮಾಡದಿ ಮನೆ ಮಿತ್ರ ಧನ ಒಡವೆಯಾಶೆಯು ತಪ್ಪು ಒಡೆಯನೀ ಕ್ಷಮಿಸೆಂದು ವಂದಿಸುವೆ ನಿಂದು 2 ಯುಕ್ತಾಯುಕ್ತವನರಿಯೆ ಎನ್ನಹಂಕೃತಿ ಮರೆಯೆ ಭಕ್ತಿ ಮುಕ್ತಿದ ಸರ್ವ ಶಕ್ತಿ ಶ್ರೀ ಹರಿಯೆ ಭಕ್ತವತ್ಸಲ ವೆಂಕಟಾದ್ರಿ ಶೇಖರ ಸಿರಿಯೆ ಯುಕ್ತಿಯಿಂದಲಿ ಎನ್ನ ಪಾಲಿಸುವ ದೊರೆಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ ಕುಂಡ ಗೋಳಕರರ ಸನ ಮನಿಯಲಿ ಜನ ಉಂಡ ವೆಂಜಲ ಬಳಿದು ಹಿಂಡ ರಾಯರ ಮುಂದ ಕುದುರೆಯ ತೊಳೆವುತ ಭಂಡಿಯ ಹೊಡೆವುತ ಪಾರ್ಥನವಶವಾಗಿ1 ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು ನಿಲ್ಲದೇ ಮಾರ್ಗದಿ ಬರುತಿರಲು ಮುಳ್ಳು ಮುರಿಯವಳ ಕಾಲವ ಹಿಡಿವುತ ಸಂತೈಸಿ ಕಳುಹಿದ 2 ಜಾರ ಚೋರನೆನಿಸಿ ನಿರುತ ಗೋವಳರುಂಡನ್ನ ಸವಿದು ಗುರುವರ ಮಹಿಪತಿ ಪ್ರಭು ಜನ್ಮರಹಿತನವ ತರಿಸಿ ಯಶೋಧೆಯ ಮೊಲೆ ಪಾಲವನುಂಡು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ತ್ರಾಹಿ ಗೋಪಾಲಕೃಷ್ಣ ದೇವ ತ್ರಾಹಿ ಪ ದೇವ ತ್ರಾಹಿ ದಯಯಾ ವನಚತುರ ನಿರಾವರಣಾಖಿಲ ಭಾವಭರಿತ ನಿಜಪಾವನ ಭಕ್ತಜನಾವಳಿಸಂವೃತ ಭಾವಜಜನಕ ಅ.ಪ ನಿರ್ಗುಣ ನಿರುಪಮ ದುರ್ಗಮಗುಣಗಣ ನರ್ಗಳಾವಾಸನಾ ನಿರ್ಗಮಹೇತ್ವಪವರ್ಗದ ಕೃಷ್ಣಾ 1 ಇಂದಿರಾ ಮುನಿ ಮನೋಮಂದಿರ ವಿನತಾ ನಂದನವಾಹನ ಕುಂದರದನ ಕುರು ನಂದನ ಸೇನಾ ವೃಂದನಿಷೂದನ ನಂದನ ಕೃಷ್ಣಾ 2 ಅರ್ಜುನಪಾಲಕ ದುರ್ಜನಶಿಕ್ಷಕ ಸಜ್ಜನರಕ್ಷಕ ಭರ್ಜಿತಕರ್ಮ ಸುದುರ್ಜಯ ಮೋಕ್ಷದನಿರ್ಜರ ತಿರುಪತಿ ನಿರ್ಜಿತ ವೆಂಕಟಕೃಷ್ಣ 3
--------------
ತಿಮ್ಮಪ್ಪದಾಸರು
ದೇವ ದೇವ ದೇವ ದಿವಿಜರೊಡಿಯನೆ ಭಾವ ಪೂರ್ವಕ ವಿಧದಿ ಭಜಿಸುವೆನು ನಾನು ಪ ನಂದಗೋಪಿಯ ಕಂದನಾದ ಸುಂದರಾಂಗನೆ ಸಿಂಧುಶಯನ ಮಂದರಧರ ಇಂದಿರೇಶನೆ ಎಂದು ನಿನ್ನ ಪೊಂದಿದವರನಂದ ಪೊರೆವನೆ 1 ಹೆಂಗಳೆರ ಸಂಗವುಳ್ಳ ಮಂಗಳಾಂಗನೆ ಶೃಂಗಾರಾಂಗ ರಮಾಸಂಗವುಳ್ಳ ರಂಗನೆ ಗಂಗಾಜನಕ ನೀರಜಾಂಬಕ ಗಾನಲೋಲನೆ ಮಂಗಳಕರದಿಂದ ಲಭಯಂಗಳೀವನೆ 2 ರನ್ನೆ ಸೀತೆಯನ್ನು ವೈದವನ್ನ ತರಿದನೆ ನಿನ್ನವರಿವರೆನ್ನುವವರನ್ನು ಕಾಯ್ವನೆ ಪನ್ನಗಶಯನನಾದ ಚೆನ್ನ ನೀವನೆ ಘನ್ನ ' ಶ್ರೀ ಹೆನ್ನೆವಿಠಲ’ ನನ್ನ ಕಾರುಣಿ 3
--------------
ಹೆನ್ನೆರಂಗದಾಸರು
ದೇವ ದೇವ ದೇವ ದೇವ ದೇವಾದಿದೇವ| ಶ್ರೀ ದೇವನೇ ದೇವಾ|ಸಲಹೆನ್ನ ಸದಾ ಪ ವಸುಧಿಯ ತನುಭವ ತನುಗಿರಿ ಕುಲಿ|ಶಾ| ಮರರಿಗಡಿಗಡಿಗೆ ನೀ ಸಲಹುವೆ ಕರುಣದಿ| ಬಿಸರುಹ ಲೋಚನ ದೇವ ದೇವಾ| ಸುರತರು ದೇವದೇವ1 ನಗವರಧರ ಮೃಗಕುಲದಧಿಪತಿ| ವೈರಿಯ ಕುಲವರ ವರದನೇ ಕೇಶವಾ| ಉಡಗಣ ಪತಿಯನ ಪಡೆದನ ತನುಜೆಯ| ರಮಣನೆ ಮಹಿಪತಿ ನಂದನ ಜೀವನಾ| ಪೊಡವಿ ಮನೋಹರ ದೇವ ದೇವಾ 2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ದೇವ ಲೋಕೇಶ್ವರಾ ರಾಮ ಪ ಪಾವನಾತ್ಮ ಪರಾತ್ಪರಾ ದೋಷದೂರಾ ಜೀವ ಜೀವ ಚರಾಚರ ಗೂಢಚಾರ ಅ.ಪ ತ್ರಿಗುಣಾತ್ಮಕಲೀಲಾ ಕರುಣಾಲವಾಲಾ 1 ಧರಣಿಜಾ ಕಳತ್ರಾ ಕರುಣೈಕ ಪಾತ್ರಾ 2 ಜವ ಜೀವನೇ ಶ್ರೀಧವ ಮಾಂಗಿರೀಶ || 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವ ದೇವತೆಗಳ ಸ್ತುತಿ ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ 1 ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ2 ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ 3 ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ 4 ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ 5 ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ6 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ 7
--------------
ಕೆಳದಿ ವೆಂಕಣ್ಣ ಕವಿ