ಒಟ್ಟು 38 ಕಡೆಗಳಲ್ಲಿ , 23 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದೆನವ್ವ ಭಾವಕಿಯರನ್ನೆತಂದೆನವ್ವ ಕುಶಲವಸಿಂಧುಶಯನನ ಮುಂದೆನಿಂದು ಸುದ್ದಿ ಹೇಳಿದೆನವ್ವ ಪ. ಅಚ್ಯುತ ಕರವ ಮುಗಿದು ಹೇಳಿದೆನವ್ವ 1 ಮಂದಗಮನೆಯರ ಕೋಪ ಮಂದವಾದ ಮ್ಯಾಲವ್ವಸಿಂಧುಶಯನನ ಮುಂದೆ ನಿಂದು ಸುದ್ದಿ ಹೇಳಿದೆನವ್ವ 2 ಅಚ್ಯುತ ಶಾಂತನಾದ ಮ್ಯಾಲವ್ವಇಂತು ರಾಮೇಶನ ಮುಂದೆ ನಿಂದು ಸುದ್ದಿ ಹೇಳಿದೆನವ್ವ 3
--------------
ಗಲಗಲಿಅವ್ವನವರು
ಬಾಗಿಲು ತೆರೆಯುವ ಹಾಡು ನಾರಿ ಶಿರೋಮಣಿ ವಾರಿಜ ಮುಖಿಯೆ ಗಂಭೀರಳೆ ಬಾಗಿಲು ತೆರೆಯೇ |ಗಂಭೀರಳೆ ಬಾಗಿಲ ತೆರೆಯೇ ಪ ಆರು ನಿನ್ನಯ ಪೆಸರೆನಗೆ ಪೇಳದಲೆ ದ್ವಾರವ ತೆಗೆಯೆನು ನಾನು |ನಾ ದ್ವಾರವ ತೆಗೆಯೆನು ನಾನು ಅ.ಪ. ನೀರೊಳು ಸಂಚರಿಸಿ ಕ್ರೂರ ತಮನ ಕೊಂದಧೀರ ಮತ್ಸ್ಯನು ಕಾಣೆ ನಾರೀ | ನಾಧೀರ ಮತ್ಸ್ಯನು ಕಾಣೆ ನಾರೀ ||ಧೀರ ಮತ್ಸ್ಯನು ನೀನಾದರೊಳಿತು ದೊಡ್ಡವಾರಿಧಿಯೊಳಗಿರು ಹೋಗಯ್ಯ | ದೊಡ್ಡವಾರಿಧಿಯೊಳಗಿರು ಹೋಗಯ್ಯ 1 ಶರಧಿ ಕೂರ್ಮ ಕೂರ್ಮ ಕಾಣೆ ||ಗಿರಿಯ ತಾಳಿದ ಕೂರ್ಮನಾದರೊಳಿತು | ದೊಡ್ಡಮಡುವಿನೊಳಗೆ ಇರು ಹೋಗಯ್ಯ | ದೊಡ್ಡಮಡುವಿನೊಳಗೆ ಇರು ಹೋಗಯ್ಯ2 ಧರೆಯ ಕದ್ದಸುರನ ದಾಡಿಯಿಂದಲಿ ಸೀಳ್ದವರಹ ಕಾಣೆಲೆ ವಾರಿಜಾಕ್ಷಿ | ನಾವರಹ ಕಾಣೆಲೆ ವಾರಿಜಾಕ್ಷೀ ||ವರಹ ನೀನಾದರೊಳಿತು ನಡೆ ನಡೆ | ದೊಡ್ಡವನಾಂತ್ರದೊಳಗಿರು ಹೋಗಯ್ಯ || ದೊಡ್ಡವನಾಂತರದೊಳಗಿರು ಹೋಗಯ್ಯ 3 ಮೃಗ ಮೃಗ ಮೃಗ ನೀನಾದರೊಳಿತು ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ | ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ 4 ಭೂಮಿ ಈರಡಿ ಮಾಡಿ ಬಲಿಯ ಪಾತಾಳಕಿಟ್ಟವಾಮನ ಕಾಣೇ ವಾರಿಜಾಕ್ಷೀ | ನಾವಾಮನ ಕಾಣೇ ವಾರಿಜಾಕ್ಷೀ ||ವಾಮನ ನೀನಾದರೊಳಿತು ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ | ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ 5 ತಂದೆ ಆಜ್ಞೆಯ ಪೊತ್ತು ತಾಯಿ ಸೋದರನ್ನಕೊಂದವ ನಾನೇ ಕೋಮಲಾಂಗೀ | ನಾಕೊಂದವ ನಾನೇ ಕೋಮಲಾಂಗೀ ||ಕೊಂದವ ನೀನಾದರೊಳಿತು ಮುನಿವೃಂದದಲ್ಲಿ ಇರು ಹೋಗಯ್ಯಾ | ಮುನಿವೃಂದಾದಲ್ಲಿ ಇರು ಹೋಗಯ್ಯ 6 ಲಂಡ ರಾವಣನ ಶಿರವ ಚಂಡಾಡಿ ಸೀತೆ ತಂದ | ಪ್ರ-ಚಂಡ ವಿಕ್ರಮ ರಾಮ ಕಾಣೇ | ನಾ ಪ್ರ-ಚಂಡ ವಿಕ್ರಮ ರಾಮ ಕಾಣೇ ||ಪ್ರಚಂಡ ವಿಕ್ರಮನಾದರೊಳಿತು ಕೋತಿಹಿಂಡುಗಳೊಳಗಿರು ಹೋಗಯ್ಯ | ಕೋತಿಹಿಂಡುಗಳೊಳಗಿರು ಹೋಗಯ್ಯ 7 ಮಧುರಾಪುರದಿ ಪುಟ್ಟಿ ಮಾವ ಕಂಸನ ಕೊಂದಚದುರ ಕಾಣೆಲೆ ಶಾಮಲಾಂಗೀ | ನಾಚದುರ ಕಾಣಲೆ ಶಾಮಲಾಂಗೀ ||ಚದುರ ನೀನಾದರೊಳಿತು ನಡೆ ನಡೆ ಗೋಪೇ-ರಧರ ಚುಂಬಿಸುತಿರು ಹೋಗಯ್ಯ | ಗೋಪೇ-ರಧರ ಚುಂಬಿಸುತಿರು ಹೋಗಯ್ಯ 8 ಶುದ್ಧ ಖಳನು ಆಗಿ ವ್ರತವನಳಿದು ಬಂದಬೌದ್ಧ ಕಾಣಲೇ ಮಂದಗಮನೇ | ನಾಬೌದ್ಧ ಕಾಣಲೇ ಮಂದಗಮನೇ ||ಬೌದ್ಧನು ನೀನಾದರೊಳಿತು ನಡೆ ನಡೆ ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ | ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ 9 ತುರಗವನೇರಿ ಕಲಿಯ ಕಡಿದು ಶಾಂತನ ಸಹೋ-ದರಗೆ ರಾಜ್ಯವನಿತ್ತೆ ಕಾಣೇ | ಸಹೋ-ದರಗೆ ರಾಜ್ಯವನಿತ್ತೆ ಕಾಣೇ ||ಪರಮ ಪುರುಷನಹುದೋ ರಾಹುತರಿರುವಸ್ಥಳದಲ್ಲಿರು ಹೋಗಯ್ಯ | ನೀರಾಹುತರಿರುವ ಸ್ಥಳದಲ್ಲಿರು ಹೋಗಯ್ಯ 10 ಕನ್ಯಾಮಣಿಯೆ ಕೋಮಲೆಯೇ ಗುಣಪೂರ್ಣ ಮೋ-ಹನ್ನ ವಿಠಲ ರಾಯ ಕಾಣೆ | ನಾ ಮೋ-ಹನ್ನ ವಿಠಲ ರಾಯ ಕಾಣೆ ||ಎನ್ನ ಅಪರಾಧ ಕ್ಷಮಿಸಬೇಕು ಎನುತಲಿಚೆನ್ನಾಗಿ ಪಾದಕ್ಕೆರಗಿದಳು ದೇವಿ 11
--------------
ಮೋಹನದಾಸರು
ಭಗವಂತನ ಸಂಕೀರ್ತನೆ ಏನಿದು ರೂಪ ಶ್ರೀ ನರಹರೆ ಪ ಏನಿದು ರೂಪವೋ ಮನಸಿಜನಯ್ಯನೇ ನೆನಿಸಿದವರ ಹೃದ್ವನಜದೊಳ್ ಮೆರೆವುದೂ ಅ.ಪ ಮಾರನ ಪಿತನೆಂದು ಕರೆಸಿ ಕೊಂಬುವನಿಗೆ ಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು 1 ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳು ಕ್ರೂರ ರೂಪದಿಂದ ನರರಿಗೆ ತೋರ್ಪುದು 2 ವರ ವೈಜಯಂತಿಯ ಕೊರಳೊಳ್ ಧರಿಸುವಗೆ ಕರುಳ ಹಾರವ ಧರಿಸಿ ವರ ಶಬ್ದ ಮಾಳ್ವೊದು 3 ನಾನೇ ದೇವರು ಮತ್ತು ಅನ್ಯರಿಲ್ಲೆಂಬುವ ಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು 4 ತರಳ ಕರದಾಕ್ಷಣದಿ ವರ ವೈಕುಂಠವ ಬಿಟ್ಟು ನರಹರಿ ಎನಿಸಿ ನೀ ಭರದಿ ಬಂದಿರುವುದು 5
--------------
ಪ್ರದ್ಯುಮ್ನತೀರ್ಥರು
ಭವ ಪಾರಗಾಣಿಸಲು ಭಾರತಿ ರಮಣ ಸಮೀರನಲ್ಲದೆ ಬೇರೆ ಪ ವೀರ ಹನುಮ ರಘು ವೀರ ಭಕುತ ಬ್ರಹ್ಮ ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ ಶೇಷ ಗರುಡ ಶಿವ ಮುಖಸುರರೊಬ್ಬರೂ ದೋಷದೂರಲ್ಲವೊ ಪವಮಾನ ಈಶದಜ್ಞಾನ ಸಂಶಯ ಭ್ರಮೆ ಪೊಂದದೆ ಶ್ರೀಶನ ಪರಮ ಸಂತೋಷಕೆ ಪಾತ್ರನು 1 ವೀರರಧಿಕರೆಲ್ಲರು ನಿನ್ನೆದುರಲಿ ಸಾರಮೇಯದಂತಾದರೊ ಭೀಮ ನಾರಾಯಣನಿಗೊಬ್ಬನಿಗಲ್ಲದೆ ಶಿರಬಾಗದೆ ಮರೆದೆಯೊ ಧೀರ ಕಂಠೀರವ 2 ಶಾಂತನು ನೀ ಬಲುದಾಂತನು ನೀನೆ ಸ್ವಾಂತದಿ ಹರಿಯು ಪ್ರಸನ್ನನು ಸತತವು ಅಂತಿಮಭಾಷ್ಯಾದಿಗಳ ರಚಿಸಿ ವೇ ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3
--------------
ವಿದ್ಯಾಪ್ರಸನ್ನತೀರ್ಥರು
ಮಗನಿಂದೆ ಗತಿಯುಂಟೆ ಜಗದೊಳಗೆನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ? ಪ ತ್ರಿಗುಣರಹಿತ ಪರಮಾತ್ಮನ ಧ್ಯಾನದಿಹಗಲಿರುಳು ನಿತ್ಯಾನಂದದಿಂದತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆಮಗನಿದ್ದರೇನು ಇಲ್ಲದಿದ್ದರೇನು ?1 ಶೋಣಿತ ಶುಕ್ಲದಿಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? 2 ಪರಮ ದುಷ್ಟನಾಗಿ ಮರೆತು ಸ್ವಧರ್ಮವಗುರು ಹಿರಿಯರ ಸಾಧುಗಳ ನಿಂದಿಸಿಬೆರೆದನ್ಯ ಜಾತಿಯ ಪರನಾರಿಯ ಕೂಡಿಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ 3 ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನುಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆಹೆತ್ತರೇನು ಇನ್ನು ಹೆರದಿದ್ದರೇನಯ್ಯ ? 4 ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬಕೃತಕ ಶಾಸ್ತ್ರವು ಲೌಕಿಕಭಾವಕೆಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ-ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ? 5
--------------
ಕನಕದಾಸ
ಮಂಗಳ ಜಯ ಜಯ ಜಯ ಮಂಗಳ ಪ. ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ ಮಂಗಳ ದೇವಿಯರರಸನಿಗೆ ಮಂಗಳ ಮನುಮಥಪಿತನಿಗೆ ಮಂಗಳ ಮಂಗಳ ಮಹಿಮಗೆ ಮಂಗಳ 1 ಅಚ್ಚುತಾನಂತ ಗೋವಿಂದಗೆ ಮಂಗಳ ಸಚ್ಚÀರಿತ್ರನಿಗೆ ಸಕಲ ಮಂಗಳ ಸಚ್ಚಿದಾನಂದ ಸ್ವರೂಪಗೆ ಮಂಗಳ ಅಚ್ಚಹೃದಯನಿಗೆ ಅತಿ ಮಂಗಳ 2 ಕೇಶವ ನಾರಾಯಣನಿಗೆ ಮಂಗಳ ಕೇಶಿಸೂದನನಿಗೆ ಅತಿ ಮಂಗಳ ಶೇಷಶಯನ ಹೃಷೀಕೇಶಗೆ ಮಂಗಳ ವಾಸುದೇವನಿಗೆ ಸಕಲ ಮಂಗಳ 3 ದಾನವವೈರಿ ದೆಸೆದೆಸೆಗಳಿಗೆ ಮಂಗಳ ಹೀನಕುಲದವಗೆ ಹೆಚ್ಚು ಮಂಗಳ ಆನಂದತೀರ್ಥಮುನಿಯ ಮುದ್ದುಕೃಷ್ಣಗೆ ಶ್ರೀನಾರಿಯೆತ್ತುವ ಶುಭಮಂಗಳ 4 ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ ನಗಧರ ಕೂರ್ಮಗೆ ಅತಿಮಂಗಳ ಜಗತಿಯನೆತ್ತದ [ವರಾಹಗೆ]ಮಂಗಳ ಮಗುವ ಕಾಯಿದ ನೃಸಿಂಹಗೆ ಮಂಗಳ 5 ದಾನವ ಬೇಡಿದ ಸ್ವಾಮಿಗೆ ಮಂಗಳ ಕ್ಷೋಣಿಶಾಂತನಿಗೆ ಸಕಲ ಮಂಗಳ ಜಾನಕೀರಮಣ ರಾಮಗೆ ಮಂಗಳ ಶ್ರೀನಂದಾಚ್ಯುತನಿಗೆ ಶುಭಮಂಗಳ 6 ಬುದ್ಧವತಾರ ಶ್ರೀಬದ್ಧಗೆ ಮಂಗಳ ಸದ್ಧರ್ಮ ಮೂಲಸ್ವಾಮಿಗೆ ಮಂಗಳ ಮಧ್ವವಲ್ಲಭ ಹಯವದನರಾಯನಿಗಿಂಥ ಶುದ್ಧಸ್ವಭಾವಗೆ ಶುಭಮಂಗಳ 7
--------------
ವಾದಿರಾಜ
ಯಾಕೆಲೋ ರಂಗಾ | ನಿನ್ನರಸಿಯೊಳುಮುನಿದಿರುವೆ | ಲೋಕವೀರೇಳು ರಕ್ಷಿಪ ಮುದ್ದು ರಂಗಾ ಪ ನಾಲ್ಕನೆಯ ಅವತಾರದಲಿ ಉಗ್ರವಾಗಿರೆ | ಆ ಕಮಲಜ ಮುಖ್ಯ ಬೆದರುತಿರಲು | ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು | ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಿಸಿ 1 ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ | ಎಂಜಲ ತಿನುತ ಗೋಗಳ ಕಾಯುತಿರಲು | ಕಂಜನಯನೆಯು ಬಂದು ಸಕಲ ಶಿರಿಯಿಂದಲಿ | ರಂಜಿಸಿದಳೊ ಜಗದೊಳಗೆ ನಿನ್ನ ಅರಿಸಿ 2 ಇಂತರಿದು ನಾನಾಪರಿಯಿಂದ ನಿನ್ನ ಮೇಲೇ | ಸಂತತ ಉಪಕಾರ ಮಾಡಿರೆ ನೀನು | ಕಂತುಮಾತೆಯ ತಪ್ಪು ನೋಡುವರೇನೋ | ಆ- ನಂತನೇ ಏಳು ಮಹೀಪತಿನಂದನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಾಂತನಾಗದೆ ಭವದ ಚಿಂತೆ ಬಿಡದಣ್ಣಾ ಪ ಭವ ಭವ ಭವಂಗಳೆಡೆ ಬಿಡದೂ 1 ಶಾಂತಿಯಿರದವಗೆ ದುರ್ಗತಿಗಳೊದಗುವದೂ 2 ಶಾಂತನಾದರೆ ಸದಾನಂದ ಸುಖವಹುದೂ 3
--------------
ಸದಾನಂದರು
ಶಾಂತನಾಗು ಮನಸೆ ನೀ ಶಾಂತನಾಗು ಕಂತುಪಿತನ ಅಂತರಂಗದಿ ಧ್ಯಾನಿಸುತ್ತ ಪ ಪೊಡವಿಜನರ ನಡೆಯ ಕಂಡು ಮಿಡುಕು ಗುಣವ ಕಲಿಯ ಬೇಡ ಕೊಡುವ ಸ್ವಾಮಿ ಬಡವನಿಹನೆ ದೃಢವಿಟ್ಟು ಅರಿದು ನೋಡು 1 ಭೂಮಿಯವರು ಕೈಯ ಬಿಡಲು ಸ್ವಾಮಿಕಾರ್ಯ ನಿಲ್ಲುತಿಹ್ಯದೆ ಪಾಮರಾಗದೆ ಸ್ವಾಮಿಸೇವೆ ನೇಮವಹಿಸಿ ಮಾಡು ಬಿಡದೆ 2 ಪಾಪಿನರರ ಮಾತಿಗಾಗಿ ಕೋಪಗೊಳ್ಳದೆ ಸತ್ಯನಾಗು ಗೋಪಾಳ ಸಣ್ಣದಲ್ಲ ನಂಬು ಭೂಪ ಶ್ರೀರಾಮನೊಲಿದು ಕೊಡುವ 3
--------------
ರಾಮದಾಸರು
ಶ್ರೀ ಧ್ರುವಚರಿತ್ರೆ ಪದ ಭಜ ಭಜ ಭಜ ಶ್ರೀ ಗಣರಾಜ ತ್ಯಜ ತ್ಯಜ ತ್ಯಜ ತಾಮಸ ಬೀಜ ಪ ಶಂಕರ ಪುತ್ರ ಶುಭಂಕರ ವರನಿಜ ಪಾದ ಸರೋಜ 1 ಲಂಬೋದರ ಪೀತಾಂಬರಧರ ಕರು ಣಾಂಬುಧಿ ವರ ದೇವ ಮಹೀಜ 2 ಶ್ರೀಶಾನಂತಾಜದ್ರೀಶ ವರಾನ್ವಿತ ದಾಸ ಸುವೃತ ಮಾನಸ ಪೂಜ 3 ಆರ್ಯಾ ರಾಜ ಸುಪೂಜಿತ ರಾಜ ರಾಜ ನೃಪ ರಾಜ್ಯ ಮಾಡುತಾ ಇರುತಿಹನು ದುರ್ಜನ ಪುರುಷರ ತರ್ಜನ ಮಾಡುವ ಸಜ್ಜನ ಆತ್ಮಾರಿಂಗ್ಯತಿ ಪ್ರಿಯನು 1 ದೀನ ಬಂಧು ಬಹುದಾನವಂತ ಉ ಪಾದ ಎಂಬುವ ಹೆಸರು ಮಾನಿತರೊಳಗತಿ ಮಾನಯುಕ್ತರು ಮಾನಿನಿಯರು ಇಬ್ಬರು ಇಹರು2 ಸುರಚಿ ಗಣ್ಯಳು ಪಟ್ಟದರಸಿ ಸುನೀತಿಯು ವಿರಸದಿ ಆರಸಗ ನಿಷ್ಟ್ರಿಯಳು 3 ಮುತ್ತಿನಂಥ ವರಪುತ್ರರಿಬ್ಬರು ಉತ್ತಮನೆಂಬ ಸುರುಚಿಪುತ್ರಾ ಉತ್ತಮ ಗಣ್ಯ ಗುಣೋತ್ತಮ ಧ್ರುವನು ಮತ್ತ ಸುನೀತಿಗೆ ತಾ ಪುತ್ರಾ 4 ಮಂದಿರದೊಳಗೆ ವಸುಂಧರೇಶನು ಛಂದದಿ ತಾ ಸುಖದಿಂದಿರಲು ಒಂದಿನದಲಿ ಬಹುಸುಂದರಸಭಿಯಲ್ಯಾ ನಂದದಿ ಬಂದು ತಾ ಕುಳಿತಿರಲು 5 ಶ್ಲೋಕ ಕೂಡಿಸಿತಾ ತೊಡಿಯಲ್ಲಿ| ಮುದ್ದಿಸಿದಾ ಸಭಿಯಲ್ಲಿ | 1 ಛಂದ ನೋಡಿ ಧ್ರುವನು ತಾ ಹರುಷದಿಂದಲಿ ಓಡಿ ಬಂದನು ರಾಜ ಸಭಿಯಲಿ ಕೂಡಬೇಕು ತಾ ಎಂದು ತೊಡಿಯಲಿ ಇಂದು ಮನದಲಿ 1 ನಾಥ ಭೂಮಿಪಾ ನೋಡಿ ಬಾಲನ ಪ್ರೀತಿಯಿಂದಲ್ಯೊಂದು ಮಾತನಾಡನು ತಾತ ಸುತಗೆ ಬಾಯೆಂದು ಕರೆಯನು ಆತ ಧ್ರುವನು ತಾ ಅನಾಥನಾದನು 2 ಆಗ ಸುರುಚಿ ಬಾಲನ್ನ ನೋಡುತಾ ಬ್ಯಾಗನುದರದಲ್ಲಿ ಬಹಳ ಗರ್ವಿತಾ ಯೋಗ್ಯವಲ್ಲ ಕೂಡಲಿಕ್ಕೆ ತೊಡಿಯಲಿ ಹೀಂಗ ದುಷ್ಟ ಮಾತುಗಳು ಬಾಯಲ್ಲಿ 3 ಪದ ಬಾರದೊ ಧ್ರುವಾ ನಿನಗೆ ಸಿಂಹಾಸನ ಪದವಿ ಬಾರದೊ ಧ್ರುವಾ ನಿನಗೆ ಸಾರಸಿಂಹಾಸನವು ಪ ಏರ ಬೇಕೆಂಬುವಂಥಾ ಘೋರತನವ ಬಿಡು ಅ.ಪ ಅನ್ಯಳ ಮಗನೊ ನೀ ಯನ್ನಲಿ ಜನಿಸಿಲ್ಲಾ ಚೆನ್ನಿಗ ಉತ್ತುಮಾಗಿನ್ನ ನೀ ಸರಿಯೇನೋ 1 ಇಂದಿನಾ ಮನೋರಥಾ ಎಂದಿಗಾವುದಲ್ಲಾ ಕಂದ ಸುನೀತಿಯಾ ಮುಂದ ಕೂಡಾಲಿ ಪೋಗೊ 2 ಇಚ್ಛಿ ಮಾಡಾದಿರೋ ಹೆ ಚಿನ್ನಾ ಶ್ರೀ ವತ್ಸನಾರಾಧನಿ ಮಾಡಿಲ್ಲಾ 3 ವೀರ ಸಿಂಹಾಸನ ಏರಬೇಕಾದರೆ ವಾರಿಜನಾಭ ನಾರಾಧನಿ ಮಾಡೊನೀ 4 ` ಚೆನ್ನಿಗಾನಂತಾದ್ರೀಶ್ನ ' ನೀ ಪೂಜಿಸಿ ಯೆನ್ನಲ್ಲಿ ಪುಟ್ಟಾದೆ ಉನ್ನತ ಪದವಿಯು 5 ಶ್ಲೋಕ ಅತ್ಯಂತ ಘೋರತರ ವಾಕ್ಯಗಳನ್ನು ತಾಳಿ ಸಂತಪ್ತನಾದ ಮನದಲ್ಲಿ ಸುನೀತಿ ಬಾಲಾ ಪುತ್ರನ್ನ ನೋಡಿ ಪಿತ ಸುಮ್ಮನೆ ಕೂತನಾಗಾ ತಾತನ್ನು ಬಿಟ್ಟು ನಡದಾ ಧ್ರುವ ತಾನು ಬ್ಯಾಗಾ 1 ಶ್ವಾಸೋಚ್ಛ್ವಾಸವು ಬಾಯಿಲಿಂದ ಬಿಡುತಾ ಕಣ್ಣಿಂದ ನೀರ ಹೋಗುತಾ ಸೂಸು ಬಾಹುವ ದು:ಖದಿಂದ ಮರಗಿತಾ ರೋದನಾ ಮಾಡುತಾ ಬಂದಾ ತೀವ್ರದಿ ತಾಯಿ ಸನ್ನಿಧಿಯಲ್ಲಿ ಆಳುತಾಗ ತುಟಿ ಬಿರಿಗಿಸಿ ಬಂದಾ ಕಂದನ ಮುಂದ ಕುಳ್ಳಿರಿಸಿ ಸತಿ ಕೇಳ್ಯಾಳು ವಿಚಾರಿಸಿ 2 ಪದ ಕಂದ ನೀ ಬ್ಯಾಗ ಹೇಳೊ ಎಲ್ಲೊ ನಿನಗೆ ಇಂದು ಬಡಿದವರ್ಯಾರು ನಿನಗೆ ಪ ಎಂದು ಪೋಗದಲೆ ತನಯ ನೀನು ಇಂದು ಪೋಗಿದ್ದಿಯೊ ದಾರ ಮನಿಗೆ 1 ಘೋರತರ ದು:ಖವೇನೊ ಈ ಪರಿ ನೀರ ತುಳಕುವ ಕಣ್ಣುಗಳಿಗೆ 2 ಏನಂತ ಪೇಳಲಿ ಸ್ವಲ್ಪ ಇಲ್ಲಾ `ಅನಂತಾದ್ರೀಶನ ' ದಯವು ನಮಗೆ 3 ಪದ ತನಯನ ಕೇಳಲು ಹೀಂಗೆ ಪೌರಜನರು ನುಡದರಲ್ಯಾಗೆ ಅರುಚಿನುಡಿಗಳ ಲ್ಹ್ಯಾಂಗೆ ಆ ಸುರುಚಿ ನುಡಿದಳ್ಹಾಂಗೆ 1 ಕೇಳಿದಳೀ ಪರಿವಾಣಿ ಮನ ಪನ್ನಗ ವೇಣಿ ಸಾಗರ ಬಿದ್ದಳು ತರುಣಿ ತಾ ಕೂಗುತ ಕೋಕಿಲವಾಣಿ 2 ಒಡಲೊಳು ಕಿಚ್ಚುರದಂತೆ ಬಹು ಮಿಡುಕೊಳು ತಾಮನದಂತೆ ನಡುಗುತ ಹಿಮ ಹೊಡದಂತೆ ತಾ ನುಡು(ಡಿ)ವಳು ಕರುಣಾದಂತೆ 3 ಏನು ಮಾಡಲಿ ಇನ್ನಯ್ಯೋ ಬಹು ದೀನಳಾದೆ ನಯ್ಯಯ್ಯೊ ಮಾನದ ಪತಿಯೆನ ಕಾಯೊ ಗುರು ಮಾನಸ ದು:ಖವ ತಿಳಿಯೋ4 ಶರಣು ಕೇಳು ದೇವೇಶಾಯನ್ನೊಳು ಕರುಣಾಬಾರದೆ ಲೇಶಾ ಚರಣಕೆರಗುವೆನು ಶ್ರೀಶಾ ಮರಣ ಕುಡಾ`ನಂತದ್ರೀಶ' 5 ಛಂದ ನಾರಿ ಸುರುಚಿಯಾ ಮಾತು ಮರಿಯದೆ ಘೊರ ದು:ಖದಾಪಾರ ತಿಳಿಯದೆ ನೀರ ಧಾರಿಯ ಕಣ್ಣಲ್ಯುದುರುತಾ ಧೈರ್ಯ ಭಾವ ತಾ ಬಿಟ್ಟಳು ಸರುತಾ 1 ಸುಂದರಾಂಗಿಯು ನೊಂದು ಮನದೊಳು ಕಂದಧ್ರುವನ ತಾ ಮುಂದ ನುಡದಳು ಬಂದ ತಾಪವ ಸಹಿಸಬೇಕಯ್ಯಾ ಇಂದು ಮನಸಿನಾ ಕೋಪ ತಾಳಯ್ಯಾ 2 ಕೇಳು ಬಾಲನೆ ರಾಜಯನ್ನನು ಭಾಳ ತುಚ್ಛವ ಮಾಡುತಿಹನು ಭಾಳ ಲಜ್ಜದಿ ಸುನೀತಿ ಭಾರ್ಯಳೆಂದು ಹೇಳಲಿಕ್ಕೆ ನಾಚುತಿಹನು 3 ಯನಗ ಪುತ್ರ ನೀನಾದ ಕಾರಣಾ ನಿನಗ ಮಾಡುವಾ ಅರಸು ನಿರ್ಘೃಣಾ ಕನಸಿಲಿಲ್ಲವೊ ಯನಗ ಹಿತಕರು ತನಯ ವೈಯಲಿಲ್ಲವೊ ಯನ್ನದೇವರು 4 ಮಿಥ್ಯವಲ್ಲವೊ ಸುರುಚಿ ನುಡಿಗಳು ಸತ್ಯ ವಾದ ಮಾತುಗಳು ನುಡಿದಳು ಪಥ್ಯವೆ ಸರಿ ಪರಮ ನಿನಗಿವೆ ಪೊತ್ತುಗಳಿಯದೆ ಪೋಗರಣ್ಯಕೆ 5 ಗುರ್ವನುಗ್ರಹ ಶಿರಸಿ ಗ್ರಹಿಸೈಯ್ಯಾ ಶರ್ವಸಖಗ ನೀ ಪೂಜಿಮಾಡಯ್ಯಾ ಪೂರ್ವದಲ್ಲಿ ನಿನ್ನ ಮುತ್ಯ ಮಾಡಿದಾ ಸಾರ್ವಭೌಮ ಆಧಿಪತ್ಯ ಏರಿದಾ 6 ಇಂದಿರೇಶನಾ ಬ್ರಹ್ಮ ಪೂಜಿಸಿ ಮುಂದ ಏರಿದಾ ಸತ್ಯಲೋಕ ನೇಮಿಸಿ ಕಂದ ಭಜಿಸು ನೀ ಛಂದದಿ ಧ್ರುವಾ ಮುಂದ ಕೇಶವಾನಂದ ಸುರಿಸುವಾ 7 ಶ್ಲೋಕ ಜನನಿಯಾಡಿದ ವಾಕ್ಯವು ಕೇಳಿ ಆಗಾ ಮನಿ ಆಸಿಯು ಬಿಟ್ಟು ನಡದಾನು ಬ್ಯಾಗಾ ಘನಾರಣ್ಯಕೆ ಪೋಗಲು ಶೋಕಸಿಂಧು ಸಿಂಧು 1 ಆರ್ಯಾ ಇಂದಿರೇಶನಾ ಸುಂದರ ಗುಣಗಳ ಬಂದಾಕ್ಷಣಹೀಗೇಂದು ನುಡದನು ಕಂದಗ ಮುನಿ ಆ ಸಮಯದಲಿ 1 ನಿಲ್ಲೆಲೊ ಬಾಲಕ ಬಲ್ಲಿದರಣ್ಯದಿ ನಿಲ್ಲದೆ ಪೋಗುತಿ ಎಲ್ಲಿಗೆ ನೀ ಯೆಲ್ಲಿಂದ ಬಂದಿ ನೀ ಫುಲ್ಲಲೋಚನ ಯೆಲ್ಲ ಬಳಗ ಬಿಟ್ಟಿಲ್ಲಿಗೆ ನೀ 2 ಕಂದ ಬಿಟ್ಟ ನೀ ಬಂದ ಕಾರಣಾ ಇಂದು ತಾಯಿ ತಂದೆಗಳೆಲ್ಲ ಸುಂದರಾನನಾ ಛಂದದಿ ನುಡಿನೀ ಮಂದಿರ ವೃತ್ತಾಂತಗಳೆಲ್ಲಾ 3 ಶ್ರೇಷ್ಠನಾರದ ನೀ ಅಷ್ಟುಲೋಕವಾ ದೃಷ್ಟಿಲಿ ನೋಡುವಿ ಇಷ್ಟರಿಯಾ ಕೆಟ್ಟ ಮಾತು ಆದುಷ್ಟ ಮಳಾಯಿಯು ಎಷ್ಟು ನುಡದಳೊ ಯನಗÀಯ್ಯಾ4 ಏನು ಪೇಳಲಿ ನಾನು ಮುನೀಶ್ವರ ಮಾನ ಗೇಡಿ ಮಾಡಿದಳೆನ್ನಾ ಮಾನ ಹೋಗಿ ಅಪಮಾನಿತನಾಗಿ ಕಾನನ ಶೇರಿದೆ ನಾ ಮುನ್ನ 5 ಮಾನಪಮಾನಗಳೆನಾದರೂ ಸರಿ ಧ್ಯಾನಕ ತರಬಾರದು ನೀನು ನಾನಾ ಲೀಲಿಯಾ ಮಾಡುವ ಬಾಲಕಗೇನು ಚಿಂತೆ ಕೇಳರೆ(ಳುವೆ?) ನಾನು 6 ಶಾಂತನಾಗು ಗುಣವಂತ ಬಾಲ ನಿ ನ್ನಂತರಂಗ ಚಿಂತಿಯು ಬಲ್ಲೆ ಚಿಂತಿಸಿ ಬಂದ್ಯೋ ನೀ ಸತತ ಸುಖ ಭಗವಂತನನೆ ಬ(ರ?) ಬೇಕಂತಿಲ್ಲೆ 7 ಎಂಥವರಿಗೆ ಭಗವಂತ ದೊರಕ ನಿ ನ್ನಂಥ ಬಾಲನಾ ಗತಿಯೇನು ಕಾಂತನಯನ ಶ್ರೀಕಾಂತ ದೊರಕ ಛೀ ಭ್ರಾಂತಿ ಬಿಟ್ಟು ತ್ವರ ನಡಿ ನೀನು 8 ಪದ ನಡಿನಡಿ ನಡಿ ಧ್ರುವಾನೆ ತಿರುಗಿ ಮನಿಗೆ ನಡಿ ನಡಿ ನಡಿ ದೊಡ್ಡ ಅಡವಿಯು ಸೇರಾದೆ ಹುಡುಗ ಬುದ್ಧಿಯನು ಬಿಡು ತಡಮಾಡದೆ ಪ ಅಂಬಕಗಳಿಗೆ ತಾನು ತೋರಾನು ಪೀ ತಾಂಬರಧರ ದೇವಾನು ಅಂಬುಜನಾಭನ ನಂಬಿ ಭಜಿಸುವಂಥ ಹಂಬಲ ಬಿಟ್ಟು ವಿಳಂಬನ ಮಾಡದೆ 1 ಕಾಲಾವಲ್ಲವೋ ಬ್ಯಾಡಯ್ಯ ವಿಗ(ಹಿ?)ತವಾದ ಕಾಲಕೆ ತಪ ಮಾಡಯ್ಯ ಕಾಲಕಾಲಕೆ ಸ್ತನ ಪಾಲನುಂಬುವ ಸಣ್ಣ ಬಾಲ ಈ ವಚನ ಬಿಟ್ಟು ಕಾಲಗಳಿಯದೆ 2 ದೇಶದೇಶವ ತಿರುಗಿ ಬಹಳ ಕಾಸೋಸಿ ಇಂದಲೆ ಮರುಗಿ ಕ್ಲೇಶಾದಿ `ಅನಂತಾದ್ರೀಶ' ದೊರಕ ಘಾಸಿ ನೀ ಆಗದೆ 3 ಆರ್ಯಾ ಮುನಿಯ ವಚನ ನೃಪತನಯ ಕೇಳಿ ಬಹುವಿನಯದಿಂದಲಿ ಹೀಗೆಂದಾ ಘನದು:ಖದಿ ಯನ್ನ ಮನಿಗೆ ಪೋಗಲಿಕ್ಕೆ ಮನಸುವಲ್ಲದು ವಲ್ಲೆಂದಾ 1 ಪದ ಮನಿಗೊಲ್ಲೆ ವಲ್ಲೆ ಮುನಿರಾಯಾಪ ಬಹುತಲ್ಲಣಗೊಳು ತಿಹ(ಹೆ?)ನೈಯ್ಯಾ ಅ.ಪ ಶೋಣೀತ ವಸ್ತ್ರನೆ ಪಾಣಿವಿನಾದಿತ ವೀಣಾಧರ ಕೇಳಯ್ಯ 1 ದುಷ್ಟಮಳಾಯಿಯ ಕೆಟ್ಟಮಾತು ಒಂದಿಷ್ಟು ಸಹಿಸಲಾರೈಯ್ಯ 2 ದೀನದಯಾಳುವೆ ಮಾನಗಳಿದು ಮು ನ್ನೇನು ಉಳಸಲಿಲ್ಲೈಯ್ಯ 3
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಸುಭಕ್ತಾಧೀನ ಮೂರುತಿಯೆ ಪ. ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟಹಿರಣ್ಯಕಾಸುರನು ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ 1 ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ ಕಟಿ ಕಡಿವುತುಬ್ಬಸ ತೋರಿ ನಿಂದ ಕಠಿಣ ಮೂರುತಿಯೆ 2 ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ ಗರ್ಭವ ನಖದಿಂದ ಇಬ್ಭಾಗವನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ 3 ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಶಾಂತನಾಗಿ ಸಂತೋಷಪಡಿಸಿದ ಅ- ನಾಥ ರಕ್ಷಕನೆ ಕಾತರವಳಿದೆ 4 ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ನಳಿನ ಸಂಭವಗೆ ಬಲು ಹರುಷವನಿತ್ತೆ ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5
--------------
ಹೆಳವನಕಟ್ಟೆ ಗಿರಿಯಮ್ಮ
ಸುಮ್ಮನೆ ಹರಿಯ ದೂಷಿಸದಿರು ಯಮ- ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ ಇಷ್ಟೂನು ವಿಷ್ಣು ಮಾಯವು ಎಂದು ಈ ಸೃಷ್ಟಿ ಕರ್ತನು ಶ್ರೀಹರಿ ಎಂದು ಸ್ಪಷ್ಟದಿ ಮನದಲ್ಲಿ ತಿಳಿಯದೆ ದುರುಳ ಮಾತನಾಡಬಹುದೆ 1 ಲೋಕನಾಯಕ ಲಕ್ಷ್ಮೀಲೋಲನಾ ಜಗದೇಕ ವಿನುತರಾಮ ದೇವರನಾ ಶ್ರೀ ಕರುಣಾಂಬುದಿ ಶಾಂತನಾ ಇನ್ನು ನೀ ಕಾಣದೆ ಈ ಪರಿನಿಂದೆಯೆನೆ 2 ಹರಿಶರಣರ ಕೊಂಡಾಡುತಿರು ಘೋರ ನರಕದೊಳಗೆ ಬಿದ್ದು ನರಳದಿರು ಪರಮಭಕ್ತರ ಬಾಯಿಲೆ ಬೊಗಳದಿರು ಅತಿ ಪಾಪಿಯಾಗಿರುವರ ಸೇರಿ ಹೋಗದಿರು 3 ಶೃತಿ ಶಾಸ್ತ್ರಗಳು ಸುಜ್ಜನ-------- ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ 4 ಹರಬ್ರಹ್ಮ ಇಂದ್ರಾದಿಗಳೆಲ್ಲ ಶ್ರೀಹರಿಯ ಸೇವಕರೆಂಬುದು ಬಲ್ಲ 'ವರಹೆನ್ನ ವಿಠ್ಠಲನ ’ ನೀನೆ ಬಲ್ಲ ಅವರ ಚರಣಕ್ಕೆ ಎರಗುವದು ಅಲ್ಲಾ 5
--------------
ಹೆನ್ನೆರಂಗದಾಸರು
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಳ್ಳುಗಳ ಬೋಧಿಸಿ ನೀ ಪೊಳ್ಳಾಗದಿರಲೊ ಪ ನೀರ್ಗುಳ್ಳೆಯಂಥ ದೇಹ ನಂಬಿ ನಿಜಭಕ್ತ ನಾನೆಂದೂ ಅ.ಪ ಎಳ್ಳುಕಾಳಿನಷ್ಟಾದರೂ ಈಶನಲ್ಲಿ ಭಕ್ತಿಕಾಣೆ ಡೊಳ್ಳತುಂಬುವದಕೆ ನಾಲ್ಕಲ್ಲಿ ಇಲ್ಲಿ ಕಲಿತುಕೊಂಡು 1 ಪರರಿಗೆ ಹೇಳುವಂತೆ ನೀ ನಡೆಯುವೆಯೇನೊ ಪರಗತಿಯಾಗದು ನಿಜ ನಿಜ ನಿಜ ಕಾಣೊ 2 ನಿನ್ನಯೋಗ್ಯತಾನುಸಾರ ನೀನರಿಯಲೊ ಬನ್ನಬಡುವದೆ ಸಾಕ್ಷಿ ಪುಣ್ಯವೇನಿದರೊಳು 3 ಹಿಡಿ ಹಿಡಿ ಹಿಡಿ ಹಿಡಿ ಹಿರಿಯರ ಪಾದವ 4 ಶರಣ ಜನರ ನೋಡಿ ಶಾಂತನಾಗುತ ಗುರುರಾಮವಿಠಲನ ಗುರುತರಿಯದೇ ನೀ 5
--------------
ಗುರುರಾಮವಿಠಲ
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ