ಒಟ್ಟು 8186 ಕಡೆಗಳಲ್ಲಿ , 130 ದಾಸರು , 4775 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಜನವಾಗಲಿ ನಾನು ಭುಜಿಸುವುದು ಎಲ್ಲ ಪ ಅಜಪಿತನೆ ಅದರ ಅನುಸಂಧಾನವನು ಅರಿಯೆ ಅ.ಪ ದೇಹವೆಂಬುದೆ ಯಜ್ಞಶಾಲೆಯಾಗಿ ಮಹಯಜ್ಞಕುಂಡವು ಎನ್ನ ವದನವಾಗಿ ಆವಹನೀಯಾಗ್ನಿಯು ಮುಖದಲ್ಲಿ ಹೃದಯದೊಳು ಗಾರ್ಹಸ್ಪತೀ ದಕ್ಷಿಣಾಗ್ನಿಯು ಸುನಾಭಿಯಲ್ಲಿ 1 ಅರಿ ಪಂಚಾಗ್ನಿಯೊಳು ಆಕ್ಷಣದಿ ಪ್ರಾಣಾದಿ ಪಂಚರೂಪಗಳು ಹೋತಾಉದ್ಗಾತಾದಿ ಋತ್ವಿಕ್ಕುಗಳಾಗಿ ನಿಂತಿಹರೆಂದು2 ಆಹುತಿಯ ಕೊಡತಕ್ಕ ಶೃಕಶೃಕ್‍ಶೃವಗಳು ಬಾಹುಗಳು ಇಹಭೋಜ್ಯವಸ್ತುವೆಲ್ಲ ಆಹುತಿಯು ದೇಹಗತ ತತ್ವರು ಪರಮಾತ್ಮ ಬ್ರಾಹ್ಮಣರು ಜೀವ ದೀಕ್ಷಿತನು ಬುದ್ಧಿತತ್ಪತ್ನಿ 3 ಅಹಂಮಮತಾದಿ ಅರಿಷಡ್ವರ್ಗಗಳು ವುಹಯಜ್ಞದ ಯೂಪಸ್ಥಂಭದ ಪಶುಗಳು ಅಹರಹ ಬಹ ನೀರಡಿಕೆಯು ಕುಡಿವನೀರೆಲ್ಲವು ಯಜನಕಾರ್ಯದ ಮಧ್ಯ ಪರಿಷಂಚಾಮಿ4 ಇಷ್ಟಾದರನುಸಂಧಾನವನೆ ಕೊಡುಕಂಡ್ಯ ಶ್ರೇಷ್ಠಮೂರುತಿ ಶ್ರೀ ವೇಂಕಟೇಶ ನಿಷ್ಠೆಯೆನ್ನೊಳಗಿಲ್ಲ ಉರಗಾದ್ರಿವಾಸವಿಠಲ ಹೊಟ್ಟೆಹೊರೆವುದು ನಿನಗೆ ತುಷ್ಟವಾಗಲಿ ದೇವ 5
--------------
ಉರಗಾದ್ರಿವಾಸವಿಠಲದಾಸರು
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ ಅಜ್ಞ್ಯಮನೋರಥನು ನಾನು | ಕಿಂ ಚಿಜ್ಞನೆಂದಿಗು ನಿನ್ನ ಪೊಂದಿದೆನು ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1 ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ ಬೊಧಾಮೃತ ಮಯದಿವಿಜ ಪಕ್ಷಾ ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ- ರಾದರಣೆ ಮಾಡದೆ ನೀ ದಯದಿಂದ ಸಲಹೊ 2 ಮುಕುತಿದಾಯಕ ದೇವಾಧಿದೇವಾ ನಿಜ ಭಕುತ ಜನರಿಗೆ ನೀನೇ ಸಂಜೀವಾ | ಆ ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ ಸಕಲಾಧಾರನೆ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆ ಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರ ಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ 2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ 3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ 4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ 5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ 6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯತಿ ವರ್ಣನೆ ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ ಕಂಡು ಕೃತಾರ್ಥನಾದೆಪ. ಕಂಡು ಕೃತಾರ್ಥನಾದೆ ಭೂ- ಮಂಡಲದಿ ಪೆಸರ್ಗೊಂಡು ಮೆರೆದಿಹ ಪುಂಡರೀಕದಳಾಕ್ಷ ಸತತಾ- ಖಂಡಸುಖ ಮಾರ್ತಾಂಡತೇಜರಅ.ಪ. ವಾರಿರುಹಭವಾಂಡದ ಭೂಮಧ್ಯ ವಿ- ಸ್ತಾರಜಂಬೂದ್ವೀಪದ ನವಖಂಡದೊಳ್ ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ ತೋರ್ಪ ವಿಂಧ್ಯಾಚಲದ ಮಧ್ಯ ಭಾ- ಗೀರಥಿಯ ಪಶ್ಚಿಮ ಭೂಭಾಗದ ತೀರ ಕಾಶೀಮಠಸಂಸ್ಥಾನ ವಿ- ಚಾರಶಾಸ್ತ್ರವಿಶಾರದರ ಪದ 1 ವರ ರಾಜೇಂದ್ರ ಯತೀಂದ್ರರ ಕರಸಂಜಾ- ತರ ಗುರುಸುರೇಂದ್ರರ ಕರಕಮಲಮಧ್ಯದಿ ಧರಿಸಿರ್ದ ವಿಭುದೇಂದ್ರರ ಸರೋರುಹ ಕರಸಂಜಾತ ಮಹಾನುಭಾವರ ಕರುಣನಿಧಿ ಕಮನೀಯ ಸದ್ಗುಣ ಭರಿತ ಶ್ರೀಭುವನೇಂದ್ರರಂಘ್ರಿಯ2 ಸುಂದರಮುಖಶೋಭೆಯ ಪೂರ್ಣಮಿ ಶುಭ ಚಂದ್ರಸನ್ನಿಭಕಾಂತಿಯ ಶೋಭಿಪ ನವ ಕುಂದರದನ್ತಪಂಕ್ತಿಯ ತಿಲಕದ ಛಾಯ ಮಂದಹಾಸಾನಂದ ಪುರಜನ ವೃಂದಪೂಜಿತಪಾದಪದ್ಮ ದ್ವಂದ್ವ ಸತತಾನಂದ ಸದ್ಗುಣ ಇಂದ್ರ ಶ್ರೀಭುವನೇಂದ್ರರಂಘ್ರಿಯ3 ಶೃಂಗಾರರಸತೇಜರ ಯಮನಿಯಮಾದ್ಯ ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ ಕಂಗಳಿಗಗೋಚರ ಸತ್ಯಾವತಾರ ಮಂಗಳಾತ್ಮಕಸಂಗ ಸುಮಮನಸ ರಂಗ ಸಾಧ್ಯವೇದಾಂಕ ಕರುಣಾ ಪಾಂಗ ವಿಬುಧೋತ್ತುಂಗ ಅಂಗಜ ಭಂಗ ಶ್ರೀಯತಿಪುಂಗವರ ಪದ4 ಎಷ್ಟೆಂದು ನಾ ಪೇಳಲಿ ಸದ್ಗುರುವರ- ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ ಶ್ರೇಷ್ಠ ಗೌಡಸಾರಸ್ವತ ಸ- ಮಷ್ಟಿ ಕೊಂಕಣದೇಶವಿಪ್ರ ವಿ- ಶಿಷ್ಟ ಒಡೆತನ ಪಟ್ಟವಾಳುವ ಶ್ರೇಷ್ಠಯತಿವರರಂಘ್ರಿಕಮಲವ5 ಆಶೆಯೊಂದುಂಟೆನಗೆ ಕಾವ್ಯವ ಓದ್ಯ- ಭ್ಯಾಸಗೈಯುವದು ಮಿಗೆ ಸನ್ನಿಧಾನದಿ ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ ಏಸು ಧನ್ಯನು ನಾನು ಕರುಣಾ ನಿಗಮ ವಿ- ಲಾಸರಂಘ್ರಿಗೆ ದಾಸದಾಸರ ದಾಸ ನಾನು ದಯಾಶರಧಿಯರ6 ಸತತ ಸದ್ಯತಿಧರ್ಮದ ಪರಿಪಾಲಿಸಿ ಕ್ಷಿತಿಗತಿ ಪ್ರತಿವಾಸವನಂತೆಸೆವುತಾ ಮಿತ ಭಾಗ್ಯಸಂಪದವ ವಿಖ್ಯಾತವ ರತಿಪತಿಯ ಪಿತ ಕ್ರುತುಪಾಲಿತ ಸೂ- ನೃತಭಾಷಿತ ಲಕ್ಷ್ಮೀನಾರಾಯಣ ಸತತ ವೇದವ್ಯಾಸ ಶ್ರೀರಘು ಪತೀಚರಣಪೂಜಿತರ ಪದವನು7
--------------
ತುಪಾಕಿ ವೆಂಕಟರಮಣಾಚಾರ್ಯ
ಯತಿಗಳ ಸ್ತುತಿ ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ. ಸದ್ಗುರುವೆ ನಿನ್ನ ಪದ್ಮಪಾದಗಳಿಗೆ ಕರ ಮಣಿ ಅ.ಪ. ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ ಸಿರಿವರನಲಿ ಜನಿಸಿ ವಾಯುವೆಂದೆನಿಸಿ ಸುರರೆಲ್ಲ ಮೊರೆಯಿಡೆ ಹರಿಯವತರಿಸಿ ಹರಿಯ ಸೇವೆಗೆ ನೀ ಮಾರುತಿ ಎನಿಸಿ ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು ದುರುಳನ ಪುರ ಸುರಮುಖನಿಗರ್ಪಿಸಿದೆ 1 ಚಂದ್ರವಂಶದಲಿ ಬಂದ್ಯೊ ಬಲಶಾಲಿ ನಂದಕಂದನ ಲೀಲೆ ಅಂದ ಪಾಡುತಲಿ ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ ಅಂದು ಕೌರವರಲಿ ನಿಂದ್ಯೊ ದ್ವೇಷದಲಿ ಇಂದುಮುಖಿಗೆ ಸೌಗಂಧಿಕ ಇತ್ತು ಕುರು ನಂದನ ವಂಶವನಂದು ಛೇದಿಸಿದೆ 2 ದುರುಳರೆಲ್ಲರು ಬಂದು ಕಲಿಯುಗದಿ ನಿಂದು ಹರಿಯು ನರನು ಒಂದು ಅರುಹಲಿಂತೆಂದು ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು ಸಿರಿವರ ಪೊರೆಯೆಂದು ಮೊರೆಯಿಡಲಂದು ಹರಿ ನಿನಗರುಹಲು ಧರೆಯಲ್ಲಿಗೆ ಬಂದು ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3 ಪರಮಾಯಿಗಳ ಮತ ತರಿದು ಕೆಡಹುತ್ತ ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ ತರತಮ್ಯ ಸತ್ಯವೆನುತ ಪಂಚಭೇದೆನುತ ಸಿರಿರಮಣಗೆ ನರಭೃತ್ಯನೆನ್ನುತ್ತ ಪರಿ ಬೋಧಿüಸಿ ದುರುಳರ ಛೇಡಿಸಿ ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4 ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ ಶ್ರೇಷ್ಠನೆ ಗೋಪಾಲಕೃಷ್ಣವಿಠಲ ಇಷ್ಟು ತಿಳಿಸುತ ಅಷ್ಟದಳದಲಿ ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5
--------------
ಅಂಬಾಬಾಯಿ
ಯತಿಗಳು ಟೀಕಾಚಾರ್ಯರು ಜಯರಾಯಾ ಜಯರಾಯಾ ಪ ದಯಕರ ಸಜ್ಜನಭಯಹರ ಗುರುವರ ಅ.ಪ ವಾಸವ ನೀ ವಸುಧೀಶನ ನಿಜ ಕೂಸೆನಿಸೀಪರಿ ದೇಶದಿ ಮೆರೆದೆ 1 ಸತಿಯಳ ತ್ಯಜಿಸಿ ಯತಿರೂಪ ಧರಿಸಿ ಪÀತಿತರ ಶಾಸ್ತ್ರವ ಹತಮಾಡಿದಿ ನೀ 2 ಸುಧಾದಿಗ್ರಂಥವ ಮುದದಲಿ ರಚಿಸಿ ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ3 ಅಲವಬೋಧರ ಮತ ಬಲವತ್ತರಮಾಡಿ ಜಲಜನಾಭನ ಮನ ಒಲಿಸಿದ್ಯೊ ಜೀಯಾ 4 ಪ್ರಮಿತಜನಗಣನಮಿತ ಪದಾಂಬುಜ ಅಮಿತಮಹಿಮ ನಿನ್ನ ನಮಿಸುವೆ ದಿನದಿನ 5 ಯಾತಕೆ ಎನ್ನನು ಈ ತೆರನೋಡುವಿ ದಾತಗುರುಜಗನ್ನಾಥ ವಿಠಲ ಪ್ರೀಯ6
--------------
ಗುರುಜಗನ್ನಾಥದಾಸರು
ಯತಿಗಳು ಶ್ರೀಜಯತೀರ್ಥರು ಕರುಣಿಸೊ ಜಯರಾಯಾ ಗುರುವರ್ಯ ಚರಣವೆ ಗತಿಯಯ್ಯ ಹೇ ಜಿಯಾ ಪ ರಘುನಾಥನ ಪುತ್ರ ಪವಿತ್ರ ರಾಘವನ ಪ್ರೀತಪ್ರಾತ್ರ ಚರಿತ್ರ ಮಘವನಾ ನೀ ನಘದೂರ ಶ್ರೀ ರಘುರಾಮನ ಕಿಂಕರನ ಅಮೋಘ ಸೇವಕನೊ 1 ಕುಕರ್ವಿಣಿಯ ತೀರಾ ಘೋರಕುವಾದಿಗಳ ಕು ಲಕುಠಾರ ಗಂಭೀರ ಸಕಲಶಾಸ್ತ್ರಸತ್ಸಾರ ಟೀಕಕರ ಕುಕವಿಶೃಗಾಲಕುಲಕಾಲಭಯಂಕರ 2 ಎರಗೋಳಾದ್ರಿಯೊಳು ಗುಹೆಯೊಳು ನಿರುತ ಪ್ರವಚನಗಳು ನಿತ್ಯದೊಳು ಮರುತಮತಾಂಬುಧಿಚಂದಿರ ಸುಂದರ ವರಸುಜ್ಞಾನಮಣಿಕಿರಣವ ತೋರಿದೆ 3 ಗುರು ಮಧ್ವಮುನಿ ತತ್ತ್ವಗ್ರಂಥದ ಕ್ಷೀರಶರಧಿಗೆ ಮಂಥಾ ವುನ್ನಂಥಾ ಮರುತನನುಗ್ರಹ ಪ್ರಗ್ರಹದಿಂದಲಿ ವರಮಥನದಿ ಇತ್ತೆ ಅಮೋಘವಸ್ತುಗಳೆಲ್ಲಾ4 ಉತ್ತಮ ಗ್ರಂಥವನಧೀ ಮಥನದಿ ಉತ್ತಮ ವಸ್ತುಗಳನಿತ್ತೆಯೊ ತತ್ತ್ವಪ್ರಕಾಶಿಕಾ ಮಹಾಲಕುಮಿಯು ಚಂದಿರನೇ ಪ್ರಮೇಯದೀಪಿಕಾ ಸುಧೆಯೇ ನ್ಯಾಯಸುಧಾಗ್ರಂಥ ಶ್ರೀ ಕೌಸ್ತುಭದಂತಿಹ ನ್ಯಾಯದೀಪಿಕಾ 5 ದುರುಳ ಮಾಯಾಖಂಡ ನಾಯುಧವೂ ಸರ್ವಜೀಯನೆ ಐರಾವತದಂತೆ ಋ ಗ್ಭಾಷ್ಯಟೀಕಾ ನ್ಯಾಯವಿವರಣವು ಉಚ್ಛೈಶ್ರವಸ್ಸು 6 ಕರ್ಮನಿರ್ಣಯ ಟೀಕಾ ವಜ್ರಾಯುಧ ಆ ಮಹಾಪಾರಿಜಾತ ವಿಖ್ಯಾತಾ ಶ್ರೀಮದ್ವಿಷ್ಣು ತತ್ತ್ವ ನಿರ್ಣಯ ಟೀಕೆಯು ಕಲ್ಪವು ಉಪನಿಷತ್ ಭಾಷ್ಯ ಟೀಕೆಯು 7 ಈಶಾವಾಸ್ಯ ಭಾಷ್ಯ ಟೀಕಾ ಸಂತಾನವೆಂಬೋ ಮಹಾವೃಕ್ಷಾ ಪ್ರ ಬಿಸಜ ಮಂದಾರ ಪ್ರಮಾಣ ಪದ್ಧÀ್ದತಿ ಹರಿಚಂದನಕೆ ಸಮನಾದ ವಾದಾವಳಿ 8 ಪಾಕಶಾಸನಾಂಶಾ ಕರುಣಿಸು ಶ್ರೀಕರಪದಪಾಂಸ ಯತೀಶಾ ನಾರ ಪತಿಯೆ ಶ್ರೀಕಾಗಿನೀ ತೀರದಿ ಏಕಾಂತದಿ ನಿಂದೆ ಲೋಕ ವಂದಿತ ದೇವಾ 9 ಮಂದಭಾಗ್ಯಜನರಾ ಪರಮಾ ನಂದದಿಂದಲಿ ನೋಡಿ ದಯಮಾಡಿ ತಂದೆಯಂದದಿ ಕಾಯ್ದಾನಂದವೀವೆ ನಿತ್ಯಾ10 ಪರಮಪಾತಕಿ ನಾನು ಗುರುವೆ ತವ ಪಾ ದ ರಕ್ಷಕವಚವ ತೊಡಿಸೊ ಉಳಿಸೋ ನಿರುತ ಶರಣರ ಕಾಯ್ವ ಶ್ರೀ ವೆಂಕಟೇಶನ ಪ್ರೀಯಾಉರಗಾದ್ರಿವಾಸವಿಠಲನ ದಾಸಾ 11
--------------
ಉರಗಾದ್ರಿವಾಸವಿಠಲದಾಸರು
ಯತಿಗಳು, ದಾಸರು ಆಸೆಗಾರ ನಾನು ದಾಸಯ್ಯ ನಿನ್ನ ಧ್ಯಾ ನಿಸಿ ಬಂದೆನು ದಾಸಯ್ಯ ಪ ದೋಷದೂರನೆ ಎನ್ನ ಆಸೆಯ ತೀರಿಸಿ ಪೋಷಿಸು ಬೇಗನೆ ದಾಸಯ್ಯ ಅ.ಪ ಬಡತನಗಳು ಎನ್ನ ದಾಸಯ್ಯ ಇನ್ನು ಕಡೆತನಕಳಿಯಲೋ ದಾಸಯ್ಯ ಗಡಕಡಿ ಜಡಭವದೆಡರು ತೊಡರುಗಳು ಕೆಡದಪದವಿ ನೀಡು ದಾಸಯ್ಯ 1 ನುಡಿಯಂತೆ ನಡೆಕೊಡು ದಾಸಯ್ಯೆನ್ನ ಒಡಲ ಜಡರುತೊಳಿ ದಾಸಯ್ಯ ಕಡಿದು ಹಾಕಲು ಎನ್ನ ಪಿಡಿದು ನಿನ್ನಡಿಭಕ್ತಿ ಬಿಡದ ಮನವು ಕೊಡು ದಾಸಯ್ಯ 2 ಸುಂದರ ಶ್ರೀರಾಮ ದಾಸಯ್ಯ ಎನ್ನ ತಂದೆ ತಾಯಿ ನೀನೆ ದಾಸಯ್ಯ ಕುಂದುವ ಜಗದೊಳು ಬಂಧನಪಡಿಸದೆ ಕುಂದದ ಸುಖ ನೀಡು ದಾಸಯ್ಯ 3
--------------
ರಾಮದಾಸರು
ಯತಿರಾಜಾ - ಪಾಲಿಸೊ ಎನ್ನ - ಯತಿರಾಜಾ ಪ ಯತಿರಾಜಾ ಪಾಲಿಸೊ ಎನ್ನ - ಅಹಂಮತಿಯ ಕಳೆದು ಗುರುವರೇಣ್ಯ | ಆಹ ಸತತದಿ ಹರಿ ಧ್ಯಾನ | ರತನನ ಮಾಡಿ ಸದ್ ಗತಿಯ ಸೇರುವಂಥ | ಪಥದಲ್ಲಿರಿಸೊ ರಾಜಅ.ಪ. ವೀಣಾ ವೆಂಕಟ ನಾಮಾಭಿಧ | ಕುಂಭಕೋಣ ಪುರದೊಳು ಮೆರೆದಾ | ಓವಿಜ್ಞಾನಿ ಸುಧೀಂದ್ರರೊಲಿಸಿದಾ | ಬಹುಮಾನವಾಗಿ ಶಾಲು ಪಡೆದಾ | ಆಹಏನು ಇದಾಶ್ಚರ್ಯ | ಮಾನ ಉಳಿವದೆಂತುನಾನೊಂದು ಕಾಣೆ | ನೆನುತಾವಸನ ಮುಂದಿಟ್ಟ 1 ಅಂದಿನಂದಿನ ಪಾಠಕ್ಕೆಲ್ಲ | ಟೀಕೆಛಂದಾಗಿ ಬರೆದಿರುವಲ್ಲ | ನಮ್ಮಹಿಂದಿನ ಸಂಶಯವೆಲ್ಲ | ನೀಗಿಮುಂದೆ ಜರುಗಿತು ಪಾಠವೆಲ್ಲ | ಆಹಎಂದು ನಮ್ಮ ವಸನ | ಕಂದ ನಿನ್ನಯ ಮೇಲೆಹೊಂದಿಸಿ ಮುದದಿಂದ | ಬಂದೆವೆಂದರ ಶಿಷ್ಯ 2 ಗುರುವು ಪಟ್ಟರು ಬಲು ಮೋದಾ | ಸುಧಾಪರಿಮಳಾರ್ಯರೆಂಬ ಬಿರುದಾ | ಪೊಂದಿಇರಲು ಕಾಲಾಂತರದಿಂದಾ | ಪಡೆದೆವರ ಯತ್ಯಾಶ್ರಮವವರಿಂದಾ | ಆಹಮೆರೆಸಿದೆ ರಾಮರ | ವರ ವೈಭವದಿಂದದುರುಳ ಮಾಯ್ಗಳಮತ | ತರಿದಿಟ್ಟೆ ವಾದದಿ 3 ಬೇಗೆಯಿಂದಳುತಿದ್ದ ಶಿಶುವಿಗೆ | ಚೈಲಆಗಸದೊಳು ನೀನು ನಿಲಿಸಿದೆ | ಹಾಂಗೆಮಾರ್ಗದಿ ಪ್ರಸವಿಸದವಳೀಗೆ | ನೀರನುಗಮಿಸುತ ನೀನು ಪೊರೆದೇ | ಆಹನಿಗಮಾಲಯ ವಾಸ | ರಾಘವೇಂದ್ರ ಗುರುವೆಬಗೆ ಬಗೆ ಗ್ರಂಥವ | ಮಿಗಿಲಾಗಿ ರಚಿಸೀದೆ 4 ಪಂಗು ಬಧಿರ ಮೂಕ ಜನರು | ನಿಮ್ಮಹಿಂಗದೆ ಬಂದು ಸೇವಿಪರು | ಬಂದಭಂಗಗಳೆಲ್ಲ ನೀಗುವರು | ಯತಿಪುಂಗನೆ ನಿನಗೆ ಸರಿಯಾರು | ಆಹಗಂಗಾ ಜನಕ ರೂ | ಪರಿಗಳು ನಾಲ್ಕರಿಂಅಂಗಲಾಚಿಪ ಜ | ನಂಗಳ ಪೊರೆಯುವ 5 ಅಘ ಪತಿ ಗೋ | ವಿಂದನ ಮಂದಿರಬಂದು ಸೇರುವುದಕ್ಕೆ | ಅಂದ ಸೋಪಾನವು 6 ವರಹಸುತೆ ತೀರ ವಾಸಾ | ಭಕ್ತಸುರತರುವೆ ನಿನ್ನ ದಾಸಾ | ನಾಗಿಇರಿಸೊ ಭೂ ತಳಾಧೀಶ | ಬೇಡ್ವೆವರ ಒಂದ ನಾನಿನ್ನ ಅನಿಶ | ಆಹಗುರುಗೋವಿಂದ ವಿಠಲನ | ಚರಣಾರವಿಂದವನಿರುತ ಭಜಿಸುವಂಥ ವರಮತಿ ಕೊಟ್ಟನ್ನ7
--------------
ಗುರುಗೋವಿಂದವಿಠಲರು
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು
ಯತಿವರ್ಯ | ಯತಿವರ್ಯ ಪ ಯತಿ ಸುಧೀಂದ್ರಕರ | ಸುತನೆಂದೆನಿಸಿದ ಅ.ಪ. ಪರ | ಮಾರ್ಥವ ಯಾಚಿಪೆ 1 ಪಾದ್ಯ ಹರಿ | ಗುಣ ಸಂಪೂರ್ಣನಗುಣವರ್ಣನ ಸು | ಜ್ಞಾನವ ನೀಯೋ 2 ಪರಿಮಳಾರ್ಯ ತವ | ಚರಣಾರಾಧನೆಕರುಣಿಸಿ ಸುಧೆರಸ | ಎರೆವುದೆನಗೆ ಗುರು 3 ಅನ್ಯನಲ್ಲ ನಾ | ನಿನ್ನವರವನೈಘನ್ನ ಮಹಿಮ ಸಂ | ಪನ್ನ ಪೊರೆಯೊ ಗುರು 4 ಯೋಗಿವರ್ಯ ತವ | ಅಘಹರನಾಮಕೆಮಿಗಿಲಿಲ್ಲವೊ ಗುರು | ಬಾಗಿ ಭಜಿಪೆ ನಿನ 5 ಪರಿ | ಕಾಮ ಫಲಪ್ರದಪಾಮರ ಮನುಜನ | ನೀ ಮಾಣದೆ ಪೊರೆ 6 ಭೂಮಾರ್ಣವ ಗುರು | ಗೋವಿಂದ ವಿಠಲನಕಾಮಿಪೆ ಮೆನ್ಮನ | ಸೀಮೆಯಲಿರಿಸೋ 7
--------------
ಗುರುಗೋವಿಂದವಿಠಲರು
ಯತಿಸಾರ್ವಭೌಮಾ ಸದ್ಗುರು ಸ್ವಾಮಿ ಪ ಮತಿಗೆ ಮಂಗಳವಾದ ಗೋಪ್ಯ ಸ್ಥಿತಿಯು ನಿನಗರುಹುಲದರಿಂ ನುತಿಪೆನಾನಿಮ್ಮಡಿಗಳನು ಕೇಳ್ ಪ್ರತಿವಾದಿಭಯಂಕರನೆ ಶ್ರೀ 1 ಅಂತರಾಪುರಿಯೊಳಗೆ ತಾನೆ ಅ ನಂತ ರೂಪಗಳನ್ನು ತೋರಲೂ ನಿಂತು ನೋಡಿದೆನಹುದೊ ಮುಕ್ತಿ ಕಾಂತೆಯೆಂಬೊ ರಮಾಂಶಳನು ಶ್ರೀ 2 ಉಭಯ ವೇದಾಂತಾರ್ಯನಾಗಿಯು ಅಭಯ ದಾನವನಿತ್ತ ಸೋಹಂ ಪ್ರಭುವೆ ತಾನಾಗಿರುವಾ ನಿಜಕಳೆ ವಿಭುವೆ ಜಯ ಜಯ ಶುಭಕರನೆ ಶ್ರೀ 3
--------------
ಚನ್ನಪಟ್ಟಣದ ಅಹೋಬಲದಾಸರು
ಯಂತ್ರೋದ್ಧಾರಕ ಪ್ರಾಣರಾಯ ಎನ್ನ ಚಿಂತೆ ಹರಿಸೋ ಪ. ಅಂತರಂಗದಿ ಹರಿಯ ಧ್ಯಾನವ ಮಾಡಿಸೋ ಅ.ಪ. ನಿನ್ನ ನೋಡಿ ಧನ್ಯಳಾದೆನೊ ಹೊನ್ನು ಹನುಮನೆ ಎನ್ನ ಪಾಪ ಹರಿಸಿ ಕಾಯೊ ಘನ್ನ ಹನುಮನೆ 1 ಒಂದು ಅರಿಯದ ಮಂದಮತಿಯಳ ಬಂದು ಕಾಯೋ ಬಂಧನವ ಬಿಡಿಸಿ ಕಾಯೋ ಸುಂದರಾಂಗನೆ 2 ತುಂಗಾತೀರದಿ ನಿಂತಿರುವಿ ಮಂಗಳಾಂಗನೆ ಮಂಗಳ ರಾಮನ ಧ್ಯಾನವ ಮಾಡಿಸು ಎನಗೆ 3 ಹಂಪಿಯಲಿ ನಿಂತಿರುವಿ ಸೊಂಪಿನಿಂದಲಿ ಸಂಪಿಗೆ ನೆರಳಲಿ ನೋಡಿದಿ ರಾಮರ ಧ್ಯಾನ ಮಾಡುತ 4 ರಾಮ ದೂತನೆ ಎನ್ನ ಮೊರೆಯ ಲಾಲಿಸಿ ಪಾದ ಬೇಗ ತೋರಿಸೊ 5
--------------
ಸರಸಾಬಾಯಿ
ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು ನಿಲ್ಲುವರಯ್ಯಾ ಈ ಜಗತ್ರಯದಿ ಪ ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ. ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ ಮಾಡಿ ದುರಂಧರನೆನಿಸಿದೆ 1 ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ 2 ಅದ್ವೈತ ಮತವ ಗೆದ್ದು ಮದ್ಗುರು ಮುನಿಮೌನಿರಾಮಾ 3
--------------
ಮಹಾನಿಥಿವಿಠಲ
ಯನಗೆ ನಾನೇ ಸರಿ-ನಿನಗೆನೀನೆ ಹರಿ ಎಣಿಗಾಣೆ ನೀರ್ವರ್ಗೆ ವನಜನಯನ ಪ ಧರೆಯನಾಳುವ ಸಿರಿಯರಸ ನೀನು ಈ ಧರೆಯೊಳು ನಿರ್ಭಾಗ್ಯರೆರೆಯ ನಾನು 1 ಪರಮೇಷ್ಠಿಯನ್ನು ಪಡೆದ ಪರಮ ನೀನು ಬಲು ದುರಿತಂಗಳಪ್ಪಿದ ದುರುಳನು ನಾನು 2 ಪುಣ್ಯವಂತರ ಹೃದಯ ಗಣ್ಯ ನೀನು ಕೃತಪುಣ್ಯ ಹೀನರಿಗಗ್ರಗಣ್ಯ ನಾನು 3 ಪತಿತಪಾವನ ನೀನು ಪತಿತ ನಾನು ಸದ್ಗತಿದಾತ ನೀನು ನಿರ್ಗತಿಕನಾನು 4 ವರವ್ಯಾಘ್ರಗಿರಿಯ ವರದ ವಿಠಲನು ನೀನು ನಿಜ ಶರಣರ ಚರಣ ಧೂಳೀಪಟಲನಾನು 5
--------------
ಸರಗೂರು ವೆಂಕಟವರದಾರ್ಯರು