ಒಟ್ಟು 388 ಕಡೆಗಳಲ್ಲಿ , 69 ದಾಸರು , 363 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ ದೀನ ದಯಾಕರನು ದಿವಿಭುವಿ ಪ. ಮಾನ ಭರಾಕರನು ನೀನೆಂದೊರವರನು ದುರಿತ- ಹೀನರ ಮಾಡುವನು 1 ತರಳನ ಮೊರೆ ಕೇಳಿ ವರ ನರ ಹರಿಯ ರೂಪವ ತಾಳಿ ದುರುಳ ಹಿರಣ್ಯಕನಾ ಕರುಳನು ಕೊರಳೊಳು ಧರಿಸಿದನಾ 2 ಗಜರಾಜನ ಕಾಯ್ದಾ ಬಾಣನ ಭುಂಜ ಪುಂಜವ ಕೊಯ್ದಾ ಗಜಪುರವರಗೊಲಿದಾ ಚರಣಾಂ- ಬುಜವೀವುತ ನಲಿದಾ 3 ನೆನೆದಲ್ಲಿಗೆ ಬರುವಾ ನಂಬಿದ ಜನರ ಸಂಗಡವಿರುವಾ ಅನುಗಾಲವು ಪೊರೆವಾ ಮನಸಿಜ ಜನನಿಯನಪ್ಪಿರುವಾ 4 ದಾಸರ ಸಲಹುವದು ಶೇಷ ಗಿ- ರೀಶನ ಮಹಾ ಬಿರುದು ದೋಷಗಳನು ತರಿದು ಈರೆರ- ಡಾಸೆ ಪೂರಿಪ ನೆರೆದೂ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು
ಹೆದರಿಕೆ ಬರುತದೆಲೋ ಪದುಮಾಕ್ಷ ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ ಹೆದರಿಕೆ ಬರುತಿದೆ ಜಗದ ಜನರು ನಿನಗೆ ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ ಹಳಿವರು ಹೆಳವನೆಂದು ಅಂಜದೆ ನಿನಗೆ ತಲೆಯಿಲ್ಲದವನೆನುವರು ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1 ದೃಢದಿ ಭಕುತಜನರು ಬೇಡಿದ ವರವು ಕೊಡಬೇಕಾಗುವುದೆನುತ ಓಡಿ ಹಾವಿನಮೇಲೆ ಪವಡಿಸಿದ ಮಹ ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2 ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ ಸದನಗೈದನುಯೆಂಬರು ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3 ಕುದುರೆಮಾವುತನೆಂಬರು ಎಲವೋ ರಂಗ ಕದನಗಡಕನೆನುವರು ಹದಿನಾರು ಸಾವಿರ ಸುದತಿಯರೊಶನಾದ ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4 ವಿಪಿನವಾಸಿಕನೆನುವರು ನಿಷ್ಕರುಣದಿ ನೀ ಕಪಿವರನ ತರಿದೆನುವರು ಕಪಟ ತಿಳಿಯುವರಾರು ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5
--------------
ರಾಮದಾಸರು
ಹೊಂದಿಕೊಂಡಿರಬೇಕು ಮನವೆ ಘನಚೈತನ್ಯಸಂದೋಹನಾದ ದೇಶಿಕನ ಪಾದಾಬ್ಜದೊಳು ಪರಾಗವನು ನೆರೆಬಿಟ್ಟು ರತಿಯ ಮನದಲಿ ನೆಟ್ಟುಭಾಗವತನಾಗದರೊಳು ಭಕ್ತಿಯುಟ್ಟುಭೋಗವಾಂಛೆಯ ಬಿಟ್ಟು ಬೋಧಿಸುತಲೊತ್ತಟ್ಟುಯೋಗ ರಾಜ್ಯವ ಕಟ್ಟು ಯುಕ್ತಿುಂ ಸುಖಬಟ್ಟು 1ಯಮ ನಿಯಮಗಳ ಮಾಡಿ ಏಕಾಗ್ರತೆಯೊಳಾಡಿಸಮ ಚಿತ್ತದೊಳ್ಪಾಡಿ ಸೌಖ್ಯವನು ಬೇಡಿಕ್ರಮದಿ ಸಾಧನೆಗೂಡಿ ಕಾಯ ದಂಡನೆ ಮಾಡಿವಿಮಲ ವೇದಾಂತ ವಿದ್ಯವನೊಲಿದು ನೋಡಿ2ಭೇದ ಬುದ್ಧಿಯನುಳಿದು ಭಿಕ್ಷಾನ್ನದೊಳ್ಬೆಳೆದುವಾದ ವಿದ್ಯವ ಕಳೆದು ವಸ್ತುವೆಂದರಿದೂಸಾಧನಗಳೊಳ್ಮೆರೆದು ಸಂಸ್ಕøತಿ ಪಥವ ತರಿದುಸಾಧು ಗೋಪಾಲಾರ್ಯ ಗುರುವಿನೊಳ್ಬೆರೆದೂ 3
--------------
ಗೋಪಾಲಾರ್ಯರು
ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ ಹಲವುರೂಪ ತಾಳಿದವನ ಪ. ರಾಗ ಮಿಗಿಲು ಲಕುಮಿರಮಣ ಭೋಗಿರಾಜಶಯನನ ಅ.ಪ. ಜಲದಿ ಚರಿಸುತಿಹನು ಸತತ ಒಲಿದು ಶಿರವ ನೆಗಹಿ ನೋಡ ಸಲೆವಿಕಾರ ಕೋರೆಹಲ್ಲ ಚಲ ಮಹೋಗ್ರ ರೂಪನ ನೆಲವನಳೆದು ತಾಯಿತಲೆಯ ತರಿದು ಕರಡಿ ಕಪಿಯೊಳಾಡಿ ಒಲಿದು ಗೋವುಕಾಯ್ದು ಬತ್ತಲೆತೊಳಲಿ ತುರಗವೇರ್ದನ 1 ಸೊಗಡುಗಂಧವೆಸೆವ ತನುವು ತೆಗೆದ ಬಾಯಿ ಕುಗ್ಗಿದ ಬೆನ್ನು ಅಗೆದು ನೆಲವ ಬಗೆದು ರೌದ್ರ ಹೊಗೆಯತೋರ್ವ ವದನನ ವಿಗಡವಿಪ್ರ ರಾಜವೈರಿ ಬಗೆಯಬಡದಾರಣ್ಯವಾಸಿ ನಗವ ಬೆರಳ ತುದಿಯಲೆತ್ತಿ ಜಗದ ಲಜ್ಜೆಯ ತೊರೆದ ಕಲ್ಕಿಯ 2 ಮಿಡಿದು ಹೊಳೆವ ಚಂಚಲಚಿತ್ತ ಕಡುಕಠಿಣ ದೇಹದವನ ಹಿಡಿದ ರೋಮಮಯ ಶರೀರ ಕಿಡಿಯನುಗುಳ್ವ ನಯನನ ಬಿಡದೆ ದಾನಬೇಡಿ ಕೊಡಲಿಪಿಡಿದು ಮೃಡನ ಧನುವ ಮುರಿದು ಜಡಿದು ಅಗ್ರಪೂಜೆಗೊಂಡ ಕಡುನಿರ್ವಾಣ ಹಯವದನನ3 ಸಂಪ್ರದಾಯದ ಹಾಡುಗಳು
--------------
ವಾದಿರಾಜ
139-5ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಠ್ಠಲನ ಮಂದಿರದಿ ತಪ್ಪದೇ ಪ್ರತಿದಿನಪಠಿಸಿ ಅರ್ಪಿಸುತ್ತಿದ್ದವಿಶ್ವವಿಷ್ಣುವಷಟ್ಕಾರ ಮೊದಲಾದ ಸಹಸ್ರನಾಮಗಳದಿಟ ಜ್ಞಾನ ಭಕ್ತಿಯಿಂ ಮಾರ್ಗದಿ ಸ್ಮರಿಸಿದರು 1ತನ್ನ ಹೊರ ಒಳಗೆ ಶ್ರೀಹರಿಯ ತಿಳಿಯುತ್ತಕಾಣುವುದು ಎಲ್ಲವೂ ಅನಘಹರಿ ಆವಾಸ್ಯತನಗೆ ಯದೃಚ್ಛದಿ ಲಭಿಸುವುವು ಹರಿಕೊಡುವುವುಎನ್ನುತ ಅನಪೇಕ್ಷಿ ನಿರ್ಭಯದಿ ನಡೆದರು 2ಮಾರ್ಗಸ್ಥ ಅಕ್ಷೋಭ್ಯ ಜಯಮುನಿಗಳಲಿಪೋಗಿ ಬಾಗಿ ಶಿರಸ್ಸಾಷ್ಠಾಂಗ ನಮಸÀ್ಕರಿಸಿ ಮುಂದುಪೋಗಿ ಕೃಷ್ಣಾ ತೀರ ಹನುಮನ್ನ ವಂದಿಸಿಚೀಕಲಪರಿವಿಗೆ ನಮಿಸಿ ಕರಮುಗಿದರು 3ಗುರುಗುಣಸ್ತವನಾದಿ ಗ್ರಂಥಗಳ ರಚಿಸಿರುವಸೂರಿವಾದೀಂದ್ರರ ನಮಿಸಿ ಅಪ್ಪಣೆಯಿಂಶ್ರೀರಾಘವೇಂದ್ರ ತೀರ್ಥರ ನಮಿಸಿ ಶರಣಾಗಿಸ್ತೋತ್ರ ಅರ್ಪಿಸಿದರು ಕವಿತಾರೂಪದಲಿ 4ಹರಿಶಿರಿ ಹನುಮ ಶಿವಗುರು ಅನುಗ್ರಹಕೊಂಡುದಾರಿಯಲ್ಲಿರುವಂಥ ಕ್ಷೇತ್ರ ಮೂರ್ತಿಗಳದರುಶನ ಮಾಡಿ ಗೋಪಾಲ ದಾಸಾರ್ಯರುಇರುವ ಸ್ಥಳ ಸೇರಿದರು ಜಗನ್ನಾಥದಾಸರು 5ಗುರುಗಳ ನೋಡಿ ಆನಂದ ಬಾಷ್ಪವ ಸುರಿಸಿಚರಣಪದ್ಮಗಳಲ್ಲಿ ನಮಿಸಿ ಶರಣಾಗಿಘೋರವ್ಯಾಧಿಹರಿಸಿ ಅಪಮೃತ್ಯು ತರಿದಂಥಕಾರುಣ್ಯ ನಿಧಿ ಉದ್ಧಾರಕರು ಎಂದರು 6ರಾಜೀವಾಲಯಪತಿವಿಜಯಗೋಪಾಲನುಭಜತರ ರಕ್ಷಿಸುವ ಕರುಣಾಸಮುದ್ರಈ ಜಗನ್ನಾಥನೇ ನಿನಗೆ ಒಲಿದಿಹನುಭುಜಗಾದ್ರಿವಾಸ ಫಂಡರಿ ವಿಠ್ಠಲ 7ನಿಜಭಕ್ತಾಗ್ರಣಿ ಗೋಪಾಲ ದಾಸಾರ್ಯರುನಿಜಭಾವದಲಿ ಈ ರೀತಿಯಲಿ ಹೇಳೆಐಜೀ ಮಹಾತ್ಮರು ಸೂಚಿಸಿದರು ಹರಿಯಭೋಜನ ಜಗನ್ನಾಥದಾಸಗೆ ಮಾಡಿಸಿದ್ದು 8ಜಗನ್ನಾಥದಾಸರು ನಡೆದ ವೃತ್ತಾಂತವಮುಗಿದು ಕರಗದ್ಗದ ಕಂಠದಲಿ ಪೇಳೆಚಕಿತರಾದರು ಅಲ್ಲಿ ನೆರೆದಿದ್ದ ಸಜ್ಜನರುಉದ್ಘೊಷ ಜಯ ಜಯ ಶಬ್ದ ಮಾಡಿದರು 9ಉತ್ತನೂರಿಗೆವೇಣಿಸೋಮಪುರದಿಂ ಪೋಗಿಮತ್ತೂವೇಣಿಸೋಮಪುರವನ್ನು ಯೈದಿಸತ್ತತ್ವ ಬ್ರಹ್ಮ ಜಿಜ್ಞಾಸವೂ ಭಾಗ -ವತ ಧರ್ಮ ಆಚರಿಸಿದರು ಮುದದಿಂದ 10ಗೋಪಾಲಕೃಷ್ಣ ಪ್ರಿಯ ಐಜೀಮಹಂತರುಗೋಪಾಲದಾಸಾರ್ಯ ªರದ ಗುರುತಂಗೋಪಾಲ ದಾಸಾರ್ಯರುಗಳ ಸಮೇತದಿಭೂಪಾಲ ಪ್ರಮುಖರು ಸಾಧುಜನಗುಂಪು 11ಶಿರಿವಾಸುದೇವಪ್ರಿಯವಾಸತತ್ವಜÕರಗುರುಗಳು ಗೋಪಾಲದಾಸರ ಅನುಗ್ರಹದಿವರದ ಗುರುತಂದೆ ಗೋಪಾಲರು ಮತ್ತೆಲ್ಲರಿಗೂಕರಮುಗಿದು ಹೊರಟರು ಅಪ್ಪಣೆಕೊಂಡು 12ಗದ್ವಾಲ ಮಾರ್ಗದಿ ಮಂತ್ರಾಲಯ ಪೋಗಿಮಧ್ವಮತ ದುಗ್ಧಾಬ್ಧಿ ಚಂದ್ರ ಶ್ರೀ ರಾಘವೇಂದ್ರ ವಾದೀಂದ್ರರ ನಮಿಸಿ ಅಲ್ಲಿಂದಯೈದಿಹರು ಪರಮಗುರುಗಳು ಇದ್ದ ಸ್ಥಳವ 13ಪರಮಗುರುಗಳು ವಿಜಯವಿಠ್ಠಲ ದಾಸಾರ್ಯರಚರಣಾರವಿಂದದಿ ಶರಣಾಗಿಅವರಕರದಿಂದ ನರಸಿಂಹ ವಿಜಯವಿಠ್ಠಲನಸುಪ್ರಸಾದವ ಕೊಂಡು ಮಾನವಿಗೆ ಹೋದರು 14ಮನುತೀರ್ಥ ತಟದಲಿ ಮನೆಯಲ್ಲಿ ವಾಸಿಸುತಹನುಮಂತಸ್ಥ ನರಹರಿ ಜಗನ್ನಾಥನ್ನಹನುಮನ್ನ ಪೂಜಿಸುತ ಗುರುಗಳ ಸ್ಮರಿಸುತ್ತಜ್ಞಾನಾರ್ಥಿ ವಿದ್ಯಾರ್ಥಿಗಳಿಗೆ ಒದಗಿಹರು 15ಇಷ್ಟರಲ್ಲೇ ಜಗನ್ನಾಥದಾಸರ ಕೀರ್ತಿಅಷ್ಟದಿಕ್ಕಲ್ಲು ಪ್ರಖ್ಯಾತಿಯ ಹೊಂದಿಇಷ್ಟಾರ್ಥ ಸಿದ್ಧಿಗೆ ಬರುವರಾದರು ಜನರುಕೃಷ್ಣನ ಒಲಿಮೆ ಈ ದಾಸರಲಿ ಪೂರ್ಣ 16ಮಾಧ್ವ ಮೂಲಗ್ರಂಥ ಟೀಕಾಟಿಪ್ಪಣಿಗಳುಸಾಧು ಹರಿದಾಸರ ಕೀರ್ತನೆಗಳುವೇದವ್ಯಾಸೋದಿತ ಪುರಾಣ ಇತಿಹಾಸವಿದ್ಯಾರ್ಥಿಗಳಿಗೆಲ್ಲ ಪಾಠ ಪ್ರವಚನವು 17ಯೋಗಿವರ ಪ್ರಾಣೇಶವಿಠ್ಠಲ ದಾಸಾರ್ಯರುಭಾಗವತವರಶ್ರೀಶ ವಿಠ್ಠಲದಾಸಾರ್ಯನಿಗಮವೇದ್ಯನ ಭಕ್ತಜನರು ಬಹುಮಂದಿಯುಬಾಗಿ ದಾಸಾರ್ಯರಿಗೆ ಶಿಷ್ಯ ಜನರಾದರು 18ಪ್ರಾಣೇಶ ದಾಸರಿಗೆ ಶರಣಾದೆ ಎಂದೆಂದುಪ್ರಾಣದೇವನು ಇವರೊಳ್ ಪ್ರಸನ್ನನಾಗಿಹನುಪ್ರಾಣದೇವಾಂತಸ್ಥ ಶ್ರಿಹರಿ ಕೇಶವನಕಾಣುತ ಭಜಿಸುವ ಭಾಗವತರೆಂದು 19ಜಗನ್ನಾಥದಾಸರ ಶಿಷ್ಯ ಸಜ್ಜನರಿಗೆಭಾಗವತವರಶ್ರೀಶ ಶ್ರೀದವಿಠ್ಠಲಾದಿಭಗವದ್ದಾಸರಿಗೆ ನಮಿಪೆ ಶ್ರೀ ಹರಿವಾಯುಝಗಝಗಿಪ ಇವರುಗಳೊಳ್ ಸಂತತ ಎಂದು 20ನೋಡಬೇಕಾಗಿದ್ದ ಕ್ಷೇತ್ರಗಳಿಗೆ ಪೋಗಿನಾಡಿನಲಿಭಾಗವತಧರ್ಮವ ಬೆಳೆಸೆಬೇಡುವ ಯೋಗ್ಯರಿಗೆ ಉಪದೇಶ ಕೊಡೆ ಶಿಷ್ಯರೊಡಗೂಡಿ ಹೊರಟರು ಜಗನ್ನಾಥದಾಸರು 21ಕರ್ಜಗಿ ಕ್ಷೇತ್ರದಲ್ಲಿ ಇರುವ ವರದಾ ನದಿಯುಸಜ್ಜನ ಸಮೂಹವು ಬಹಳ ಅಲ್ಲುಂಟುಶ್ರೀ ಜಗನ್ನಾಥನ್ನ ಭಜಿಸುತ್ತ ದಾಸರುಕರ್ಜಗಿ ಜಮೀನ್ದಾರ ಮನೆಯಲ್ಲಿ ಕುಳಿತರು 22ಸಾಧ್ವಿ ಶಿರೋಮಣಿ ಆ ಗೃಹಸ್ಥನ ಪತ್ನಿಪಾದನಮಿಸಿ ಪತಿಗೆ ಬಿನ್ನಹ ಮಾಡಿದಳುಇಂದುಲೌಕಿಕ ವಿಷಯಲಾಂಪಟ್ಯ ನಿಲ್ಲಿಸಿವಂದಿಸಿ ದಾಸರಿಗೆ ಪೂಜೆ ನೋಡೆಂದು 23ಅಹರ ಆರಾಧಿಸುವ ಕ್ರಮದಿ ದಾಸಾರ್ಯರುಸಾಯಾಹ್ನ ಸಾಮವಾಪ್ರತಿಪಾದ್ಯ ನರಸಿಂಹನವಿಹಿತದಿ ಅರ್ಚಿಸಿ ಕೀರ್ತನೆಗಳರ್ಪಿಸಿಮಹಾಹರ್ವ ಭಜಿಸುವರು ಶಿಷ್ಯರ ಸಮೇತ 24ಅಂದು ಈ ಗೃಹಸ್ಥನು ಹೆಂಡತಿ ಕೋರಿಕೆಯಂತೆಬಂದು ಕುಳಿತನು ದಾಸಾರ್ಯರ ಮುಂದೆಅಂದೇ ಆ ವಿಪ್ರನ ಅನಿಷ್ಠ ಪ್ರಾರಬ್ಧವುಚಂದದಿ ಪೋಪುವದೆಂದರಿತರು ದಾಸಾರ್ಯ 25ಪೂಜಾ ಆರಂಭ ಆಗಲಿಕೆ ಇರುವಾಗ ಆದ್ವಿಜನ ನೋಡಿ ಪ್ರಾಣೇಶ ದಾಸಾರ್ಯಗರ್ಜಿಸಿದರು ಇನ್ನಾದರೂ ಒಳ್ಳೆಋಜುಮಾರ್ಗ ಹಿಡಿ ಹರಿಯ ಒಲಿಸಿಕೊಳ್ಳೆಂದು 26ವಾಗ್ವಜ್ರಧಾರೆಯು ಪರಿಣಮಿಸಿ ವಿಪ್ರನತೀವ್ರ ಆ ಕ್ಷಣದಲ್ಲೆ ಮನಕಲುಷಕಳೆದುಶ್ರೀವರನ ಪ್ರಿಯತರ ಜಗನ್ನಾಥದಾಸರಿಗೆಸುವಿನಯದಿ ನಮಿಸಿ ಉದ್ಧರಿಸಿ ಎಂದ 27ಪ್ರಾಣೇಶ ದಾಸರಿಗು ಜಗನ್ನಾಥದಾಸರಿಗುತನ್ನ ಕೃತಜÕತೆಯನ್ನು ಚೆನ್ನಾಗಿ ತಿಳಿಸಿಮನ ಶುದ್ಧಿ ಭಕ್ತಿಯಿಂದಲಿ ಪೂಜೆ ನೋಡಲುಹನುಮಂತ ದೇವರು ಕುಳಿತಿದ್ದು ಕಂಡ 28ಶ್ರದ್ಧೆ ಭಕ್ತಿಯಿಂದ ಗೃಹಸ್ಥನುದಾಸರಪಾದಕೆರಗಿ ತನ್ನನ್ನು ಹರಿದಾಸವೃಂದದಲಿ ಸೇರಿಸಬೇಕೆಂದು ಪ್ರಾರ್ಥಿಸಿಶ್ರೀದವಿಠ್ಠಲನಾಮ ಅಂಕಿತವಕೊಂಡ29ಜಗನ್ನಾಥದಾಸಾರ್ಯಪರಮದಯಮಾಡಿಆ ಗೃಹಸ್ಥಗೆ ಶ್ರೀದವಿಠ್ಠಲಾಂಕಿತವುಭಕುತ ಜನರಿಗೆ ಫಲಮಂತ್ರಾಕ್ಷತೆ ಕೊಟ್ಟುಶ್ರೀಕರನ ಸ್ಮರಿಸಿ ಸವಣೂರಿಗೆ ಹೊರಟರು 30ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 31- ಇತಿ ಷಷ್ಠ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
6 (ಅ)ಸಂಪ್ರದಾಯದ ಹಾಡುಗಳು424ಆದಿನಾಥಗೆ ಜಯಮಂಗಳಶ್ರೀಧರ ಮೂರ್ತಿಗೆ ಶುಭಮಂಗಳ ಪ.ಧರಿಸಿ ನಾವೆಯ ಸತ್ಯವ್ರತನ ಪಾವನ ಮಾಡಿಚರಿಸದೆ ಮಂದರಗಿರಿಯ ಹೊತ್ತುಧರೆಯ ನೆಗಹಿ ಬಂಗಾರಗಣ್ಣಿನವನಹರಿದು ದೈತ್ಯಜಗೊಲಿದು ಬಂದವಗೆ 1ಸುರಪನಂತಸ್ತಾಪ ತರಿದು ಧರಿತ್ರಿಯಸುರರಿಗೆ ಸಕಲ ಪದವಿಯನಿತ್ತುಶರಧಿಯ ದಾಟಿ ದಶಶಿರನ ತಲೆ ಚಿವುಟಿತುರುಗಾಯ್ದ ಗೋಪೇರ ಅರಸನಿಗೆ 2ಅಂತರಾಳ ಪಟ್ಟಣಕಪಾಯವನು ಮಾಡಿಅಂತ್ಯದಿ ಯವನರ ಸವರಿದಗೆಚಿಂತಿಪ ದಾಸರ ಚಿಂತಾಮಣಿಗೆಸಿರಿಕಾಂತ ಪ್ರಸನ್ವೆಂಕಟದಾಸನಿಗೆ 3
--------------
ಪ್ರಸನ್ನವೆಂಕಟದಾಸರು
ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||ಎರಡು ಒಂದು ಕೋಟಿರೂಪ|ಧರಿಸಿ ರಕ್ಕಸರೊಳು ಕಾದಿ ||ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು 1ತಾಸಿಗೆಂಟು ಒಂದು ನೂರು |ಶ್ವಾಸಜಪವ ಮಾಡಿ ಜಂತು ||ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು2ಜಂಗಮರಿಗೆಪಾಣಿಚರಣ|ಕಂಗಳುಕಿವಿಯಾಡಿಸುತಲಿ ||ಪಿಂಗಳನಿಭಭಾರತೀಶ|ಹಿಂಗದನವರತ ಪೊರೆಯಲು 3ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು |ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4ಭುಜಕೆ ಗೋಪೀಚಂದನವನು |ವಿಜಯಚಕ್ರಗಳನು ಧರಿಸಿ ||ಕುಜನರಿಪುಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು 5
--------------
ಪ್ರಾಣೇಶದಾಸರು
ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
--------------
ಪುರಂದರದಾಸರು
ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |ಸವ್ಯಸಾಚಿ ಪ್ರೀತ ಹೋಮಧ್ಯಗೇಹಜಾತ ಹೋ ಪತರಣಿಬಿಂಬಕೆ ಜಿಗಿದೆ ಗದೆಯನು ವಗೆದೆಅಸುರಗ ಕರವನು ಮುಗಿದೆ |ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |ತರಿದೆ,ವಜ್ರಶರೀರ, ಧರಣಿಯಭಾರವಿಳುಹಿದುದಾರಮತಿ, ಕಪಿ |ವರನೊಳತಿ ಕೃಪೆ ಮಾಡಿದೆ ದಾನವ |ಬೇಡಿದೆ ಸುಮತಿಯ ನೀಡಿದೆ 1ದಂಡ ಮೇಖಲ ಧಾರ ಕುಜನಕುಠಾರ|ಬ್ರಹ್ಮ ಶರೀರ ಜೈಸಿದೆಮಂಡೋದರಿ ವಲ್ಲಭನ ಚರಿಸಿದೆಯೋವನ|ತಂದೆ ಮಾಧವನ ಉಡುಪಿಲಿಚಂಡವಿಕ್ರಮರಾಮ ಸೇವಕ ಭೀಮ |ಸದಾಚಾರಧಾಮಯತಿ ಮೇ |ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ 2ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |ಮುಕುತಿಪತಿಪ್ರಾಣೇಶ ವಿಠಲನದಾಸ ಸಲಹೋ ನಿರ್ದೋಷ3
--------------
ಪ್ರಾಣೇಶದಾಸರು
ಇರಬೇಕು - ಹರಿದಾಸರ ಸಂಗವರಜ್ಞಾನಿಗಳ ದಯ ಸಂಪಾದಿಸಬೇಕು ಪ.ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕುಯತಿಗಳ ಪಾದಕ್ಕೆ ಎರಗಬೇಕುಸತಿ ಸುತರಿದ್ದು ಮಮತೆಯನು ಬಿಡಬೇಕುಗತಿಯೆಂದು ಬಿಡದೆ ಹರಿಯ ಪೋಪರಸಂಗ 1ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕುಬಿಡದೆ ಹರಿಯ ಪೂಜೆಯ ಮಾಡಬೇಕುಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕುಬಿಡದೆ ಹರಿಭಜನೆಯ ಮಾಡುವರ ಸಂಗ 2ಹರಿ - ಹರ -ವಿರಂಚಿಯರ ಪರಿಯ ತಿಳಿಯಬೇಕುತರತಮದಿ ರುದ್ರ - ಇಂದ್ರಾದಿಗಳಅರಿಯದಿದ್ದರೆ ಗುರುಹಿರಿಯರ ಕೇಳಬೇಕುಪರಮಾನಂದದಲಿ ಓಲಾಡುವರ ಸಂಗ 3ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕುವಿಷ್ಣುವಿನ ದಾಸರ ದಾಸನಾಗಲುಬೇಕುಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕುಲೋಕೈಕನಾಥನ ಭಜಿಸಬೇಕುಸಾಕು ಸಂಸಾರವೆಂದುಕಕ್ಕುಲತೆ ಬೀಡಬೇಕುಶ್ರೀಕಾಂತಪುರಂದರವಿಠಲರಾಯನ ಸಂಗ5
--------------
ಪುರಂದರದಾಸರು
ಉರುಗುಣಗಣಶ್ರೇಣಿ ಕರುಣೀ ಪಎರಗಿ ಬಿನೈಪೆ ತಾಯೆ ಸುಖವೀಯೇ ಅ.ಪವನಜಸಂಭವಮುಖ್ಯ ಅನಿಮಿಶೇಷರಸ್ತೋಮಕನಕವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ 1ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾ -ಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ 2ಖ್ಯಾತಮಹಿಮಳೆ ಎನ್ನ ಮಾತುಲಾಲಿಸುದೇವಿಪೋತನಾನಲ್ಲೆ ನಿನಗೆನಾಥನಾಗಿ ಭಾಗ್ಯಪಡೆದ ಜಸಪಡೆದಾ 3ಬ್ರಹ್ಮದೇವರುಸುಮ್ಮನ ನೀಡುಇಮ್ಮನಮಾಡದೆ
--------------
ಗುರುಜಗನ್ನಾಥದಾಸರು
ಊದೊ ಕೊಳಲನು ಕೃಷ್ಣ ಊದೊ ಕೊಳಲನುವೇದ ವೇದ್ಯ ಊದು ಕೊಳಲ ನಾದ ತುಂಬೆ ನಭದಿ ಕೃಷ್ಣ ಪಮದನಜನಕ ಮೋಹನಾಂಗಚದುರೆಯರಿಗೊಲಿದು ವನದಿವಿಧ ವಿಧ ಕ್ರೀಡೆಗಳನಾಡಿಮುದವನಿತ್ತ ಮಧುಸೂದನನೆ 1ಗೋಪಿಕಾ ಸ್ತ್ರೀಯರ ವಾಕ್ಯಶ್ರೀಪತಿಯುಕೇಳಿಮುದದಿತಾಪಕಳೆದುಸುರರುತಲೆಯತೂಗೆ ಹರುಷದಿಂದಕೊಳಲನೂದಿದ ಚಲುವ ಕೊಳಲನೂದಿದ 2ನಾರಿಯರು ನಲಿದು ಬಂದುವಾರಿಧಿಯೊಳು ಸರಸವಾಡೆಮಾರಮಣನು ಸೀರೆಗಳನುಗಾರುಮಾಡಿ ಕದಿವರೇನೊತಾರೊ ವಸನವದುರುಳಕೃಷ್ಣ ತಾರೊ ವಸನವÀ3ಅಂಗನೆಯರೆ ನಿಮ್ಮ ವ್ರತಕೆಭಂಗವಾದ ಕಾರ್ಯವೆಸಗೆವಂದಿಸಿದರೆ ಕೊಡುವೆನೆಂದುರಂಗ ನಲಿದು ನುಡಿದ ಮುದದಿವಸನನೀಡಿದ ರಂಗವಸನನೀಡಿದ4ತರುಳರೆಲ್ಲ ಕೂಡಿಕೊಂಡುಕರುಗಳನ್ನೆ ಪಾಲಿಸುತಿರೆಮರೆಯ ಮಾಡಿ ಕರುಗಳನ್ನುದುರುಳತನವು ತರವೆ ಕೃಷ್ಣತಾರೊ ಕರುಗಳ ಕೃಷ್ಣ ತಾರೊ ಕರುಗಳ 5ಮಾತೆಯರನೆ ಅರಸುತಿರಲುಪ್ರೀತಿಯಿಂದ ಕರುಗಳನ್ನುಜೋಕೆಯಿಂದ ಪಿಡಿದು ತರಲುಯಾತಕೀಪರಿ ನಿಂದಿಸುವದುನೋಡಿ ಕರುಗಳ ನಿಂತಿರುವದು ನೋಡಿ ಕರುಗಳ 6ಗೊಲ್ಲತಿಯರ ಮನೆಯ ಪೊಕ್ಕುಮೆಲ್ಲುತಿರಲು ಬೆಣ್ಣೆ ಮೊಸರುನಲ್ಲೆಯರು ಪಿಡಿದು ಹರಿಯನಿಲ್ಲೊ ನಿಲ್ಲೊ ನಿಲ್ಲೊ ಕೃಷ್ಣಚೋರ ಕೃಷ್ಣನೆ ತೋರೊ ನಿಜವಜಾರಕೃಷ್ಣನೆ7ಚಿಕ್ಕ ಪ್ರಾಯದವರೆಕೇಳಿಸೊಕ್ಕಿನಿಂದ ನುಡಿವರೇನೆಬೆಕ್ಕು ತಿಂದ ತೆರವರಿಯದೆಧಿಃಕರಿಸುವುದುಚಿತವಲ್ಲನುಡಿವರೇನೆಲೆ ನಿಷ್ಠುರ ನುಡಿವರೇನೆಲೆ 8ಮಕ್ಕಳೆಲ್ಲ ಆಡುತಿರಲುಕಕ್ಕು ಬಿಕ್ಕು ಮಾಡಿಅವರದಿಕ್ಕು ದಿಕ್ಕುಗಳಿಗೆ ನಡೆಸಿಠಕ್ಕುತನವು ತರವೆ ಕೃಷ್ಣನಡತೆಯಲ್ಲವೊತುಡುಗಕೃಷ್ಣ ನಡತೆಯಲ್ಲವೊ9ಮಕ್ಕಳಾಡುತಿರಲು ಮಧ್ಯಸರ್ಪವೆರಡು ಕಾದಿ ಬರಲುದಿಕ್ಕು ತೋರದಂತೆ ಭಯದಿದಿಕ್ಕು ದಿಕ್ಕಿಗೆ ಓಡದಿಹರೆದುಡುಕು ನನ್ನದೆ ದೂರುವಿರೆನ್ನ ದುಡುಕು ನನ್ನದೆ 10ಹರಿಯ ಮಾತುಕೇಳಿಮುದದಿಹರುಷದಿಂದ ನಮಿಸಿ ಕೃಷ್ಣಗೆತ್ವರಿತದಿಂದಲಿ ಒಲಿಯೊ ಮುರಳೀ-ಧರನೆ ಹರುಷದಿಂದ ಕೃಷ್ಣನಮಿಸಿ ಬೇಡುವೆವೊ ಕೃಷ್ಣ ಸ್ಮರಿಸಿ ಪಾಡುವೆವೊ 11ಸರಸವಾಡÀುತಿಹಿರಿ ಎನ್ನಸ್ಮರಣೆಯಿಂದ ತನುವ ಮರೆತುಕ್ಷಮಿಪೆ ನಿಮ್ಮ ಗೃಹಕೆ ತೆರಳಿವನಜಮುಖಿಯರೆಲ್ಲರುತೆರಳಿರೆಂದನು ತರುಣಿಯರೆನ್ನ ಸ್ಮರಿಸಿರೆಂದನು 12ಕರುಣದಿಂದ ಸಲಹುತಿಹೆನುದುರಿತವೆಲ್ಲ ತರಿದು ಮುದದಿಕಮಲನಾಭ ವಿಠ್ಠಲನೆಂದುಕುಣಿದು ಪಾಡಿ ವನಿತೆಯರೆನಲಿದು ಪಾಡಿರೆ ನಾರಿಯರೆಲ್ಲ ಕುಣಿದು ಪಾಡಿರೆ 13
--------------
ನಿಡಗುರುಕಿ ಜೀವೂಬಾಯಿ
ಎತ್ತಾರೆ ಹಿಂದಿನ ಮಾತು |ಭಾರತೀಶನಿನ್ನಭೃತ್ಯರು ತಮ್ಮನುವರಿತು | ನೀ ಸಲಹದಿದ್ದರೆ ಹೀಗೆಂದು ಪಮೂಗು ಹಿಡಕೊಂಡು ಕುಳಿತಿದ್ದಿ ನೂರತೊಂಭತ್ತೆಂಟು ಕಲ್ಪ |ಆಗಲೊಬ್ಬರೂ ನಿನ್ನನಾರೆಂದು ಕೇಳಾರೋ ||ಈಗ ದೇವರ ದಯೆಯಿಂದ ಹದಿನಾಲ್ಕು ಲೋಕಕ್ಕೆ ಮಂತ್ರಿ |ಯಾಗಿ ಸಂತೋಷದಿಂದ ಮೇಲು ಮೆರೆವುದಕ್ಕೀ ಗರ್ವವೆಂದು 1ಊರ ಸೇರದಲೆ ಕಂಡ ಗಿಡದ ತೊಪ್ಪಲುಗಳ ತಿಂದು |ಅರಣ್ಯದೊಳು ಬಹುಕಾಲ ಬದುಕಿದ್ದು ಮತ್ತೂ ||ಶ್ರೀರಾಮನಾಳಾಗಿ ಶಿಲೆಯ ಪೊತ್ತುದು ಜಗವೆಲ್ಲಾ ಬಲ್ಲದು ಮುಂದೆ |ವಾರಿಜಾಸನ ಪದವಿಯಾಳೆಂದುಹರಿನುಡಿದುದಕೀಗರ್ವವೆಂದು 2ತಿರಿದುಂಡು ಹನ್ನೆರಡಬ್ದ ವನವಾಸ ಅಜ್ಞಾತವೊಂದು |ವರುಷ ಮತ್ಸ್ಯಾಧಿಪನಾಗಾರದಲಿ ಪಾಕ ಮಾಡಿ ||ತರುಣೀ ಮಾನಭಂಗವ ನೋಡಿ ಸುಮ್ಮನಿದ್ದೆಯಾಗ ಕೃಷ್ಣ |ತರಿದು ದುರ್ಯೋಧನರ ರಾಜ್ಯ ನಿಮಗಿತ್ತುದಕೀ ಗರ್ವವೆಂದು 3ಎಲ್ಲರೂ ಕಂಡದ್ದು ಹುರಳಿ ಗುಗ್ಗರಿ ತಿಂದು ಭಿಕ್ಷಾರ್ಥಿಯಾಗಿ |ಮುಳ್ಳು ಮರದಡಿಯಲ್ಲಿ ಕುಳಿತದ್ದು ಹಿರಿಬದರಿಯಲ್ಲಿ ||ಸುಳ್ಳಲ್ಲ ವೇದವ್ಯಾಸಾನಂತ ವೇದಾರ್ಥ ತಿಳಿಸಿ ಸಕಲ |ಬಲ್ಲವನೆಂದು ಪೆಸರೂ ಕೊಟ್ಟದೆವೇ ಈ ಗರ್ವವೆಂದು 4ಏನೆಂಬುವ ಸರ್ವರಲ್ಲಿ ಹೊಕ್ಕು ಬಳಕೆ ಮಾಡುತಿದ್ದಿ |ಹೀನರು ನಿನಗೀಸು ನೀರ ಹಾಕಂದುಕೇಳಿ||ಪ್ರಾಣೇಶ ವಿಠಲನ್ನ ಭಜಿಸಿ ಪೂರ್ಣ ದಯಕೆ ಪಾತ್ರನಾಗಿ |ಮೀನಾಂಕಾರಿ ಮುಖರಿಂದರ್ಚನೆಗೊಂಬಕ್ಕೀ ಗರ್ವವೆಂದು 5
--------------
ಪ್ರಾಣೇಶದಾಸರು