ಒಟ್ಟು 11537 ಕಡೆಗಳಲ್ಲಿ , 136 ದಾಸರು , 5740 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಘಸಂಪದನೆಂದು ಮನದೊಳಗೆ ನಲಿದಿಂತು ಜನಕನಿತ್ತನು ಎನ್ನ ನಿನಗಿಂದು ದಾನಕ್ಕೆ ಕೈನೀಡಿ ದಾನಮಂ ತಾಂ ಬೇಡಿ ದಾನಿಯಂ ಪಾತಾಳಕೀಡು ಮಾಡಿ ಮಾನಾಭಿಮಾನವಿಂತೇನೇನುಮಿಲ್ಲದೆಯೆ ದಾನವನ ಮನೆಗಾವನೇನ ಪೇಳ್ವೆ ತಿರುಕ ಹಾರುವನಿವಗೆ ಅರಸಿಯಾನಾದೆನೇ ಮರುಗಲ್ಕೆ ಫಲವೇನೊ ಅರಿಯೆನಿನ್ನು ಸಟೆನುಡಿಯಿನೆಲ್ಲರಂ ಮರುಳುಗೊಳಿಪ ಕುಟಿಲಗಾರನದೆಂತÀು ಸುಖವಪಡಿಪ ಚಟುಲಮತಿಕೇಳೆನ್ನಮನದಿಷ್ಟ ಸಲಿಪ ಸಟೆಯಲ್ಲವೆನ್ನೆರೆಯ ಶೇಷಗಿರಿಪ
--------------
ನಂಜನಗೂಡು ತಿರುಮಲಾಂಬಾ
ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ಅನಂತಗಿರಿವಿಠಲ | ಪಾಲಿಸೋ ಇವಳಾ ಪ ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ. ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1 ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2 ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3 ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4 ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅನಾಥ ನನ್ನಿಂದ ಆಗುವುದು ಏನು ನೀನೆ ದಯಾಮಾಡಿ ಎನ್ನ ನೋಡಿದರೆ ಸರಿಯಲ್ಲದೆ ಪ ಸ್ನಾನ ಸಂಧ್ಯಾವನ ವೆಂಬ ಸತ್ಕರ್ಮ ವಿಧಿಹೋಗೆ ಧ್ಯಾನಮೌನ ಜಪತಪ ನಿಧಾನ ಹೋಗೆ ಕಾನನದೊಳಗಿನ ಕೊಂಡೆತ್ತಿ ನಂದದಿ ಏನು ಅರಿಯದ ವ್ಯರ್ಥ ಹೀನನಾಗಿರುವಂಥ 1 ಮಾಧವಾ ನಿಮ್ಮ ಸ್ಮರಣೆ ಮಹಾಮಹಿಮ ಸೇವೆ ಹೋಗೆ ವೇದ ಶಾಸ್ತ್ರಗಳಲ್ಲಿ ಇರುವ ಮರ್ಮ ಹೋಗೆ ಭೋಧ ಗುರುಕರ್ಣ ಪೂರ್ಣವು ಎಂಬದದು ಹೋಗೆ ----------- ಂದರಿಯದೆ ಹೆಡ್ಡನಾದಂಥಾ 2 ಹರಿ ನಿಮ್ಮ ಭಕ್ತರ ಅನುಗ್ರಹಕ್ಕೆ ಪಾತ್ರಹೆಂಗೊ ಹರಿ ನಿನ್ನ ಚರಿತಗಳು ಅರುವದ್ಹೇಗೊ ಕರುಣಿಸು ಕೈ ಹಿಡಿದು ಕಾಯ್ದರೆ ಸರಿ ಅಲ್ಲದೆ ವರ 'ಹೊನ್ನ ವಿಠ್ಠಲ’ ನೀನೆಂದು ನಾನರಿಯದಾ 3
--------------
ಹೆನ್ನೆರಂಗದಾಸರು
ಅನುದಿನ ಆನಂದವು ಹೊಂದಿರೆ ಕೈವಲ್ಯವು ಅಂದಿರೆ ಪ ಪಾದಾನ ಸೇರಿ ನಂಬಿರೆ ಕಂಡು ಅವರಕೂಡಿರೆ ತಂದವನ ಕೀರ್ತನೆಗಳು ಮಾಡಿರೆ ಕಲ್ಮಷವನು ಕಳಿಯೀರೆ 1 ನಾಲಗೀಯಲಿ ಸ್ಮರಿಸೀರೆ ವರ್ಣನೆಯನು ಬಿಡದರೆ ನೇವೇದ್ಯಾದಿ ನಿವೇದಿಸಿದರೆ ಸರ್ವೋತ್ತಮನ ನಂಬಿರೆ 2 ಮನದಲ್ಲಿ ಕೊಂಡಾಡಿರೆ ಘನದಲ್ಲಿ ನೀವು ಪಾಡಿರೆ ವರಿಸಿನ್ನು ಕುಣಿದಾಡಿರೆ ಸಿದ್ಧ ಮುಕುತಿ ಎನ್ನೀರೆ 3
--------------
ಹೆನ್ನೆರಂಗದಾಸರು
ಅನುದಿನ ಮನದಲಿ -----ದೆ ಪ ಮನಶುದ್ಧಿಯ ಮಾಡುವನು---------- 1 ಜಗತ್ರಯ ನಾರಾಯಣನ 2 ಇಂದಿರೆಯರಸನ ಇಷ್ಟರ ಬೆರೆದು 3 ನೀರಜ ನಯನನಾ 4 `ಹೆನ್ನೆವಿಠ್ಠಲ ದೇವರ ಇನ್ನುಸದಾ 5
--------------
ಹೆನ್ನೆರಂಗದಾಸರು
ಅನುದಿನ ವಿಷಯ ಸುಖವು ಎಂದು ಕನಸಿಲಾದರು ಸ್ಮರಿಸಲಾಗದು ಮನವೆ ಪ ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ ಅಶನ ವಸನ ಪಶುವ್ರಾತ ವಶವಿರುವಾಭರಣ ಹಸನಾದ ರಥ ಪದಾತಿಗಳು ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1 ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ ಶುದ್ಧ ರೂಪ ಲಾವಣ್ಯ ಯೌವನ ಸಿರಿ ಶೌರ್ಯ ಪರಾಕ್ರಮ ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2 ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ ವೆಚ್ಚವಾಗಿ ಪೋಪವೊ ಧನವಲ್ಲದೆ ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3 ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ ಕರ್ತಭಾವದಿ ಸತತ ಮಾಡೆ ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4 ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ ಜ್ಞಾನಿಗಳಿಗೆ ಶಿರಬಾಗಲೊಲ್ಲಿ ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5 ಕೈಗೊಳುವುದೇ ಮಾನ ಅನ್ಯಾಧೀನವೆನ್ನದೆಂಬುದೇ ಲಜ್ಜಾ ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6 ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ ವರ ಯೋಗ ಭೋಗದಲ್ಲಿ ವರ ರಾಮಚಂದ್ರವಿಠಲರಾಯನು ನಿನ್ನ ದುರಿತ ಕಳೆದು ಪಾಲಿಸುವ7
--------------
ವಿಜಯ ರಾಮಚಂದ್ರವಿಠಲ
ಅನುದಿನವು ಶ್ರವಣಮನನಾದಿ ಸಾಧನ ಮಾಡು ಇನ್ನು ಸಂಶಯವ್ಯಾತಕೊ ಪ. ಏನು ಶಪಥವ ಮಾಡಲಿ ಮತವು ಹಿರಿದೆಂದು ಜ್ಞಾನಿಗಳ ಸಮ್ಮತವೊ ಅ.ಪ. ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು ಶಿರವರಿದು ಮುಂದಿರಿಸಲೆ ಪರಮತಜಾಲವೆಲ್ಲ ವೇದವಿರುದ್ಧವೆಂದು ಶರಧಿಯನು ನಾ ದಾಟಲೆ1 ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು ನೆಗಹಿ ಪರ್ವತವ [ನಿಲಿಸಲೆ] ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ- ತಾಗ್ರದಿಂ ಧುಮುಕಲೆ 2 ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು ವೇದಂಗಳ ಒಡನುಡಿಸಲೆ ಅಧಿಕಾರಿಗಳೊಳಗೆ ಅಂಬುಜಸಂಭವನೆಂದು [ಕಾದೆಣ್ಣೆ]ಯೊಳು ಮುಣುಗ [ಲೆ] 3 ಪರಲೋಕಸಾಧನಕೆ ತಾರತಮ್ಯಮತವೆಂದು ಗರಳವನು ಕುಡಿಯಲೆ ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು ಹರಿವ ಹಾವನು ಹಿಡಿಯಲೆ 4 ಗುರುಮಧ್ವರಾಯರೆ ಆತ್ಮರಕ್ಷಕರೆಂದು ಅನಲವ ಕೈ ಪಿಡಿಯಲೆ ಅಮಿತ ಗುಣಪೂರ್ಣನೆಂದು ಅ- ಶರೀರವನು ನುಡಿಸಲೆ 5
--------------
ವಾದಿರಾಜ
ಅನುಭವ ಸ್ವಸಿದ್ಧವೊ ಅನುದಿನ ಶ್ರುತಿ ಖೂನ ಹೇಳುವ ಙÁ್ಞನವು ಧ್ರುವ ಗುಣಗುಣಕ್ಕೆ ಅಣುರೇಣು ವ್ಯಾಪಕ್ಕೆ ಜನವನ ಸ್ಥಾನ ಸುಸ್ಥಾನಕ್ಕೆ ಮನೋನ್ಮನಕ್ಕೆ ಙÁ್ಞನ ವಿಙÁ್ಞನಕ್ಕೆ ತಾನೆ ತಾನಾಗಿಹ್ಯದಕ್ಕೆ 1 ಅಖಿಳ ಭುವನಕ್ಕೆ ಸಕಲ ಸನ್ಮತಕ್ಕೆ ಪ್ರಕಟಗುಚಿತ ಪ್ರತ್ಯಕ್ಷಕ್ಕೆ ಶುಕಾದಿ ಮುನಿಗಳ ಮುಗುಟಮಣಿಯಾಗುದಕ್ಕೆ ಭಕ್ತವತ್ಸಲಾಗಿಹುದಕ್ಕೆ 2 ಇಹಪರ ಸಾಧನಕ್ಕೆ ಬಾಹ್ಯಾಂತರ ದೊರೆವುದಕ್ಕೆ ಸಾಹ್ಯಮಾಡುವ ಸಹಕಾರಕ್ಕೆ ಮಹಿಪತ್ಯುದ್ದೇಶಕ್ಕೆ ಸ್ವಹಿತ ಸುಪಥಕೆ ಶ್ರೇಯ ಸುಖದೋರುವಾಶ್ರಯಕ್ಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅನುಭವವಿದೇ ನೋಡಿ ಆನಂದೋ ಬ್ರಹ್ಮ ಏನೆಂದ್ಹೇಳಲಿನ್ನಾಗುವ ಸಂಭ್ರಮ ಧ್ರುವ ಸುಖ ನೋಡಿ ನಮ್ಮ ಸ್ವಾನುಭವದ ಸಖರಿಂದ ಮೀರಿ ಬಲು ಸುಸ್ವಾದ ಅಖರಿಂದ ಕೇಳಿ ನಿಜ ಬೋಧಾ ಶುಕಮುನಿ ಸೇವಿಸುದಾ 1 ಬೆರೆದು ನೋಡಿ ಆರು ಚಕ್ರವೇರಿ ಸುರಿಯುತಿದೆ ಸುಖ ಸಂತ್ರಾಧಾರಿ ಭೋರ್ಗರೆಯುತಿದೆ ಅನಂತ ಪರಿ- ದೋರಿ ಕೊಡುತಾನೆ ಶ್ರೀಹರಿ 2 ಸುಗ್ಗಿ ಇದೇ ನೋಡಿ ಸುಜ್ಞಾನಿಗಳು ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ ಬೊಗ್ಗಿ ಉಣಬೇಕು ಇದು ಸರ್ವಕಾಲ ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅನುಭಾವದ ನಿಗೂಢ ಮುಂಡಿಗೆಗಳು ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ ಪ ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂದುಅ ಹುಟ್ಟು ಬಣ್ಣ ಒಂದರೊಳಗೆ ಕಟ್ಟು ಬಣ್ಣ ಒಂದು ಮಾಡಿಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವುಸೃಷ್ಟಿಯಾರೇಳು ಬಣ್ಣ ಎಂಟು ಒಂಬತ್ತರೊಳಗೆ ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓಂ ಎಂದು 1 ಭದ್ರಕಂಬ ಒಂದರೊಳಗೆ ಉದ್ದವಾದ ಕೊನೆಯ ಮೇಲೆಸಿದ್ಧಿಯಾದ ಚಿಗುರು ಹೂವು ಕಾಯಿ ಹಣ್ಣನುಮೆದ್ದು ಹೋದ ಪಕ್ಷಿ ಬಂದು ಹದ್ದು ಹಿಡಿದು ಉದ್ದಕೆತ್ತಿಬುದ್ಧೀ ಹೀನನಾಗಿ ಬೆಳೆದು ಧರೆಗೆ ಬಿದ್ದುದಕದ್ದು ಮತ್ತೊಬ್ದ ತರುತಿದ್ದ ದಾರಿಯನ್ನು ಕಟ್ಟಿಒದ್ದು ಹಿಡಿದು ಗುದ್ದಿ ನೂಕಿ ಸೆಳೆದುಕೊಂಡುದ ಸಾಧ್ಯವಾಯಿತೆಂದು ತನ್ನ ಮನೆಗೆ ತಂದು ಸತಿಗೆ ಕೊಡಲುಶುದ್ಧವಾಗಿ ಸುಟ್ಟು ಮಡಗಲೆದ್ದು ಹಾರಿ ಹೋಯಿತೆಂದು 2 ತಿಳಿಯುತಿಹುದು ತಿಳಿಯದಿಹುದು ಬೆಳೆಯುತಿಹುದು ಬೆಳೆಯದಿಹುದುಹೊಳೆಯುತಿಹುದು ಹೊಳೆಯದಿಹುದು ಸುಳಿಯದಿಹುದುತಿಳಿದು ನಾಲ್ಕು ದಿಕ್ಕಿನಲ್ಲಿ ಹೊಳೆದು ಎಂಟು ದಿಕ್ಕ ತೋರಿಬಳಸಿ ಸುತ್ತ ತಿರುಗುತಿಹುದು ಬಳಲಿ ಬಳಲದೆಒಳಗೆ ಹೊರಗೆ ತೋರುತಿಹುದು ಅಳಿದ ವಸ್ತು ಮುಟ್ಟದಿಹುದುಕಳವಳಂಗೆ ಎರಡು ಗುಣವ ತೋರಿ ಮೆರೆವುದುತಿಳಿದು ನೋಡೆ ಕೈಗೆ ಸಿಕ್ಕಿ ಒಳಗೆ ಬಯಲ ತೋರುತಿಹುದುಪ್ರಣವ ಒಂದು ಕೋಟಿ ನುಂಗಿ ಉಗುಳಿತಿಪ್ಪುದೋಂ ಎಂದು 3 ತತ್ತಿಯಾದ ಬ್ರಹ್ಮನೀಗೆ ದಿಕ್ಕು ಅಖಿಲಾಂಡವೆಲ್ಲಹೆತ್ತ ತಂದೆಗಾದವನೆ ನಿತ್ಯವುಳ್ಳವ ಸತ್ತು ಹುಟ್ಟಲಿಲ್ಲವೆಂದು ಅತ್ತ ನೋಡಿ ಇತ್ತ ತಿರುಗೆ ತತ್ತಿಯೊಳಗೆ ಬೆಳೆದವೆಲ್ಲ ಸತ್ತವೆನ್ನುತಸತ್ತು ಹೋದ ದೀಪದಂತೆ ಉತ್ಪತ್ತಿಯಾದವಗೆಸತ್ತು ಸತ್ತು ಹುಟ್ಟುವುದು ತಪ್ಪದೆನ್ನುತಎತ್ತಿ ಜಗವ ನುಂಗಿ ತನ್ನ ಹೊಟ್ಟೆಯೊಳಿಂಬಿಟ್ಠುಕೊಂಡುಕತ್ತಲೆಗೆ ಕರ್ತೃವೆಂಬ ಜಗವಸತ್ಯ ಕೇಳಿರೋ ಎಂದು | 4 ಪಂಕಜನ ತಾಯಿ ಸುತನ ಅಂಕದಲ್ಲಿ ಹುಟ್ಟಿ ಜಗವಮಂಕು ಮಾಡುತಿಪ್ಪ ಮಾಯೆ ಹತ್ತು ಶಂಕೆಯಶಂಕೆಕಾರ ಶತ್ರುಮಿತ್ರರಿಬ್ಬರಿಗಾಧಾರವೆಂದುಕುಂಕರದಿಪ್ಪತ್ತೊಂದು ಕೋಟಿ ಪಾಶವುಓಂಕಾರದೊಳಗೆ ಪುಟ್ಟಿ ಓಂಕಾರದೊಳಗೆ ಬೆಳೆದುಓಂಕಾರದೀ ಜಗವ ಎತ್ತಿ ಮೆರೆವುದೋ ಎಂದು 5 ಪ್ರಣವ ಒಂದರೊಳಗೆ ಒಂದು ಕೋಟಿಯನ್ನು ತೋರಿ ಪಡೆಯ (ಕಡೆಯ ?)ಕುಣಿಕೆಯೊಳಗೆ ಎಂಟು ಕೋಟಿಯನ್ನು ತೋರುತತೃಣವ ಹಿಡಿದು ಬರೆಯುತಿಪ್ಪ ಒಂದು ರೋಮ ಕೂಪದಲ್ಲಿಕುಣಿಕೆಯೊಳಗೆ ಜಗದ ಜೀವರಾಶಿ ಎಲ್ಲವಸುಳಿದ ವಿಷ್ಣು ಬ್ರಹ್ಮನೆಂಬ ಹಣೆಯ ಕಣ್ಣ ರುದ್ರನೆಂಬ ಮಣೆಯಗಾರರೆಪ್ಪತ್ತೇಳು ಕೋಟಿ ಸಂಖ್ಯೆಯುಹಣೆಯ ಕಾಣದವರ ಕೀಲಿನೆಣಿಕೆಯಲ್ಲಿ ಹೊಲಬುದಪ್ಪಿಪ್ರಣವ ಒಂದು ಕೇಳುತಿಪ್ಪ ಪರಬ್ರಹ್ಮ ಓಂ ಎಂದು 6 ಸುಳಿ ಕಮಲ ಪಾದ ಮೇಲೆ ಮಸ್ತಕವುತೊಳಲಿ ಕಾಣೆ ವೇದವೆಂದು ಬಳಲಿ ಬಳಲದೆಪ್ರಳಯ ಕೋಟಿ ಪ್ರಾಣಿಗಳಿಗೆ ಹೊಳವುಗಾಣಲೀಸದಂತೆಬೆಳೆದು ಹೋಗುವ ಗತಿಯೆಂಬುದಿತ್ತಲರಿಸುತಕಳವಿನವರು ಬಂದು ಇಳೆಯ ಮೇಲೆ ನಿಂದುಬಿಳಿಗಿರಿವಾಸ ತಿರುಮಲೇಶ ಆದಿಕೇಶವ ತಾನೆಯೆಂದು 7
--------------
ಕನಕದಾಸ
ಅನ್ನದಾನದ ಸುಖ ನಿನಗಲ್ಲದೆ ಬೇರೆಅನ್ಯ ಜನರೊಳಗುಂಟೆ ಜನ್ಯ ಜನಕಾ ಪ ಸಹಿತ ಒಂದು ಕೂಸು ಬರಲುಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ 1 ಕೊಟ್ಟ ಅನ್ನಕೆ ಸಮ ಇಷ್ಟನ್ನವೇನುಂಬಿಇಷ್ಟು ಜನರು ಬಲಿಕೊಟ್ಟು ಭುಂಜಿಪರು 2 ಇಂದಿರೇಶಗೆ ಕೊಟ್ಟ ದಾನದಿ ಶತಾನಂದನಾದಿಯೇಮುಕ್ತಿ ಮಂದಿರದೊಳಗೆ ಹರಿತಂದು ತೋರೆನಗೆ 3
--------------
ಇಂದಿರೇಶರು
ಅನ್ಯ ದೇವರ ನಾನರಿಯೆ ಸಿರಿಹರಿಯೆ ಪ ಎನ್ನ ಬಿನ್ನಪ ಕೇಳಯ್ಯ ದೊರೆಯೆ ಅ.ಪ ಹರಬೊಮ್ಮಾದಿಗಳಿಂದ ವರಪಡೆದ ರಾವಣ ಸರುವ ಲೋಕಂಗಳನೆಲ್ಲ ಗೆಲಿದು ಬಂದು ಸಿರಿರಮಣನೆ ನಿನ್ನೊಳು ದ್ವೇಷವನೆ ಮಾಡಿ ತರು ಮೃಗಗಳಿಂದಪರಾಜಿತನಾದನಯ್ಯಾ 1 ದೃಷ್ಟಾಂತಗಳನ್ನೆಷ್ಟು ತೋರಲಿ ನಾನು ದುಷ್ಟ ಜನರೆಲ್ಲ ಪಟ್ಟ ಬವಣೆಗಳಿಗೆ ಶ್ರಿಷ್ಟಿಗೊಡೆಯನೆ ನಾ ಮನಮುಟ್ಟಿ ನುತಿಸುವೆ ಶಿಷ್ಟ ಜನರ ಸಂಗದೊಳಿಟ್ಟೆನ್ನ ಸಲಹಯ್ಯಾ 2 ಮೂರು ಕರಣಗಳಿಂದ ನಾ ನಿನ್ನ ನಂಬಿಹೆನು ಮಾರುತೀಶನೆ ನಿನ್ನ ಚರಣವ ತೋರಿ ಗಾರು ಮಾಡದೆ ನೀ ಸಲಹಬೇಕೆಂಬೆನು ಕಾರುಣ್ಯದಿಂದಲಿ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಅನ್ಯಾಯದ ಮಾತುಗಳಾಡದಿರಿ ನೀವುಹೆಣ್ಣುಗಳಿರ ಕೇಳಿಪುಣ್ಯವಂತರಾದ ಕಾರಣ ಕೃಷ್ಣನಕಣ್ಣಿಂದ ನೋಡಿದಿರಿ ಪ. ವಾರಿಜಭವಾದ್ಯರ[ಸೇರದಿರುವವ]ಸೇರೋನೆ ಸಣ್ಣವರಸೂರ್ಯನಂತೆ ತೇಜದವ ಬಂದು ನಿಶಿಯಲಿಸೂರಿಲಿ ನಿಂತಾನೇನೆ 1 ಕ್ಷೀರಸಾಗರಶಾಯಿ ಆಗಿದ್ದವನು ಪಾಲುಸೋರೆ ಕದ್ದದ್ದು ನಿಜವೆನಾರೇರೆಂದರೆ ಮನಕೆ ತಾರದ ಸ್ವರಮಣಪೋರೇರ ನೆರೆದಾನೇನೆ2 ಕಾಲಯವನನ ಕೂಡ ಕಲಹ ಕೊಟ್ಟವ ನಿಮ್ಮಬಾಲರ ಬಡಿವನೇನೆಮೂಲೋಕವನೆಲ್ಲ ಭಾರಹೊತ್ತ ಹರಿ ತಾನುಆಳುಗಳೇರುವನೇನೆ 3 ವಾಲಯದಿ ಸುರರಿಗೆ ಸುಧೆಯನಿತ್ತ ಗೋಪಾಲಮೊಲೆಯನುಂಬುವನೇನೆಪೇಳಲಿನ್ನೇನು ದನುಜಕುಲಾಂತಕÀ ಹರಿಮೂಲೆಯಲಡಗುವನೇನೆ 4 ಸುರರು ಸ್ತುತಿಸೆ ತುಟಿ ಮಿಸುÀದವ ತಾನು[ಬಿರು]ಮಾತನಾಡುವನೆಕರಿರಾಜ ಕ[ರೆ]ದರೆ ಓಡಿ ಬಂದವ ನೀವುಕರಿಯೆ ಬಾರದಿಪ್ಪನೆ 5 ಸ್ಥಿರವಾದ ವೈಕುಂಠದರ¸ನೆನಿಸುವ ಸ್ವಾಮಿಕೆರೆಭಾವಿ ತಿರುಗುವನೆಗರುಡವಾಹನನಾಗಿ ಮುರಹರ[ಕರುಗಳ]ಏರುವನೆ6 ಪುಣ್ಯ ಪ್ರೇರಿಸುವ ದೇವರ ದೇವನು ಪರ-ಹೆ[ಣ್ಣ]ನಪ್ಪಿಕೊಂಬನೆಉಣ್ಣಲಿತ್ತ ಎಡೆ ಒಲ್ಲ ನಿತ್ಯತೃಪ್ತಬೆಣ್ಣೆಯ ಮೆಲುವÀನೇನೆ7 ಕಣ್ಣಿಗೆ ಕಾಣದ ಚಿನ್ಮಯ ಸರ್ವದಾ ನಿ-ಮ್ಮನೆಯೊಳಿಪ್ಪನೇನೆಚೆನ್ನರ ಚೆಲುವ ಕಾಮನಪಿತ ನಿಮ್ಮನುಆಣಕಿಸಿ ಆಡುವನೆ 8 ಮೃದುವಾದ ಉರಗತಲ್ಪನು ಹಸಿಬಾಣಂತಿಯಅದಟ ಮಂಚದೊಳಿ[ಪ್ಪ]ನೆಎದೆಯಲಿ ಶ್ರೀವತ್ಸ ಘಮಘಮಿಸುವ ದೇವಮದಬೆಕ್ಕು ಒಯ್ದ್ದನೇನೆ 9 ಮದನಾರಿಗೆ ತಾನು ಅದ್ಭುತ ಮಾಡಿದವಇದು ಆತನ ಲೀಲೆಯೆಪದುಮಾಕ್ಷ ಸಿರಿಹಯವದನರಾಯನ ಭಜಿಸಿಮುದದಿಂದ ನೀವು ಬಾಳಿರೆ 10
--------------
ವಾದಿರಾಜ
ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ಪ ಕೃಪಣ ವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ಅ.ಪ ಹುಡುಗರು ಮಾಡುವ ತಪ್ಪಿಗೆ ಜನನಿ ತಾ ಬಿಡುವಳೇ ಅದರಿಂದ ದಯವ ಮಾಡದಲೆ ನಡೆವ ಕುದರಿ ತಾನು ಮಲಗಿದಡೆ ಇನ್ನು ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ 1 ಮಾಡುಯೆಂದದರನು ಬಿಟ್ಟರೆ ಅಪರಾಧ ಬ್ಯಾಡವೆಂದರಾನು ಮಾಡುವುದಪರಾಧ ಈಡಿಲ್ಲ ನಿನ್ನ ದಯೆಯೆತೆಂದು ನಾ ನಿಂದು ಮಾಡುವೆ ಬಿನ್ನಪ ನಾಚಿಕಿಲ್ಲದೆಲೆ 2 ಬೇಡಿಕೊಂಬೆನೊ ವಾಸುದೇವವಿಠಲ ನೀನು ನೋಡದಿದ್ದರೆ ಭಕ್ತ ಜನರು ತಮ್ಮಾ ಬೀಡು ಸೇರಲೀಸರೊ ಕೇಡೇನೊ ಇದಕಿಂತ ಕೃಪಣ ವತ್ಸಲ ಕೃಷ್ಣ 3
--------------
ವ್ಯಾಸತತ್ವಜ್ಞದಾಸರು