ಒಟ್ಟು 57925 ಕಡೆಗಳಲ್ಲಿ , 139 ದಾಸರು , 12496 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(6) ವೀರನಗೆರೆ (ಮೈಸೂರು) ಮೂರುತಿ ಮಾರುತಿರಾಯನೆ ಸಾರಗುಣಾನ್ವಿತ ಶ್ರೀರಘುರಾಮನ ಪ್ರಿಯ ಭಕ್ತ ಪ ಭಂಜನ ಖಿಲಭವ ರಂಜಿಪ ಮಾರುತಿ ಪೊರೆಯೆನ್ನ 1 ಹರಿಪದ ಕಮಲವ ನಿರುತವು ಪೂಜಿಪ ಉರುತರ ಪದವಿಯ ಕೊಡು ನನಗೆ 2 ವೀರನಗೆರೆ ಗುರು ಮಹಾಶೂರದೊರೆ ಸಾರುತ ಮಣಿವೆನು ಮರೆಯದಿರೈ 3 ಜಾಜೀಕೇಶವ ಸನ್ನಿಧಿ ಸೇವಕ ಮೂಜಗದೊಡೆಯಾ ಪೊರೆಯಯ್ಯಾ 4
--------------
ಶಾಮಶರ್ಮರು
(Iೂ) ಕ್ಷೇತ್ರ ವರ್ಣನೆ (1) ಶ್ರೀರಂಗ, ತಿರುಪತಿ, ಕಂಚಿ,ಮೇಲುಕೋಟೆ, ಹೆಜ್ಜಾಜಿ ಮಂಗಳವು ಶ್ರೀರಂಗ ಅಂಗನೆ ಮಣಿದೇವಿಗೆ ಪ ಅಂಗಿಯಾದ ಆದಿಶೇಷ ಉ- ತ್ತುಂಗ ವರ ವಿಭೀಷಣನಿಗೆ ಅ.ಪ ಸಪ್ತಗಿರಿ ಶ್ರೀನಿವಾಸ ಅಪ್ಪೀರ ಅಲರ್‍ಮೇಲಮ್ಮಗೆ ಗುಪ್ತವಾಗಿ ಉಭಯ ರಕ್ಷ ಸುಪ್ತ ಗೋವಿಂದರಾಜಗೆ 1 ಕಂಚಿ ವರದರಾಜನಿಗೆ ಮಂಚದ ಪೆರುನ್ದೇವಿಗೇ ಹೊಂಚಿ ಬ್ರಹ್ಮಯಜ್ಞದಲ್ಲಿ ಮಿಂಚುವ ದೇವರಾಜಗೇ 2 ಯದುಶೈಲ ಚೆಲ್ವರಾಯ ಮುದದಿ ಯದುಗಿರಿಯಮ್ಮಗೆ ಪಾದ ಸಂಪತ್ತೆ ಅದುಭುತರು ಯತಿರಾಜಗೆ 3 ಹೆಜ್ಜಾಜಿ ಕೇಶವನ ಪೀಠ ಅಜ್ಜ ಶ್ಯಾಮನ ವಿರಜೆಯಲ್ಲಿ ಮಜ್ಜನಗೈಸಿ ಸೇವೆಗಾಗಿ ಸಜ್ಜುಗೈದ ವೈಕುಂಠಕೆ 4
--------------
ಶಾಮಶರ್ಮರು
(ಅ) ಆತ್ಮನಿವೇದನಾ ಕೃತಿಗಳು ಏನು ಹೇಳಲಯ್ಯ ರಂಗ ಎಲ್ಲಿ ಹೋಗಲಯ್ಯ ನನ್ನಮನಸು ಮಂಗವಾಗಿ ದೂರ ತಳ್ಳಿಹುದಯ್ಯ ಪ ಎಲ್ಲೆಯಿಲ್ಲದ ಎನ್ನವನು ನೀ ಎಂತುನಿಂತಿಹೆ ಸುಮ್ಮನೆ ಎಲ್ಲವಾಗಿಕೂಡಿಕೊಂಡಿಹೆನಿನ್ನಚರಣಭರಿಸುಮಾಪತೇ ಕ- ಮಲಾಪತಿ ನೀ ಕರುಣದಿಂದಲಿ ನಡೆಸಲಾರೆಯಾ ನನ್ನನು ಅ.ಪ ನಡೆಯಲಾರದೆ ಕಾಲುಬಿದ್ದಿದೆ ಕೋಪಗೊಳ್ಳದೆ ಬಂದು ನನ್ನಲಿ ನಿಂತು ಸಲಹೈ ದೇವನೇ ಅಪ್ಪಶೆಲ್ವನೆ ನಿನ್ನ ಬಿಟ್ಟರೆ ಕಾದು ಕುಳಿತಿಹರಾರಯ್ಯ 1
--------------
ಸಂಪತ್ತಯ್ಯಂಗಾರ್
(ಅಃ) ಕಾಮದೇವ ಕರುಣದಿಂದಲಿ ಒಲಿದು ಕಂಡನಾತುರದಲಿ ಪ ಇಂದ್ರಸಮಾನ ದೇವತೆಯೆ ರತಿಪತಿಯೇ | ಮಾರ || ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ | ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1 ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ | ಮನದಲ್ಲಿ ಪುಟ್ಟಿಸೆ ಚತುರ ಜನರ || ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ | ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2 ತಾರಕಾಸುರನೆಂಬ ಬಹು ದುರುಳತನದಲ್ಲಿ | ಗಾರುಮಾಡುತಲಿರಲು ಸುರಗಣವನು || ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ | ಧಾರುಣಿಯೊಳಗೆ ಸ್ಕಂದನೆನಿಸಿದೆ 3 ಮತ್ಸ್ಯ ಉದರದಲಿ | ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು || ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ | ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4 ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ | ಮನೋ ವೈರಾಗ್ಯ ಚಕ್ರಾಭಿಮಾನಿ || ಎನಗೊಲಿದ ವಿಜಯವಿಠ್ಠಲರೇಯನಂಘ್ರಿ | ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
--------------
ವಿಜಯದಾಸ
(ಅ) ದೇವ; ದೇವತಾ ಸ್ತುತಿ ಗಣೇಶ ವಂದಿಸುವೆ ಮುದದಿಂದ ನಂದಿವಾಹನ ಸುತಗೆ ಪ ಬಂದ ದುರಿತವ ಕಳೆದಾನಂದವೀಯುತ ಮನಕೆಇಂದಿರೇಶನ ಚರಣದ್ವಂದ್ವ ತೋರೆಲೋ ಬೇಗ1 ಹೀನಜನರೊಡಗೂಡಿ ಕಾಣದಾದೆನು ಹಾದಿಸಾನುರಾಗದಿ ಪೊರೆಯೊ ಸನಕಾದಿ ಮುನಿವಂದ್ಯ 2 ಸಾರ ಕರುಣದಲಿ ಅರುಹಯ್ಯಶರಧಿಶಯನ ತಂದೆವರದವಿಠಲ ಪ್ರಿಯ 3
--------------
ಸಿರಿಗುರುತಂದೆವರದವಿಠಲರು
(ಅಂ) ಪಾರ್ವತೀದೇವಿ ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ಪ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ. ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ 1 ಮುತ್ತಿನ ಪದಕ ಹಾರ ಮೋಹನ ಸರ | ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸ ಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ಕಥ್ಥೈ ವಾದ್ಯ2 ಕಂಚುಕ ತಿಲಕ | ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ | ಸಲೆ ಭುಜ ಕೀರ್ತಿಪಾಠಿಕ || ಇಳೆಯೊಳು ಮಧುರಾ ಪೊಳಲೊಳು ವಾಸಳೆ | ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ || ಸುಲಭ ಜನರಿಗೆಲ್ಲ ಒಲಿದು ಮತಿಯನೀವ | ಗಳಿಕರ ಶೋಭಿತೆ ಪರಮಮಂಗಳ ಹೇ 3
--------------
ವಿಜಯದಾಸ
(ಅ) ಭಗವಂತನ ಸಂಕೀರ್ತನೆ ಅಪ್ರಮೇಯ ಆದರಿಸೋ ಎನ್ನ ಪ ಸ್ವಪ್ರಕಾಶಾನಂದರೂಪನೆ ಅ.ಪ ತಪ್ಪುಗಳೆಣಿಸದೆ ದಾಸನೆಂತೆಂದು 1 ನಿನ್ನದರುಶನದಿಂದಾ ಧನ್ಯರಾಗುವರುಜನರು ಪುಣ್ಯವಂತರಾಗಿಹವರವ ಪಡೆವರು 2 ಮಾರಜನಕ ಗುರುರಾಮ ವಿಠಲ 3
--------------
ಗುರುರಾಮವಿಠಲ
(ಅ) ಶ್ರೀಹತಿಸ್ತುತಿಗಳು ಜಗದುದರನು ಹರಿ ಸೂತ್ರಧಾರಂ ನಗಿಸುವ ಅಳಿಸುವ ಕಾರಕನಿವ ತಾಂ ಪ ಪರಿಪರಿ ಸೃಷ್ಟಿಸುತಾ ಸಲಹುವನು ಅರಿವಿಂದವುಗಳ ಲಯಗೈಸುವನು ಭರಿತನು ಸಕಲ ಚರಾಚರಂಗಳಲಿ ನಿರುತವೆಲ್ಲ ತರತಮದಿಂದಾರಿಸಿ ಇರುವನು ಪರಮಾತ್ಮನು ಸರ್ವೇಶಂ 1 ನಿತ್ಯನಿರ್ಮಲನು ಸತ್ಯಸನಾತನು ಅತ್ಯಂತನು ಗುರುವನಂತನು ಮೃತ್ಯುನಿಯಾಮಕ ಮುಕ್ತಿಪ್ರದನು ಭೃತ್ಯವರ್ಗ ಸಂರಕ್ಷ ಶಕ್ತನು ಮತ್ತೊಂದಕು ಸಹ ಮೂಲನು 2 ಅಣೋರಣೀವನು ಮಹತೋಮಹೀಮನು ಗುಣಗಣಭರಿತನಗಣ್ಯನು ಕ್ಷಣಮಾದಲನು ಕಂಟಕನು ಕಾಲನು ತೃಣಮೊದಲು ಬ್ರಹ್ಮಾಂಡನು ಧೀರನು ಘನಮಹಿಮನು ಶ್ರೀ ಜಾಜೀಶಂ 3
--------------
ಶಾಮಶರ್ಮರು
(ಅ) ಶ್ರೀಹರಿ ಸ್ತುತಿಗಳು ಆನಂದ ಆನಂದ ಆನಂದ ಪ ಆನಂದ ನಿನ್ನ ನೋಡಿದವರಿಗೆ ಅ.ಪ ಆ ಮುಖ ಆ ಕಂಠವಾನಂದ ಆ ಮಹಾಭುಜಕೀರ್ತಿ ಆನಂದ ಸಾಮಜ ಶಂಖಚಕ್ರಗಳಾನಂದ ಹೊಮ್ಮುವ ಗದೆ ಹಸ್ತ ಜಗದಾನಂದ 1 ಸುರಾಸುರರು ದೇವಾನುದೇವರು ತಂ- ಬುರ ನಾರದ ಮೊದಲಾದವರು ವರುಣಿಸಲಾರರು ನಿನ್ನಳವನ್ನು ಅರಿಯಲು ಪೊಗಳಲು ಆನಂದವನ್ನು 2 ಸಂಖ್ಯೆಗೆ ಎಟುಕದ ಆನಂದವಯ್ಯ ಅಂಕೆಗೆ ನಿಲುಕದ ಆನಂದವಯ್ಯ ಅಂಕುಡೊಂಕಿಲ್ಲದ ಆನಂದವಯ್ಯ ಬಿಂಕವ ಬಿಟ್ಟು ಪಾಡಿರೋ ಅಯ್ಯ 3 ಕಮಲವದನದ ಚೆಲುವಾನಂದ ಕಮಲಲೋಚನದ ಸುಂದರ ಅಂದ ಕಮಲೋದ್ಭವನಿಹ ವಕ್ಷವಾನಂದ ಕಮಲಯುಗಳ ಶ್ರೀಪಾದವಾನಂದ 4 ಎಣೆಯಿಲ್ಲಾನಂದಕೆ ಎಣೆಯಿಲ್ಲವಯ್ಯ ಕಣಕಣವು ನೋಡಲು ತಣಿಯದವಯ್ಯ ಅಣಿಗೊಂಡ ಜಾಜಿಪುರೀಶನವ್ವಯ್ಯ ವರ್ಣಿಸಲಾನು ಪಾಮರನಯ್ಯ 5
--------------
ನಾರಾಯಣಶರ್ಮರು
(ಅ) ಶ್ರೀಹರಿ ಸ್ತುತಿಗಳು ನಾರಿಯರೂಪನು ತಾಳ್ದನೇದೇವಾ ಪ ನಗೆ ಮುಖ ಮಾಗಿಹ ನಾರಾಯಣದೇವಾ 1 ಸತ್ವಗುಣಾಧಿಕನೆಂದೆನಿಸೆನ್ನಾ 2 ಅಂತಕ ದಾಸಜನಾರ್ಚಿತ ದೇವಸುಶೀಲಾ ದಾಸರು ವಂದಿಪೆ ದಾಹವ ನಿಂಗಿಸೋ ದೇಶಿಕ ತುಲಶೀರಾಮದಾಸನೆ ದೇವಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಅ) ಶ್ರೀಹರಿಸ್ತುತಿಗಳು ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ ಏಳಯ್ಯ ಕರಿರಾಜವರದ ವಿಜಯಮಿತ್ರ ಏಳು ದೇವಕಿಯ ಪುತ್ರ ಅ.ಪ ಏಳು ಹರಿರಥ ಶತಕೋಟಿ ಪ್ರಕಾಶನೇ ಏಳೆರಡು ಲೋಕಗಳು ಉದರದಲಿ ಧರಿಸಿದನೇ ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ ಏಳು ಮುನಿನುತ ವಂದ್ಯನೇ ಸ್ವಾಮಿ 1 ಏಳು...(?)ಗಳೊಳು ಗಂಗೆಯನು ಪಾದದಲಿ ಪಡೆದೇ ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ ಏಳು ಜನ್ಮದ ಭವಹರಾ ಸ್ವಾಮಿ 2 ಏಳು ಜಿಹ್ವೆಯನುಳ್ಳವನ ಮುಖವಾದೆ ಮ ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ ಏಳು ಸಮರನ ಕೊಲಿಸಿದೇ ಸ್ವಾಮಿ 3 ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ ಏಳು ದ್ವೀಪಕ್ಕೊಡೆಯನೇ ಸ್ವಾಮಿ 4 ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ ಏಳಿಸಿದೆ ಸುರಲೋಕಕೇ ಸ್ವಾಮಿ 5 ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ ಏಳುನಗರಕ್ಕಧಿಪವೆನಿಪ ಸುರಪುರವಾಸ ಏಳು ಲಕ್ಷ್ಮೀನಿವಾಸ ಸ್ವಾಮಿ 6
--------------
ಕವಿ ಲಕ್ಷ್ಮೀಶ
(ಅ) ಶ್ರೀಹರಿಸ್ತುತಿಗಳು ಮಾನಸಗಣ್ಯ ಚಿನ್ಮಯನ ಪ ವನಮಾಲಿಕಾಗಳನ ಮಿಂಚನು ಸೋಲಿಸುತಿಹನ 1 ಹೃದಯಾತಂಕಮೋಚನನ ಜನನೀ ಕುಚಕುಂಕುಮಾಂಕಿತನ 2 ಗುಣವೃಂದಪೂರಿತನ ಚಕೋರಾನಂದ ಚಂದಿರನ 3 ಭೂಷಣನಿಕರ ಭೂಷಿತನ ನಿತ್ಯದಿ ಸುಖದಾಯಕನ 4 ಶರಣೆಂದು ಕರದಿ ತೋರುವನ ಧರಣೀನೀಳೆಯರಿಹ ಕೆಲನ ಪುಲಿಗಿರಿಯೊಳು ನೆಲಸಿಹ ವರದವಿಠಲನ 5
--------------
ವೆಂಕಟವರದಾರ್ಯರು
(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
(ಅನಂತಚತುರ್ದಶಿಯ ದಿನದ ಪ್ರಾರ್ಥನೆ) ಪದ್ಮನಾಭ ಪರಿಪಾಲಿಸು ದಯದಿಂದ ಪದ್ಮಜಾದಿ ವಂದ್ಯ ಪರಮ ದಯಾಳೊ ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ ಸದ್ಮ ವೃತ್ತಿಪದಪದ್ಮವ ತೋರೊ ಪ. ಚಿಂತಿತದಾಯಕ ಸಂತರ ಕುಲದೈವ ಕಂತು ಜನನಿಯೊಡಗೂಡಿ ನೀನು ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು- ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1 ಆದಿ ಮಧ್ಯಾಂತವಿದೂರ ನಿನ್ನಲಿ ಮಹ ದಾದಿ ತತ್ವಗಳೆಲ್ಲ ನಿಂತಿಹವು ಆದಿ ಭೌತಿಕ ಮೊದಲಾದ ತಾಪಗಳನ್ನು ಶ್ರೀದ ನೀ ಬಿಡಿಸಲು ಸದರವಾಗಿಹವು 2 ಒಂದರಿಂದೊಂದಾದರಿಂದ ಮೂರು ಮೂರ್ತಿ ಇಂದಿರೆ ಸಹಿತಾವಿರ್ಭೂತನಾಗಿ ಮುಂದಿನ ಮಹದಾದಿ ತತ್ವವ ನಿರ್ಮಿಸಿ ನಿಂದನಂತಾಸಂತರೂಪನಾದವನೆ 3 ಭವ ಚಕ್ರದೊಳು ತಂದು ನವ ನವ ಕರ್ಮಗಳನೆ ಮಾಡಿಸಿ ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು ನಿತ್ಯ ತೃಪ್ತನಾಗಿರುವಿ 4 ಮಛ್ವಾದ್ಯನಂತವತಾರಗಳನೆ ಮಾಡಿ ಸ್ವೇಚ್ಛೆಯಿಂದ ಸುಜನರ ಸಲಹಿ ಕುಚ್ಛಿತ ಜನರಿಗೆ ತುಚ್ಛಗತಿಯನೀವೆ ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5 ನಾನಾವತಾರದಿ ನಂಬಿದ ಸುರರಿಗೆ ಆನಂದವಿತ್ತು ರಕ್ಷಿಪೆ ಕರುಣದಿ ದಾನವರಿಗೆ ಅಧ:ಸ್ಥಾನವ ನೀಡುವಿ ಮಾನವರನು ಮಧ್ಯಗತರ ಮಾಡಿಸುವಿ 6 ಹಿಂದೆ ಮುಂದಿನ ಭವದಂದವ ತಿಳಿಯದ ಮಂದಾಗ್ರೇಸರ ನಾನಾದೆಂಬುದನು ಅಂಧಕರಾರಣ್ಯದಿಂದ ಮೂಢನಾದಂ ದಿಂದ ಬಿನ್ನೈಪೆನು ಇಂದಿರಾಧವನೆ 7 ಮಾಡುವ ಕರ್ಮವು ನೋಡುವ ವಿಷಯಗ- ಳಾಡುವ ಮಾತು ಬೇಡುವ ಸೌಖ್ಯವು ನೀಡುವ ದಾನವೋಲ್ಯಾಡುವ ಚರ್ಯವ ನೋಡಲು ತಾಮಸ ಪ್ರಹುಡನಾಗಿಹೆನು 8 ಆದರು ನಿನ್ನಯ ಪಾದಾರವಿಂದ ವಿ- ನೋದ ಕಥಾಮೃತ ಪಾನದೊಳು ಸ್ವಾದ ಲೇಶದಾದರ ತೋರ್ಪದ- ನಾದಿ ಮೂರುತಿ ನೀನೆ ತಿಳಿಸಬೇಕದನೂ 9 ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ ಪದವ ಕಾಣುವೆನೆನುತೊದರುವೆನು ಹೃದಯ ಮಂಟಪದಿ ನೀ ಹುದುಗಿರುವುದರಿಂದ ಕದವ ತೆರೆದು ತೋರೊ ವಿಧಿಭವವಿನುತಾ 10 ಕನ್ನೆ ಸುಶೀಲೆಯ ಕರಸೂತ್ರ ರೂಪದ ನಿನ್ನ ತಿಳಿಯದೆ ಕೌಂಡಿಣ್ಯನಂದು ಮನ್ನಿಸದಿರೆ ಮದ ಮೋಹಗಳೋಡಿಸಿ ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11 ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು- ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12 ಅದು ಕಾರಣದಿಂದ ಪದುಮನಾಭ ನಿನ್ನ ಪದ ಕಮಲಗಳಲಿ ರತಿಯನಿತ್ತು ಸದರದಿ ಸಲಹಯ್ಯ ವಿಧುಶೇಖರಾರ್ಚಿತ ಮದನನಯ್ಯ ಮರುದಾದಿ ವಂದಿತನೆ 13 ದೋಷರಾಶಿಗವಕಾಶನಾದರೂ ಯೆನ್ನ ಶ್ರೀಶ ನಿನ್ನ ದಾಸದಾಸನೆಂದು ಘೋಷವಾದುದರಿಂದ ಪೋಷಿಸಬೇಕಯ್ಯ ಶೇಷಗಿರೀಶ ಸರ್ವೇಶ ನೀ ದಯದಿ 14
--------------
ತುಪಾಕಿ ವೆಂಕಟರಮಣಾಚಾರ್ಯ
(ಅನಂತಪದ್ಮನಾಭ ಪ್ರಾರ್ಥನೆ) ಚಿಂತಿತದಾಯಿ ನಿರಂತರ ಸುಖದಾನಂತಪದ್ಮನಾಭಾ ಸಕಲಸುಜನಾಂತರ ಫಲದಾ ಪ. ಯಾಕೆಂದರೆ ಪೂರ್ಣಾ ನಂದನೀನೊಲಿಯಲು ಎಂದಿಗು ಕುಂದನು ಹೊಂದದಲಿರುವೆ ಸುಂದರ ವಿಗ್ರಹ ಸುಲಭದಿ ಸಕಲಾನಂದ ವಾರಿಧಿಯೊಳಿಳಿವೆ ಭವ ಬಂಧನ ಬಿಡಿಸುವ ದೊರೆ ನಿನ್ನರಿಯದೆ ಮಂದ ಬುದ್ಧಿಯಿಂದಿರುವುದು ಥರವೆ1 ನೀಲಾಳಕ ಪರಿಶೋಭಿತ ಮುಖಕಮಲಾಲಿಸು ಬಿನ್ನಪವÀ ಲೀಲಾಮೃತರಸ ಕುಡಿಸುತ ಕರುಣದಿ ಪಾಲಿಸು ವರಸುಖವಾ ಪದದೊಳಗಿರಿಸಿದ ದುರಿತ 2 ಹೆಂಡತಿ ಜನಿಸಿದ ಮನೆಯೊಳಗಿರುವುದೆ ಪುಂಡರೀಕನಾಥಾ ಪಂಡಿತರುಗಳಿದ ಕಂಡರೆ ನಗರೆ ಬ್ರಹ್ಮಾಂಡಕೋಟಿಭಾಸಾ ಅಂಡಲೆಯದೆ ಹೃನ್ಮಂಡಲದೊಳು ಶುಭಕುಂಡಲ ರಮೆಯೊಡಗೊಂಡು ಬೇಗದಲಿ ನಿಭ ಕುಂಡಲಿಗಿರಿಗ 3
--------------
ತುಪಾಕಿ ವೆಂಕಟರಮಣಾಚಾರ್ಯ