ಒಟ್ಟು 4790 ಕಡೆಗಳಲ್ಲಿ , 128 ದಾಸರು , 3230 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಂಕರ ಶಿವಶಂಕರ ಶಿವಶಂಕರ ಶಿವಶಂಕರಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.ವ್ಯೋಮಕೇಶಭವಾಬ್ಧಿತಾರಕ ರಾಮನಾಮೋಪಾಸಕಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ 1ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರಶೈಲರಾಜಸುತಾಧರಾಮೃತಲೋಲ ಲೋಕಧುರಂಧರಕಾಲಕಾಲ ಕಪಾಲಧರಕರುಣಾಲವಾಲಮಹೇಶ್ವರಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3ಕೃತ್ತಿವಾಸಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕಮೃತ್ಯುಹರ ಹರಮೃಡನಮೋಸ್ತುನಮೋ&bಜquo;ಸ್ತು ಸುಮನನಿಯಾಮಕ 4ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹಚಂಡಿಕಾಧವ ಶಿವ ದಯಾರ್ಣವಖಂಡಪರಶುಸುರಾರಿಹಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗಸದೋದಿತಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6ಭರ್ಗಭಾರ್ಗವಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಂಭೋ ಶಿವ ಶಂಕರಾ | ಮಹೇಶ್ವರ ||ಶಂಭೋ | ಶಿವ ಶಂP Àರ ಪಶಂಭು ಮಹೇಶ್ವರ | ಅಂಬಾಮನೋಹರನಂಬಿದವರ ಕಾಯ್ವ |ಸಾಂಬದಿಗಂಬರ 1ನೀಲಕಂಧರವರ| ಬಾಲಚಂದಿರಧರ ||ಫಾಲಲೋಚನರುಂಡ | ಮಾಲಾಕಾಲನಕಾಲ ||ಅಂಧಕಾಸುರ ಹರ | ಮಂದಾಕಿನಿಧರ ||ನಂದಿ ಸವಾರಗೋ | ವಿಂದ ದಾಸವಂದ್ಯ 3
--------------
ಗೋವಿಂದದಾಸ
ಶರಣಾಗತನಾದೆನು ಶಂಕರ ನಿನ್ನಚರಣವ ಮರೆಹೊಕ್ಕೆನು ಪ.ಕರುಣಿಸೈ ಕರಿವದನಜನಕಾ-ವರಕದಂಬಪೂಜ್ಯ ಗಿರಿವರ-ಶರಸದಾನಂದೈಕವಿಗ್ರಹದುರಿತಧ್ವಾಂತವಿದೂರದಿನಕರಅ.ಪ.ಹಸ್ತಿವಾಹನವಂದಿತ ವಿಧುಮಂಡಲ-ಮಸ್ತಕಗುಣನಂದಿತಸ್ವಸ್ತಿದಾಯಕ ಸಾವiಗಾನಪ್ರ-ಶಸ್ತ ಪಾವನಚರಿತ ಮುನಿಹೃದ-ಯಸ್ಥಧನಪತಿಮಿತ್ರ ಪರತರ-ವಸ್ತು ಗುರುವರ ಶಾಸ್ತಾವೇಶ್ವರ 1ಮಂದಾಕಿನೀಮಕುಟಶಿವ ಶಿವ ನಿತ್ಯಾ-ನಂದಮ್ನಾಯ ಕೂಟಚಂದ್ರಸೂರ್ಯಾಗ್ನಿತ್ರಿಲೋಚನಸಿಂಧುರಾಸುರಮಥನ ಸ್ಥಿರಚರ-ವಂದಿತಾಂಘ್ರಿಸರೋಜ ಉದಿತಾ-ರ್ಕೇಂದುಶತನಿಭ ನಂದಿವಾಹನ 2ನೀಲಕಂಧರ ಸುಂದರ ಸದ್ಗುಣವರು-ಣಾಲಯ ಪರಮೇಶ್ವರಕಾಲಕಾಲಕಪಾಲಧರ ಮುನಿ-ಪಾಲ ಪದ್ಮಜವಂದಿತಾಮಲ-ಲೀಲ ಡಮರು ತ್ರಿಶೂಲಪಾಣಿ ವಿ-ಶಾಲಮತಿವರ ಭಾಳಲೋಚನ 3ಮಾರಸುಂದರ ಸಂಕರ ಶ್ರೀಲಕ್ಷ್ಮೀ-ನಾರಾಯಣಕಿಂಕರಮಾರಹರ ಮಹನೀಯ ಶ್ರುತಿಸ್ಮøತಿ-ಸಾರವಿಗತಾಮಯ ಮಹೋನ್ನತವೀರ ರಾವಣಮದನಿಭಂಜನಚಾರುತರವರಭಾರಪುರಹರ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣು ಆತ್ಮಕ ಸರ್ವತೋಮುಖ ಶರಣು ಸರ್ವಲೀಲಾತ್ಮಕಶರಣುಗುರುಚಿದಾನಂದ ವಿಗ್ರಹ ಶರಣು ಸುರಮುನಿ ಪಾಲಕಪರೂಪು ಹರ ನಿರ್ಲೇಪಘನಚಿದ್ರೂಪರೂಪವಿರೂಪಕತಾಪನಾಶಕ ಪೋಷ ಭಕ್ತಕೃತಪರಾಧಿ ಪವಿತ್ರಕದೀಪ ಹೃದಯ ಸಭಾಸ ಉನ್ಮನ ದೀಪ್ಯಮಾನ ಮಹಾತ್ಮಕಭೂಪ ಸುರಮುನಿ ಸಿದ್ಧರಕ್ಷಕ ಭುವನದಧಿಪತಿ ರಕ್ಷಕ1ಪ್ರಣವಪುರುಷ ಪರೇಶಪಾವನ ಪ್ರಣತಸುಜನಪರಾವರ ಮರಣರಹಿತ ನಿಜ ನಿಶ್ಚಲಾತ್ಮಕ ಗುಪ್ತ ಮೂರುತಿ ಗುರುವರಎಣಿಸಬಾರದನಂತ ಲೋಕಕೆ ಏಕನಾಥದಿವಾಕರಅಣಿಮ ಮಹಿಮಾಷ್ಟಾಂಗ ಯೋಗಗಳಳವಿಗೊಡದ ಪ್ರಭಾಕರ2ಎರಡು ಮೂರಾರೆಂಬವೆಲ್ಲವ ಎಣಿಸೆ ಏಳೈದೆಂಬವಪರಿವಿಡಿಯ ನಾಲ್ಕೆಂಟು ನವದಶ ಪರಿಪರಿಯ ವಿಕಾರವಹರಿಹರ ಬ್ರಹ್ಮಮರೇಂದ್ರರು ಹರಿವರಿಯದ ಸ್ವಭಾವವಬೆರಸದಿಹ ಚಿದಾನಂದ ಮೂರ್ತಿಯ ಭೇದವಿರಹಿತ ಚಿತ್ಪ್ರಭಾ3
--------------
ಚಿದಾನಂದ ಅವಧೂತರು
ಶರಣು ಶರಣಯ್ಯಾ ಪಶರಣು ಹರಿಗುಣ ಲೋಲಗೆ ಅ.ಪಬದ್ಧಶ್ರೀಹರಿ ದ್ವೇಷಿಮಾಯಿಗಳಗೆದ್ದಹಯಮುಖ ದಾಸಗೆ 1ನಿತ್ಯನಿರ್ಮಲನಿಗಮಸ್ತೋತ್ರಗೆಸ್ತುತ್ಯಯತಿವರಸುಜನಮಿತ್ರಗೆ2ಆದಿ ಗುರುಜಗನ್ನಾಥವಿಠಲಗೆ 3
--------------
ಗುರುಜಗನ್ನಾಥದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು
ಶರಣು ಶರಣುಪರಮಪುರುಷಶರಣು ಭಯಶರ ಖಂಡನಶರಣುಸಿರಿವಿಧಿಮರುತ ಪೂಜಿತಶರಣು ವೆಂಕಟನಾಯಕ ಪ.ಭಾಸಿತ ತಟಿತಮಕರಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ ಸುವ್ಯಾಪ್ತಾಜಾಂಡ ವಿಶೇಷಸ್ಥಿತಿಲಯಶೀಲನೆತೋಷಮಂದ ಸುಹಾಸವದನನೆಶೇಷಗಿರೀಶ ನಮೋ ಹರೆ 1ಶಂಖ ಚಕ್ರಗದೆ ಪದುಮ ವರಾಭಯಕಂಕಣಕರ ರಾಜಿತಕುಂಕುಮಮೃಗಮದತಿಲಕಧರಾತಂಕಕುಂಭಿಮೃಗಾಧಿಪಕಿಂಕರಾನತ ರಕ್ಷಕರಿಪುಶಂಖ ದೈತ್ಯ ವಿಶಿಕ್ಷಕಪಂಕಜಾನನ ಗರುಡವಾಹನಅಂಕಿತಾಖಿಳ ಭೂಷಣ 2ಜನನ ಮೃತ್ಯುವಿದೂರಅಚ್ಯುತಮುನಿಮನಾಲಯಮಾಧವಕನಕನೇತ್ರವಿದಾರಿ ಪೋತ್ರ್ಯಾಂಗನೆ ವಿಮಲಗುಣ ಪೂರ್ಣನೆದನುಜನಿಕರಾಟವಿ ದಾವಾನಲಸನಕಸನಂದನ ಸ್ತುತಿಪ್ರಿಯಅನವರತವರಸ್ವಾಮಿಪುಷ್ಕರಸನ್ನಿದ ಪ್ರಸನ್ವೆಂಕಟೇಶನೆ 3
--------------
ಪ್ರಸನ್ನವೆಂಕಟದಾಸರು
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ
ಶರಣು ಹರಿಗುಣ - ಲೋಲಗೆ ಪಮೋದತೀರ್ಥಮತಾಬ್ಧಿ ಚಂದ್ರಗೆಅದೀತೇಯನ ತೆರದಿ ಮೆರೆವಗೆ 1ನಿತ್ಯನಿರ್ಮಲ ಪುಣ್ಯಗಾತ್ರಗೆಸ್ತುತ್ಯಯತಿವರಸುಜನಮಿತ್ರಗೆ2ಮೇದಿನೀಸುರಜಾಲನಾಯಕಮೋದತೀರ್ಥರಚರಣಸೇವಕಆದಿಗುರು ಜಗನ್ನಾಥ ವಿಠಲಗೆ 3
--------------
ಗುರುಜಗನ್ನಾಥದಾಸರು
ಶಾಂಭವಿ ನಿನ್ನ ಪಾದಾರವಿಂದದಿಂದೆಕಾಂಬುವೆ ಕರಣೇಂದ್ರಿಯ ವ್ಯಾಪಕ ತಾಯಿ ತಂದೆಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅಷ್ಟದಳದಕಮಲಮಧ್ಯದಲ್ಲೀ |ಸ್ಪಷ್ಟ ತೋರುವವೆರಡೂ ದಳದಲ್ಲೀ |ಮುಟ್ಟಿ ನೋಡುವರು ಮಹಾತ್ಮರು ಅಲ್ಲೀ |ಬಟ್ಟ ಬಯಲಿನ ಹಾದಿ ಬೆಳಗಿಲ್ಲೀ1ಭೃಕುಟದಾಚಿಯಲಿ ಹತ್ತಂಗುಲ ಸ್ಥಾನಾ |ತ್ರಿಕೂಟ ಶ್ರೀಹಾಟ ಗೋಲ್ಹಾಟ ಕಾರಣಾ |ಜೌಟ ಪೀಠದಿಂದ ಧ್ಯಾನಾ |ಪ್ರಕಟವಾಗುವಳುಭ್ರಮರಗುಂಫಾ ಸ್ಥಾನಾ2ಏಕಾಕಾರೀ ಬ್ರಹ್ಮಾಂಡ ಪಿಂಡ ಮೀರಿ |ಓಂಕಾರ ನಾದ ಬಿಂದು ಕಲಾಧಾರಿ |ಲೋಕೋದ್ಧಾರಕ ಶಕ್ತಿ ಅವತಾರೀ | ಶಾಕಂಬರಿಶಂಕರಗೆ ಶಂಕರೀ ಶಾಂಭವಿ ನಿನ್ನ ಪಾದಾರವಿಂದದಿಂದೆ3
--------------
ಜಕ್ಕಪ್ಪಯ್ಯನವರು
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
--------------
ಗೋವಿಂದದಾಸ
ಶಾರದೆ ಜಗದ್ಭರಿತೆ ಸರಸ್ವತೆ ||ಸಾರಸದ್ಗುಣಚರಿತೆವಾರಿಜೋದ್ಭವನ ಪಾದಾರವಿಂದಾರ್ಚಿತೆ |ತೋರೆ ದಯವ | ಕೀರವಾಣಿ ಕಲ್ಯಾಣಿಯೆ ||ಶುಭಕರೆ ಶುಭವದನೇ ಸರ್ವೇಶ್ವರಿ |ಪ್ರಭಾಕರ ಪ್ರಭಾವದನೆ ಪಇಭರಾಜಗಮನೆ| ಸದ್ಬುದ್ಧಿಪ್ರದಾಯಿನಿ |ಅಭಯನೀಯುತಲೆನ್ನ | ಸಲಹು ಸ್ತ್ರೀಸಭಾಶೋಭೆ 1ತಾಯೆ ಮಯೂರ ವಾಹಿನೀ | ಜಯ ಜಯ ಜಗ -|ನ್ಮಾಯೆ ಮೋಹನ ರೂಪಿಣೀ ||ತೋಯಜಕುಸುಮದಳಾಯತ | ಲೋಚನೆ |ಕಾಯೇ ದಯದಿಭವಹೇಯವಿದಾರಿಣಿ 2ನೀತೆ ಪರಮಪುನೀತೆ | ಪಾಲಿಸು ಲೋಕ |ಮಾತೆ ಪಾವನ ಚರಿತೆ |ದಾತೆ ತ್ರಿಲೋಕ | ವಿಖ್ಯಾತೆ ಬ್ರಹ್ಮನ ಪ್ರೀತೆ ಆತ್ಮರಕ್ಷಿಣಿ |
--------------
ಗೋವಿಂದದಾಸ
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪಅಷ್ಟಾಕ್ಷರದಿ ಮಂತ್ರಾಘ್ರ್ಯ ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ 1ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ 2ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆಎಣಿಕೆಇಲ್ಲಾ 3ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||ವಿಧಿಕಾಷ್ಟಗತವಹ್ನಿಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ 4ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ 5
--------------
ಪ್ರಾಣೇಶದಾಸರು
ಶಿವ ಶಂಬೋ ಶಂಕರಾ | ಶಿವ ಸೋಮಶೇಖರಾ |ಶಿವನೆ ಗಂಗಾಧರ | ಶಿವ ಗೌರೀವರ |ಶಿವ ಚರ್ಮಾಂಬರ | ಶಿವಭವಭಯಹರ 1ಶಿವ ನೀಲಕಂಧರಾ | ಶಿವಕಾಲಾ ಸಂಹರಾ |ಶಿವನೇ ಜಟಾಧರ | ಶಿವ ರಜತೇಶ್ವರ |ಶಿವ ಶೂಲಾಧರ | ಶಿವನಿಗೆ ಶಿರ ಸರ2ಶಿವ ಭಸ್ಮಾಲೇಪನಾ | ಶಿವವೃಷಭವಾಹನಾ |ಶಿವ ಫಣಿಭೂಷಣ ಶಿವಗೆ ತ್ರಿಲೋಚನ |ಶಿವ ಗೋವಿಂದ£À |ಶಿವ ದಾಸರ ಪ್ರಿಯಾ 3
--------------
ಗೋವಿಂದದಾಸ
ಶಿವನೇ ನೀನೆನ್ನೊ ಮನುಜಶಿವನೇ ನೀನೆನ್ನು ಶಿವನೇ ನೀನೆನ್ನುಶಿವನೇ ನೀ ನಿಜ ನಿಜ ಶಿವನಹುದಲ್ಲೋ-ಎಂಬ ಸಂಶಯ ಬೇಡೋಪಜನನ ರಹಿತನೆನ್ನೋ ವಿಶ್ವಾತ್ಮಕನೆನ್ನೋವಿಶ್ವರೂಪನೆನ್ನೋ ವಿಶ್ವಾತೀತ-ವಿಶ್ವಸಾಕ್ಷಿಯೆ ತಾನೆನ್ನೋ1ನಿರ್ವಿಕಲ್ಪನೆನ್ನೋ ನಿರ್ಗುಣನೇ ಎನ್ನೋನಿರ್ವಿಕಾರ ಚಿದಾನಂದನೆ ತಾನೆನ್ನೋ2
--------------
ಚಿದಾನಂದ ಅವಧೂತರು