ಒಟ್ಟು 357 ಕಡೆಗಳಲ್ಲಿ , 70 ದಾಸರು , 308 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಘಟಿಕಾಚಲದ ವಾಯುದೇವರನ್ನು ನೆನೆದು) ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ಹನುಮಾ ತ್ರಿಜಗದ್ವಲಯವÀ ನಡಸುವಿ ಪ. ಎರಡು ಭುಜಗಳನು ಧರಿಸಿ ಪ್ರಪಂಚದೊಳಗಿರುವ ನಿನ್ನ ರೂಪಾ ಸ್ಮರಿಸುವ ಜನರನು ಪೊರೆವ ದೊರೆಯೆ ಈರೆರಡು ಭುಜದಿ ಭೂಪಾ- ದರ ಸುದರ್ಶನಾಕ್ಷರ ಸಂಖ್ಯಾಂಗುಲಿ ವರಮಣಿಮಾಲೆಗಳಾ- ಧರಿಸಿ ಸನ್ಮುಖದೊಳಿರುವ ವಿಚಿತ್ರವನರಿವನಾವನಯ್ಯಾ ತೋರುವೆಯೊ 1 ಸರಮಣಿ ಹಸ್ತದಿ ಚರಿಸುವದೇನಿದು ಹರಿಯ ಗುಣಗಣಗಳೊ ಪರಿಪರಿಯಲಿ ನೀ ತರಿದಿಹ ದಿತಿಜರ ಶಿರಗಳ ಸಂಖ್ಯೆಗಳೊ ಬರುವ ಬ್ರಹ್ಮಪದ ಕುರುವರಿತಾಬ್ಧಗಳಿರವ ಚಿಂತಿಸುವುದೊ ನರಹರಿ ನಿನ್ನೊಳಗಿರಿಸಿದ ದೊರೆತನ ಚಿರತರ ಕಾರ್ಯಗಳೊ ಪರಿಹರಿಸದರನು 2 ಹಿಂದೆ ಅಂಜನಾನಂದನೆನಿಸುತ ಬಂದು ಧಾರುಣಿಯಲಿ ಇಂದಿರೇಶ ರಾಮನ ಪದಕಂಜದ್ವಂದ್ವ ಸಮಾಶ್ರೈಸಿ ಇಂದೀವರ ಸಖ ನಂದನನಿಗೆ ನಿಜ ಬಂಧುವಾಗಿ ಸಲಹಿ ಇಂದಿರಾ ಕೃತಿಗೆ ನಿಜ ರಾಮನ ಮುದ್ರೆಯ ಛಂದದಲಿ ಸಲಿಸಿ ಮುಷ್ಟಿಯಿಂಧೆಂದಿಸಿ ಮೆರೆದನೆ 3 ಸೋಮಕುಲದಿ ಜನಿಸ್ಯಾಮಹದೈತ್ಯರ ಸ್ತೋಮವ ನೆರೆ ತರಿದು ಭೂಮಿಜಾಂತಕನನೇಮದಿ ಜಗದೋದ್ದಾಮನ ಸರಿಸಿಗಿದೂ ಪಾಮರ ಕೀಚಕ ಬಕ ಕಿಮ್ಮೀರರ ನಾಮವಳಿಸಿ ಬಡಿದು ಭೂಮಿಪ ಕುರುಪನ ಹೋಮಿಸಿ ರಂಗದಿ ಕಾಮಿತಾರ್ಥಪಡದು ಧಾಮನಿರ್ಜರೋದ್ಧಾಮ ಸುಮಹಿಮ 4 ಕಲಿಯೊಳು ಮಿಥ್ಯಾವಾದಿಗಳಿಂದಲಿ ಕಲುಷಿತ ಸಜ್ಜನರ ವಾಸರ ಒಲುಮೆಯಿಂದಲುದಿಸಿ ಖಳರ ಕುಶಾಸ್ತ್ರದ ಬಲೆಗಳ ಖಂಡಿಸಿ ನಳಿನಜಾಂಡದೊಳಗೆ ಜಲಜನಾಭ ವೆಂಕಟಗಿರಿರಾಜನ ನೆಲೆಯ ತೋರಿ ಮೆರದೆ ಘಟಿಕಾಚಲದಲಿ ನೆಲಿಸಿದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಪೆರ್ಡೂರು ಶ್ರೀ ಅನಂತಪದ್ಮನಾಭ) ಪದ್ಮನಾಭ ಚರಣವೆನ್ನ ಶಿರದೊಳಿಟ್ಟು ಪಾಲಿಸು ಮಾತ ಲಾಲಿಸು ಪ. ಆದಿಭೌತಿಕಾದಿ ನಾನಾ ಬಾಧೆಯಿಂದ ಬಳಲಿ ಬಹಳ ನೊಂದೆನು ಇಲ್ಲಿ ಬಂದೆನು ಮೂರ್ತಿ ನಿನ್ನ ಕರುಣವಾಗಲೆಂದು ಕೈಯ್ಯ ಮುಗಿದು ಬೇಡುವೆ ಮಹಿಮೆ ಪಾಡುವೆ ಕಾದರೊಳ್ಳಿತಿನ್ನು ನಿನ್ನ ಪಾದಸೇವೆ ಮಾಳ್ಪುದನ್ನು ಮಾಧವ ಮಛ್ಛಾದಿರೂಪ 1 ದುರುಳ ಭಾವವನ್ನು ಬಿಡಿಸಿ ಸಲಹಿನ್ನು ಕೊಟ್ಟು ಫಲವನ್ನ ಒರಳಿನಲ್ಲಿ ಕೊರಳ ಸಿಕ್ಕಿ ನರಳುವಂತಾಗಿರುವ ಕಷ್ಟ ಪರಿಯಾಯ ಸ್ವಾಮಿಯರಿಯೆಯ ಶರಣು ಶರಣು ಎಂದು ಮುಂದೆ ಹೊರಳಿ ಬೇಡಿಕೊಂಡು ನಿಂದೆ ಚರಣ ಪದ್ಮದಾಸರನ್ನು ಮರಿಯದೆ ಮಾನಿಸುವ ತಂದೆ 2 ರಾಜಕದಳಿಮಾಲಿಕಾ ವಿರಾಜಕಂಠ ಭಕ್ತ ಕಲ್ಪ ಭೂಜನೆ ರಾಜ ರಾಜನೆ ಮೂಜಗನ್ನಿವಾಸ ಪೂರ್ಣ ರಾಜರಂತರಾತ್ಮ ವ್ಯಸನ ರಾಜಿಯ ಕಡಿಸು ಬೋ ಜೀಯಾ ಈ ಜಗತ್ತಿನಲ್ಲಿ ನಿನ್ನ ಸೋಜಿಗವನರಿವರುಂಟೆ ತೇಜದಾಯಿ ವೆಂಕಟಾದ್ರಿ ರಾಜನೀನೆಂದರಿದೆ ನಿಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
(ವಿಜಯದಶಮಿ) ಜಯಜಯ ದೇವ ಹರೆ ಜಯಜಯದೇವ ವಿ- ಜಯರಥ ಭೂಷ ಭಯಹರ ಭಕ್ತ ಜನಾಶ್ರಯ ಶ್ರೀಶ ಪ. ಕೀಟಕ ಶಕುನಿಯ ಕೂಟಭಾವನದ ಕಾ- ದಾಟದಿ ಸೋತು ಮಹಾಟವಿಯ ದಾಟಿ ಧರ್ಮಲಿ ವಿರಾಟನಲ್ಲಿ ಸೇರಲು ಕಿ- ರೀಟಿಗೆ ಜಯವಿತ್ತ ಖೇಟಗಮನ ಕೃಷ್ಣ 1 ಸಮಯಬಂಧವ ದಾಟಿ ಶಮಿಯ ಪೂಜಿಸುತ ಸಂ- ಭ್ರಮದೊಳಾಸನವೇರ್ದ ಯಮಸುತನ ನಮಿಸಿದ ನೃಪತಿಯ ಭಯ ಪರಿಹರಿಸಿದ ಸುಮನಸ ಗಣವಂದ್ಯ ಸರ್ವಾಂತರಾತ್ಮಕ 2 ಸಾರಥಿ ತಾನೆಂದು ಸೇರಿ ಪಾಂಡವರಿಗೆ ಕೌರವರನ್ನು ಸಂಹಾರ ಗೈಸಿ ಭಾರತೀಶಗೆ ಭೂಮಿ ಸೇರಿಸಿ ಸಲಹಿದ ವಾರುಧಿಶಯನ ವೆಂಕಟಗಿರಿ ನಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ವಾದಿರಾಜರು) ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1 ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2 ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3 ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4 ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5 ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6 ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7 ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8 ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9 ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10 ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11 ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12 ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13 ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14 ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15 ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16 ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17 ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18 ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19 ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20 ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
--------------
ತಂದೆವರದಗೋಪಾಲವಿಠಲರು
ಅಂದೇನಿಂದೆನುತಾ ಪ ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು|ತನ್ನ| ಹೊಂದಿದವರ ಕಾವಾ ಇಂದಿರೇಯರಸನು ಅ.ಪ. ಸಗರ ಕಾರ್ತೀಕನು ಭಗೀರಥ ಮೊದಲಾದಾ| ಸುಗುಣ ರಾಯರನುಧ್ಧರಿಸಿಹ| ಜಗದೊಳೀ ಪಾಮರ ಲೋಕದ ಕುಂದವ| ಬಗೆಯದೇಪಾವನ ಮಾಡುವ ಗಂಗೆಗೆ 1 ರನ್ನಗಣಕು ಪರೀಕ್ಷೆ ಮುಖ್ಯರಾಗಿಹ| ಮನ್ನೆಣೆಯವರನು ಎಚ್ಚರಿಸಿ| ಮುನ್ನಿನ ಬೋಧಧಿ ಭಾವಿಕ ಸಾಧಕ| ರನ್ನು ತಾರಿಸುವ ಸತ್ಸಂಗ ಮಹಿಮೆಗೆ 2 ಹಿಂದಿನ ಶರಣರ ಸಲಹಿದ ದೇವರಿ| ಗಿಂದೇನು ಮಹಿಮೆಗೆ ಬಲ್ಲವಿಲ್ಲದೇ| ತಂದೆ ಮಹಿಪತಿ ಸ್ವಾಮಿಯ ನಾಮವ| ಛಂದದಿ ನೆನೆಯುತ ಇಹಪರ ಪಡೆವುದಕ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅದ್ಭುತ ಅದ್ಭುತ ಪರಮಾದ್ಭುತನೆ ಪ ಮಧ್ವರ ಚರಣದಿ ಬಿದ್ದ ಜನರಪರಿ ಶುದ್ಧಗೈದು ಸುಖ ಸಿದ್ಧಿಗೊಳಿಪ ಹರಿ ಅ.ಪ ಅನವದ್ಯ ಪರಾತ್ಪರ ಶುದ್ಧ ಸುಖಾತ್ಮಕ ಕದ್ದನೆ ಬೆಣ್ಣೆಯನು ಮಧ್ವರ ದೇವನು ಪದ್ಮಾಲಯ ಪತಿ ಸಿದ್ಧಿ ಸುವಂದಿತ ಕದ್ದನೆ ಕನ್ಯೆಯನು 1 ಮೇದಿನಿ ತಂದವ ಮೇದಿನಿ ಅಳಿಯನೆ ವೇದವ ತಂದವ ವೇದಸು ಬÉೂೀಧಕ ಬುದ್ಧನು ಆಗುತ ವೇದವ ನುಳುಹಿದನೆ 2 ಸತ್ಯವತೀ ಸುತ ಸತ್ಯನ ಸತ್ಯನು ಬತ್ತಲೆ ನಿಲ್ಲುತ ಸತಿಯರ ಕೆಡಸಿದನೆ ಕತ್ತಲೆ ಕಾಣದ ಉತ್ತುಮ ದೇವನು ಮಿಥ್ಯಾಜ್ಞಾನವ ಬಿತ್ತಿದನೆ 3 ಅನ್ನಾದನ್ನನು ಅನ್ನದ ಬೃಹತೀ ಅನ್ನನು ಸತಿಯರ ಅನ್ನವ ಬೇಡಿದನೆ ಉಣ್ಣದೆ ರಾಜನ ಅನ್ನವ ವಿದುರನ ಅನ್ನವ ನುಂಡನು ಸಣ್ಣವನೆನ್ನದಲೆ 4 ನಿಂದೆಯ ಸುರಿಸಿರೆ ನಂದವ ನೀಡಿದ ವಂದಿಸಿ ರಾಜ್ಯವ ಮುಂದಿಡೆ ಜರಿದವನೆ 5 ಅಣ್ಣನ ಕೊಂದು ತಮ್ಮನ ಸಲಹಿದ ಸಣ್ಣನು ತಮ್ಮನ ಅಣ್ಣನ ಮಾಡಿದ ಅಣ್ಣ ತಮ್ಮಂದಿರ ನುಣ್ಣಗೆ ಸವರಿದ ಅಗಣ್ಯ ಮಹಿಮ ಮೈಗಣ್ಣಗೆ ವಲಿದಿಹನೆ 6 ಭಾರೀ ಗಿರಿಧರ ನಾರಿಯು ಆದನು ಮಾರನ ಪಡೆದವ ನಾರೇರಿ ಗೊಲಿದನೆ ನಾರಿಯು ಮೊರೆಯಿಡೆ ಸೀರೆಯ ಕರೆದವ ಜಾರನು ಎನಿಸುತ ಶೀರೆಯ ಚೋರನೆ 7 ಇಲ್ಲಿಹೆ ಅಲ್ಲಿಹೆ ಎಲ್ಲಾಕಡೆಯಿಹ ಎಲ್ಲರ ಒಳಗಿಹ ಎಲ್ಲರ ಹೊರಗಿಹ ಎಲ್ಲವ ಬಲ್ಲನು ಬಲ್ಲ ವರಿಲ್ಲವೆ 8 ಅಣುಕಿವÀ ಅಣುತಮ ಘನಕಿವ ಘನತಮ ಅಣು ಘನ ಮಾಡುವ ಘನ ಅಣುಮಾಡುವ ಅಣುವಲಿ ಅಡಗಿಪ ಘನವನು ಬಲ ಬಲ ತೃಣ ಸಹ ಚಲಿಸದು ಚಿನುಮಯ ನಿಲ್ಲದೆ 9 ಜಾಗರ ಸ್ವಪ್ನ ಸುಷುಪ್ತಿಗಳೆಲ್ಲವ ಆಗಿಸಿ ಕಾಯುವ ಯೋಗಸು ಭೋಕ್ತನು ಬೀಗರ ಮನೆಯಲಿ ಸಾಗಿಸಿ ಯಂಜಲ ತೇಗಿದ ತಿನ್ನುತ ಶಾಖವ ನಿಜಕರುಣಿ 10 ಲೋಕವ ಸೃಜಿಸುವ ಲೋಕವ ನಳಿಸುವ ಲೋಕನು ಪಾಲಕ ಲೋಕ ವಿಲಕ್ಷಣನೆ ನಾಕರ ನಾಯಕ ನಾಕಗತಿ ಪ್ರದ ಶೋಕವಿದೂರಗೆ ತಾಕಿತು ಕೊಡಲಿ ಬತ 11 ಎಲ್ಲಾ ನಾಮವು ಇವನದೆ ಸರಿಸರಿ ಎಲ್ಲಾ ರೂಪವು ಕೂಡ್ರವ ದಿವನಿಗೆ ಎಲ್ಲಾ ಚೇತನ ಜಡದಿಂ ಭಿನ್ನನು ಎಲ್ಲಾ ಕಾಲದಿ ಒಂದೇ ಸಮನಿಹ 12 ಎಲ್ಲಾ ರೂಪಗಳೊಂದೇ ಸಮ ಬತ ಎಲ್ಲಾ ರೂಪದನಂತ ಗುಣಂಗಳು ಎಲ್ಲಾ ರೂಪವು ನಿತ್ಯಸು ಪೂರ್ಣವು ಎಲ್ಲಾ ಮಹಿಮೆಯ ಯಾರು ಕಾಣರು 13 ಜೀವರ ಬಿಂಬನು ಜೀವನ ಸಹವಿಹ ಜೀವರಿ ಗುಣಿಸುವ ಸುಖ ದುಃಖಂಗಳ ಸಾರ ಸುಭೋಕ್ತನು ಜೀವರಿ ಗಲ್ಲವೆ ಕರ್ಮದ ಲೇಪವು 14 ಅಗಣಿತ ಮಹಿಮನು ನಗೆಮೊಗ ಶ್ರೀ ಕೃಷ್ಣವಿಠಲ ಪರಾತ್ಪರ ಸಿಗುವನು ಭಕ್ತಿಗೆ ಸರಿಮಿಗಿಲಿಲ್ಲವೆ ಬಗೆಯನೆ ದೋಷವ ಶರಣೆಂದವರ15
--------------
ಕೃಷ್ಣವಿಠಲದಾಸರು
ಅಪ್ರಾಕೃತ ಕಾಯಾ ಪ ಶ್ರೀಕರಾರ್ಚಿತಪಾದ ಲೋಕೇಶ ವಂದಿತ ಅ- ವ್ಯಾಕೃತಾಕಾಶದೊಡೆಯನೆ ವಾಸುಕೀಶಯನ ಸರ್ವೇಶ ನೀನೆ ಪ್ರಾಕೃತ ಸಜ್ಜಮಜ್ಜನ ಕಾರ್ಯಕೆ ಕಾರಣನಯ್ಯ ಏಕೋ ನಾರಾಯಣ ಅ.ಪ ಪ್ರಳಯಕಾಲದಿ ಜೀವರ ನಿಲಯಾ ಕಲ್ಪಿಸಿ ತತ್ತ ನಾಲ್ಕುವಿಧಗಳ ರೂಪಗಳನು ಧರಿಸಿ ಪ್ರಳಯದೊಳಿಂಬಿಟ್ಟು ಎಳೆಸಿದ ಕಟಾಕ್ಷವೀಕ್ಷಣದಿಂದಲಿ 1 ಅಳವು ಇಲ್ಲದ ಸೃಷ್ಟಿಯನೆಸಗಿದೇ ಸಾಧುಜೀವರು ತಮ್ಮ ಸಾಧನ ಪೊರೈಸಿ ಸ್ವದೇಹದೊಳು ಬಂದ ಮೋದದಿಂದಲಿ ನೋಡಿ ಬಾಧಿಪ ಲಿಂಗಭಂಗವೈದಿಹ ಪ್ರಾರಬ್ಧನಾಶನವಿಹ ವಿ- ವಿಧ ಸುಜೀವರ ಮೋದಪಡಿಸಿ ನಿ- ಉದರದೊಳಿಟ್ಟ್ಯಯ್ಯ ಸದಮಲಮೂರುತಿ ಅದುಭುತಮಹಿಮ ಶ್ರೀ ವಾಸುದೇವನೆ2 ಸಂಚಿತ ನೀಗಿ ಪ್ರಾರಬ್ಧ ಶೇಷ ಭೋಗ ಉಳ್ಳವರೆಲ್ಲ ಆಗದೆ ಪೂರ್ಣ ಸಾಧನೆ ನೀಗದೆ ಲಿಂಗಭಂಗ ಆಗ ಬಿಂಬನ್ನ ನೋಳ್ಪರ ನಾಗಶಯನ ನಿನ್ನಂಗದೊಳಿಂಬಿಟ್ಟೆ ಜಾಗುಮಾಡದೆ ನೀನಾಗಲೆ ಜೀವರ ಭೋಗವ ತರಲು ಭಾಗವಗೈಸಿ ಭೂಭಾಗದ ಸಾಧನ ಮಾಳ್ಪ ಜೀವಗಣ ಭಾಗವ ಕಾಯ್ದೆ ಸಂಕರುಷಣ ಮೂರುತೆ 3 ನಿತ್ಯಸಂಸಾರಿಗಳಿಗೆ ಇತ್ತೆ ನಿನ್ನುದರದೊಳು ಮುಕ್ತರೊಡೆಯ ದೇವ ಶಕ್ತನಹುದೋ ನೀ ಮೊತ್ತ ಮೊದಲು ನೀನಿತ್ತು ಪೊರೆದೆ ಬರಲಿತ್ತ ಕಾರಣ ಪ್ರ- ಸುತ್ತಿ ಸುತ್ತಿರುವೆ ಬಿತ್ತರಿಸಲೇನನಿರುದ್ಧಮೂರುತೇ 4 ಅಣುವಿಗೆ ಅಣುವಾಗಿ ಘನತೆ ಘನತಮನಾಗಿ ತೃಣಜೀವರಾದಿ ಬ್ರಹ್ಮಗಣರೆಲ್ಲರೊಳು ಗಣನೆ ಇಲ್ಲದ ಕಾರ್ಯ ಕ್ಷಣಬಿಡದಲೆ ನಡೆಸಿ ಎಣೆಯಿಲ್ಲದಿಹ ಸುಗುಣ ಸಾಂದ್ರನೆ ಪ್ರಣವದೊಳು ಪ್ರತಿಪಾದ್ಯನಾಗಿಹೆ ತ್ರಿಗುಣರಹಿತ ಮುಖ್ಯ ಪ್ರಾಣಾಂತರ್ಗತ ಪ್ರಣತಕಾಮದ ಪೂರ್ಣ ಸಂಪೂರ್ಣ5 ಮುಕ್ತಾಮುಕ್ರಾಶ್ರಯ ಭಕ್ತಪರಾಧೀನ ಶಕ್ತಾನೆ ಸರ್ವವೇದೋಕ್ತ ಮಹಿಮಾತೀತ ಉಕ್ತನಾಗಿಹೆ ಪುರುಷಸೂಕ್ತಾದೊಳಪ್ರಮೇಯ ಶಕ್ತಿಯನರಿಯರು ಅಜಭವಾದ್ಯರು ಶಕ್ತನೆ ಜೀವನ್ಮುಕ್ತರೌಘ ಸಕ್ತರಾಗಿ ನಿನ್ನ ಸ್ತೋತ್ರವ ಮಾಳ್ಪರು 6 ಶ್ರೀಶಾ ಸರ್ವೋತ್ತಮ ವಾಸ ವೈಕುಂಠಾಧೀಶ ವಾಸವಾದಿ ವಂದಿತ ಭಾಸುರಾಂಗನೆ ವಿಶ್ವಾಸ ನಿನ್ನೊಳಿಟ್ಟ ದಾಸ ಜನರ ಕಾಯ್ವ ಈಶಾವ್ಯಾಸಮಿದಂಸರ್ವಂ ಎಂದೆಂದು ಎಂದು ಉಸುರುವ ವೇದಗಳ್ ಏಸುಕಾಲಕು ಸಾಕಲ್ಯದಿ ವರ್ಣಿಸ ಲೀಶ ಕೋಟಿ ಪ್ರವಿಷ್ಟೆಗೆ ಅಸದಳ 7 ಅಂಗಜಪಿತ ರಂಗ ಮಂಗಳಾಂಗನೆ ಮಾ- ತಂಗವರದ ದೇವ ಗಂಗಾಜನಕ ಕಾಳಿಂಗನಾ ಮದ ಮೆಟ್ಟಿ ಭಂಗಾಗೈಸಿದ ಭುಜಂಗಶಯನ ಎನ್ನಂತಾ- ರಂಗದಿ ನಿಲ್ಲೋ ಇಂಗಿತ ಬಲ್ಲೆ ಶ್ರೀರಂಗಶಾಯಿ ಸಾ- ರಂಗಪಾಣಿ ಕೃಪಾಂಗ ಎನ್ನಯ ಭವಭಂಗಗೈಸಿ ಸ- ತ್ಸಂಗವೀಯೋ ಯದುಪುಂಗವ ಮಂಗಳಮೂರುತಿ ಶೌರೇ8 ಕಾಲ ಜಾಲವ ತಂದೆ ಪಾಲಿಪ ಸಲಹಿಪ ಕರ್ತ ನೀನಲ್ಲದಿ- ನ್ನಿಲ್ಲವಯ್ಯ ಶ್ರೀ ವೇಂಕಟೇಶ ಪ್ರಭೋ 9
--------------
ಉರಗಾದ್ರಿವಾಸವಿಠಲದಾಸರು
ಅರವಿದೂರನೆ ತವ ಮಹಿಮೆಯು ಘನ್ನ ಪ ಬಂಡಿಕಾಲನು ಪಿಡಿದೆಯಂತೆ | ಹತ್ತು ಬಂಡಿರಾಯಗೆ ಸುತ ನೀನಾದಿಯಂತೆ ಬಂಡಿ ಅಸುರನ ಕೊಂದಿಯಂತೆ | ಧುರದಿ ಬಂಡಿ ನಡಸಿ ನರನ ಸಲಹಿದೆಯಣತೆ 1 ತಂದೆ ತಂದೆಗೆ ತಂದೆಯಂತೆ | ಜಗದ ತಂದೆ ನಿನಗೆ ತಂದೆ ತಾಯಿಗಳಂತೆ ತಂದೆ ನೃಪಾಲನ ಸುತೆಗೀಶನಂತೆ 2 ಸಿಂಧೂರದ್ವಯ ವರದನಂತೆ | ಮಧ್ಯ ಸಿಂಧೂರವದನವು ನಿನಗಿಹುದಂತೆ ಸಿಂಧು ಮಂದಿರ ನಿನಗಂತೆ ಶಾಮ ಸುಂದರ ನಿನಗೆ ಭಕ್ತರ ಚಿಂತೆಯಂತೆ 3
--------------
ಶಾಮಸುಂದರ ವಿಠಲ
ಆಗಿದ್ದ ಹರಿ ಈಗಿಲ್ಲವೇನು ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ1 ಅರಮನೆಕಂಬದಿ ಅರಿಯದಂತಡಗಿ ತಾ ದುರುಳನ ಸದೆಬಡಿದು ತರಳ ಸಲಹಿದ ಬರುವ ಮುನಿಶಾಪವಂ ವರಚಕ್ರದಿಂ ತಡೆದು ಕರುಣದಿ ನೃಪನನ್ನು ಪೊರೆದ ಪರಮಾತ್ಮ 2 ಕರುಣಾಳು ಶ್ರೀರಾಮ ಚರಣದಾಸರ ಮನಕೆ ಕೊರತೆಯ ತರದಂತಿರುವ ಬೆಂಬಿಡದೆ ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ 3
--------------
ರಾಮದಾಸರು
ಆತನ ಪಾಡುವೆ ಅನವರತಪ್ರೀತಿಯಿಂದ ಭಾಗವತರ ಸಲಹುವ ದೇವನೆಂದು ಪ ಆವಾತನ ಕೀರ್ತಿಯ ಕಳೆ ಪೆರೆಯು..........ಯಿಂದ ಶುಕನಾರ ಪೊಗಳಿದನು ?ಆವಗೆ ಬಲೀಂದ್ರನು ಆರ......................................ವಿದನಯ್ಯಾ ? 1 ಕಲು ತರುಣಿಯ ಮಾಡಿದ ಪಾದವಾರದುಜಲಜ ಸಂಭವನ ಪೆತ್ತವನಾರು ?ಕಲಿಯುಗದ ಜನರಿಗೆ ಆರ ನಾಮವು ಗತಿಇಳೆಯ ಭಾರವನುಳುಹಿದನಾರಯ್ಯ2 ದ್ರುಪದನ ಮಗಳ ಅಭಿಮಾನ ರಕ್ಷಕನಾರುನೃಪ ಧರ್ಮನೆನೆಸಿಕೊಂಡವನಾರು ?ಕೃಪೆಯೊಳು ವಿದುರನ ಮನೆಯಲುಂಡವನಾರುಆಪತ್ಕಾಲದಿ ಗಜೇಂದ್ರನ ಸಲಹಿದರಾರು ? 3 ಅತಿ ಸ್ನೇಹದಿಂದ ಅರ್ಜುನಗೆ ಸಾರಥಿಯಾಗಿರಥವ ನಡೆಸಿದವನಾರು ?ಪೃಥಿವಿಯಲಿ....................................................................................................4
--------------
ಕನಕದಾಸ
ಆತ್ಮನಿವೇದನಾ ಸ್ತುತಿಗಳು ಅಗಲಿಸದಿರು ಎನ್ನನು ನಿನ್ನ ಬಿಟ್ಟಗಲಿಸದಿರು ಎನ್ನನು ಪ ಅಗಣಿತ ನಿಗಮಗೋಚರ ನಿನ್ನ ಪಾದವ ಬಿಟ್ಟು ಅ.ಪ ವ್ಯಾಕುಲವನು ಬಿಡಿಸಿ ಅನೇಕ ಸೇವೆಗಳಿತ್ತು ಲೋಕನಾಯಕ ಎನ್ನ ಸಾಕಿಸಲಹಿಕೊ 1 ನಿತ್ಯ ಸಂಸಾರವನು ರಂಗಯ್ಯ ನಾ ಸತ್ಯವೆಂದು ತಿಳಿದು ಸತ್ಯಮೂರುತಿ ನಿಮ್ಮ ಪಾದಪದ್ಮದ ಭಕ್ತಿ ಹತ್ತದೆ ಈ ಮನಸು ವ್ಯರ್ಥವಾಯಿತು ದೇವ 2 ತಂದೆತಾಯಿಯು ನೀನೆ ರಂಗಯ್ಯ ಬಂಧುಬಳಗವು ನೀನೆ ಆ ನಂದದಿಂದಲೆ ರಕ್ಷಿಪ ಜಗತ್ಪತಿ ನೀನೇ ಬಂಧನವನು ಬಿಡಿಸಿ ಮುಕ್ತಾನಂದವ ತೋರಿಸು 3 ವಾಸವ ಮಾಡಿಸಿಲ್ಲಿ ರಂಗಯ್ಯ ಘಾಸಿಯ ಪಡಿಸದೆ ಅನಾ ಯಾಸದ ಮರಣವನಿತ್ತು ಎನಗೆ ವಸುದೇವನೆ ನಿಮ್ಮ ಪಾದವಾಸವ ಮಾಡಿಸು 4 ನಿಂದೆನ್ನ ಹೃದಯದೆ ವಾಸಮಾಡಿ ಆ ನಂದದಿಂದಲೆ ರಕ್ಷಿಸು ವೆಂಕಟರಂಗ 5
--------------
ಯದುಗಿರಿಯಮ್ಮ
ಆತ್ಮನಿವೇದನೆ ಕರುಣದಿಂದಲಿ ಪೊರೆಯೊ ನೀ ಎನ್ನ| ನರಹರಿಯೆ ಮುನ್ನ | ಚರಣಕಮಲವ ಸ್ಮರಿಸುವೆನು ನಿನ್ನ ಪ ಪೊರೆಯಬಾರದೆ ಶರಣು ಶ್ರೀಹರಿಅ.ಪ ಗೋಪಾಲಕೃಷ್ಣ| ಗೋಪಸ್ತ್ರೀಯರ ಹರುಷಗೊಳಿಸಿದೆ|| ವೃಂದದಿ ನಲಿದು ಮೆರೆದೆ| ದ್ರುಪದ ಸುತೆಯಳಿಗಿತ್ತ ಶ್ರೀಹರಿ 1 ಗೋವೃಂದ ಸಲಹಿ| ಗೋವಿಂದಾಭಿಧಾನವನು ಪಡೆದೆ|| ರವನು ಹೀರಿದ ಕರುಣಿ ಶ್ರೀಹರಿ 2 ಇಂದೀವರಾಭನೆ| ಬಂಧುಬಾಂಧವರಾರು ಹಿತರಲ್ಲ|| ಇಂದಿರೇಶನೆ ನಿನ್ನ ಚರಣ| ದ್ವಂದ್ವದೊಳು ಮನವಿತ್ತೆನಾಪ | ದ್ಬಂಧುವಾದರೆ ಪ್ರೇಮವಿರಿಸುತ || ಬಂಧಗಳ ಪರಿಹರಿಸುತೆನ್ನನು 3 ಪತಿತಪಾವನ ಈಶ ಸರ್ವೇಶ| ಮಹಶೇಷಶಯನ | ಹಿತವಿಧಾಯಕ ಸರ್ವಭೂತೇಶ|| ದೊರಕುವ ತೆರದೊಳನುದಿನ 4 ಶ್ರೀಕಾಂತ ಸಲಹೈ| ಲೋಕಭರಿತನೆ ಸುಖವಿಧಾಯಕನೆ|| ಲೋಕವಂದಿತ ಲೋಕನಾಥಾ | ನಾಕಿವಂದಿತ ಭಕ್ತವತ್ಸಲ 5 ನಿನ್ನ ಪಾದವ ನಂಬಿ ನಾನಿಹೆನು| ದೇವಾದಿದೇವಾ| ನಿನ್ನ ನಾಮಾವಲಿಯ ಸ್ಮರಿಸುವೆನು|| ಮುನ್ನ ಮಾಡಿದ ಪಾಪವೆಲ್ಲವ| ನಿನ್ನ ನಾಮ ಸ್ಮರಣದಲಿ ಸಂ| ಪೂರ್ಣ ಪರಿಹರಗೊಳಿಸಿ ನಿನ್ನಯ| ಸನ್ನುತಾಂಘ್ರಿಯ ಸೇವೆಗಿರಿಸುತ 6
--------------
ವೆಂಕಟ್‍ರಾವ್
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆನಂದ ಲಹರಿ (ಪಾರಮಾರ್ಥ ಮುಯ್ಯದ ಹಾಡು ) ಗಿರಿಜೇಶ ಮನೋಜಾತಾ ಸುರಮುನಿಜನಪ್ರೀತಾ ಕರುಣಾ ಸಾಗರ ಗಣನಾಥಾ ಜಗವದನಾ ಚರಣಕೆ ಶರಣೆಂದು ಬಲಗೊಂಬೆ ಕೋಲೆ 1 ಸಕಲಾ ಮುಖದೊಳು ಯುಕುತಿಯ ನುಡಿಗಳಾ ಪ್ರಕಟದಿ ನುಡಿಸುವೆ ಜನನಿ ಸರಸ್ವತಿ ಭಕುತಿಲಿ ಶರಣೆಂಬೆ ಕಲ್ಯಾಣಿ 2 ಆಚ್ಯುತಾನಂತನೆ ಸಚ್ಚಿದಾನಂದನೆ ನೆಚ್ಚಿದ ಶರಣರ ಸುರಧೇನುವೆ ಅವಧೂತಾ ಎಚ್ಚರ ಕೊಟ್ಟು ಸಲಹಯ್ಯ 3 ಕರಿಯಾ ಮೊರೆಯ ಕೇಳಿ ಭರದಿಂದೊದಗಿ ಬಂದು ಕರದಿಂದಲೆತ್ತಿ ಸಲಹಿದೆ ಶ್ರೀಶಾ ಚರಣವದೋರಿ ಕಾಯಯ್ಯ 4 ಶರೀರ ಒಂದರಲಿದ್ದು ನರನಾರೀರೂಪದಲಿ ಚರಿತವ ದೋರದೆ ಅನುಪಮ ಶಂಕರ ಕರುಣಿಸು ಫಣಿಗಣ ಭೂಷಣಾ 5 ಅಂಜನೀಸುತನಾಗಿ ಕಂಜನಾಭವ ಸೇವೆ ರಂಜಿಸುವಂತೆ ಮಾಡಿದ ದೈತ್ಯರ ಭಂಜನ ಹನುಮಂತ ಕರುಣಿಸು6 ಚಾರು ಚರಿತಗಳ ತೋರಿದೆ ಜಗದೊಳು ಮುನಿರಾಯಾ ಸುಖತೀರ್ಥ ತಾರಕ ಶರಣರ ನಿಜಗುರು7 ಮೇದನಿಯೊಳಗುಳ್ಳ ಸಾಧು ಸಂತರ ನಿಜ ಅನುದಿನ ಜಗದೊಳು ಸಾದರದಿಂದ ನೆನೆಯುತ 8 ಶರಣವ ಹೊಕ್ಕರ ಕರುಣದಿಂದಲಿ ನೋಡಿ ತರುಣೋಪಾಯವ ತೋರುವಾ ಮಹಿಪತಿ ಗುರುರಾಯ ನಿನ್ನ ಬಲಗೊಂಬೆ9 ಕರುಣವಾಗಲು ಅವರ ಪರಮ ಮೂಕನಜ್ಜಿಹ್ವಾ ಸುರಸ ಮಾತುಗಳ ಆಡೋದು ಹುಸಿಯಲ್ಲ ಧರೆಯೊಳು ಅನುಭವವಿದು10 ಅವರಾಮಹಿಮೆಗಳ ವಿವರಿಸಿ ಹೇಳಲು ಹವಣವೆಲ್ಲಿಹುದು ಮನುಜಗ ಭಕುತರು ಅವನಿಲಿಬಲ್ಲರು ನಿಜಸುಖ 11 ಏನೆದು ಅರಿಯದಾ ಹೀನ ಅಜ್ಞಾನಿಯು ನ್ಯೂನಾರಿಸದೇ ಸಲಹಯ್ಯಾ ಮಹಿಪತಿ ದೀನೋದ್ಧಾರಕಾ ಕರುಣಿಸು 12 ಪದುಮನಾಭನ ಭಕ್ತಿ ಚದುರಾ ಮುತ್ತೈದೇರು ಒದಗಿನ್ನು ಬನ್ನಿ ಹರುಷದಿ ಮುಪ್ಪದಾ ಉದಿತಾ ನುಡಿಗಳ ಕೇಳಲು 13 ವಿವೇಕಬೋಧಿಯಂತ ನಾವಕ್ಕತಂಗೇರು ದೇವಗುರುರಾಯನ ಮಕ್ಕಳು ನಿಜಶಕ್ತಿ ಭುವನದಿ ನಮ್ಮಾ ಹಡೆದಳು 14 ಸುಜ್ಞಾನ ವೈರಾಗ್ಯ ಸಂಜ್ಞದಿ ಮೆರೆವರು ಪ್ರಾಜ್ಞರು ನಮ್ಮಣ್ಣಾ ತಮ್ಮರು ಹರಿಭಕ್ತಿ ಮಜ್ಞರು ಅವರಿಗೆ ಸರಿ ಇಲ್ಲಾ 15 ಭಕ್ತಿಯ ತೌರಮನಿ ಶಕ್ತಿಯ ಬಲದಿಂದ ಯುಕ್ತೀಲಿ ನಾವು ಬರುತೇವು ಹರಿಭಕ್ತಿ ಭೋಕ್ತರು ನೀವು ಬರಬೇಕು 16 ದಿವ್ಯಾಂಬರವನುಟ್ಟು ಸುವಿದ್ಯಾ ಇಡಗಿಯು ತೀವಿದರ ಅರಹು ಅಂಜನಾ ವನೆ ಇಟ್ಟು ಸುವಾಸನೆಯ ಪುಷ್ಪ ಮುಡಿದಿನ್ನು 17 ಈರೆರಡು ಭೇರಿಯ ಸಾರಿಸಿ ಎಡಬಲಕ ಆರು ವಂದಣಾ ನಡಸೂತ ಕಹಳೆಗಳು ಮೂರಾರು ಊದಿಸುತೆ ಬರುತೇವು 18 ಸಾಧನ ನಾಲ್ಕರ ಕುದುರೆಯ ಕುಣಿಸುತ ಒದಗಿದ ಪ್ರೇಮದ ಮದ್ದಾನಿ ಯೊಡಗೂಡಿ ಚದುರೇರು ಮುಯ್ಯ ತರುತೇವು 19 ಭಾವದ ಬಯಲಾಟ ಆವಾಗ ಆಡುತ ಸಾವಧ ಮುಯ್ಯಾ ತರುತೇವು ನುಡಿಗಳ ನೀವಾತ ಕೇಳಿ ಜನವೆಲ್ಲಾ 20 ಮೆರೆವಾಭಿಮಾನಿಯು ಇರುವ ಸೋದರ ಮಾವ ಅರಸಿ ವಿಷಯಯೆಂಬತ್ತೆರಯರ ಮನಿಗೀಗ ಭರದಿಂದ ಮುಯ್ಯ ತರುತೇವು 21 ರಾಯ ಅಭಿಮಾನಿ ಸಿರಿಯದ ಸಡಗರ ನಾ ಏನ ಹೇಳಲಿ ಜಗದೊಳು ಪಸರಿಸಿ ತಾ ಎಡ ಬಲವನು ನೋಡನು 22 ಏಳು ಸುತ್ತಿನ ಗೋಡಿ ಮೇಲಾದ ಮನಿಗಿನ್ನು ಸಾಲಾದ ಒಂಭತ್ತು ಬಾಗಿಲು ಚಲುವಾದ ಮ್ಯಾಲಿಹ ಒಂದೊಂದು ಗಿಳಿಗಳು 23 ಅಂಗಳ ಹೋಗಲಿಕ್ಕೆ ಕಂಗಳ ಲೇಸಕಂಡೆ ಮಂಗಳವಾದ ಉಪ್ಪರಿಗೆ ಥರಥರ ರಂಗ ಮಂಟಪ ನಡುವಂದು24 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಚಾವಡಿರಾಯನ ಸೌಖ್ಯಕ ಪೊಡವಿಲಿ ಸರಿಯಾ ಕಾಣೆನು 25 ಎಂಟು ದಿಕ್ಕಿಗೆ ನೋಡೀ ಘಂಡೆಯ ಕಟ್ಟಿದ ಎಂಟು ಆನೆಯಾ ಘಡಘಾಡಿ ತಲಿಯಲಿ ಉಂಟಾದ ಗುರುತರದ ಅಂಕೂಶಾ 26 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಆನೆಯಾ ಘಡಘೂಢೀ ಥಳೀಐಳೀ ಊಂಠಾಧ ಘೂಋಊಥೃಧ ಆಂಖೂಶಾ 26 ಐದೈದು ಸಾಲಕ ಐದೈದು ಕುದುರೆಯು ಐದೈದು ಭಂಟರು ಅದಕಿನ್ನು ಅನುದಿನ ಮೈದಡುವುತಾ ಏರುವರು27 ಹತ್ತು ಮಂದಿಯಾ ಆಪ್ತರು ಮನರಾಯಾ ಒತ್ತಿ ಆಳುವ ಪ್ರಧಾನಿ 28 ಅನುವಾದ ಗುಣತ್ರಯಾ ಅನುಜರು ಈತಗೆ ಅನುಭವಿ ಒಬ್ಬ ಇದರೊಳು ಹರಿನಾಮಾ ನೆನೆವನು ಅನ್ಯ ಹಂಬಲವಿಲ್ಲಾ 29 ನಾಕಾವಸ್ಥೆಗಳೆಂಬಾ ನಾಕು ಒಳ ಮನೆಗಳು ಇಕ್ಕಿಹದೊಂದು ಅದರೊಳು ಭಂಡಾರ ಬೇಕಾದವರೆ ತೆರೆವರು 30 ಈರಾಯ ನೈಶ್ವರ್ಯ ಆರು ಬಣ್ಣಿಸುವರು ಆರೊಂದು ಮಂದಿ ಮಕ್ಕಳು ಹೆಸರಾದ ಪರಿಯಾಯ ಕೇಳಿ ಹೇಳುವೆ 31 ಮೊದಲು ಕಾಮ ಕ್ರೋಧವೊದಗಿ ಲೋಭಮೋಹ ಮದಮತ್ಸರೆಂಬ ಬಾಂಧವರು ನಿಜ ತಂಗಿ ವಿದಿತ ಅಜ್ಞಾನಿ ಶಕ್ತಿಯು 32 ಬಂದು ಹೊರಗನಿಂತು ಒಂದು ಜಾವಾಯಿತು ಮುಂದಕ ನಮ್ಮ ಕರಿಯಾರು ನಾವರಸಿ ಕಂದಿದ ಮಾರೀ ತೋರಳು 33 ಪಶ್ಚಾತಾಪವೆಂಬ ಬಿಚ್ಚಿ ಹಾಸಿಗೆ ಹಾಸಿ ತುಚ್ಚರ ದೂರ ಝಾಡಿಸೀ ಬರುತೇವು ಎಚ್ಚರ ಲೋಡಾ ತಂದಿರಿಸಿ 34 ಈ ಕಲ್ಲ ಮ್ಯಾಲದ್ದು ಈ ಕಲ್ಲಿಗ್ಹಾರುವಾ ತಾ ಕೋಡಗನಾ ಗುಣದಂತೆ ಭಾವಯ್ಯ ಆ ಕಾಮಣ್ಣನ ಕರಿಯಾರೆ35 ಎಷ್ಟು ಉಂಡರ ದಣಿಯಾ ಎಷ್ಟು ಇಟ್ಟರ ದಣಿಯಾ ಎಷ್ಟು ಉಟ್ಟರ ದಣಿಯಾನು ಕಾಮಣ್ಣ ಎಷ್ಟು ಕೊಟ್ಟರ ದಣಿಯಾ 36 ಒಳ್ಳೆವರರಿಯನು ಹೊಲ್ಲವರರಿಯನು ಕೊಳ್ಳಿಕಾರನಾ ಮತಿಯಂತೆ ಭಾವಯ್ಯ ನಿಲ್ಲರು ಈತನ ಇದರೀಗೆ 37 ಈತನ ತಮ್ಮನು ಮಾತು ಮಾತಿಗೆ ಬಹಳಾ ಖ್ಯಾತಿಯ ತಾನು ಪಡೆದಾನು ಕೋಪಣ್ಣ ಆತನ ಮುಂದಕ ಕರಿಯಾರೆ 38 ನೆಂಟರ ಅರಿಯನು ಇಷ್ಟರ ಅರಿಯನು ಬಂಟರಾ ಮೊದಲೇ ಅರಿಯನು ತಪಸಿಗೆ ಕಂಟರನಾದಾ ಈತನೇ 39 ಥರ ಥರ ಕುಣಿವುತ ಘರ ಘರ ಹಲ್ಲು ತಿಂದು ನೆರೆಮೋರೆ ಕೆಂಪು ಮಾಡುವಾ ಕೋಪಣ್ಣಾ ಸ್ಮರಣೆಯಾ ತನ್ನ ಮರೆವನು 40 ಕಂಡವರಿಗೆ ತಾನು ಕೆಂಡದ ನುಡಿಯಾಡಿ ಖಂಡಿಸಿ ಬಿಡುವಾ ಗೆಳತನಾ ಕೋಪಣ್ಣ ಹಿಂಡುವ ಹಿಡಿದು ಪ್ರಾಣವ41 ತಾನಾರೆ ಉಣ್ಣನು ಜನರಿಗೆ ಇಕ್ಕನು ಜೇನಿನನೊಣದಾ ಗುಣದಂತೆ ಲೋಭೇಶಾ ದೀನನ ಮುಂದಕ ಕರಿಯಾರೆ42 ಬಿಚ್ಚಾರುವಿಯನು ವೆಚ್ಚಮಾಡೆಂದಿಗೆ ಬಚ್ಚಿಟ್ಟು ಹೂಳಿನೆಲದೊಳು ಲೋಭೇಶಾ ಹುಚ್ಚಾಗಿ ಕಾಯ್ದಾ ಫಣಿಯಂತೆ43 ಕಾಸು ಹೋದಾವೆಂದು ಅಸುವ ಹೋಗುವವರಿ ಕಾಸಾವೀಸಿಯಾ ಬಡವನು ಲೋಭೇಶಾ ಹೇಸನು ಎಂದು ಮತಿಗೇಡಿ 44 ಇಳೆಯೊಳೀ ಪರಿಯಲೀ ಗಳಿಸಿದ ಧನವನು ಕಳೆದುಕೊಂಬರು ಅರಸರು ಕಡಿಯಲಿ ಶೆಳೆದು ಕೊಂಡನು ಪುಗಸಾಟೆ 45 ಇವರಿಂದ ಕಿರಿಯನಾ ಹವಣವ ನೋಡೀರೆ ಅವಗುಣದ ರಾಶಿ ಜಗದೊಳು ಮೋಹಾಂಗಾ ಅವನಾ ಮುಂದಕ ಕರಿಯಾರೇ 46 ತಾಯಿ ತಂದೆಗಳ ನ್ಯಾಯನೀತಿಗಳಿಂದ ಸಾಯಾಸದಿಂದ ಭಕ್ತಿಯ ಮಾಡದೆ ಮಾಯದಾ ಬಲಿಗೊಳಗಾದಾ 47 ಏನು ಬೇಡಿದುದೆಲ್ಲಾ ಪ್ರಾಣವವೆಚ್ಚಿಸಿ ಮಾನಿನೀಯರಿಗೆ ಕುಡುವನು ಮೋಹಾಂಗಾ ಮನವಿಡ ಒಳ್ಳೆವರ ಸೇವೆಗೆ 48 ಲೆಕ್ಕ ವ್ಯವಹಾರವಾ ಲೆಕ್ಕದಿ ಮಾಡದೇ ಮಕ್ಕಳಾಟಕಿಯ ಮಾಡುವಾ ಕ್ರೀಡೆಯಾ ನಕ್ಕಾರೆಂಬ ಸ್ಮರಣಿಲ್ಲಾ 49 ಕಮಲದ ವಾಸನೆಗೆ ಭ್ರಮರವು ಸಿಕ್ಕಿದ ಕ್ರಮದಿಂದ ನೋಡಿ ಸೆರೆಯಾದಾ ಶ್ರೀವಧು ರಮಣನ ನಾಮಾ ನೆನಿಯನು 50 ತರುವಾಯದವನೀತಾ ದುರುಳನ ನೋಡಿರೆ ಮರಳು ಬುದ್ಧಿಯಾ ಮದರಾಯಾ ಆತನಾ ಸರಕು ಮಾಡುವಾ ಕರಿಯಾರೆ 51 ಹೊರಸು ತೊಯ್ಯದಂತೆ ಭರ್ರನೆ ಬಿಗಿವನು ಶರಣರ ಕಂಡು ಬಾಗನು ತಲೆಯನು ಅರಿತವರಿಗೇನಾ ಹೇಳಲಿ 52 ಬಗೆಯಾದೆ ಹಿತವನು ಪಗಡಿಪಂಚಿಗಳಾಡಿ ಹಗಲಿನಾ ಹೊತ್ತುಗಳೆವನು ರಾತ್ರೀಲಿ ಮುಗುಧೇಯರೊಡನೆ ಒಡನಾಟಾ 53 ಕಣ್ಣಿಲ್ಲದಾನೆಯು ಚನ್ನಾಗಿ ತಿರುಗುತ ಮುನ್ನ ಬತ್ತಿದಾ ಬಾವಿಯ ಬೀಳ್ವಂತೆ ಕಣ್ಣೆದ್ದು ಕುರುಡನಾದನು&
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆನಂದನಿಲಯ ವಿಠ್ಠಲನೆ | ನೀನಿವಳ ಸಲಹಬೇಕೊಜ್ಞಾನಗಮ್ಯನೆ ದೇವ | ಮೌನಿಮಧ್ವರ ಹೃದಯಾ ಪ ಪಾದ ಸೂಸಿ ಸೇವಿಪಳೋ |ವಾಸುಕೀಶಯನ ಮ | ಧ್ವೇಶ ತವಪದ ಕಮಲದಾಸಳೆಂದೆನಿಸುತ್ತ | ನೀ ಸಲಹೊ ಹರಿಯೇ 1 ಉದ್ಯೋಗ ವ್ಯವಹಾರ | ವಿದ್ಯೆಯಲಿ ಚಾತುರ್ಯಮಧ್ಯೆ ಮಧ್ಯೇ ಬರುವ | ಹೃದ್ರೋಗಗಳು ಸರ್ವಪ್ರದ್ಯುಮ್ನ ತವ ಸೇವೆ | ಎಲ್ಲ ಇವು ಎಂಬಂಥಶುದ್ಧ ಜ್ಞಾನವಿತ್ತು | ಉದ್ಧರಿಸೊ ಹರಿಯೇ 2 ಭವ ಕಳೆಯೋಈರ ಕರುಣಾ ಪಾತ್ರ | ಗೌರಿಪತಿ ಶಿವವಂದ್ಯಗೌರಿದೇವಿಯ ಅಭಯ | ತೋರ್ದೆ ಸ್ವಪ್ನದಲೀ3 ಪತಿಸೇವೆ ಇತ್ತಿವಳ | ಕೃತಕಾರ್ಯಳೆಂದೆನಿಸುಹಿತಮಿತ್ರ ಪಿತೃಮಾತೃ | ಬಂಧು ಬಳಗದಲೀ |ಕೃತಿಪತಿಯು ಸರ್ವರಲಿ | ವ್ಯಾಪ್ತನಾಗಿಹನೆಂಬಮತಿಯಿತ್ತು ಸಲಹಿವಳ | ಗತಿ ಪ್ರದನೆ ಹರಿಯೇ 4 ಗುರುಧರ್ಮ ಗುರುಸೇವೆ | ಪರಮ ಭಕುತಿಯಲಿಂದಚರಿಪ ಸನ್ಮತಿಯಿತ್ತು ಕರುಣದಲಿ ಕಾಯೋಗುರುವಂತ ರಾತ್ಮನನ | ತೋರೆಂದು ಪ್ರಾರ್ಥಿಸುವೆಪರಮ ಪುರುಷನೆ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು