ಒಟ್ಟು 42 ಕಡೆಗಳಲ್ಲಿ , 21 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ1 ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು ಪರಿಪಾಲಿಸಿದ ದಾತರನು ಹೊತ್ತಾಕೆ ಪ್ರೀತಿ ಪೇಳುವೆ ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ ವಿತ್ತಾಶೆ ಪೋಗಿ ಮುಳವೆ ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ ಹುತ್ತಿನೊಳು ಬಿದ್ದು ಪುನಿತನಾಗದವನಾ 2 ಗುರು ನಿಂದಕರ ನೋಡಿ ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು ಅರಿದರಿದು ಬುದ್ಧಿಗೆಟ್ಟು ಹರಿವಾಸರದುಪವಾಸ ಮಾಡುವ ಜನರಿಗೆ ಮುರಳಾಡಿ ಮುಟ್ಟಿಯಲಿಟ್ಟು ಜಾಗರ ತೊರೆದು ಹಿರಿ ಪಾಮರನಾಗಿ ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ3 ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ ಮೀಸಲಾ ಪದಾರ್ಥವೆಂಬೆ ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ ರಾಸಿ ದುರನ್ನ ಉಂಬೆ ಆಶೆಯನು ತೊರಿಯದಲೆ ಉಪರಾಗ ಪರ್ವದಲಿ ಕಾಸು ದಾನವನು ಕೊಂಬೆ ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ4 ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ ಎಂದೆಗೆಂದಿಗೆ ಸವಿಯದು ನೊಂದು ದುಶ್ಚಿತ್ತದಲಿ ನೀನೆ ಗತಿ ಎಂದು ಬಾಗಿಲ ಕಾಯಿದುದು ಬಂದು ಮಾತುರದಲ್ಲಿ ಬಲು ದಯಾಳು ಎನ್ನ ಸಂದೇಹವನು ತೊಡೆದು ಮುಂದಾದರೂ ಭವದ ಅಂಧ ಕೂಪದೊಳಿಡದೆ ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ 5
--------------
ವಿಜಯದಾಸ
ನೀನೆನನ್ಹುಟ್ಟಿಸಿದ್ಯೋ ನಾನೆ ನಿನ್ನ್ಹುಟ್ಟಿಸಿದೆನೋ ಜಾನಕೀಶ ನೀನೆನಗೆ ಸಿಟ್ಟಾಗದ್ಹೇಳೈ ಪ ತಂದೆ ಮಗನ್ನ್ಹೆತ್ತನೋ ಮಗ ತಂದೆನ್ಹೆತ್ತನೋ ತಂದೆ ಮಗನ್ನೀರ್ವರನು ತಾಯಿ ಹೆತ್ತಳೇನೋ ತಂದೆತಾಯಿಮಗತ್ರಯರು ಬಿಂದಿನಲುದ್ಭವಿಸಿದರೆ ಅಂದಮಾದ ಸಂಧಿದನು ಚೆನ್ನಾಗಿ ಬಿಡಿಸೈ 1 ಬೀಜದಿಂದ್ವøಕ್ಷಾಯ್ತೋ ವೃಕ್ಷದಲಿ ಬೀಜಾಯ್ತೋ ಬೀಜವ್ಯಕ್ಷಗಳೆರಡು ಹಣ್ಣಿನೋಳ್ಹುಟ್ಟಿದವೇ ಬೀಜವೃಕ್ಷ್ಹಣ್ಣುಮೂರು ಭೂಮಿಯೋಳ್ಹುಟ್ಟಿದವೇ ಸೋಜಿಗದ ಸಂಧಿದನು ನೈಜದಿಂ ಬಿಡಿಸೈ 2 ಜೀವದಿಂ ಮಾಯವೋ ಮಾಯದಿಂ ಜೀವವೋ ಜೀವಮಾಯಗಳೆರೆಡು ಭಾವದ್ಹುಟ್ಟಿಹ್ಯವೋ ಜೀವ ಮಾಯ ಮೂರು ಕಾಯದಲಿ ಜನಿಸಿದವೋ ನ್ಯಾಯದ ಸಂಧಿದನು ದಿವ್ಯವಾಗಿ ಬಿಡಿಸೈ 3 ಉತ್ಪತ್ತಿಯಿಂ ಲಯವೋ ಲಯದಿಂದ ಉತ್ಪತ್ತ್ಯೋ ಉತ್ಪತ್ತಿಲಯವೆರಡು ಸ್ಥಿತಿಯಿಂ ತೋರುವವೋ ಉತ್ಪತ್ತಿಲಯಸ್ಥಿತಿ ತತ್ವದೊಳು ಜನಿಸಿಹ್ಯವೋ ಗುಪ್ತದ ಸಂಧಿದನು ನಿರ್ತಾಗಿ ಬಿಡಿಸೈ 4 ವೇದದಿಂ ಸಾಧನವೋ ಸಾಧನದಿಂ ವೇದವೋ ವೇದಸಾಧನವೆರಡು ನಾದದ್ಹುಟ್ಟಿಹ್ಯವೋ ವೇದಸಾಧನ ನಾದಶೋಧದಿಂ ಜನಿಸಿಹ್ಯವೋ ಮೋದದ ಸಂಧಿದನು ಬೋಧದಿಂ ಬಿಡಿಸೈ 5 ಪಿಂಡಾಂಡದಿಂ ಬ್ರಹ್ಮಾಂಡೋ ಬ್ರಹ್ಮಾಂಡದಿಂ ಪಿಂಡಾಂಡೋ ಪಿಂಡಾಂಡಬ್ರಹ್ಮಾಂಡೆರಡು ಖಂಡನಿಂದ್ಹುಟ್ಟಿಹ್ಯವೋ ಪಿಂಡಾಂಡಬ್ರಹ್ಮಾಂಡ ಖಂಡನ್ಯೋಗಿಯಲಿ ಜನಸಿಹ್ಯವೊ ಗಂಡಾಂತರದ ಸಂಧಿದನು ಖಂಡಿತದಿಂ ಬಿಡಿಸೈ 6 ಕಾಮದಿಂ ನೇಮವೋ ನೇಮದಿಂ ಕಾಮವೋ ಕಾಮನೇಮಗಳೆರಡು ನಿತ್ಯದ್ಹುಟ್ಟಿಹ್ಯವೋ ನಿತ್ಯ ಶ್ರೀರಾಮ ನಿನ್ನಾಟವೋ ಈ ಮಹಸಂಧ್ಯೆನಗೆ ಪ್ರೇಮದಿಂ ಬಿಡಿಸೈ 7
--------------
ರಾಮದಾಸರು
ನೋಡಿದೆನು ಉಡುಪೀ ನಿವಾಸನ ನೋಡಿದೆನು ಯಾದವೇಶನ ನೋಡಿದೆನು ಮಾನಿಸ ವೇಷನ ನೋಡಿದೆನೊ ಲಕುಮೇಶನ ಪ ಪರಶುರಾಮನು ಭೂಮಿ ಸುರರಿಗೆ ಸರವು ಧಾರುಣಿ ಧಾರಿಯಾ ಎರದು ಕೇಸರಗಿರಿಯ ಪಡುಮೂಲ ಶರನಿಧಿಯನು ಶರದಲೀ ಭರದಿ ಬಿಡಿಸಿದ ಶೂರ್ಪಕಾರದ ತೆರದಿ ನೆಲ ನೀ ಧರುಣಿಗೆ ಪರಮ ಸಾಹಸ ರಾಮಭೋಜನು ಅರಸನಾದುದು ನೋಡಿದೆ 1 ಯಾಗಗೋಸುಗ ರಾಮ ಭೋಜನು ನೇಗಿಲಿಯ ಕೊನೆಯಿಂದಲಿ ಆಗ ಭೂಮಿಯ ಶೋಧಿಸÀಲು ಬಂದು ನಾಗ ಬಂದಿತು ಮೃತವಾಗಿ ತೂಗಿ ಶಿರವನು ಭೃಗು ಕುಲೇಶಗೆ ಬಾಗಿ ನೆನೆಯಲು ಸಂಕೇತಾ ಸಾಗಿ ಭೂಮಿಪಾಲ ರಿಪು ಚನ್ನಾಗಿ ಒಲಿದದು ನೋಡಿದೆ 2 ತಿಳುಹಿದನು ಪೂರ್ವದಲಿ ಈ ಫಣಿ ಖಳನು ಕಾಣೊ ಇವನಿಂದು ಅಳಿದು ಪೋದದು ಲೇಸು ಭೂಸುರ ಕುಲಕೆ ಸಂತೋಷವಾಯಿತು ಒಲುಮೆಯಲಿ ಸತ್ಕಾರ ವಿಧ ವೆ ಗ್ಗಳವಾಗಿ ಸುಯಾಗವ ಸುಲಭ ಮನದಲಿ ಮಾಡೆನಲು ನಿ ಶ್ಚಲ ಭಕುತಿಲಿ ಸ್ತುತಿಸಲು 3 ಇಂದಿರಾಪತಿ ಕರುಣಿಸೆಂದು ಅಂದಿಗಾ ರಾಮ ಭೋಜನು ಒಂದು ಕ್ರೋಶದ ಅಗಲ ರಜತಾ ಚಂದದಾಸನ ಮಾಡಿಸಿ ತಂದು ದೇವನ ಕುಳ್ಳಿರಿಸಿ ಆ ನಂದದಲಿ ಓಲಾಡುತಾ ಕುಂದದಲೆ ಮೇಧವನು ಮುಗಿಸಿ ಗೋ ವಿಂದನ ಪ್ರೀತಿಪಡಿಸಿದಾ 4 ಭೂತಳದೊಳು ರಜತಪೀಠಾಖ್ಯ ಖ್ಯಾತಿ ಆಯಿತು ಸರ್ವದಾ ಆ ತರುವಾಯದಲ್ಲಿ ಭಾರ್ಗವ ಭೂತನಾಥನ ನಂದದಿ ವಾತ ಭಕ್ಷನ ನಡುವೆ ನಿಂದನು ಮಾತುಯಿದು ಪುಶಿಯಲ್ಲವೊ ಪೂತುರೆ ಮೋಹಕವೆ ತೋರಿದ ಜಾತ ರಹಿತಗೆ ನಮೋ ನಮೋ 5 ಪರಿ ಇರಲು ಗಂಗೆಯ ಕಾಂತ ಮಹಾ ತಪವನೆ ಮಾಡಿ ಸಂತತ ಗೋಪಾಲಕೃಷ್ಣನ ಸಂತೋಷವನು ಬಡಿಸಿದಾ ಚಿಂತೆಯಲಿ ವಿದೂರನಾದನು ಮುಂತೆ ನಡೆದ ಕಥೆ ಕೇಳಿ ಕಂತುಹರನನ ಒಲಿಸಿ ಉಡುಪಾ ಕಾಂತ ವರವನೆ ಐದಿದಾ 6 ಮೂರು ಯುಗದಲಿ ಈ ಪರಿಯಾಗೆ ಮಾರುತ ಮಧ್ಯಗೇಹನ ಚಾರು ಮನೆಯಲಿ ಜನಿಸಿ ವೈಷ್ಣವಾ ಚಾರ್ಯ ಈ ದುಶ್ಯಾಸ್ತ್ರವ ಹಾರಿಸಿದ ಹರುಷದಲಿ ರುಕ್ಮಿಣಿ ದ್ವಾರಕೆಲಿ ಪೂಜೆ ಮಾಡಿದ ಮೂರುತಿಯ ಸ್ಥಾಪಿಸಿದ ಲೀಲೆಯು ಆರು ಬಣ್ಣಿಸಲಾಪರು 7 ಇದೇ ರಜತಪೀಠ ಅಜಕಾನನವಿದೆ ಇದೇ ಉಡುಪಿ ಇದೇ ಶಿವಕುಲ್ಲ್ಯ ಅದರ ಬಳಿಯಲಿಯಿಪ್ಪ ತೀರ್ಥವ ಅದುಭುತವ ವರ್ಣಿಸುವೆನು ಇದೇ ಅನಂತ ಸರೋವರವು ಮ ತ್ತಿದೇ ವಾರುಣ್ಯಚಂದ್ರಮತೀರ್ಥ ಇದಕೆ ಮಧ್ವಸರೋವರ ವೆಂ ಬದು ಕಾಣೊ ಶ್ರುತಿ ಉಕ್ತಿಲಿ 8 ಸಕಲ ದೇಶದ ಜನರು ತ್ರಿವಿಧ ಸುಖವಾರಿಧಿಯೊಳು ಸೂಸುತಾ ಅಖಿಳ ವೈಭವದಿಂದ ಬಪ್ಪ ಅಕಟ ಸಂದಣಿಗೇನೆಂಬೆ ಸೂರ್ಯ ಬಂದ ಕಾ ಲಕೆ ಕೃಷ್ಣನ ನೋಡುವೆನೆಂದು ಚಕ್ಕನೆ ನಿಲ್ಲದೆ ಬಂದು ನೆರದಂದು ಮುಕ್ತಾರ್ಥ ಹರಿಪ್ರೇರಕಾ 9 ಸಜ್ಜನರ ಸಿರಿಚರಣ ರಜದಲಿ ಮಜ್ಜನವ ಗೈವುತ ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ ಅಬ್ಜನಾಭ ನಾರಾಯಣ ಮೂಜಗತ್ಪತೆ ಎಂದು ಸ್ತೋತ್ರ ನಿ ರ್ಲಜ್ಜನಾಗಿ ಪಠಿಸುತಾ ರಜ್ಜುಪಾಣಿಯ ಬಹಿರದಿಂದ ನಿ ವ್ರ್ಯಾಜ್ಯ ಭಕುತಿಲಿ ನೋಡಿದೆ 10 ಮೊದಲು ನಮಿಸಿದೆ ಚಂದ್ರಶೇಖರ ಪದುಮಗರ್ಭನ ಮಗನೆಂದು ಅದರ ತರುವಾಯದಲ್ಲಿ ಮಾಯಿಯ ಸದಬಡೆದ ಪೂರ್ಣಬೋಧರು ಸದಮಲಾ ಕುಳುತಿಪ್ಪ ಸ್ಥಾನವ ಒದಗಿ ನೋಡಿ ಕೊಂಡಾಡುತಾ ಮದನ ಜನಕಾನಂತ ಸ್ವಾಮಿಯ ಪದಯುಗಳವನು ನೋಡಿದೆ11 ರತುನ ಗರ್ಭದೊಳಧಿಕವಾದ ತೀ ರಥವಿದು ಮಧ್ವಾಖ್ಯದಿ ಸತತ ಬಿಡದಲೆ ಇಲ್ಲಿ ಭಾಗೀ ರಥಿವಾಸ ನದಿಗಳ ಕೂಡಿ ನುತಿಸಿ ಮೆಲ್ಲನೆ ಮುಟ್ಟಿ ಮಿಂದು ಮತ್ತೆ ಕರ್ಮದ ಚರಿಯವ ಹಿತ ಮನಸಿನಲ್ಲಿ ಮಾಡುವಂಥ ಕೃತ ಕಾರ್ಯವನು ನೋಡಿದೆ 12 ಅಲ್ಲಿಂದ ನವರಂಧ್ರಗಳು ಕಂಡು ಪುಲ್ಲಲೋಚನ ಕೃಷ್ಣನ ಸೊಲ್ಲಿನಿಂದಲಿ ಪಾಡಿ ಭಾರತಿ ವಲ್ಲಭನ ಕೊಂಡಾಡುತಾ ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು ನಿಲ್ಲದಲೆ ಸಮೀಪಕೆ ಬಲ್ಲವನು ಗುಣಿಸುತ್ತ ಭಕುತ ವ ತ್ಸಲನಂಘ್ರಿ ನೋಡಿದೆ13 ಮೂರು ಬಗೆ ಭೂಷಣವ ಧರಿಸಿದ ಮೂರುತಿ ಇದೇ ಕಾಣಿರೊ ಪಾರುಗಾಣರು ಈತನ ಅವ ತಾರ ಗುಣಕ್ರಿಯೆ ಮಹಿಮೆಯಾ ವಾರಿಜೋದ್ಭವ ಶಿವ ಮುಖಾದ್ಯರು ಸಾರಿ ಹಾಹಾ ಎಂಬರೊ ಧಾರುಣಿಗೆ ಇದೇ ದೈವ ನವನೀತ ಚೋರನ ಕೊಂಡಾಡಿದೆ 14 ತ್ರಾಹಿ ತ್ರಯಾವಸ್ಥೆ ಪ್ರೇರಕ ತ್ರಾಹಿ ತ್ರಯಗುಣ ವಿರಹಿತಾ ತ್ರಾಹಿ ತ್ರಯಧಾಮ ವಾಸ ಸರ್ವೇಶ ತ್ರಾಹಿ ತ್ರಯ ರೂಪಾತ್ಮಕಾ ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ ತ್ರಾಹಿ ತ್ರಯವನು ಕೊಡುವನೆ ತ್ರಾಹಿ ತ್ರಯಗಣ್ಣ ವನಪಾಲಕ ತ್ರಾಹಿ ತ್ರಯಲೋಕಾಧಿಪಾ 15 ಪಾಹಿಪರಮಾನಂದ ಗೋವಿಂದ ಪಾಹಿ ಪರತರ ಪರಂಜ್ಯೋತಿ ಪಾಹಿ ಪತಿತ ಪಾವನ್ನ ಮೋಹನ್ನಾ ಪಾಹಿ ಪಾಲಾಂಬುಧಿಶಾಯಿ ಪಾಹಿ ಜಗದತ್ಯಂತ ಭಿನ್ನಾ ಪಾಹಿ ನಿರ್ಭಿನ್ನ ಸ್ವರೂಪ ಪಾಹಿ ನಖಶಿಖ ಜ್ಞಾನ ಪೂರ್ಣನ ಪಾಹಿ ಎನ್ನಯ ಪ್ರೇಮನೆ 16 ನಮೋ ನಮೋ ಚತುರಾತ್ಮ ಗುಣನಿಧಿ ನಮೋ ನಮೋ ಪುನ್ನಾಮಕ ನಮೋ ನಮೋ ವಟಪತ್ರಶಾಯಿ ನಮೋ ನಮೋ ಪುಣ್ಯಶ್ಲೋಕನೆ ನಮೋ ನಮೋ ಸಮಸ್ತ ಸರ್ವಗ ನಮೋ ನಮೋ ಸರ್ವ ಶಬ್ದನೆ ನಮೋ ನಮೋ ಅವ್ಯಕ್ತ ವ್ಯಕ್ತಾ ನಮೋ ನಮೋ ನಾರಾಯಣ 17 ಜಯ ಜಯತು ಕರಿವರದ ವಾಮನ ಜಯತು ನಾರದ ವಂದ್ಯನೆ ಜಯ ಜಯತು ಪ್ರಹ್ಲಾದ ರಕ್ಷಕ ಜಯ ಜಯತು ಪಾರ್ಥನ ಸಾರಥೆ ಜಯ ಜಯತು ಅಂಬರೀಷ ಪರಿಪಾಲಾ ಜಯತು ಪರಾಶರನುತಾ ಜಯ ಜಯತು ಪಾಂಚಾಲಿ ಮಾನ ಕಾಯ್ದನೆ ಜಯ ಜಯತು ಗೋಪಿಕಾ ವಲ್ಲಭಾ18 ಇನಿತು ಬಗೆಯಲಿ ತುತಿಸಿ ದೇವನ ಮನದಣಿಯ ಕೊಂಡಾಡುತಾ ಕ್ಷಣಬಿಡದೆ ತನ್ನ ನೆನೆಸಿದವರಿಗೆ ಹೊಣೆಯಾಗಿ ಪಾಲಿಸುವನು ಜನುಮ ಜನ್ಮದಲಿಂದ ಮಾಡಿದ ಘನದುರಿತ ಪರ್ವತಗಳು ಚಿನಿಗಡೆದು ಸಾಧನವೆಲ್ಲ ವೇಗ ತನಗೆ ತಾ ಮಾಡಿಸುವನು 19 ವ್ಯಾಧ ಭೂಸುರ ವೇಷವು ಭೇದ ಮಾಡಿದ ನಾರಾಯಣಿ ಸುಪ್ರಸಾದ ನಿರ್ಮಲರೂಪವು ಆದಿವಾರವು ವಿಡಿದು ಎರಡು ಐದು ದಿನ ಪರಿಯಂತವು ಶ್ರೀಧರೇಶನು ವೇಷ ಧರಿಸಿದ್ದು ಸಾಧು ಸಂಗಡ ನೋಡಿದೆ20 ಉದಯಕಾಲದ ಪೂಜೆಯಾಗಲು ಮುದ ನಿರ್ಮಾಲ್ಯ ವಿಸರ್ಜನೆ ಇದೆ ಪೂರೈಸಲು ಮತ್ತೆ ಪಂಚ ಸುಧ ಪೂಜೆ ಉದ್ವಾರ್ಥನೆ ಒದಗಿಯಾಗಲು ಮೇಲೆ ಸುಧ ವಿಧುದಂತೆ ಬೆಣ್ಣೆ ಶರ್ಕರ ಇದೆ ಮಹ ಪೂಜೆ ನೋಡಿದೆ 21 ಗಂಧ ಪರಿಮಳ ತುಲಸಿ ಪುಷ್ಪಾ ನಂದ ಭೂಷಣ ಧರಿಸಿಪ್ಪ ಒಂದು ಕೈಯಲಿ ದಾಮ ಕಡಗೋ ಲಂದದಲಿ ತಾಳಿದಾ ಮಂದರಿಗೆ ಇದು ಸಾಧ್ಯವಲ್ಲವು ಮುಂದೆ ಯತಿಗಳು ಮಂತ್ರವ ಮಂದ ನಗಿಯಲಿ ಪೇಳುತಿಪ್ಪ ಚಂದವನು ನಾ ನೋಡಿದೆ 22 ಎತ್ತುವ ಧೂಪಾರತಿಗಳು ಹತ್ತೆಂಟು ಬಗೆ ಮಂಗಳಾ ರುತ್ತಿ ನಾನಾ ನೈವೇದ್ಯ ಷಡುರಸ ಮೊತ್ತಂಗಳು ಪರಿವಿಧಾ ಉತ್ತಮ ಶಾಖಾದಿ ಘೃತದಧಿ ತತ್ತಕ್ರಫಲ ಪಕ್ವವು ಸುತ್ತಲು ತಂದಿಟ್ಟು ಅರ್ಪಿ ಸುತ್ತಲ್ಲಿಪ್ಪುದು ನೋಡಿದೆ 13 ಮಂತ್ರ ಘೋಷಣೆ ಭಾಗವತಜನ ನಿಂತು ಗಾಯನ ಮಾಡಲು ಅಂತವಿಲ್ಲದೆ ವಾದ್ಯಸಂದಣಿ ಚಿಂತಿಸುವ ನಿಜದಾಸರು ವಂತು ವಾಳೆಯಿಲ್ಲದಾ ಜನ ಸಂತೋಷದಲಿ ನಲಿವುತಾ ತಂತ್ರ ಸಾರೋಕ್ತದ ಪೂಜೆ ಅತ್ಯಂತವನು ನಾ ನೋಡಿದೆ 24 ತೀರ್ಥ ಪ್ರಸಾದ ಗಂಧ ಅಕ್ಷತೆ ಅರ್ಥಿಯಲ್ಲಿ ಕೊಡುವರು ವ್ಯರ್ಥವಲ್ಲಿವು ಇಲ್ಲಿ ಒಂದು ಮು ಹೂರ್ತವಾದರು ಎಂದಿಗೂ ಶುಭ ಪ ದಾರ್ಥ ಬಡಿಸಲು ಉಂಡು ಕೃ ತಾರ್ಥನಾದೆನು ಜ್ಞಾನವಧಿಕ ಸಾರ್ಥಕರನ ನೋಡಿದೆ25 ತರಣಿ ಮಕರಕೆ ಬರಲು ಗೋಪಾಲ ಮೆರೆವ ವೈಭವವೆಂಬೆನೇ ಗಜ ತುರಗ ಹರಿ ಗರುಡ ಶ್ರೀ ಹನುಮಂತನಾ ವರ ರೂಢನಾಗಿ ಮೆರೆದು ಆಮೇಲೆ ಮಿರುಗುವ ರಥವನೇ ಏರಿ ಪರಮ ವೇಗದಿ ಚತುರ್ವೀಧಿಯ ತಿರುಗಿ ಬಪ್ಪದು ನೋಡಿದೆ 26 ಓಕಳಿಯ ಸಂಭ್ರಮವೆ ಪೇಳಲು ಗೋಕುಲಕೆ ಸಮನೆನಿಸಿತು ವಾಕು ಕೇಳ್ ಸುರ ಮುನಿಗಳೊಡನೆ ಲೋಕಕ್ಕಾಶ್ಚರ್ಯ ತೋರುತಾ ಸೋಕಿ ಸೋಕದ ಹಾಸೆ ಓಕುಳೀ ಹಾಕಿ ಆಡುವ ಲೀಲೆಯ ಈ ಕಲಿಯುಗದಲ್ಲಿ ಸೋಜಿಗ ಈ ಕಥೆಯಾದುದು ನೋಡಿದೆ 27 ವಾಲಗ ಎಡಬಲದಲಿ ಪಂಜು ಕಟ್ಟಿಕೆಕಾರರು ರಂಜಿಸುವ ಪಲ್ಲಕ್ಕಿ ಸೇವಿಪ ರಂಜಳವಾಗಿ ಒಪ್ಪಲು ಕುಂಜರಾರಿಯ ಪೀಠದಮೇಲೆ ಕಂಜಲೋಚನ ಕುಳ್ಳಿರೆ ನಿ ರಂಜನದಲಿ ಪೂಜಿಸುವ ಮತಿ ಪುಂಜ ಯತಿಗಳ ನೋಡಿದೆ 28 ಶ್ರುತಿ ಪುರಾಣಗಳುಪನಿಕ್ಷತ್ ವೊ ಸತು ಶಾಸ್ತ್ರ ಪ್ರಬಂಧವು ಭಾಗವತ ಸುಸಂ ಗೀತಿಯಲಿ ರಾಗ ಭೇದವು ಶ್ರುತಿ ಕಥಾಭಾಗ ಪದ್ಯ ಅಷ್ಟಕ ಮಿತಿಯಿಲ್ಲದಲಿಪ್ಪ ಪ್ರಸಂಗ ತತುವ ಮಾರ್ಗದಿ ನುಡಿವ ಬಲು ಉ ನ್ನತ ಮಹಿಮರ ನೋಡಿದೆ 29
--------------
ವಿಜಯದಾಸ
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ1 ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2 ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ3 ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4 ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ5
--------------
ಚಿದಾನಂದ ಅವಧೂತರು
ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ ಇಗಡತನ ಬಿಟ್ಟು ನೀಗಿ ನಿಜಗೂಡಿ ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ 1 ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ ಗುಹ್ಯಗೂಢವಿದೆ ನೋಡಿ ರಾಜಯೋಗ ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ 2 ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತೌರಾಸೆಯೆ ಪ ಕಣ್ಣು ಕೆಟ್ಟ ಮೇಲೆ ಕಡುರೂಪು ಚೆಲ್ವಿಕೆಯೆಬಣ್ಣಗುಂದಿದ ಮೇಲೆ ಬಹುಮಾನವೆಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ 1 ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆಚಳಿಜ್ವರಕೆ ಚಂದನದ ಲೇಪ ಹಿತವೆಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆಬೆಲೆಬಿದ್ದ ಸರಕಿನೊಳು ಲಾಭ ಉಂಟೆ 2 ನಿತ್ಯ ಸುಖವೆನಬಹುದೆಸತ್ತ್ವ ತಗ್ಗಿದ ಮೇಲೆ ಸಾಮಥ್ರ್ಯವೆಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನಸತ್ಯವಾದ ಭಕ್ತಿ ಇರದವಗೆ ಮುಕ್ತಿಯುಂಟೆ 3
--------------
ಕನಕದಾಸ
ಬಾರಕ್ಕಾ ನಾವಿಬ್ಬರಾಡುವಾ ಯೋಗ ಸಾಧನವೆಂಬುದು ಮಾಡುವಾ ತಾಮಸ ತನುಗುಣಗಳ ಬಿಟ್ಟು ಸುಜ್ಞಾನ ಕ್ಷೀರ ಸಾಗರದೊಲಗಾಡುವಾ ಪ ಕಳೆಗೂಡಿ ಒಳನೋಟ ನೋಡುವಾ ಅಲ್ಲಿ ಒಳಸಭೆ ಪ್ರಭೆಯೊಳಗಾಡುವಾ ಥಳಥಳಿಸುವ ಮೆರೆವ ಚಿದಾತ್ಮನ ಬೆಳಕಿನೊಳ್ ಬೆಳಕಾಗಿ ಪರವಶವಾಗುವಾ 1 ಅಂಬಾ ಚಂದನ ಗಂಧಿಯೇ ಶಾರ ದಾಂಬಾ ಸುಪ್ರದವೇಣಿಯೇ ಶಂಭು ಸದ್ಗುರು ಎನ್ನೊಳು ಕಡೆನೋಡೆ ಕಂಬುಕಂಠಿನಿ ಚಲ್ವ ಕಮಲದಳಾಕ್ಷಿ 2 ಎಂಟೆರಡು ಕದಗಳ ಕಟ್ಟುವಾ ಅಲ್ಲಿ ಬಂಟರ ತಡೆಗಳ ಅಟ್ಟುವಾ ಮಂಟಪವೆಂಬುದು ಮಹಾಲಿಂಗನದೆಡೆ ಅಂತರಂಗದ ಕಾಂತೆಗಾಡುವಾ 3 ಮಂದರ ಗಿರಿಯಂತೆ ಅಲ್ಲಿ ಭೋರೈಸುವ ಘಂಟಾ ಧ್ವನಿಯಂತೆ ಸಾರ ಅಮೃತವುಂಡು ಕ್ಷೀರಸಾಗರಮಿಂದು ತೋರುವ ಗುರು ವಿಮಲಾನಂದಾ 4
--------------
ಭಟಕಳ ಅಪ್ಪಯ್ಯ
ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ. ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ 1 ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ2 ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ 3 ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ 4 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ 5
--------------
ಗುರುಗೋವಿಂದವಿಠಲರು
ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಸ್ತ್ರೀಯರು ಮುದದಿಂದ ಪ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ 1 ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ 2 ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ 3 ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ 4 ವಕ್ಕಡತಿ ತಂಡುಲವ ಚಕ್ಕನೆ ನೀಡಲು ಮಕ್ಕಳು ಮರಿಗಳು ಸಹಿತ ನಿತ್ಯಾ ಸುಖವಕ್ಕು ಸಟಿಯಲ್ಲಾ 5 ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ ಎಲ್ಲ ಕಾಲದಲಿ ನಿಮ್ಮಂಗಣದೊಳು ಇಲ್ಲವೆ ನಿಂತಿಪ್ಪದು 6 ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ ಮಸ್ತಕ ಭುಂಜಿಸುವಾ 7 ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ ಮುಂದೆ ಉತ್ತಮ ದೇಹದಲಿ ಬಂದು ಸುಜ್ಞಾನದಿಂದಲೆ ಲೋಲಾಡುವರು 8 ಹಲವು ಪೇಳುವದೇನು ಸುಲಭಾವೆನ್ನು ಧರ್ಮ ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ ಬಲ್ಲ ಮಹಾಫಲವ9
--------------
ವಿಜಯದಾಸ
ಲೋಭಿಯು ಬೇಡಲು ಲಾಭವೇನಿರುವುದು ನಾಭಿಯು ಒಣಗುವುದು ಪ ಲೋಭಿಗೆ ಧನದಿಂದ ಶೋಭೆಯುಂಟೆ ಮನ ಕ್ಷೋಭೆಯಲ್ಲದೆ ಸತತ | ತನ್ನಯ ಮನಕ್ಷೋಭೆಯಲ್ಲದೆ ಸತತ ಅ.ಪ ನೂರು ಛಿದ್ರಗಳಲ್ಲಿ ತೋರುತಿದ್ದರು ದೇಹ ಕೋರನು ನವವಸನ | ಏನೆಂದು ಕೋರನು ನವವಸನ ಮೂರು ಕಾಸಿಗೆರಡು ಮಾರುತಿದ್ದರು ಅದ ದೂರದಿ ತ್ಯಜಿಸುವನು | ನೂತÀನವಸ್ತ್ರ ದೂರದಿ ತ್ಯಜಿಸುವನು 1 ಬಂಧು ಜನರು ತನ್ನ ಮಂದಿರಕ್ಕಿಳಿಯಲು ನೊಂದುಕೊಳ್ಳುವ ಮನದಿ | ತತ್ತಳಿಸುತ ನೊಂದುಕೊಳ್ಳುವ ಮನದಿ ತೊಂದರೆಗಳ ಪೊಂದಿಹೆನೆನ್ನುತ ಮುಂದಕೆ ಸಾಗಿಸುವ | ಬಂದವರನು ಮುಂದಕೆ ಸಾಗಿಸುವ 2 ಮುಗ್ಗಿದ ಧವಸವು ಅಗ್ಗÀದಿ ಮಾರಲು ಹಿಗ್ಗುತ ಕೊಳ್ಳುವನು | ಸೊಗಸಿನಲಿ ಹಿಗ್ಗುವನು ಒಗ್ಗಿಹುದೆನ್ನುತ ನುಗ್ಗಿಸಿ ಉದರದಿ ಸಗ್ಗದೆ ನಡೆಯುವನು | ಪರನುಡಿಗೆ ಸಗ್ಗದೆ ನಡೆಯುವನು 3 ಹಣದಲಿ ಲೋಭಕೆ ಕೊನೆ ಮೊದಲಿಲ್ಲದೆ ಒಣಗಿಸುವನು ತನುವ | ಕಾರ್ಪಣ್ಯದಿ ಒಣಗಿಸುವನು ತನುವ ಗೆಣೆಯನಿವನು ನಾಲ್ಕಾಣೆಯ ಕಂಡರೆ ಕುಣಿಯುವನು ಮನದಲ್ಲಿ | ಎಣೆಯಿಲ್ಲದೆ ಕುಣಿಯುವ ಮನದಲ್ಲಿ4 ಕಿಕ್ಕಿರಿದರು ಧನ ಕಕ್ಕುಲತೆಯೊಳ್ ತನ್ನ ಮಕ್ಕಳ ಸಲಹುವನು | ರಕ್ಕಸನಿವ ಮಕ್ಕಳ ಸಲಹುವನು ಮಿಕ್ಕ ಧನವ ಬಲು ಅಕ್ಕರೆಯಿಂದ ಎವೆ ಯಿಕ್ಕದೆ ನೋಡುವನು | ನೇತ್ರದಿ ಎವೆಯುಕ್ಕದೆ ನೋಡುವನು 5 ನುಡಿದರೆ ಸವಿಮಾತ ಒಡವೆ ವಸನಗಳಿ ಗ್ಹಿಡಿವಳೆಂದರಿಯುತಲಿ | ಸಡಗರದಿ ಹಿಡಿವಳೆಂದರಿಯುತಲಿ ಕರವ ಪಿಡಿವ ತನ್ನ ಮಡದಿಯ ಕಂಡರೆ ಸಿಡಿಮಿಡಿಗÀುಟ್ಟುವನು | ನಿರ್ಘೃಣನಿವ ಸಿಡಿಸಿಡಿ ಗುಟ್ಟುವನು 6 ರಾಯರೆ ನಿಮ್ಮ ಸಹಾಯ ಹೊರತು ಕಾಣೆನೆನಲು ಕಾಯುವ ಧಣಿ ನಾರಾಯಣನೆನುತಲಿ ನುಡಿಯುವನು 7 ಈ ಧನವೆ ದೊಡ್ಡ ಸಾಧನವೆನ್ನುವ ಮೇಧಾವಿಯು ಇವನು | ಓದಲರಿಯದ ಮೇಧಾವಿಯು ಇವನು ಪಾದ ಕಮಲದಲಿ ಆದರವರಿಯನಿವ | ಎಂದೆಂದಿಗು ಆದರವರಿಯನಿವ 8 ಘನತೆಯು ಬೇಡವು ಜನತೆಯು ಬೇಡವು ಧನವಿದ್ದರೆ ಸಾಕು | ಈ ನರನಿಗೆ ಧನವಿದ್ದರೆ ಸಾಕು ಮನುಜ ಮುಟ್ಟದ ಗುಬ್ಬಿಯನನುಕರಿಸುತ ಜೀ ವನವನು ಕಳೆಯುವನು | ಕ್ಲೇಶದಿ ಜೀವನವನು ಕಳೆಯುವನು9 ಗಳಿಸಿದವನ ಧನ ಬಳಸಿದವನಿಗೆಂಬ ಮುಳುಗಿ ಮುಳುಗುತಿರುವ | ಕ್ಲೇಶಗಳಲಿ ಮುಳುಗು ಮುಳುಗುತ್ತಿರುವ 10 ಭುಜಗಶಯನ ಹರಿ ಸುಜನರು ತನ್ನನು ಅಜನೆಂದು ಕರೆಯುತಿರೆ | ಸೃಷ್ಟೀಶನ ಅಜನೆಂದು ಕರೆಯುತಿರೆ ತ್ಯಜಿಸದೆ ಹೆಸರನು ಅಜಗಳ ಸ್ತನದಂತೆ ಸೃಜಿಸಿದನೀ ಜನರ | ಪ್ರಸನ್ನ ಹರಿ ಸೃಜಿಸಿದನೀ ಜನರ 11
--------------
ವಿದ್ಯಾಪ್ರಸನ್ನತೀರ್ಥರು
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಸಕಲಸಾಧನವೆನಗೆ ಕೈಸೇರಿತುಮುಕುತಿಯ ಮಾತಿಗೆ ಬಾರದ ಧನವು ಪ. ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿಕಂಸಾರಿಪೂಜೆಯಲಿ ವೈರಾಗ್ಯವುಸಂಶಯದ ಜನರಲ್ಲಿ ಸಖತನವ ಮಾಡುವೆನುಹಿಂಸೆಪಡಿಸುವೆನು ಜನಸಂಗ ಹರಿ ರಂಗ 1 ವಿಷಯಂಗಳಲಿ ಧ್ಯಾನ ಲೌಕಿಕದಲಿ ಮನನವಶವಲ್ಲದ ಕತೆಗಳಲ್ಲಿ ಮನವುಹಸನಾಗಿ ಎಣಿಸುವ ಹಣಹೊನ್ನಿನ ಜಪವುಬಿಸಿಲೊಳಗೆ ಚರಿಸುವುದದೆÉ ಮಹಾ ತಪವು 2 ಪೀಠ ಪೂಜೆಂಬುವುದು ಲಾಜಚೂರಣವಯ್ಯಮಾಟದ ಪಯೋಧರವೆ ಕಲಶಪೂಜೆಚೂಟಿಯಲಿ ಉದರದ ಯಾತ್ರೆಯೆ ಮಹಾಯಾತ್ರೆ ಬೂಟಕತನದಲಿ ಅನೃತವನು ಪೇಳ್ವುದೇ ಮಂತ್ರ3 ಹೆಂಡತಿಯ ಕೊಂಡೆಯ ಮಾತುಗಳೆ ಉಪದೇಶಚಂಡಕೋಪವೆಂಬೋದಗ್ನಿಹೋತ್ರಪಂಡಿತನೆನಿಸುವುದೆ ಕುವಿದ್ಯ ಪಠನೆಗಳುಕಂಡವರ ಕೂಡೆ ವಾದಿಸುವುದೆ ತರ್ಕವÀಯ್ಯ4 ಓದಿದೆನು ಎಲ್ಲಣ್ಣ ಕಲ್ಲಣ್ಣ ಎನುತಲಿಸ್ವಾಧ್ಯಾಯವು ಎನಗೆ ಪಗಡೆ ಪಂಜಿಸಾಧಿಸಿ ಈ ಪರಿಯ ಧನವನ್ನು ಕೂಡ್ಹಾಕಿಮೋದಿ ಹಯವದನ ನಾ ನಿನ್ನ ಮರೆತೆ 5
--------------
ವಾದಿರಾಜ
ಸಾಧಿಸದೆ ಹೊಳೆಯ ಹೃದಯದೊಳಿಹ್ಯ ಗೆಳಿಯ ಧ್ರುವ ಸಾಧಿಸಬೇಕೊಂದು ಪಾಲ ಭೇದಿಸಿ ನೋಡುವದ್ಹತ್ತುಪಾಲ ಎದುರಿಡುವಂತೆ ಗೋಪಾಲ ಬುಧಜನ ಪ್ರತಿಪಾಲ 1 ಸಾಧನವೆಂಬುದೆ ಸುಪಥ ಬೋಧವೆ ಸದ್ಗುರುಮಾರ್ಗ ಸ್ವಹಿತ ಸದಮಲಾನಂದಭರಿತ ಇದೇ ಶಾಶ್ವತ 2 ಸಾಧಿಸಿ ಸದ್ಗುರು ಕೃಪೆಯಿಂದ ಭೇದಿಸು ಮಹಿಪತಿ ನಿನಗಿಂದು ಚೆಂದ ಹೃದಯದೊಳ್ಹಾನ ಮುಕುಂದಬದಿಯಲಿ ಗೋವಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ನಿಜ ಖೂನ ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಧ್ರುವ ಸಹಜಾವಸ್ಥೆಗೆ ಬಂದು ನೋಡಿ ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ ದೇಹ ದಂಡನೆಂಬುದು ಬ್ಯಾಡಿ ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ 1 ಸಾಧನವೆಂಬುದೆ ಸಾಕ್ಷೇಪ ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ ಆದಿ ಅನಾದಿ ಸ್ವರೂಪ ಸಾಧಿಸಿದವನೆ ತಾ ಮೂರುಲೋಕ ಆಪ 2 ಎಲ್ಲಕ್ಕೆ ಮೇಲು ಗುರುಭಕ್ತಿ ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ ಇಲ್ಲೆ ತಿಳಿಕೋ ನೀ ಮಹಿಪತಿ ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು