ಒಟ್ಟು 7149 ಕಡೆಗಳಲ್ಲಿ , 128 ದಾಸರು , 3568 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ | ಸಾರು ನೀನು ಎನಗೆ ಸುಮ್ಮನ್ಯಾತÀಕೆ ಯಿದ್ದೀ ಪ ನೀರೊಳು ಮುಣಗೆ ವೇದವ ತಂದಾತನೊ | ಭಾರವನು ಪೊತ್ತು ಸುರರ ಕಾಯಿದಾತನೊ | ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ | ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1 ಗಗನಕೆ ಬೆಳದು ಸುರ ನದಿಯ ಪಡೆದಾತನೊ | ಹಗೆಗಳ ಕೊಂದು ಹರುಷಿತನಾದನೊ | ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ | ಮಗನಮಗನ ತಂದ ಮಹಿಮನೊ 2 ಹರಗೆ ಸಾಯಕವಾಗಿ ಪುರ ಉರಹಿದಾತನೊ | ದುರುಳರನ ಕೊಂದ ದುರ್ಲಭದೇವನೊ | ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ - ಶರಣರಿಗೊಲಿದು ಬಂದ ಸರ್ವೋತ್ತಮನೊ 3
--------------
ವಿಜಯದಾಸ
ಆರಿಗಳವಲ್ಲಾತ್ಮ ಯೋಗ ಸಿದ್ಧಿಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ ಪ ರಜಸು - ತಾಮಸವೆಂಬ ರಯವನೆಲ್ಲವ ಕಳೆದುಗಜ ಬಜಿಸುವ ಪಂಚಭೂತಗಳರಜನಿಗೆ ಸಿಲ್ಕದೆ ಪರಬ್ರಹ್ಮನ ಬಲುನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ 1 ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದುತನ್ನೊಳಗೆ ತಾ ತಿಳಿದು ತಾರಕಬ್ರಹ್ಮವಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ 2 ಅಕಾರ ಉಕಾರ ಮಕಾರ ಎಂತೆಂಬಓಂಕಾರಕೆ ಕೂಡಿ ಎರಡಿಲ್ಲದಸಾಕಾರ ಕಾಗಿನೆಲೆಯಾದಿಕೇಶವನಆಕಾರದೊಡನಾಡುವರಿಗಲ್ಲದೆ 3
--------------
ಕನಕದಾಸ
ಆರು ಕೊಟ್ಟರು ಕೊಟ್ಟರಾರುಂಡರಾರಿಲ್ಲಿಬೇರೆ ನಾ ನೀ ನಾನೆಂದು ಕೆಡುವುದೀ ಲೋಕ ಪಕಾಲ ಚ್ಟೇಸಿತು ಕರ್ಮವು ಕೊಟ್ಟಿತೀ ಕಿವಿಗಳಾಲಿಸಿತು ಕಂಡಿತಕ್ಷಿಗಳೆಂದಿತಂಘ್ರಿಲೀಲೆಯಲಿ ಕೈಪಿಡಿಯುತಾ ಘ್ರಾಣಿ ಘ್ರಾಣವೀ ಲೋಲ ಚಿತ್ತವನುಸಂಧಾನಗೆಯ್ತು 1ಪ್ರಾಣ ಒಳಕೊಂಡಿತನ್ನವನು ಸಂಕಲ್ಪಿಸಿತುದೀನ ಮನಮತಿಗೆ ನಿಶ್ಚಯವಾುತೂತಾನಿದರೊಳಾರು ಕೊಂಬವನೊ ಕೊಡುವನೊ ದುರಭಿಮಾನದಿಂ ಕೆಡುತಿಹರು ನೀನು ನಾನೆಂದು 2ಭಾನು ಜಲದಲಿ ಪೊಳೆಯಲದರ ಕಂಪಾದಿಗಳುಭಾನುವಿನದೆಂದು ಭ್ರಮಿತರು ಬಗೆವ ತೆರದಿಜ್ಞಾನಮಯ ನಾದಾತ್ಮ ಹಮ್ಮಿನೊಳ್ಪೊಳೆಯಲಜ್ಞಾನದಿಂದೀ ರಾಸಿ ನಾನೆನ್ನುತಿಹರೊ 3ಈಯನಿರ್ವಚನೀಯ ಜೀವತ್ವವೆಂದರಿದುಕಾಯದಲಿ ಕೂಟಸ್ಥ ಸತ್ಯವೆಂದೂಮಾಯದಿಂದ ತೋರಿ ತಾನೀ ವಿಶ್ವಪುಸಿ ಎಂದುಹೇಯ ಭೋಗದಲನಾಸಕ್ತನಾಗಿರದೆ 4ತಾನು ನಿರ್ಲೇಪನೆಂದರಿಯದೆ ಶರೀರಾಭಿಮಾನದಿಂ ಗೋಪಾಲ ಯತಿಯ ಚರಣವನೂಸಾನುರಾಗದಲಿ ಸೇವಿಸದೆ ಮಿಥ್ಯಾವಿಷಯದೀನತೆಯನೈದಿ ರಾಗಾದಿಗಳ ಬಿಡದೆ 5
--------------
ಗೋಪಾಲಾರ್ಯರು
ಆರುತಿ ಮಾಡಿದೆವೆ ನಾರಿಯಮಣಿಯರು ಪ ಚಾರು ಪುಸ್ತಕದಿಭೂರಿ ಶೋಭಿಪ ಪರಾಶರ ತನುಜಗೆ ಅ.ಪ. ಚಿತ್ರ ಮಂಟಪದೊಳು ಮುತ್ತಿನಂದದಿ ಕೂತುಭಕ್ತ ಪೂಜಿತನಾಗಿ ಭಾಗ್ಯವ ತತ್ವ ಪೇಳಿದವಗೆ 1 ಅಖಿಳ ದುರ್ವಾದಿ ವಿಜಯಗೆ2 ಭಾರತ ಮುಖ ಬಹುಸಾರ ಶಾಸ್ತ್ರವ ಮಾಡಿಧಾರುಣಿಯೊಳು ಮುಕ್ತಿದಾರಿ ತೋರಿದವಗೆ 3 ನಾರದ ಶುಕಪೈ ಸೇರಿ ವೈಶಂಪಾಯನದ್ವಾರಪಾಲಕರಿಂದ ನಿರುತ ಪೂಜಿತಗೆ 4 ವಾಸವೀ ತನುಜಾ ವ್ಯಾಸನ ಸ್ತುತಿಸಿದಾಭಾಷಿ ಭಾಷಿಗೆ ಇಂದಿರೇಶ ಪಾಲಿಸುವನು 5
--------------
ಇಂದಿರೇಶರು
ಆರುತಿಯ ತಾರೆ ಸಖಿ | ನೀರಜಾಕ್ಷಿ ವಾರುಣೀಶನಿಗೆ ಪ ವಾರಿಚರಗಿರಿಧಾರ ಹರಿ ಗೋಚರ ಹರಿ | ನರಸಿಂಹಗೆ ಮೂರಡಿ ಧಾರುಣಿ ದಾನವ ಬೇಡಿದವಗೆ 1 ದಾಶರಥಿದಾಸ ಹರಿಕೃಷ್ಣಗೆ ವಸನವರ್ಜಿತ ಕಲ್ಕಿಗೆ ಶ್ರೀಶನಿಗೆ ಸರ್ವೇಶನಿಗೆ ವಾಸುಕಿಗಿರಿ ವಾಸನಿಗೆ 2 ಸಾಮಗಾನ ವಿಲೋಲಗೆ ಶಾಮಸುಂದರವಿಠಲಗೆ | ರಾಮಗೆ ನಿಸ್ಸೀಮಗೆ | ಕಾಮಿತಾರ್ಥಪ್ರದಾತಗೆ 3
--------------
ಶಾಮಸುಂದರ ವಿಠಲ
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಆರೂ ಸಮಯಕ್ಕೊದಗಲಿಲ್ಲಮೋರೆ ನೋಡುತ ಸುಮ್ಮನಿಹರೆಲ್ಲ ಪ ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನುಖಗರಾಜವಾಹನನು ತನ್ನಳಿಯನುಅಗಜನಂದು ತನ್ನೊಡಲೊಳಿಂಬಿಟ್ಟು ಮೂ-ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ1 ಶ್ರೀದೇವಿ ಭೂದೇವಿ ಮಾತೆಯರು ತಾವಿರಲುಯಾದವರಾಯ ಮೋಹದ ತಂದೆಯುವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರಬೂದಿಯಾಗುವಾಗ ಬಿಡಿಸಲಿಲ್ಲವೇಕೆ2 ಬೊಮ್ಮ ಮನ್ಮಥರಿರಲಾಗಿಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ 3 ತೆತ್ತೀಸ ಕೋಟಿ ದೇವರ್ಕಳು ತಾವಿರಲುಒತ್ತಿನಲಿ ಇಂದ್ರ ಉಪೇಂದ್ರರಿರಲುಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ 4 ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟುಕಂತುಪಿತ ಕಾಗಿನೆಲೆಯಾದಿಕೇಶವನಸಂತೋಷದಿಂ ನೆನೆದು ಸುಖಿಯಾಗೊ ಮನುಜ5
--------------
ಕನಕದಾಸ
ಆರೋಗಣೆಯ ಮಾಡು ಶ್ರೀವೆಂಕಟೇಶ ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ ಗಂಗೆಯ ಜನಕಗೆ ಮಂಗಳ ಅಭಿಷೇಕ ಸಂಭ್ರಮದಲಿ ಮಾಡಿ ತವಕದಲಿ ಶಂಭುವಂದಿತಗೆ ಪೀತಾಂಬರನುಡಿಸಿ ಪಾ- ದಂಗಳನೆ ಪೂಜಿಸುತ ಸ್ತುತಿಪರು ಇಂದಿರಾಪತಿ ಶೀಘ್ರದಿಂದಲಿ 1 ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ ವಪ್ಪಾದ ವಡೆದೋಸೆ ಚಿತ್ರಾನ್ನವೂ ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ ಮತ್ತೆ ಪಾಯಸ ಮೊಸರು ಬುತ್ತಿ ವಿ- ಚಿತ್ರದಲಿ ತಂದರ್ಪಿಸಿಹರು2 ಕನಕ ಮಂಟಪದೊಳು ಕರ್ಪೂರದಾರತಿ ವಿನಯದಿ ಮಾಡುತ್ತ ನಮಿಸುವರು ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ ಘಮ ಘಮಿಪ ತಾಂಬೂಲ ವೀಳ್ಯವ ತವಕದಲಿ ಸ್ವೀಕರಿಸು ಶ್ರೀಶಾ 3
--------------
ನಿಡಗುರುಕಿ ಜೀವೂಬಾಯಿ
ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಆಲದೆಲೆಯ ಮ್ಯಾಲೆ ಮಲಗಿದ್ದಾದಿಕೇಶವ(ನ) ನೋಡ ಬನ್ನಿರಾಲದೆಲೆಯ ಮ್ಯಾಲೆ ಕೃಷ್ಣ ಬಾಲರೂಪ ಧರಿಸಿ ಅಂಧಕಾರ ಪ್ರಳಯ ಜಲದ ಒಳಗೊಂದಾಲದೆಲೆÉಯ ಮ್ಯಾಲೆ ಕೃಷ್ಣ ಪ ಪ್ರಳಯ ಕಾಲದಲ್ಲೆ ಹರಿಯು ಸರ್ವ ಜೀವರನೆಲ್ಲ ತನ್ನ ಉದರದೊಳಗಿಂಬಿಟ್ಟುಕೊಂಡು ಛಲವ ಮಾಡದಂತೆ ರಂಗ ಬೆರಳು ಬಾಯೊಳಗಿಟ್ಟು ಚೀಪುತ ಹರಳು ಮಾಣಿಕ್ಯದರಳೆಲೆ ಮಾಗಾಯಿ ಕೌಸ್ತುಭ ಕಟಿಸೂತ್ರ ಕರುಣ ಸಾಗರಗಿನ್ನು ವರ ವೈಕುಂಠವಾಸ ಒಂದಾಲದೆಲೆಯ ಮ್ಯಾಲೆ 1 ಅಷ್ಟು ಜೀವರನೆಲ್ಲ ತನ್ನ ಹೊಟ್ಟೆಯೊಳಗಿಂ ಬಿಟ್ಟು ಕೊಂಡು ಸೃಷ್ಟಿ ಲಯಕೆ ಕರ್ತನಾದ ಶ್ರೇಷ್ಠ ಸುಂದರಾಂಗ ತನ್ಹೆಬ್ಬೆಟ್ಟು ಬಾಯೊಳ ಗಿಟ್ಟು ಚೀಪುತ ವಕ್ಷಸ್ಥಳದಿ ಹೆಚ್ಚಿನ ಶ್ರೀವತ್ಸ ತೋರುತ ಉತ್ತಮ ವೈಜ(ಯಂ)ತಿ ವಜ್ರ ಕೆತ್ತಿದ ಕಿರೀಟ ಲಕ್ಷ್ಮೀಚಿತ್ತ ಚೋರನಾದ ಪರಮಾತ್ಮ ಪರಮ ಹರುಷದಿಂ ದ್ವೊಂದಾಲದೆಲೆಯ ಮ್ಯಾಲೆ 2 ಗಂಧ ಕಸ್ತೂರಿ ಪರಿಮಳ ಸುಗಂಧವಾದ ಕುಸುಮ ಕೆಲದಿ ಹೊಂದಿ ಕಟ್ಟಿದ ತುಳಸಿಮಾಲಿಕಿಂದೆ ಪರಮ ಶೋಭಿತವಾದ ಬಂದಿ ಕಂಕಣ ಬಾಹುಪ್ಪುರಿಗಳು ದುಂಡುಮುತ್ತಿನ ಕೂದಲ ಕಾಂತಿ ಕದಪಿಲೆಸೆಯಲು ಅಂದಿಗೆ ಪಾಗಡ ಗೆಜ್ಜೆ ಚೆಂದವಾದ ನಾದಗಳಿಂದ ಇಂದುಕೋಟಿ ರವಿಯ ತೇಜ ಮಂದಹಾಸ ಮುಖದ ಹರಿ ಒಂದಾಲದೆಲೆಯ ಮ್ಯಾಲೆ 3 ಥಳಥಳಿಸುವಂತ್ಹೊಳೆವೊ ಚಕ್ರ ಧವಳವರಣ ಶಂಖ ಕರದಿ ಹವಳದುಟಿಯು ಹರಿಯ ಪದ್ಮ ದಳಗಳಂತಕ್ಷಿಗಳ ಚೆಲುವ ಅರುಣನಂತೆ ಚರಣ ಕರದಲ್ಲಿ ಒತ್ತುವೊ ಸಿರಿಯ ಪರಮಪುರುಷ ನೋಡಿ ಸರಸದಿ ಜರ ಪೀತಾಂಬರ ನಾಭಿಕಮಲಕ್ಕೊಲೆವೊ ಒಡ್ಯಾಣವನೆ ಇಟ್ಟು ಹಲವು ಸೂರ್ಯರಂತೆ ಲಕ್ಷ್ಮೀರಮಣ ಶ್ಯಾಮವರಣ ಹರಿ ಒಂದಾಲದೆಲೆಯ ಮ್ಯಾಲೆ 4 ಅಳಕÀನಂದನ ಪಿತನು ತಾ ಘ- ನೋದಕÀದೊಳು ತಾ ರಂಗ ಚಾಮರ ಎಣಿಕಿಲ್ಲದೆ ಮಾ ಣಿಕ್ಯದಾಭರಣ ಫಣಿಪಮಂಚಶಯನ ನೀಲ ಕನಕರತ್ನ ಬಿಗಿದ್ಹಾಸಿಕೆಯಲಿ ಪಂಚಶರನ ಜನಕ ಜಗವ ನಿಟ್ಟು ತನ್ನಲ್ಲಿ ಅಳಕಗೂದಲು ಚೆಂಡಿಕೆಲ್ಲೆ ಅರಳುಮಲ್ಲಿಗೆ ಸುತ್ತಿಹರಿಗೆ ಝಳಕು ಮಿಂಚಿನಂತೆ ಜಗಕÉ ಬೆಳಕಿನÀಲಿ ಭೀಮೇಶ ಕೃ ಷ್ಣೊಂದಾಲದೆಲೆಯ ಮ್ಯಾಲೆ 5
--------------
ಹರಪನಹಳ್ಳಿಭೀಮವ್ವ
ಆವ ಕುಲವಾದರೇನು ಶ್ರೀ ವಾಸು-ದೇವನೆಂದವನೆ ಧನ್ಯಾ ಪ ವಿಪ್ರ ಮಾ-ದಿಗಗಿಂತ ನಿಕೃಷ್ಟನೋ 1 ಊಧ್ರ್ವ ಪುಂಡ್ರಗಳ ಧರಿಸೀ ಶಿರದಲ್ಲಿಪದ್ಮಾಕ್ಷಿ ತುಲಸಿ ಮಾಲೆ ಹಾಕಿಮಧ್ವ ವಲ್ಲಭನೆನ್ನದಾ ಆ ವಿಪ್ರಶುದ್ಧ ಚಾಂಡಾಲನೆನ್ನೋ 2 ಪಂಚ ಮುದ್ರೆಗಳ ಧರಿಸೀ ಲೋಕ ಪ್ರ-ಪಂಚಕ್ಕೆ ದಾಸನೆನಿಸೀಪಂಚ ಭೇದವು ತಿಳಿಯದಾ ಆ ವಿಪ್ರಪಂಚ ಮಹಾ ಪಾತಕಿಯೋ3 ನಾರದಾನೆಂಬವನನೂ ಕುಲದಲ್ಲಿಆರೆಂದು ತಿಳಿಯೊ ನೀನು ನಮ್ಮನಾರಾಯಣನ ಸ್ಮರಿಸಲು ನೀಚ್ಯೋನಿಮೀರಿ ಸುರಮುನಿಯಾದನೋ 4 ವಿದುರ ವಾಲ್ಮೀಕರ ನೋಡು ಅವರ ತುದಿಮೊದಲು ನೀ ತಿಳಿದು ನೋಡು ನಮ್ಮಮದನನಯ್ಯನ ಭಜಿಸಲು ಅವರೆಲ್ಲಸದಮಲಾರಾದುದರಿಯಾ 5 ಜಾತಿ ಕಾರಣವಲ್ಲವೋ ಶ್ರೀ ಹರಿಗೆಭೂತಿ ಕಾರಣವಲ್ಲವೋ ||ಸ್ವಾತಂತ್ರ್ಯವನ್ನು ಮರೆದು ಶ್ರೀ ಹರಿಯಪ್ರೀತ್ಯಾಗಲೆನ್ನಬೇಕೋ 6 ಅನ್ಯ ಕರ್ತೃತ್ವ ಮರೆದು ಶ್ರೀ ಹರಿಗೆನಿನ್ನ ನಿನ್ನವನೆಂದಡೇತನ್ನ ದಾಸ್ಯವನೆ ಇತ್ತು ನಮ್ಮ ಮೋ-ಹನ್ನ ವಿಠ್ಠಲ ಸಲಹುವಾ 7
--------------
ಮೋಹನದಾಸರು
ಆವ ಜನ್ಮದ ಪುಣ್ಯ ಫಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ಪ ಭವರಾಸಿಗಳು ಹಾರಿ ಬಯಲಾದವು| ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ | ಪರಿ ಶುದ್ಧನಾದೆ ಗುರು ಕರುಣದಲೀ1 ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ | ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು | ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ 2 ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ | ಸೋಜಿಗವು ಬಲು ತೀವ್ರದಲಿ 3 ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ | ಅಕ್ಷಯವಾಗುವದು ಇದ್ದ ಪುಣ್ಯ | ಮಾಳ್ಪ ಮನಸು ಪುಟ್ಟಿತು ನೋಡಾ4 ಓದನವು ಉದರದಲಿ ತುಂಬಲಾಕ್ಷಣದಲ್ಲಿ | ಜ್ಞಾನ ಬಂದೊದಗುವದು ಗುರು ಪೂರ್ಣ | ಬೋಧರಾ ಮತದಲ್ಲಿ ಲೋಲಾಡುವಾನಂದಾ 5 ದಧಿ ತಕ್ರ ಮೊದಲಾದ ವ್ಯಂಜನ ಉಣಲು | ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ | ರತಿಪತಿಪಿತನ ಪದಸೇವೆಯೊಳಗಿಪ್ಪವೊ 6 ಕೃಷ್ಣ ಸಂದರುಶನ ಮೃಷ್ಟಾನ ಭೋಜನ | ಇಷ್ಟ ಸುಖ ಸೌಖ್ಯಕರ ಮತ್ತಾವÀಲ್ಲಿ ಕಾಣೆ | ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ 7
--------------
ವಿಜಯದಾಸ
ಆವ ತಾ ಸುಖವೊ ಮತ್ತಾವನಂದವೊ | ಈ ಉಡುಪಿ ಯಾತ್ರಿ ಮಾಡಿದ ಮನುಜಗೆ ಪ ಮನದೊಳಪೇಕ್ಷಿಸೆ ಅವನೀಗ ಹದಿನಾಲ್ಕು | ಮನುಗಳು ಭೂಮಿ ಆಳುವ ತನಕಾ | ಕನಕ ರಜತಪೀಠ ಗೋಕುಲದಿಂದ | ಸ | ಜ್ಬನ ಮಾರ್ಗದಲ್ಲಿ ಗುಣವಂತ ನೆನೆಸುವ 1 ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ | ಅಂದೆ ಸುರರೊಳು ಗಣನೆ ಎನ್ನಿ | ಒಂದಕ್ಕೆ ನೂರಾರು ಯಾಗ ಮಾಡಿದ ಫಲ | ತಂದು ಕೊಡುವ ಅಜನಾದಿ ಕಲ್ಪ ಪರಿಯಂತ2 ಅರ್ಧ ಮಾರ್ಗವು ಬರಲು ಬಂದೆ ದಿವಸದಲ್ಲಿ | ಸಾಧರ್À ತ್ರಿಕೋಟಿ ದೇವತೆಗಳಲಿ | ಊಧ್ರ್ವರೇತಸನಾಗಿ ಮಿಂದ ಫಲವಕ್ಕು | ಪರಿಯಂತ 3 ಕ್ಷೇತ್ರದ ಬಳಿಗಾಗಿ ಬರಲು ಅವನ ಏಳು | ಗೋತ್ರ ನೂರೊಂದು ಕುಲದವರು | ಗಾತ್ರವ ಮರೆದು ರೋಮಾಂಚನದಿಂದಲಿ | ಪಾತ್ರವನಾಡೋರು ಮೋಕ್ಷಮಾರ್ಗವ ಸಾರಿ4 ಕರವ ಜೋಡಿಸಿ ನಿಂದು | ಸನ್ನುತಿಸಿ ದರ್ಶನ ಮಾಡಲು | ಕರವ ತಿಳಿದು ಜ್ಞಾನ ಭಕುತಿ ಸಂ | ಪನ್ನ ವಿರುಕುತಿಲಿ ಗತಿಗಭಿಮುಖನಾಹ 5 ಮಧ್ವ ಸರೋವÀರದಲ್ಲಿ ಸ್ನಾನವಗೈದು | ಸಿದ್ಧಾಂತ ಕರ್ಮಗಳನನುಸರಿಸೀ | ಶುದ್ಧಾತ್ಮ ಕೃಷ್ಣನ ದೇವಾಲಯವ ಸಾರೆ | ಪೊದ್ದಿದಾ ಸತ್ಯಲೋಕದ ಸಭೆಯೊಳಗೆ 6 ಕೃಷ್ಣ ಕೃಷ್ಣ ಯೆಂದು | ನವ ವಿಧ ಪೂಜೆಯನ್ನು | ದೃಷ್ಟಿಯಿಂದಲಿ ನೋಡೆ ಅವನೆ ಮುಕ್ತಾ | ಮುಟ್ಟಿ ಪೂಜಿಸುವರ ಸತ್ಪುಣ್ಯ ವಿಜಯ | ವಿಠ್ಠಲ ತಾ ಬಲ್ಲ ನರರೆಣಿಸಲಳವಲ್ಲಾ 7
--------------
ವಿಜಯದಾಸ
ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ಆವದೇವರಿಗುಂಟೀ ವೈಭವ ಪ ಸಾರ್ವಭೌಮ ನೀನೆ ಸಕಲ ಭಾವಜನಯ್ಯ ಅ.ಪ ಸಿರಿಯರೆಂಟುಮಂದಿ ನಿನಗೆ ಅರಸಿಯರು ಕರುಣಶರಧಿ ಸುರರು ಮೂವತ್ತು ಮೂರು ಕೋಟಿ ಚರಣಸೇವಕರಯ್ಯ ಹರಿಯೆ1 ಅನುದಿನವು ಎಡೆಬಿಡದೆ ಮನು ಸುಜನ ಸಂತತಿ ಘನವೇದಘೋಷದಿಂದ ನೆನೆದು ಪೂಜಿಪರಪರಿಮಿತ ಲೀಲೆ 2 ಕೋಟಿಸೂರ್ಯಪ್ರಕಾಶ ನಿನ್ನ ಆಟ ಬಲ್ಲವರಾರು ಜಗದಿ ಆಟವಾಡುವಿ ಅಗಮ್ಯಚರಿತ ಸಾಟಿಯಿಲ್ಲದೆ ಧನವ ಕಲಸಿ 3 ಕರೆಸಿ ಅಸಮಭಕುತ ಜನರ ವರವ ನೀಡಿ ಮುಡಿಪುಗೊಂಡು ಮೆರೆವಿ ಪರಮ ಉತ್ಸವದೊಡನೆ ಗಿರಿಯ ಭೂವೈಕುಂಠಮೆನಿಸಿ 4 ಕಿಂಕರ ಜನರ ಪೊರೆಯಲೋಸುಗ ವೆಂಕಟಾದ್ರಿಯಲ್ಲಿ ನಿಂದಿ ವೆಂಕಟೇಶ ಕಿಂಕರಜನರ ಸಂಕಟಹರ ಶ್ರೀರಾಮಪ್ರಭೋ 5
--------------
ರಾಮದಾಸರು