ಒಟ್ಟು 38 ಕಡೆಗಳಲ್ಲಿ , 14 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ ತಾಳು ಕ್ಷಮೆಯ ಕೃಪೆದೋರಿ ಕೇಳು ಸಂಸೃತಿ ದುಃಖ ತಾಳಲಾರೆನು ಮಾತ ನಾಲಿಸು ಮಲ್ಲಕಂಸಾರಿ ಪ. ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು ಸಾರಿ ಕಡೆಗೆ ಮಾನುಷ್ಯವನು ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ ಗಾರು ಮಾಡುವುದನೇನೆಂಬೆ 1 ದೂರಾಪುರದ ಕಾಮ ವಾರುಧಿವಳಗೀಸ ಲಾರದೆ ಬಾಯಬಿಟ್ಟೊರವೆ ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು- ರಾರಿ ನೀನ್ಯಾಕೆನ್ನ ಮರೆವೆ 2 ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ ಮುದ್ದೆಯಂತಾಯ್ತನಂತರದಿ ಹದ್ದಿನಂದದಿ ಹಂಗಿನನ್ನವ ಕಾಯುತ್ತ ಇದ್ದೆನು ಪರರ ಮಂದಿರದಿ 3 ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು ಬಿದ್ದು ಹೊರಳಿ ಬಹು ಬಳಲಿ ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ- ರುದ್ಧರಿಸೆನ್ನ ಬೇಗದಲಿ 4 ನೇಮವ್ರತಗಳನೊಂದಾದರು ಮಾಡದೆ ಕಾಮಲಾಲಸನಾದೆ ಬರಿದೆ ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ ಧಾಮನ ಬಿಡೆ ನಿನ್ನ ಸ್ಮರಣೆ 5 ಸಾಮಜೋದ್ಧಾರ ಸಕಲಸುರವೈರಿ ನಿ- ರ್ನಾಮವತಾರ ಭೂಧಾರ ನಿತ್ಯ ಸವಿದು ಬಾಳುವ ಮುಖ್ಯ ಕಾಮಿತಾರ್ಥವ ನೀಡು ವರದಾ 6 ಸುರಮುನಿ ಪಿತೃಋಣ ಭರವ ನೀಗುವ ಮೂರು ಕಾಲ ಕಳೆದೆ ವರ ದೇವಾಲಯ ಕೂಪಾ ರಾಮಯಜ್ಞಾದಿ ಸ- ತ್ಕರಗಳ ವಾರ್ತೆಯ ತೊರೆದೆ 7 ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ ಸರಿಯಲ್ಲ ಎನಗೆಂದು ತಿಳಿದೆ ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ- ಳಿರುವೆ ಈ ಪರಿಯಿನ್ನು ಥರವೆ 8 ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ ಸಾಕೆಂಬ ಶ್ರುತಿ ಪುರಾಣಗಳು ವಾಕಾನುವಾಕುಗಳು ಸುರಿದ ಸರ್ವಜ್ಞ ಶ್ರೀಕರ ಪಾದದ ಮತವ 9 ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ- ನ್ಯಾಕಿನ್ನು ಡಾಂಭಿಕರ ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ ಬೇಕು ಶ್ರೀವರ ನಿನ್ನ ಪಥವಾ 10
--------------
ತುಪಾಕಿ ವೆಂಕಟರಮಣಾಚಾರ್ಯ
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ
ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು ಉಂಬೋದು ಬಿಡಿಸೊ ಜನನವ ಕೆಡಿಸೊ ಪ ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ ಅಸುರುಸುರೆನುತಲಿ ಹಸಗೇಡಿಯಾದೆನೊ ಪರಿ ನೊಂದು 1 ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ ಮಲಮೂತ್ರದೊಳು ಬಳಲಿದೆ ಕೇಳೊ 2 ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ ಎಲ್ಲರ ಜರಿದೆ ಧರ್ಮವ ಮರೆದೆ 3 ಚಾರುವಾಕರಗೂಡಿ ಮೂರೆ ವಿಕಾರದಲ್ಲಿ ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು ಬಟ್ಟೆ 4 ಎಲ್ಲಿರಲು ನಿನ್ನವನೋ ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ 5
--------------
ವಿಜಯದಾಸ
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ
ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಪ ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ1 ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರÀಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ2 ಪರರ ವಡವೆಯ ನೋಡಿ ಧರಿಸಲಾರದೆ ಮನ ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ- ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ ಮರಳಿ ಜನಗಳಲ್ಲಿ ಜನಮವಾಗುವನಿಗೆ 3 ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ ಮತಿಹೀನವಾಗಿ ಭ- ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ ಚತುರೋಕ್ತಿಯಲಿ ನೆನೆಸಿ ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ 4 ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ ಹಾದಿಯನು ತಿಳಿತಿಳಿದು ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ5 ದುರ್ಧನಕೆ ಕೈಕೊಡುವೆ | ಮೊದಲೆ ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ ಕ್ಷಣವಾದರು ತನುವಿನ ಕ್ಲೇಶದಲಿ ದಿನವ ಹಾಕಿದೆ ವ್ಯರ್ಥ ದಣಿದಣಿದು ಈ ಪರಿಯನು ಮಾಡಿದವನಿಗೆ 6 ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು ಕೆಟ್ಟ ಬಾಳಿದೆ ಧರಣೀಲೀ ಸುಟ್ಟ ಸಂಸಾರದೊಳು ಸಟಿಯಾಡಿ ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ 7
--------------
ವಿಜಯದಾಸ
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ ಸುತನ ಮುಂದಿಟ್ಟು 151 ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ 152 ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ ಮಾಡುವೆನು 153 ಅಮರಲೋಕಕ್ಕೆ ವಶವಹರು ಭಾಧೆಗೆ ಗುರಿಯಾಗಿ 154 ವ್ಯರ್ಥವಾಯಿತು ಎನ್ನ ಬದುಕು ಮಾಡಿಕೊಂಬೆನೆಂದ 155 ಕಥೆಯ ಕೇಳರಿಯಾ ಕುಂದನೊದ್ದವರಾರು ಜಗದಿ 156 ಮೀರಿದರಾರೊ ಕಲ್ಪನೆಯ 157 ಸರ್ವಾಂಗದಿಂದ ಸುಂದರಿಯು ಸತಿ ಲಾಂಛನೆಯ ತಾಳಿದನು 158 ಸೆರೆತಂದ ತಾರಾದೇವಿಯನು ಪಾಡೇನು ಭೂಪಾಲ 159 ಕುಮಾರತಿಯ ಮಂದಿರಕೆ ಅರುಹಿದರಾರು ನಿನ್ನೊಡನೆ 160 ನಿಲ್ಲಿಸಿದ ಪ್ರಧಾನಿ ನಡೆತಂದ ಸೆಜ್ಜೆವಾಹರಿಗೆ 161 ಮಲಿನವನುಟ್ಟ ಮಾನಿನಿಯ ಸೆಳೆವಿಡಿದೆತ್ತಿದ ರಾಯ 162 ಮಾಜುವದೇಕೆ ಎನ್ನೊಡನೆ ಬ್ರಾಹ್ಮರು ಮೆಚ್ಚುವಂತೆ 163 ಸುರರೊ ನರರೊ ಕಿನ್ನರರೊ ಗಿರಿಜೇಶನಾಣೆ ಹೇಳೆಂದ 164 ವಿಶ್ವಲೋಚನನಂಘ್ರಿಯಾಣೆ 165 ಸರಿಯ ನಾರಿಯರು ಉರಿವ ಪಾವಕನ 166 ಬ್ರಾಹ್ಮರಿಗ್ಯೊಗ್ಯವಹುದೆ ಬರುವುದು ನಿಮ್ಮ ಕುಲಕೆ 167 ಪಾತಕಿಯೆಂದು ತಿಳಿದು ಬರುವುದೆ ಉಚಿತವು 168 ಮುನಿದು ಅರಣ್ಯಕ್ಹೋಗುವರೆ ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು 169 ಪಾತಕ ಬರಿದೆ ನಿಂದ್ಯವನು (ಅ) ಬಂದೊದಗಿದ ಮೇಲೆ 170 ತೂಪಿರಿದು ಮಂತರಿಸಿ ಘೋರ ಕಾನನಕೆ 171 ಗುರಿಮಾಡಿ ನಾರಿ ಕಂಬನಿದುಂಬಿದಳು 172 ವಶವಲ್ಲದಂಥ ಮೂಗುತಿಯ ಬಿಸುಸುಯ್ವದೇತಕೆ ತಾಯೆ 173 ಕುಮಾರಿಯ ಮೇಲೆ ಸ್ನೇಹದಲಿ ವಿಧಿಯೆಂದ್ಹೊರಳಿದಳು 174 ಅಳುವುದೇತಕೆ ತಾಯೆ ನೀನು ಕಲ್ಮಾಡು ನಿನ್ನ ದೇಹವನು 175 ಹೇಳಿದನೇಕಾಂತದಲಿ ಉದಯಕೆ ಬನ್ನಿರೆಂದ 176 ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ ಬನ್ನಿರಿ ಶೀಘ್ರದಿಂದ 177 ಮಾಡಿರಿಮನಕೆ ಬಂದುದನು ನಾನಿಡುವೆ ರಾಯನ ಮುಂದೆ 178 ಮೇಲೆ ಪನ್ನಂಗ ಕವಿದವು ಶೀಘ್ರದಿ ಪೊತ್ತು ನಡೆದರು 179 ಬಸವಳಿದಳು ಶ್ರೀ ಹರಿಯ ಸ್ತುತಿಸುತಿರ್ದಳೆ ತನ್ನ ಮನದಿ 180 ಕಾಲನ ವಶಕೆÉ ಒಪ್ಪಿಸದೆ ಪಾದಾರವಿಂದೊಳಿರಿಸು 181 ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ ಬಾಲೆಯ ತಂದಿಳುಹಿದರು 182 ಬಾ ಬಳಲಿದೆಯೆನುತ ರಂಭೆಯನುಪಚರಿಸಿದರು 183 ತೊಪ್ಪಲ ಮೇಲ್ಹರಹಿದರು ಕತ್ತಿಗೆ ಮಯ್ಯನಿಕ್ಕಿದಳು 184 ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ ಸ್ತುತಿಯ ಮಾಡಿದಳು 185 ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು ನಿದ್ರೆ ಕವಿದವು 186 ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ ದೂತರ ಮನವ 187 ಯೋಚಿಸಿ ತಮ್ಮ ಮನದಿ ಪಾತಕ ಎತ್ತಿದಾಯುಧವನಿಳುಹಿದರು 188 ಒಬ್ಬರೊಬ್ಬರು ಮಾತನಾಡಿ ಉರ್ವೀಶಗೊಯ್ದು ಒಪ್ಪಿಸುವ 189 ವಾರಿಜಗಂಧಿಯ ಬಿಟ್ಟು ರಾಯಗೆ ಗುರುತ ತೋರಿದರು 190 ತಪ್ಪದೆ ರಾಯನೋಲಗಕೆ ಚಿತ್ತೈಸು ಜೀಯವಧಾನ 191 ತಂದೆವು ಮುದ್ರೆಯುಂಗುರವ ಮನದಲಿ ಮರುಗಿದನು 192 ಅಂಜೂರ ಕೊಯ್ದು ಕೊಟ್ಟಂತೆ ಬೆಂದೊಡಲನೆಂತು ಪೊರೆಯಲಿ 193 ಕೆಂಡದೊಳಾಜ್ಯ ಬಿದ್ದಂತೆ ಬೆಂದರು ಶೋಕಾಗ್ನಿಯಿಂದ 194 ಮೇಲೆ ಸ್ನೇಹದಲಿ ತಲೆಯೆತ್ತಿದವಬ್ಜ ಬಂಧುಗಳು 195 ಹಸಿದ ಹೆಬ್ಬುಲಿಗೆ 196 ಬೆದರುವಳು ವ್ಯಾಘ್ರದಟ್ಟುಳಿಗೆ ಮರಳಿ ಧೈರ್ಯವನೆ ಮಾಡುವಳು 197 ಮಾಯಪಾಶಕೆ ಗುರಿಮಾಡಿ ಮುಕ್ತಿ ಸಾಧನವು 198
--------------
ಹೆಳವನಕಟ್ಟೆ ಗಿರಿಯಮ್ಮ
ಮದನನಗೇಹ ಸುಖ ಮರಣ ಸುಖಮದನನ ತೊತ್ತಿನ ಮಕ್ಕಳಾಗ ಬೇಡಿರೋ ಪ ಸ್ತ್ರೀಯರೂಪವ ಕಂಡು ಸೈರಿಸದೆ ಕಳಕಳಿಸಿಸುಯ್ಗರೆದು ಶರೀರವು ಬೆವರೇರುತಕೈಕಾಲ್ಗಳಿಗೆ ನಡುಕ ಹುಟ್ಟಿ ಕಾಮ ಶರಕೆ ಮೈಯನಿತ್ತುಕೊಯಿಸಿಕೊಳ್ಳುವ ಕೊರಳ ನಿತ್ಯದಿ ಕಷ್ಟದಿ ಸುಖವು 1 ಮುಖ ಕಾಂತಿಯ ನೋಡಿ ಮೋಹದಲಿ ಮುಳುಗಾಡಿಸುಖವೆಂದು ಬಗೆಯುತ ಸಂಗಯೋಗದಕಕುಲಾತಿಪಡುತಲಿ ಕೆಡೆದುತಾಪದಿ ಹೊರಳಿಬಕಧ್ಯಾನದಲಿ ತನ್ನ ನಿಜಸುಖವ ಮರೆವ 2 ಪತಿ ಚಿದಾನಂದ ಕಾಣದ ಸುಖವು3
--------------
ಚಿದಾನಂದ ಅವಧೂತರು
ಮಾನವ ಅಜಹರವಿನುತ ನಿಜಪಾದ ಅನುದಿನವು ಭಜಸಿಬದುಕೆಲೊ ಪ ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ ಸುಜನ ಭಜಗಶಯನನ ಅ.ಪ ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ ಕೊಳಪಟ್ಟು ಕೆಡದಿರೆಲೊ ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ ಅಳಿವ ಸುಖದಾಸೆಗೆಳಸಿ ಕೆಡಬೇಡ ಜಲಜನಾಭನ ಒಲಿಸಿ ನಲಿಯೊ 1 ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ ಕರಕೊಂಡು ಧರೆಗೆ ಬಂದಿ ಅರಲವದ ಸುಖಕಾಗಿ ಮರೆದು ಎಲ್ಲವ ನೀನು ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ ಖರೆಯೆಂದೆನ್ವುದು ಸರಿಯಲ್ಲೆಲೊ ಇದು ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ 2 ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ ನೊಣಕ್ಹವಣಿಸುತಿರುವಂತೆ ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ ರಣೆಂಬ ದಣಿವು ಕಳೆವಂಥ ಜನಕಜಾತೆಯ ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ ಕುಣಿ ಕುಣಿದು ಧನ್ಯವಾಗೆಲೊ 3
--------------
ರಾಮದಾಸರು
ಶ್ರೀ ತುಳಜಾ ಮಹಾತ್ಮೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸಿರಿಯ ಸಹಿತಾಗಿರುವ ವೆಂಕಟಗಿರಿಯ ರಮಣನ ಮರೆತು ಎಲ್ಲವನು|| ಚರಕೆರಗುವೆನು|| 1 ಧರೆಯೊಳಗವನ ಮೆಟ್ಟಿ ಹಾರುವ ಹಿರಿಯ ಕವಿಗಳಿಗೆಲ್ಲಾ ನಾನೇ ಕಿರಿಯನೆಂದೆನಿಸಿ ಅವರನು ಮರೆಯದಲೆ ನೆನೆವೆ|| ಕಿರಿಯನಾದರೇನು? ನಾ ಈ ಧರೆಯೊಳಗೆ ಎಲ್ಯಿದ್ದರೇನು? ಮರೆಯದಲೇ ಮಾಡುವರು ಗುರುಗಳು ಮಮತೆ ಎನ ಮೇಲೆ||2 ಕೇವಲಾನಂತಾದ್ರಿ ರಮಣನ ಭಾವ ತಿಳಿಸುವ ನಮ್ಮ ಗುರುಗಳು ಭಾರ ಭಾವದಲ್ಲಿ ಪೇಳುವೇನು ತುಳುಜಾದೇವಿಯ ಮಹಿಮೆಯನು|| 3 ಪದ್ಯ ಪೂರ್ವದಲಿ ಕೃತಯುಗ ಪೂರ್ವದಲ್ಲಿ| ದ್ವಿಜವಯ ನೀರ್ವಕದ್ರುಮನೆಂದು ಊರ್ವಿಯಲ್ಲಿ ಪ್ರಖ್ಯಾತ ಸರ್ವದಾ ಮಾಡುವನು ಸರ್ವರಿಗೆ ಸಮ್ಮತಪೂರ್ವಧರ್ಮವು ಭಕ್ತಿ ಪೂರ್ವಕವಾಗಿ|| ಸರ್ವ ಸ್ತ್ರೀಯ ರೊಳಗ ಪೂರ್ವ ಸುಂದರಿಯಾಗಿ ಇರ್ವಳಾತನ ಮಡದಿ ಊರ್ವಶಿಯ ಪೋಲುವಳು ಊರ್ವಿಯಲಿ ಪತಿಸೇವೆ ಸರ್ವದಾ ಮಾಡುತಲೆ ಇರ್ವಳಾತೆಯು ಮನಃ ಪೂರ್ವಕವಾಗಿ||1 ಆ ಕಾಂತನಿಂದಲ್ಲಿ ತಾಕೂಡಿ ತನ್ನ ಮನಕೆ ಬೇಕಾದ ಸೌಖ್ಯದನೇಕ ವರ್ಷಗಳಲ್ಲಿ ಸ್ವೀಕಾರ ಮಾಡಿದಳು ಶ್ರೀಕಾಂತನ ದಯದಿ ಆಕೆಯ ಹೆಸರುಂಟು ಅನಭೂತಿ ಯಂತೆಂದು|| ಆ ಕರ್ದಮಾಖ್ಯ ದ್ವಿಜತಾಕಾಲದಿಂದ ಭೂತೋಕವನು ಬಿಟ್ಟು ಪರಲೋಕಕೆ ಪೋಗುತಿರೆ ಆಕೆ ಪತಿವುತೆಯು ಎಂಬಾಕೆ ಸಹಗಮನವೆಂಬ ಸಹಗಮನೆಂಬೊ ಆಶಾರ್ಯ ಮಾಡುತಿರೆ| ಆ ಕಾಲದಲ್ಲಿ ಆಯಿತಾಕಾಶವಾಣಿ|| ಪದ ಬ್ಯಾಡ ಬ್ಯಾಡಮ್ಮ ಬ್ಯಾಡದು || ನೀ ಮಾಡೋಕಾರ್ಯ ಬ್ಯಾಡ|| ಬ್ಯಾಡು ಬ್ಯಾಡುಮ್ಮ ಕೇಳು ಮಾಡತಕ್ಕ ಕಾರ್ಯದೂರ ನೋಡಿ ಮಾಡುಬೇಕು ಇಂಥ ಮೂಢ ಬುದ್ಧಿ ಮಾಡುವದು||ಪ ಪತಿಯ ಸರಿಯು ಹಿತಕರಿಲ್ಲವು || ಪತಿವ್ರತೆಗೆ ತನ್ನ ಪತಿಯ ಹೊರತು ಗತಿಯು ಇಲ್ಲವು || ಸುಳ್ಳಲ್ಲವು|| ಪತಿಯು ಇಲ್ಲದಿದ್ದರೇನು ಸುತರು ಸುಗುಣರುಂಟು ನಿನಗೆ ಸುತರು ಇರಲು ಪತಿಯ ಕೂಡಿ ಗತಿಯಸಮ್ಮತವು ಅಲ್ಲ|| 1 ಪತಿಯ ಬಿಟ್ಟು ಸ್ಥಿತಿ ಅಧರ್ಮವೇ| ಆ ಸತಿಗೆ ತನ್ನ ಪತಿಯ ಕೂಡೆ ಗತಿಯು ಧರ್ಮವೇ|| ಸತ್ಕರ್ಮವೇ|| ಪತಿಯ ಮ್ಯಾಲೆ ಸತಿಯು ಊಂಟು ಸತಿಗೆ ಸಮ್ಮತವು ಸತ್ಯ ಪತಿಯಿಂದಲೇ ಪತಿಯಲೋಕ ಗತಿಯು ಪತಿವುಲೆಯೇ ನಿನಗೆ||2 ಮುಖ್ಯಮಾತು ನೀನು ಕೇಳಿದ್ದು|| ಗರ್ಭಿಣಿಯು ಮತ್ತು ಮಕ್ಕಳುಳ್ಳ ಸ್ತ್ರೀಯು ಮಾಳ್ಪುದು || ಧರ್ಮಲಿಲ್ಲದ್ದು|| ಮಕ್ಕಳುಳ್ಳವಳು ನೀನು ಮಕ್ಕಳನ್ನು ಪಾಲಿಸುವುದು ಮುಖ್ಯನಂತಾದ್ರಿ ರಮಣ ತಕ್ಕ ಮುಕ್ತಿಕೂಡುವ ನಿನಗೆ|| 3 ಪದ್ಯ ಆ ಕಾಲಕ್ಕಾಗಿರುವ ಆಕಾಶವಾಣಿಯನ್ನು ತಾ ಕೇಳಿ ಅನುಭೂತಿ|| ಕಾಲ ಮೇರು ಶೈಲದಲ್ಲಿ|| 1 ಚಾರು ಮಂದಾಕಿನಿಯ ತೀರದಲ್ಲಿ ಪರ್ಣದ ಕುಟೀರವನ್ನು ಹಾರಿಸುತಾ ಬಂದನಾ ನಾರಿ ಇದ್ದಲ್ಲಿ||2 ಆಗ ಆಕೆಯ ಕಂಡು ಹೋಗಿ ಬದಿಯಲಿ ನಿಂತು ಹೀಗೆಂದು ಮನಸಿನಲಿ ಯೋಗಿಯಂತಲಿ ನಿಶ್ಚಳಾಗಿಹಳು ದಾವಾಕಿ ದೈವಯೋಗದಲ್ಲಿ ನೋಡಿದರೆ ಯೋಗಿಗಳು ತಮ್ಮ ಉದ್ಯೋಗಿವನ್ನು ಬಿಡುವರು ಹೀಗೆಂದು ಅನುಭೂತಿಯಾಗಿ ಮೋಹಿಸಿ ನುಡಿದ ಭೋಗ ಬಯಸುತಲೇ|| 3 ಪದ ರಾಗ:ಶಂಕರಾಭರಣ ನೀಪೇಳೆ ದಾವದಾವದು ನಿನ್ನ ಜೀವಕ್ಕ ಬೇಕು ಹೇಳೆ|| ಪ ನಿತ್ಯ ಶೋಷಣ ಮಾಡುಬ್ಯಾಡೇ|| 1 ದೇವತೆಗಳು ಎಲ್ಲಾರು ಬಿಡದೆ ಎನ್ನ ಕೋಕರಾಗಿಹರು|| ಸಾವಿರ ಸ್ತ್ರೀಯರು ಸೇವಿಸುವರು ಎನ್ನ ಸೇವಿಸುವರು ನಿನ್ನನ್ನು 2 ಚಿಕ್ಕ ಪ್ರಾಯದಲ್ಲಿ ನೀನು ಇರುವಿ ನಿನ್ನ ತಕ್ಕ ಪುರುಷನು ನಾನು|| ಮುಖ್ಯನಂತಾದ್ರೀಶ ಸಿಕ್ಕ ನಿನಗೆ ನಿನ್ನ ತಕ್ಕಂತೆ ಆಯಿತ್ಹೇಳೆ|| 3 ಪದ್ಯ ಧ್ಯಾನದಲ್ಲಿರಲು ದುಷ್ಟ ದನುಜೇಶ್ವರನು ತಟ್ಟನೆ ಮಾಡಿ ದುಕೃಷ್ಟ ತಾಳ ಧ್ವನಿಯು ಕಟ್ಟು ಇಲ್ಲದೇ ಒಳ್ಳೆ ಗಟ್ಟಿ ವದರಿಸಿ ನೋಡಿ ಒಂದಿಷ್ಟು ನುಡಿಯದೆ ಇರಲು, ದಿಟ್ಟಾಗಿ ತನಗೆ ರೀತಿ|| ಸಿಟ್ಟಲೇ ನುಡಿದಾಳು ಆ ಪತಿವುತೆ|| 1 ದಾ ಪೇಳಲೋ ನೀ ಧಿಟ್ಟ ದಾರಿಲ್ಯಾತಕೆ ಬಂದ್ಯೊ ನೀ ಪಾಪಿಷ್ಠ|| ದೂರದಲ್ಲಿ ಇರೋ ನೀ ದುಷ್ಟ || ಧೈರ್ಯದಿ ನೀ ಎನ್ನ ಮುಟ್ಟಿದ್ಯೋ ಭ್ರಷ್ಟ|| 2 ಸುಖಭರಿತ || ಲಗುಬಗೆಯಲಿ ಮೋಹಿಸುತ || ಬಗೆ ಬಗೆಯಲ್ಲಿ ಮಾತನಾಡಿದನು ನಗುನಗುತ| 3 ಪದ, ರಾಗ:ಶಂಕರಾಭರಣ ಮರುಳು ಗೊಂಡೆನೇ || ತರುಳೆ ನೊಂದೆನೆ|| ಮರಳು ಗೊಂಡೆ ತರುಳೆ ನಿನ್ನ ಹೊರಳಿ ನೋಡುವ ಯ್ಹರಳಿನೋಟಕೆ|| ಪ ಮಾನ್ಯ ಮಾನಣಿ || ರನ್ನೆ ಶಿರೋಮಣಿ || ಚೆನ್ನವಾದ ಚಿನ್ನದಂಥ ನಿನ್ನ ದೇಹವನ್ನು ಕಂಡು|| 1 ಮಾತುಲಾಲಿಸೆ|| ಪ್ರೇತಿ ತೋರಿಸೆ ||ಪ್ರೀತಿ ಎಂಬೊದ್ಯಾತಕಿನ್ನ ಸೋತು ಕಾಮಾಪೂರದಲ್ಲಿ|| 2 ನಿಂತು ಮರೆತೆನಾ || ಅನಂತಾದ್ರೀಶನಾ || ಎಂಥಹವರಿಗೆ ಭ್ರಾಂತಿ ಬಿಡಿಸುವಂಥ ನಿನ್ನ ಕಾಂತಿ ನೋಡಿ|| 3 ಆರ್ಯಾ ಇಂಥಾ ಮಾತವು ಕೇಳಿ || ಚಿಂತಾಕ್ರಾಂತಳಾದಳಾಗ ಆಗ ಆ ಬಾಲಿ|| ಬಂದಿತು ಇಂಥಾ ಘೋರಾ || ಚಿಂತಿಸ ಬೇಕಿನ್ನು ಇವನ ಸಂಹಾರಾ|| 1 ಶಾಪಿಸ ಬಾರದು ಜ್ಞನಿ || ಶಾಪಿಸಿದವರ ಅಗುವುದು ತಪಹಾನಿ|| ಪರಿ ಮನಸಿಗೆ ತಂದು ವ್ಯಾಪಾರವು ಮಾಡಿದಳು ಮತ್ತೊಂದು| 2 ಎಂಬಾಕೆ ನಾಮವೇ ತುಳಜಾ|| 3 ಪದ ರಾಗ :ಸಾರಂಗ ತಾಳ :ತಿವಿಡಿ ಸ್ವರಷಡ್ಜ ಸಲಹಬೇಕೆಂದು ನಿಲ್ಲದೆ|| ಪ ಪಾಶಾಕೃಷ್ಟ ಧರಿಸುತಾ||1 ವರೆಂದು || ದಯಮಾಡಿ ವರಗÀಳ ನೀಡುವಳು ಹಿಡಿಯಂದು|| ಕಾರುಣ್ಯಸಿಂಧು|| ಗಾಢನೆ ಧ್ವನಿ ಮಾಡುತಲೇ ಹಾರ್ಯಾಡುತಲೇ ತ್ವರ ಮಾಡಿಸುತಲೇ ಓಡಿ ಬರುತಿಹ ಪ್ರೌಢಗಣಗಳ ಕೂಡಿ ಸಿಂಹಾರೂಢಳಾಗಿ||2 ಎಂತು ಪೊಗಳಲಿ ನಾನು|| ಅತ್ಯಂತ ಬಹಳಾದಂತ ಮಹಿಮೆಗಳನು ಎಂತೆಂಥವರು ಬೇಕಂತ ಹುಡುಕಿದರೇನು|| ಹಿಗಂತ ಆಕೆಯ ಅಂತೂ ತಿಳಿಯದು ಇನ್ನು|| ಗುಣವತಿ ತಾನು|| ಶಾಂತಿಯಿಂದ ಅನಂತಾದ್ರೇಶನ ಕಾಂತಯಳ ಪೋಲುವಂತ ದೇವಿಯು ಚಿಂತೆಯಲಿ ತನ ಚಿಂತಿಸಿರುವಳ ಚಿಂತೆ ಬಿಡಿಸ ಬೇಕಂತ ಧಾವಿಸಿ|| 3 ಆರ್ಯಾ ಸಾರ ಪರಮಾದರದಿಂದ ಕೂತು ಕೇಳಿದವರು || ಪರಿಪೂಜಿಸುತಾ ತುಳಜಾ ತಾನಾಗುವಳು ಪ್ರತ್ಯಕ್ಷ|| 1 ವರಕವಿತಾ ರಚನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದು ಎನ್ನ ಉಪಾಯ|| ಗುರು ಕೃಪೆಯಿಂದಾಯಿತೊಂದಧ್ಯಾಯ|| ಶ್ರೀಹರೇ ಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಸಾಕು ಸಾಕಿನ್ನು ಸಂಸಾರ ಸುಖವು ಪ ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆಅ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ 1 ಮಾಸ ಪರಿಯಂತ ಹರಿಯೆ2 ಮಾಸ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು 3 ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ 4 ಮಾಸ ಪರಿಯಂತರದಿತನು ಸಿಲುಕಿ ನರಕದಲಿ ಆಯಾಸಗೊಂಡುಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದುಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ 5 ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿಪರವಶದೊಳಿರಲು ನೀರಡಿಕೆಯಾಗಿಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವದುರಿತ ರೂಪದ ತನುವ ಧರಿಸಲಾರೆ6 ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗಹಸಿದನಿವನೆಂದು ಹಾಲನೆ ಎರೆವರುಹಸಿವು ತೃಷೆಯಿಂದಳಲು ಹಾಡಿ ತೂಗುವರಾಗಪಶು ತೆರದಿ ಶಿಶುತನದೊಳಿರಲಾರೆ ಹರಿಯೆ 7 ನಡೆಯಲರಿಯದ ದುಃಖ ಮನಸಿನಲಿ ಬಯಸಿದುದನುಡಿಯಲರಿಯದ ದುಃಖ ವಿಷಯದಿಂದಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲುನುಡಿವ ಬಾಲ್ಯದೊಳಿರಲಾರೆ ಹರಿಯೆ 8 ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತುಗೋಳಿಡುತ ವಿದ್ಯೆ ಕರ್ಮಗಳ ಕಲಿತುಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿಬಾಲೆಯರ ಬಯಸಿ ಮರುಳಾದೆ ಹರಿಯೆ9 ಜ್ವರದ ಮೇಲತಿಸಾರ ಬಂದವೊಲು ಯೌವನದಿತರುಣಿಯೊಡನಾಟ ಕೂಟದ ವಿಷಯದಿತರುಣಿ ಸುತರ್ಗನ್ನ ವಸ್ತ್ರಾಭರಣವೆನುತಪರರ ಸೇವೆಯಲಿ ಘಾಡ ನೊಂದೆ ಹರಿಯೆ10 ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತುಜೊತೆಗಿಂದ್ರಿಯಗಳ ರೋಗ ರುಜಿನದಲಿಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದಕತ್ತಲೆಯೊಳೀ ದೇಹ ಕರಡಾಯಿತು 11 ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರುಕಟ್ಟಿ ಕಾದಿಹರು, ಮುಪ್ಪಡಿಸಿದಾಗತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ12 ತುಂಬಿ ಮೃತವಾಗಲುಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳುಮುಟ್ಟರು ಹೆಣನೆಂದು ದೂರವಿಹರು 13 ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದುಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರುಮತ್ತೆ ಬುವಿಯಲಿ ಜನಿಸಲಾರೆ ಹರಿಯೆ 14 ಯೋನಿ ಮುಖದಲಿ ಬಂದುಬನ್ನವನು ಪಡಲಾರೆ ಭವಭವದೊಳುಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿಸನ್ಮತಿಯೊಳಿರಿಸೆನ್ನ ಆದಿಕೇಶವರಾಯ 15
--------------
ಕನಕದಾಸ
ಹರಿಯೇಕಾಯೋ ಶರಧಿಶಯನನೇ ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ ಪ ಬಿರುದ ಧರಿಸಿ ಮೆರೆಯವೆ ನೀ ಧರೆಯೊಳು ಶುಭಚರಿತನೆ ಅ.ಪ ವರರುಕ್ಮಾಂಗದ ಪ್ರಹ್ಲಾದರು ದ್ರೌಪದಿ ವಿಭೀಷಣಶ- ಸಿರಿ ನಾಮದ ಮಹಿಮೆಯು 1 ಬುದ್ಧಿವಂತರೆಲ್ಲ ಮನವ ತಿದ್ದಿಕೊಳುತಲಹರ್ನಿಶಿಯಲಿ ವುದ್ಧವಪ್ರಿಯ ನಿನ್ನಪಾದ ಪದ್ಮಮಧುಪರೆನಿಪರು 2 ಗಹನವಳವಡುವಡಲ್ಲವು ಮಹಿಯೊಳು ಪಾಮರರಿಗೆ 3 ಪರ ಸುಖವನು ತಾವ್ಕೋರದೆ ಸದ್ಭಕುತಿಯಿಂದ ಸೇವಿಪರು 4 ಹೊರಳಿ ಹೊರಳಿ ನೋಯ್ವರು ಶ್ರೀ ಗುರುರಾಮ ವಿಠಲನೇ 5
--------------
ಗುರುರಾಮವಿಠಲ
93ಅಕ್ಕಟಕ್ಕಟೆಂನಗಂಡ ವೈಷ್ಣವನಾದ ಕಾರಣ |ರಕ್ಕಸಾಂತಕನ ಭಜಿಸಿರಚ್ಚೆ ಗೋಡಾಯಿತೆಂನ ಬದುಕು |ಅಕ್ಕಟಕ್ಕಟರೆಂನಗಂಡಪ.ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ |ಬಡ್ಡಿವಾಸಿಂರೊಳಗೆ ನಾಉ ಸುಖದೊಳಿದ್ದೆವು | ಅಡ್ಡಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ |ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ 1ಹೇಡಿಗೆ ತುಂಬ ದೇವರು ನಮ್ಮ ಮನೆಯೊಳಿರುವಕಾಲದಲ್ಲಿ | ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವುಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮಭಜಿಸಲಾಗಿ | ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯುಬಿದ್ದಂತಾಯಿತವ್ವ | ಅಕ್ಕಟ | 2ಕಾಲಿಝಂಣಕಾಲದಲ್ಲಿ ಮೂಲಂಗಿ ಬೊಳ್ಳಳ್ಳಿಗೆಡ್ಡೆ ತಂದುಕೊಟ್ಟರೆ ದೇವಸುಖವ ಕೊಡುವನೂ |ವೀರವಿಷ್ಣುವಿಗೆ ಕೊಟ್ಟುತ್ರಾಹಿ ತ್ರಾಹಿ ಎನ್ನಲಾಗಿಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿಹೋಯಿತವ್ವ | ಅಕ್ಕಟ3ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೇವೊಅರ್ಥಿಕಚ್ಚೆಯಂನು ಬಿಟ್ಟುನಿತ್ಯ ಕಚ್ಚೆ ಉಡೆಯಲಾಗಿವಿತ್ತಬದುಕುಯೆಲ್ಲ ಹೋಗಿ ವ್ಯರ್ಥವಾಗಿಹೋಯಿತವ್ವ | ಅಕ್ಕಟ4ಅತ್ತೆ ಮಾವ ಸತ್ತ ದಿವಸ ಪಿತ್ರುಕಾರ್ಯನಡಸಲಾಗಿ | ಕತ್ತೆ ನಾಯಿಹೊರಳಿದಂತೆ ನಂಟುನಂಟರಿಷ್ಟರೂ | ಶ್ರೀ ಪುರಂದರವಿಠಲನಭಜಿಸಲಾಗಿ | ತುತ್ತ ಗೊಂಬುದೊಂದು ಕೂಳುಬೆಲ್ಲದಹಾಗೆ ಆಯಿತವ್ವ5
--------------
ಪುರಂದರದಾಸರು
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |ಅಚ್ಯುತಾನಂತನ ದಯವಿಲ್ಲದೆ 1ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |ಸುಟ್ಟ ಸಂಸಾರದೊಳು ಸುಖವು ಇಲ್ಲ ||ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ 2ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |ಪನ್ನಗಾದ್ರಿ ಪುರಂದರವಿಠಲನ ದಯವಿರದೆ 3
--------------
ಪುರಂದರದಾಸರು