ಒಟ್ಟು 2677 ಕಡೆಗಳಲ್ಲಿ , 120 ದಾಸರು , 1860 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನೋ ನಿನ್ನ ಚರಣ ಕಮಲವ ಸೊಂಡಿಲಿಂದಿಹ ಗಣಪತಿ ಕೊಡು ವರವ ಪ ಮಣಿ ಕುಂಡಲ ಭೂಷಾ ಉಂಡಲಿಗೆ ಚಕ್ಕುಲಿಯೊಳಗೆ ಸಂತೋಷ ಚಂಡ ಪ್ರಬಲನಲ ಅಖಂಡ ಪ್ರಕಾಶ ಭೂ ಮಂಡಲದೊಳು ನಿನ್ನ ಕೀರ್ತಿ ವಿಶೇಷ 1 ಚಂದನಾಗರು ಧೂಪ ದೀಪಾವಳಿಯಿಂದಾ ನಂದದಿಂದಲಿ ಪೂಜಿಪೆ ಭಕ್ತಯಿಂದ ನಂದಿವಾಹನನಿಗೆ ಮೋಹದ ಕಂದ ಮಂದಮತಿಯ ಬಿಡಿಸೈಯ್ಯ ನೀ ಮುದದಿಂದ 2 ಚಿಕ್ಕ ಮೂಷಿಕವೇರಿ ಗಕ್ಕಾನೆ ಬರುವೆ ಅಕ್ಕರಿಂದಲಿ ಭಕ್ತರೆಲ್ಲಾರ ಪೊರೆವೆ ಮಿಕ್ಕ ಮಾತುಗಳೇನೋ ಪೊಗಳಲೆನ್ನಳವೇ ಇಕ್ಕೇರಿಯೊಳು ಟೆಂಕಸಾಲೆಯೊಳಿರುವೆ 3
--------------
ಕವಿ ಪರಮದೇವದಾಸರು
ಕಂಡೆಯಾ - ಮನವೇ - ನೀನಿಂದು - ಕಂಡೆಯಾ ಪ ಕಂಡೆಯ ಮನವೆ ನೀನಿಂದು - ತನ್ನತೊಂಡರ ಸಲಹುವ ಬಂಧು - ಆಹಮಂಡೆಯ ಬೋಳಿಸಿ | ಪುಂಡರೀಕಾಕ್ಷನೆಹಿಂಡು ದೈವಂಗಳ | ಗಂಡನೆಂದೇಳ್ವರ ಅ.ಪ. ಪಾದ ಸೊಬಗು - ವೇಗತೆರಳುತ್ತಿದ್ದರದು ಮೆಲ್ಲಗು - ನಖವರರತ್ನ ಕೆಂಪಿನ ಬೆಡಗು - ಊರುಕರಿಯ ಸೊಂಡಿಲಿನಂತೆ ಬೆಳಗು _ ಆಹ ಪರಿಶುದ್ದ ಕಟಿಯಲ್ಲಿ | ಸುರಚಿರಾಂಬರನುಟ್ಟುವರಕಂಠ ಫಣೆಯುದರ | ತ್ರಿವಳಿಯಂ ಮೆರೆವರ 1 ಮೃದುರೋಮ ಶಾಲು ಪ್ರಾವರಣ - ನೋಡಲದು ಭಾಸ ಉದಯಾರ್ಕ ವರಣ - ಪೋಲ್ವದದು ಮೇರು ಗಿರಿಯಂತೆ - ವರ್ಣ ನೋಡುಎದೆಯ ವಿಸ್ತರಾ ಭರಣ - ಆಹಸದಮಲುನ್ನತಾಂಸ | ಉರುಟು ನೀಳದ ತೋಳುಪದುಮ ರಾಗದ ಭಾಸ | ಧ್ವಜರೇಖೆ ಹಸ್ತವ 2 ಮೋದ ಪೋಲ್ವ - ಮತ್ತೆಮಂದ ದೂರನು ಅತಿ ಚೆಲ್ವಾ - ಆಹಕುಂದಾಭ ರದನವು | ಸುಂದರಾರುಣ ಓಷ್ಠಮಂದಜೇಕ್ಷಣ ನೋಟ | ದಿಂದ ಬೀರುವ ಮುದ 3 ಕಿವಿಗಳಲೊಪ್ಪುವ ತುಳಸೀ - ಮೂರುಭುವನ ಭೂತಿ ಭ್ರೂವಿಲಾಸಿ - ಮತ್ತೆಅವನೆ ಅಭೂತಿದನೆನಿಸೀ - ಚೆಲ್ವದವಡೆಯಿಂದೊಪ್ಪುವ ಶಿರಸಿ - ಆಹಅವಯವ ಲಕ್ಷಣ | ಪ್ರತಿ ಪ್ರತಿ ಜನ್ಮದಿವಿವರವೀತೆರವೆಂದು | ವಿಭುದರು ತಿಳಿದರು 4 ಈ ವಿಶ್ವವೆಲ್ಲವೂ ಸತ್ಯ - ಮತ್ತೆಸಾರ್ವ ಭೇದವು ತಾರತಮ್ಯ - ವಿಧಿಪೂರ್ವಕಲ್ವೊರೆಯುತ್ತ ದಿವ್ಯ - ತತ್ವಸಾರ್ವವ ಪೇಳುತ್ತ ಭವ್ಯ - ಆಹಕಾವ ಕೊಲ್ಲುವ ಗುರು ಗೋವಿಂದ ವಿಠಲನೆಸರ್ವೋತ್ತುಮಾನೆಂದು | ಈ ವಿಧ ಮೆರೆವರ 5
--------------
ಗುರುಗೋವಿಂದವಿಠಲರು
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು - ಮಿಕ್ಕಬಣಗು ದೈವದ ಗೊಡವೆ ಬೇಡ ನರಕ ತಪ್ಪದು ಪ ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರುಸೊಕ್ಕಿನಿಂದ ಸೊಂಟಮುರುಕ ಬೈರೇ ದೇವರುಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು 1 ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದುಬತ್ತಲೆಯೆ ದೇವರೆದುರು ಬರುವುದು ನೋಡಿರೊಮತ್ತೆ ಬೇವಿನುಡುಗೆಯ ಅರ್ತಿಯಿಂದುಟುಗೊಂಡುಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರÉೂ 2 ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡುಹಾಳು ಮಾಡಿ ಕೈಯಲಿದ್ದ ಹೊನ್ನು ಹಣಗಳಬಾಳುತಿಪ್ಪ ಕೋಣ ಕುರಿಯ ಏಳಬೀಳ ಕೊರಳ ಕೊಯ್ದುಬೀಳ ಬೇಡಿ ನರಕಕೆಂದು ಹೇಳ ಬಂದೆನೊ3 ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡುಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತುಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳು ಕೊಡನ ಬರಿದು ಮಾಡುವಂಥಪೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು4 ಪಾದ ಬಿಡದೆ ಭಜಿಸಿರೊಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ 5
--------------
ಕನಕದಾಸ
ಕಣ್ಣಿಗೆ-ಕಟ್ಟಿದಂತಿದೆ ಪ ಬಣ್ಣದ ಕೊಳಲ ಭಾವಿಸಿ ನೋಡಬಾರದೆಅ.ಪ. ಕೂಡಿಹ ಸೋಗೆಗರಿಯ ಕಡುಸೊಂಪುಸೊಗಸುವಡೆದ ಸುಳಿಗುರುಳಿನ ಗುಂಪುಆಡುವ ಮುರುಹು ಮಾಗಾಯ್ಗಳ ಪೆಂಪುಕೂಡಿ ಕುಣಿವ ಕುಡಿಹುಬ್ಬಿನಲಂಪು 1 ಕೊಳಲೆಡೆÉಗೆಡೆಗೆ ತೋರುವ ಕೆಂಬೆರಳುಕೊನಬು ವಡೆದ ಕೊಂಕಿದ ಗೆರೆಗೊರಳುಥಳಥಳಿಸುವ ತೇಲುವ ಕಣ್ಣರಳುತನುಗಂಪನು ಸೂಸುವ ಸುಯ್ಯೆಲರು 2 ಸಿರಿ ಗಂಧದ ತಿಗುರುಕೊರಳ ದಂಡೆಯ ತುಳಸಿಯ ಹೊಸ ಚಿಗುರುಕೊನೆ ಮುಸುಕಲು ಪೊನ್ನುಗುರಿನ ಪೊದರು 3 ಮುಳಿದು ಯಶೋದೆ ಕಟ್ಟಿದ ಪೊಡೆದಾರಮುದ್ದು ಪೊಳೆಯನೇವಳದುಡಿದಾರಬಳಸಿದ್ಹವಳಸರದ ಶೃಂಗಾರಬಣ್ಣದುಡಿಯ ಬಿಗಿದುಟ್ಟ ವೈಯಾರ 4 ಒಂದಡಿ ನೆಲದೊಳು ನಿಂದಿಹ ನಿಲುವು, ಮ-ತ್ತೊಂದಡಿ ಸಾರ್ಚಿಪ ಬಲು ಗೆಲುವುಮುಂದೆ ಪಶುಗಳ ಮನ್ನಿಪನಿಲವು ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು5
--------------
ವ್ಯಾಸರಾಯರು
ಕಣ್ಣಿನಾಕರಿರಟ್ಟ ಸುಟ್ಟುಬೂದಿಯ ಮಾಡಿ ನಿನ್ನ ಈಕ್ಷಿಪ ಶುಭ್ರ ದೃಷ್ಟಿಯ ನೀಡೊ ಪ ಪುಣ್ಯಪುರುಷನೆ ಬಿಂಬಪೂರ್ಣ ಮಂಗಳ ಶೌರಿ ಧನ್ಯ ಮಾಡೆನ್ನ ಮುನ್ನ ನಿಲ್ಲಲಿ ಸÉಳಿಯೊ ಅ.ಪ ವಿಷಯಸುಖ ದುರ್ಗುಣದ ಪಂಕದಲಿ ಮನನೆನೆದು ವಿಷಕ್ರಿಮಿಯಂತಿಹದೊ ಇದಕೆ ಮದ್ದು ಸನ್ನುತ ಹರಿಯೆ ವಿರಜ ಮಾಡೊ ಮನವ 1 ಭಾವಸೂತ್ರಗಳಿಂದ ವಿಧಿಭವರೆ ಮೊದಲಾದ ಜೀವರನು ಆಡಿಸುವ ಶ್ರೀಶ ಎನ್ನ ಪಾವನ್ನ ಗುಣನಿಧಿಯೆ ಶ್ರೀ ವೇಣುಗೋಪಾಲ ದೇವ ಅಜಮಿಳಪಾಲ ಪೂತ ಭಾವದಿ ನಿಲಿಸೊ 2 ಕಾತುರವಪಡುತಿಹೆನೊ ಅಸುರಕರ್ಮದಿ ಸಿಕ್ಕಿ ಪಾತಕಿಗಳ ಸಹವಾಸ ಬಿಡಿಸಿ ಕಾಯೊ ಆತುಮಕೆ ಅತಿಮಿತ್ರ ಜಯೇಶವಿಠಲ ನಿನ್ನೊಲುಮೆಪಾತ್ರರಲಿ ಇಟ್ಟೆನ್ನ ಕಾಪಾಡು 3
--------------
ಜಯೇಶವಿಠಲ
ಕಥನಕಾವ್ಯಗಳು ಶ್ರೀ ವೆಂಕಟೇಶ ಪಾರಿಜಾತ ಅಧ್ಯಾಯ ಒಂದು ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕøಷ್ಟ ಇತೀ ಪಿತ: ಗೋಕ್ಷೀರ ಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ | ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿನಾರತಿ ಮಾಡಿ ಬೇಡುವೆ ಭಾಷೆ ಭಾಷೆಗೆ ಎನಗೆ ಬುದ್ಧಿವಿಕಾಸ ಕೊಡುಯಂದು ಕರಮುಗಿದು ಬೇಡುವೆ ದಾಶರಥಿ ನಿಜದಾಸ ಕಲ್ಲೊಳ್ಳೀಶಗೊಂದಿಸುವೆ 1 ಸಂತತಿಗೆ ನತಿಸುವೆ ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ ಜಗತಿಯಲಿ ಜನಿಸಿ ಅವರಾ ಪೂಜಿತಾಖ್ಯವು ವಹಿಸಿದವರನು ಪೂಜಿಸುವೆ ಬಿಡದೆ2 ಪೊಂದಿ ಆ ಗುರು ಪುತ್ರರಾಗಿರುವ ವಿಷ್ಣುತೀರ್ಥರನು ನಮಿಪೆ ಮತ್ತೆ ಸ್ವೋತ್ತಮರಾಗಿ ಇರುವ ಗುರುಗಳಿಗೊಂದಿಸುತ ಸ ರ್ವೋತ್ತಮಾನಂತಾದ್ರಿ ರಮಣನ ಮಹಿಮೆ ಪೇಳುವೆನು3 ವಚನ ಬುದ್ಧಿ ಪೂರ್ವಕ್ಹಿಂ ಸಂಪೂರ್ಣ ಸರ್ವ ದೇವೋತ್ತಮನು ಇರುವನ್ಯಾರೆಂದು ತಿಳಿ ಸರ್ವಲೋಕದಲಿ ಕೇಳಿ ಪೂರ್ವದಲ್ಲಿ ಪೋದ ಪೂರ್ವಿಕನÀ ಮನೆಯಲ್ಲಿ ಗರ್ವ ಅವನಲ್ಲಿ ಕಂಡು ಇರುವ ನಡೆದನಲ್ಲಿ 1 ನೋಡಿದನು ಆಗಲ್ಲಿ ಪ್ರೌಢೆ ಪಾರ್ವತಿಯು ಮಾತಾಡಿದಳು ನಾಚುತಲಿ ಬೇಡಬಿಡು ಪ್ರಾಣೇಶ ನೋಡು ಭೃಗು ಮುನಿಬಂದ ಬೇಡಿಕೊಂಬುವೆನೊ ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು ಪೂಜೆಯ ಬೇಡ ಈ ಲೋಕದಲಿ ನೋಡಿ ಲಿಂಗವ ಪೂಜೆ ಮಾಡಲಿ ಜನರು 2 ಪರಿ ಶಾಪ ಮೆಟ್ಟಿದನು ವೈಕುಂಠ ಥಟ್ಟನೆ ಮತ್ತಲ್ಲಿ ದಿಟ್ಟ ದೇವನ ಕಂಡ ಪಟ್ಟದರಸಿಯಕೂಡಿ ಧಿಟ್ಟಾಗಿ ಮಲಗಿರಲು ಸಿಟ್ಟಿಲÉೂದ್ದನು ಒಳ್ಳೆ ಪೆಟ್ಟು ಅವನೆದಿಗೆ ಮುಟ್ಟಿ ಮುನಿ ಪಾದವನು ತುಷ್ಟನಾಗಿ 3 ಧ್ವನಿ ಮೇಲಿಷ್ಟು ಸಿಟ್ಟು ಕಾರಣ ಪೇಳಿಷ್ಟು ತಪ್ಪಿತು ಕ್ಷಮಿಸಿಷ್ಟು 1 ಎಳ್ಳುಕಾಳಷ್ಟು ನೊಂದು ಕೊಂಡಿದ್ದಾವು ಎಷ್ಟೋ 2 ಧರೆಯೊಳಗೆ ದ್ವಿಜರಿಗೆ ಸರಿಯಾರು ಇಲ್ಲೆಂದು ಬರುವುದು ಭಯ ಬಹಳಷ್ಟು ವರದಾನಂತಾ ದ್ರೀಶನ ಪರಮ ಭಕ್ತರಿಗೆ ಬರಬಾರದೆಂದಿಗೂ ಸಿಟ್ಟು 3 ವಚನ ಇಂದಿರಾಪತಿಯು ಹೀಗೆಂದು ಮುನಿಪಾದಂಗಳÀÀÀ ಚಂದದಿಂದಲಿ ಒತ್ತಿತ್ವರದಿಂದ ಉಷ್ಣೋದಕವನು ತಂದು ತೊಳೆಯುತ ಇಂದು ಪಾವಿತನಾದೆನೆಂದು ಹರುಷದಲ್ಲಿ ಮುಂದೆ ಭೃಗುಮುನಿಯು ಮುಕುಂದನ ಸರ್ವರಿಂದಧಿಕ ಸತ್ಯತಿಳಿರೆಂದ ಮುನಿಗಳೆಲ್ಲ ಮುಂದೆ ವೈಕುಂಠದಲಿ ಇಂದಿರಾದೇವಿ ಗೋವಿಂದನಾಟವ ಕಂಡಂದಳೀ ಪರಿಯು1 ರಾಗ:ಮೋಹನ ಕಲ್ಯಾಣಿ ಆದಿತಾಳ ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೇ ನೀನು ತಿರುಕನಾಗಿ ಇರುತಿರುವ ಭೂಸುರನು ಭರದೊಳೊದ್ದ ನಿನ್ಹಿರಿಯತನವೇನು ಪ ನಿನ್ನ ಶ್ರೀವತ್ಸವಿದು ಬಹು ಮಾನ್ಯವು ಎಂದೆನಿಸುವುದು ಮಾನ್ಯ ವಾಗಿಹುದು 1 ಬಡವ ಬ್ರಾಹ್ಮಣರಿಂದ ನೀ ಕಡೆಗೆ ಕೂಡಿರು ಚಂದಾ ಮಡದಿಯ ಹಂಬಲ ಬಿಡುದೂರದಿಂದ ತಡಮಾಡದೆ ನಾ ನಡದೆ ಗೋವಿಂದಾ 2 ಇನ್ನೆನ್ನ ಗೊಡವ್ಯಾಕೊ ಬಿಡು ನಿನ್ನ ಸಂಗತಿ ಸಾಕು 3 ಎನ್ನ ವೈರಿಗಳ ಮನ್ನಿಸುವ್ಯಾಕೋ ನನ್ನಿಚ್ಛೆಯಲಿ ನಾ ಇನ್ನಿರಬೇಕೊ 4 ಹಿಂದಕೆ ಕುಂಭೋದ್ಭವನು ಎನ್ನ ತಂದೆಯ ನುಂಗಿದ ತಾನು ಅಂದಿಗೆ ಎನಗಾನಂದವು ಏನು 5 ಮತ್ತೆನ್ನ ಸೊಸೆಗವರು ಬಹು ಭಕ್ತಿಯಲಿ ಪೂಜಿಸುವರು ವೈರಿಯವರ್ಹೊರತು ಇನ್ಯಾರು 6 ಹುಡುಗ ಬುದ್ಧಿಯು ಎಂದು ನಾ ಕಡೆಗೆ ಬಲ್ಲೆನು ನಿಂದು ಮಡುವ ಧುಮುಕಿ ಕಲ್ಪಡೆಯ ಪೊತ್ತಿಹುದು ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು 7 ಬಡವ ಬ್ರಾಹ್ಮಣನಾದಿ ಚಪಗೊಡಲಿಯ ಕೈಯಲಿ ಪಿಡಿದಿ ಮಡದಿಯ ಕಳಕೊಂಡು ತುಡುಗ ನೀನಾದಿ ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ 8 ಎಷ್ಟು ಪೇಳಲೆ ನಿನಗೆ ನೀನೆಷ್ಟು ಮಾಡಿದಿ ಹೀಗೆ ಅಷ್ಟು ಮನಸಿನೊಳಗಿಟ್ಟುನೂ ಆಗ ಕಟ್ಟಕಡಿಗೆ ಬಲು ಸಿಟ್ಟು ಬಂತೆನಗೆ 9 ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿನಾನು ಬಲ್ಲಿದನಂತಾದ್ರಿಯೊಳಿರು ನೀನೆ 10 ರಾಗ:ಸಾರಂಗ ಆದಿತಾಳ ಪರಿ ಕಲಹ ಮಾಡಿ ತ್ವರಿತದಿಂದ ನಡೆದಳು ಕರವೀರಪುರಕೆ ಪ ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು ಸಿರಿಯಿಲ್ಲದ ವೈಕುಂಠ ಸರಿಬಾರದು ಎನಗೆ1 ದೀನನಾದೆನು ಹಾ ನಾನು ಕಾಣುವೆನೆಂದು ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು 2 ಇನ್ಹ್ಯಾಂಗೆ ಇರಲಿ ಇನ್ನಾಕೆಯ ಹೊರತು ಕಣ್ಣಿಗೆ ವೈಕುಂಠಾರಣ್ಯ ತೋರುವುದು ಇನ್ನೆಲ್ಹೋಗಲಿ ಎಂದು ಬಂದ ತನ್ನಿಂದ ತಾನು3 ಶ್ರೀ ವೈಕುಂಠಕಿಂತ ಶ್ರೀ ವೆಂಕಟಗಿರಿಯು ಅಧಿಕವೆಂದು ಭಾವಿಸೀ ಪರಿಯು ಆವತ್ತಿಗೆ ಬೇಗಲ್ಲೇ ತಾ ವಾಸಕೆ ನಡೆದ ದೇವ ತಿಂತ್ರಿಣೆಯೆಂಬೋ ಆ ವೃಕ್ಷವಕಂಡ 4 ಅಡಗಿದ ಮೆಲ್ಲನೆ ಪೋಗಿ ಅಲ್ಲ್ಯಾದೇಶದಲೊಬ್ಬ ಜೋಳಾಖ್ಯನು ಎಲ್ಲರಿಂದಲಿ ತನ್ನ ಪುರದಲ್ಲೆ ಇರುವಾ5 ಶಿವನ ಕರುವಿನ ಮಾಡಿ ತಾನಾಕಳಾಗಿ ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು ಕೊಂಡ 6 ನಿತ್ಯ ವರಸಾಧು ಗುಣದಿಂದ ಸರಸಾಗಿ ಕೂಡಿ ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ7 ಬಂದ ಕಾರಣವೇನು ಎಂದು ಸ್ಮರಿಸುತಲಿ ಇಂದಿರೇಶಗೆ ಭಕ್ತಿಯಿಂದ ಕ್ಷೀರವನು ಚಂದಾಗಿ ಕರೆವುದು ಬಂದು ಹುತ್ತಿನಲಿ 8 ಹಿಂಡದು ತನ್ನ ಕರುವಿನ ಪರಿ ರಾಜನ ಹೆಂಡತಿಯ ಆಗ ಚಂಡ ಕೋಪದಿ ಗೋಪನ ಕಂಡಂದಳು ಹೀಗೆ 9 ವಚನ ನೀ ಏನು ಮಾಡುವಿನಿತ್ಯ ಕುಡಿವುದೋ ವತ್ಸ ಏನುಮಾಡು ಪ್ರಾಣಕೊಂಬುವೇನು ತಾನು ಗಾಭರಿಗೊಂಡು ಧ್ಯಾನಿಸುತ ಆ ರಾಜ ಮಾನಿನಿಗೆ ನುಡಿದ ಬಹು ದೀನನಾಗಿ 1 ರಾಗ:ದಂತಿ ಆದಿತಾಳ ಅರಿಯೆ ತುರುಗಳ ಕಾಯ್ಕೊಂಡು ಬರುವೆ ನಾ ಇದಹೊರ್ತು ಪ ಕಟ್ಟುವರ್ಯಾರೊ ಅರಿಯೆ ಬರಿದೆ ನೀ ಎನ್ನ ಮೇಲೆ ಹರಿಹಾಯುವದ್ಯಾಕೆ ಅರಿಯೆ 1 ಪಾಲಾಗುವುದೊ ಅರಿಯೆ ಸರಸಾಗಿ ತಿಳಿನೀನು ನೆರೆಯೊರೆಯವರನಾ ಅರಿಯೆ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿಮಿತಿಯಿಲ್ಲದ ಮೃಷೆ ಸಂಸಾರವದು ಇರುತಿಹುದು ಆಪರಿಯಲ್ಲಿ ಪ ಸತಿಯಂಬುವಳಾರು ತಾವಾರುಸುತರಿಂದ ಗತಿಯಾಗುವುದೆಲ್ಲಿಮಿತಿಯಿಲ್ಲದ ಬಹುಬಂಧು ಬಳಗಗಳುಬಹರೆ ತನ್ನ ಹಿಂದಲ್ಲಿ1 ಹಗೇವಿನ ಬತ್ತವು ಬಣಬೆಯ ಸೊಪ್ಪೆಯುಬಗೆ ಬಗೆವಸ್ತುವು ತಾನೆಲ್ಲಿಬಿಗುಮಿಗೆಯಾದ ದನಕರುವುಗಳುಬರಲಿಲ್ಲವು ತಾವಂದದಲ್ಲಿ 2 ತಳ್ಳಿಗೆ ತಳ್ಳಿ ಸುಳ್ಳು ಸಂಸಾರವುತೆಗೆಲೀಯದು ಈ ಬಗೆಯೆಲ್ಲಿಎಲ್ಲಕೆ ಮಂತ್ರವು ತಾ ಚಿದಾನಂದನುಎನಲಿಕೆ ಪಾಪವು ಇನ್ನೆಲ್ಲಿ 3
--------------
ಚಿದಾನಂದ ಅವಧೂತರು
ಕದರ ಉಂಡಲಿಗಿಯ ಹನುಮಾ | ಕಾಯೊಉದಧಿ ಶಯನಗೆ ಬಲು ಪ್ರೇಮಾ ಪ ಸದಮಲಾಂತಃಕರಣದೊಳು ತವ | ಪದವನಜ ದ್ವಯ ಸೇವಿಸೂವರಮುದದಿ ಪಾಲಿಪ ಗುರು ದಯಾಕರ | ವದಗಿ ಭಾಸಿಸೊಮ ಮಹೃದಾಗರ ಅ.ಪ. ಪ್ರಥಮಾಂಗ ಹರಿಗೆ ನೀನೆನಿಸೀ | ಜೀವ ತತಿಯೊಳಂತರ ಬಾಹ್ಯ ನೆಲಸೀ |ತತುವ ಮಾನಿಗಳ್ಕಾರ್ಯ ನಡೆಸೀ | ಹರಿಗೆ ಪೃಥಕ್ಪøಥಕ್ಕವುಗಳರ್ಪಿಸೀ |ವಿತತ ಹರಿ ಸತ್ಪಾತ್ರನೆನಿಸುತ | ಯತನ ಜ್ಞಾನೇಚ್ಛಾದಿ ನಡೆಸುತಸತತ ವಿಶ್ವವ ಪಾಲಿಸುವ ಶ್ರೀ | ಪತಿಯ ಪದಕರ್ಪಿಸುತಲಿರುವ 1 ಶರಧಿ ದಾಟುವ ಲಂಕಾಪುರವ | ಸೇರಿವರ ಮಾತೆಗಿತ್ತೆ ಉಂಗುರವಾ |ಪುರದೊಳಗಶೋಕ ವನವಾ | ಕಿತ್ತುತರಿಯಲಕ್ಷನು ತೆತ್ತ ದೇಹವಉರು ಪರಾಕ್ರಮಿ ಇಂದ್ರ ಜಿತುವಿನ ವರಸುಅಸ್ತ್ರಕೆ ತಾನೆ ಸಿಲುಕುತಪರಿಪರಿಯಲಸುರನನು ಹಿಂಸಿಸಿ | ಉರಿಸಿ ಲಂಕೆಯ ಹರಿಗೆ ಎರಗಿz À 2 ಹದಿನೆಂಟು ಕ್ಷೋಹಿಣಿ ಬಲವಾ | ನೆರಸಿಸದೆದು ಹಾಕಿದ್ಯೊ ದೈತ್ಯಕುಲವಾ |ಮುದದಿ ದ್ರೌಪದಿಗಿತ್ತ ವರವಾ | ಸಲಿಸಿವಧಿಸಿದ್ಯೋ ದುರಳರ ಕುಲವಾ |ಮಧುಮಥನ ನರಹರಿಯ ಸ್ಮರಿಸುತ | ಅದುಭುತವು ಎಂದೆನಿಪ ಕಾರ್ಯವವಿಧಿಸಿ ಭೂಭಾರವನೆ ಕಳೆಯುತ | ಮುದದೊಳಚ್ಯುತಗಿತ್ತೆ ಭೀಮ 3 ವೇದ ವಾದಿ ಜನ ಕೊರಗೀ | ಹರಿಪಾದದ್ವಯವು ವನಜಕೆರಗೀ |ಮೋದದಿ ಸ್ತುತಿಸೈವ ಮರುಗೀ | ಕಳುಹೆ ವೇದಗಳುದ್ಧಾರಕ್ಕಾಗೀ |ಬೋಧಿಸುತ ಬುಧ ಸ್ತೋಮಗಳಿಗಾ | ವೇದಗಳ ಸಾರಾರ್ಥವೆಲ್ಲವವಾದಿಗಳ ಜೈಸುತಲಿ ಪೂರ್ಣ | ಭೋದಯತಿ ಪಾಲಿಸುವುದೆಮ್ಮ 4 ಪಂಕ ಕರ್ಮ ಸ್ವಾಂತ ದೊಳಗನವರತ ಕಾಣುವ 5
--------------
ಗುರುಗೋವಿಂದವಿಠಲರು
ಕನಿಕರವಿಲ್ಲವೆ | ವನರುಹಲೋಚನಾ ಪ ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ ವೇದ ಪುರಾಣವ ಓದಿ ತಿಳಿಯಲಿಲ್ಲ ಸಾಧುಸಂತರ ಸೇವೆ ಸಾಧಿಸಲಿಲ್ಲ ಭಾರ ನಾನಾದೆನಲ್ಲ ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ 1 ಜ್ಞಾನ ಸುಧಾರಸ ಪಾನವ ಮಾಡಲಿಲ್ಲ ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ ದೀನರ ಸಂಗದಿ ಶ್ವಾನನಂತಾದೆನಲ್ಲ ನಾನು ನನ್ನದು ನಿನ್ನಾಧೀನವಾಗಲು ಇಲ್ಲ 2 ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ ಅನ್ನ ಪಾನಂಗಳೊಳಿನ್ನಾಸೆಯಿಲ್ಲ ನಿನ್ನ ನಾಮಾಮೃತವನು ಬಿಡುವವನಲ್ಲ ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಬು ಕಂಧರ ಹರಿಯಬೆಂಬಿಡದಲೆ ಕಾಂಬ || ಹಂಬಲ ನೀ ತುಂಬು ಪ ಸ್ಥಾಣು ಅ.ಪ. ಮಂಗಳ ಸನ್ಮುಖ | ಅಂಗಜ ಪಿತ ಸಖ5À5ಳ್ಳ ಶಿಖ | ತವಸುತ ಷಣು5ಭಂಗ5ಪ ದುಃಖ | 5ಸು ಭವ ದುಃಖಇಂಗಿತಜ್ಞರ ಪ್ರಮುಖ | ಸಂಗದಿ ಕೊಡು ಸುಖ 1 ವಿಭೂತಿ ನೊಸಲು ಸಮೀರನ ಪ್ರೀತಿವಸು ನಿನ್ನೊಳತಿ | ಈಶ ಪಾಲಿಸೊ ಗತಿ 2 ಗರ್ವರಹಿತ ದೇವ | ದರ್ವಿ ಜೀವನ ಕಾವಸರ್ವ ಭಾರವು ದಾವ | ಶರ್ವ ನಿನ್ನದೊ ಭವಗುರ್ವಂತರಾತ್ಮಗುರು | ಗೋವಿಂದ ವಿಠಲನಸರ್ವದ ಸ್ಮರಿಸೂವ | ಶಿವ ಕೊಡು ಈ ಭಾವ 3
--------------
ಗುರುಗೋವಿಂದವಿಠಲರು
ಕಮಲ | ಭಜಿಸಿ ಬದುಕಿರೋನಿಜ ಸುಜ್ಞಾನ ಹರಿಭಕ್ತಿ | ನಿಜಕೆ ತರುವರೋ ಪ ಸಂತ ಶ್ರೀನಿವಾಸನಹಂ | ಮತಿಯ ವಿಚಾರಾಚಿಂತಿಸದೆ ಒಲಿದಂಥ | ಶಾಂತ ಚಿತ್ತರಾ ||ಕಂತುಹರ ಸುತನಂಶ | ಜಾತರಿಹರಾಅಂತೆ ತೋರಿ ದಾಸ ದೀಕ್ಷೆ | ಪಂಥ ವಿತ್ತರಾ 1 ಮಂಗಳದುತ್ಸವಕಾಗಿ | ಸಂಘ ಬರ್ಲಾಗಿಮಂಗಳ ಭಕ್ಷವು ಮಂಡಿಗಿ | ಮಾಳ್ಪರಿಲ್ಲಾಗಿಭಂಗ ಭೀತಿ ಅಧಿಪಗೊದಗಿ | ಚಿಂತಿಸಲಾಗಿಅಂಗ ವೇಷ ಬದಲಾಗಿ | ಬಂದ ತಾನಾಗಿ2 ಗ್ರಂಥ ಸುಧಾಭಿಧ ಬಲ್ಲ | ಸಂತ ಸುಬ್ಬಣ್ಣಸಂತ ವಿಜಯದಾಸಗಿಂಥ | ಗ್ರಂಥವೆಲ್ಲಣ್ಣಅಂತೆ ದಾಸಗಪರೋಕ್ಷ | ಕಂತೆ ಕಾಣಣ್ಣಚಿಂತಿಸುತ್ತ ಪ್ರವಚನ | ಭ್ರಾಂತ ನಿದ್ದನ 3 ಬಂದು ವಿಜಯದಾಸರಾಗ | ತೊಂದರೆ ಯೋಗ ಛಂದದಿಂದ ನೀಗಿ ಭಕ್ಷ | ಮಾಡಿದ ರಾಗ |ಬಂದು ಸುಧಾ ಕೇಳುತಿರಲು | ಆಚಾರ್ಯರಾಗ ಸಂದೇಹವ ಪಡುತಲಿ | ಮೌನವಿರಲಾಗ 4 ಪಾಚಕನ ತೆರ ಬಂದ | ಭೃಗುವಿನಂಶನುನೀಚ ನೀರಿನವನ ಶಿರದಿ | ಚಾಚಿ ಕೈಯ್ಯನ್ನುಬಾಚಿ ಬಿಡಿಸೆಂದ ಅವರ | ಸಂಶಯವನ್ನುವಾಚೀಸೀದ ಅನುವಾದ | ನೀರಿನವನೂ5 ಪೇಚಿಗೆ ಸುಬ್ಬಣ್ಣ ಸಿಕ್ಕಿ | ಮನದಿ ತಪಿಸೀ |ಯಾಚಿಸೀದ ಕ್ಷಮೆಯನ್ನು | ಬಹಳ ಪ್ರಾರ್ಥಿಸಿ ||ಸೂಚಿಸಲು ಶೈವನಿದ್ದ | ಬೇಲೂರು ವಾಸಿಪ್ರಾಚೀನದ ಸ್ಮøತಿ ಬಂತು | ನಂಜುಂಡ ನೆನಿಸಿ 6 ಪಾಣಿ ಇಟ್ಟು ಶಿರದಲ್ಲಿ | ಆಶೀರ್ವದಿಸಿವೇಣುಗೋಪ ದಾಸರಲ್ಲಿ ಅಂಕಿತ ಕೊಡಿಸಿ ||ಸಾಣೆ ಇಟ್ಟಂತಾಯಿತವನ | ಜ್ಞಾನದ ಅಸಿಮಾಣದಲೆ ವಿಜಯ ಕವಚ | ಮಾಡಿದ ಸೂಸಿ 7 ದಾಸಕೂಟ ಜನರೆಲ್ಲ | ಬಿಡದೆ ಪಾಡುವವ್ಯಾಸವಿಠಲ ರಚಿತೆನ್ನ | ವಿಜಯ ಕವಚವಲೇಸು ನೆರೆ ನಂಬಿದೆನ್ನ | ವಿಠಲ ಸ್ತೋತ್ರವಮೀಸಲಾಗಿ ಪಾಡುವರು | ಸ್ತೋತ್ರವೆಲ್ಲವ 8 ವರ್ಷ ಸೌಮ್ಯ ಕಾರ್ತೀಕದಿ | ಸೇವಿಸುತ್ತಿರೆದರ್ಶನಿತ್ತು ಸ್ವಪ್ನದಲ್ಲಿ | ಧೈರ್ಯಕೊಟ್ಟಾರೆಹರ್ಷವಿತ್ತು ದಾಸಕಾರ್ಯ | ಸಾಗಿಸುತ್ತಾರೆದರ್ಶದಿನ ಪುಷ್ಯ ನೃಹರಿ | ಯಾತ್ರೆಯಿತ್ತಾರೆ 9 ವಿತ್ತ ನಿತ್ಯ | ಇಲ್ಲದಿನ ವೊಲ್ಲೆ ||ಮೂರ್ತಿ ಬಿಂಬ ತೋರಿ ಎಂದು | ಕೇಳುವ ಸೊಲ್ಲೆಸಾರ್ಥಕವ ಮಾಡಿರೆಂದು | ಪ್ರಾರ್ಥಿಸೆ ಬಲ್ಲೆ 10 ಸುಜನ ಸಂಗ | ವಿತ್ತು ಸುಶೀಲಕಾವ ದಾಸ ಜನರನ್ನು | ಹೃದಯ ವಿಶಾಲಗೋವ ಪರಿಪಾಲ ಗುರು | ಗೋವಿಂದ ವಿಠಲನತೀವರದಿ ಭಜಿಸಿ ಕಳೆದ | ಮಾಯಾಪಟಲ11
--------------
ಗುರುಗೋವಿಂದವಿಠಲರು
ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಪ ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ 1 ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ 2 ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು 3
--------------
ಕನಕದಾಸ
ಕಮಲ ಷಟ್ಚರಣನೆನಿಸೊ ಎನ್ನ ಪ ಪರಮಹಂಸಕುಲ ಸುಧಾಬ್ಧಿ ಸುಧಾಕರ ಸುಧೀಂದ್ರಯತಿಕರಜ ಅ.ಪ ಶ್ರೀವರ ಚರಣ ಸರೋರುಹ ಮಧುಕರ ಪೂತ | ಶುಭಮಚರಿತ ಭಾವಜಾದಿ ಷಡ್ವರ್ಗಸುನಿಗ್ರಹ ಶೀಲ ಕವಿಕುಲಲೋಲ ಕೋವಿದ ಕುಲ ಸಂಭಾವಿತ ಮಹಿಮ ಸ ದಾ ವಿನೋದಿ ಸತ್ಸೇವಕ ಜನ ಸಂ ಜೀವನ ಶುಭಕರ ಪಾವನರೂಪ ಪ ರಾವರೇಶ ಪದಸೇವಕ ಯತಿವರ 1 ಸಕಲ ಶಾಸ್ತ್ರ ಪಾರಂಗತ ಪರಿಣತ ಖ್ಯಾತ | ಗ್ರಂಥಪ್ರಣೀತ ಸಂವರ್ಧಕ ಧೀರ | ಸುಜನೋದ್ಧಾರ ಮುಕುತಿ ಸಾಧನೆಗೆ ಕುಟಿಲ ಮಾರ್ಗವ ನಿಖಿಲ ನಿಜಾಶ್ರಿತ ನಿಕರಕೆ ತೋರುತ ಭಕುತ ಕರೆವ ಕೋರಿಕೆಗಳ ನೀಡುತ ಸುಖವ ಕರೆವ ಸುಂದರ ಯತೀಂದ್ರ 2 ಗುಣಮಣಿ ಖಣಿಯೇ ಸುರವರನುತ ಶ್ರೀ ರಾಮಚಂದ್ರ ಚರಣಾಬ್ಜಾ | ರಾಧಿಕ ಸುಪೂಜ್ಯ ದುರಿತ ಕಳೆದು ಭವಶರಧಿಯ ದಾಟುವ ಸರಿಮಾರ್ಗವ ನಾನರಿಯೇನೋ ಗುರುವರ ಕರಿಗಿರೀಶ ಶ್ರೀ ನರಹರಿ ಚರಣವ ಪರಿ ಕರುಣಿಸು ಯತಿವರ 3
--------------
ವರಾವಾಣಿರಾಮರಾಯದಾಸರು
ಕಮಲ ಸಂಭವೆ ಹಿಮನಗಜಾರಮಣ ಸನ್ನುತೆ ತಮರಿಪು ಶತ ಸಮಸನ್ನಿಭೆ ಇಭ ಇಂದಿರೆ ಶೋಭಾನೆ ಪ ಶೃಂಗಾರ ತರಂಗ ಹೆಳಲಾ ಬಂಗಾರವ ಪೊಂಗ್ಲಾದಿಗೆ ಬಲಿ ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ ಅಂಗಜ ಶರ ಕಂಗಳೆ ದ್ವಿಜೋ ತ್ತುಂಗಮ ರಂಗನ ನಿಜ ಅ ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1 ಪೊಸುಕುಸುಮ ಶಿರಸದಲೊಪ್ಪುವ ನೊಸಲಲಿ ರಂಜಿಸುವ ಕಸ್ತೂರಿ ದಿಶದುಂಬಿದ ಬಿಸಿಜಾನನ ಪ್ರಭೆ ಎಸೆವ ಕಂಧರ ಕಕ್ಕಜ ಕುಚಕು ಪ್ಪುಸದಲ್ಲತಿ ಶೋಭಿಸುತಿಹ ಪವಳ ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2 ಕರಿಸೊಂಡಿಲುತೆರ ಚತುರಕರ ವರ ಅಭಯಸರಸಿಜಯುಗಧರ ಜಠರಾ ವರತ್ರಿವಳಿ ಗಂಭೀರನಾಭಿ ಕ ಟಸೂತರೆ ಹೇಮಾಂಬರೆ ಚರಣಂದಿಗಿ ಸಪಳಿ ಪೊಂಗೆಜ್ಜೆಯಾ ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3 ಮೃಗಲಾಂಛನೆ ಮಿಗೆ ಶೋಭಿಪ ಪದ ನಖ ಪಂಕ್ತಿಗಳೊಪ್ಪುವ ಗತ ಅಗಣಿತ ಮಹಿಮಳೆ ಸುಗುಣ ಸಂಪನ್ನೆ ಭಗವಂತನ ಜಘನದಿ ಪೊಳೆಯುತ ಖಗರಾಜನ ಪೆಗಲನೇರಿ ಅಮ ರ ಗಣವ ಚಿರ ಬಾ ಹಸಿಯ ಜಗಲೀಗೆ 4 ಅಂಭೃಣಿ ಸ್ವಾಯಂಭೂ ಸುರ ನಿಕು ರುಂಬಕರ ಅಂಬುಜ ಪೂಜಿತೆ ನಂಬಿದ ಜನರ್ಹಂಬಲಿಸುವ ಫಲ ಸಂಭ್ರಮದಿ ಕೊಡುವಾ ಗಂಭೀರಾ ಸು ಖಾಂಬೋಧಿ ಹರಿ ನಿತಂಬೆ ಪ ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5 ಮಾಯೆ ನಾರಾಯಣಿ ಶ್ರೀ ಭೂ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
--------------
ಜಗನ್ನಾಥದಾಸರು
ಕಮಲಕಮಲಾಧರನೆ ಕಮಲಭವ ವಂದಿತನೆ ಕಮಲ (?) ನುತನೇ ಕಮಲಶತ ಹಿತಕರನೆ ಪ ಕಮಲಬಾಣನ ಪಿತನೇ ಕಮಲದಳ ಲೋಚನನೇ ಕಮನೀಯನುಪ್ಪವಡಿಸಾ ಹರಿಯೇ ಅ.ಪ ಸಲಹಲೀ ಲೋಕಗಳ ಬಹುವೆನಿಪ ದಾನವರ ಗೆಲಿದು ಪಾಲ್ಗಡಲ ನಡುವಲದ ನೆಲೆವನೆಯ ತಲೆವಣಿಯ ಕಾಂತಿಗಳ ಮಿಗೆ ಜ್ವಲಿಪ ಬೆಳಗುಗಳಿಂದ ಫಲಿತ ಪುಳಕಗಳು ಮಿಗೆ ಬಲಿದ ನಿದ್ರೆಗಳ ಶ್ರೀಲಲನೇಶನುಪ್ಪವಡಿಸ1 ಸಿರಿ ಮುರಿಯುತಿದೆ ಶರಧಿಯೇಳ್ಗೇ ಉದಯಕೆ ಕರೆಯುತಿದೆ ಗಿಳಿವಿಂಡು ಕೊರುಗುತಿವೆ ಕೋಕಗ ಗರೆಯುತಿದೆ ಕೋರಕಂ ವೋಲಗಕೆ ಕರುಣಾಳು ಉಪ್ಪವಡಿಸಾ 2 ತೋರುತಿದೆ ಇನಬಿಂಬ ದೂರುತಿದೆ ಕುಮುದ ಸೊಂ ಪೇರುತಿದೆ ವನರುಹಂ ಬೀರುತಿದೆ ಕಡು ಚೆಲ್ವ ಸೋರುತಿದೆ ಮಕರಂದ ತೋರುತಿದೆ ತನಿಗಂಪ ಪಾರುತಿವೆÉ ಭ್ರಮರಂಗಳೂ ಚೀರುತಿವೆ ಪಕ್ಷಿಗಳು ಮೀರುತಿವೆ ಜನರವಂ ಪೂರ್ಣಧನು ಉಪ್ಪವಡಿಸಾ3 ಆಡುವರೆ ನರ್ತನವ ಪಾಡುವರೆ ಗಾನಗಳ ನೀಡುವರೆ ಪನ್ನೀರ ತೀಡುವರೆ ಸುರಭಿಗಳ ಮಾಡುವರೆ ಸಿಂಗರವ ಪೂಡುವರೆ ಹಾರಗಳನೂ ಕೋಡುವರೆ ಕಾಣಿಕೆಯ ಬೇಡುವರೆ ಸಂಪದವ ಸೂಡುವರೆ ಕುಸುಮಗಳ ನೋಡುವರೆ ಸಮಯಗಳ ಗಾಡಿಮಿಗಲುಪ್ಪವಡಿಸಾ 4 ದೇವ ಸಂಸ್ತುತಲೀಲ ದೇವ ಮುನಿನುತ ಶೀಲ ದೇವತತಿಗನುಕೂಲ ದೇವರಿಪುವನಜಾಲ ಚೇಲ ದೇವ ಗುಣಗಣಜಾಲ ದೇವಪುರಿ ಶ್ರೀಲೋಲ ದೇವ ನಲಿದುಪ್ಪವಡಿಸಾ 5
--------------
ಕವಿ ಲಕ್ಷ್ಮೀಶ