ಒಟ್ಟು 1345 ಕಡೆಗಳಲ್ಲಿ , 105 ದಾಸರು , 1091 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ಜಯದೇವ ಜಯದೇವ ಜಯ ವಾಸುದೇವ ಭಾಸುವ ಭಾಸ್ಕರಕೋಟಿತೇಜನ ಮನದೈವ ಧ್ರುವ ಪ್ರಾರ್ಥಿಸುವದರ್ತಿ ಆರ್ಥಿಯ ಘನ ಸ್ಫೂರ್ತಿ ಸ್ಪೂರ್ತಿಗೆ ಸುಸ್ಥಾನಾಗಿಹ ನೀ ಘನಗುರು ಮೂರ್ತಿ ಮೂರ್ತಿ ನಿಮ್ಮ ಕೀರ್ತಿ ಬೆಳಗುದು ಭಾವಾರ್ತಿ ಅರ್ತಿ ಬೆಳಗುವ ಕಂಗಳಿಗ್ಯಾಗಿಹ ನೀ ಸಾರ್ಥಿ 1 ಸುಗುಣ ನಿರ್ಗುಣ ನೀನೆ ಪರಿಪೂರ್ಣ ಯೋಗಿಯ ಮಾನಸಹಂಸನಾಗುವೆ ನೀ ಪೂರ್ಣ ಬಗೆ ಬಗೆ ಭಾಸುವ ಭಕ್ತವತ್ಸಲ ಗುಣ ಸುಗಮಾಗೂದಕೆ ನಿಮ್ಮ ದಯ ಆಧಿಷ್ಠಾನ 2 ಮುನಿಜನಕಾಗುವ ಖೂನ ಸ್ವಾನುಭದ ಜ್ಞಾನ ಸನಕ ಸನಂದನ ವಂದಿತ ನೀನೆ ಅನುದಿನ ಘನಸುಖದಾಯಕ ಸದ್ಗುರು ನೀ ನಿಧಾನ ದೀನ ಮಹಿಪತಿ ಸ್ವಾಮಿ ನೀ ಸನಾತನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯದೇವ ಜಯದೇವ ಜಯದೀನದಯಾಳಾ ಜಯಜಯ ಶ್ರೀಗುರು ಮಹಿಪತಿ ಭವತಾರಕ ಲೀಲಾ ಪ ಮರವಿನ ಕತ್ತಲಿಯೊಳಗೆ ಮುಂದುಗಾಣದಲಿರಲಿ ಅರವಿನದೀಪವ ಹೆಚ್ಚಿ ದೋರುತಲೀ ಸ್ಥಿರವನು ಗೊಳ್ಳದ ಚಿತ್ತವ ಭಜನಿಗೆಲಿಸುತಲಿ ಹರಿಸಿದ ವಿದ್ಯದಗೃಂಥಿಯ ಸಂಶಯ ಬಿಡಿಸುತಲಿ 1 ಪರಿಪರಿಯಿಂದಲಿಗರದು ಬೋಧನಾಮೃತನುಡಿಯಾ ಅರಹಿಸಿಯೋಗದ ಮಾರ್ಗವ ಸಾಂಖ್ಯದನಿಲ್ಲ ಕಡಿಯಾ ಕರಣೀಂದ್ರಿಯಗಳ ವಡದಾಸ್ವಾನಂದದಯಡಿಯಾ ಕರುಣಿಸಿ ವಿಶ್ವಂಭರಿತದ ತೋರಿದೆ ಇತ್ಥಡಿಯಾ 2 ನಿನಗುತ್ತೀರ್ಣವಕಾಣದೇ ತನುವಾರತಿ ಮಾಡೀ ಮನವೇದೀಪವು ಸದ್ಭಾವನೆ ಆಜ್ಯನೀಡಿ ಅನುದಿನ ಬೆಳಗುವ ನಂದನುಮಹಿಮೆಯ ಕೊಂಡಾಡಿ ಚಿನುಮಯಸುಖದೊಳು ಬೆರೆದಾಹಂಭ್ರಮ ಈಡಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಲಜಾಪ್ತ ಸಂಕಾಶ ಲಲಿತ ಸನ್ಮøದುಹಾಸ ಕಲಿಕಲುಷ ವಿಧ್ವಂಸ ಪರಮಹಂಸ ಶರಣಜನ ಸಂರಕ್ಷ ಸುರವಿರೋಧಿ ವಿಪಕ್ಷ ಧರ್ಮರಕ್ಷಣ ದೀಕ್ಷ ಶ್ರೀಕಟಾಕ್ಷ ಸರಸಿಜಾಯತನಯನ ಶರದಿಂದುನಿಭವದನ ದುರುಳ ಮ್ಲೇಂಛನಿಹನನ ತುರಗವದನ ಧುರಧೀರ ಶ್ರುತಿಸಾರ ಸುರುಚಿರಾಂಗದ ಹೀರ ವರಹಾರ ಕಂಧರ ಭಯವಿದೂರ ಕಮಲಾಸನಾದಿ ಸಂಸೇವ್ಯಮಾನ ಅಮರಸಂಕುಲತೋಷ ದಿವ್ಯವೇಷ ವಿಮಲ ಶೇಷಾದ್ರೀಶ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಜಾನಕೀವರತೇ ಜಯ ಮಂಗಳಂ ಪ ಮಾನವಾಧಿಪತೇ ಮಂಗಳಂ ಅ.ಪ ರಾವಣಾನುಜಮಿತ್ರ ರಮಣೀಯ ಸುಚರಿತ್ರ ದೇವಾಧಿದೇವ | ತೇ ಮಂಗಳಂ 1 ಅಪವರ್ಗಪ್ರದ ತೇ ಮಂಗಳಂ 2 ಖರದೂಷಣನಿಹಂತ ಕರಧೃತಶರಚಾಪÀ ಗುರುರಾಮವಿಠಲತೇ ಮಂಗಳಂ 3
--------------
ಗುರುರಾಮವಿಠಲ
ಜಿಹ್ವೆ ರಸವನುಂಬದೆ ತ್ವಕ್ಕಿಗೇನುಛಳಿ ಬಿಸಿಲ ಹದನೂ ಚನ್ನ 1ಕಾಲು ನಡೆಯದು ಕರವು ಪಿಡಿಯದಾಡದು ಮಾತನಾಲಗೆಯು ಉಳಿದವೆರಡೂತಾಳಲಾರವು ವಿಸರ್ಗಾನಂದ ಕೃತ್ಯವನುಜಾಳು ಪ್ರಾಣವದು ಕರಡುಗಾಳಿರೂಪಿನ ಪಾನವ್ಯಾನವು ಸಮಾನವೂಕೇಳುದಾನವದು ಬರಡೂಹಾಳೂರ ಕೊಳಕ್ಕೆ ಕಾಲ ನೀಡಿದ ತೆರದಿಬಾಳುವೀ ಜೀವ ಕುರುಡೂ ನೋಡು 2ಬರಿದೆ ವ್ಯವಹರಿಸಿದರೆ ಫಲವಿಲ್ಲ ನಿಮ್ಮೊಡನೆಸರಸಕೆ ರಸಜ್ಞರಲ್ಲಾಇರುವರೆಮ್ಮವರು ಮೂವರು ಬುದ್ಧ್ಯಹಂಕಾರನೆರೆ ಚಿತ್ರ ಸಂಜ್ಞರೆಲ್ಲಾಬರಿದೆಯಾಳೋಚಿಸುವನೊರ್ವ ಹೆಮ್ಮೆಯೊಳೊರ್ವನೆರೆಯೊಳಿಹನೊಬ್ಬ ಬಲ್ಲಾತಿರುಪತಿಯ ವೆಂಕಟನ ಚರಣವನು ಭಜಿಸುವರೆನೆರೆ ಜಾಣ ನಾನೆಯಲ್ಲದಿಲ್ಲಾ 3ಕಂ||ಮನ ನುಡಿಯಲಿಂದ್ರಿಯಂಗಳುಘನರೋಷದಿ ಜೀವ ತನುಗಳನು ನಿಲ್ಲೆನ್ನುತಮನವೆ ಬಾ ನಮ್ಮೊಳು ನುಡಿನಿವಗಧಿಕಾರವನು ಕೊಟ್ಟವವನಾವನಯ್ಯಾ
--------------
ತಿಮ್ಮಪ್ಪದಾಸರು
ಜೀವನ ಶಟವಿ ಹೇಳುವೆ ಕೇಳುಜೀವನವೆಂಬುವ ಮಾತೇ ಶಟವಿದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ ಒಗೆತನ ಶಟವಿ ಎಲೆ ಜೀವನ ಶಟವಿ 1 ಆರ ಸಂಗಡ ಜಗಳವು ಶಟವಿಆರನಾದರು ಅಣಕಿಪೆ ಶಟವಿಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ 2 ನನ್ನದು ನನ್ನದು ಎಂಬೆ ಶಟವಿನಿನ್ನ ತಂದೆಯು ಹೋದನೆ ಶಟವಿನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ3 ಗುರು ಹಿರಿಯರ ನೀ ನಿಂದಿಪೆ ಶಟವಿಗುಣ ನಿನಗೇನೇನಿಲ್ಲವೊ ಶಟವಿಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ4 ಶರೀರವು ಸ್ಥಿರವಲ್ಲವು ಶಟವಿತೆರಳುವೆ ನೀನು ಬೆಳಗಿಗೆ ಶಟವಿತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ 5 ನಿನ್ನ ಸಂಸಾರ ಸುಳ್ಳಿದು ಶಟವಿನೀರಲಿ ಅಕ್ಷರ ಬರದಂತೆ ಶಟವಿನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ 6 ನಿನಗೆ ಅನಂತ ಜನ್ಮವು ಶಟವಿನೀನು ಹೆಣ್ಣು ಗಂಡಲ್ಲ ಶಟವಿನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ 7 ಪಾಪದ ವಿದ್ಯದ ಮೂಲದಿ ಶಟವಿರೂಪಿಗೆ ಬಂದಿಹೆ ನೀನೀಗ ಶಟವಿ ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ 8 ಭೂಪ ಚಿದಾನಂದನ ಹೊಂದೆಲೋ ಶಟವಿರೂಪು ವಿರೂಪು ಆಗುವಿ ಶಟವಿದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ 9
--------------
ಚಿದಾನಂದ ಅವಧೂತರು
ಜ್ಞಾನ ಸಖೀಕೇಳೆ ಜ್ಞಾನಿಗಳಾರಾಧಿಸುವಾ | ಶ್ರೀನಿವಾಸನಾ ತಂದುತೋರೆ ತನುವಿನೋಳು ಪ ಹಲವು ಸಾದಿನದಿಂದ ಬಳಲಿ ಹಂಬಲಿಸಿದೆ | ಜಲ ಜಾಕ್ಷ ಮೈಯ್ಯ ದೋರನೇ 1 ಕಣ್ಣಿಗೆ ಕಣ್ಣಾಗದನಕಾ ಬಣ್ಣ ಬಣ್ಣದ ಚಿತ್ಸುಖಾ | ಕನ್ನಿಕಾ ರನ್ನಳೆ ತಂದು ತೋರೇ 2 ಸೋಹ್ಯ ಸೊನ್ನಿಯ ದೋರಿಸಿ ಬಾಹ್ಯರಂಗ ಮರೆಸಿ | ಸಹ ಜಾನಂದದ ಕೂಡಿಸೇ 3 ಗುರು ಮಹಿಪತಿ ಸ್ವಾಮಿ ಸ್ಮರಿಸುವರಂತರ್ಯಾಮಿ | ನೆರೆದು ತಾನೇ ತಾನಾದನೇ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜ್ಞಾನವನ್ನೇ ತಿಳಿದುಕೋ ಮನುಜ ಜ್ಞಾನವನ್ನೇ ತಿಳಿದುಕೋ ಪ ಸತ್ತು ಹುಟ್ಟಿಯೇ ಸತ್ತು ಮುಂದಣ ಜನ್ಮಕು ಮತ್ತುಮತ್ತು ಗಳಿಸಿಕೊಂಡು ವಿಪತ್ತು ಮತ್ತೆ ಬಂದಿದೆ ಮೃತ್ಯು 1 ಹಾದಿಯಿದೆ ಸಾಪು ಕಾಣದೆ ಬಿಡುವೆ ಆಪುಬಯಕೆ ಯೋನಿಯ ಕೂಪು ಹಾಕಿ ಹಾಕಿ ಭಾಪು 2 ಹಸಿವು ಬಿಡೋ ಹಸಿವು ಯಾಕೆ ಆದಿ ಪಶುವುಬಗುಳ ಬೇಡ ಹುಸಿಯು ನಾಚುತಿದೆ ಬಸಿರು3 ಹೆಚ್ಚ ಬೇಡ ಹೆಚ್ಚು ಅಹಂಕಾರ ಮುಚ್ಚುಓದಿಗೆ ಬೆಂಕಿಯ ಹಚ್ಚು ಮಾಡಿಕೊಂಡೆಯ ಕಿಚ್ಚು4 ಜ್ಞಾನವ ತಿಳಿಯಿನ್ನು ಯಮಗೆ ಕೊಡಬೇಡ ಬೆನ್ನುಆರುತಾನಿಹನೆನ್ನು ಚಿದಾನಂದನೆ ಎನ್ನ5
--------------
ಚಿದಾನಂದ ಅವಧೂತರು
ಜ್ಞಾನಾನಂದ ಸ್ತುತಿ ಜ್ಞಾನಾನಂದ ಅನಂತರೂಪ - ಆನಮೋ ನಮೋ ತ್ವಂಪಾಲಯಮಾಂ ಪ. ಮತ್ಸ್ಯ ಸುರೂಪ ಮಂದರೋದ್ಧಾರ ಕಚ್ಛಪರೂಪ 1 ಭೂಧರಕೋಲ ನರಹರಿರೂಪ ಅದಿತೇಃ ಸೂೀನೋ - ಗಂಗಾಜನಕ 2 ಕೃನೃಪಾಹರಿ ರಾಮಪರಶ್ವಿ ಹನೂಮತೇವ್ಯ ರಮಸ್ತ ಸೀತಾ 3 ದೇವಕಿಪುತ್ರ ಪಾಂಡವಬಂಧೋ ದೇವ ಶ್ರೀಕೃಷ್ಣ ರುಕ್ಮಿಣೀನಾಥ 4 ದೈತ್ಯವಿಮೋಹ ದೇವಸುಬೋಧ ಬುಧ್ಧಸ್ವರೂಪ - ದೇಹಿಮೇ ಜ್ಞಾನಂ 5 ದರ್ಜೇನ - ಹಂತಾಧರ್ಮಸ್ವರೂಪ ಸಜ್ಜನಪಾಲ ದೇಹಿಮೇ ಭಕ್ತಿಂ 6 ಪದ್ಮಜಿತಾತ ಪ್ರಸನ್ನ ಶ್ರೀನಿವಾಸ ಪದ್ಮೇಶ ಶರಣಂ ಪಾಹಿ 7
--------------
ಪ್ರಸನ್ನ ಶ್ರೀನಿವಾಸದಾಸರು
ಜ್ಞಾನಾನಂದಮಯಂ ಭಜೇಹಂ ಪ ಶ್ರೀನಿವಾಸ ಕರುಣಾರಸಪೂರಂ ಅ.ಪ ಸಕಲ ಕಲಾಕೃತಿ ಪೂರ್ಣಮನಂತಂ ಸಕಲ ವರಪ್ರದಮನುಪಮ ಶಾಂತಂ ವಿಕಸಿತ ಕಮಲೋಪಮ ಶಂಭುಚಿತ್ತಂ ಶ್ರೀಕರಮಮಿತ ಕೃಪಾಗುಣ ಸಹಿತಂ1 ಮೂಲಮಂತ್ರ ಸಕಲಾರ್ಥಸಮೀರಂ ಮೂಲತತ್ವ ನಿರ್ಧಾರಕಮಮರಂ ಗಾಲವ ನಾರದ ಮುನಿಜನನಿಕರಂ ಸಾಲಂಕೃತ ಮಾಂಗಿರಿವರಮಿಹಿರಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಟೀಕಾಕೃತ್ಪಾದ ಕರುಣಾಕರ ಗುರು ಶ್ರೀಕಾರಸರಿತವಾಸ ನಾಕಾಧಿಪನೆ ಮನಶೋಕಾ ಹರಿಸಿ ನಿತ್ಯ 1 ಪೂರ್ಣಬೋಧರ ಮತಾರ್ಣವಚಂದಿರ ನಿರ್ಣಯಿಸಿದೆ ಟೀಕಾರ್ಣವದೊಳು ಸುಧ ಉಣ್ಣಿಸಿದೆಯೊ ಗ್ರಂಥ ವರ್ಣಿಸಿಇರುವೆ ಸತ್ಯ 2 ಮಿಥ್ಯಾವಾದಿಗಳ ಸತ್ಯ ತತ್ತ್ವವೆಲ್ಲ ಕತ್ತರಿಸಿದೆ ನಿತ್ಯ ದೈತ್ಯೋನ್ಮತ್ತರನೆಲ್ಲಾ ಸದೆದೆ3 ನಾಕಾಪತಿಗೆ ದೈತ್ಯಲೋಕಗಳಾ ಬಾಧೆ ತಾ ಕಳೆಯಲು ನಿತ್ಯ ಶ್ರೀಕರದಮೃತವ ಶ್ರೀಕಾಂತನಿತ್ತಂತೆ ನೀ ಸುಧೆಯನು ತಂದೆ 4 ದಶಪ್ರಮತಿಸುಶಾಸ್ತ್ರಶರಧಿಯೊಳು ವಾಸಿಸುವೆಯೊ ನಿತ್ಯ ಮೀಸಲಮನ ಕೊಟ್ಟೆನ್ನಾಸೆಯ ಹ ರಿಸಿ ಪದಸೇವೆಯ ಕೊಡೊ ನಿತ್ಯ5 ಪಾಕಶಾಸನ ಸುಖ ಬೇಕಾಗಿ ತೊರೆದು ನೀ ನೇಕಾಂತದಲಿ ನಿಂತೇ ಲೋಕಸುಖದಿ ಭವಶೋಕದಲ್ಲಿಹ ಎ ನ್ನ ಕಾಪಾಡುವುದು ನಿತ್ಯ6 ಶೇಷಾವೇಶ ಆವೇಶಾಮಹಿಮ ಎನ್ನ ದೋಷರಾಶಿಯ ಕಳೆದು ಶೋಷಿಸು ಮನಕಲ್ಮಷವಿಷವನೆಲ್ಲ ನಿ ಶ್ಶೇಷವ ಮಾಡಿ ಸಲಹೊ 7 ಹಲವು ವಿಷಯದ ಹಂಬಲದಿಂದ ಎನ್ನ ಜ್ಞಾನ ಹೊಲಬುಗೆಟ್ಟುದು ನಿತ್ಯ ಅಲವಬೋಧರ ತತ್ತ್ವ ಲವಮಾತ್ರವಾದರು ನೀ ಎನಗೆ ಪಾಲಿಸೊ8 ಮುಕ್ತಿಮಾರ್ಗಕೆ ಜ್ಞಾನಭಕ್ತಿವೈರಾಗ್ಯಗುರು ಭಕ್ತಿಯೆ ಮುಖ್ಯಕಾರಣ ಯುಕ್ತಶಾಸ್ತ್ರ ಪ್ರಸಕ್ತಿ ಇಲ್ಲದ ತ್ವ ದ್ಭಕ್ತನಾದೆನ್ನ ಸಲಹೊ9 ಅಕ್ಷೋಭ್ಯ ಕಟಾಕ್ಷದಿ ಯತಿ ಹ ರ್ಯಕ್ಷನಾಗಿಹೆ ದೀಕ್ಷಾ ಶಿಕ್ಷೆಮಾಡಿ ಪರಪಕ್ಷವಾದಿಗಳನ್ನು ಸ ತ್ಶಿಕ್ಷಕನಾಗಿ ಮೆರೆದೆ10 ಮರುತಾಂತರ್ಗತ ಶ್ರೀ ವೇಂಕಟೇಶನ ಪಾದ ಚರಣಕಮಲಮಧುಪ ನಿರುತ ನೀ ಕರುಣಿಸು ಉರಗಾದ್ರಿವಾಸವಿಠಲನ ನಿಜದಾಸ 11
--------------
ಉರಗಾದ್ರಿವಾಸವಿಠಲದಾಸರು
ಡಂಬವಿಲ್ಲದೆ ಹರಿಯ ಭಜಿಸಿ ನಂಬಿ ಮನದಲಿ ಪ ಹಂಬಲಿಸದೆ ದುರ್ವಿಷಯವ ಹರುಷ ಪಡುತಲಿ ಅ.ಪ ಸಮಚಿತ್ತದಿ ವರ್ತಿಸಿ ಸಜ್ಜನರ ಕೂಡುತ 1 ಮನುಮಥನಾಟಕೆ ಸಿಲುಕದೆ ಮಮತೆಯ ಬಿಡುತ 2 ಕಾಮ ಮಖ್ಯರಿಪುಗಳನ್ನು ಕಡೆಗೆ ನೂಕಲು ಸ್ವಾಮಿ ಶ್ರೀ ಗುರುರಾಮವಿಠಲ ತೋರ್ಪನವರೊಳು 3
--------------
ಗುರುರಾಮವಿಠಲ
ಡಂಭಕ ಹರಿದೂರ ಪ್ರಾಣೀ ಪ ಅಂಬುಜನಾಭನ ಇಂಬನ ಪಡಿಯದೇ| ಡೊಂಬನ ಪರಿಯಾಚಾರ ಪ್ರಾಣೀ ಅ.ಪ ಅಬ್ಧಿಶಯನ ಸಿರಿನಾಥನ ಒಲುಮೆಯ| ಲಬ್ಧ ದೊರೆಯದೆ ವಿಚಾರಾ|| ಲಬ್ಧನಾಗಿ ಧನ ಮಾನಕಬಿಟ್ಟಿನೀ| ಶಬ್ದದಂಗಡಿ ಪ್ರಸರಾ|ಪ್ರಾಣೀ 1 ಪೊಡವಿಯೊಳಗ ಉಗ್ರಸಾಧನದಿಂದಲಿ| ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ| ಹಿಡದಿ ಮನದಿ ಅಹಂಕಾರ|ಪ್ರಾಣೀ 2 ಅದಿತತ್ವದಾಗಲೆ ಸಾಧಿಸೇನೆಂದರೆ| ಸಾಧನ ಕೇಳು ಸುಸಾರಾ|| ಭೇದಿಸು ಮಹಿಪತಿ ನಂದನ ಸಾರಿದ| ಸಾಧು ರಾಶ್ರಯ ಮನೋಹರ|ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ | ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ಪ ವಜ್ರ | ಹರಳು ತೆತ್ತಿಸಿದ ದ್ಯುಮಣಿ || ಸರಿ ಸರಿ ಸರಿ ಸರಿ ಹಾಯಿದು 1 ಚಂದ್ರಶೇಖರ ಹಂಸವಾಹನ| ಇಂದ್ರಾದ್ಯರಾಕಾಶದಲಿ ಧುಂ ಧುಂ || ಧುಂ ಧುಂ ದುಂದುಭಿ ನುಡಿಸೆ | ಬಂದೆ ಇಕ್ಕೋ ಬಂದೆ ಬಂದೆನುತ 2 ಪಿಂತಿರುಗಿ ಪೋಗಿ ನೀನು | ಅಂತರಿಸಿ ದೂರದಿಂದ || ನಿಂತು ವಿಜಯವಿಠ್ಠಲರೇಯಾ |ಇತ್ತಿಂ ತ್ತಿಂ ತ್ತಿಂ ತ್ತಿಂ ತ್ತಿಂ ತ್ತೆನುತಲಿ 3
--------------
ವಿಜಯದಾಸ