ಒಟ್ಟು 59 ಕಡೆಗಳಲ್ಲಿ , 35 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಕಿ ನಂದನ ಕೃಷ್ಣಾ ಭಂಜನ ಭಾವಜಪಿತ ಶ್ರೀಕೃಷ್ಣಾ ಪ ಇಭರಾಡ್ಪರದ ಶ್ರೀಕೃಷ್ಣ 1 ಶ್ರೀಕೇಶವ ಶಶಿ ಶೇಖರನುತ ಕರುಣಾಕರ ರೂಪ ಶ್ರೀಕೃಷ್ಣ 2 ಕುಂದರದನ ಕಾಲಿಂದೀವರ ಮನ್ಮಂದಿರೋದ್ಧಾರ ಶ್ರೀಕೃಷ್ಣಾ 3 ಶ್ರೀ ಖಗಪತಿವಾಹನ ಕೃಷ್ಣ 4 ಚಾರುಚರಿತ ವಿಸ್ತಾರ ಮಹಿಮಾ ನೀರೇರುಹಲೋಚನ ಕೃಷ್ಣ 5 ಕೈಟಭ ದಾನವ ಖಂಡನ ಭಾಸುರ ಹಾಟಕಾಂಬರಧರ ಕೃಷ್ಣ 6 ಶ್ರೀಪತಿಭವ ಸಂತಾಪಹರಣ 'ಹೆನ್ನೆಪುರನಿಲಯ' ಕೃಷ್ಣಾ 7
--------------
ಹೆನ್ನೆರಂಗದಾಸರು
ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ಹಿಂಡು ಪ ಧನ್ಯನಾದೆನೂ ಕಾಮನ್ನ ಪಿತನ ಲಾ ವಣ್ಯ ಮೂರುತಿಯ ಕಣ್ಣಿಲೆ ಕಂಡು ಅ.ಪ. ದೇವವರೇಣ್ಯ ಸದಾ ವಿನೋದಿ ವೃಂ ದಾವನ ಸಂಚರ ಗೋವನ ಕಂಡು 1 ಮಂಗಳಾಂಗ ಕಾಳಿಂಗ ಮಥsÀನ ಮಾ ತಂಗವರ ವರದ ರಂಗನ ಕಂಡು 2 ಹಾಟಕಾಂಬರ ಕಿರೀಟ ಸಾರಥಿ ತಾಟಕಾರಿ ವೈರಾಟನ ಕಂಡು 3 ಚಿಂತಿತ ಫಲವ ಕೃತಾಂತನಾತ್ಮಜಾ ದ್ಯಂತರಹಿತ ನಿಶ್ಚಿಂತನ ಕಂಡು 4 ಮಾತುಳಾಂತಕ ವಿಧಾತಪಿತ ಜಗ ನ್ನಾಥ ವಿಠಲ ವಿಖ್ಯಾತನ ಕಂಡು 5
--------------
ಜಗನ್ನಾಥದಾಸರು
ನಾನೇ ಭ್ರಮಿಸಿದೆನೋ ವಿಷಯ ಸಂಗ ನೀನೇ ನಲಿದಿತ್ತೆಯೋ ಪ. ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ. ನೂಕುತ ದಿನ ಕಳೆದೆ ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ 1 ಆಟ ಪಾಟ ನೋಟವೂ ಊಟ ಕೂಟ ಕಾಟ ಕರ್ಮಗಳೆಲ್ಲವೂ ಹಾಟಕಾಂಬರ ನಿನ್ನಾಟವÉನ್ನಲುಭವ ದಾಟಿಸುವವೊ ತೆರೆ ಏಟಿಗೆ ಕೊಡುವುವೋ 2 ನರಕಕೆ ಕಾರಣವೋ ಹೇ ಶ್ರೀನರ ಹರಿ ನಿನ್ನ ಪ್ರೀತಿ ಕರವೋ ಸಂಚಿತ ಕರ್ಮ ಹರಿಸುತ ವರ ಸುಖ ಪಾಲಿಪ ಗುರುತಿನ ಪರಿಯೋ 3 ದೇಹಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 4 ಪಾಪಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 5 ಪಾಪಕ್ಕೆ ಕಾರಣವೋ ಈ ಕರ್ಮಗಳ ಳಾಪದುದ್ಧಾರಕವೋ ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ 6
--------------
ಅಂಬಾಬಾಯಿ
ನಾರಾಯಣ ವಿಠ್ಠಲನೆ ನೀನಿವನ ಕಾಪಾಡೊ ಹರಿಯೆ ಪ ನೀರಜಾಸನವಂದ್ಯ ಪೋರ ನಿನ್ನವನೆಂದುಕಾರುಣ್ಯದಲಿ ಕೈಪಿಡಿದು ಕಾಪಾಡೊ ಹರಿಯೇ ಅ.ಪ. ಜ್ಞಾನಾಯು ರೂಪಕ ಸು | ವಾಯುದೇವನೊಳಿದ್ದುನೀನಿವಗೆ ಜ್ಞಾನಾಯು ಸಂಪದವನೀಯೋ |ಮೌನಿಕುಲ ಸನ್ಮಾನ್ಯ ಪೂರ್ಣಪ್ರಜ್ಞರ ಮತದಿ ಜ್ಞಾನಿ ಎಂದೆನಿಸಿವನ ಕಾಪಾಡೊ ಹರಿಯೆ 1 ಗೋವುಗಳೊಳುದ್ಗೀಥ ಕಾವ ಕರುಣಿಯೆ ದೇವಭಾವದಲಿ ನೀನಿದ್ದು ಉದ್ಧರಿಸೊ ಹರಿಯೇ |ಆವ ಭವವನಧಿ ಲಕ್ಷ್ಮೀ ನರಹರಿಯೇನೋವುಗಳ ಪರಿಹರಿಸೊ ಪವನ ಪ್ರೀಯ 2 ಹೆಂಚು ಹಾಟಕದಲ್ಲಿ ಸಮಬುದ್ಧಿ ನೀನಿತ್ತುಪಂಚ ಪಂಚಿಕೆ ತತ್ವ ತರತಮವ ತಿಳಿಸುತ್ತಮಿಂಚಿನಂತಿವನ ಹೃತ್ಪಂಕಜದಿ ಪೊಳೆಯೊವಾಂಛಿತ ಪ್ರದನೆ ಗುರು ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಪಂಪಾಪತಿಯೆ ಶಂಭೋ - ಪಾಲಿಯ ಪ ಶಂಫಲಿ ಪುರಗ ವಿರಂಚಿ ಪಿತ ಪದನೋಂಪಿಗೈವ ಮನ | ಇಂಪಾಗಿ ಕೊಡು ಹರ ಅ.ಪ. ಪಂಚ ಬಾಣಾರಿ ಮಹದೇವಾ | ತ್ವರ್ಯಸಂಚುಗೊಳಿಸೊ ಹರಿ ಭಾವಾ |ಹೆಂಚು ಹಾಟಕ ಸಮ | ಸಂಚಿಂತನೆಯ ಕೊಟ್ಟುಸಂಚಿತಾಗಾಮಿ ಕಳೆ | ವಾಂಛಿತಾರ್ಥವ ಶಿವ 1 ಸಯ5ೂ ಮನಕಭಿಮಾನಿಯೆ 5sÁವಿಶಯ್ಯ ಹರಿಗೆ ಎಂಬೊ ರೂಪಿಯೇ ||ಸ್ಥೈರ್ಯ ವನದಿ ಹರಿ | ಪ್ರೀಯ ಪಾಲಿಸಿನ್ನುಕೈಯ್ಯ ಪಿಡಿದು ಕಾಯೊ | ಅಯ್ಯ ನಿನಗೆ ಶರಣು 2 ದಿವಿಜ ಪ್ರಿಯಸರ್ವಾರ್ಪಣೆಂಬ ಮನ | ಭಾವವ ಪಾಲಿಸು 3 ಮಾಧವ ಪ್ರಿಯಚಂದ್ರಾರ್ಕಾನಲ ಚಕ್ಷು | ತಂದೆ ಕಾಯೋ ಹರ4 ಪರಿ ಪರಿ ಪಾಲಕಾ ಗುರು |ಗೋವಿಂದ ವಿಠಲನ ಅರ್ಚಕಾ ||ತೀವರದಲಿ ಮನ | ಮಾವಾರಿ ಪದ ಸ್ಮøತಿಭಾವದಲಿಡು ಶಿವ | ಆವ ದನ್ಯವನೊಲ್ಲೆ 5
--------------
ಗುರುಗೋವಿಂದವಿಠಲರು
ಪಾಲಿಸೊ ಮನ್ಮಾನಸಾ | ಮಂದಿರಶ್ರೀಲೋಲ ಭಕ್ತ ಪೋಷ ಪ ಭಂಜನ ರಾಮ | ಗಾಳಿ ಸುತಗೆ ಪ್ರೇಮ ಅ.ಪ. ದೈತ್ಯ ಜನರು ಬಹಳಾ | ಎನ್ನ ತಮ್ಮಭೃತ್ಯನ ಮಾಡಿ ಜಗಳಾ ||ನಿತ್ಯವಾಡುತಲೆನ್ನ | ಕೃತ್ಯಾಗಳಿಗೆ ದೋಷಎತ್ತಿಸುತಿಹರಯ್ಯ ದೈತ್ಯ ನಿಷೂದನ 1 ಸಂಚೀತಾಗಾಮಿ ನಾಶಾ | ಗೈ ಭವವಂಚೀತನಿಹೆ ಶ್ರೀಶಾ ||ಹೆಂಚು ಹಾಟಕ ಸಮ | ಸಂಚಿಂತನೆಯ ಕೊಟ್ಟುಕೊಂಚ ಮತಿಯ ಕಳೆ | ವಾಂಛಿತಾರ್ಥದ ಹರಿ 2 ಜನ್ಮಾಜನ್ಮವು ಬರಲೀ | ತವಸ್ಮøತಿಕರ್ಮಾಕರ್ಮದೊಳಿರಲೀ ||ಭರ್ಮ ಗರ್ಭನಯ್ಯ | ಸುಮ್ಮನಸರ ಪ್ರೀಯನಿರ್ಮಲ ಭಕ್ತಿಯಿತ್ತು | ಹಮ್ರ್ಯದೊಳಗೆ ತೋರೊ 3 ಸುರರು ಭೋಕ್ತ ಭಂಜನ ಭವ 4 ಭವ ಭವ | ಕಾರುಣ್ಯಾತ್ಮಕ ದೇವ 5
--------------
ಗುರುಗೋವಿಂದವಿಠಲರು
ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಿಯ ಪಾಂಡುರಂಗ ವಿಠಲ | ದಯದೋರೊ ಇವಗೆ ಪ ನಯವಿನಯದಿಂ ಬೇಡ್ವ | ಹರಿದಾಸದೀಕ್ಷಾ ಅ.ಪ. ಸದ್ವಂಶದಲಿ ಬಂದು | ಮಧ್ವಮತದೀಕ್ಷೆಯಲಿವಿದ್ಯೆಯನು ತಾ ಕಲಿತು | ಹರಿದಾಸ್ಯದಿ ಮನವಬುದ್ಧಿ ಮಾಡ್ಡವ ನೀನೆ | ಮಧ್ವಾಂತರಾತ್ಮಕನೆಸದ್ವಿಧ್ಯೆತರತಮವ | ಬುದ್ದಿಗೆಟಕಿಸೊ ದೇವಾ 1 ಪಂಚಬೇಧವನರುಹಿ | ಪಂಚಾತ್ಮ ನಿನಕಾಂಬಸಂಚುಗಳ ತಿಳಿಸುತ್ತ | ಕಾಪಾಡೊ ಇವನಾಅಂಚೆಗಮನನೆ ಪಿತನೆ | ನಿಷ್ಕಿಂಚನಾರಾಧ್ಯಹೆಂಚು ಹಾಟಕದಿ ಸಮ | ಬುದ್ದಿಯನೆ ಈಯೋ2 ಭಕ್ತಿ ವೆಗ್ಗಳವಾಗಿ | ನಿತ್ಯತವ ಪದಮಹಿಮೆಸತ್ಕೀರ್ತಿ ಪಾಡುತಲಿ | ಹರಿಗುರು ಸೇವಾ ಕೃತ್ಯದಲಿ ಸನ್ಮೋದ | ಚಿತ್ತದಲಿ ಆನಂದಬಿತ್ತುತಲಿ ಪೊರೆ ಇವನ | ಚಿತ್ತಜನಪಿತನೆ 3 ಗುಣರೂಪ ಕ್ರಿಯೆಗಳಲಿ | ಅನಗುತನು ವ್ಯಾಪ್ತನೂಎನುವ ಸುಜ್ಞಾನವನು | ಕರುಣಿಸೊ ಹರಿಯೇಕನುಕರಣ ಮನಮೂಲ | ಗುಣಭೋಗದನುಭವನಉಣಿಸಿ ಸಾಧನಗೈಸಿ | ಪೊರೆ ಇದನ ಹರಿಯೇ 4 ನೋವು ಸುಖಗಳ ಸಮತೆ | ಭಾವವನೆ ಕರುಣಿಸುತಶ್ರೀ ವರನೆ ಪೊರೆ ಇದನ | ಸರ್ವಾಂತರಾತ್ಮಾಶ್ರೀ ವಲ್ಲಭನೆ ಗುರು | ಗೋವಿಂದ ವಿಠಲನೆಓದಿಮದ್ಭಿನಪವ | ಪಾಲಿಸೊ ಹರಿಯೇ5
--------------
ಗುರುಗೋವಿಂದವಿಠಲರು
ಫಾಲಲಿಪಿ ಪರಿಹರಿಸಿಕೊಂಬರುಂಟೆ |ಕಾಲನಾಮಕ ನಿನ್ನ ಕ್ಲಪ್ತದಲಿ ಬರೆದಿದ್ದ ಪ ಸಾಲು ಸ್ಫಟಿಕದ ರತ್ನಮಯವಾದ ಮನೆ ಇರಲು ವಿಶಾಲ ಪರ್ನದ್ದಾದರಿರಬಾರದೆ ||ಆಳುಗಳು ಬಹುಮಂದಿ ಇದ್ದವಗೆನುಡಿದ ಮಾತಾಲಿಸುವ ನರನೊಬ್ಬನಿರಬಾರದೆ 1 ಜ್ಞಾನದಲಿ ಹರಿರೂಪ ಬಹಿರಂತರದಿ ನೋಳ್ಪಆನಂದದಲಿ ಸತತ ಇದ್ದವಗೆ ||ಧ್ಯಾನದಲಿ ಕ್ಷಣಮಪಿ ಕರುಹು ಕಾಣಿಸಿಕೊಂಬ ದೀನ ಮನವಾದರೂ ಇರಬಾರದೆ 2 ಕೋಟಿ ದ್ರವ್ಯವು ಇದ್ದು ನೀಟ ಕವಡಿ ಇಲ್ಲದೆಕಾಟ ಕಾಣದೆ ಸೊರಗಿ ಮರುಗಿದಂತೆ ||ಹಾಟಕಾಂಬರಧಾರ ಗುರು ವಿಜಯವಿಠ್ಠಲರೇಯದಾಟುವರಿಲ್ಲ ನಿನ್ನ ಪ್ರಬಲ ಶಾಸನವ 3
--------------
ಗುರುವಿಜಯವಿಠ್ಠಲರು
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶ ಮಾಧವ ಮಧುರಿಪು ಮಾನುಷವೇಷ ಶರಣಾಗತಪೋಷಪ. ವೇದಾಗಮ್ಯ ದಯೋದಧಿ ಗೈದಪ- ರಾಧ ಕ್ಷಮಿಸಿ ಸುಗುಣೋದಯನಾಗುತಅ.ಪ. ಅನಾಥ ಜನರ ಕಾಮಧೇನು ಕಾಯೊ ಎಮ್ಮನು ದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನು ಆನತಜನ ಸುತ್ರಾಣಿಸುವಂತೆ ಪ್ರ- ದಾನಿಯಂತೆ ಶತಭಾನು ಪ್ರಕಾಶದಿ1 ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮ ಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮ ಕಾಟಕ ಮನಸಿನ ಮಾಟವ ನಿಲ್ಲಿಸಿ ಘೋಟಕಾಸ್ಯ ನರನಾಟಕಧಾರಿ2 ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆ ಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆ ಕಾಣಿಸದೆಮ್ಮಲಿ ಮೌನವ ಮಾಳ್ಪರೆ ದೀನಜನರ ದುಮ್ಮಾನಗೊಳಿಸುವರೆ 3 ಹಿಂದೆಮ್ಮ ಕಾಯ್ದವ ನೀನೆ ಹರಿ ಸುರನರ ಕೈವಾರಿ ಮಂದಜ್ಞಾನಿಗಳ ತಪ್ಪನು ಮಾರಿ ಮೂರ್ಲೋಕೋದ್ಧಾರಿ ಹೊಂದಿದವರಿಗೆಂದೆಂದಿಗು ಬಿಡನೆಂ- ಬಂದವ ತೋರಿ ಆನಂದವ ಬೀರುತ 4 ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದ ಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದ ಒಪ್ಪಿಸಿದೆಮ್ಮಭಿಪ್ರಾಯವ ತಿ- ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ. ನಿರಂಜನ ತಾ ಲೀಲೆಯಿಂದ1 ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2 ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3 ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4 ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5
--------------
ವ್ಯಾಸರಾಯರು
ಬೊಮ್ಮ ಕೃಷ್ಣನ ಹಾಡುತ ಪಾಡುತಜನರೆಲ್ಲ ಉತ್ಕøಷ್ಟರಾಗಿಹರಮ್ಮ ಪ. ಪ್ಯಾಟಿಯ ಎದುರಾಗಿ ಕೋಟೆಬಾಗಿಲ ಕೋಟ ಸೂರ್ಯರ ಬೆಳಕಿಲೆ ಕೋಟ ಸೂರ್ಯನ ಬೆಳಕಿಲೆ ಹೊಳೆವಂಥಹಾಟಕಾಂಬರÀನ ಅರಮನೆ 1 ಪನ್ನಗ ಶಯನನ ಅರಮನೆ2 ಭಾಗವತ ಪ್ರಿಯಸಾಗರ ಶಯನನ ಅರಮನೆ ಸಾಗರ ಶಯನನ ಅರಮನೆಯ ಬಾಗಿಲೊಳು ಹೋಗಿ ಬರುವವರು ಕಡೆಯಿಲ್ಲ3 ನಾಗಶಯನನ ಮನೆ ಬಾಗಿಲು ಮುಂದೆಸೋಂಗ್ಹಾಕಿ ನಿಂತ ಕೆಲವರುಸೋಂಗ್ಹಾಕಿ ನಿಂತ ಕೆಲವರು ಸಭೆಯೊಳು ಹೋಗಬೇಕೆಂಬೊ ಭರದಿಂದ 4 ದಾಸರು ಬಗೆಬಗೆ ಸೋಸಿಲೆ ತಳವೂರಿಶ್ರೀಶ ರಾಮೇಶನ ಅರಮನೆ ಮುಂದೆಶ್ರೀಶ ರಾಮೇಶನ ಅರಮನೆ ಮುಂದಿನ್ನು ಕೂಸೆತ್ತಿಕೊಂಡು ನಿಂತ ಕೆಲವರು5
--------------
ಗಲಗಲಿಅವ್ವನವರು
ಮಂಗಳಂ ಮಂಗಳಂ ತುಲಸಿದೇವಿಗೆ ಪ ಮಂಗಳಂ ರಂಗನ ಅರ್ಧಾಂಗಿಗೆ ಮಾಧವ ಮಂಗಳ ಭಕ್ತರ ಸಲಹುವ ತಾಯಿಗೆ ಮಂಗಳ ಮಹಿಷಾಸುರಮರ್ದಿನಿಗೆ 1 ಮಂಗಳ ಮಂದಾರ ವನವಾಸಿಗೆ ಶರಧಿ ಉದ್ಭವಳಿಗೆ ಮಂಗಳ ರಾಮದಾಸಗಭಯವಿತ್ತವಳಿಗೆ ಮಂಗಳ ಸಂಜೆಯೊಳ್ ಪೂಜೆಗೊಂಬುವಳಿಗೆ 2 ಮಂಗಳ ನಾರದನುತ ಅಂಬೆಗೆ ಮಂಗಳ ಸೇವಿತ ಸುರ ಸಮುದಾಯಗಳಿಗೆ ಮಂಗಳ ಮನೋಭೀಷ್ಟದಾಯಕಳಿಗೆ ಮಂಗಳ ಹರಿದ್ರಾ ಕುಂಕುಮನಿಡುವಳಿಗೆ 3 ಮಂಗಳ ಕೃಷ್ಣನ ಅಂತಸ್ಥಿತಳಿಗೆ ಮಂಗಳ ಜಗನ್ಮೋಹನ ದೇವಿಗೆ ಮಂಗಳ ಹಾಟಕ ಸಮಕಾಂತ್ಯಾವಳಿಗೆ ಮಂಗಳ ಬೃಂದಾವನ ದೇವಿಗೆ 4 ಕಮಲ ಲೋಚನದೇವಿಗೆ ಮಂಗಳ ಪೀತಾಂಬರಧಾರಿ ಸುಂದರಿಗೆ ಮಂಗಳ ಸರ್ವಾಭರಣ ಭೂಷಿತಳಿಗೆ ಮಂಗಳ ವಿಜಯ ರಾಮಚಂದ್ರವಿಠಲನ ರಾಣಿಗೆ 5
--------------
ವಿಜಯ ರಾಮಚಂದ್ರವಿಠಲ
ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಮಾಧವ ಮಧುಸೂದನ ಗೋವರ್ಧನ ಪ ದೋಷನಿವಾರಣ ಶೇಷಾರಿಗಮನ ವಾಸುಕಿಗಿರಿಶಯನ 1 ಕೀಟಕ ಸಂಹರ ಹಾಟಕಾಂಬರ ತಾಟಕಿಪ್ರಾಣಹರಣ 2 ಕೌಸ್ತುಭಮಾಲಾ ಕುಜನರ ಕಾಲ ಕಂಸಾಸುರಾದಿ ಮರ್ದನ 3 ಗೋಕುಲವಾಳಿದ ಗೋಪಿಯರ್ವರದ ಗೊಪ ಗೋಪತಿ ನಂದನ 4 ಮಂದರ ನಿಲಯ ಸಿಂಧುಜಾಪ್ರಿಯ ಬಂಧುವೆ ಅನಾಥಜನ 5 ಜಗದೋದ್ಧಾರಣ ಜಗತ್ರಯಮೋಹನ ಜಗಜೀವನ ಪಾವನ 6 ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ ಶಂಖಸುರಾದಿ ಮರ್ದನ 7 ಯದುಕುಲಸಂಭವ ಸದಯ ಯಾದವ ಸದಮಲಸುಖಸದನ 8 ಹರಿಗೋವಿಂದ ಪರಮಾನಂದ ನರಹರಿ ಸಿರಿರಮಣ 9 ಸಿರಿನರಸಿಂಗ ಪರಿಭವಭಂಗ ಪರತರ ಗಿರಿಧಾರಣ 10 ನಿತ್ಯನಿರಾಮಯ ನಿರ್ಗುಣ ನಿರ್ಭಯ ನಿರಂಜನ 11 ಪರಮಪುರುಷ ಹರಿ ಸರ್ವೇಶ ಸುರಮುನಿನುತಚರಣ 12 ನಿಮಗೋಚರ ಜಗದಾಧಾರ ಅಘನಾಶ ಭಜಕಜನ 13 ವೇದಾದಿನಮಿತ ವೇದವೇದಾತೀತ ಸಾಧುಸಜ್ಜನಪ್ರಾಣ 14 ವರದಶ್ರೀರಾಮ ನಿರತರ ಪ್ರೇಮ ಪರಿತರ ಪರಿಪೂರ್ಣ15
--------------
ರಾಮದಾಸರು