ಒಟ್ಟು 24 ಕಡೆಗಳಲ್ಲಿ , 21 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವಿಷ್ಣು ತೀರ್ಥರು (ಮಾದನೂರು) ಶ್ರೀ ವಿಷ್ಣು ತೀರ್ಥರೆ ನಮೋ ಪ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ. ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು 1 ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು 2 ಪತಿ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ಮøತಿ ಒದಗುತಿರಲು 3 ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ 4 ಶೃತಿ ಸ್ಮøತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು 5 ಸಂಚಿತ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು 6 ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ 7 ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ 8 ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು 9 ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು 10 ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು 11 ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ 12 ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||
--------------
ಗುರುಗೋವಿಂದವಿಠಲರು
ಸತಿ ಸರಸದಿ ಶಾಲೆಯೊಳು ಬಂದು ಪ ಪಿತನಿಂದಲಿ ಪತಿನಿಂದ್ಯವ ಕೇಳಿದನೆಂದು ಬಂದು ಅ.ಪ. ಧಡಿಗೆ ಬಿಡುಬಿಡುತಲಿ ಕಣ್ಣೀರಿಡುತಲಿ ಕೆಂಡದಿ ಧುಮುಕಲುಜಡೆಧರ ಕೇಳಿದಾಕ್ಷಣ ಜಡೆ ಅಪ್ಪಳಿಸಲು ಮೇದಿನಿಗೆ ಸಂದುದಿತ ಸದಾಶಿವನೆ ಬಂದು ಭಂಜಿಸಲು ಮತ್ತೆಮೇಲು ಬಂದು 1 ಮಾವನ ಶಿರವಳಿದಾ ಮತ್ತೆ ಮಾವನಿಂದಲಿ ತುತಿಸಿಕೊಂಡ ಮಂದಜಾಸನ ಬಂದು ಬಹುಪರಿ ಪೇಳಿದಾಮಂದ ಜನರ ಪೊರೆದಾ ಮಾರನಯ್ಯನಾ ಕರುಣವ ಪಡೆದಾಮತ್ತೆ ಮಾರನ ಮದ ಮುರಿದಾ ಮಾರನ ಬದುಕಿಸಿಮಾರಿಗೆ ವರವಿತ್ತು ನಾರಿಗೆ ತೋರಿಸೆ ಬಂದು2 ನಸುನಗುತಲಿ ಬಸವನು ಭೃಗು ಋಷಿಗಳ ಮೀಸೆಗಳ್ಳುದಾ ಬಸುಮಾದರ ಬಹುಪರಿಯಾಗದ ಬಸುಮಗೈದಾಳಳಿದಾ ಭಾರ್ಯಳ ಮೊರೆಕೇಳಿ ಭಾರವನಿಳುಹಿಪ ಪರಭಾರೆಪುರಕೆ ಪೋದಾಭಾರತೀಶ ಪಿತ ತಂದೆವರದಗೋಪಾಲವಿಠಲನಭಜಿಸುತ ಬಂದು 3
--------------
ತಂದೆವರದಗೋಪಾಲವಿಠಲರು
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಸತ್ಕವೀಂದ್ರ ಬಾಬೇಂದ್ರೆ ಸುಗುಣಸಾಂದ್ರ ಪ. ನಮ್ಮ ಮಾನವಿ ಸ್ಥಳದಿ ಅಚ್ಚಗನ್ನಡ ನುಡಿಯ ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ ನಿಮ್ಮ ಬರುವಿಗೆ ಬಯಕೆ ಇಮ್ಮಡಿಸಿದೆಮಗೆ ಸಮ್ಮತಿಸಿ ಬಾರಯ್ಯ ಸತ್ಕವೀಂದ್ರ ಶ್ರೀ ಬೇಂದ್ರೆ ಸುಗುಣೇಂದ್ರ 1 ಅಚ್ಚಗನ್ನಡ ತಾಯಿಗಚ್ಭದ ಮನೆಂದು ಹೆಚ್ಚಾಗಿ ನಿಮ್ಮನ್ನು ಮೆಚ್ಚುವೆವೋ ಮುಚ್ಚುಮರಿಯಾಕೆ ಈ ಉತ್ಸವಕೆ ಬರದಿರೆ ವಾಗ್ದೇವಿ ಸತ್ಕವೀಂದ್ರ 2 ದಾತರಾದವರಾರ್ತರಾತುರದಿ ತ್ವರದಿಂದ ಪ್ರೀತಿಯಲಿ ಪೂರ್ತಿಸಲು ಒಪ್ಪಿರೆಂಬಾ ನೀತಿ ಮಾತನು ನೀ ತಿಳಿಯದಾತನೆ ಹಾತೊರೆಯುತಿದೆ ಮನವು ಸತ್ಕವೀಂದ್ರ 3 ಕನ್ನಡದ ನುಡಿ ಸುಧೆಯ ಕನ್ನಡಿಗರಿಗೆ ಬೀರಿ ಕನ್ನಡ ನಾಡೆಂಬ ಪಾಲ್ಗಡಲಕೆ ಜೇನ್ನೊಡಲನೆಂದೆನಿಸಿ ಕನ್ನಡಿಗರಿಂ ಮನ್ನಣೆಯ ಪಡೆದಂಥ ಸತ್ಕವೀಂದ್ರ 4 ಉಸಿರಲೆನ್ನಯ ಮತಿಗೆ ವಶವಲ್ಲವೈನಿನ್ನ ರಸವತ್ಕವಿತಾ ಪ್ರತಿಭಾಚಾರ್ತುರ್ಯವಾ ಹೊಸಗನ್ನಡ ನುಡಿ ರಸದ ಮಾಧುರ್ಯಮಂ ರಸಿಕರಿಗೆ ನೀ ನೀಡು ಸತ್ಕವೀಂದ್ರಾ 5 ಕನ್ನಡ ನುಡಿ ಸಾರಿ ಕನ್ನಡಕುಪಕಾರಿ ಕನ್ನಡದ ಜಯಭೇರಿ ಹೊಡೆದ ನಗಾರಿ ಕನ್ನಡದ ಹೊಸ ಸಿರಿಯು ಕನ್ನಡ ರಸಝರಿಯು ನಿನ್ನಿಂದ ಲಭಿಸಿತೈಸತ್ಕವೀಂದ್ರಾ6 ನಿನ್ನಿಂದ ಕನ್ನಡದ ಮ್ಲಾನತೆಯು ದೂರಾಯಿತು ನಿನ್ನಿಂದ ನಮಕವನ ಕವಲೊಡೆದು ಸರ್ವತ್ರ ಉನ್ನತೆಯ ನೈದಿತೈ ಸತ್ಕವೀಂದ್ರಾ 7 ವೃತ್ತಪತ್ರಿಕೆಗಳಲಿ ಮತ್ತೆ ಸಮ್ಮೇಳನದಿ ನಿತ್ಯ ಓದುವ ಮನೆ ಶಾಲೆಯಲ್ಲಿ ಚಿತ್ತಪೂರ್ವಕ ನಿನ್ನ ಉತ್ತಮೋತ್ತಮ ಕವನ ಮತ್ತೆ ಪೇಳುವರು ಸತ್ಕವೀಂದ್ರಾ8 ನುಡಿಯಣ್ಣನೊಲುಮೆಯೋ | ನುಡಿಯೊಡೆಯನನುಗ್ರಹವೋ ಪಡೆದ ಮಾತೆಯ ಜೀತನೋಪಿ ಫಲವೋ ಕಡು ಸರಳ ಬಿಡಿವೃತ್ತ ಸಡಗರದಿ ರಚಿಸುತ್ತ ಪೊಡೆವಿಯೊಳು ಪಸರಿಸಿದ ಸತ್ಕವೀಂದ್ರಾ 9 ಪ್ರೇಮದಿಂದಲಿ ನಿನ್ನ ಪ್ರೇಮಿತಾರ್ಥವಗರೆದು ಶಾಮಸುಂದರವಿಠಲ ಸಲಹೋ ಎಂದು ನಾ ಮುದದಿ ಪ್ರಾರ್ಥಿಸುವೆ ನೀಮಾಡ್ವ ಉಪಕಾರ 10
--------------
ಶಾಮಸುಂದರ ವಿಠಲ
ಸರಸ್ವತಿ ದೇವಿ ವಾರಿಜನೇತ್ರೆಯ ಶಾರದೆ ಶ್ರೀಮುಖ ತೋರುವದೆನ್ನಯ ಪಾರ ಪರಾತ್ಪರೆ ಪ ಮಯೂರ ವಾಹಿನಿ ಕಾಯುವುದೆನ್ನ ತಾಯೆ ಚಿದ್ಛನ ನಿಜದಾಯುವ ನೀಯುವ 1 ಬಾಲೆಯ ಭಾಗ್ಯವಿಶಾಲೆಯ ನವಕುಸುಮ ಮಾಲೆಯ ಗಾನವಿಲೋಲೆ ವಾಗೇಶ್ವರಿ 2 ಛಂಧದೊಳೆನ್ನ ಸಾನಂದವ ಪಾಲಿಪ ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ3 ನಂಬಿಕೆ ಹೊಂದಿಹನೆಂಬುವ ಭಕ್ತರ ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ 4 ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ ಶಾಂತಿ ಸದ್ಗುರುಪದ ಸಂತಸಕಾರಿಣಿ 5
--------------
ಶಾಂತಿಬಾಯಿ
ಹನುಮ-ಭೀಮ-ಮಧ್ವರು ಅಸುರರನು ಅಳಿಯ ಬಂದೆನು ನಾನು ನಿನ್ನ ವೈರಿದಶರಥರಾಮನಾಳೆಂದ ಪ. ಹೊಸಕಪಿಯೆ ನೀನು ಬಂದುದೇನುಕಾರಣವೆನಲುದಿ[ಶೆÀ]ಗೆ ಬಲ್ಲಿದ ಹನುಮ ನಾ ಕೇಳೊ ನಿ-ನ್ನಸುರ ಪಡೆಯ ಮಡುಹಬಂದೆ ನಿನ್ನಎಸೆವ ಪಾದದಲೊದೆಯ ಬಂದೆ ವನದಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನದಶಶಿರವ ಕತ್ತರಿಸಿ ಎಸೆವ ರಾಮರ ಮಡದಿಹಸುಳೆ ಸೀತೆಯ ಅರಸಲು ಬಂದೆ 1 ಎನ್ನ ವೈರಿಗಳು ಇನ್ಯಾರೆಂದು ರಾವಣನುಹೊನ್ನಕುಂಡಲದ ಹನುಮನೆ ಕೇಳೊಮುನ್ನವರ ಸಾಹಸವಯೇನೆಂಬೆ ಅವರಪರ್ಣಶಾಲೆಯ ಹೊಕ್ಕು ಬಂದೆ ರಾಮ-ಕನ್ಯೆ ಸೀತಾಂಗನೆಯ ತಂದೆತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ 2 ಇನ್ನು ಹೆಮ್ಮೆಮಾತ್ಯಾತಕೊ ಕಪಿಯೆಕಚ್ಚಿ ಕೀಳಲೋ ಕಣ್ಣು ಹತ್ತುತಲೆಯನೆ ಹಿಡಿದುನುಚ್ಚುನುರಿ ಮಾಡಿ ಕೊ[ಲ್ಲಲೊ]ನಿನ್ನ ಇಷ್ಟುಹೆಚ್ಚಿನ ಮಾತ್ಯಾಕೊ ನಿನಗೆ ಬಹಳಕಿಚ್ಚು ತುಂಬಿತು ಕೇಳೋ ಎನಗೆ ಒಂದುಮೆಚ್ಚು ಹೇಳುವೆನೊ ರಾಮರಿಗೆಅಚ್ಚುತನ ಬಣಕೆ ಮೀಸಲಾಗಿರು ನೀನು 3 ವಿಧಿ ಕಾಲಮ[ಣೆ]ಯಾಗಿಬೆನ್ನಬಿಡದಿಹ ಪರಿಯ ನೋಡೊ 4 ಎನ್ನ ಸೋದರಮಾವ ವಾಲಿಯನು ಕೊಂದೀಗತಮ್ಮ ಸುಗ್ರೀವಗೊಲಿದು ವರವಿತ್ತುನಿನ್ನ ಕೊಂಡೊ[ಯ್ದ]ನೆಂಬುವರೊ ನಿನ್ನಚಿನ್ನನ ತೊಟ್ಟಿಲಿಗೆ ಕಟ್ಟುವರೊ ನಿನ್ನಹೊನ್ನತುಂಬೆಂದು ಆಡ್ಸುವರೊನಿನ್ನ ಶಿರವರಿದು ವಿಭೀಷಣಗೆÀ ಪುರವ ಕೊಡಬೇಕೆನುತಎನ್ನೊಡೆಯ ಬರುತಾನೆ ತಾಳೊ ಎಂದ 5 ಎತ್ತಿಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿದವಕತ್ತಿ ಇಪ್ಪÀತ್ತು ಕಾಣೋ ಕಪಿಯೆಎತ್ತಿ ಕಡಿವೆನು ಬಾಹುದಂಡ ಬೆ-ನ್ನ್ಹ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನಚಿತ್ತದಲಿ ತಿಳಿದುಕೊಳ್ಳೆಂದಮತ್ತೆ ನಾ ತಾಳಿ ಕೈಗಾಯಿದೆನಲ್ಲದೆ ಬಾಯಬತ್ತಿಸದೆ ಬಿಡುವೆನೇನೋ ಕಪಿಯೆ 6 ಮತ್ತ ರಾವಣ ನೀನು ಹೊತ್ತಿದ ಭೂಮಿ ಹಣತಿಸುತ್ತಣ ಸಮುದ್ರವೆ ತೈಲಎತ್ತಿ ಹಿಡಿವಳು ಸೀತೆ ದೀಪ ನಮ್ಮಚಿತ್ತದೊಲ್ಲಭನ ಪ್ರತಾಪ ನಿನ್ನಲಂಕಪಟ್ಟಣವು ಸುಡುವಂತೆ ಶಾಪಹತ್ತು ತಲೆ ಹುಳ ಹಾರಿಬಂದು ಬ್ಯಾಗಸುತ್ತಿ ಬೀಳುವುದು ದೀಪದೊಳಗೆ7 ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದುಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗಪೊಚ್ಚಸೀರೆಗಳ ಸುತ್ತಿದರು ತ್ವರಿತಅಚ್ಚ ಎಣ್ಣೆಯಲಿ ತೋಯಿಸಿದರು ಬಾಲಹೆಚ್ಚಿಸಲು ಕಂಡು ಬೆದರಿದರುಕಿಚ್ಚು ಹಚ್ಚಲು ರಕ್ಕಸರ ಗಡ್ಡಮೀಸೆ ಸಹಎಚ್ಚರಿಸಿ ಸುಟ್ಟ ಲಂಕಾಪುರವ8 ಮುಖ್ಯಪ್ರಾಣ ವರದ ಮೆರದ 9
--------------
ವಾದಿರಾಜ
ಪ್ರಸನ್ನ ಶ್ರೀ ವಾಮನಪ್ರಥಮ ಅಧ್ಯಾಯಶ್ರೀ ವಾಮನಪ್ರಾದುರ್ಭಾವಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿಸುದರ್ಶನ ಗದಾ ಜ್ಞಾನಪ್ರದ ದರಾಹಸ್ತಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥಶೃತಿವೇದ್ಯ ಅಜಸೇವ್ಯಪ್ರಣವಪ್ರತಿಪಾದ್ಯ1ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳುಅವತಾರಗಳ ಮಾಡಿ ಸಜ್ಜನರ ಕಾಯುವಿ 2ವೇದೋದ್ಧರಮತ್ಸ್ಯಸತ್ಯವ್ರತನಿಗೆ ಒಲಿದಿಮಂದರವ ಪಾಲ್ಗಡಲಲಿ ಪೊತ್ತಕೂರ್ಮಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿದೈತ್ಯಹರ ಭೂಮಿ ಉದ್ಧರ ಭೂವರಾಹ 3ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇವಿಷ್ಟ ವಾಮನ ತ್ರಿವೃತ್ ಗೋಪಬಾಲಸುಪವಿತ್ರ ಜಮದಗ್ನಿಸುತ ಪರುಶುರಾಮಪ್ರಭಂಜನಸೇವ್ಯಶ್ರೀರಾಮಚಂದ್ರ4ಅಜ್ಞಾನ ಹೃತ್ತಿಮಿರಸೂರ್ಯವೇದವ್ಯಾಸನಿಜಭಕ್ತಜನ ಪಾಂಡವಪ್ರಿಯ ಕೃಷ್ಣದುರ್ಜನ ವಿಮೋಹಕ ಸುರಸುಬೋಧಕ ಬುಧ್ಧಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ 5ಷಡ್ರೂಪ ಹಯವದನ ಮಹಿದಾಸ ತಾಪಸಕ್ಷಿಪ್ರವಸುಪ್ರದ ಶ್ರೀಕರ ಯಜÕ್ಯ ಕಪಿಲಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ 6ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನುಆ ಆರ್ಯನ ಸುತ ವಿರೋಚನನೆಂಬುವನುಆ ದೈತ್ಯನ ಪುತ್ರ ಬಲಿಮಹಾರಾಜನುಆಧಿಕ್ಯ ಹೊಂದಿದನು ಬಲಪೌರುಷದಲಿ 7ದೈತ್ಯೇಯ ಬಲಿರಾಜ ಬಲಉನ್ನಾಹದಿಂಜಗತ್ರಯವ ತನ್ನ ವಶ ಮಾಡಿಕೊಂಡಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನವಿದುರರಾಗಲು ದೇವಮಾತೆ ಯೋಚಿಸಿದಳು 8ಸರ್ವಭೂತ ಗುಹಾವಾಸವಾಸುದೇವಜಗದ್ಗುರುಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದುದೇವಮಾತೆಗೆಪತಿಕಶ್ಯಪ ಪೇಳಿದನು9ಆದಿವರಾಹನೇ ಮಹಾಪುರುಷ ಸರ್ವ -ಭೂತ ನಿವಾಸನೇವಾಸುದೇವಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವವಿದ್ಯಾಧಿಪತಿ ಶುಭಮಂಗಳ ಸ್ವರೂಪ 10ಸರ್ವ ಜಗಜ್ಜ£್ಮ್ಞದಿಕರ್ತನೇ ಜಗದೀಶಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇವಿಶ್ವತೋ ಮುಖ ಆದಿದೇವ ನಿನಗೆ ನಮೋಶ್ರೀವರ ನಾರಾಯಣ ನರಹರೇ ಸ್ವಾಮಿ 11ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನಸಿರಿಕಾಂತ ಸರ್ವೇಶ ಕೇಶವ ನಮಸ್ತೆಪುರುಟಾಂಬರಧಾರಿ ಸುರವರೇಣ್ಯನೇ ನಮೋಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ 12ಅದಿತಿ ದೇವಿಯು ಪಯೋವ್ರತವ ಮಾಡಿದಳುವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದಆದಿ ಪೂರುಷ ಭಗವಂತ ಶಂಖ ಚಕ್ರಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ 13ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿಆನಂದ ಬಾಷ್ಪವ ಸುರಿಸುತ್ತ ದೀರ್ಘಪ್ರಣಾಮವ ಮಾಡಿದಳು ಗದ್ಗದ ಕಂಠದಿಂನಿನ್ನ ಸ್ತುತಿಸಿದಳು ಆ ದೇವಮಾತೆ 14ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳನಾಮಧೇಯನೇ ಯಜÉÕೀಶ ಯಜÕಪುರುಷಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋಶ್ರೀದ ಶ್ರೀಪತೇ ವಿಷ್ಣೋ ಧೀನನಾಥ 15ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವಅಕಳಂಕ ಸರ್ವೋರು ಸಚ್ಚಕ್ತಿಪೂರ್ಣಏಕಾತ್ಮ ಸರ್ವಜÕ ಸುಖಜ್ಞಾನಪ್ರದ ಭೂಮನ್ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ 16ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀಅದಿತಿಯ ಸುತನೆನಿಸಿ ಭವಿಸುವಿ ಎಂದಿಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ 17ಜಗನ್ನಿವಾಸನೆ ನೀನು ದೇವಮಾತೆಯೊಳುಝಗಝಗಿಸಿಪೊಳೆದಿಯೋ ಉರು ಮಹಾತೇಜಪೊಗಳಲಳವೇ ನಿನ್ನ ಲೀಲಾವತಾರಗಳಅಗಣಿತಮಹಿಮೆಗಳ ದೇವ ದೇವೇಶ18ಸನಾತನನೇ ಅನಘನೇ ಅಜನೇ ಭಗವಂತನೇನೀನು ಅದಿತಿಯಲಿ ಅವತರಿಪುದರಿತುವನರುಹಾಸನ ಹಿರಣ್ಯಗರ್ಭನು ಬಂದುಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು 19ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದತೋಯಜಾಕ್ಷಶಿಪಿವಿಷ್ಟ ವಿಷ್ಣು ಸರ್ವೋತ್ತಮಅಚ್ಯುತಾನಂತೋರು ಶಕ್ತಿಮಯ ನಿನ್ನ 20ಪದುಮಭವ ಸನ್ನುತನೇಆನಂದಮಯನೀನುಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿಚತುರ್ಭುಜವು ಶಂಖಗದಾಅಬ್ಜಚಕ್ರಪೀತ ಕೆಂಪು ವಸನವನ್ನ ಧರಿಸಿದ್ದಿ 21ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯುನಳಿನಾಯತೇಕ್ಷಣ ಮಕರಕುಂಡಲವುಆನಂದ ಸುಪ್ರಚುರ ವದನಾರವಿಂದವುಏನೆಂಬೆ ಗಂಭೀರವಕ್ಷ ಶ್ರೀವಕ್ಷ 22ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳುವನಜಾಸನಾಶ್ರಿತ ಕೌಸ್ತುಭಮಣಿಯುಸುನೂಪುರ ತೊಟ್ಟ ಶುಭಮಂಗಳಪಾದನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ 23ಸೌರಶ್ರಾವಣಸಿಂಹ ಚಾಂದ್ರ ಭಾದ್ರಪದನೀ ಪ್ರಾದುರ್ಭವಿಸಿದ್ದು ಸಿತಶ್ರಾವಣದ್ವಾದಶಿಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರುಸುರಗಾಯಕರುಗಳ ಗಾಯನ ನೃತ್ಯ 24ಜಯ ಜಯತು ಜಯ ಜಯ ವಾಮನ ವಟುರೂಪಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋಜಯ ಜಯತು ಸರ್ವ ಜಗಜ್ಜನ್ಮಾದಿಕರ್ತಜಯ ಜಯಪರಮಪೂರ್ಣೈಶ್ವರ್ಯ ಜಯತು25ಸುಂದರವಟುವಾಮನ ನಿನ್ನ ನೋಡಿಮಂದಜಾಸನಮಹಾ ಋಷಿವರ್ಯರು ಬಹುಆನಂದಭರಿತರು ಆಗಿ ಸಂಸ್ಕಾರಅಂದದಿ ಚರಿಸಿದರು ವೈದೀಕ ರೀತಿಯಲಿ 26ಬ್ರಹ್ಮಾದಿದೇವರು ಮಹಾಋಷಿಗಳುಪರ-ಬ್ರಹ್ಮ ವಾಮನ ನಿನಗೆ ಉಪನಯನರೂಪಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿಮಹಾರ್ಹನೇ ನಿನಗಿದು ಅವತಾರ ಲೀಲ 27ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆದೇವತಾವೃಂದವು ನೆರದಿದ್ದ ಮುನಿಗಳುಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂಈ ವಿಧದಿ ಮುದಮನದಿ ಅರ್ಪಿಸಿದರು 28ಕಮಂಡಲ ವೇದಗರ್ಭನು, ಕೃಷ್ಣಾಜಿನಭೂಮಿ, ದಂಡ, ಸೋಮ,ಕುಶಸಪ್ತ ಋಷಿಗಳುಸುಮೇಖಳ ಕಶ್ಯಪ,ಕೌಪೀನಅದಿತಿಯುಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು 29ಈ ರೀತಿ ಮೇಖಳಸೂತ್ರಆಚ್ಛಾದನಛತ್ರ ಕೃಷ್ಣಾಜಿನ ಕಮಂಡಲು ದಂಡಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆಪರಿಪರಿ ದೇವತೆಗಳು ಅರ್ಪಿಸಿದರು 30ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನಮಹೋತ್ಸವದ ವೈಭವವು ಹೋಮ ಪೂಜಾದಿಗಳುಮಹಿಯಲ್ಲಿ ಅಸದೃಶವು ಸರ್ವಕಾಲದಲು 31ಸೂತ್ರಮೇಖಳಕೌಪೀನಆಚ್ಛಾದನಛತ್ರಮಾಲಾ ಕಮಂಡಲು ದಂಡಹಸ್ತಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪಶ್ರೀರಮಣಪದ್ಮಭವರುದ್ರಾದಿವಂದ್ಯ32ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 33-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯದಾನಪ್ರಕರಣಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಸರಸಿಜೋದ್ಭವ ಸುರವೃಂದ ಮಹಾಋಷಿಗಳುಮರೀಚಿಸುತ ಮೊದಲಾದ ಸುಧೀಗಳು ನಿನಗೆಚರಿಸಿದ ಉಪನಯನ ರೂಪಮಹೋತ್ಸವವಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ 1ನೋಡಿದ ಮಾತ್ರದಲೆಸುಜನವಿಶ್ವಾಸಿಗಳುಮಾಡಿದ ಪಾಪ ಪರಿಹರಿಪ ನರ್ಮದೆಯದಡ ಉತ್ತರದಲಿ ಯಜÕ ಶಾಲೆಕಟ್ಟಿದೊಡ್ಡಕ್ರತುಮಾಡುತ್ತಿದ್ದನು ಬಲಿರಾಜ2ಮೌಂಜಿಮೇಖಳ ಸೂತ್ರದಿಂದ ಬೆಳಗುತ್ತಸಜಲ ಕಮಂಡಲು ಸುದಂಡ ಛತ್ರಪ್ರಜ್ವಲಿಪ ಚಿನ್ಮಯ ಜಟಿಲ ವಾಮನವಿಪ್ರಯಜÕ ಶಾಲೆಯೊಳು ಪ್ರವೇಶ ಮಾಡಿದಿಯೋ 3ಜ್ವಲಿಸುವ ಸ್ವಕಾಂತಿಯುಕ್ಮಾಯಾಮಾಣವಕಬಾಲ ಸುಂದರ ಬ್ರಹ್ಮಚಾರಿಹರಿನಿನ್ನಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿಬಲುಹರುಷದಲಿ ಎದ್ದು ಸ್ವಾಗತಮಾಡಿದರು 4ಭಗವಂತ ವಾಮನ ನಿನ್ನ ಪಾದದಿಬಲಿಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂಹೀಗೆಂದು ತನ್ನ ಪಿತೃಗಳು ತೃಪ್ತರಾದರುತನ್ನ ಕುಲ ಪಾವಿತವಾಯ್ತೆಂದು ಪೇಳ್ದ 5ವನಜಜಾಂಡದ ಒಡೆಯ ರಾಜರಾಜೇಶ್ವರನೇನಿನ್ನ ಮುಂದೆಕರಮುಗಿದು ಬಲಿರಾಜಧೇನುಕಾಂಚನ ಗ್ರಾಮವಿಪ್ರಕನ್ಯಾದಿಗಳುಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ 6ಸುಗಮಸುಹೃತ್ ಧರ್ಮಯುಕ್ ಈ ಮಾತಲ್ಲಿಭಗವಂತ ನೀ ಪ್ರೀತನಾದದ್ದು ಪ್ರಕಟಿಸಿಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ 7ಆಕಾಶದಲಿ ಆಹ್ಲಾದಕರ ಉಡುಪನುಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸುಉತ್ಕøಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು 8ಮಹಾ ಗದಾಯುಧದಾರಿ ದಿಗ್ವಿಜಯ ಶೂರನುಆ ಹಿರಣ್ಯಾಕ್ಷನ ಅಣ್ಣನು ಆದಪ್ರಹ್ಲಾದಪಿತ ಹಿರಣ್ಯಕಶಿಪು ವೀರನುಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು 9ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತದ್ವಿಜವತ್ಸಲ ತನ್ನ ಆಯುಷ್ಯವದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದುಮೂರ್ಜಗ ಅರಿವುದುಬಲಿಆ ಕುಲೀನ10ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರಈ ಧರ್ಮವಂತಬಲಿಎಂದು ನೀ ಪೇಳಿಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿಪದಾಮಮ ಎಂದು ಭೂಮಿ ಯಾಚಿಸಿದಿ 11ನಳಿನಜಾಂಡದ ದೊರೆಹರಿನಿನ್ನ ಮಾಯೆಯಿಂಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದಬಲಿಯು ತನ್ನಲಿ ಕೊಂಡವ ಪೂರ್ಣನಾಗುವಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು 12ಕರ್ಮಜ ದೇವತಾ ಕಕ್ಷದವ ಬಲಿರಾಜಕರ್ಮನಿಮಿತ್ತದಿ ಸಂಸಾರ ಸುಳಿಯಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿಧರ್ಮನೀತಿ ಪೇಳಿದಿ ಶ್ರೀಶ ಮುಕುಂದ 13ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆಮಿತಿಯಿಲ್ಲ ಬೆಳೆಯುವುದು ಮೇಲು ಮೇಲುಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸುವರ್ಧಿಸುವುದು ಮತ್ತು ಸುಖವೀವುದೆಂದಿ 14ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿಮೂರಡಿ ಮಾತ್ರವೇ ಕೊಳ್ಳುವಿ ಎನಲುಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲುಅರಿತು ಶಿಷ್ಯನ ಎಚ್ಚರಿಸಿದ ಶುಕ್ರ 15ವೇದ ವೇದಾಂತಕೋವಿದಶುಕ್ರಾಚಾರ್ಯರುಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರುದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನಭಕ್ತವರ್ಯರು ಎಂದು ನಮಿಪೆ ಸಂತೈಸು 16ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರಶ್ರೀಶ ಭಗವಂತನು ವಿಷ್ಣು ಅವ್ಯಯನೆಕಶ್ಯಪ ಅದಿತಿಯಲಿ ಭವಿಸಿ ದೇವತೆಗಳಕಾರ್ಯಸಾಧನಕಾಗಿ ಬಂದಿರುವ ಎಂದ 17ಮತ್ತು ಪೇಳಿದ ಈ ದಾನ ಕೊಡುವುದರಿಂದದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸುಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ -ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ 18ಇಂಥಾಮಾಯಾಮಾಣವಕಹರಿವಾಮನನುಪಾದಎರಡಲಿಧರೆದಿವಿ ಅಳೆದು ಮೂರ-ನೇದನುಬಲಿಕೊಡಲು ಆಗದೆ ನರಕ ಪೋಗು-ವದು ತಪ್ಪಿಸೆ ದಾನ ಕೊಡಬೇಡ ಎಂದ 19ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರತನ್ನ ಶಿಷ್ಯನಿಗೆ ಬೋಧಿಸಿದರೂ ಸಹಮನ ಸೋಲದೆ ಬಲಿರಾಜ ಧಾರೆ ಎರೆದುದಾನವ ಕೊಡುವೆನು ಎಂದ ವಿನಯದಲಿ 20ಗುರುಗಳ ಮಾತಲ್ಲಿ ಅನಾದರವ ತೋರಿಸಿದಆ ರಾಜನಿಗೆ ಶಾಪ ಇತ್ತರು ಶುಕ್ರರುಸಿರಿಸ್ಥಾನಾದಿಗಳು ನÀಷ್ಟವಾಗುವದೆಂದುಗುರು ಶಪಿಸಿದರೂ ಬಲಿಯ ಮನ ಚಲಿಸಲಿಲ್ಲ 21ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ಸ್ವಾಮಿಭೃತ್ಯವತ್ಸಲ ನೀನು ಬಲಿಯ ಉತ್ಕಷ್ಟಭಕ್ತಿ ಶ್ರದ್ಧೆ ಸತ್ಯ ಧರ್ಮ ತೋರ್ಪಡಿಸಿದಿಅಂತಃ ಪ್ರೇರಕನಾಗಿಬಲಿಶುಕ್ರರಲ್ಲಿ22ಒಳ್ಳೇ ಮೌಕ್ತಿಕ ಆಭರಣ ಮಾಲಾಧರಳುಶೀಲೆ ಪತ್ನಿ ವಿದ್ಯಾವಳಿ ದೇವಿ ಸಹಿತಬಲಿಸ್ವರ್ಣ ಕಲಶ ಜಲದಿಂದ ನಿನ್ನನಳಿನಪದಯುಗವ ಅವನಿಜಿಸಿದ ಮುದದಿ23ಅಚಲಿತ ಭಕ್ತಿಮಾನ್ ಈ ಮಹಾನ್ ಬಲಿರಾಜಅರ್ಚಿಸಿ ಉದಕದಿಂದಲಿ ಧಾರೆ ಎರೆದುಅಚ್ಯುತನೇ ಶ್ರೀಯಃಪತೇ ವಾಮನ ನಿನಗೆ ನೀಇಚ್ಚೈಸಿದ ದಾನ ಹರುಷದಿ ಕೊಟ್ಟ 24ಮುದಾನ್ವಿತರಾದ ದೇವಗಣ ಗಂಧರ್ವವಿದ್ಯಾದರ ಸಿದ್ಧ ಚಾರಣ ಕಿನ್ನರಾದಿಗಳುದೈತ್ಯೇಂದ್ರಬಲಿಕರ್ತೃಕದಾನ ಆರ್ಜವವಉದ್ಗಾಯನ ಮಾಡಿ ಪುಷ್ಪಮಳೆ ಕರೆದರು 25ಬಲಿನಿನ್ನ ಜಗತ್ಪಾವನ ಪಾದೋದಕವತಲೆಯಲಿ ತಾ ಧರಿಸಿ ಕೊಟ್ಟ ಮೂರಡಿದಾನಮಾಲೋಲ ಸರ್ವೇಶ ವಿಶ್ವರೂಪನೇ ವಿಷ್ಣುಲೀಲೆಯಿಂದಲಿ ಕೈ ನೀಡಿ ವಾಮನ ಸ್ವೀಕರಿಸಿದಿ 26ಮಧ್ವಸ್ಥ ಸರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 27-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಆಧ್ಯಾಯಶ್ರೀ ತ್ರಿವಿಕ್ರಮವಿಜಯಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಕಿಂಪುರುಷಕಿನ್ನರಚಾರಣ ಗಂಧರ್ವಾದಿಸುಪರ್ವಾಣ ಗಾಯಕರ ಗೀತೆ ವಾದ್ಯಗಳುಶುಭಘೋಷ ಮಾಡುತಿರೆ ಬಲಿರಾಯ ದಾನವಅರ್ಪಿಸಿ ಕೃತಕೃತ್ಯದಿ ನೋಡಿದ ನಿನ್ನ 1ಉರು ಗುಣಾರ್ಣವ ಮಹೈಶ್ವರ್ಯ ನಿಜಸಚ್ಛಕ್ತಿಹರಿವಾಮನ ನೀನು ವರ್ಧಿಸಿ ಅದ್ಭುತದಿಸುಬೃಹತ್ ವಿಶ್ವರೂಪವ ಕಾಣಿಸಿ ನಿಂತಿನೀರುರುಹ ಜಾಂಡಾಂತರ್ ಬಹಿವ್ರ್ಯಾಪ್ತ ವಿಷ್ಣೋ 2ದೋಷದೂರ ನಿನ್ನ ಒಂದು ರೂಪದಿ ಉಂಟುದೋಷವಿಲ್ಲದ ಪೂರ್ಣ ಅಭಿನ್ನ ಅನಂತನಿನ್ನೀಶಶಕ್ತಿಯಿಂ ಎಲ್ಲವ ಅಡಗಿಸಿಅಕ್ಷೋಭ್ಯ ನೀ ಪ್ರಕಟ ಮಾಡುವಿ ಆಗಾಗ 3ಉತ್ತಮ ಮಹಾಮಹಿಮ ನಿನ್ನ ಈ ರೂಪದಿಭೂ ದಿವಿ ದಿಕ್ ಸರ್ವ ಅಧೋಧ್ರ್ವ ಲೋಕಸುತಪಸ್ವಿ ಮುನಿಗಳು ದೇವನರತ್ರಿರ್ಯಗ್ ಸರ್ವಪ್ರತಿಷ್ಠತವಾಗಿರುವುದು ಕಂಡನು ಬಲಿಯು 4ಈ ಮಹಾವಿಭೂತಿ ರೂಪದಿ ಕಂಡ ತನ್ನಆ ಮಹಾಕ್ರತು ಋತ್ವಿಕ್ಕುಗಳಾಚಾರ್ಯಆ ಮುಖದಿ ನೆರೆದಿದ್ದ ಸದಸ್ಯರನ್ನು ಕಂಡತನ್ಮಾತ್ರ ಭೂತೇಂದ್ರಿಯ ಜೀವಯುಕ್ತ 5ಅನಘಾಂಘ್ರಿ ಪದಯುಗದಿ ಜಲಮೇಘ ಅಧಸ್ ಭೂಮಿಕಣುಕಾಲು ಜಾನೂಲಿ ಮಹಾದ್ರಿ ಪಕ್ಷಿಗಳುಘನಉರುದ್ವಯದಿ ಮಾರುತಅಂಬುಕಣಗಳುವರ್ಣಜಾಲ ಮಿಂಚು ಗುಹ್ಯದಲಿ ಸಂಧ್ಯಾ 6ಜಘನದಲಿ ದೈತ್ಯರ ಗುಂಪುಗಳುಹೊಕ್ಕುಳಲಿನಭಕುಕ್ಷಿಯಲಿ ಸಪ್ತಸಿಂಧುನಕ್ಷತ್ರ ಜ್ಯೋತಿರ್ಮಯಮಾಲಾ ಉರದಲಿಅಕಳಂಕ ಹೃದಯದಲಿ ಧರ್ಮ 7ಸ್ತನದಲಿ ಸತ್ಯವು ಮನಸ್ಸಲಿ ಚಂದ್ರನುಅನುಪಮ ವಕ್ಷದಲಿ ಶ್ರೀ ಪದ್ಮಹಸ್ತಕಂಠದಲಿ ಸುಸ್ವರ ಶಬ್ದ ಸಾಮಾದಿಗಳುಕರ್ಣದಲಿ ದಿಕ್‍ಭುಜದಿ ಇಂದ್ರಾದಿಸುರರು 8ನಾಸಿಕ್ಕದಲಿ ಶ್ವಾಸವಾಯು ಕಣ್ಣಲಿಸೂರ್ಯಶಿರಸ್ಸಲಿ ಮೇಘವು ವದನದಲಿ ªಹ್ನಿರಸನದಿ ಜಲೇಶನು ವಾಣಿಯಲಿ ವೇದಗಳುನಿಷೇಧವಿಧಿಶಾಸನ ಹುಬ್ಬು ಎರಡಲ್ಲೂ9ರೆಪ್ಪೆಯಲಿ ಅಹೋರಾತ್ರಿ ಕ್ರಮಣದಲಿ ಯಜÕವುಸುಪುಷ್ಟದಿ ಅಧರ್ಮ ಸ್ಪರ್ಶದಿ ಕಾಮಲೋಭವು ಅದsÀರದಿ ಮಾಯೆಯು ಹಾಸದಲಿಕೋಪ ಲಲಾಟದಲಿಅಂಬುರೇತಸಲಿ10ಮೃತ್ಯು ಛಾಯೆಯಲ್ಲಿ ಓಷಧಿ ರೋಮದಲಿನದಿಗಳು ನಾಡಿಯಲಿ ಕಲ್ಲು ನಖದಲಿಇಂದ್ರಿಯಗಳಲ್ಲಿ ದೇವಗಣ ಋಷಿ ಸಮೂಹವುಬುದ್ಧಿಯಲ್ಲಿಅಜಗಾತ್ರದಲಿ ಚರಾಚರವು11ಉರುಕ್ರಮ ವಿಶ್ವಮೂರ್ತಿ ವಾಮನ ವಿಭೋಪರಮಪೂರುಷ ನೀನೀರೂಪತೋರಿಸಲುನೆರೆದಿದ್ದ ಅಸುರರು ವಿಸ್ಮಯದಿ ನೋಡುತ್ತಬೆರಗಾಗಿ ನಿಂತರು ಏನೂ ತೋರದಲೆ 12ಸುದರ್ಶನ ಚಕ್ರ ಪಾಂಚಜನ್ಯವು ಶಂಖಕೌಮೋದಕೀ ಗದಾಶಾಙ್ರ್ಗ ಮಹಾಧನುಸ್ಸುಬತ್ತಳಿಕೆಗಳುಅಕ್ಷಯಸಾಯಕವುಕತ್ತಿಖೇಟಕಮುಖ್ಯ ವಿಷ್ಣು ಆಯುಧಗಳು13ಅಸಹ್ಯ ತೇಜೋಯುತ ಚಕ್ರ ಮೊದಲಾದಈಶ ನಿನ್ನಯ ಆಯುಧಗಳು ಇರಲುಪಾಶ್ರ್ವದಿ ನಿಂತಿದ್ದರು ಆನಂದಾದಿಪಾರ್ಷದರು ಸಹ ಲೋಕಪಾಲಕರು ಎಲ್ಲಾ 14ಸ್ಫುರದ್ ಕಿರೀಟಾಂಗದ ಮೀನ ಕುಂಡಲವುಉರದಿ ಶ್ರೀವತ್ಸ ರತ್ನೋಜ್ವಲ ಮೇಖಳಾದಿಗಳುಪೀತಾಂಬರ ಮಾಲೆ ಧರಿಸಿ ಪ್ರಜ್ವಲಿಸಿದಿಉರುಕ್ರಮ ಹರೇ ಶ್ರೀಶ ಭಗವಂತ ವಿಷ್ಣೋ 15ರಾಜರಾಜೇಶ್ವರ ತ್ರಿವಿಕ್ರಮ ನಿನ್ನೊಂದುರಾಜೀವಪಾದದಿಂದಕ್ಷಿತಿಸರ್ವ ಅಳೆದಿಭುಜ ಶರೀರದಿ ಆಕ್ರಮಿಸಿದಿನಭದಿಕ್ಕುಹೇ ಜಗದೀಶನೇ ನಮೋ ನಮೋ ಶರಣು 16ದ್ವಿತೀಯಪಾದದಿ ನೀನು ದ್ಯುಲೋಕ ಸ್ವರ್ಗಾದಿಸತ್ಯ ಲೋಕೋ¥ರಿ ವ್ಯಾಪಿಸಿ ನಿಲ್ಲಲುತೃತೀಯ ಪಾದಕೆ ಸ್ಥಳ ಅಣ್ವತಿ ಇಲ್ಲವುಎಂದರಿತ ಆ ಮಹಾಬಲಿ ದಾನಶೂರ 17ತ್ರಿವಿಷ್ಟಪ ಮಹರ್ಜನೋ ತಪ ಸತ್ಯಲೋಕಗಳತ್ರಿವಿಕ್ರಮ ನಿನ್ನಯ ಪಾದವು ವ್ಯಾಪಿಸಿತೀವ್ರ ಸರಸಿಜಜಾಂಡಕಟಾಹಭೇದಿಸೆ ಬ್ರಹ್ಮಅವನಿಜಸಲಾ ಪಾದದಿಂ ಗಂಗೆ ಪಡೆದಿ 18ಸತ್ಯಲೋಕವು ನಿನ್ನನಖಕಾಂತಿಯಿಂದಜ್ಯೋತಿಯಲಿ ಮುಳುಗಲು ಬ್ರಹ್ಮದೇವಎದ್ದು ಬಂದು ಪಿತ ನಿನ್ನ ಪಾದವ ಕಂಡುಅತಿ ಮುದದಿ ಪೂಜಿಸಿದ ಪರಿವಾರ ಸಹಿತ 19ಬ್ರಹ್ಮಸಹ ವಂದಿಸಿದರು ನಿನ್ನ ಮರೀಜಾದಿಮಹಂತರು ಸನಕಾದಿಯೋಗಿಗಳು ಸರ್ವಮಹಾಪುರಾಣ ಸಂಹಿತ ವೇದ ವೇದಾಂಗದಿಮಹಾಸದಾಗಮ ದೇವತಾ ಸಮೂಹ 20ಕಮಂಡಲದಿ ಜಲ ಪೂರೈಸಿಹರಿನಿನ್ನಕಮಲಪಾದಕೆ ಆಘ್ರ್ಯಪಾದ್ಯಾದಿ ಪೂಜೆನೇಮದಿ ಅತಿಮುದ ಭಕ್ತಿಯಿಂದಲಿ ಜೀವೋ -ತ್ತಮ ಬ್ರಹ್ಮ ಮಾಡಿದನು ನಿಜ ಪುಣ್ಯಶ್ಲೋಕ 21ತ್ರಿವಿಕ್ರಮನೇ ನಿನ್ನಯ ಪಾದತೀರ್ಥವೇ ಗಂಗಾಪವಿತ್ರತಮವೆಂದು ತ್ರಿಲೋಕದಲಿ ಪ್ರಸಿದ್ಧದೇವ ದೇವೋತ್ತಮನೇ ಅದ್ಭುತ ಮಹಾಮಹಿಮಪೂರ್ವವೋಲ್ ನಿಂತಿ ವಾಮನ ರೂಪದಲಿ 22ಕಮಲಾಸನಾದಿಗಳು ಲೋಕಪಾಲಕರೆಲ್ಲತಮ್ಮ ತಮ್ಮ ಅನುಚರ ಸುರರ ಸಮೇತನರ್ಮದಾ ತೀರಸ್ಥ ಬಲಿಯಕ್ರತುಶಾಲೆಯಲಿವಾಮನನೆ ನಿನ್ನ ಬಳಿ ಬಂದು ತುಂಬಿದರು 23ಜಯ ಜಯ ಜಯತು ಅನಂತ ಮಹಿಮನೆ ನಿನ್ನತೋಯಜೋದ್ಭವ ಮೊದಲಾಗಿ ಸುರವರರುಅಘ್ರ್ಯಪಾದ್ಯ ಗಂಧ ಧೂಪ ದೀಪಮಾಲಾನೃತ್ಯಗಾಯನದಿ ಪೂಜಿಸಿದರು ಮುದದಿ 24ಆನಂದ ಉಕ್ಕುವ ಭಕ್ತಿಯಿಂದಲಿ ನಿನ್ನಅನಂತ ಮಹಾತ್ಮ್ಯ ಕೊಂಡಾಡಿ ಸುತ್ತಿಸಿಸುಧ್ವನಿಯಲಿ ಜಯಘೋಷ ಮಾಡಿದರುದುಂದುಭಿಭೇರಿಶಂಖಗಳ ಬಾರಿಸುತ25ಬ್ರಹ್ಮದೇವನ ಸುತ ಜಾಂಬವಂತನು ಆಗಮಹಾಭೇರಿ ಶಬ್ದಿಸಿ ದಿಕ್ಕು ವಿದಿಕ್ಕುಮಹಾರ್ಹ ವಾಮನ ನಿನ್ನ ವೈಭವ ಕೊಂಡಾಡಿದ್ದುಮಹೋತ್ಸವ ಎಂದರು ಮುದದಿ ಸಜ್ಜನರು 26ಸಜ್ಜನರು ಸುರರೆಲ್ಲಾನಂದ ಭರಿತರು ಆಗೆದುರ್ಜನ ದೈತ್ಯರು ನಿಂದಿಸಿ ವಾಮನನುದ್ವಿಜರೂಪಿ ಮಾಯಾವಿ ವಿಷ್ಣು ಸುರಕ್ಷಪಕ್ಷನುವಂಚಕನು ಎನ್ನುತ್ತ ಅರ್ಭಟಮಾಡಿದರು 27ಸತ್ಯಧರ್ಮನುಬಲಿತಡೆದರೂ ಮೀರಿದೈತ್ಯರು ಅಚ್ಯುತನ ಕೊಲ್ಲಲು ಬಾರೆಜಯವಿಜಯವಿಷಕ್ಸೇನಾದಿಸುರರುದೈತ್ಯರಲಿ ಬಹು ಜನರ ಕೊಂದುಹಾಕಿದರು 28ನಂದ ಸುನಂದಜಯವಿಜಯಬಲಪ್ರಬಲಪತತ್ರಿಪಕುಮುದಕುಮುದಾಕ್ಷ ಜಯಂತಶೃತದೇವ ಪುಷ್ಪದಂತ ವಿಷಕ್ಸೇನಸಾತ್ವತಾದಿ ಸರ್ವರ ಶೌರ್ಯ ಏನೆಂಬೆ 29ವಿಪ್ರಚಿತ್‍ಯಾದಿ ದೈತ್ಯರಿಗೆ ಪೇಳಿದಬಲಿಪ್ರಭು ಭಗವಂತನ ಇಚ್ಛಾನುಸಾರವೇಲಭಿಸುವುದು ಸರ್ವವು ಜಯವು ಅಪಜಯವುಲಭಿಸಲು ಜಯ ಈಗಕಾಲಅಲ್ಲವೆಂದು30ಸಾತ್ವಿಕ ಧರ್ಮವಾನ್ಬಲಿಇನ್ನೂ ಬೋಧಿಸಲುಯುದ್ಧದಲಿ ತಾಡಿತ ದೈತ್ಯರು ಪಾತಾಳಯೈದಿದರು ಬೇಗನೆ ಏನೆಂದು ವರ್ಣಿಸುವೆಸದ್ಧರ್ಮ ಸುಜ್ಞÕನಿ ಭಕ್ತಬಲಿಗುಣವ31ಪದುಮಜಾಂಡದ ಪ್ರಭುವೇ ನಿನ್ನಾಜÉÕಯಿಂ ಗರುಡಬಂಧಿಸಿದ ವರುಣ ಪಾಶದಲಿ ಬಲಿಯಬಂಧಿಸಲು ಮಹಾಧ್ವನಿ ಹಾಹಾಕಾರವುಎದ್ದಿತು ದಿಕ್ಕು ವಿದಿಕ್ಕು ಸರ್ವತ್ರ 32ಬ್ರಷ್ಟ ಶ್ರೀ ಸ್ಥಿರಪ್ರಜÕ ಮಹಾಯಶಸ್ವಿ ಬಲಿಯವಿಷ್ಣು ಪ್ರಭವಿಷ್ಣು ವಾಮನ ನೀ ಕೇಳ್ದಿಅಷ್ಟು ಸ್ಥಳಗಳು ಎರಡು ಪಾದದಲಿ ಅಡಗಿದವುಕೊಟ್ಟು ಪೂರೈಸು ಮೂರನೇಪಾದಎಂದು33ಹೇಳಿದಂತೆ ಕೊಡದಿದ್ದರೆ ನಿರಯದಲಿಬೀಳ ಬೇಕೆಂಬುವುದು ಗುರುಗಳೊಪ್ಪುವರುಹೇಳಿದಂತೆ ಕೊಡು ಮೂರನೇಪಾದಸ್ಥಳಇಲ್ಲದಿದ್ದರೆ ನರಕ ಹೋಗು ಎಂದಿ ಬಲಿಗೆ 34ಪದಂ ತೃತೀಯಂ ಕುರು ಸೀಷ್ರ್ಣ ಮೇ ನಿಜಂಎಂದು ಪೇಳುತಬಲಿವರುಣಪಾಶಬಂಧಕೂ ನಿರಯಕೂ ಶೋಕದಿ ಅಂಜುವನಲ್ಲಸಾಧುಸತ್ಯದ ಕೊರತೆಗೇವೆ ಅಂಜುವೆನೆಂದ 35ನೈವಾರ್ಥ ಕೃಛ್‍ರಾಧ್ ಭವತೋ ವಿನಿಗ್ರಹಾದ ಸಾಧು ವಾದಾದ್ ಭೃಷ ಮೃದ್ವಿಜೇಯಥಾಎನ್ನುತಬಲಿಮತ್ತು ತನ್ನ ಕುಲಹಿರಿಯರುನಿನ್ನೊಲಿಸಿಕೊಂಡ ವಿಧ ಸ್ಮರಿಸಿ ಪೇಳಿದನು 36ಉತ್ತಮ ಶ್ಲೋಕ ಹರೇ ಪರಮಗುರು ನಿನ್ನಭಕ್ತವರ್ಯನು ಸಾಧು ಪ್ರಿಯ ಸತ್ಯಧರ್ಮಪ್ರಹ್ಲಾದ ಸರ್ವ ಐಹಿಕ ವಸ್ತು ಸಂಸೃತಿಹೇತುಎಂದು ನಿನ್ನ ಪದ್ಮಾಂಘ್ರಿಯಲ್ಲೇ ರತನಾದ37ಇನ್ನೂ ಬಹುವಾಗಿಬಲಿಭಕ್ತಿಯಿಂ ಮಾತಾಡೆಶ್ರೀನಿಧಿ ನಿನ್ನ ಪ್ರಿಯ ಪ್ರೇಮಿ ಪ್ರಹ್ಲಾದಪೂರ್ಣೇಂದು ಉದಿಸಿದಂದದಿ ಬಂದು ನಿಂತನುಹೊನ್ನು ವಸನಾಬ್ಜಾಕ್ಷ ಸುಂದರ ವಿಗ್ರಹನು 38ಬಂಧಿತಬಲಿಪಿತಾಮಹ ಪ್ರಹ್ಲಾದನಿಗೆಮೂಧ್ರ್ನಾ ನಮಿಸಿದನು ನೇತ್ರಾಂಬು ತುಳಕೆಪದ್ಮಜ ಸುನಂದೇಶನಂದಾದ್ಯುಪಾಸಿತಇಂದಿರೇಶನೆ ನಿನಗೆ ನಮಿಸಿದ ಪ್ರಹ್ಲಾದ 39ಮೋದಬಾಷ್ಪದಿ ನಮಿಸಿ ಪೇಳಿದನು ನೀಬಲಿಗೆಇಂದ್ರಪದ ಕೊಟ್ಟಿದ್ದಿ ಕೊಂಡೀಗ ಅದನ್ನೇಘಾತಕ ಮೋಹಕ ಶ್ರೀ ಕಳೆದು ಅನುಗ್ರಹ ಮಾಡಿದಿಎಂದು ನಮಿಸಿದ ಜಗದೀಶ್ವರನೇ ನಿನಗೆ 40ನಾರಾಯಣಅಖಿಳಲೋಕ ಸಾಕ್ಷಿಯೇ ನಿನಗೆಈ ರೀತಿ ಪ್ರಹ್ಲಾದ ಪೇಳಿದ ತರುವಾಯವಾರುಣದಿ ತನ್ನಪತಿಕಟ್ಟಿಲ್ಪಟ್ಟಿದ್ದು ಕಂಡುಕರಮುಗಿದು ನಮಿಸಿದಳು ನಿನಗೆಬಲಿಜಾಯಾ41ಇಂದ್ರಸೇನ ಎಂಬ ಮತ್ತೊಂದು ಹೆಸರುಂಟುಬಂಧಿತ ಬಲಿರಾಜನಿಗೆ ತತ್ಪತ್ನಿವಿಂದ್ಯಾವಳಿ ದೇವಿ ಭಯ ಭಕ್ತಿಯಿಂದಉಪೇಂದ್ರ ನಿನಗೆ ಬಿನ್ನೈಸಿದಳು ನಮಿಸಿ 42ಆನಂದಮಯಪೂರ್ಣಕಾಮ ಪ್ರಭು ನೀನುವನರುಹಭವಾಂಡವ ಕ್ರೀಡಾರ್ಥ ಪಡೆದಿಅನನ್ಯಾಧೀನ ಸ್ವತಂತ್ರ ಸರ್ವೇಶನುನೀನೇವೆ ಸರ್ವಕರ್ತನು ಅನ್ಯರಲ್ಲ 43ನೀನೇವೇ ಬ್ರಹ್ಮಾಂಡ ದೊರೆಕರ್ತಆಗಿರಲುಅನ್ಯರಿಗೆ ಕರ್ತೃತ್ವ ಸ್ವಾಮಿತ್ವವಿಲ್ಲತಾನು ದೊರೆ ಕೊಂಡಿಹೆ ಕೊಟ್ಟಿಹೆ ಬಿಟ್ಟಿಹೆ ಎಂಬಹೀನ ಅಹಂಕಾರ ಮಾತು ಅಸಂಗತವು 44ದೇವ ದೇವನೇ ನಿನ್ನ ನಾಭಿಜ ಬಿನ್ನೈಸಿದಅವಿಕ್ಲವ ಮನದಿಂದ ಸರ್ವಸ್ಥ ನಿನಗೆನಿವೇದಿಸಿದಬಲಿರಕ್ಷಣಾರ್ಹನಾಗಿಹನುಸರ್ವಸ್ವಾಮಿಯೇ ಭೂತಭಾವನಭೂತೇಶ45ಮಂದನಾದರು ಅರ್ಪಿಸೆ ನಿನ್ನ ಪದಯುಗದಿಭಕ್ತಿಯಿಂ ದೂರ್ವಾಂಕುರ ಸಲೀಲವಾದರೂಉತ್ತಮ ಸೌಭಾಗ್ಯಗತಿ ಈವಿ ಅಂಥವಗೆಂದುಖ್ಯಾತ ಮೂರ್ಜಗದಿ ಕೊಂಡಾಡುತಿಹರೆಂದು 46ಪದ್ಮಜಗೆ ನೀ ಪೇಳ್ದಿ ಈಬಲಿಮಹಾರಾಜಅತಿ ಕಷ್ಟಕೊಳಗಾದ ಶತ್ರು ಪೀಡಿತನುಶಪ್ತನಾಗಿ ಸ್ಥಾನ ಕಳಕೊಂಡರೂ ಸಹಸತ್ಯವಾಕ್ ತ್ಯಜಿಸದ ಸದ್ಧರ್ಮವಂತ 47ಸುವ್ರತ ಈ ಬಲಿಗೆ ಅಮರರಿಗೂ ದುಷ್ಪ್ಮಾಪ್ಯಸಾವರ್ಣಿ ಮನು ಕಲ್ಪದಿ ಇಂದ್ರ ಪದವಈವಿ ನೀ ಎಂದು ಅವ ಆ ಕಾಲದವರೆಗಿರಲಿವಿಶ್ವಕರ್ಮ ನಿರ್ಮಿತ ಸುತಲಿದಿ ಎಂದಿ 48ಆಧಿ ವ್ಯಾಧಿ ಶ್ರಮ ಉಪದ್ರವಗಳಿಲ್ಲ -ದಂಥ ಸುತಲದಲಿ ಸುಖದಿಂದಿರಲಿಎಂದು ನೀ ಬ್ರಹ್ಮನಿಗೆ ಪೇಳಿ ಬಲಿಯನು ನೋಡಿಇಂದ್ರಸೇನ ಮಹಾರಾಜ ಭದ್ರಮಸ್ತುತೆ ಎಂದಿ 49ಸುತಲದಲಿ ಪರಿವಾರ ಸ್ವಜನರಿಂದೊಡಗೂಡಿಭದ್ರದಿ ಸೌಭಾಗ್ಯದಿ ವಾಸಮಾಡುದೈತ್ಯಶತ್ರುಗಳು ಕಾಟಕೊಟ್ಟರೆಅವರಕತ್ತರಿಸುವುದು ಸುದರ್ಶನವು ಎಂದಿ 50ಸದಾ ಸನ್ನಿಹಿತನಾಗಿದ್ದು ರಕ್ಷಿಸುವಿಸದಾ ನಿನ್ನ ದರ್ಶನ ಮಾಡಬಹುದುದೈತ್ಯರ ಸಂಗದಿಂ ಅಸುರಭಾವ ಬಂದರೆ ನಿನ್ನಸುದರ್ಶನದಿ ಅದು ಪೋಪುದು ಎಂದಿ 51ಮಹೈಶ್ವರ್ಯಪೂರ್ಣಹರಿನಿನ್ನ ಮಾತುಕೇಳಿಮಹಾನುಭಾವನು ಸಾಧುಪ್ರಿಯ ಬಲಿರಾಯಮಹಾನಂದ ಬಾಷ್ಪವ ಸುರಿಸುತ್ತ ಸ್ತುತಿಸಿದಮಹಾಕೃಪಾಂಬುಧೇ ಭಕ್ತವತ್ಸಲ ನಿನ್ನ 52ಅನತೇಷ್ಟಪ್ರದ ಪ್ರಪನ್ನಪಾಲಕ ವಿಭೋತನಗೆ ಪೂರ್ವದಿ ಲೋಕಪಾಲಕರ್ಗೆ ಸಿಕ್ಕದಅನುಗ್ರಹ ಮಾಡಿರುವಿ ಅಸುರನು ತಾನುಎನ್ನುವದು ಎಣಿಸದೆÀ ಕೃಪೆ ಮಾಡಿದಿ ಎಂದ 53ಕೃತಜÕ ಭಕ್ತನುಬಲಿಹರಿನಿನಗೆ ನಮಿಸಿದನುಪದುಮಭವಗೂ ಸದಾಶಿವಗೂ ನಮಿಸಿದನುಬಂಧಿಸಿದ ವರುಣಪಾಶವು ಬಿಟ್ಟು ಹೋಯಿತುಹೇ ದಯಾನಿಧೇ ನಿನ್ನ ಕರುಣದಿಂದಲ್ಲೆ 54ಈ ರೀತಿ ಹರಿವಾಮನ ನೀನು ಕ್ರೀಡಿಸಿದಿಶಕ್ತನಿಗೆ ಸ್ವರ್ಗಾಧಿಪತ್ಯ ಪುನರಿತ್ತಿಸುರಮಾತೆ ಅದಿತಿಗೆ ಪಯೋವ್ರತ ಫಲವಿತ್ತಿಸರ್ವಜಗತ್ತಿಗೆ ಸುಕ್ಷೇಮಒದಗಿಸಿದಿ 55ಸಿರಿಧರಾಪತಿ ವಿಷ್ಣು ಶಿಪಿವಿಷ್ಣು ವಾಮನಹರಿನಿನಗೆ ಮೂರಡಿ ಸ್ಥಳ ದಾನ ಕೊಟ್ಟುಮೂರನೇಪಾದತನ್ನ ಶಿರ ಮೇಲೆ ಇಡು ಎಂದಧೀರ ಬಲಿಗೆ ಭಾವಿ ಇಂದ್ರಪದವಿತ್ತಿ 56ಇನ್ನಾರಿಗೂ ಈ ಸಮಯದಿ ಸಿಕ್ಕದನಿನ್ನಯ ಮಹವಿಶೇಷ ಪ್ರಸಾದ ಕೊಟ್ಟಿರುವಿವನಜಭವ ಶಿವ ವಂದ್ಯಹರಿನೀನು ರಕ್ಷಕನುನೀನೆಲ್ಲಿ ನಾವು ಅಸುರರು ಎಲ್ಲಿ ಸ್ವಾಮಿ 57ಜಗತ್ ಸೃಷ್ಟ್ಯಾದಿಗಳ ಲೀಲೇಯಿಂದಲಿ ಮಾಳ್ಪಿಸರ್ವಗ ಸಮ ಅವಿಕ್ರಯ ವಿವಿಧಫಲದಹೀಗೆ ಇನ್ನೂ ಬಹು ತತ್ವನಿಬಿಡ ಸ್ತೋತ್ರಉಕ್ಕುವ ಭಕ್ತಿಯಲಿ ಮಾಡಿದ ಪ್ರಹ್ಲಾದ 58ವತ್ಸಪ್ರಹ್ಲಾದ ಭದ್ರಂತೇ ಎನ್ನುತಸುತಲಕೆಬಲಿಸಹ ಪೋಗಿ ಸುಖಿಸುವುದುಗದಾಪಾಣಿ ನಿನ್ನನ್ನುನಿತ್ಯನೋಡಿ ಮಹಾ-ನಂದ ಹೊಂದಿಕರ್ಮಕಳೆಎಂದು ಪೇಳ್ದಿ59ಸಾಧುಪ್ರಿಯ ಪ್ರಖ್ಯಾತ ಪ್ರಹ್ಲಾದ ಬಲಿರಾಜಪ್ರದಕ್ಷಿಣಿ ನಮಸ್ಕಾರ ಭಕ್ತಿಯಿಂ ಮಾಡಿಆದಿ ಪೂರಷ ನಿನ್ನ ಅನುಜÉÕೀಯ ಕೊಂಡುಪೋದರು ಸುತಲಕ್ಕೆ ಮಹಾಬಿಲ ದ್ವಾರ 60ಮಧ್ಯದಲೆ ತಡೆಯಾದ ಬಲಿಯಜÕ ಪೂರೈಸೆಯಜÉÕೀಶ ಯಜÕ ಪೂರುಷ ಭೂಮ ನೀನುಆಜÉÕ ಮಾಡಲು ಶುಕ್ರಾಚಾರ್ಯ ಬ್ರಾಹ್ಮಣರೊಡೆಯಜÕ ಕರ್ಮವ ಸಾಂಗ ಪೂರ್ಣ ಮಾಡಿದರು 60ಬ್ರಹ್ಮ ಶಿವ ದಕ್ಷ ಮನು ಬೃಗ್ ವಾಂಗೀರಾದಿಗಳುಕುಮಾರ ದೇವರ್ಷಿಗಳು ಪಿತೃ ಭೂಮಿಪ ಸರ್ವರುವಾಮನನೇ ಲೋಕೈಕಪತಿಪಾಲಕನೆನುತ ನಿನಗೆನಮಿಸಿ ತೋಷಿಸಿದನು ಅದಿತಿ ಕಶ್ಯಪರು 62ಸರ್ವಲೋಕಂಗಳಿಗೂ ಸರ್ವವೇದಂಗಳಿಗೂಸರ್ವದೇವತೆಗಳಿಗೂ ಧರ್ಮ ಯಶಸ್‍ಸಿರಿಗೂಸರ್ವಸುವ್ರತಗಳಿಗೂ ಸ್ವರ್ಗಾಪವರ್ಗಕ್ಕೂಸರ್ವವಿಭೂತಿಪತಿಮಂಗಳ ಉಪೇಂದ್ರ63ಪದುಮಜನು ಅನುಮೋದಿಸಿ ಇಂದ್ರ ಬೇಡಲುನೀ ದೇವಯಾನದಿ ಇಂದ್ರ ಸಹ ಕುಳಿತುತ್ರಿದಿವ ಸೇರಿದಿ ಇಂದ್ರೇಂದ್ರ ಉಪೇಂದ್ರ ಆ -ನಂದಮಯ ಜಗದೀಶ ಶ್ರೀಪತೇ ಭೂಮನ್ 64ಅದಿತಿ ದೇವಿಯ ಹೊಗಳಿ ವಿಷ್ಣು ವಾಮನ ನಿನ್ನಅದ್ಭುತ ಮಹಿಮೆ ಕೊಂಡಾಡಿ ಕೀರ್ತಿಸುತಪದುಮಭವ ಶಂಕರ ಭೃಗ್‍ವಾದಿಮುನಿಪಿತೃ ಸಿದ್ಧರು ಸ್ವಸ್ವಸ್ಥಾನಯೈದಿದರು 65ವಾಮನನು ವಿಶ್ವರೂಪ ಪ್ರಕಟಿಸಿ ದಾನವಸ್ತುಭೂಮಿ ದಿವಿಯ ಈರಡಿಗಳ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳಿದ ಮಾಯಾಜಾಲವು ಅಲ್ಲವಿಷಮ ವಸ್ತುವ ದೋಷ ಕಿಂಚಿತ್ತೂ ಅಲ್ಲ 66ಪ್ರಾಥಮಿಕವಾಗಿ ಶ್ರೀ ವಿಷ್ಣುರೂಪಒಂದೊಂದಲೂಅನಂತರೂಪಗಳು ಸುಖಜ್ಞಾನಾದಿ ಪೂರ್ಣವಾಗಿಶಶ್ವದೇಕ ಪ್ರಕಾರವಾಗಿ ಇಹುದೆಂದು ಶಾಸ್ತ್ರ ಸಾರುತಿವÉಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವೇಚ್ಛೆಯಿಂ ಆಗಾಗ67ಅಣೋರಣಿಯಾನ್ ಮಹತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೇ ವ್ಯಕ್ತ ಮಾಡಿದನು ವಿಷ್ಣು ವ್ಯಾಪನಶೀಲಗುಣರೂಪ ಅಭಿನ್ನ ಅವ್ಯಯನು 68ಮತ್ತೂ ಬಲಿರಾಜನಿಗೆ ಶ್ರುಕ್ರಾಚಾರ್ಯರುಮೊದಲೇವೇ ಹೇಳಿದರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿ ಸರ್ವವ ಎರಡು ಪಾದದಿಂ ಅಳೆವನೆಂದು69ಈ ರೀತಿ ಬಲಿರಾಜ ದಾನಕೊಡುವ ಪೂರ್ವದಲೆಹರಿವ್ಯಾಪನಶೀಲ ವಿಷ್ಣುವೇವೇ ವಾಮನನೆಂದುಅರಿತೇವೇಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರೆ ವಿಷಯ ವಂಚನೆಗೆ ಸಿಲುಕಲಿಲ್ಲ 70ಮೋಸಕ್ಕೆ ಒಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಈಶಾರ್ಪಣಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿದರು ದೇವಗಾಯಕರು 71ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿನಾನೇನ ಕೃತಂ ಸುದುಷ್ಕರಂವಿದ್ವಾನ್ ಅದಾದ್ ಯದ್ರಿಪವೇ ಜಗತ್ರಯಂಏಕೋನ ವಿಂಶತ್ ಅಧ್ಯಾಯ ಶ್ಲೋಕ ಇಪ್ಪತ್ತು 72ಬಲಿರಾಜನು ರಾಣಿ ವಿಂದ್ಯಾವಳಿಯುಅಲ್ಲಿ ಬಂದ ಪ್ರಹ್ಲಾದ ಮಹಾರಾಜನುಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾ ಅನುಗ್ರಹ ಮಾಡಿದಿ ಎಂದು ತಿಳಿದಿಹರು 73ಶಿಪಿವಿಷ್ಟ ವಾಮನ ತ್ರಿವಿಕ್ರಮನೆ ನಿನ್ನಸುಪವಿತ್ರ ಚರಿತೆ ಇದುಕೇಳಿಪಠಿಸುವರ್ಗೆಪಾಪ ಪರಿಹಾರವುಶುಭಮಂಗಳವಿತ್ತುಸೌಭಾಗ್ಯಪ್ರದ ಶ್ರೀಶ ಸದ್ಗತಿ ಈವಿ 74ಮಧ್ವಸ್ಥ ಸರ್ವಸ್ಥ ಮತ್‍ಸ್ಥವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 75- ಇತಿ ತೃತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬುದ್ಧಿಯ ಪೇಳೇ ಗೋಪಮ್ಮ ನಿನ್ನಮುದ್ದು ಮಗನ ಲೂಟಿ ಘನವಾದುದಮ್ಮ ಪಸದ್ದು ಇಲ್ಲದ ಹಾಗೆ ಬಂದಾನೆಕದ್ದು ಬೆಣ್ಣೆಯನೆಲ್ಲ ತಿಂದಾನೆಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲುಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ 1ಜಲಜ ಗಂಧಿನಿಯರು ಕೂಡೀ ನಾವುಜಲದೊಳಾಡುವುದನ್ನು ನೋಡೀಜಲಜನಾಭನು ಮರದ ತಲೆಯ ಮೇಲ್ಕಟ್ಟಿದಸುಲಿದಿಟ್ಟ ಸೀರೆಯ ಬಲರಾಮನನುಜ 2ಹಾಲ ಮಾರಲು ಪೋದ ಮಗಳಾ ಕಂಡುಮೇಲೆ ಬೀಳುತ ಮಾಡೆ ಜಗಳಾಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನುಮೂರ್ಲೋಕದೊಡೆಂiÀುಶ್ರೀಲೋಲಗೋವಿಂದ 3
--------------
ಗೋವಿಂದದಾಸ