ಒಟ್ಟು 38 ಕಡೆಗಳಲ್ಲಿ , 14 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಮೋಹನ ಕೃಷ್ಣವಿಠಲ | ಸಲಹ ಬೇಕಿವಳಾ ಪ ದೇಹ ಮಮತೆಯ ಕಳೆದು | ವೈರಾಗ್ಯವಿತ್ತೂ ಅ.ಪ. ವನಧಿ ಉತ್ತರಿಪ | ನವಪೋತ ಹರಿಯಾ |ಸ್ತವನ ಗೈಯುವ ಭಕ್ತಿ | ಪ್ರವಹ ಕೊಟ್ಟಿವಳಿಗೆಹವಣಿಸೋ ಸಾಧನವ | ಶ್ರೀವರನೆ ಕೃಷ್ಣಾ 1 ಭಾರತೀ ಪತಿಯಾದ | ಮಾರುತದ ಮತದಲ್ಲಿಸಾರತತ್ವವ ತಿಳಿಸಿ | ತೋರೋ ಸುಜ್ಞಾನ |ಮಾರುತಾಂತಾರ್ಗತನೆ | ಧೀರ ಸುಜನರ ಸಂಘಸಾರುವಂತೆಸಗೊ ಹರಿ | ಕಾರುಣ್ಯ ಮೂರ್ತೇ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀ ಹರಿಯೆಂಬಗುಪ್ತ ಮಹಿಮೆಯ ತಿಳಿದು | ಸೇವೆ ಸಲ್ಲಿಸುತಾ |ಅತಿಶಯದ ಆನಂದ | ಗತಿಯ ಸೇರುವ ಹವಣೆಕೃತಿಪತಿಯ ತೋರೆಂದು | ಪ್ರಾರ್ಥಿಸುವೆ ಹರಿಯೇ 3 ಗುರುಕರುಣವಿಲ್ಲದಲೆ | ಹರಿಯೊಲಿಯನೆಂದೆಂಬವರತತ್ವ ಸಾರವನೆ | ಕರುಣಿಸುತ ಹರಿಯೇ |ಹರಿಗುರು ಸೇವೆಯನು | ಕರಣತ್ರಯದಲಿ ಮಾಳ್ದವರಮತಿಯ ಪಾಲಿಸುತ | ಪೊರೆಯ ಬೇಕಿವಳಾ 4 ಸೃಷ್ಠಿ ಸ್ಥಿತಿ ಲಯ ಕರ್ತ | ವಿಷ್ಣು ಲೀಲಾಮೃತವಸುಷ್ಟುಸಂತತ ಸವಿವ | ಶ್ರೇಷ್ಠ ಸಾಧನವಾಕೊಟ್ಟು ಪಾಲಿಪುದೆಂಬ | ಇಷ್ಟವನೆ ಸಲಿಸೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6
--------------
ಗುರುರಾಮವಿಠಲ
ವರಗುರು ತಂದೆ ಮುದ್ದು ಮೋಹನದಾಸರೆಗಿತ್ತರು ಲೇಸ ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಪ ರಾಗ ದ್ವೇಷಾದಿಗಳಿವರೊಳಗಿಲ್ಲ ಪಾಮರರಿವರಲ್ಲ ಶ್ರೀ ಗುರುಗಳೆನಗಿವರೆಂದು ಸ್ತುತಿಪನಲ್ಲ ಲಾಲಿಪುದೆನಸೊಲ್ಲ 1 ಶುಭ ಚರಿತೆಯನು ಜ್ಞಾನಿಗಳೆಂಬುದನು ಖುಲ್ಲ ಜನ ನಿಂದಿಸಿದರಾಗುವದೇನೊ ಅರಿಯೆನಯ್ಯ ನಾನು 2 ಪಾದ ಸರಸಿರುಹಕೆ ಭ್ರಮರರೆನಿಸುವ ಗುಣಯುತರ ಕುಜನಗಳೇನು ಬಲ್ಲರಯ್ಯ ಇವರ ಮಹಿಮಂಗಳ ವಿವರ 3 ಕರಿಗಿರಿಯೆಂಬ ವರಕ್ಷೇತ್ರದಲ್ಲಿ ವರುಷಂಪ್ರತಿಯಲ್ಲಿ ಹರಿದಾಸೋತ್ತಮ ಧರಣಿಸುರರನಲ್ಲಿ ಬಲು ಸೇವಿಪರಲ್ಲಿ 4 ಇಷ್ಟದೈವ ಅಪವರ್ಗಪ್ರದನೆಂಬ ಶ್ರೀ ನರಹರಿಯೆಂಬ ದಿಟ್ಟ ಶ್ರೀ ರಂಗೇಶವಿಠಲನ ಬಿಂಬಾಕೃತಿಯ ಸದಾ ಕಾಂಬ 5
--------------
ರಂಗೇಶವಿಠಲದಾಸರು
ವರಾಹ | ವಿಠಲ ಪೊರೆ ಇವನ ಪ ಮೋದ ಮುನಿ ಸನ್ನುತನೆ | ಆದಿ ಮೂರುತಿಯೇ ಅ.ಪ. ಸ್ವೋಚಿತಸು ಕರ್ಮದಲಿ | ಊಚ ದೀಕ್ಷೆಯನಿತ್ತುನೀಚೋಚ್ಚತರತಮವ | ವಾಚಿಸಿವನಲ್ಲೀಪ್ರಾಚೀನ ದುಷ್ಕರ್ಮ | ಮೋಚನೆಯಗೈಸವ್ಯಸಾಚೀ ಸಖನೆ ಹರಿಯೆ | ಕೀಚಕಾರಿ ಪ್ರೀಯಾ 1 ಸತಿ ಸುತರು ಬಂಧುಗಳು | ಹಿತ ಅಹಿತರಿವರಲ್ಲಿವ್ಯಾಪ್ತ ಶ್ರೀ ಹರಿಯೆಂಬ | ಮತಿಯ ಕೊಟ್ಟವಗೇ ||ಸತತ ತವನಾಮಾ | ಮೃತದ ಸವಿದೋರೋವಿತತ ಮಹಿಮೋ ಪೇತ | ಪ್ರತಿ ರಹಿತ ದೇವಾ2 ಪಥ ಚಾರು ಭವ ಕೂಪಾರ | ಪಾರು ಮಾಡಯ್ಯಾ3 ಸಾರ | ವಾರವಾರಕೆ ಉಣಿಸಿದಾರಿ ದೀಪಕನಾಗೊ | ಮಾರಮಣನೆ ದೇವಾತಾರಕನು ನಿನ್ಹೊರತು | ಆರು ಇಲ್ಲವುಯೆಂದುಪ್ರಾರ್ಥಿಸುವೆ ನಿನ್ನಡಿಗೆ | ವೀರರಘು ಪತೆಯೇ4 ಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶಿರಿ ಮುದ್ದು ಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಪಾದ | ಸಾರಿ ಭಜಿಸುವಳಾ ಅ.ಪ. ಪರಿಪರಿಯ ವಿಧದಿಂದ | ತೈಜಸನೆ ನೀನಾಗಿವರಸೂ ರೂಪಗಳಿಂದ | ವಸುದೇವ ಸುತನೇತರಳೆಗತಿ ಆಶ್ಚರ್ಯ | ತೋರಿ ಅಡಗಿದೆ ದೇವಶಿರಿಮುದ್ದು ಕೃಷ್ಣನೇ | ಮರುತಂತರಾತ್ಮ 1 ಸುಪ್ತಿಯಲಿ ಗುರುಪಾದ | ಭಕ್ತಿಯಲಿ ನಮಿಸುತ್ತತೀರ್ಥವನೆ ತಕ್ಕೊಂಡು | ಧನ್ಯನಾನೆಂದುಅತ್ಯಂತ ಹರ್ಷದಲಿ | ಸ್ತೋತ್ರವನೆ ಮಾಡುತ್ತಸಕ್ತಿಯನೆ ತೋರಿಹಳು | ದಾಸಪಂಥದಲೀ 2 ಭುವನ ಪಾವನವೆನಿಪ | ಮಧ್ವಮತದಾಸಕ್ತಿಶ್ರವಣಕಾನಂದವೆನೆ | ಕವನ ಸಂಸ್ಪೂರ್ತೀಜೀವೊತ್ತಮರ ಭಕುತಿ | ವಿಷಯದಲಿ ವಿರಕ್ತಿಹವಣಿಸೋ ಶ್ರೀಹರಿಯೆ | ಭವಕರಿಗೆ ಹರಿಯ 3 ಪತಿಸುತರು ಹಿತರಲ್ಲಿ | ಮತಿಮತಾಂವರರಲ್ಲಿರತನು ಶ್ರೀಹರಿಯೆಂಬ | ಸುಜ್ಞಾನವನ್ನುಕೃತಿಪತಿಯ ಕರುಣಿಸುತ | ಸಾಧನವ ಗೈಸುವುದುಚತುರಾಸ್ಯಪಿತ ಹರಿಯೆ | ದುರಿತವನ ದಾವಾ 4 ಮಾನನಿಧಿ ಶ್ರೀಹರಿಯೆ | ಧ್ಯಾನಾನುಕೂಲಿಸುತಸಾನುರಾಗದಿ ನಿನ್ನ | ರೂಪಹೃದ್ಗುಹದೀಕಾಣಿಪಂತಸಗೊ ಗುರು | ಗೋವಿಂದ ವಿಠಲನೆಆವಾದದನ್ಯವನು | ಬೇಡ ಬಂದಿಲ್ಲ5
--------------
ಗುರುಗೋವಿಂದವಿಠಲರು
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು
ಶ್ರೀಹರಿಶರಣರು ನಮ್ಮವರು ಭವ ಶರಧಿಯ ಜಿಗಿದರು ನಮ್ಮವರು ಪ ಪರಮನ ಚರಣದಿ ಅರಿವಿಟ್ಟುರತರ ದುರಿತದಿಂದುಳಿದರು ನಮ್ಮವರು ಅ.ಪ ನಿತ್ಯತೃಪ್ತರು ನಮ್ಮವರು ಜಗ ಮಿಥ್ಯೆಂದರಿತರು ನಮ್ಮವರು ನಿತ್ಯ ಸರ್ವೋತ್ತಮ ಹರಿಯೆಂಬ ವೃತ್ತಿ ಬಲಿಸಿದರು ನಮ್ಮವರು 1 ಸತ್ತು ಚಿತ್ತರು ನಮ್ಮವರು ಮಹ ನಿತ್ಯ ಮುಕ್ತರು ನಮ್ಮವರು ಮುಕ್ತಿದಾಯಕನಂ ಗುರ್ತಿಟ್ಟರಿಯುವ ಸತ್ವ ಕಾಲಗಳು ನಮ್ಮವರು 2 ನಿರ್ಮಲಾತ್ಮಕರು ನಮ್ಮವರು ನಿಜ ಧರ್ಮ ನಿರತರೈ ನಮ್ಮವರು ಬೊಮ್ಮನಯ್ಯನ ಮರ್ಮ ತಿಳಿದು ದು ಷ್ಕರ್ಮವ ಗೆಲಿದರು ನಮ್ಮವರು 3 ದೋಷದೂರರು ನಮ್ಮವರು ನಿ ರಾಸೆ ತಾರರು ನಮ್ಮವರು ಹೇಸಿದೈವಗಳ ಆಶಿಸಿ ಬೇಡದ ಕೇಶವನ ದಾಸರು ನಮ್ಮವರು 4 ಭಜನಾನಂದರು ನಮ್ಮವರು ಸ್ಥಿರ ನಿಜ ಪದವರಿದರು ನಮ್ಮವರು ಕುಜನ ಕುಹಕಿಗಳ ಗಜಿಬಿಜಿಗಳುಕದೆ ಸುಜನರೆನಿಸಿದರು ನಮ್ಮವರು 5 ಭೂರಿ ಶೀಲರು ನಮ್ಮವರು ದುಷ್ಟ ಕೇರಿಯ ಮೆಟ್ಟರು ನಮ್ಮವರು ಸಾರಸಾಕ್ಷನ ಸವಿಸಾರವರಿದು ಪಾದ ಸೇರಿಕೊಂಡಿರುವರು ನಮ್ಮವರು 6 ಸದಮಲಾನಂದರು ನಮ್ಮವರು ದು ರ್ಮದವ ನೂಕಿದರು ನಮ್ಮವರು ಅಧಮತನದಲಿಂದೊದರುವ ಹೊಲೆಯರ ಎದೆಯ ತುಳಿವರೈ ನಮ್ಮವರು 7 ಮೋಸಕೆ ಸಿಲ್ಕರು ನಮ್ಮವರು ಯಮ ಪಾಶವ ಗೆಲಿದರು ನಮ್ಮವರು ಈಶನ ತಿಳಿದರು ನಮ್ಮವರು 8 ಸುಗಣ ಸಂತರು ನಮ್ಮವರು ಮಹ ಭಗವದ್ಭಕ್ತರು ನಮ್ಮವರು ರಘು ಶ್ರೀರಾಮ ಜಗಸರ್ವೋತ್ತಮೆಂದು ಪೊಗಳುತ ನಲಿವರು ನಮ್ಮವರು 9
--------------
ರಾಮದಾಸರು
ಸನಿಹದಲೆ ದೆಸೆದೆಸೆಗೆ ಪ ಇನಿತುಪಾದಗಳಿಂದ ಅನಿಲನ ಸೋಲಿಸಿ ಅ.ಪ ಕಾಮಕ್ರೋಧಗಳೆಂಬ ನೇತ್ರಗಳಿದಕಿದೆ ವ್ಯಾಮೋಹ ಲೋಚನ ಎಂಬ ಕರ್ಣಂಗಳಿವೆ ದುರ್ಮದವೆಂಬುವ ಪುಚ್ಚವೊಂದಿಹುದಯ್ಯ ಈ ಮದಹಯಕೆ ಮಾತ್ಸರ್ಯ ನಾಸಿಕವಯ್ಯ1 ಮೃಡನು ತಾ ಎಂಬುವ ಕಡಿವಾಣದ ಹಿಡಿ ದೃಢಭಕ್ತಿಯೆಂಬ ಪಾಶ ಕೊರಳೊಳಗಿರಲಿ ಎಡಗೈಯೊಳು ಹರಿಯೆಂಬ ಕೊಳಲನು ಹಿಡಿ ತಡವೇಕೆ ಮನುಜ ಓಡಿ ಹಯವ ತಡಿ 2 ಆಡಲು ನಿಲಬೇಡ ನೋಡಿ ನಲಿಯಬೇಡ ಓಡಾಡಿ ತುರಗವ ಹಿಡಿ ಹಿಡಿ ಮನುಜ ಓಡಿ ಹಯವ ಪಿಡಿದು ಬಂಧಿಸದಿದ್ದರೆ ಕಾಡಿಗೈದಿ ದೊಡ್ಡ ಮಡುವ ಸೇರುವುದು 3 ನರಹರಿಯೆಂಬ ಕುಣಿಕೆಯ ಗೈದು ತ್ವರಿತದಿ ತುರಗದ ಕೊರಳಿಗೆ ಬಿಗಿದು ಕರದೊಳಗಿರುವ ಕಡಿವಾಣ ಒಂದಿಡಿ ನೆರೆ ಭಕ್ತಿಪಾಶದಿ ತುರಗವ ಸೆರೆಗೈ 4 ನಾರಾಯಣಾ ಎಂಬ ನೀರ ಕುಡಿಸುತಲಿ ಶ್ರೀರಮಣ ಎಂಬ ಹುರಳಿಯ ನಿಡುತೆ ಮಾರ[ಮಣ] ಎಂಬ ತೃಣವನೆಣಿಸಿ ದಿವ್ಯಾ ಕಾರದಿ ಮಾಂಗಿರಿರಂಗಗರ್ಪಿಸಿರೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಮಾಜ ಚಿಂತನೆ :ನೀತಿಬೋಧನೆ ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡೆ ಜಗಳವೇ ಲೇಸು ಪ ಉಂಬುಡುವುದಕಿಲ್ಲದರಸಿನೋಲಗಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ - ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು1 ಒಡನೆ ಹಂಗಿಸುವನೋಗರವನುಂಬುದಕಿಂತಕುಡಿನೀರು ಕುಡಿದುಕೊಂಡಿರುವುದೇ ಲೇಸುಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತಅಡವಿಯೊಳಗಜ್ಞಾತ ವಾಸವೇ ಲೇಸು2 ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತಹಸನಿಲ್ಲದ ಹಾಳುಗುಡಿಯೇ ಲೇಸುಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯವಸುಮತಿಯೊಳು ನಿನ್ನ ದಾಸತ್ವವೇ ಲೇಸು 3
--------------
ಕನಕದಾಸ
ಅಂದಿಂದ ನಾ ನಿನ್ನನೆರೆನಂಬಿದೆನೊ ಕೃಷ್ಣತಂದೆ ಗೋವಿಂದ ಮುಕುಂದ ನಂದನ ಕಂದ ಪಬಲವಂತ ಉತ್ತಾನಪಾದರಾಯನ ಕಂದಮಲತಾಯಿ ನೂಕಲು ಅಡವಿಯೊಳು ||ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿಒಲಿದು ಧ್ರುವಗೆ ಪಟ್ಟಕಟ್ಟಿದ್ದಕೇಳಿ1ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳುದುಕ್ಖದಿ ಶ್ರೀಹರಿ ಸಲಹೆನ್ನಲು ||ಚಕ್ರದಿ ನೆಗಳ ಕಂಠವ ತರಿದು ಭಕ್ತನಅಕ್ಕಸಪರಿದಾದಿಮೂಲನೆಂಬುದಕೇಳಿ2ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳುಕಪಟದಿ ಸೀರೆಯ ಸೆಳೆಯುತಿರೆ ||ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನುಅಪಮಾನದಿಂದ ಕಾಯ್ದ ಹರಿಯೆಂಬುದನುಕೇಳಿ3ಹರಿನಾರಾಯಣನೆಂದು ಪ್ರಹ್ಲಾದ ಬರೆಯಲುದುರುಳದಾನವ ಅವನಿಗೆ ಮುನಿದು ||ಕರೆ ನಿನ್ನ ಒಡೆಯನ ಎಂದು ಗರ್ಜಿಸೆನರಹರಿಬಂದು ಒಡನೆಯೆ ಕಾಯ್ದನೆಂಬುದಕೇಳಿ4ಅಂಬರೀಷಗೆದೂರ್ವಾಸಶಾಪವ ಕೊಡೆಅಂಬುಜಲೋಚನ ಚಕ್ರದಿಂದ ||ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದಕಂಬುಚಕ್ರಧರಹರಿಯೆಂಬುದಕೇಳಿ5ಛಲಬೇಡ ರಾಮನ ಲಲನೆಯ ಬಿಡು ಎಂದುತಲೆಹತ್ತರವಗೆ ಪೇಳಲು ತಮ್ಮನ ||ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲುಸಲೆ ವಿಭೀಷಣಗೆ ಲಂಕೆಯನಿತ್ತುದನುಕೇಳಿ6ಸುರ-ನರ-ನಾಗಲೋಕದ ಭಕ್ತ ಜನರನುಪೊರೆಯಲೋಸುಗ ವೈಕುಂಠದಿಂದ ||ಸಿರಿಸಹಿತದಿ ಬಂದು ಶೇಷಾಚಲದಿ ನಿಂತಪುರಂದರವಿಠಲ ನಿನ್ನಯ ಚರಣವ ಕಂಡು 7
--------------
ಪುರಂದರದಾಸರು
ಒಂದೇ ನಾಮವು ಸಾಲದೆ - ಶ್ರೀಹರಿಯೆಂಬಒಂದೇ ನಾಮವು ಸಾಲದೆ ಪಒಂದೇ ನಾಮವು ಭವಬಂಧನ ಬಿಡಿಸುವು |ದೆಂದು ವೇದಂಗಳಾನಂದದಿ ಸ್ತುತಿಸುವ ಅ.ಪಉಭಯರಾಯರು ಸೇರಿ ಮುದದಿ ಲೆತ್ತವನಾಡಿ |ಸಭೆಯೊಳು ಧರ್ಮಜ ಸತಿಯ ಸೋಲೆ ||ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು |ಇಭರಾಜಗ ಮನೆಗಕ್ಷಯವಸ್ತ್ರವನಿತ್ತ 1ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ |ಸಂದೇಹವಿಲ್ಲದೆ ಹಲವುಕಾಲ||ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ |ಕಂದನಾರಗನೆಂದು ಕರೆಯಲಭಯವಿತ್ತ 2ಕಾಶಿಯ ಪುರದೊಳು ಈಶ ಭಕುತಿಯಿಂದ |ಸಾಸಿರನಾಮದ ರಾಮನೆಂಬ ||ಶ್ರೀಶನನಾಮದ ಉಪದೇಶ ಸತಿಗಿತ್ತ |ವಾಸುದೇವಶ್ರೀಪುರಂದರ ವಿಠಲನ 3
--------------
ಪುರಂದರದಾಸರು
ಕಂಗಳುಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.ಕ್ಷಿತಿಯನಳೆದ ಋಷಿಸತಿಯರಘ ಕಳೆದಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದಯತಿ ಮುನಿಜನ ದೇವತತಿಗಳ ಮನದಿಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ 1ಜಗದಘಹರಿಯೆಂಬ ಮಗಳನು ಪಡೆದಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದಖಗವರಾದನ ಕರಯುಗಳೊಳು ಮೆರೆದವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ 2ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದನೀಚಹಿಕೇತುವ ನಾಚಿಸಲೆಸೆದಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆನ್ನಾಚರಣೆಗಕ್ಷಯ ಸೂಚಿಪ ಪದದಿ 3
--------------
ಪ್ರಸನ್ನವೆಂಕಟದಾಸರು
ಬನ್ನಿಗಡ ಸುಜನರೆಲ್ಲ ಪಾವನಕಾಯ ಸುಜನಪ್ರಿಯಪುಣ್ಯ ಸತ್ಯನಾಥಯತಿರನ್ನನ ಪಟ್ಟಣಕಿಂದು ಪ.ಪರಬೊಮ್ಮನೆಂಬುವ ಮನೆದೈವನಾಗಿಹಪರಸುಖವನೀವ ಮರುತದೇವನೆಂಬಾತಪರಮಪದದ ಗುರುವು ಯುಕ್ತಿಯಿಂದ ಕಾಪುರುಷರಗಲಿಸುವಂತೆ ಸತ್ಯನಾಥಪುರಪತಿಗೆ ಬೋಧಿಸುವ ಪರಮವಾರ್ತೆಯ ಕೇಳ 1ನವಭಕುತಿರತುನದಿಂದ ನಿರ್ಮಿತ ಪ್ರಾಕಾರಕೆನವದ್ವೇಷಿಗಳು ದಾಳಿಯಿತ್ತು ಅಂಡಲೆಯಲು ದಾನವಾರಿಯ ನಾಮಾಯುಧವ ಸತ್ಯಾಭಿನವÀÀ ತೀರ್ಥರೆಂಬೊ ಪುತ್ರಗೆ ನೀಡುತಮಾನವ ಹರಿಯೆಂಬಸುರರ ಮಡುಹಿಸುವುದು ನೋಡ 2ಕಾಯಜಚೋರನೆಂಬವ ತಾ ಕಳ್ಳ ಹನ್ನೊಂದರ ಕೂಡಿಕಾಯವೆಂಬ ರಾಜಗೃಹಕೆ ಕನ್ನವಿಕ್ಕುವುದ ಕಂಡುಕಾಯುವ ಜ್ಞಾನೆಂಬ ಭಟನು ಅಟ್ಟಲವನಕೈದು ಚಾಪವ ಸೆಳೆದು ಮಿಕ್ಕು ಚೋರನೀಕಾಯಕಟ್ಟಿಸುವಂಥ ಕರುಣಿಗೆ ನಮಿಸುವ3ಹರಿದಾಸರೆನಿಸುವ ಹಲವು ದೊರೆಗಳುಂಟುಹರದಾರಿಕ್ಕೆಲದಿ ಪಣ್ಯವ ಮಾಡಿ ಸುಧೆüವೀರಿಹರಿತತ್ವ ನಾಣ್ಯದೊಳು ರಾಮನಾಮದಹಿರಿದುಮುದ್ರೆಯನೊರೆದು ಪರಂಪರಹರುಷ ವ್ಯವಸಾಯವುಂಟು ಹಿರಿಯಾಮೃತವುಣ್ಣ 4ಅಭಿನವ ಚಂದ್ರಿಕೆದೋರಿ ಅಭಿಜ್ಞಾನತೆ ಮೆರೆದಅಭೀತ ಮಂಗಳಗಾತ್ರ ಅಮಿತ ಬುಧರಮಿತ್ರಅಭಿಜÕಗುರು ಸತ್ಯನಿಧಿಯ ಸುತ ಸತ್ಯನಾಥಅಭು ಪ್ರಸನ್ವೆಂಕಟೇಶನ ಭಜಕನ ಕವಿತಅಬುಜ ಪರಿಮಳಮಂದಾನಿಲವಿಡಿವಳಿಯಂತೆ 5
--------------
ಪ್ರಸನ್ನವೆಂಕಟದಾಸರು