ಒಟ್ಟು 331 ಕಡೆಗಳಲ್ಲಿ , 27 ದಾಸರು , 324 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಮಾಯೆಗೌರಿ ಮಾಹೇಶ್ವರಿಪ.ವiಹಾದೇವಮನೋಹಾರಿ ಶಂಕರಿಮಹಾಪಾಪಧ್ವಂಸಕಾರಿ ಶ್ರೀಕರಿಮಾಂಪಾಹಿಪಾಹಿ ಶೌರಿಸೋದರಿಅ.ಪ.ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿಕಾಮಿತಪ್ರದೆ ಕಂಬುಕಂಧರಿಹೇಮಾಲಂಕಾರಿ ಹೈಮವತಿ ಕುವರಿ 1ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿಸ್ಥಾಣುವಲ್ಲಭೆ ದನುಜಸಂಹಾರಿಜ್ಞಾನಾಗೋಚರಿ ಜಗತ್ರಯೇಶ್ವರಿ 2ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿಸರ್ವಲಕ್ಷ್ಮೀನಾರಾಯಣೇಶ್ವರಿಸರ್ವಸಹಚರಿ ಶಶಾಂಕಶೇಖರಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಮವ ಮಮ ಕುಲಸ್ವಾಮಿ ಗುಹನತಜನ ದುರಿತಾಪಹ ಪ.ಭೀಮವೀರ್ಯ ನಿಸ್ಸೀಮಪರಾಕ್ರಮಧೀಮತಾಂವರ ನಿರಾಮಯ ಜಯ ಜಯ ಅ.ಪ.ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನಪಾವನ್ನಮೀನಕೇತನಸಮಾನ ಸಹಜ ಲಾವಣ್ಯಗಾನಲೋಲ ಕರುಣಾನಿಧಿ ಸುಮನಸ-ಸೇನಾನಾಥ ಭಾವನಿಸುತ ಸುಹಿತ 1ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯನಿಟಿಲಾಕ್ಷತನಯ ನಿಗಮಜÕ ಬಾಹುಲೇಯಕುಟಿಲ ಹೃದಯ ಖಲಪಟಲವಿದಾರಣತಟಿತ್ಸಹಸ್ರೋತ್ಕಟರುಚಿರಮಕುಟ2ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಯಾಮಯ ಜಗವೆಲ್ಲ ಇದ-ರಾಯತ ತಿಳಿದವರಿಲ್ಲ ಪ.ಕಾಯದಿಂ ಜೀವನಿಕಾಯವ ಬಂಧಿಸೆನೋಯಿಸುವಳು ಸುಳ್ಳಲ್ಲ ಅ.ಪ.ತಿಳಿದು ತಿಳಿಯದಂತೆ ಮಾಡಿ ಹೊರ-ಒಳಗಿರುವಳು ನಲಿದಾಡಿಹಲವು ಹಂಬಲವ ಮನದೊಳು ಪುಟ್ಟಿಸೆನೆಲೆಗೆಡಿಸುವಳೊಡಗೂಡಿ 1ಯೋಷಿದ್ರೂಪವೆ ಮುಖ್ಯ ಅ-ಲ್ಪಾಸೆಗೆ ಗೈವಳು ಸಖ್ಯದೋಷದಿ ಪುಣ್ಯದವಾಸನೆತೋರ್ಪಳುಜೈಸಲಾರಿಂದಶಕ್ಯ 2ಕರ್ತಲಕ್ಷ್ಮೀನಾರಾಯಣನಭೃತ್ಯರ ಕಂಡರೆ ದೂರಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-ರಾರ್ಥಕೆ ಕೊಡಳು ವಿಚಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.ಯಾಕೆ ಪಂಥ ಲೋಕೈಕನಾಥ ದಿ-ವಾಕರಕೋಟಿಪ್ರಭಾಕರ ತೇಜನೇ ಅ.ಪ.ಪೂರ್ವಾರ್ಜಿತ ಕರ್ಮದಿಂದಲಿಇರ್ವೆನು ನರಜನ್ಮ ಧರಿಸುತಗರ್ವದಿಂದ ಗಜರಾಜನಂತೆ ಮತಿಮರ್ವೆಯಾಯ್ತು ನಿನ್ನೋರ್ವನ ನಂಬದೆಗರ್ವಮದೋನ್ಮತ್ತದಿ ನಡೆದೆನುಉರ್ವಿಯೊಳೀ ತೆರದಿ ಇದ್ದೆನಾದರೂಸರ್ವಥಾ ಈಗ ನಿಗರ್ವಿಯಾದೆಯಹಪರ್ವತವಾಸ ಸುಪರ್ವಾಣ ವಂದಿತ 1ಯಾರಿಗಳವಲ್ಲಮಾಯಾಕಾರ ಮಮತೆ ಸಲ್ಲ ಸಂತತಸಾರಸಾಕ್ಷ ಸಂಸಾರಾರ್ಣವದಿಂದಪಾರಗೈದು ಕರುಣಾರಸ ಸುರಿವುದುಭಾರವಾಯ್ತೆ ನಿನಗೆನತಮಮಕಾರ ಹೋಯ್ತೆ ಕಡೆಗೆ ಏನಿದುಭಾರಿ ಭಾರಿಶ್ರುತಿಸಾರುವುದೈ ದಯವಾರಿಧಿನೀನಿರಲ್ಯಾರಿಗುಸುರುವುದು2ಬಾಲತ್ವದ ಬಲೆಗೆ ದ್ರವ್ಯದಶೀಲವಿತ್ತೆ ಎನಗೆ ಆದರೂಪಾಲಿಸುವರೆ ನಿನಗಾಲಸ್ಯವೆ ಕರು-ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆಸಾಲದೆರಡು ಮೂರು ನಿನ್ನಯಮೂಲ ಸಹಿತ ತೋರು ಮುನಿಕುಲಪಾಲ ಶ್ರೀಲಕ್ಷ್ಮೀನಾರಾಯಣಗುಣಶೀಲ ಕಾರ್ಕಳ ನಗರಾಲಯವಾಸನೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಾಕೊ ದಯಬಾರದುಹರಿನಿನಗ್ಯಾಕೊ ದಯಬಾರದುಪ.ಶ್ರೀಕರ ಲೋಕೇಶ ಏಕಾನೇಕ ಸ್ವರೂಪ ಅ.ಪ.ಕಾಮಿತಾರ್ಥದಾಯಕರ ಸ್ವಾಮಿ ಲೋಕನಾಯಕಭೀಮವಿಕ್ರಮ ಶ್ರೀರಾಮ ನಿರಾಮಯ 1ಸುಂದರಿನಾಥ ಸುರೇಂದ್ರವಂದಿತಕಂದನ ಕಂದಾರವಿಂದದಳನಯನ 2ಅಕ್ಷರಬ್ರಹ್ಮ ಸಂರಕ್ಷಿಸು ನಮ್ಮಪಕ್ಷೀಂದ್ರವಾಹನ ಲಕ್ಷ್ಮೀನಾರಾಯಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸು ಮಹಮಾಯೆ ಕರುಣ ಕ-ಟಾಕ್ಷದಿಂದಲಿ ತಾಯೆ ಪ.ದಾಕ್ಷಾಯಿಣಿ ದೈತ್ಯಾಂತಕಿವರನಿಟಿ-ಲಾಕ್ಷನ ರಾಮಿ ನಿರೀಕ್ಷಿಸು ಜನನೀ ಅ.ಪ.ವಾಸವಮುಖವಿನುತೆ ರವಿಸಂ-ಕಾಶೆ ಸುಗುಣಯೂಥೇಭಾಸುರಮಣಿಗಣಭೂಷೆ ತ್ರಿಲೋಕಾ-ಧೀಶೆ ಭಕ್ತಜನಪೋಷೆ ಪರೇಶೆ 1ಗುಹಗಣಪರಮಾತೆ ದುರಿತಾ-ಪಹೆ ದುರ್ಜನ ಘಾತೆಬಹುಕಾಮಿತಪ್ರದೆ ಭಜಕಜನೋರ್ಜಿತೆಮಹಿತೆ ಯೋಗಿಹೃದ್ಗುಹನಿವಾಸಿನಿಯೆ 2ಶುಂಭಾಸುರಮಥಿನಿ ಸುರನಿಕು-ರುಂಬಾರ್ಚಿತೆ ಸುಮನಿರಂಭಾದಿಸುರನಿತಂಬಿನೀ ಜನಕ-ದಂಬಸೇವಿತಪದಾಂಬುಜೆ ಗಿರಿಜೆ 3ಅಷ್ಟಾಯುಧಪಾಣಿ ಸದಾಸಂ-ತುಷ್ಟೆ ಸರಸವಾಣಿಸೃಷ್ಟಿಲಯೋದಯಕಾರಿಣಿ ರುದ್ರನಪಟ್ಟದ ರಾಣಿಪರಾಕುಕಲ್ಯಾಣಿ4ನೇತ್ರಾವತಿ ತಟದ ವಟಪುರ-ಕ್ಷೇತ್ರಮಂದಿರೆ ಶುಭದಾಸುತ್ರಾಣಿ ಲಕ್ಷ್ಮೀನಾರಾಯಣಿ ಸ-ರ್ವತ್ರ ಭರಿತೆ ಲೋಕತ್ರಯನಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನ ಪ.ತ್ರ್ಯಕ್ಷಾದಿ ವಿಬುಧಪಕ್ಷಪರಾತ್ಪರಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾ ಅ.ಪ.ವೇದಬಾಹಿರರಾಗಿ ಖಲರು ಬಹು ಬಾಧಿಸುವರುಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರುಆದಿಮೂರ್ತಿ ತವಪಾದಾಶ್ರಯ ಸು-ಬೋಧಾಮೃತರಸ ಸ್ವಾದುಗೊಳಿಸುತಲಿ 1ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸುಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸುಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರದುರ್ವಾರದುರಿತದುರ್ಗನಿಗ್ರಹನೆ2ಸತ್ಯಾತ್ಮ ಪಾವನಪಂಕಜನಾಭನೀಲಾಭ್ರದಾಭಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭಚಿತ್ತವಾಸ ಶ್ರೀವತ್ಸಾಂಕಿತ ಪರ-ಮಾರ್ಥಬೋಧ ಮಹತ್ತತ್ತ್ವನಿಯಾಮಕ 3ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶಕವಿಜನಾನಂದಭವನ ಭವಭಯಾ-ರ್ಣವ ಬಾಡಬಮಾಧವಮಧುಸೂದನ4ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪಕರ್ತಾಕಾರಯಿತ ಸುಗುಣಕಲಾಪಪರಮಪ್ರತಾಪಸುತ್ರಾಣಲಕ್ಷ್ಮೀನಾರಾಯಣಪರವಸ್ತು ಶಾಶ್ವತ ಪವಿತ್ರ ಚರಿತ್ರ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲುಭಂಗವ ಪಡುವುದ್ಯಾಕೆಮಂಗಲದಾತ ನರಸಿಂಗನ ನಾಮವಹಿಂಗದೆ ನೆನೆದರಿಷ್ಟಂಗಳ ಕೊಡುವ 1ಉಪವಾಸ ಮಾಡಲ್ಯಾಕೆ ಕಪಟದೊಳುಗುಪಿತದಿ ಕುಳ್ಳಲ್ಯಾಕೆಉಪಮೆರಹಿತ ಶ್ರೀಪತಿ ಕೃಷ್ಣರಾಯನಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ 2ಧ್ರುವನು ಸದ್ಗತಿ ಪಡೆದ ಕರುಣದಿಂದಪವಮಾನಿಗೆ ಒಲಿದಭುವನಈರಡಿಮಾಡಿ ಬಲಿಯನ್ನು ಸಲಹಿದಬವರದೊಳಗೆ ದಾನವರನ್ನು ಮಡುಹಿದ 3ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತುತೀರ್ಥಸ್ನಾನಗಳ್ಯಾತಕೋಕರ್ತುಮಾಧವಶತಪತ್ರನಾಭನ ಸಂ-ಕೀರ್ತನಾದಿಗಳೆ ಪರತ್ರಸಾಧನವಲ್ಲೊ 4ಭೂರಿಯಾಯಾಸವ್ಯಾಕೋ ಬರಿದೆ ಸಂ-ಸಾರವ ನಂಬಲ್ಯಾಕೋಮಾರಾರಿಸಖ ಲಕ್ಷ್ಮೀನಾರಾಯಣನನ್ನುಸೇರಿ ಭಜಿಪರ ಉದ್ಧಾರಮಾಡುವ ಶ್ರೀ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಮಾನಾಮಾಮೃತಪಾನಸುಖಧಾಮನುಮುಖ್ಯಪ್ರಾಣಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ 1ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ 2ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಂದೇ ಶ್ರೀ ಗೌರಿನಂದನ ಸುರನರವೃಂದವಂದಿತಚರಣ ಗಜಾನನ ಪ.ಶಂಕರೋಲ್ಲಾಸ ಪಾಶಾಂಕುಶಧರಕರಪಂಕಜಸುವಿರಾಜ ರವಿತೇಜ1ಜಂಭಾರಿಸಂನುತ ಜಾಹ್ನವೀಧರಸುತಲಂಬೋದರ ಸುಂದರ ಕೃಪಾಕರ 2ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನಪಕ್ಷೈಕಪಾವನ ಸುಧೀಷಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಣಿ ವರದೆ ಶಾರದೆನಿನ್ನ ಚರಣವ ಸೇರಿದೆ ಪ.ಎನ್ನ ನಾಲಿಗೆಯೊಳ್ನೆಲಸುಹರಿಲೀಲೆಯನ್ನು ನುಡಿಸು 1ಅತಿರೋಹಿತ ವಿಜ್ಞಾನಿವೇದವ್ಯೂ ಹಕಭಿಮಾನಿ 2ಲಕ್ಷ್ಮೀನಾರಾಯಣನ ಸೊಸೆಸರ್ವಾಧಾರ ಭಕ್ತಿವಿಲಾಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಂಕರ ಗುರುವರ ಮಹದೇವ ಭವ-ಸಂಕಟ ಪರಿಹರಿಸಯ್ಯ ಶಿವ ಪ.ಸಂಕಲ್ಪ ವಿಕಲ್ಪಮನೋನಿಯಾಮಕಕಿಂಕರಜನಸಂಜೀವ ಅ.ಪ.ಭಾಗವತರರಸ ಭಾಗೀರಥೀಧರಬಾಗುವೆ ಶಿರ ಶರಣಾಗುವೆ ಹರಶ್ರೀ ಗೌರೀವರ ಯೋಗಿಜನೋದ್ಧರಸಾಗರಗುಣಗಂಭೀರ 1ರಾಯ ಲಕ್ಷ್ಮೀನಾರಾಯಣ ಭಕ್ತಿಪ-ರಾಯಣ ತ್ರಿನಯನ ಪುರಹನಕಾಯಜಮಥನ ಮುನೀಂದ್ರ ಸಿದ್ಧಜನ-ಗೇಯಸ್ವರೂಪೇಶಾನ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಂಕರ ಶಿವಶಂಕರ ಶಿವಶಂಕರ ಶಿವಶಂಕರಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.ವ್ಯೋಮಕೇಶಭವಾಬ್ಧಿತಾರಕ ರಾಮನಾಮೋಪಾಸಕಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ 1ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ 2ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರಶೈಲರಾಜಸುತಾಧರಾಮೃತಲೋಲ ಲೋಕಧುರಂಧರಕಾಲಕಾಲ ಕಪಾಲಧರಕರುಣಾಲವಾಲಮಹೇಶ್ವರಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ 3ಕೃತ್ತಿವಾಸಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕಮೃತ್ಯುಹರ ಹರಮೃಡನಮೋಸ್ತುನಮೋ&bಜquo;ಸ್ತು ಸುಮನನಿಯಾಮಕ 4ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹಚಂಡಿಕಾಧವ ಶಿವ ದಯಾರ್ಣವಖಂಡಪರಶುಸುರಾರಿಹಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ 5ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗಸದೋದಿತಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ 6ಭರ್ಗಭಾರ್ಗವಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ 7ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಂಕರಾಚಾರ್ಯರ ಸ್ತುತಿಸ್ವಾಮಿ ಶಂಕರನೆ ಆಚಾರ್ಯನಮಾಮಿಪಂಕಜಚರಣಕ್ಕೆ ಗುರುವರ್ಯಪ.ಸುರ ಮುನಿಗಳ ಮೊರೆಯಾಕೇಳಿಧರಣಿಯೊಳುದಿಸಿದ ಗಿರಿಜೆಯ ಪ್ರೀಯಾವರಅದ್ವೈತಪದ್ಧತಿಯಾಯೋಗಿವರನೆ ಬೋಧಿಸಿ ಮೋಕ್ಷ ಬೀಜ ಬಿತ್ತಿದೆಯಾ 1ನಿರ್ಮಲ ಜ್ಞಾನ ಸುದೀಪ ಸೋಹಂಬ್ರಹ್ಮಾನೇ ಎಂಬ ಸುಜ್ಞಾನವ ತೋರ್ಪಬ್ರಹ್ಮಾನಂದನಿಷ್ಟಾಪಗುರುಲಕ್ಷ್ಮೀನಾರಾಯಣ ರೂಡ ನಿರ್ಲೇಪ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ