ಒಟ್ಟು 565 ಕಡೆಗಳಲ್ಲಿ , 71 ದಾಸರು , 383 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಷಟ್ಪದಿ ಭೃಂಗ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1 ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2 ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3 ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4 ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6 ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7 ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8 ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9 ತಿರುಗುತಲಿಹರು ತಮ್ಮಯ ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1 ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11 ಸೂತ್ರ ಖರೆ 12 ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13 ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14 ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16 ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17 ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18 ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19 ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20 ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
--------------
ಕೃಷ್ಣವಿಠಲದಾಸರು
ಷಷ್ಠಿಯ ದಿವಸ (ಶ್ರೀ ವೆಂಕಟೇಶನ ಅವಭೃಥ ಸ್ನಾನ) ರಂಭೆ :ಸಖಿಯೆ ಕೇಳೀಗ ಸಲುಗೆವಂತಳೆ ಮುಕುತಿದಾಯಕ ಮೂಲಪುರುಷಗೆ1 ಭೇರಿಶಬ್ದವು ನಗಾರಿಘರ್ಜನೆ ಮೌರಿತಾಳವು ಮೃದಂಗಶಬ್ದವು 2 ಉದಯಕಾಲದಿ ಒದಗಿ ಭಕುತರು ಪದುಮನಾಭನ ಪಾಡಿ ಪೊಗಳ್ವರು3 ಭೂರಿಮಂಗಲಕರದ ಶಬ್ದವು ಸೇರಿ ಕಿವಿಯೊಳು ತೋರುವುದಲ್ಲೆ4 ನಿದ್ದೆಬಾರದು ನಿಮಿಷಮಾತ್ರಕೆ ಎದ್ದು ಪೇಳೆಲೆ ಏಣಲೋಚನೆ5 ಸುಮ್ಮನೀನಿರು ಸುಳಿಯಬೇಡೆಲೆ ಎಮ್ಮುವುದು ನಿದ್ರೆ ಏನ ಪೇಳಲಿ6 ಬೊಮ್ಮಸುರರಿಗು ಪೊಗಳತೀರದು ತಿಮ್ಮರಾಯನ ಮಹಿಮೆ ದೊಡ್ಡಿತು7 ನಿನ್ನೆ ದಿವಸದ ನಿದ್ರೆವಿಹುದೆಲೆ ಕಣ್ಣಿಗಾಲಸ್ಯ ಕಾಂಬುವದಲ್ಲೇ8 ಬಣ್ಣಿಸುವದೆಲೆ ಬಹಳವಿಹುದಲೆ ಪನ್ನಗವೇಣಿ ಪವಡಿಸೆ ನೀನು9 ಏಳು ಏಳಮ್ಮ ಅಲಸ್ಯವ್ಯಾತಕೆ ಕಾಲಿಗೆರಗುವೆ ಹೇಳಬೇಕಮ್ಮ10 ಜಯಜಯ ವಾಧಿಶಯನ ಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ1 ಗಂಧಕಸ್ತೂರಿಪುಣುಗಚಂದನಪನ್ನೀರುಗಳ ಹೊಂದಿಸಿ ತೋಷದಿ ಮಂದರಧರಗೆ2 ಆಕಾಶರಾಯನ ಮಗಳು ಹರುಷದಿಂದೊಡಗೂಡಿ ಶ್ರೀಕರ ವೆಂಕಟಪತಿಯು ಸರಸವಾಡಿ3 ಮಾಧವ ಸಹಿತಲಿ ಸಾದರದಿಂದಲಿ ಸರಸವಾಡಿ4 ಬಡನಡು ಬಳುಕುತಲಿ ಎಡಬಲದಲಿ ಸುಳಿದು ಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ5 ಛಲದಿ ಪದ್ಮಾವತಿಯು ಜಲಜನಾಭನ ಮೇಲೆ ಒಲವಿನಿಂದಲಿ ಬಂದು ಚೆಲ್ಲಿದಳಾಗ6 ಭರದಿ ಶ್ರೀದೇವಿಯು ಸರಸಿಜಮುಖದಲ್ಲಿ ಪರಮ ಸುಸ್ನೇಹದಿ ಬೆರಸಿದಳಾಗ7 ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆ ಮೋದದಿಂದಲಿ ಬಂದು ಚೆಲ್ಲಿದಳಾಗ8 ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯು ವೃತ್ತಕುಚವ ನೋಡಿ ಚೆಲ್ಲಿದನಾಗ 9 ಝಣಝಣಾಕೃತಿಯಿಂದ ಮಿನುಗುವಾಭರಣದ ಧ್ವನಿಯ ತೋರುತ ಬಲು ಸರಸವಾಡಿ10 ಓಕುಳಿಯಾಡಿದ ನೀರಾನೇಕಭಕ್ತರು ಮಿಂದು ಏಕಮಾನಸರಾಗಿ ಪೊರಟರು ಕಾಣೆ11 * * * ಆಡಿದರೋಕುಳಿಯ ಶರಣರೆಲ ಆಡಿದರೋಕುಳಿಯಪ. ಕಾಡುವ ಪಾಪವ ಓಜಿಸಿ ಹರಿಯೊಳ- ಗಾಡಿ ನಿತ್ಯಸುಖ ಬೀಡಿನ ಮಧ್ಯದಿ1 ಅಬ್ಬರದಿಂದಲಿ ಉಬ್ಬಿ ಸಂತೋಷದಿ ಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2 ಚೆಂಡು ಬುಗರಿನೀರುಂಡೆಗಳಿಂದಲಿ ಹಿಂಡು ಕೂಡಿ ಮುಂಕೊಂಡು ಪಿಡಿಯುವರು3 ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ- ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ4 ರಂಭೆ : ನಾರಿ ಕೇಳೀಗ ಭೂರಿಭಕುತರು ಶ್ರೀರಮಾಧವ ಸಹಿತ ಬಂದರು1 ಭಾವ ಶ್ರೀಹರಿ ಪ್ರತಿರೂಪದೋರುತ ದೇವ ತಾನೆ ನಿದ್ರ್ವಂದ್ವನೆನ್ನುತ 2 ಹೇಮಖಚಿತವಾದಂದಣವೇರಿ ಪ್ರೇಮಿಯಾಗುತ ಪೊರಟು ಬರುವನು 3 ವಲ್ಲಭೆಯರ ಕೂಡಿ ಈ ದಿನ ಫುಲ್ಲನಾಭನು ಪೊರಟನೆತ್ತಲು4 ಊರ್ವಶಿ : ನಾರಿ ನೀ ಕೇಳಿದರಿಂದ ಈಗ ಭೂರಿಭಕುತರಾನಂದ ಶ್ರೀರಮಾಧವ ಮಿಂದ ನೀರಿನೊಳಾಡುತ್ತ ಓರಂತೆ ತುಳಸಿಮಾಲೆಯ ಧರಿಸುತ್ತ ಭೇರಿಡಂಕನಗಾರಿಶಬ್ದ ಗಂ- ಭೀರದೆಸಕವ ತೋರಿಸುತ್ತ ವೈ- ಯಾರದಿಂದಲಿ ರಾಮವಾರ್ಧಿಯ ತೀರದೆಡೆಗೆಲೆ ಸಾರಿ ಬಂದರು1 ವರದಭಿಷೇಕವ ರಚಿಸಿ ಬಕು- ತರ ಸ್ನಾನವನನುಕರಿಸಿ ಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡು ತ್ವರಿತದಿ ನಗರಾಂತರಕನುವಾದನು ಬರುತ ದಿವ್ಯಾರತಿಗೊಳ್ಳುತ ಚರಣ ಸೇರಿದ ಭಕ್ತರಿಷ್ಟವ ನಿರುತ ಪಾಲಿಸಿ ಮೆರೆವ ಕರುಣಾ- ಕರ ಮನೋಹರ ಗರುಡವಾಹನ2 ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆ ಕರವ ಮುಗಿಯುತ್ತಕೈಯ ತೋರುತ1 ಪರಮಪುರುಷ ಗೋವಿಂದ ಎನುತಲಿ ಹೊರಳುತುರಳುತ ಬರುವದೇನಿದು2 ಊರ್ವಶಿ :ಅಂಗದಾಯಾಸವೆಲ್ಲವನು ಪರಿ- ಭಂಗಿಪ ಸೇವೆಯೆಂಬುದನು ಅಂಗಜಪಿತಚರಣಂಗಳ ರಜದಲಿ1 ಹೊಂಗಿ ಧರಿಸಿ ಲೋಟಾಂಗಣ ಎಂಬರು ರಂಗನಾಥನ ಸೇವೆಗೈದ ಜ- ನಂಗಳಿಗೆ ಭಯವಿಲ್ಲವದರಿಂ- ದಂಗವಿಪ ಲೋಲೋಪ್ತಿ ಕೋಲಾ- ಟಂಗಳನು ನೀ ನೋಡು ಸುಮನದಿ2 ಕೋಲು ಕೋಲೆನ್ನಿರೊ ರನ್ನದ ಕೋಲು ಕೋಲೆನ್ನಿರೊಪ. ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದ ಲೀಲೆಗಳಿಂದ ಜನಜಾಲಗಳೆಲ್ಲರು1 ಗುಂಗಾಡಿತಮನನ್ನು ಕೊಂದು ವೇದವ ತಂದು ಬಂಗಾರದೊಡಲನಿಗಿಟ್ಟನು ನಮ್ಮ ದೇವ2 ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತು ಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ3 ರೂಢಿಯ ಕದ್ದನ ಓಡಿಸಿ ತನ್ನಯ ದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ4 ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದು ಬಂಗಾರಕಶ್ಯಪುವಂಗವ ಕೆಡಹಿದ5 ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ- ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ6 ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದು ಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ7
--------------
ತುಪಾಕಿ ವೆಂಕಟರಮಣಾಚಾರ್ಯ
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂತಸ ಕೊಡು ದೇವ ಈ ಮನಕೆ ಕಂತುಪಿತ ನಿಮ್ಮ ಧ್ಯಾನೆನ್ನಂತರಂಗಕ್ಕೆ ಇತ್ತು ಪ ಪರಮಪುರುಷ ತವ ಚರಣಸೇವೆಯ ನೀಡಿ ಪರಿಭವ ದು:ಖವ ಪರಿಹರಿಸಭವ1 ಶರಧಿಸಂಸಾರ ಸ್ಥಿರಮಾಯಕಾರ ತ್ವರಿದದಿಂದೆನ್ನೊಳು ಕರುಣವ ತೋರೊ 2 ದೋಷದೂರನೆ ಎನ್ನ ದೋಷ ವಿನಾಶಿನಿ ಶ್ರೀಶ ಶ್ರೀರಾಮ ನಿನ್ನ ದಾಸನೆನಿಸೊ ಎನ್ನ 3
--------------
ರಾಮದಾಸರು
ಸತ್ಯಧರ್ಮ ಸದ್ಗುರುವರ ರಕ್ಷಿಸು ಪ ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ ವೆತ್ತಣಿಸದೆ ಕೃತಕೃತ್ಯನ ಮಾಡಿಂದು ಅ.ಪ ಸತ್ಯವರರ ವರ ಕುವರನೆ ನೀನತ್ಯುತ್ತಮ ಸುಖ ಚಿನ್ನ ಯತ್ಯಾಶ್ರಮ ಸದ್ಧರ್ಮಾಚರಣದಿ ನಿತ್ಯಾರ್ಜಿತ ರಾಮ ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ ಕೃತಕೃತ್ಯರ ಮಾಡುತಲಿ ಸುನಾಮ ಯಥಾರ್ಥಪಡಿಸಿ ಕ್ಷಿತಿಗುತ್ತಮನೆಸಿದ 1 ಭದ್ರಾತೀರನೆ ಇತ್ತು ಸುಭದ್ರಗಳ್ ನಿದ್ರಾರಹಿತರಿಗೆ ಆದ್ರಾಂತಃಕರುಣನೆ ಸೌಹಾರ್ದದಿ ಭದ್ರಾರಮಣನಲಿ ಛಿದ್ರರಹಿತ ಶಿಲೆ ಮಧ್ಯದಿ ಪಡೆದು ಸುಭದ್ರಾಪತಿ ಸಖ ಮುದ್ರಾಧರನೆ 2 ಶ್ರೀ ನರಹರಿ ಪದ ನೀನನುದಿನದಲಿ ಧ್ಯಾನಮಾಡುತ ಬಾಹ್ಯ ಜ್ಞಾನವಿಲ್ಲದೆ ಅನುಮಾನ ವಿಪರ್ಯಯ ಹೀನಗೈಸಿ ಸಾಕ್ಷಿ ಮಾನದಿಂದ ಕೊಟ್ಯಾರ್ಭುದ ರವಿಪ್ರಭೆ ಕಾಣುತ ಪ್ರತಿಮುಖವೋಲ್ ಏನು ಇದಕೆ ಅನುಮಾನವಿಲ್ಲ ಹಂ ಮನಿಯವನೆನ್ನುವೆ ನೀ ಸರಿಲಿಂಗರೂಪಧರ3
--------------
ಪ್ರದ್ಯುಮ್ನತೀರ್ಥರು
ಸನ್ನುತ ಶ್ರೀರಾಮ ಪ ಭೂಲಲಾಮ ಪಾವನಕರ ನಾಮಾ ಕಾಲಕರ್ಮಕಾರಣ ಭವಭೀಮ ಅ.ಪ ಕುಶಿಕ ಮಹಾಧ್ವರ ರಕ್ಷಕ ನಾಮ ಸನ್ನುತ ರಾಮ ನಿಶಿಚರ ತಾಟಕಾ ಮರ್ದನ ರಾಮ 1 (ದೀನನೆನ್ನ ಕಾಯೊ ಶ್ರೀರಾಮ) 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತೆ ಶಂಕರಿ ದೇವಿ ಪ ನಿನ್ನ ನಾಮಂಗಳನು ನುತಿಸುವೆ || ಎನ್ನುತೆರಗುವ ದೀನನೆನ್ನೊಳುಅ.ಪ. ಆದಿಮೊದಲು ಮಧು ಕೈಟಭರನು ಸೀಳಿ | ಮೇದಿನಿಯನು ಪೊರೆದವಳು | ದೇವಿ ಮೇದಿನಿಯನು ಪೊರೆದವಳು || ಕ್ರೋಧದಿಂದಲಿ ಮಹಿಷ ವದನನ | ಭೇದಿಸಿದೆ ನೀ ಧೂಮ್ರಲೋಚನ ಕಾದಿ ಗೆಲಿದಿಹ ದೇವಿ ಎನ್ನೊಳು 1 ರುಧಿರ ರುಧಿರವ ಹೀರುತಲಿ || ದೇವಿ | ರುಧಿರವ ಹೀರುತಲಿ || ಸದೆದು ಮಹಿಯೊಳು ಕೆಡುಹುತವನನು | ಪದುಮಲೋಚನೆ ದೇವಿ ಎನ್ನೊಳು 2 ಶುಂಭದೈತ್ಯರ ಮರ್ದಿಸಿದೆ ನೀ | ಮಣಿಯುವ ದೀನನೆನ್ನೊಳು 3 ಭ್ರಮರ ರೂಪದಿ | ಚರಣ ಸ್ಮರಿಸುವನಾಥನೆನ್ನೊಳು4 ನೆಷ್ಟೆಂದು ಸಹಿಸಲಿ ದೇವಿ | ನಾನಿ | ನ್ನೆಷ್ಟೆಂದು ಸಹಿಸಲಿ ದೇವಿ || ದುಷ್ಟನಾಶಿನಿ ಶಿಷ್ಟ ಪಾಲಿನಿ || ಅಷ್ಟವಿಧ ಸೌಭಾಗ್ಯದಾಯಿನಿ | ಭೀಷ್ಟವನುಕೊಡು ಎಂದು ಬೇಡುವೆ 5
--------------
ವೆಂಕಟ್‍ರಾವ್
ಸರಳಕವಿ ರಾಮಾರ್ಯ ಹರುಷದಿ ವಿರಚಿಸಿದ ವರವೆಂಕಟೇಶನ ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು ನರರ ಭಕ್ತಿಯ ಪೆರ್ಚಿಸಲ್ಕಿದು ಕರದ ದಿವ್ಯಜ್ಯೋತಿಯಪ್ಪುದು ಬರೆದಕವಿಯಾಸೂರಿವಂಶದ ಶರಧಿಚಂದಿರನು 1 ಭರತಭಕ್ತಿ ಯೆನಿಪ್ಪ ಚರಿತೆಯ ಬರೆದು ತಾನೇ ಭರತನಾಗಿಹ ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ ಸರಸ ಸರಳತೆ ಲಲಿತಪದಗಳ ಶರಧಿಯಪ್ಪುದು ಕಾವ್ಯಮಿದನಾ ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ 2 ಕವಿ ವಿಶಿಷ್ಠಾದ್ವೈತತತ್ವೋ ದ್ಭವನು ಹರಿಹರ ಭೇದರಹಿತನು ನವರಸಾಲಂಕೃತಯುತ ಗೋಕರ್ಣ ಮಹಿಮೆಯನು ಶಿವನ ಸನ್ನುತಿಗೈದು ರಚಿಸುತೆ ಭುವಿಯ ರಕ್ಷಣೆಗೈವ ಶಿವಕೇ ಶವರ ನಾಮವನೇಕ ವೊಬ್ಬನೆ ದೈವತಾನೆಂಬ 3 ಭಕ್ತಿಕಾವ್ಯಂಗಳನು ರಚಿಸಿಹ ಭಕ್ತನೀತನ ವಹ್ನಿಪುರಕಾ ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ ಭಕ್ತಿಬೋಧಕ ಕೃತಿಗೆ ಮಂಗಳ ದುಕ್ತಿಯುತ್ಸವಕಾಗಿ ನಾವತಿ ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು 4 ಕೃತಿಯ ರಚನೆಗೆ ಮೋಹಗೊಂಡೆವು ಕೃತಿಯನೋದಿಸಿ ಕೇಳಿ ನಲಿದೆವು ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು ಕೃತಿಯ ಕರ್ತಗೆ ಮಣಿದು ಮಹದುಪ ಕೃತಿಯ ಗೈದಿಹಿರೆಂಬುದಲ್ಲದೆ ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು5 ಪರಮಭಕ್ತನಿಗಿಂದು ವಂದಿಸಿ ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು ಹರಿಯ ಪಾದಂಗಳಿಗೆ ವಂದಿಸಿ ವರಕವಿಗೆ 'ಕವಿರತ್ನ’ ನೆನ್ನುವ ಬಿರುದನೀವೆವು ಸರಳಕವಿವರನಿದನು ಕೈಗೊಳಲಿ 6 ಗಮಕಕೋಕಿಲನೆನಿಪ ಕೌಶಿಕ ನಮಲಕೃತಿವಾಚನವಗೈಯಲು ಅಮಿತಸಂತಸದಿಂದ ವಿವರಿಸುತಂತರಾರ್ಥಗಳ ಕ್ರಮದಿ ಪೇಳಲು ಸೂರ್ಯನಾರಣ ನಮಿತ ಹರ್ಷಾಂಬುಧಿಯೊಳಿಳಿಯುತೆ ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ7 ಆ ಮಹಾಮುನಿ ಸೂತನಂದದಿ ರಾಮಚರಿತಾಮೃತವ ರಚಿಸುತೆ ಆ ಮಹೇಶ್ವರನಾತ್ಮಲಿಂಗವು ಭೂಮಿಗಿಳಿದಾಕಥೆಯ ಕಾವ್ಯವ ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು8 ಸರಳಕವಿರತ್ನನಾಸೂರಿ ರಾಮಾರ್ಯತಾಂ ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ9
--------------
ಪರಿಶಿಷ್ಟಂ
ಸಲಹು ನಂದಕುಮಾರ ಸಲಹು ಗೋಪೀತನಯ ಸಲಹು ವಸುದೇವನಿಗೆ ಪುತ್ರನೆನಿಸಿದನೆಸಲಹು ದೇವಕಿ ಜಠರದಲಿ ಬಂದನೆನಿಸಿದನೆಸಲಹು ಶ್ರೀ ರಾಮ ಶ್ರೀಕೃಷ್ಣ ಜಯ ಕೃಷ್ಣ ಸಲಹು ಸಲಹೂ ಪನಂದನೆನೆ ಸಕಲ ಸಂಪತ್ತ ಸೂಚಿಸುತಿಹುದುಚಂದದಿಂದಣಿಮಾದಿ ಸಿದ್ಧಿುರಲಾಗಿಬಂದವಿದ್ಯೆಯು ಮುಚ್ಚಲಾ ಶಕ್ತಿ ಕುತ್ಸಿತವುಹಿಂದುಗಳೆವದರಿಂದ ನಂದನಕುಮಾರ 1ಜ್ಞಾನಶಕ್ತಿಯು ತಾನು ಗುಪ್ತವಾಗಿರಲಾಗಿಧ್ಯಾನಿಸುವ ಭಕ್ತರಿಗೆ ವಿಸ್ತರಿಸಿ ಕೊಡಲುನೀನು ಗೋಪೀತನಯನೆಂಬ ನಾಮವ ತಾಳ್ದೆದೀನರಕ್ಷಾಮಣಿಯೆ ಜ್ಞಾನದಾಯಕನೆ 2ವಸುವೆನಲು ಪರಿಶುದ್ಧವಾದ ಕರಣದ ಪೆಸರುಎಸೆದು ನೀನಿರಲಲ್ಲಿ ದೇವನೆನಿಸುವದುಅಸಮ ತೇಜದಿ ಪುರುಷನೆನಿಸಿ ಸಲಹಲು ಜಗವವಸುದೇವಪುತ್ರನೆನಿಸಿತು ನಿನ್ನ ನಾಮ 3ದೇವಕಿಯು ನಿನ್ನ ಬಗೆ ಮಾಯೆ ಬ್ರಹ್ಮಾಂಡಗಳಭಾವಿಸಲು ನೀನದನು ಕುಕ್ಷಿಯೊಳಗಿರಿಸಿಸಾವಧಾನದಿ ಸಕಲದೊಳು ಸತ್ಯನಾಗಿರಲುದೇವಕಿಯ ಜಠರದಲಿ ಬಂದನೆನಿಸಿದನೆ 4ನಿತ್ಯದಲಿ ಯೋಗಿಗಳು ನಿನ್ನಲ್ಲಿ ರಮಿಸುತಿರೆಪ್ರತ್ಯಕ್ಪ್ರಕಾಶದಲಿ ಜಡಪದಾರ್ಥಗಳುಅತ್ಯಂತ ರಮಣೀಯವಾಗಿಯದರೊಳು ಜನರುನಿತ್ಯ ರಮಿಸಲು ರಾಮನೆನಿಪ ಶ್ರೀ ಹರಿಯೆ 5ಮೂರು ವರ್ಣದ ನಾಮ ಮುನಿವಂದ್ಯ ನಿನಗಿರಲುಸಾರುವುದು ಸದ್ರೂಪನೆಂದೆರಡು ವರ್ಣಮೂರನೆಯ ವರ್ಣವಾನಂದಮಯನೆನ್ನುತಿದೆಈ ರೀತಿಯಲಿ ನೀನು ಕೃಷ್ಣನೆನಿಸಿದನೆ 6ಪರಮಾತ್ಮ ನೀನಾಗಿ ಪರಿಪರಿಯ ರೂಪಿನಲಿಸುರಮುನೀಶ್ವರ ಭಾವ್ಯ ಚರಿತನೆಂದೆನಿಸಿತಿರುಪತಿಯ ವಾಸವನು ಸ್ಥಿರವಾಗಿ ನಿರ್ಧರಿಸಿುರುವ ವೆಂಕಟರಮಣ ಕರುಣರಸಪೂರ್ಣ 7ಓಂ ಯಶೋದಾವತ್ಸಲಾಯ ನಮಃ
--------------
ತಿಮ್ಮಪ್ಪದಾಸರು
ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ 1 ವಾಗತ್ಯಪಡುವದೆ ವಿಧಿನಿಷೇಧಾರಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುವುದೆ ಆರ್ಶೀವಾದ ಬೀಗುರುಪಚಾರವೇ ಭೂತದಯವು 2 ಮೈಮರೆತು ಮಲಗುವುದೆ ಧರಣಿ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೋಯ್ಯಾಲಿತನವೆಲ್ಲ ಹರಿಯ ವಿಹಾರ 3 ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನವು ಬರಲದೇ ಭಗವದ್ಭಜನೆಯೋಗ ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ 4 ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು ಯದೃಚ್ಛಾಲಾಭವೇ ಸುಖವುಯೆನಲು ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ 5
--------------
ವಿಜಯದಾಸ
ಸಿಕ್ಕದೆ ಪೋಪೆಯೇತಕೆ ಮಾಂಗಿರಿರಂಗ ಪ ಸಿಕ್ಕದೆ ಪೋಪೆಯೇಕೆ ಠಕ್ಕುಮಾಡುವೆಯೇಕೆ ಅಕ್ಕರೆಯಿಂದ ನಾ ಸಕ್ಕರೆ ಕೊಡುವೆನೆ ಅ.ಪ ಚಿಣ್ಣರ ಕೂಡಾಡಿ ಕಣ್ಣುಸನ್ನೆಯ ಮಾಡಿ ಸಣ್ಣಕೊಳಲಪಾಡಿ ಬೆಣ್ಣೆಗಳ್ಳ ರಂಗಾ1 ಪಿಡಿದು ಬರುವೆನೆಂದು ಕಡಲಿನೊಳಗೆ ಮಿಂದು ಪೊಡವಿದೇವಿಯ ತಂದು ಕಡುನೊಂದುದಾಯ್ತಿನ್ನು 2 ತರಳ ಪ್ರಹ್ಲಾದನು ಕರೆಯುತಲಿಹನೇ ನಿನ್ನ ಕರದೆ ಬೆಣ್ಣೆಯನಿಟ್ಟು ಕರುಣಾಳು ಬಾರೆನಲ 3 ಕಡುನುಡಿಗಳ ಕೇಳಿ ಪಿಡಿಯಲಾರೆನೇ ನನ್ನ ಕಡೆಗಣಿಸಲಿ ಬೇಡ ಅಡಿಗೆರಗುವೆ ರಂಗಾ 4 ಮಾಂಗಿರಿಮೇಗಿಹ ಶೃಂಗಾರ ದೇವಯ್ಯ ರಂಗ ನೀನೆನ್ನಂತರಂಗ ದೇವದೇವಾ 5 ತಾಮರಸಾಕ್ಷನೆ ಕಾಮಿತ ದಾತನೆ ರಾಮದಾಸಾರ್ಚಿತ ಭೀಮವಿಕ್ರಮ ರಂಗಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು ತ್ವರದಿ ಉದ್ಧರಿಸೋ ಈ ಭವದಿ ಬೇಗಾ ಪ ಪೊಟ್ಟಿಯೊಳಿರುವ ಶಿಶು ಕಷ್ಟವನೆ ಕೊಡಲು ಸಹ ಕೆಟ್ಹೋಗಲೆಂದು ತಾ ಬಯಸಳು ಸೃಷ್ಟಿ ನಿನ್ನೊಳಗಿರಲು ಹೊಟ್ಟೆಯೊಳಗಿರುವೆನು ಅಷ್ಟು ತಪ್ಪೇನು ಕ್ಷಮಿಸಿ ಪೊರೆವುದಾ ತೆರದಿ 1 ಜ್ಞಾನವಿಲ್ಲದೆ ಹರಿಯೇ ನಾನು ನೀನು ಸರಿಸ- ಮಾನರೆಂದರಿತು ನಾ ಮೋಸ ಹೋದೆ ನಾನು ನಿನ್ನಾಧೀನವಿರುವೆನೇ ಹೊರ್ತು ನೀ ನೆನ್ನಧೀನನೆಂದಿಗೂ ಅಲ್ಲವೊ ದೊರೆಯೇ 2 ಏಸು ಜನ್ಮಗಳಿಂದ ವೇಷವಾ ಧರಿಸಿ ಹನು- ಮೇಶ ವಿಠಲನೆ ನಾ ತೋರಿಸಿದೆನೋ ಕೇಶವಾ ಕೊಡು ನೀ ಸಂತೋಷವಾಗಿರೆ ಮುಕ್ತಿ ಬೇಸರಾಗಿರೆ ಇನ್ನು ವೇಷವನು ಬಿಡಿಸೊ 3
--------------
ಹನುಮೇಶವಿಠಲ
ಸುಖಖರ ನೀನೆನ್ನುತಾ ಸೂರಿಗಳು ಭಜಿಸುವರೊ ನಿನ್ನ ಪ ಭವಭಯಗಳನೀಡಾಡುತ ಪಾಪರಹಿತರಾಗಿಹರು ಅ.ಪ ಭೂತದಯೆ ಪಶ್ಚಾತ್ತಾಪವಿಖ್ಯಾತಿಯಶೋದಾನ ನೀತಿಮನಃ ಪ್ರೀತಿಧ್ಯಾನ ನಿತ್ಯಾನುಸಂಧಾನ ಶ್ರೀ ತರುಣಿವರ ಪ್ರಾಣಿ ವ್ರಾತಗಳಿಗೆ ಕರ್ತನು ಯಂ ದಾತುರವಿಲ್ಲದೆ ಸರ್ವದ ಜಾತಿ ಧರ್ಮಾಚಾರದಲ್ಲಿ 1 ತನ್ನಂತಿತರರ ನೋಡುತ ಮನ್ನಣೆಯಲಿ ಸತತ ನನ್ನದು ನಾನೆಂಬುದ ಬಿಟ್ಟನ್ಯರ ನಿಂದಿಸದಲೆ ಹರಿ ನಿನ್ನಾಜ್ಞೆಯೊಳಾದುದೆಲ್ಲ ನಿನಗೆ ಸಮರ್ಪಣೆಗೈಯ್ಯುತಾ 2 ಮತಿಗೆಡದೆ ಎಚ್ಚರಿಕೆಯಿಂ ಸುಮಾರ್ಗದಿ ಸಮ್ಮುದದಿ ಪ್ರತಿ ದಿನದಲಿ ಶೃತಿ ಸ್ಮøತಿ ಸಂಮತದಿ ಸತ್ಸಂಗದಿ ಸೀತಾ- ಪತಿ ಗುರುರಾಮ ವಿಠಲ ಯಂದತಿಶಯದಲಿ ಚಿಂತಿಸುತ3
--------------
ಗುರುರಾಮವಿಠಲ
ಸೋತುಹೋಗಣ್ಣ ಮಾತುಬಂದಲ್ಲಿ ಜಾಣನಾಗಿ ಸೋತುಹೋಗಣ್ಣ ಮಾತುಬಂದಲ್ಲಿ ಪ ಸೋತುಹೋಗದೆ ಮಾತುಮಾತಿಗೆ ವಾದಿಸಲ್ಕೆ ಘಾತಕತನದ್ವಿಧಿಯು ಬಂದು ಆತುಕೊಂಡು ಕೂತುಕೊಳ್ವುದು ಅ.ಪ ಸೋತೆನೆನ್ನಲು ನಾಚಬೇಡಣ್ಣ ದೇವರು ಕೊಟ್ಟಿಹ್ಯ ಖ್ಯಾತಿಯೇನು ಹೋಗೋದಿಲ್ಲಣ್ಣ ಸುಳ್ಳಲ್ಲವಣ್ಣ ಸೋತೆನೆಂಬುದು ಜಯದ ಮಾತಣ್ಣ ಸತ್ಯ ತಿಳಿಯಣ್ಣ ನೀತಿಗಡಕರ ಮಾತಿನ ತಳ್ಳಿಗೋತ ಕುಣಿಯೊಳೆಳೆವ ಬಳ್ಳ್ಯೆಂದು ಮಾತನಾಡದೆ ಸುಮ್ಮನ್ಹೋಗಲು ನೀತಿವಂತರು ಮೆಚ್ಚುತಾರ 1 ದುಡುಕುಮಾತಿಗೆ ಮಿಡುಕಬೇಡಣ್ಣ ಸತ್ಯದ್ಹೇಳುವ ದೃಢತರ್ವಚನದ ಅಡಕು ತಿಳಿಯಣ್ಣ ಪಡಕೊ ಸುಖವಣ್ಣ ನೀ ತೊಡರಿಕೊಂಡರೆ ತಪ್ಪದು ಕಡೆಯತನಕ 2 ಸೋತೆನೆನದ್ಹತ್ತುವದನಂದೇನಾಯ್ತು ಸೋತು ಓಡಿದ ನೀತಿವಂತ ವಿಭೀಷಣಂದೇನಾಯ್ತು ಮತ್ತು ನಳರಾಜ ಸೋತ ರಾಜ್ಯ ಭಂಡಾರೆಲ್ಲ ಮುಳುಗಿತು ತಿಳಿ ನೀತಿ ಅರಿತು ಮಾತುಮಾತಿಗ್ವಾದಿಸಿ ಕುಲಘಾತಕ್ಕಾದನು ಕೌರವೇಂದ್ರನು ಸೋತಜನರಭಿಮಾನಿ ಶ್ರೀರಾಮ 3
--------------
ರಾಮದಾಸರು
ಸೋಮಶೇಖರ ತಾನೆ ಬಲ್ಲ ಶ್ರೀ-ರಾಮನಾಮಾಮೃತ ಸವಿಯನೆಲ್ಲ ಪ ಮದನಪಿತಾಯೆಂದು ಕುಣಿಕುಣಿದಾಡಲುಕೆದರಿದ ಕೆಂಜೆಡೆಗಳ ಪುಂಜದಿಒದಗಿದ ಗಂಗೆ ತುಂತುರು ಹನಿಗಳ ಕಂಡುಪದಮಜಾಂಡಹಿತ ರಾಮರಾಮಾ ಎಂಬ 1 ಆನಂದ ಜಲದ ಸೋನೆಗೆ ಲಲಾಟ-ದಾನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳುತಾನೆದ್ದು ಮುಳುಗುತ ರಾಮ ರಾಮಾಯೆಂಬ2 ಶಿರದ ಗಂಗೆಯ ವರ ಅಗ್ಗಣಿಯಾಗಿರೆಸರಸಿಜ ಬಾಂಧವ ಚೆಂದಿರ ದೀಪಉರಿಗಣ್ಣಿನ ಹೊಗೆ ಧೂಪವನೇರಿಸಿಕರಣವೆ ನೈವೇದ್ಯಯೆಂದು ರಾಮ ಎಂಬ 3 ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪಇಂದ್ರನೀಲದ ಚೆನ್ನಪುತ್ಥಳಿಯಂತೆಚಂದದಿ ತನ್ನಯ ಹೃದಯ ಮಧ್ಯದಿ ರಾಮ-ಚಂದ್ರ ಹೊಳೆಯೆ ಶ್ರೀ ರಾಮ ರಾಮ ಎಂಬ4 ಫಣಿ ಮಣಿಯಾಘಾತನಾದ ತಾಳವಾಗೆ ರಾಮ ರಾಮ ಎಂಬ 5 ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬಒಮ್ಮೆ ನಾರದ ಪಾಡೆ ತತ್ಥೈಯೆಂಬಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ6 ಅರಸಂಚೆಯ ಕಂಜ ಪುಂಜಗಳಲಿಪ್ಪಅರೆ ಮುಚ್ಚಿದ ಹದಿನೈದು ನೇತ್ರಗಳಿಂಹರಿಯ ಕೊಂಡಾಡುತ ಪಂಚ ಮುಖಗಳಿಂದಸಿರಿಕೃಷ್ಣ ಮುಕುಂದ ನರಹರಿ ರಾಮ ಎಂಬ7
--------------
ವ್ಯಾಸರಾಯರು