ಒಟ್ಟು 1746 ಕಡೆಗಳಲ್ಲಿ , 107 ದಾಸರು , 1422 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು ನೆಲೆಯಾದುದಿಲ್ಲ ಜವ್ವನವೆಂಬುದೂ ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು ಒಡಲು ನಿನಗೆ ಮರುಳೆ 1 ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ ನೆಟ್ಟನೈದುವರು ನಿನಗೇನಹರು ಮರುಳೆ 2 ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ ಏನಹರು ನಿನಗವರು ಮೃತವಾದ ಬಳಿಕಾ ದೀನನಹೆ ಬಯಲಮಮತೆಗಳೆಂದು ತಿಳಿದುಕೊ ನೀನೆತ್ತಲವರೆತ್ತಲಿಹರವರು ಮರುಳೆ 3 ಮಗನಾವ ತಂದೆಯಾವನು ಜೀವ ಜೀವರಿಗೆ ಮಗನು ತಂದೆಯು ಕರ್ಮವಾಸನೆಗಳಾ ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ ಜಗದೊಳಾಡುವರು ನಿನಗೇನಹರು ಮರುಳೆ 4 ಅತಿಭಕ್ತನೆಂದು ವೈಕುಂಠ ವೇಲಾಪುರದ ಪತಿ ಅರ್ಜುನಗೆ ನಿರೂಪಿಸಿದರ್ಥವ ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ 5
--------------
ಬೇಲೂರು ವೈಕುಂಠದಾಸರು
ಕಣ್ಣಿಗೆ-ಕಟ್ಟಿದಂತಿದೆ ಪ ಬಣ್ಣದ ಕೊಳಲ ಭಾವಿಸಿ ನೋಡಬಾರದೆಅ.ಪ. ಕೂಡಿಹ ಸೋಗೆಗರಿಯ ಕಡುಸೊಂಪುಸೊಗಸುವಡೆದ ಸುಳಿಗುರುಳಿನ ಗುಂಪುಆಡುವ ಮುರುಹು ಮಾಗಾಯ್ಗಳ ಪೆಂಪುಕೂಡಿ ಕುಣಿವ ಕುಡಿಹುಬ್ಬಿನಲಂಪು 1 ಕೊಳಲೆಡೆÉಗೆಡೆಗೆ ತೋರುವ ಕೆಂಬೆರಳುಕೊನಬು ವಡೆದ ಕೊಂಕಿದ ಗೆರೆಗೊರಳುಥಳಥಳಿಸುವ ತೇಲುವ ಕಣ್ಣರಳುತನುಗಂಪನು ಸೂಸುವ ಸುಯ್ಯೆಲರು 2 ಸಿರಿ ಗಂಧದ ತಿಗುರುಕೊರಳ ದಂಡೆಯ ತುಳಸಿಯ ಹೊಸ ಚಿಗುರುಕೊನೆ ಮುಸುಕಲು ಪೊನ್ನುಗುರಿನ ಪೊದರು 3 ಮುಳಿದು ಯಶೋದೆ ಕಟ್ಟಿದ ಪೊಡೆದಾರಮುದ್ದು ಪೊಳೆಯನೇವಳದುಡಿದಾರಬಳಸಿದ್ಹವಳಸರದ ಶೃಂಗಾರಬಣ್ಣದುಡಿಯ ಬಿಗಿದುಟ್ಟ ವೈಯಾರ 4 ಒಂದಡಿ ನೆಲದೊಳು ನಿಂದಿಹ ನಿಲುವು, ಮ-ತ್ತೊಂದಡಿ ಸಾರ್ಚಿಪ ಬಲು ಗೆಲುವುಮುಂದೆ ಪಶುಗಳ ಮನ್ನಿಪನಿಲವು ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು5
--------------
ವ್ಯಾಸರಾಯರು
ಕಥನಕಾವ್ಯಗಳು ಶ್ರೀ ವೆಂಕಟೇಶ ಪಾರಿಜಾತ ಅಧ್ಯಾಯ ಒಂದು ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕøಷ್ಟ ಇತೀ ಪಿತ: ಗೋಕ್ಷೀರ ಸಿಕ್ತ ಸರ್ವಾಂಗೋ ವಲ್ಮೀಕಸ್ಥ: ಶುಭಂ ದಿಶೇತ | ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿನಾರತಿ ಮಾಡಿ ಬೇಡುವೆ ಭಾಷೆ ಭಾಷೆಗೆ ಎನಗೆ ಬುದ್ಧಿವಿಕಾಸ ಕೊಡುಯಂದು ಕರಮುಗಿದು ಬೇಡುವೆ ದಾಶರಥಿ ನಿಜದಾಸ ಕಲ್ಲೊಳ್ಳೀಶಗೊಂದಿಸುವೆ 1 ಸಂತತಿಗೆ ನತಿಸುವೆ ಐಜಿ ವೆಂಕಟರಾಮವರ್ಯರ ಪೂಜೆಯಲ್ಲಿರುವೆ ಜಗತಿಯಲಿ ಜನಿಸಿ ಅವರಾ ಪೂಜಿತಾಖ್ಯವು ವಹಿಸಿದವರನು ಪೂಜಿಸುವೆ ಬಿಡದೆ2 ಪೊಂದಿ ಆ ಗುರು ಪುತ್ರರಾಗಿರುವ ವಿಷ್ಣುತೀರ್ಥರನು ನಮಿಪೆ ಮತ್ತೆ ಸ್ವೋತ್ತಮರಾಗಿ ಇರುವ ಗುರುಗಳಿಗೊಂದಿಸುತ ಸ ರ್ವೋತ್ತಮಾನಂತಾದ್ರಿ ರಮಣನ ಮಹಿಮೆ ಪೇಳುವೆನು3 ವಚನ ಬುದ್ಧಿ ಪೂರ್ವಕ್ಹಿಂ ಸಂಪೂರ್ಣ ಸರ್ವ ದೇವೋತ್ತಮನು ಇರುವನ್ಯಾರೆಂದು ತಿಳಿ ಸರ್ವಲೋಕದಲಿ ಕೇಳಿ ಪೂರ್ವದಲ್ಲಿ ಪೋದ ಪೂರ್ವಿಕನÀ ಮನೆಯಲ್ಲಿ ಗರ್ವ ಅವನಲ್ಲಿ ಕಂಡು ಇರುವ ನಡೆದನಲ್ಲಿ 1 ನೋಡಿದನು ಆಗಲ್ಲಿ ಪ್ರೌಢೆ ಪಾರ್ವತಿಯು ಮಾತಾಡಿದಳು ನಾಚುತಲಿ ಬೇಡಬಿಡು ಪ್ರಾಣೇಶ ನೋಡು ಭೃಗು ಮುನಿಬಂದ ಬೇಡಿಕೊಂಬುವೆನೊ ಗಾಢನೆ ಕಣ್ಕೆಂಪು ಮಾಡಿ ಮುನಿಯಿದ್ದಲ್ಲಿ ಓಡಿಬಂದನು ಪೂಜೆಯ ಬೇಡ ಈ ಲೋಕದಲಿ ನೋಡಿ ಲಿಂಗವ ಪೂಜೆ ಮಾಡಲಿ ಜನರು 2 ಪರಿ ಶಾಪ ಮೆಟ್ಟಿದನು ವೈಕುಂಠ ಥಟ್ಟನೆ ಮತ್ತಲ್ಲಿ ದಿಟ್ಟ ದೇವನ ಕಂಡ ಪಟ್ಟದರಸಿಯಕೂಡಿ ಧಿಟ್ಟಾಗಿ ಮಲಗಿರಲು ಸಿಟ್ಟಿಲÉೂದ್ದನು ಒಳ್ಳೆ ಪೆಟ್ಟು ಅವನೆದಿಗೆ ಮುಟ್ಟಿ ಮುನಿ ಪಾದವನು ತುಷ್ಟನಾಗಿ 3 ಧ್ವನಿ ಮೇಲಿಷ್ಟು ಸಿಟ್ಟು ಕಾರಣ ಪೇಳಿಷ್ಟು ತಪ್ಪಿತು ಕ್ಷಮಿಸಿಷ್ಟು 1 ಎಳ್ಳುಕಾಳಷ್ಟು ನೊಂದು ಕೊಂಡಿದ್ದಾವು ಎಷ್ಟೋ 2 ಧರೆಯೊಳಗೆ ದ್ವಿಜರಿಗೆ ಸರಿಯಾರು ಇಲ್ಲೆಂದು ಬರುವುದು ಭಯ ಬಹಳಷ್ಟು ವರದಾನಂತಾ ದ್ರೀಶನ ಪರಮ ಭಕ್ತರಿಗೆ ಬರಬಾರದೆಂದಿಗೂ ಸಿಟ್ಟು 3 ವಚನ ಇಂದಿರಾಪತಿಯು ಹೀಗೆಂದು ಮುನಿಪಾದಂಗಳÀÀÀ ಚಂದದಿಂದಲಿ ಒತ್ತಿತ್ವರದಿಂದ ಉಷ್ಣೋದಕವನು ತಂದು ತೊಳೆಯುತ ಇಂದು ಪಾವಿತನಾದೆನೆಂದು ಹರುಷದಲ್ಲಿ ಮುಂದೆ ಭೃಗುಮುನಿಯು ಮುಕುಂದನ ಸರ್ವರಿಂದಧಿಕ ಸತ್ಯತಿಳಿರೆಂದ ಮುನಿಗಳೆಲ್ಲ ಮುಂದೆ ವೈಕುಂಠದಲಿ ಇಂದಿರಾದೇವಿ ಗೋವಿಂದನಾಟವ ಕಂಡಂದಳೀ ಪರಿಯು1 ರಾಗ:ಮೋಹನ ಕಲ್ಯಾಣಿ ಆದಿತಾಳ ಹರಿಯೆ ಪೋಗುವೆ ನಾನು ಮುನ್ನಿರುತಿರು ಒಬ್ಬನೇ ನೀನು ತಿರುಕನಾಗಿ ಇರುತಿರುವ ಭೂಸುರನು ಭರದೊಳೊದ್ದ ನಿನ್ಹಿರಿಯತನವೇನು ಪ ನಿನ್ನ ಶ್ರೀವತ್ಸವಿದು ಬಹು ಮಾನ್ಯವು ಎಂದೆನಿಸುವುದು ಮಾನ್ಯ ವಾಗಿಹುದು 1 ಬಡವ ಬ್ರಾಹ್ಮಣರಿಂದ ನೀ ಕಡೆಗೆ ಕೂಡಿರು ಚಂದಾ ಮಡದಿಯ ಹಂಬಲ ಬಿಡುದೂರದಿಂದ ತಡಮಾಡದೆ ನಾ ನಡದೆ ಗೋವಿಂದಾ 2 ಇನ್ನೆನ್ನ ಗೊಡವ್ಯಾಕೊ ಬಿಡು ನಿನ್ನ ಸಂಗತಿ ಸಾಕು 3 ಎನ್ನ ವೈರಿಗಳ ಮನ್ನಿಸುವ್ಯಾಕೋ ನನ್ನಿಚ್ಛೆಯಲಿ ನಾ ಇನ್ನಿರಬೇಕೊ 4 ಹಿಂದಕೆ ಕುಂಭೋದ್ಭವನು ಎನ್ನ ತಂದೆಯ ನುಂಗಿದ ತಾನು ಅಂದಿಗೆ ಎನಗಾನಂದವು ಏನು 5 ಮತ್ತೆನ್ನ ಸೊಸೆಗವರು ಬಹು ಭಕ್ತಿಯಲಿ ಪೂಜಿಸುವರು ವೈರಿಯವರ್ಹೊರತು ಇನ್ಯಾರು 6 ಹುಡುಗ ಬುದ್ಧಿಯು ಎಂದು ನಾ ಕಡೆಗೆ ಬಲ್ಲೆನು ನಿಂದು ಮಡುವ ಧುಮುಕಿ ಕಲ್ಪಡೆಯ ಪೊತ್ತಿಹುದು ಪಿಡಿದು ಭೂಮಿಯ ಕಂಭ ಒಡೆದು ಬಂದಿಹುದು 7 ಬಡವ ಬ್ರಾಹ್ಮಣನಾದಿ ಚಪಗೊಡಲಿಯ ಕೈಯಲಿ ಪಿಡಿದಿ ಮಡದಿಯ ಕಳಕೊಂಡು ತುಡುಗ ನೀನಾದಿ ಹಿಡಿದು ಬತ್ತಲೆ ಖೊಟ್ಟಿ ಕಡವನೇರಿದಿ 8 ಎಷ್ಟು ಪೇಳಲೆ ನಿನಗೆ ನೀನೆಷ್ಟು ಮಾಡಿದಿ ಹೀಗೆ ಅಷ್ಟು ಮನಸಿನೊಳಗಿಟ್ಟುನೂ ಆಗ ಕಟ್ಟಕಡಿಗೆ ಬಲು ಸಿಟ್ಟು ಬಂತೆನಗೆ 9 ಎಲ್ಲರಿಗುತ್ತಮ ನೀನು ಎಂದಿಲ್ಲಿದ್ದೆ ಮೋಹಿಸಿನಾನು ಬಲ್ಲಿದನಂತಾದ್ರಿಯೊಳಿರು ನೀನೆ 10 ರಾಗ:ಸಾರಂಗ ಆದಿತಾಳ ಪರಿ ಕಲಹ ಮಾಡಿ ತ್ವರಿತದಿಂದ ನಡೆದಳು ಕರವೀರಪುರಕೆ ಪ ಪರಮಾತ್ಮನು ತಾ ಮುಂದೀಪರಿ ಚಿಂತಿಸುತಿಹನು ಸಿರಿಯಿಲ್ಲದ ವೈಕುಂಠ ಸರಿಬಾರದು ಎನಗೆ1 ದೀನನಾದೆನು ಹಾ ನಾನು ಕಾಣುವೆನೆಂದು ಪ್ರಾಣ ನಿಲ್ಲದು ಪಟ್ಟದ ರಾಣಿಯ ಬಿಟ್ಟು 2 ಇನ್ಹ್ಯಾಂಗೆ ಇರಲಿ ಇನ್ನಾಕೆಯ ಹೊರತು ಕಣ್ಣಿಗೆ ವೈಕುಂಠಾರಣ್ಯ ತೋರುವುದು ಇನ್ನೆಲ್ಹೋಗಲಿ ಎಂದು ಬಂದ ತನ್ನಿಂದ ತಾನು3 ಶ್ರೀ ವೈಕುಂಠಕಿಂತ ಶ್ರೀ ವೆಂಕಟಗಿರಿಯು ಅಧಿಕವೆಂದು ಭಾವಿಸೀ ಪರಿಯು ಆವತ್ತಿಗೆ ಬೇಗಲ್ಲೇ ತಾ ವಾಸಕೆ ನಡೆದ ದೇವ ತಿಂತ್ರಿಣೆಯೆಂಬೋ ಆ ವೃಕ್ಷವಕಂಡ 4 ಅಡಗಿದ ಮೆಲ್ಲನೆ ಪೋಗಿ ಅಲ್ಲ್ಯಾದೇಶದಲೊಬ್ಬ ಜೋಳಾಖ್ಯನು ಎಲ್ಲರಿಂದಲಿ ತನ್ನ ಪುರದಲ್ಲೆ ಇರುವಾ5 ಶಿವನ ಕರುವಿನ ಮಾಡಿ ತಾನಾಕಳಾಗಿ ಅವನ ತಾಯಿಯು ಲಕ್ಷ್ಮೀ ಅವನ ಮಾರಿದಳು ಕೊಂಡ 6 ನಿತ್ಯ ವರಸಾಧು ಗುಣದಿಂದ ಸರಸಾಗಿ ಕೂಡಿ ಚರಿಸಿ ಬರುವುದು ವೇಂಕಟಗಿರಿಗ್ಹೋಗಿ ನಿತ್ಯ7 ಬಂದ ಕಾರಣವೇನು ಎಂದು ಸ್ಮರಿಸುತಲಿ ಇಂದಿರೇಶಗೆ ಭಕ್ತಿಯಿಂದ ಕ್ಷೀರವನು ಚಂದಾಗಿ ಕರೆವುದು ಬಂದು ಹುತ್ತಿನಲಿ 8 ಹಿಂಡದು ತನ್ನ ಕರುವಿನ ಪರಿ ರಾಜನ ಹೆಂಡತಿಯ ಆಗ ಚಂಡ ಕೋಪದಿ ಗೋಪನ ಕಂಡಂದಳು ಹೀಗೆ 9 ವಚನ ನೀ ಏನು ಮಾಡುವಿನಿತ್ಯ ಕುಡಿವುದೋ ವತ್ಸ ಏನುಮಾಡು ಪ್ರಾಣಕೊಂಬುವೇನು ತಾನು ಗಾಭರಿಗೊಂಡು ಧ್ಯಾನಿಸುತ ಆ ರಾಜ ಮಾನಿನಿಗೆ ನುಡಿದ ಬಹು ದೀನನಾಗಿ 1 ರಾಗ:ದಂತಿ ಆದಿತಾಳ ಅರಿಯೆ ತುರುಗಳ ಕಾಯ್ಕೊಂಡು ಬರುವೆ ನಾ ಇದಹೊರ್ತು ಪ ಕಟ್ಟುವರ್ಯಾರೊ ಅರಿಯೆ ಬರಿದೆ ನೀ ಎನ್ನ ಮೇಲೆ ಹರಿಹಾಯುವದ್ಯಾಕೆ ಅರಿಯೆ 1 ಪಾಲಾಗುವುದೊ ಅರಿಯೆ ಸರಸಾಗಿ ತಿಳಿನೀನು ನೆರೆಯೊರೆಯವರನಾ ಅರಿಯೆ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಕರಿ ಬಲಿ ಧ್ರುವ ಪ್ರಹ್ಲಾದನಲ್ಲಿ ಬಂದಂತೆ ಎನ್ನಲ್ಲಿ ಪ ನಿನ್ನಾಗಮನಕೆ ಹೃದಯ ಮನ ಬುದ್ಧಿ ಅರಳುವುದು ಸರ್ವದಾ ನಿನ್ನಾಗಮನಕೆ ಸರ್ವ ಮಾನಿಗಳೆಲ್ಲ ಕಾದು ನಿಂದಿಹರು ನಿನ್ನಾಗಮನಕೆ ಸರ್ವ ಕಾಲಾಕರ್ಮ ಅನುಕೂಲವಾಗಿಹವು ನಿನ್ನಾಗಮನಕೆನೇನೆ ಸರ್ವತ್ರ ಅನುಕೂಲ1 ಸೊಲ್ಲು ಲಾಲಿಸಬೇಕು ಶೀಲರುಕ್ತಿಬಲ್ಲಿದ ಮಹದೇವನೊಡೆಯ ಶುಕತಾತ ಹಲ್ಲಲ್ಲು ಕಿರಿದು ಕಾದು ನಿಂದಿಹರೊ2 ಕರಿಗಿರಿ ಮುದಮಯ ಗುರುತಂದೆವರದಗೋಪಾಲವಿಠಲಹೆದ್ದೈವ ಪಾಂಡುರಂಗಾ ವೆಂಕಟತಡವ್ಯಾಕೆ ಬರಲು ಯೋಚಿಪುದು ಏಕೆ ಬಾರಯ್ಯ ಭಕ್ತ ಬಂಧು ನಿನ್ನವರೆ ನಿಜ ಬಂಧೊ 3
--------------
ಗುರುತಂದೆವರದಗೋಪಾಲವಿಠಲರು
ಕರುಣ ಬಾರದೇ ಗುರುವೇ ಕರುಣ ಬಾರದೇ ಪ ಅಕಟ ನಿನ್ನ ಚರಣ ನಂಬಿದ ಶರಣನ ಮೇಲೆ ಅ.ಪ. ಭವ ಕಷ್ಟದಿಂದ ಕಡಿಗೆ ಮಾಡಿ ಕೃಷ್ಣ ಪದ್ಮವನ್ನು ತೋರುತುತ್ಕøಷ್ಟ ಪದವಿ ಪಾಲಿಸೊ ಗುರುವೇ 1 ಸ್ಮರಣೆ ಒಂದೇ 2 ಅಖಿಳ ಸುರರ ಸಲಹುವ ಸೀಲ ತಂದೆವರದಗೋಪಾಲವಿಠ್ಠಲಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಕರುಣದಿ ಕಾಯೊ ಕರುಣದಿ ಕಾಯೊ ಕಮಲನಯನ ಎನ್ನ ಪ ಪರಮಪುರುಷ ಹರೆ ಸರಸಿಜನಾಭನೆ ಅ.ಪ ನೀನೆ ತಂದೆಯು ಎಂದು ಜ್ಞಾನದಿಂದಲಿ ಬಂದು ಧ್ಯಾನಿಸುವೆನು ಈಗ 1 ತಾಯಿ ನೀನೇಯೆಂದು ಬಾಯಿಗೆ ಬಂದಂತೆ ಜೀಯ ನಿನ್ನನು ನೆನೆವೆ 2 ಜಗದೊಳಗೆಲ್ಲ ನೀನೆ ಸುಗುಣ ಶೀಲನು ಎಂದು ಮುಗಿಲು ಮುಟ್ಟುತಲಿದೆ3 ಸಂಗತಶ್ರಮವನು ಭಂಗವಗೈದ ಭು- ಜಂಗ ಗಿರಿಯ ವಾಸ 4 ಲೀಲೆಯಿಂದಲಿ ವ್ಯಾಘ್ರಶೈಲದಲಿರುವ ಶ್ರೀ ಲೋಲ ವರದವಿಠಲ 5
--------------
ವೆಂಕಟವರದಾರ್ಯರು
ಕರುಣದಿ ಕಾಯೋ ಗೋವಿಂದಾ ಯಂವ ದುರಿತಗಳಿಂದ ನೀನೀಗೊ ಮುಕುಂದ ಪ ಹರಿಸೇವೆ ಮಾಡುತ್ತ ಬಂದೆ ಮುಂದೆ ಚಿರ ಸಾಯುಜ್ಯವನ್ನು ನೀಡೋ ಶರಣಂದೆ ಅ.ಪ. ಲಕ್ಷಯೆಂಬತನಾಲ್ಕು ಜನ್ಮಯೆತ್ತಿ ಭಕ್ಷಿಸಿ ಬಂದೆನು ಕೋಟಿ ದುಃಖಗಳಾ 1 ಸಾಕ್ಷಿಯಾಗಿರುವಂಥ ಜೀವಾತ್ಮನನು ಲಕ್ಷಕೆ ತಂದೆ ಮನುಜ ಜನ್ಮದಲೀ 2 ಪಾಪ ಪುಣ್ಯಕೆ ಕರ್ತೃವಾಗಿ ಭವದಿ ಕೂಪದಿ ನಿಂದೆನು ಬೋಕ್ತøವು ಆಗೀ 3 ಪಾಪವ ಕ್ಷಮಿಸೋ ಸರ್ವಾತ್ಮಯಂನ ತಾಪವ ನೀಗುತ್ತ ಜನ್ಮ ಪರಿಪರಿಸೋ4 ಜನ್ಮ ತಾಳಲಾರೆ ಹರಿಯೇ ತಾಳಿ ಜನ್ಮದಿ ಹರಿಪಾದ ನಾ ಬಿಡಲಾರೆ 5 ಸನ್ನುತವರ ದೂರ್ವಾಪುರದ ನಂಮ ಚನ್ನಕೇಶವನೇ ಭಕ್ತಿಯನು ನೀ ಕೊಡೆಲೋ6
--------------
ಕರ್ಕಿ ಕೇಶವದಾಸ
ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ಪ ತಂದೆ ವೆಂಕಟೇಶ ವಿಠ್ಠಲ ಬಂದು ಎನ್ನ ಹೃದಯದಲ್ಲಿ ನಿಂದು ನಾಮ ನುಡಿಸಿ ಪೇಳ್ವ ಚಂದ ಮನಕೆ ತಂದು ಕೊಡುತ 1 ವಾಸುದೇವ ನಿನ್ನ ಮಹಿಮೆ ತೋಷದಿಂದ ಭಜಿಸುವುದಕೆ ದೋಷಗುಣಗಳನ್ನೆ ಕಳೆದು- ಲ್ಲಾಸ ಮನಕೆ ಒದಗುವಂತೆ 2 ಮಂದಮತಿಗಳಾದ ಜನಕೆ ಮುಂದೆ ಗತಿಯ ಪಥವ ತೋರಿ ಬಂಧನಂಗಳನ್ನೆ ತರಿದು ತಂದೆ ಕಾಯೊ ಇಂದಿರೇಶ 3 ಬೊಕ್ಕಸದ ದ್ರವ್ಯ ಜನರು ವೆಚ್ಚಮಾಡುತಿರುಹ ತೆರದಿ ಮೆಚ್ಚಿ ಬಂದ ಜನರ ಮನದ ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4 ಅಂತರಂಗದೊಳಗೆ ನಿನ್ನ ಚಿಂತೆ ಮರೆಯದಂತೆ ಕೊಟ್ಟು ಅಂತರಾತ್ಮ ಕಮಲನಾಭ ಸಂತೈಸಿ ಕಾಯೊ5 ಟ ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ: ಟ ಶ್ರೀ ಕಮಲನಾಭ ವಿಠ್ಠಲ ದಾಸರಾದ ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.
--------------
ನಿಡಗುರುಕಿ ಜೀವೂಬಾಯಿ
ಕರುಣಲೆನ್ನ ನೋಡೋ ಬ್ರಹ್ಮಾನಂದಸುಖದೊಳಗಿಡೋ 1 ತಾಳಿದೆ ಕ್ರಿಮಿಕುಲ ನೀ ದಯಾಳ 2 ಜನ್ಮದಿ ನೊಂದು ಬಂದೆ ಇನ್ನಾದರೆ ತಂದೆ 3 ದುರಾಚಾರಿಯು ನಾ ಪರಮ ನೀ ಘನಮಹಿಮ 4 ಹೊರಿಯೋ ಸರ್ವೇಶ ಭವಭಯನಾಶ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ಸುರ ಬ್ರಹ್ಮ ಮುಖಾರ್ಚಿತ ಚರಣಾ ಶರಣಾಗೆಲೋ ದೀನೋದ್ಧರಣಾ ಪ ಅತಿಸುಂದರ ನಂದ ಕುಮಾರಾ ಸುತ ನಾಗೈ ತಂದನು ಮಾರಾ ಅತನೇ ಕುಸುಮದ ಶರೀರಾ ಸುತ ಸದ್ಗುಣ ಗಣ ಮಂದಾರಾ ಪ್ರತಿಯುಗದಲಿ ಧರಿಸೈವತಾರಾ ಕ್ಷಿತಿಯೊಳು ಪಾಲಿಪ ಸುರನಿಕರಾ 1 ಜಲಧಿ ಯೊಳಗೆರಡು ರೂಪಾದೆ ಸಲೆ ವೇದಾಮೃತವನು ತಂದೆ ಬಲಿದೀ ಕ್ರೂರಾಂಗವ ವಿಡಿದೆ ಇಳೆಸಲೆ ಪ್ರಲ್ಹಾದರ ಹೊರೆದೆ ನೆಲೆ ಪ್ರಥಮಾಶ್ರಮದಲಿ ನಿಂದೇ ಬಲಿ ಜಮದಗ್ನ್ಯರ ತೋಷಿಸಿದೆ 2 ಎರಡನೆ ವರ್ಣದೊಳಗೆ ಜನಿಸಿ ಸುರ ಪಾಂಡವರೇಳಿಗೆ ಬಲಿಸಿ ನೆರೆ ಅಂತ್ಯಯುಗದಿ ಅವತರಿಸಿ ಪುರಹರ ದ್ವಿಜರಭಿಮತ ಸಲಿಸಿ ಗುರು ಮಹಿಪತಿ ಪ್ರಭು ಕರುಣಿಸಿ ಹೊರಿಯೋ ನಿನ್ನೆಚ್ಚರ ನಿಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಾನಿಧಿ ನೀ ಶ್ರೀರಾಮ ನಿನ್ನ ಚರಣ ಸೇವಿಪರಾನತ ಪ್ರೇಮ ಪ. ಕರುಣ ತೋರುತ್ತೆನ್ನ ಪೊರೆ ರಾಮ ನಿನ್ನ ಸ್ಮರಣೆ ನಿರುತ ನೀಡೆಲೊ ಶ್ರೀರಾಮ ಅ.ಪ. ಆಶ್ರಿತ ಜನರಿಗೆ ನೀನಲ್ಲದೆ ನಿ ನ್ನಾಶ್ರಯಗೊಡದಿರೆ ಗತಿ ಕಾಣೆ ಸ್ತೋತ್ರದಿ ಸ್ತುತಿಸುವೆ ನಿನ್ನಾಣೆ ಜಗತ್ರಯ ಸಲಹೊ ಕೋದಂಡಪಾಣಿ 1 ಭವಭಯಭಂಜನ ಶ್ರೀರಾಮ ಎನ್ನ ಭಯವ ಬಿಡಿಸೊ ಜಾನಕಿ ರಾಮ ಕವಿಗೇಯ ನೀನೆ ಜಗದಭಿರಾಮ ಎನಗೆ ಜವನ ಬಾಧೆಯ ಬಿಡಿಸೊ ರಘುರಾಮ 2 ತಂದೆ ಶ್ರೀ ಶ್ರೀನಿವಾಸ ನೀನೆ ಎನಗೆ ಬಂದ ಕಷ್ಟದಿ ಸಲಹುವ ನೀನೆ ಮುಂದೋರಿ ಸಲಹೋ ತಾಯಿ ಗುರು ನೀನೆ ಇನ್ನೂ ಸಂದೇಹವಿಲ್ಲ ಕೇಳೆಲೊ ರಾಮ 3
--------------
ಸರಸ್ವತಿ ಬಾಯಿ
ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ಕರುಣಿಸು ಪ್ರಭುತಂದೆ ತರಳಂಗೆ ದಯವ ಪ ಹರಿ ನೀನೆ ಅವತರಿಸೀಪರಿಭವಶರಧಿಯ ಪರಿಹಾರಗೊಳಿಸುವ ಪರಮಪಾವನರೂಪ 1 ಅರಿವಿಟ್ಟು ಭಜಿಸುವೆ ಮರೆಯದೆ ಮಗನ್ವಚನ ಕರುಣದಿ ಆಲಿಸಿ ವರದಹಸ್ತವ ಶಿರಕೆ 2 ಹಿಂಸೆಬಿಡಿಸು ಮಹ ಸಂಸಾರದುರಿಯನ್ನು ಧ್ವಂಸಗೈಯುವ ಶರಣರಾಂಶದ ಪ್ರಸನ್ನತೆ 3 ದುರಿತ ದೂರೀಕರಿಸಿ ಪರಮಾನಂದದಲಿರುವ ಸಿರಿ 4 ಮರೆಯ ನಿನ್ನಡಿಯಿನ್ನು ಸರುವೇಶ ಮೊರೆಕೇಳಿ ಗುರುವಾಗಿ ಶ್ರೀರಾಮ ಸ್ಥಿರಮೋಕ್ಷ ಸಂಪದವ 5
--------------
ರಾಮದಾಸರು
ಕರುಣಿಸು ಹರಿಯೆ ಕರುಣನಿಕರ ಎನ್ನ ಕರುಣದಿ ನೀನೀಗ ತರಳನ್ನ ಮೊರೆಕೇಳಿ ಪ ಭವತಾಪಶರಧಿಯ ಬವಣೆಯ ತಡೆಯದೆ ಭವಹರ ನೀನೆಂದು ಬಂದು ಮರೆಯಬಿದ್ದೆ 1 ಹಿಂದಾರು ಎನಗಿಲ್ಲ ಮುಂದಾರು ಗತಿಯಿಲ್ಲ ತಂದೆ ನೀ ಬಿಟ್ಟರೆ ಬಂಧ ಕಳೆಯುವರಿಲ್ಲ 2 ನೀನಿಗತಿ ಎನಗಿನ್ನು ಕಾಣೆ ಮತ್ತಾರನ್ನು ಮಾಣದೆ ಸಲಹಯ್ಯ ಪ್ರಾಣೇಶ ಶ್ರೀರಾಮ 3
--------------
ರಾಮದಾಸರು
ಕರುಣಿಸುವ ಹರಿ ನಿರಂತರವು ಮನವೆ ಪಾದ ಸ್ಮರಣಿಯನು ನೆರೆನಂಬು ಪ ಕಂದ ಪ್ರಹ್ಲಾದನ ತಂದೆ ಭಾಧಿಸಲು ಗೋ ವಿಂದ ಘನ ಸ್ತಂಭದೊಳ್ ಬಂದು ತಾಮುದದಿ ಮಂದ ದನುಜನ ಬಿಡದೆ ಕೊಂದ ಶ್ರೀವರ ಮುಚು ಕುಂದ ವರದ ಯೆಂದು ನೀ ಭಜಿಸು 1 ಛಲದಿಂದ ಮಲತಾಯಿ ಸಲೆ ಧ್ರುವನ ಕಾನನಕೆ ಕಳುಹಲಾಕ್ಷಣವೆ ಶ್ರೀ ನಳಿನನಾಭ ಒಲಿದು ಪೊರಿದನು ಮಹಾಒಳಿತೆಂದು ಅವಗೆ ನಿಶ್ಚಲ ಪದವಿಯನು ಇತ್ತ ಜಲನಿಧಿಶಯನ 2 ಅರಸು ಮುನಿಶಾಪದಲಿ ಕರಿಯಾಗಿ ಜನಿಸಿ ಮ- ಕರ ಬಾಧೆಗೆ ಶಿಲ್ಕಿ ಮೊರೆಯನಿಡಲು ತ್ವರದಿ ಪೊರದಂಥ ಹೆನ್ನೆಪುರ ಲಕ್ಷ್ಮೀನರಶಿಂಹ ಸಿರಿ ಕೃಷ್ಣಾ 3
--------------
ಹೆನ್ನೆರಂಗದಾಸರು