ಒಟ್ಟು 7546 ಕಡೆಗಳಲ್ಲಿ , 133 ದಾಸರು , 4390 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಂಕರ ಗಂಡನ ಹಾಡು ಸರಸ್ವತಿಗಭಿವಂದಿಸುವೆ ಒಡೆಯನು ಎನ್ನ ಮನದೊಡೆಯ 1 ಸಂಭ್ರಮ[ದಾ] ಕೇಳಿ ಸಜ್ಜನರು 2 ವಿಶಾಲ ವಿಲಾಸ ಪಟ್ಟಣದಿ ಖಚಿತ ಮಂದಿರದಿ 3 ಮಂದಮಾರುತ ತಂಪೆÉಸೆಯೆ ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು4 ಮಯೂರ ಪಕ್ಷಿಗಳು ನಳಿನ ನಾಭನ ಓಲಗವು 5 ನಿರ್ಭಯದಲಿನಲ್ಕಾವತಿಯು ಪಾಲಿಸುತ್ತ 6 ಮರಿಹಾವುಗಳ ನೆರೆಹುವಳು ಗೊಂಬೆಯಾಟವನೆ ಆಡುವಳು 7 ಕೂಡಿದ್ದ ಗೆಳತಿಯರ ಒಡನೆ ನೋಡಿದ ನವಯೌವನೆಯನು 8 ಕುಚವು ತೋರಿದವು ಚಿತ್ತದೊಳಗೆ ಚಿಂತಿಸುತ್ತಿದ್ದ 9 ಚೆನ್ನಿಗನು ಮನ್ಮಥನು ಉದಯಕ್ಕೆ ಕರೆತನ್ನಿರೆಂದ 10 ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ ನಿಂದು ಕೈ ಮುಗಿದರು ಹೋ ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು 11 ಮಾತಾಡಿ ನಗುತ ಭೂ ಕೇಳಿದ ಮನ್ಮಥನ 12 ರಾಜ್ಯವು ಕ್ಷೇಮವೆನ್ನಲು ಬ್ರಹ್ಮಾನಂದದಲಿದ್ದ ಶಂಕರಗಂಡನು 13 ವಿವಾಹ ಮಾಡಲಿಚ್ಛಿಸುವೆ ಚಂದ್ರಮುಖಿಯು 14 ಸಂಭ್ರಮದಿಂದ ಕುಳಿತರು ತಂದಿಡುವರು ಮನ್ಮಥಗೆ 15 ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು ಮಂಗಳ ಮೃದು ವಾಕ್ಯವನ್ನು ಪ್ರ ತಂಗಿಯನೆನಗೀಹುದೆಂದ 16 ಮಲ್ಲಿಗಿಸರ ಕಬ್ಬು ಬಿಲ್ಲು ಹಿರಿಯರು ಹೇಳುವರು 17 ಒಬ್ಬಳೇ ರತಿ ನಮ್ಮ ತಂಗಿ ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ 18 ಕಡುಮೋಹದಿಂದ ಸಾಕಿದೆನು ಕೊಡಲಾರೆ ತಂಗಿಯನೆಂದ 19 ಅವಳಿಗೆ ಸ್ವತಂತ್ರವಿಲ್ಲೇನು ನುಡಿದ ದೈನ್ಯದಲಿ 20 ಭಾಗ್ಯದಿಂದಲಿ ನೋಡಿದರು ಮದನ ನೇಮವನೆ ಮಾಡಿದರು 21 ಪ್ರತಿಬಿಂಬ[ದಂದ]ದಲಿ ಎಣಿಕೆಯಿಲ್ಲದ ಬಂಧು ಜನರ 22 ಎಲ್ಲರು ನೆರೆದು ಸಂಭ್ರಮದಿ ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು 23 ಬಟ್ಟಲು ಗಿಂಡಿಗಳನ್ನು ಬಳುವಳಿ ತಂಗಿಗೆ ಇತ್ತ 24 ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ ವಿಲಾಸಪಟ್ಟಣಕೆ ಕಳಿಸಿದ 25 ದಿನ ಬಾಳುತಿರಲು ತಾನೇ ಯೋಚಿಸಿದ 26 ಬಿಗಿದ ನಾಡಗಂಬಳಿಯ ನಗುವಂತೆ ಮಾಡಿ ರೂಪವನು 27 ಕುಡಗೋಲು ಕÀವಣೆಯ ಪಿಡಿದು ಮಾಡುವೆನೆನುತ 28 ರೂಢಿಯೊಳಗೆ ಅತಿಚೆಲುವ ಸತಿಗೆ ತೋರಿದನು 29 ಒಡಹುಟ್ಟಿದಣ್ಣ ತಾ ಮುನಿಯೆ ನಮಗೆ ಬೇಡವೆಂದ್ಲು 30 ಕಾರಣವ ಹೇಳದಂತೆ ದಿನÀಕರ ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು31 ಗೆಲುವಿನಿಂದ ಮಾತಾಡಲಿಲ್ಲ ಜುಲ್ಮಿಂದ ತಾನೆ ಕೇಳಿದನು 32 ನಮ್ಮನೆಯಲಿ ನಾವೀಗ ಕಳಿಸುವೋರಲ್ಲ 33 ತೌರುಮನೆಯ ಹಾರೈಸುವರು ಉಂಡು ಸಂಭ್ರಮದಿಂದ ಬಾಹೋಳೆಂದ 34 ಕರುವ ಕಾಯಿ ನಮ್ಮ ಮನೆಯ ಮರೆಯದೆ ಹೊಯ್ಸುವೆಂನೆಂದ 35 ಜೋಳವ ಕೊಂಡು ಹೋಗೆನಲು ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು ಮಾಡುವೆನೊಂದÀು ಗಳಿಗೆಯಲಿ 36 ಗಮಕದಿಂದಲಿ ಬೆಳೆವೆನೆಂದು ಚಮತ್ಕಾರದಿಂದ ಮಾಯವಾದ 37 ಅಟ್ಟ ಅಡಿಗೆ ಮನೆಂiÉ
--------------
ಹೆಳವನಕಟ್ಟೆ ಗಿರಿಯಮ್ಮ
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ ಸಂಕರುಷಣ ದೇವ ಶಂಖಾರಿಧರನೆ 1 ಕಂಬದಿ ಬಂದಚ್ಯುತನೆ ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2 ಅಖಿಳ ಅಸುರರ ಶಕುತಿಯ ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3 ಶಾಮಲ ಶರೀರ ವರ್ಣ ವಿನುತ ರೋಮ ರೋಮ ಕೂಪದಿ ಆನಂದ ಭರಿತ ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4 ಸನ್ನುತ ಚರಣ ಅನಿರುದ್ಧ ದೇವನೆ ಅಸುರ ಸಂಹರಣಾ ಕನಕಗರ್ಭಾದಿ ಸುರಕಟಕ ಪಾಲಕನೆ ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5 ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ ಸನ್ನವದನಾ ರಣರಂಗ ಭೀಮಾ ಭಕುತ ಜನ ಮೋದನಾ ಅಣು ಸ್ಥೂಲದಲಿ ಗಮನ 6 ಶ್ವೇತವಾಹನನ ಸಮರದಿ ಕಾಯಿದಾ ಅಖಿಳ ಜೀವ ಭೇದಾ ದರ ಪರಮ ಸುಮೋದಾ ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
--------------
ಜಗನ್ನಾಥದಾಸರು
ಶತ್ರುಗಳ ಬೇಗ ಜಯಿಸು ಪ. ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ ನಿನ್ನ ತೋರೆಂದು ಹಾಟಕ ಬಂದ ದೈತ್ಯನ ದೇಹದಿಂದ ದೀನ ಬಂಧು ಗೋವಿಂದ 1 ಶತ್ರುಸಂಚಯ ಪಚನ ವಿಭಾವನ ದಾನವಕೂಟ ಮಥನ ಲೋಕಪಾವನ ದಯಕರ ಪಕ್ಷಿಗಮನ ಗೆಲ್ವ ಶಕ್ತಿಕೊಡುವರೆ ಬಲ್ಲನ 2 ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ ಲಾಲಿಪರಿಲ್ಲ ಆದರು ಭಯವಿಲ್ಲ ಸೂತ ರಕ್ಷಿಸು ಜಗನ್ನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶಯನ ಸಮಯಕಂ||ಸಂದಣಿ ಹರೆಯದೆ ಭಕ್ತರವೃಂದವು ಕೈವಾರಿಸುತ್ತ ಬರಲೆಡಬಲದೊಳ್‍ಇಂದಿರೆ ಧರಣಿಯು ಸಹಿತಾಮಂದಸ್ಮಿತಮುಖನು ನೋಡುತೈತಹನೊಲವಿಂದೇವ ಶಯನಕೆ ಬರುವ ಸಮಯ ಬಳಿಕೀಗದೇವತೆಗಳೆಲ್ಲರನು ಕಳುಹಿ ನಿಜ ಮಂದಿರಕೆ ಪಶ್ರೀದೇವಿ ಭೂದೇವಿಯರು ತಮ್ಮ ಕರಗಳಲಿಆದಿಪುರುಷನ ಕರಗಳನು ಪಿಡಿದು ಮುದದಿಮಾಧವನ ಮುಖಪದ್ಮವನು ನೋಡಿ ಹರುಷದಲಿವೇದವೇದ್ಯನ ಪೀಠದಿಂದಿಳಿಸಿ ತರುತಿಹರು 1ಸನಕಾದಿ ಭಾಗವತ ಮೂರ್ತಿ ತಾನಿದಿರಿಟ್ಟು ಮತ್ತೀಗಮನದೊಳಗೆ ನೆಲಸುವಂದದಿ ಮುಂದೆ ನಿಂದಿಹನು 2ತನ್ನಿಂದ ನಿರ್ಮಿಸಿದ ಫಲಪತ್ರಗಳಮನ್ನಿಸುತ ಭಕ್ತಿಯಲಿ ಭಕ್ತರಿತ್ತುದನುಉನ್ನತದ ಪದವಿಯನು ಬಳಿಕಿತ್ತು ಬರುತಿಹನುಪನ್ನಗಾರಿಧ್ವಜನು ತಿರುಪತಿಯ ವೆಂಕಟನು 3ಓಂ ವೇಣುನಾದ ವಿಶಾರದಾಯ ನಮಃ
--------------
ತಿಮ್ಮಪ್ಪದಾಸರು
ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಧ್ರುವ ನಕ್ರ ಗಜೇಂದ್ರಗೆ ವಕ್ರಾಗಿ ತ್ರಿ ವಿಕ್ರಮನೆಂದಂದು ಮೊರೆ ಇಡಲು ಚಕ್ರದಿಂದಲಿ ನೀ ವಕ್ರನೆ ಹರಿಸಿ ಅಕ್ರದಲೊದಗಿ ಕಾಯ್ದವ ನೀನಹುದೊ 1 ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ ಭರದಿಂದ ಸ್ಥಂಭದಲುದ್ಭವಿಸಿ ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ ಕರುಣಿಸಿ ಭಕ್ತ ಗೊಲಿದವ ನೀನಹುದೊ 2 ಸೆರಗಪಿಡಿದು ಸೀರೆ ಸೆಳೆವ ಸಮಯದಲಿ ಹರಿಯೆಂದು ದ್ರೌಪದಿ ಮೊರೆ ಇಡಲು ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ ಧರೆಯೊಳು ಲಜ್ಜೆಗಾಯ್ದವ ನೀನಹುದೊ 3 ಮಂಡಿಸಿರಲು ಕೌರವ ಅರಗಿನ ಮನೆ ಪಾಂಡವರದರೊಳು ಸಿಲ್ಕಿರಲು ಕಂಡು ನೀ ಅದರೊಳು ವಿವರವ ತೋರಿ ಪೊರವಂಡಿಸಿದ ಪ್ರಚಂಡ ನೀನಹುದೊ 4 ಎಸೇಸು ಭಕುತರ ಅವರಸಕ್ಕೊದಗುತ ಲೇಸಾಗಿ ಕಾಯ್ದವ ನೀನಹುದೊ ದಾಸ ಮಹಿಪತಿ ಮನದವಸರಕ್ಕೊದಗುತ ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣಜನಮಂದಾರ ಮುರದಾನವವಿದಾರ ಕರವಿಡಿದು ಕಾಪಿಡೈ ಕಮಲನಾಭ ಧರೆಯೊಳಾರಿರ್ಪರೈ ಪರಮಸತ್ಯಾತ್ಮರೀ ಪರಿಯ ನೋಡಲು ನಿನಗೆ ಸರಿಯನರಿಯೆ ಮೂರಡಿಯ ನೆವದಿ ನೀನಾರಯ್ದು ಭೂಮಿಯಂ ಧಾರಾವಿಧಿಯಿನಿತ್ತ ದೈತ್ಯವರನ ಶಿರಮೆಟ್ಟಿ ಪಾತಾಳ ಕುಹರದೊಳ್ ಸೆರೆವಿಡಿದು ಪರಮ ಜಾಗರದಿಂದ ಕಾಪುಗುಡುವೈ ಕರಿರಾಜವರದ ಲಕ್ಷ್ಮೀವಿನೋದ ಕರುಣಾಳು ನೀನೆಂದು ತಿಳಿದೆ ಮನದೆ ಭರದಿಂದ ಮೈದೋರು ಮುದುವ ಬೀರು ವರಶೇಷ ಗಿರಿನಿಲಯ ಸುಗುಣವಲಯ
--------------
ನಂಜನಗೂಡು ತಿರುಮಲಾಂಬಾ
ಶರಣಜನರ ಪಾಲ ಹರಿ ದಯಾಸಿಂಧುವೆ ವೆಂಕಟೇಶ ಮರೆಯದೆ ಸಲಹೆನ್ನ ದೀನಜನಾಪ್ತನ ವೆಂಕಟೇಶ ಪ ಕರಿ ಧ್ರುವ ಪ್ರಹ್ಲಾದ ಪಾಂಚಾಲಿ ಪಾಲನೆ ವೆಂಕಟೇಶ ದುರುಳರಕ್ಕಸಹರ ಹರಸುರನಮಿತನೆ ವೆಂಕಟೇಶ ಪರಮಪಾವನ ಸಿರಿಯರ ಸಖಜೀವನೆ ವೆಂಕಟೇಶ ದುರುಳಮಾತ ನೀನಳಿದು ಗೋವಳರ್ಪೊರೆದನೆ ವೆಂಕಟೇಶ 1 ವಸುದೇವ ದೇವಕಿ ಬಸಿರೊಳು ಬಂದನೆ ವೆಂಕಟೇಶ ಕುಶಲದಿ ವಸುಧೆಲಮಮಹಿಮೆ ತೋರ್ದನೆ ವೆಂಕಟೇಶ ಅಸುರ ಕಂಸನ ಕುಟ್ಟಿ ಗೋಕುಲರಿದನೆ ವೆಂಕಟೇಶ ಶಶಿಮುಖಿ ಗೋಪಿಯರಾನಂದಲೀಲನೆ ವೆಂಕಟೇಶ 2 ಮಂದರಧರ ಗೋವಿಂದ ಮುಕುಂದನೆ ವೆಂಕಟೇಶ ಸಿಂಧುಶಯನ ಆನಂದನ ಕಂದನೆ ವೆಂಕಟೇಶ ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ ಸುಂದರಗಿರಿಯ ಭೂವೈಕುಂಠವೆನಿಸಿದನೆ ವೆಂಕಟೇಶ 3 ಬಣಗರಸೊಕ್ಕನು ಕ್ಷಣಕ್ಷಣಕೆ ಮುರಿದನೆ ವೆಂಕಟೇಶ ಮನಮುಟ್ಟಿ ಬೇಡ್ವರ ಮನದಿಷ್ಟವಿತ್ತನೆ ವೆಂಕಟೇಶ ಎಣಿಕೆಗೆ ಮೀರಿದ ದ್ರವ್ಯ ಕೂಡಿಟ್ಟನೆ ವೆಂಕಟೇಶ ಘನಘನಮಹಿಮೆಯ ಭುವನದಿ ತೋರ್ದನೆ ವೆಂಕಟೇಶ 4 ನಂಬಿದೆ ನಿನ್ನ ಪಾದಾಂಬುಜಗಳನ್ನು ವೆಂಕಟೇಶ ಬೆಂಬಲವಿರ್ದು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ ನಂಬಿದ ದಾಸರ ಭವಾಂಬುಧಿ ಗೆಲಿಪನೆ ವೆಂಕಟೇಶ ಅಂಬುಜಮುಖಿ ಸೀತಾಪತಿ ಶ್ರೀರಾಮನೆ ವೆಂಕಟೇಶ 5
--------------
ರಾಮದಾಸರು
ಶರಣರೆಳಕಂದಿ ನೀನ್ಯಾಕೆ ಕರುಣಿಸಲೊಲ್ಲಿ | ದುರಿತ ಭಯ ಪರಿಹರಿಸಿ ಸಲಹೆನ್ನ ತಂದೆ ಪ ಬಂದರ ವಿಭೀಷಣಗ ಅಭಯಕರವಿತ್ತೇ | ಬಂಧನಕ್ಕೋಳಗಾದ ಗಜರಾಜನನು ನೆಗಹಿ | ಛಂದದಭಿಮಾನುಳಿಹಿ ದ್ರೌಪದಿಯ ಕಾಯ್ದೆ 1 ಕಲುಷವಾರಿಸಿ ಮುನಿ ಸತಿಯ ನೀನುದ್ದರಿಸಿ | ಒಲಿದು ಧ್ರುವಗಾನಂದ ಪದವಿತ್ತೆ ಧರಿಲಿ | ಸಿಲುಕಿರಲು ಲಾಕ್ಷಗೃಹದಿ ಪಾಂಡವರನುಳುಹಿ | ಲಲನೆ ಗರ್ಭದಿ ಪರೀಕ್ಷಿತನ ಕಾಯ್ದೆ ಸ್ವಾಮಿ 2 ಅವರ ದಾಸಾನುದಾಸರ ಭಾಗ್ಯವೆಮಗಿಲ್ಲಾ | ತವನಾಮಧಾರಕೆನಿಸಿದ ಬಿರುದಿಗಿಂದು | ಕುವಲಯ ಶ್ಯಾಮ ಗುರು ಮಹಿಪತಿ ಸುತ ಪ್ರಭುವೆ | ಯಮನ ಬಾಧೆಯ ಬಿಡಸೋ ಬ್ಯಾಗೊದಿಗಿ ಬಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣಾಗ್ರಣಿ ರಾಮ ಚರಣಾಂಬುಜ ಬಿಡೆ ನಳಿನ ಷಟ್ ಚರಣ ಬಿಡ ಬಲ್ಲದೆ ಪ ಹನುಮನ ಭಜನೆಂಬ ಘನವಾರಿ ಪೂರಿತ ಮನ ಸರೋವರ ಅಯನವಾಗಿಪ್ಪಾ ಜನಕಸುತೆ ಹಂಸಿ ಮನಸಾಪ ಹಾರಿ ದಿನಕರನ್ವಯದಿಂದ ವಿನುತವಾಗಿಪ್ಪ 1 ಅಮರರೋತ್ತಮರೆಂಬ ಭ್ರಮರರಾ ರವಗಳ ಸಮಯೋಚಿತ ಸಾಮಭಿ ಸೇವಿತ ವಿಮಲಾತಮದಿಂದ ಸಾಂದ್ರ ಶಮಲಾತಿ ದೂರ ಪಾದ 2 ಶಿಲೆಯ ಬಾಲೆಯ ಮಾಡಿ ಮಲವಳಿದು ಮುನಿ ಕುಲವಗೆಡಿಸಿ ಸತ್ಕುಲನೆನಿಸಿದೆ ಜಲಧಿಯೊಳಗೆ ಸೇತು ನಿಲಿಸಿ ಸಜ್ಜನರಿಗೆ ನೆಲೆ ವಾಸುದೇವವಿಠಲದೇವ ಪಾದಪದುಮ3
--------------
ವ್ಯಾಸತತ್ವಜ್ಞದಾಸರು
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಕೃಷ್ಣವೇಣಿ ಶರಣು ಪುಣ್ಯಾಭರಣಿ ಶರಣು ಇಹಪರದಾಯಿನೀ ಪ ಸರ್ವವ್ಯಾಪಕನಿರಂಜನನೆನಿಪ ಶ್ರೀವಿಷ್ಣು ಉರ್ವಿಯೊಳು ದ್ರವರೂಪದೀ ಹರ್ವಿತಿಹಸಂದೇಹವಿಲ್ಲದಕೆ ಭಕುತಿಯಲಿ ಅರ್ವವನೆ ಗತಿಯ ಪಡದಾ ಮುದದಿ 1 ಅಚ್ಯುತನು ಕೃಷ್ಣನದಿ ಹರಿವುತಿಹನೆಂದು ಮೆಚ್ಚಿವೇಣಿಯ ನಾಮದಿ ನಿಚ್ಚ ಸತ್ಸಂಗವೆಂದರಿತು ಕೂಡಿದ ಶಿವನು ಸಚ್ಚರಿತನಾಮಮಹಿಮಾನೇಮಾ 2 ನಿನ್ನ ಪೂರೆಲುದಿತ ಪವನದಿ ದುರಿತವೋಡಿದವು ಇನ್ನು ಮಿಂದವನ ಗತಿಯಾ ಬಣ್ಣಿಸುವ ನಾವನೆಲೆ ಜನನೀತಾರಿಸುಯನ್ನ ಮನ್ನಿಸು ಗುರುವಿನಾಸುತನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಪ ವರೇಣ್ಯ | ಭಂಗ | ಹರಿಸಿದ ಶಿರಿ ರಂಗ | ವಿಹಂಗ | ತುರಗ ತುರಗ ವದನ | ಸದನ ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1 ಪಾದದಲಿ ಪೆಣ್ಣಾ | ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ | ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ | ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು | ಯಾದುದೆ ಇತ್ತ ನೋಡು 2 ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ | ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ | ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ | ಜಾರ ಚೋರ | ಅಳಿದೆ ಮುಪ್ಪುರು ಶೂರಾ | ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
--------------
ವಿಜಯದಾಸ
ಶರಣು ಗುರು ಬ್ರಹ್ಮಣ್ಯ | ಶರಣು ಶಿರಿ ಸುರಮಾನ್ಯಪರಿಹರಿಸು ಭವತಾಪ | ಬಿನ್ನವಿಪೆ ಮುನಿಪ ಪ ಪುರುಷೋತ್ಮ ಕರಜಾತ | ಕಣ್ವತಟದಲಿ ಖ್ಯಾತನರಹರಿಯ ಪದಕಮಲ | ಭಜಕಶೀಲಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪಪರಿಹರಿಸೊ ಮುನಿಮೌಳಿ | ನಾನು ಪದಧೂಳಿ 1 ಯೋನಿ ಅನೇಕದಲಿ | ಬಂದಿರುವೆ ನಾಬಳಲಿಮಾನ ನಿಧಿ ನೀಯನ್ನ | ಕಾಯೊ ದಯ ಪೂರ್ಣ |ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ 2 ವಿಕಳ ಮತಿಯನು ಹರಿಸು | ಅಕಳಂಕನೆಂದೆನಿಸುಸುಖತೀರ್ಥ ಮತ ಸುಧೆಯ | ಉಣುವ ಪರಿಯ |ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ 3 ಸುಕೃತ ಒಂದಿರಲಿ | ನಿನ್ನ ದಯವಿರಲಿ 4 ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವಸುಷ್ಠು ಹೃದ್ಗುಹದಲ್ಲಿ | ಕಾಣಿಪುದು ಅಲ್ಲಿ 5
--------------
ಗುರುಗೋವಿಂದವಿಠಲರು
ಶರಣು ದೇವರ ದೇವ ಶರಣು ಸುರವರ ಮಾನ್ಯ ಶರಣು ಶತಕೋಟಿ ಲಾವಣ್ಯ | ಲಾವಣ್ಯ ಮೂರುತಿಯೆ ಶರಣೆಂಬೆ ಸ್ವಾಮಿ ಕರುಣೀಸೊ 1 ಆದಿನಾರಾಯಣನು ಭೂದೇವಿ ಮೊರೆ ಕೇಳಿ ಯಾದವರ ಕುಲದಲ್ಲಿ ಜನಿಸೀದ | ಜನಿಸೀದ ಕೃಷ್ಣ ಪಾದಕ್ಕೆ ಶರಣೆಂಬೆ ದಯವಾಗೊ 2 ನಿನ್ನ ವಿಸ್ಮøತಿ ದೋಷ ಜನ್ಮ ಜನ್ಮಕ್ಕೆ ಕೊಡದಿರು ಎನ್ನ ಕುಲ ಬಂಧು ಎಂದೆಂದು |ಎಂದೆಂದು ನಿನಗಾನು ಬಿನ್ನೈಪೆ ಬಿಡದೆ ಸಲಹಯ್ಯ 3 ವಸುದೇವನಂದನನ ಹಸುಗೂಸು ಎನಬೇಡಿ ಶಿಶುವಾಗಿ ಕೊಂದ ಶಕಟನ್ನ | ಶಕಟನ್ನ ವತ್ಸಾಸುರನ ಅಸುವಳಿದು ಪೊರೆದ ಜಗವನ್ನ 4 ವಾತರೂಪಿಲಿ ಬಂದ ಆ ತೃಣಾವರ್ತನ್ನ ಮಡುಹಿ ಮೊಲೆಯುಣಿಸಿದಾ ಪೂತನಿಯ ಕೊಂದ ಪುರುಷೇಶ 5 ನಿನ್ನ ಸ್ಮøತಿಗಿಂತಧಿಕ ಪುಣ್ಯ ಕರ್ಮಗಳಿಲ್ಲ ನಿನ್ನ ವಿಸ್ಮøತಿಗಿಂತ | ಅಧಿಕವಾದ ಮಹಪಾಪಗಳು ಇನ್ನಿಲ್ಲ ಲೋಕತ್ರಯದೊಳು 6 ಅಂಬುಜಾಂಬಕಿಗೊಲಿದ ಜಂಭಾರಿಪುರದಿಂದ ಕೆಂಬಣ್ಣದ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ ರಾಂಬುಜವೆ ನಮ್ಮ ಸಲಹಲಿ 7 ದೇವಕೀಸುತನಾಗಿ ಗೋವುಗಳ ಕಾದದೆ ನಲಿವೋನೆ ಮೂರ್ಲೋಕ ಓವ ದೇವೇಂದ್ರ ತುತಿಪೋನೆ 8 ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ ಜಗದಿ ಜೀವರನ ಸೃಜಿಸುವಿ | ಸೃಜಿಸಿ ಜೀವರೊಳಿದ್ದು ಜಗದನ್ಯನೆಂದು ಕರೆಸುವಿ 9 ಕರಣನೀಯಾಮಕನೆ ಕರುಣಾಳು ನೀನೆಂದು ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ ಮರುಳು ಮಾಡುವರೆ ನೀಯೆನ್ನ 10 ಕುವಲಯಾಪೀಡನನು ಲವಮಾತ್ರದಿ ಕೊಂದು ಶಿವನ ಚಾಪವನು ಮುರಿದಿಟ್ಟಿ | ಮುರಿದಿಟ್ಟಿ ಮುಷ್ಟಿಕನ ಬವರದಲಿ ಕೆಡಹಿ ಬಲಿಗೈದೆ 11 ಗಂಧವಿತ್ತಬಲೆಯೊಳ ಕುಂದನೆಣಿಸದೆ ಪರಮ ಸುಂದರಿಯ ಮಾಡಿ ವಶವಾದಿ | ವಶವಾದಿ ನಮ್ಮ ಗೋ ವಿಂದ ನೀನೆಂಥ ಕರುಣಾಳು 12 ವಂಚಿಸಿದ ಹರಿಯೆಂದು ಪರಚಿಂತೆಯಲಿ ಕಂಸ ಮಂಚದ ಮ್ಯಾಲೆ ಕುಳಿತಿದ್ದ | ಕುಳಿತಿದ್ದ ಮದಕರಿಗೆ ಪಂಚಾಸ್ಯನಂತೆ ಎರಗೀದೆ 13 ದುರ್ಧರ್ಷ ಕಂಸನ್ನ ಮಧ್ಯರಂಗದಿ ಕೆಡಹಿ ಜನನೋಡೆ ದುರ್ಮತಿಯ ಮರ್ದಿಸಿದ ಕೃಷ್ಣ ಸಲಹೆಮ್ಮ 14
--------------
ಜಗನ್ನಾಥದಾಸರು
ಶರಣು ಶರಣು ಕೃಷ್ಣಕೃಷ್ಣ ಶರಣು ಶರಣು ರಾಮ ರಾಮ ಶರಣು ಶರಣು ಶ್ರೀನಿವಾಸ ಶರಣು ಶರಣು ಶ್ರೀ ಹರೇ ಪ ಗುರುಸು ಭಕ್ತಿ ನೀಡಿ ಎನಗೆ ವರಿಸಿ ಶುದ್ಧ ದಾಸನೆಂದು ಕರುಣ ತೋರೊ ಕೇಶವ ಅನಂತ ರೂಪಿಯೇ ಅ.ಪ ಲೇಸಿನಿಂದ ಬ್ರಹ್ಮಶಿವರ ಪ್ರೇರಿಸುತ್ತ ಜಗವ ಪೊರೆವೆ ದಾಸನೆಂದು ಮೊರೆಯ ಹೊಕ್ಕೆ ಕಾಯೊ ಕೇಶವಾ 1 ವಾರಿನಿಲಯ ದೋಷದೂರ ಪೂರ್ಣಕಾಮ ಮುಕ್ತರೀಶ ಶರಧಿ ನಾರಾಯಣ 2 ವೇದಮಾತೆ ಶೃತಿ ಸುಗೀತೆ ವೇದಮಾನಿ ಲಕ್ಷಿರಮಣ ಶೂನ್ಯ ಮಾಧವ 3 ವಿನುತ ಸಾರ ವೇದಬಲ್ಲ ಸಾಧು ಪ್ರಾಪ್ಯ ವೇದಪಾಲ ಶರಣು ಗೋವಿಂದ 4 ವಿಶ್ವಜನಕ ವಿಶ್ವಪಾಲ ವಿಶ್ವವ್ಯಾಪ್ತ ವಿಶ್ವಭೋಕ್ತ ವಿಶ್ವಜೂತಿ ವಿಶ್ವಬಲನೆ ಶರಣು ವಿಷ್ಣುವೆ 5 ಆದಿ ದೈತ್ಯರನ್ನು ಕೊಂದು ಮೇದಿನೀಯ ಪೊರೆದ ದೇವ ಬಾಧೆ ಹರಿಸು ಮೂರು ವಿಧಧ ಮಧುಸೂದನ 6 ಲೋಕತ್ರಯವ ನಳೆದ ನೇಕ ಏಕನಿನಗೆ ಸಾಟಿಯಾರು ಜೋಕೆಯಿಂದ ಸಾಕಬೇಕು ತ್ರಿ-ವಿಕ್ರಮ 7 ಸೋಮ ಹಳಿದ ಕಾಂತಿಧಾಮ ನೇಮದಿಂದ ಬಲಿಯ ಕಾಯ್ದೆ ಹೇಮ ಜ್ಯೋತಿ ಪೂರ್ಣ ಸುಖಿಯೆ ಶರಣು ವಾಮನ 8 ಬೊಮ್ಮಶಿವರ ಕುಣಿಸಿ ಆಳ್ವ ಅಮ್ಮ ಪ್ರಕೃತಿಯನ್ನು ಧರಿಸಿ ಸುಮ್ಮಗೇನೆ ಜಗವ ಕಾವೆ ಶರಣು ಶ್ರೀಧರ 9 ಕರಣ ವ್ರಾತದಲ್ಲಿ ನಿಂತು ಕರಣಕಾರ್ಯಗಳನು ನಡಿಸಿ ಕರಣ ಪತಿಗಳನ್ನು ಪೊರೆವೆ ಹೃಷಿಕೇಶನೆ 10 ಉದರದಲ್ಲಿ ಜಗವ ಪೊತ್ತು ಸದರದಿಂದ ಒಪ್ಪಿಕೊಂಡೆ ಉದರದಲ್ಲಿ ರಜ್ಜುಭಂಧ ದಾಮೋದರ 11 ಚೊಕ್ಕವಿಧಿಯ ಹಾಗೆ ಜಗವ ಕುಕ್ಷಿಯಲ್ಲಿ ಪಡೆದ ದೇವ ಶರಧಿ ಶಯನ ಪದ್ಮನಾಭನೆ12 ಭಕ್ತಜನರ ಪಾಪಸೆಳೆವ ಶಕ್ತ ಪ್ರಲಯ ಸ್ತುತಿಗೈವ ದೇವ ಮುಕ್ತಿದಾತ ವಿಶ್ವಕುಕ್ಷಿ ವಾಸುದೇವನೆ 14 ಮೇರೆಯಿರದ ಕಾಂತಿಮಯನೆ ಸೇರಿ ಭಾಸ ಕೊಡುವೆ ರವಿಗೆ ಬೀರಿ ಜ್ಞಾನ ಭ್ರಾಂತಿ ಹರಿಸು ಪ್ರ-ದುಮ್ನನೆ 15 ನೀ ನಿರೋಧ ಕಾಣೆ ಎಂದು ನೀನೆ ಸಿಗುವೆ ಭಕ್ತಿ ಬಲೆಗೆ ಕೃಪಣ ಕ್ಷಮಿಸು ಅನಿ-ರುಧ್ಧನೆ 16 ಕ್ಷರರು ಜೀವ ರಾಶಿ ಎಲ್ಲಕ್ಷರ ವಿರುಧ್ಧ ಲಕ್ಷ್ಮಿತಾನು ವರನು ಭಿನ್ನ ಉಭಯರಿಂದ ಪುರುಷೋತ್ತಮ 17 ಕರಣಗಳಿಗೆ ಸಿಗುವನಲ್ಲ ಕರಣಗಳಲಿ ಭೇದವಿಲ್ಲ ಕರಣಜಯವ ಸಿಧ್ಧಿಸೆನಗೆ ಅ-ಧೋಕ್ಷಜ18 ದೋಶರಹಿತ ಮುಕ್ತರೀಶ ನಾಶರಹಿತ ಲಕ್ಷ್ಮಿರಮಣ ಈಶಬಿಂಬ ಜೀವ ಹೃಸ್ಥ ನಾರಸಿಂಹನೆ 19 ಜೀವರೊಡನೆ ವಿತತ(ಇರುವೆ) ಅಚ್ಯುತ 20 ಇಂದ್ರನನುಜ-ನಿಜಮಹೇಂದ್ರ ತಂದೆ ಸುಖವ-ದಿವಿಜಣಕೆ ವಂದ್ಯ ವಂದ್ಯ-ವಂದಿಸುವೆನು ಶ್ರೀ- ಉಪೇಂದ್ರನೆ 21 ಸೃಷ್ಠಿಗೈದು ಜಗವ ಲಯಿಪೆ ದುಷ್ಟದಮನ ಶಿಷ್ಟವರದ ಹುಟ್ಟು ಸಾವು ಕಟ್ಟು ಬಿಡಿಸೊ ಶ್ರೀ ಜನಾರ್ದನ 22 ಯಜ್ಞಭೋಕ್ತ ಮನುವ ಪೊರೆದೆ ಭಗ್ನಗೈಸಿ ದೋಷವೆನ್ನ ಜ್ಞಾನ ನೀಡೋ ಸುಜ್ಞನೆನಿಸು ವಾಜಿವದನ ಶರಣು ಶ್ರೀಹರೇ 23 ವಿಭವ ಮೂರ್ತಿ ಭಕ್ತಮನವ ಪಾಪ ಸೆಳಿವೆ ರಿಕ್ತನಾನು ಸರ್ವವಿಧಧಿ ಕಾಯೊ ಶ್ರೀಕೃಷ್ಣ 24 ಸರ್ವ ಶಬ್ದವಾಚ್ಯ “ಶ್ರೀಕೃಷ್ಣವಿಠಲ”ನನ್ನು ನೆನೆಯೆ ಸರ್ವಸುಖಗಳಿತ್ತುಕಾವ ಜಿಷ್ಣು ತೆರದಿ ಸತ್ಯಹೋ 25
--------------
ಕೃಷ್ಣವಿಠಲದಾಸರು