ಒಟ್ಟು 43 ಕಡೆಗಳಲ್ಲಿ , 17 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು
ನಿಮ್ಮಿಂದ ಗುರು ಪರಮ ಕಲ್ಯಾಣವು ನಿಮ್ಮಿಂದಲೆನಗೆ ಘನ ಪರಿಪೂರ್ಣವು ದ್ರುವ ಹುರಿದು ಭವಬೀಜ ಧರೆಯೊಳುದಯ ಕರುಣದಲಿ ಪರಮ ಆನಂದ ಸುಖ ಮಳೆಯಗರೆದು ಕರ್ಮ ಪಾಶಗಳೆಂಬ ಕರಿಕಿ ಬೇರವು ಕಿತ್ತಿ ಹರಗಿ ಬಿತ್ತಲು ನಾಮ ತಾರಕುಪದೇಶದಲಿ 1 ತುಂಬಿ ತುಳುಕುವ ಸಿರಿಯು ಸರ್ವಮಯವೆಂಬ ತೆನೆಗಳು ತುಂಬಿ ಏರಿ ಸುಷಮ್ನನಾಳದ ಮಂಚಿಕಿಯ ಮೆಟ್ಟಿ ಪರಿಪರಿ ಅವಸ್ಥೆ ಹಕ್ಕಿಗಳು ಹಾರಿಸಲಾಗಿ2 ಮುರಿದು ಭೇದಾಭೇದವೆಂಬ ಗೂಡಲೊಟ್ಟಿ ಅರಿವು ಕಣದಲಿ ಥರಥರದಲಿಕ್ಕಿ ಙÁ್ಞನ ವೈರಾಗ್ಯವೆಂಬೆರಡೆತ್ತುಗಳ ಹೂಡಿ ಸರ್ವಗುಣ ತೆನೆ ತೆಗೆದು ತುಳಿದು ರಾಸಿಮಾಡಿಸಲಾಗಿ 3 ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ ತೂರಿ ತರ್ಕ ಭಾಸ ಗಳೆದು ಮಿಥ್ಯಾಪ್ರಪಂಚವೆಂಬ ಕಾಳವು ಕಡೆಮಾಡಿ ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ 4 ಏಕೋ ಬ್ರಹ್ಮದ ಗತಿ ನಿಧಾನ ರಾಶಿಯುದೋರಿ ಜನ್ಮ ಮರಣವು ಕೊಯಿಲಿಯ ಸುಟ್ಟು ಉರುಹಿ ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು ಮೂಢ ಮಹಿಪತಿ ಪ್ರಾಣ ಸದ್ಗೈಸಲಾಗಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀ ಪಾಲಿಸದಿರಲು ನಾ ಪೋಗುವುದು ಎತ್ತ ನೀ ಪೇಳೊ ಪರಮ ಪುರುಷಾ ಅಗಣಿತ ನಾಮ ಸುರ ಪ್ರೇಮ ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ ಉದರ ಚಿಂತಿಯಲಿ ಉದಯದಲಿ ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ ಮೃದು ವಾಕ್ಯವಾಡದಲೆ ಮದ ಗರ್ವ ಬಲದಿಂದ ಎದುರಾದವರ ಜರಿದೆ ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ ವಿದಿತ ಕರ್ಮಗಳ ತೊರೆದೆ ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ ಬಿದ್ದು ಸಂಪದವಿಗೆ ದೂರದವನಾ1 ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ ಹೆತ್ತವರನ್ನ ಜರಿದೆ ಹತ್ತೆಗರೆದು ಪರಿಪಾಲಿಸಿದ ದಾತರನು ಹೊತ್ತಾಕೆ ಪ್ರೀತಿ ಪೇಳುವೆ ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ ವಿತ್ತಾಶೆ ಪೋಗಿ ಮುಳವೆ ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ ಹುತ್ತಿನೊಳು ಬಿದ್ದು ಪುನಿತನಾಗದವನಾ 2 ಗುರು ನಿಂದಕರ ನೋಡಿ ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು ಅರಿದರಿದು ಬುದ್ಧಿಗೆಟ್ಟು ಹರಿವಾಸರದುಪವಾಸ ಮಾಡುವ ಜನರಿಗೆ ಮುರಳಾಡಿ ಮುಟ್ಟಿಯಲಿಟ್ಟು ಜಾಗರ ತೊರೆದು ಹಿರಿ ಪಾಮರನಾಗಿ ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ3 ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ ಮೀಸಲಾ ಪದಾರ್ಥವೆಂಬೆ ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ ರಾಸಿ ದುರನ್ನ ಉಂಬೆ ಆಶೆಯನು ತೊರಿಯದಲೆ ಉಪರಾಗ ಪರ್ವದಲಿ ಕಾಸು ದಾನವನು ಕೊಂಬೆ ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ4 ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ ಎಂದೆಗೆಂದಿಗೆ ಸವಿಯದು ನೊಂದು ದುಶ್ಚಿತ್ತದಲಿ ನೀನೆ ಗತಿ ಎಂದು ಬಾಗಿಲ ಕಾಯಿದುದು ಬಂದು ಮಾತುರದಲ್ಲಿ ಬಲು ದಯಾಳು ಎನ್ನ ಸಂದೇಹವನು ತೊಡೆದು ಮುಂದಾದರೂ ಭವದ ಅಂಧ ಕೂಪದೊಳಿಡದೆ ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ 5
--------------
ವಿಜಯದಾಸ
ನೋಡಿದೆನು ಉಡುಪೀ ನಿವಾಸನ ನೋಡಿದೆನು ಯಾದವೇಶನ ನೋಡಿದೆನು ಮಾನಿಸ ವೇಷನ ನೋಡಿದೆನೊ ಲಕುಮೇಶನ ಪ ಪರಶುರಾಮನು ಭೂಮಿ ಸುರರಿಗೆ ಸರವು ಧಾರುಣಿ ಧಾರಿಯಾ ಎರದು ಕೇಸರಗಿರಿಯ ಪಡುಮೂಲ ಶರನಿಧಿಯನು ಶರದಲೀ ಭರದಿ ಬಿಡಿಸಿದ ಶೂರ್ಪಕಾರದ ತೆರದಿ ನೆಲ ನೀ ಧರುಣಿಗೆ ಪರಮ ಸಾಹಸ ರಾಮಭೋಜನು ಅರಸನಾದುದು ನೋಡಿದೆ 1 ಯಾಗಗೋಸುಗ ರಾಮ ಭೋಜನು ನೇಗಿಲಿಯ ಕೊನೆಯಿಂದಲಿ ಆಗ ಭೂಮಿಯ ಶೋಧಿಸÀಲು ಬಂದು ನಾಗ ಬಂದಿತು ಮೃತವಾಗಿ ತೂಗಿ ಶಿರವನು ಭೃಗು ಕುಲೇಶಗೆ ಬಾಗಿ ನೆನೆಯಲು ಸಂಕೇತಾ ಸಾಗಿ ಭೂಮಿಪಾಲ ರಿಪು ಚನ್ನಾಗಿ ಒಲಿದದು ನೋಡಿದೆ 2 ತಿಳುಹಿದನು ಪೂರ್ವದಲಿ ಈ ಫಣಿ ಖಳನು ಕಾಣೊ ಇವನಿಂದು ಅಳಿದು ಪೋದದು ಲೇಸು ಭೂಸುರ ಕುಲಕೆ ಸಂತೋಷವಾಯಿತು ಒಲುಮೆಯಲಿ ಸತ್ಕಾರ ವಿಧ ವೆ ಗ್ಗಳವಾಗಿ ಸುಯಾಗವ ಸುಲಭ ಮನದಲಿ ಮಾಡೆನಲು ನಿ ಶ್ಚಲ ಭಕುತಿಲಿ ಸ್ತುತಿಸಲು 3 ಇಂದಿರಾಪತಿ ಕರುಣಿಸೆಂದು ಅಂದಿಗಾ ರಾಮ ಭೋಜನು ಒಂದು ಕ್ರೋಶದ ಅಗಲ ರಜತಾ ಚಂದದಾಸನ ಮಾಡಿಸಿ ತಂದು ದೇವನ ಕುಳ್ಳಿರಿಸಿ ಆ ನಂದದಲಿ ಓಲಾಡುತಾ ಕುಂದದಲೆ ಮೇಧವನು ಮುಗಿಸಿ ಗೋ ವಿಂದನ ಪ್ರೀತಿಪಡಿಸಿದಾ 4 ಭೂತಳದೊಳು ರಜತಪೀಠಾಖ್ಯ ಖ್ಯಾತಿ ಆಯಿತು ಸರ್ವದಾ ಆ ತರುವಾಯದಲ್ಲಿ ಭಾರ್ಗವ ಭೂತನಾಥನ ನಂದದಿ ವಾತ ಭಕ್ಷನ ನಡುವೆ ನಿಂದನು ಮಾತುಯಿದು ಪುಶಿಯಲ್ಲವೊ ಪೂತುರೆ ಮೋಹಕವೆ ತೋರಿದ ಜಾತ ರಹಿತಗೆ ನಮೋ ನಮೋ 5 ಪರಿ ಇರಲು ಗಂಗೆಯ ಕಾಂತ ಮಹಾ ತಪವನೆ ಮಾಡಿ ಸಂತತ ಗೋಪಾಲಕೃಷ್ಣನ ಸಂತೋಷವನು ಬಡಿಸಿದಾ ಚಿಂತೆಯಲಿ ವಿದೂರನಾದನು ಮುಂತೆ ನಡೆದ ಕಥೆ ಕೇಳಿ ಕಂತುಹರನನ ಒಲಿಸಿ ಉಡುಪಾ ಕಾಂತ ವರವನೆ ಐದಿದಾ 6 ಮೂರು ಯುಗದಲಿ ಈ ಪರಿಯಾಗೆ ಮಾರುತ ಮಧ್ಯಗೇಹನ ಚಾರು ಮನೆಯಲಿ ಜನಿಸಿ ವೈಷ್ಣವಾ ಚಾರ್ಯ ಈ ದುಶ್ಯಾಸ್ತ್ರವ ಹಾರಿಸಿದ ಹರುಷದಲಿ ರುಕ್ಮಿಣಿ ದ್ವಾರಕೆಲಿ ಪೂಜೆ ಮಾಡಿದ ಮೂರುತಿಯ ಸ್ಥಾಪಿಸಿದ ಲೀಲೆಯು ಆರು ಬಣ್ಣಿಸಲಾಪರು 7 ಇದೇ ರಜತಪೀಠ ಅಜಕಾನನವಿದೆ ಇದೇ ಉಡುಪಿ ಇದೇ ಶಿವಕುಲ್ಲ್ಯ ಅದರ ಬಳಿಯಲಿಯಿಪ್ಪ ತೀರ್ಥವ ಅದುಭುತವ ವರ್ಣಿಸುವೆನು ಇದೇ ಅನಂತ ಸರೋವರವು ಮ ತ್ತಿದೇ ವಾರುಣ್ಯಚಂದ್ರಮತೀರ್ಥ ಇದಕೆ ಮಧ್ವಸರೋವರ ವೆಂ ಬದು ಕಾಣೊ ಶ್ರುತಿ ಉಕ್ತಿಲಿ 8 ಸಕಲ ದೇಶದ ಜನರು ತ್ರಿವಿಧ ಸುಖವಾರಿಧಿಯೊಳು ಸೂಸುತಾ ಅಖಿಳ ವೈಭವದಿಂದ ಬಪ್ಪ ಅಕಟ ಸಂದಣಿಗೇನೆಂಬೆ ಸೂರ್ಯ ಬಂದ ಕಾ ಲಕೆ ಕೃಷ್ಣನ ನೋಡುವೆನೆಂದು ಚಕ್ಕನೆ ನಿಲ್ಲದೆ ಬಂದು ನೆರದಂದು ಮುಕ್ತಾರ್ಥ ಹರಿಪ್ರೇರಕಾ 9 ಸಜ್ಜನರ ಸಿರಿಚರಣ ರಜದಲಿ ಮಜ್ಜನವ ಗೈವುತ ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ ಅಬ್ಜನಾಭ ನಾರಾಯಣ ಮೂಜಗತ್ಪತೆ ಎಂದು ಸ್ತೋತ್ರ ನಿ ರ್ಲಜ್ಜನಾಗಿ ಪಠಿಸುತಾ ರಜ್ಜುಪಾಣಿಯ ಬಹಿರದಿಂದ ನಿ ವ್ರ್ಯಾಜ್ಯ ಭಕುತಿಲಿ ನೋಡಿದೆ 10 ಮೊದಲು ನಮಿಸಿದೆ ಚಂದ್ರಶೇಖರ ಪದುಮಗರ್ಭನ ಮಗನೆಂದು ಅದರ ತರುವಾಯದಲ್ಲಿ ಮಾಯಿಯ ಸದಬಡೆದ ಪೂರ್ಣಬೋಧರು ಸದಮಲಾ ಕುಳುತಿಪ್ಪ ಸ್ಥಾನವ ಒದಗಿ ನೋಡಿ ಕೊಂಡಾಡುತಾ ಮದನ ಜನಕಾನಂತ ಸ್ವಾಮಿಯ ಪದಯುಗಳವನು ನೋಡಿದೆ11 ರತುನ ಗರ್ಭದೊಳಧಿಕವಾದ ತೀ ರಥವಿದು ಮಧ್ವಾಖ್ಯದಿ ಸತತ ಬಿಡದಲೆ ಇಲ್ಲಿ ಭಾಗೀ ರಥಿವಾಸ ನದಿಗಳ ಕೂಡಿ ನುತಿಸಿ ಮೆಲ್ಲನೆ ಮುಟ್ಟಿ ಮಿಂದು ಮತ್ತೆ ಕರ್ಮದ ಚರಿಯವ ಹಿತ ಮನಸಿನಲ್ಲಿ ಮಾಡುವಂಥ ಕೃತ ಕಾರ್ಯವನು ನೋಡಿದೆ 12 ಅಲ್ಲಿಂದ ನವರಂಧ್ರಗಳು ಕಂಡು ಪುಲ್ಲಲೋಚನ ಕೃಷ್ಣನ ಸೊಲ್ಲಿನಿಂದಲಿ ಪಾಡಿ ಭಾರತಿ ವಲ್ಲಭನ ಕೊಂಡಾಡುತಾ ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು ನಿಲ್ಲದಲೆ ಸಮೀಪಕೆ ಬಲ್ಲವನು ಗುಣಿಸುತ್ತ ಭಕುತ ವ ತ್ಸಲನಂಘ್ರಿ ನೋಡಿದೆ13 ಮೂರು ಬಗೆ ಭೂಷಣವ ಧರಿಸಿದ ಮೂರುತಿ ಇದೇ ಕಾಣಿರೊ ಪಾರುಗಾಣರು ಈತನ ಅವ ತಾರ ಗುಣಕ್ರಿಯೆ ಮಹಿಮೆಯಾ ವಾರಿಜೋದ್ಭವ ಶಿವ ಮುಖಾದ್ಯರು ಸಾರಿ ಹಾಹಾ ಎಂಬರೊ ಧಾರುಣಿಗೆ ಇದೇ ದೈವ ನವನೀತ ಚೋರನ ಕೊಂಡಾಡಿದೆ 14 ತ್ರಾಹಿ ತ್ರಯಾವಸ್ಥೆ ಪ್ರೇರಕ ತ್ರಾಹಿ ತ್ರಯಗುಣ ವಿರಹಿತಾ ತ್ರಾಹಿ ತ್ರಯಧಾಮ ವಾಸ ಸರ್ವೇಶ ತ್ರಾಹಿ ತ್ರಯ ರೂಪಾತ್ಮಕಾ ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ ತ್ರಾಹಿ ತ್ರಯವನು ಕೊಡುವನೆ ತ್ರಾಹಿ ತ್ರಯಗಣ್ಣ ವನಪಾಲಕ ತ್ರಾಹಿ ತ್ರಯಲೋಕಾಧಿಪಾ 15 ಪಾಹಿಪರಮಾನಂದ ಗೋವಿಂದ ಪಾಹಿ ಪರತರ ಪರಂಜ್ಯೋತಿ ಪಾಹಿ ಪತಿತ ಪಾವನ್ನ ಮೋಹನ್ನಾ ಪಾಹಿ ಪಾಲಾಂಬುಧಿಶಾಯಿ ಪಾಹಿ ಜಗದತ್ಯಂತ ಭಿನ್ನಾ ಪಾಹಿ ನಿರ್ಭಿನ್ನ ಸ್ವರೂಪ ಪಾಹಿ ನಖಶಿಖ ಜ್ಞಾನ ಪೂರ್ಣನ ಪಾಹಿ ಎನ್ನಯ ಪ್ರೇಮನೆ 16 ನಮೋ ನಮೋ ಚತುರಾತ್ಮ ಗುಣನಿಧಿ ನಮೋ ನಮೋ ಪುನ್ನಾಮಕ ನಮೋ ನಮೋ ವಟಪತ್ರಶಾಯಿ ನಮೋ ನಮೋ ಪುಣ್ಯಶ್ಲೋಕನೆ ನಮೋ ನಮೋ ಸಮಸ್ತ ಸರ್ವಗ ನಮೋ ನಮೋ ಸರ್ವ ಶಬ್ದನೆ ನಮೋ ನಮೋ ಅವ್ಯಕ್ತ ವ್ಯಕ್ತಾ ನಮೋ ನಮೋ ನಾರಾಯಣ 17 ಜಯ ಜಯತು ಕರಿವರದ ವಾಮನ ಜಯತು ನಾರದ ವಂದ್ಯನೆ ಜಯ ಜಯತು ಪ್ರಹ್ಲಾದ ರಕ್ಷಕ ಜಯ ಜಯತು ಪಾರ್ಥನ ಸಾರಥೆ ಜಯ ಜಯತು ಅಂಬರೀಷ ಪರಿಪಾಲಾ ಜಯತು ಪರಾಶರನುತಾ ಜಯ ಜಯತು ಪಾಂಚಾಲಿ ಮಾನ ಕಾಯ್ದನೆ ಜಯ ಜಯತು ಗೋಪಿಕಾ ವಲ್ಲಭಾ18 ಇನಿತು ಬಗೆಯಲಿ ತುತಿಸಿ ದೇವನ ಮನದಣಿಯ ಕೊಂಡಾಡುತಾ ಕ್ಷಣಬಿಡದೆ ತನ್ನ ನೆನೆಸಿದವರಿಗೆ ಹೊಣೆಯಾಗಿ ಪಾಲಿಸುವನು ಜನುಮ ಜನ್ಮದಲಿಂದ ಮಾಡಿದ ಘನದುರಿತ ಪರ್ವತಗಳು ಚಿನಿಗಡೆದು ಸಾಧನವೆಲ್ಲ ವೇಗ ತನಗೆ ತಾ ಮಾಡಿಸುವನು 19 ವ್ಯಾಧ ಭೂಸುರ ವೇಷವು ಭೇದ ಮಾಡಿದ ನಾರಾಯಣಿ ಸುಪ್ರಸಾದ ನಿರ್ಮಲರೂಪವು ಆದಿವಾರವು ವಿಡಿದು ಎರಡು ಐದು ದಿನ ಪರಿಯಂತವು ಶ್ರೀಧರೇಶನು ವೇಷ ಧರಿಸಿದ್ದು ಸಾಧು ಸಂಗಡ ನೋಡಿದೆ20 ಉದಯಕಾಲದ ಪೂಜೆಯಾಗಲು ಮುದ ನಿರ್ಮಾಲ್ಯ ವಿಸರ್ಜನೆ ಇದೆ ಪೂರೈಸಲು ಮತ್ತೆ ಪಂಚ ಸುಧ ಪೂಜೆ ಉದ್ವಾರ್ಥನೆ ಒದಗಿಯಾಗಲು ಮೇಲೆ ಸುಧ ವಿಧುದಂತೆ ಬೆಣ್ಣೆ ಶರ್ಕರ ಇದೆ ಮಹ ಪೂಜೆ ನೋಡಿದೆ 21 ಗಂಧ ಪರಿಮಳ ತುಲಸಿ ಪುಷ್ಪಾ ನಂದ ಭೂಷಣ ಧರಿಸಿಪ್ಪ ಒಂದು ಕೈಯಲಿ ದಾಮ ಕಡಗೋ ಲಂದದಲಿ ತಾಳಿದಾ ಮಂದರಿಗೆ ಇದು ಸಾಧ್ಯವಲ್ಲವು ಮುಂದೆ ಯತಿಗಳು ಮಂತ್ರವ ಮಂದ ನಗಿಯಲಿ ಪೇಳುತಿಪ್ಪ ಚಂದವನು ನಾ ನೋಡಿದೆ 22 ಎತ್ತುವ ಧೂಪಾರತಿಗಳು ಹತ್ತೆಂಟು ಬಗೆ ಮಂಗಳಾ ರುತ್ತಿ ನಾನಾ ನೈವೇದ್ಯ ಷಡುರಸ ಮೊತ್ತಂಗಳು ಪರಿವಿಧಾ ಉತ್ತಮ ಶಾಖಾದಿ ಘೃತದಧಿ ತತ್ತಕ್ರಫಲ ಪಕ್ವವು ಸುತ್ತಲು ತಂದಿಟ್ಟು ಅರ್ಪಿ ಸುತ್ತಲ್ಲಿಪ್ಪುದು ನೋಡಿದೆ 13 ಮಂತ್ರ ಘೋಷಣೆ ಭಾಗವತಜನ ನಿಂತು ಗಾಯನ ಮಾಡಲು ಅಂತವಿಲ್ಲದೆ ವಾದ್ಯಸಂದಣಿ ಚಿಂತಿಸುವ ನಿಜದಾಸರು ವಂತು ವಾಳೆಯಿಲ್ಲದಾ ಜನ ಸಂತೋಷದಲಿ ನಲಿವುತಾ ತಂತ್ರ ಸಾರೋಕ್ತದ ಪೂಜೆ ಅತ್ಯಂತವನು ನಾ ನೋಡಿದೆ 24 ತೀರ್ಥ ಪ್ರಸಾದ ಗಂಧ ಅಕ್ಷತೆ ಅರ್ಥಿಯಲ್ಲಿ ಕೊಡುವರು ವ್ಯರ್ಥವಲ್ಲಿವು ಇಲ್ಲಿ ಒಂದು ಮು ಹೂರ್ತವಾದರು ಎಂದಿಗೂ ಶುಭ ಪ ದಾರ್ಥ ಬಡಿಸಲು ಉಂಡು ಕೃ ತಾರ್ಥನಾದೆನು ಜ್ಞಾನವಧಿಕ ಸಾರ್ಥಕರನ ನೋಡಿದೆ25 ತರಣಿ ಮಕರಕೆ ಬರಲು ಗೋಪಾಲ ಮೆರೆವ ವೈಭವವೆಂಬೆನೇ ಗಜ ತುರಗ ಹರಿ ಗರುಡ ಶ್ರೀ ಹನುಮಂತನಾ ವರ ರೂಢನಾಗಿ ಮೆರೆದು ಆಮೇಲೆ ಮಿರುಗುವ ರಥವನೇ ಏರಿ ಪರಮ ವೇಗದಿ ಚತುರ್ವೀಧಿಯ ತಿರುಗಿ ಬಪ್ಪದು ನೋಡಿದೆ 26 ಓಕಳಿಯ ಸಂಭ್ರಮವೆ ಪೇಳಲು ಗೋಕುಲಕೆ ಸಮನೆನಿಸಿತು ವಾಕು ಕೇಳ್ ಸುರ ಮುನಿಗಳೊಡನೆ ಲೋಕಕ್ಕಾಶ್ಚರ್ಯ ತೋರುತಾ ಸೋಕಿ ಸೋಕದ ಹಾಸೆ ಓಕುಳೀ ಹಾಕಿ ಆಡುವ ಲೀಲೆಯ ಈ ಕಲಿಯುಗದಲ್ಲಿ ಸೋಜಿಗ ಈ ಕಥೆಯಾದುದು ನೋಡಿದೆ 27 ವಾಲಗ ಎಡಬಲದಲಿ ಪಂಜು ಕಟ್ಟಿಕೆಕಾರರು ರಂಜಿಸುವ ಪಲ್ಲಕ್ಕಿ ಸೇವಿಪ ರಂಜಳವಾಗಿ ಒಪ್ಪಲು ಕುಂಜರಾರಿಯ ಪೀಠದಮೇಲೆ ಕಂಜಲೋಚನ ಕುಳ್ಳಿರೆ ನಿ ರಂಜನದಲಿ ಪೂಜಿಸುವ ಮತಿ ಪುಂಜ ಯತಿಗಳ ನೋಡಿದೆ 28 ಶ್ರುತಿ ಪುರಾಣಗಳುಪನಿಕ್ಷತ್ ವೊ ಸತು ಶಾಸ್ತ್ರ ಪ್ರಬಂಧವು ಭಾಗವತ ಸುಸಂ ಗೀತಿಯಲಿ ರಾಗ ಭೇದವು ಶ್ರುತಿ ಕಥಾಭಾಗ ಪದ್ಯ ಅಷ್ಟಕ ಮಿತಿಯಿಲ್ಲದಲಿಪ್ಪ ಪ್ರಸಂಗ ತತುವ ಮಾರ್ಗದಿ ನುಡಿವ ಬಲು ಉ ನ್ನತ ಮಹಿಮರ ನೋಡಿದೆ 29
--------------
ವಿಜಯದಾಸ
ಬಿಂಕವ್ಯಾತಕ್ಕೆನಮ್ಮ ಕೂಡ ಬಿಂಕವ್ಯಾತಕ್ಕೆಅಕಳಂಕ ರುಕ್ಮಿಣಿಯರಮನೆಗೆ ಅಹಂಕಾರದಲಿ ಮುಯ್ಯ ತಂದು ಪ. ವಾತನೊಡಗೂಡಿ ಜನಿಸಿ ಆತನಮದುವೆ ಮಾಡಿಕೊಂಡೆನೀತಿಯೇನ ನಿನಗೆ ದ್ರೌಪತಿಈ ಮಾತು ಕೇಳಿ ಮಂದಿ ನಗರೆ 1 ಹುಟ್ಟು ಹೊಂದು ನಾರಿ ನೀನುಎಷ್ಟೊಂದು ಗರವು ನಮ್ಮ ಕೂಡಯಾಕೆ ಕೃಷ್ಣನ ಅರಸಿ ರುಕ್ಮಿಣಿಗೆಒಂದಿಷ್ಟರೆ ದೋಷ ತೋರ ಸಖಿಯೆ2 ಜನನ ಮರಣವೆಂಬೆರಡು ಜಾಣಿ ರುಕ್ಮಿಣಿಬಲ್ಲಳೇನ ಜನನಿ ಬೊಮ್ಮಗ ಎನಸಿತಾನೆ ಜಗದಿ ಖ್ಯಾತಿ ತುಂಬಿಲ್ಲವೇನ ಈ ಜಗದಿ ಖ್ಯಾತಿ ತುಂಬಿಲ್ಲವೇನ 3 ನಿತ್ಯ ನಿತ್ಯ ಮೂರುತಿ ಕೃಷ್ಣನ ಭಜಿಸಿನಿತ್ಯ ತೃಪ್ತಳು ಎನಿಸುತಿಹಳು 4 ಅತ್ತಿಗೆಯರೆಂಬೊ ದಿವ್ಯ ಅರ್ಥನಾಮವ ಜಪಿಸಿಮತ್ತೆ ರಾಮೇಶನ ಅರಸಿಯರಿಬ್ಬರಭೃತ್ಯಳಾಗಿ ಭಾಗ್ಯವ ಪಡಿಯೆ5
--------------
ಗಲಗಲಿಅವ್ವನವರು
ಬೆಳಿಯೋ ಬೆಳಿ ಮನವೇ ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು | ಇಳೆಯೊಳು ಯಣಿಗಾಣದ್ಹಾಂಗೆ 1 ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು | ಜರಿದು ಸಂಗಿಗಳನ್ನೆಲ್ಲಾ 2 ವಿವೇಕವೇಯಂಬಾ ನೇಗಿಲ ಎಂಟು | ಭಾವವೆಂಬೆತ್ತುಗಳಿಂದ 3 ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ | ಒಡನೆ ಶಿಕ್ಷದಿ ನಡೆಸುತಾ 4 ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ | ಅನನ್ಯ ಭಾವ ಕೂರಿಗೆಯಿಂದಾ 5 ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ | ಭರದಿ ಬಿತ್ತಿ ನಾದುವಂತೆ 6 ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು| ಧನಗಾಳ ತುಂಬಿಡುವಂತೆ 7 ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ | ಪರಮ ಜಾಗೃತಿಯ ಕವಣಿಯಿಂದಾ 8 ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ | ಸಾರಿಹ ಶೃತಿ ವಾಕ್ಯದಿಂದ 9 ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ | ತೂರಿ ಅಹಂಭಾವ ಹೊಟ್ಟವನು 10 ದೈನ್ಯವನು ಹಿಂಗಿ ಬಳಕೊಂಡು ಅನ್ಯರಾ ಮರೆ ಹೋಗದಂತೆ 11 ಪರಿಪೂರ್ಣಾದ ಬಳಿಕ ಒಕ್ಕಲು ತನಕ | ಮರುಳೆ ನೀ ಸಿಕ್ಕದಿರು ಕಂಡ್ಯಾ 12 ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು ಗುರು ಮಹಿಪತಿ ವಲುಮೆಯಿಂದಾ 13
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೋಧ ನಡತೆಯಲಿ ಕತ್ತೆಯಾದೆ ಪ ನೀರಲಿ ನೆರಳನೆ ನೋಡುವೆ ಹಣೆಗೆ ಗಂಧವ ತೀಡುವೆಹಾರ ತುರಾಯ್ಗಳ ಸೂಡುವೆ ಮೋರೆಯನೆತ್ತೆತ್ತ ಮಾಡುವೆ1 ಜಾರೆಯರೊಡನೆ ಬೆರೆವೆ ಕಿಸಿ ಕಿಸಿ ಹಲ್ಲನೆ ಕಿರಿವೆಬಾರದ ಪದವ ಒದರುವೆ ಹಮ್ಮಿನಿಂದೆಲ್ಲೆಲ್ಲಿ ಮೆರೆವೆ2 ಬಿಡುವೆನು ಗುರುಪಾದವೆಂಬೆ ಬೇಡಿತಿಯ ಕೂಡುವೆನೆಂಬೆಸುಡುವೆನು ಕಪನಿಯನೆಂಬೆ ಲಿಂಗವ ಕಟ್ಟಿರಿ ಎಂಬೆ 3 ವಿಧ ವಿಧ ವೇಷವ ಧರಿಸಿ ಬಹು ಜಾತಿಯಲಿ ಕೈ ಬೆರಳಿರಿಚಿದಾನಂದ ನೀ ಮೆರೆಸಿ ಬಾಳುವೆ ದೊಡ್ಡವನೆನಿಸಿ 4
--------------
ಚಿದಾನಂದ ಅವಧೂತರು
ಬ್ಯಾಡವೊ ಕುವಾದಿ ಬ್ಯಾಡವೊ ಪ ಬ್ಯಾಡವೊ ಕೇಳು ಕುವಾದಿ ನೀ ನಾಡುವದುಚಿತವಲ್ಲ ಧಾದಿ | ಆಹಾ | ಮೂಢ ನಿನಿಗದಾವ ಖೋಡಿ ಬೋಧಿಸಿದನೊ ನಾಡಿಗೊಡಿಯ ರಂಗಗೀಡು ನೇನೆಂಬದುಅ.ಪ ಎಲ್ಲ ಜೀವರು ದೇವವೊಂದೆ ಭೇದ ವಿಲ್ಲೆಂದಾಡುವುದು ಧಂದೆ ಯಮ ಕೊಲ್ಲದೆ ಬಿಡ ನಿನ್ನ ಮುಂದೆ ನಿನ್ನ ಹಲ್ಲು ಮುರಿವನೊಂದೊಂದೆ || ಆಹಾ || ಉಳ್ಳಿಗಡ್ಡಿಯ ಉದ್ದಿ ಬೆಳ್ಳಗೆ ತೊಳೆದರೆ ಅಲ್ಲಕ್ಕೆ ಸರಿಯೇನೊ ಬಲ್ಲವರೊಪ್ಪಾರು 1 ಇದ್ದು ನೀ ಇಲ್ಲೆಂತೆಂಬಿ ಕಾಲಿ ಲೊದ್ದರೆ ಬಲು ನೊಂದು ಕೊಂಬಿ ಇ ಲ್ಲಿದ್ದವರೆಲ್ಲ ಬ್ರಹ್ಮ ನಾನೆಂಬಿ ಆ ಪರ ಬುದ್ಧಿಯಿಂದ ಶುದ್ಧ ಎಂತೆಂಬಿ || ಆಹಾ || ಬಿದ್ದುಹೋಯಿತು ನಿನ್ನ ಸಿದ್ದಾಂತವೆಲ್ಲವು ಸದ್ದು ಎನ್ನ ಕೂಡ ಗೆದ್ದು ಹೋಗಲಾರಿ ಬ್ಯಾಡವೊ 2 ಒಬ್ಬ ಬ್ರಹ್ಮ ಎಲ್ಲಾ ಮಾಯವೊ ಇ ನ್ನೊಬ್ಬನೆ ಎಲ್ಲಿಹ ಸುಖವೊ ಕುಹಕ ಶಾಸ್ತ್ರವೆಲ್ಲ ಮೃಷವೋ ಉಬ್ಬಿ ಆಡುವುದು ನಿರಯವು || ಆಹಾ || ಈ ಬಗೆಯಾಯಿತು ನಿನಗೊಬ್ಬಗೆ ಈ ಮಾತು ಬ್ಯಾಡವೊ 3 ಒಂದೆ ಆದರೆ ನಿನಗೆಲ್ಲ ನಿನ ತಂದೆಯಿಂದ ನೀ ಪುಟ್ಟಿದ್ದೆಲ್ಲ ನಿನ್ನ ತಂದೆ ನೀನು ಒಂದೆ ಎಲ್ಲಿ ಇನ್ನು ಛಂದಾಗಿ ನೀ ತಿಳಿಯೊ ಸೊಲ್ಲ || ಆಹಾ || ಸತಿ ನಿನಗೇನಾದಳೊ ಮನುಜ ಮಂದ ಮತಿಯೆ ತಾಯಿಗಂಡ ನೀನಾದೆಲ್ಲೋ 4 ಅನ್ನಕ್ಕೆ ಪರಬ್ರಹ್ಮನೆಂಬಿ ಈಗ ಅನ್ನ ಚಲ್ಲಲು ದೋಷವೆಂಬಿ ನಿತ್ಯ ಚನ್ನಾಗಿ ಪರಿಪೂರ್ತಿಗೊಂಬಿ ಈ ಅನ್ನ ನಾನು ವೊಂದೆ ಎಂಬೀ || ಆಹಾ || ನಿನ್ನ ದೇಹಕ್ಕೆ ರೋಗವು ಬಂದರೆ ನೀನು ಅನ್ನವ ಬಿಟ್ಟಿನ್ನು ಚನ್ನಾಗಿ ಮಲುಗುವಿ 5 ಭೇದವಿಲ್ಲೆಂತೆಂದರೆ ನೀನು ಮಾದಿಗರೆಲ್ಲ ಒಂದೇನೊ ಸರಿ ಹೋದವರೆಂಜಲ ತಿನ್ನೋ ಕಹಿ ಸ್ವಾದವು ನಿನಗಿಲ್ಲವಿನ್ನು ||ಆಹಾ|| ಓದನಾದರು ವೊಂದೆ ಮೇದ್ಯವಾದರು ವಂದೇ ಭೇದವಿಲ್ಲದೆ ತಿಂದು ಹೋದಿಯೋ ನರಕಕ್ಕೆ 6 ಎಲ್ಲವೂ ಬ್ರಹ್ಮಸ್ವರೂಪಾ ಬ್ಯಾರೆ ಇಲ್ಲೆಂದು ನಿನಗೆ ರೂಪಾ ಭೇದವಿಲ್ಲೆಂತೆಂಬುವದು ನಿಶ್ಚಯವು ವಾಕು ಸಲ್ಲದೆ ಇನ್ನು ಪೋದಾವು ||ಆಹಾ || ಬಲ್ಲಿದ ಪುರುಷನು ಮೆಲ್ಲನೆ ನಿನ್ನ ಸತಿ ಯಲ್ಲಿ ಮಲಗಿದರೆ ನೆಲ್ಲಿ ನೀ ಸೈರಿಸಿ7 ನಾಶವಿಲ್ಲೆಂಬುದೆ ಸತ್ಯ ದೋಷ ಮಿಥ್ಯ ಜಗ ಭೃತ್ಯ ಬಿಡದೆ ನಿತ್ಯ ||ಆಹಾ|| ದ್ವಾಸುಪರ್ಣವೆಂಬೊ ಈ ಶ್ರುತಿಗರ್ಥವು ಲೇಸಾಗಿ ತಿಳಿಯದೆ ಘಾಶಿಪಡುವಿ ವ್ಯರ್ಥ 8 ಈಶನು ನೀನಾದರೇನು ಸರ್ವ ದೇಶ ಪೋಷಿಸದೆ ಇಪ್ಪೋರೆ ನಿನ್ನ ಸಾ ಹಸ ವ್ಯರ್ಥ ಮಾಡೋರೆ ಹರಿ ದಾಸರು ಕಂಡು ಸಹಿಸೋರೆ ||ಆಹಾ || ಸತಿ ಸುತರು ಕ್ಲೇಶ ಪಡುವುದು ಬಿಡಿಸಲಾರಿಯೊ ಲೇಶ 9 ಗುರುದೈವವಿಲ್ಲವೊ ನಿನಗೆ ಒಬ್ಬ ಸರಿಯಿಲ್ಲ ಈ ಧರೆಯೊಳಗೆ ಯಾರು ಹಿರಿಯ ಕಿರಿಯರಿಲ್ಲ ನಿನಗೆ ನೀನು ಖರ ಶಬ್ದಕಿಂತ ಹೊರಗೆ ||ಆಹಾ || ಎರಡಿಲ್ಲಾಯೆಂಬೊದೆ ಇರುಳಿಲ್ಲ ಹಗಲಿಲ್ಲಾ ನರಕ ಸ್ವರ್ಗ ವಂದೇ ಅರಿಯಾದೆ ಮುಳುಗುವಿ 10 ವಂದನೆ ನಿಂದ್ಯಗಳೊಂದೇ ನಿನಗೆ ಗಂಧ ದುರ್ಗಂಧವು ವಂದೇ ಕೆಟ್ಟ ಹಂದಿಯೆಲ್ಲ ನೀನು ವಂದೇ ನಿನ್ನ ಕೊಂದರೆ ದೋಷವಿಲ್ಲವೆಂಬೆ ||ಆಹಾ|| ಎಂದಿಗೂ ಈ ಮಾತು ನಿಂದಾವೆ ನಿನಗಿನ್ನು ಮುಂದಕ್ಕೆ ಬರಲಾರಿ ಮಂದಮತಿಯೆ ಖೋಡಿ11 ಜಗದೊಳಗೆ ನೀ ನಿಂತು ಇದು ಜಗವಲ್ಲವೆಂಬೋದಕ್ಕಿಂತು ನೋಡಿ ನಗುವರೋ ಅಶುದ್ಧ ಜಂತು ಜಿಂಹ್ವೆ ಬಿಗಿದು ಕೋಯಿಸುವ ಯಮನಿಂತು ||ಆಹಾ || ಹಗಲು ಇರುಳು ವಂದೆ ನಗುತ ನಗುತಾ ಕಂಡು ತೊಗಲು ದೇಹವು ನಿನ್ನದಗೆ ಮಾಡುವುದು ವ್ಯರ್ಥ 12 ಸ್ವಾಮಿ ನಿನಗೆ ಬ್ಯಾರಿಲ್ಲಾ ನಿತ್ಯ ನೇಮ ಕರ್ಮವು ಬ್ಯಾರೆ ಸಲ್ಲ ಒಂದು ಕಾಮಿನಿ ನಿನಗೆ ಬೇಕಲ್ಲ ಪೂರ್ಣ ಕಾಮನು ನೀನೆಂಬೆಯಲ್ಲಾ ||ಆಹಾ|| ಗ್ರಾಮ ಭೂಮಿಗಳ್ಯಾಕೊ ತಾಮಸ ನಿನಗಿನ್ನು ತಾಮಸರಿಗೆಲ್ಲ ಸ್ವಾಮಿಯಾಗಿರು ಹೋಗೋ 13 ಕಾಣದೆ ಬಗಳುವೆ ಮಾಯಿ ನಾಯಿ ನಿನಗೆ ತಂದೆ ತಾಯಿ ಇನ್ನು ಕಾಣುತ ಬೊಗಳೋದು ನಾಯಿ ಈ ನಾಯಿ ಕಚ್ಚಿ ನೀ ಸಾಯಿ ||ಆಹಾ || ಬಾಯ ಮುರಿವಾ ನಿನ್ನ ನ್ಯಾಯದಿಂದಲಿ ವಾಯು ಕಾಯ ಖಂಡ್ರಿಸುವನೊ 14 ಇಷ್ಟು ಹೇಳಿದರೆ ನೀ ಕೇಳಿ ನೀ ವ್ಯರ್ಥ ನಿಷ್ಠುರಾಡಿ ನೀ ಬಾಳೀ ನಿನ್ನ ಕಟ್ಟಿಗೆ ಮುರಿದಂತೆ ಶೀಳಿ ಬಾಯ ಕುಟ್ಟಿ ತುಂಬುವ ಯಮಧೂಳಿ ||ಆಹಾ|| ಸೃಷ್ಟಿಗೊಡಿಯ ನಮ್ಮ ವಿಜಯವಿಠ್ಠಲನ ಮುಟ್ಟಿ ಭಜಿಸದಲೆ ಭ್ರಷ್ಟ ಮನುಜ ನೀ ಅಷ್ಟವೆಂದೆಂಬೋದು ಬ್ಯಾಡವೊ 15
--------------
ವಿಜಯದಾಸ
ಮೃಡ ನೀನಾದೆನಡುವೆ ಜಡನಾದೆನ್ನ ಮೃಡನ ಮಾಡಯ್ಯ 1ತನುವೆರಡರೊಳಗಿರುವ ತತ್ವ ಗಣವೆನಿಸುವದುತನುಗಣಕೆ ನೀ ಸ್ವಾ'ುಯಾಗಿರಲು ಬಳಿಕಜನರೆಲ್ಲ ನಿನ್ನಡಿಯ ತನು'ನಲಿ 'ಘ್ನಗಳಕೊನೆಗಂಡು ಮನದಭೀಷ್ಟವ ಪಡೆಯುತಿಹರು 2'ಘ್ನೇಶನೆಂಬೊಂದು ಪದಕೆ ವರ್ಣತ್ರಯವು'ಘ್ನವೆಂಬೆರಡು ವರ್ಣದಿ ಜ್ಞಾನವೊಂದು'ಘ್ನಹತಿಯದಕೀಶ 'ಘ್ನೇಶ ನೀನೆ ನಿರ್'ಘ್ನದಿಂ ಜ್ಞಾನವನು ಕೊನೆಗಾಣಿಸಯ್ಯ 3ಮೊದಲ ವರ್ಣವೆ ಸಾಕ್ಷಿಯದರ ಕಡೆಯದು ಮಾಯೆುದಕೊಡೆಯನೆನುತಿಹುದು ಮೂರನೆಯ ವರ್ಣಅದರಿಂದ ಕರಣಪ್ರೇರಕನೆಂಬ ಹದನಾಗಿವೊದಗಿದುದು 'ಘ್ನೇಶನೆಂಬ ನಿನ್ನ ನಾಮ 4ಪರಮಾತ್ಮ ನೀನೆಂದು ನೆರೆ ತಿಳಿದು ನಿನ್ನಡಿಗೆಎರಗಿದೆನು ವ್ಯವಹಾರ ದೆಸೆುಂದಲೀಗತಿರುಪತಿಯ ವೆಂಕಟನೆ ವರದ ಗಣಪತಿಯೆಂದುಮೆರೆಯುತಿಹೆ ರಾಮೇಶನಾಲಯಾವಾಸ 5
--------------
ತಿಮ್ಮಪ್ಪದಾಸರು
ರುದ್ರದೇವರು ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ-ಧವನ ತೋರಿಸಯ್ಯ ಗುರುಕುಲೋತ್ತುಂಗಪ. ಅರ್ಚಿಸಿದವರಿಗಭೀಷ್ಟವ ಕೊಡುವಹೆಚ್ಚಿನ ಅಘಗಳ ಬೇಗನೆ ತರಿವದುಶ್ಚರಿತರನ್ನೆಲ್ಲ ದೂರದಲ್ಲಿಡುವ ನ-ಮ್ಮಚ್ಚುತಗಲ್ಲದ ಅಸುರರ ಬಡಿವ 1 ಮಾರನ ಗೆದ್ದ ಮನೋಹರಮೂರ್ತಿಸಾರ ಸಜ್ಜನರಿಗೆ ಸುರ ಚಕ್ರವರ್ತಿ ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ 2 ಚೆನ್ನ ಪ್ರಸನ್ನ ಶ್ರೀ ಹಯವದನನ್ನಅನುದಿನ ನೆನೆವಂತೆ ಮಾಡೊ ನೀ ಎನ್ನಅನ್ಯರನರಿಯೆನೊ ಗುರುವೆಂಬೆ ನಿನ್ನಇನ್ನಾದರು ಹರಿಯ ತೋರೊ ಮುಕ್ಕಣ್ಣ 3
--------------
ವಾದಿರಾಜ
ಶ್ರೀ ಲಕ್ಷ್ಮೀ ದೇವಿಯರು ಕಾಯೆ_ಕಾಯೆ _ ಶ್ರೀ ಹರಿಜಾಯೆ ಪ ಕಾಯೆ ಕಾಯೆ ಸಂತೋಷವೀಯೆ ಮೂರು ಜಗ ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ ನಿಗಮತತಿಗೇಯೆ ಮಾಯೆ ಅ.ಪ. ಶರಣು-ಶರಣು-ಶರಣು ಗುಣಭರಣಿ ಭವ ತರಣೀ ಶರಣು ತ್ರಿಗುಣ ಧಣಿ ಶರಣು ಸೊಬಗು ಖಣಿ ಶರಣು ನಿಗಮಧ್ವನಿ ಮಣಿ ಸಿರಿ 1 ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ- ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ ವಿಧಿ ಯಿಂಬೆ ತ್ರಿಗುಣ ಹರಿ ಕೃತಿ 2 ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ ಶ್ರೇಣಿ ಪಂಕಜಪಾಣಿ ಭುಜಂಗ ಸು- ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ ಕಾಣಿ ನೀ ಬಹು ಜಾಣಿ ವಲಿದಿಹ ಹರಿ 3 ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ ವಿಧಿಗುರುವಮ್ಮ ಭುಜಿಸೊಸೆಯಮ್ಮ ಹರಿಗ್ಹೇಳಮ್ಮ ದಕ್ಷಣೆ 4 ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ ವಾಲೆ ಇಟ್ಟಹೆ ಬಾಲೇ, ಚಂಚಲ ಲೀಲೆ ನತಜನ ಪಾಲೆ ಖಳರೆದೆಶೂಲೆ ಹರಿಗಿಹೆಮಾಲೆ 5 ಹೇತು-ಹೇತು-ಕಾರ್ಯ ಕಾರಣ ನೀ ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ ಧೊರೆವಶಳಾಗಿ ಗಂಡನ ಭಜಿಪೆ 6 ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ ಸರಿಯಾರಿಲ್ಲ ಮುಕ್ತರಿಗೆಲ್ಲ ಒಡೆಯಳೆ ಚೆಲ್ವೆ ನೀ ಆಕಾಶೆ7 ನೀರೆ-ನೀರೆ-ಹರಿ ಸಮಾಸಮನೀರೆ ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ ಧೀರೆ ಹರಿಮನಸಾರೆ-ಪೊಗಳುವೆ ಬೇರೆ ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ 8 ಕಂದ-ಕಂದ-ನಾನಿಹೆ ನಿನ್ನ ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ ಕುಂದುಗಳಳಿಸೆ ತಂದೆಯ ತೋರೆ ಚೆಂದದ ಭಕುತಿ ಮುಂದಕೆ ತಂದೂ 9
--------------
ಕೃಷ್ಣವಿಠಲದಾಸರು
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು
ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವ ಚಿತ್ತ ವೃತ್ತಿಯು ನಿನಗೆ ಸರ್ವÀತ್ರದಿ ಪ ಉತ್ತಮೋತ್ತಮ ನೀನೆಗತಿ ಎಂ- ಉತ್ತರಿಸು ಭವಶರಧಿಯಲಿ ಎತ್ತಿ ಕಡೆಹಾಯಿಸುವುದೀಗಲೆ ಅ.ಪ ಜಗದಾಖ್ಯವೃಕ್ಷಕ್ಕೆ ಆದಿಕಾರಣನಾಗಿ ಜಗದೇಕವಂದ್ಯ ನೀನಾಧಾರನೋ ತ್ವಗಾದಿ ಜ್ಞಾನೇಂದ್ರಿಯಗಳೆಂಬೀ ಐದು ಬಿಳಲುಗಳೂ ಪಡೂರ್ಮಿಗಳೂ ಮೇಧ ಹೊದಿಕೆಗಳು ಪಂ ಮನ ಅಹಂಕಾರವೆಂದು ಪೊಟ್ಟರೆಗಳು 1 ಪ್ರಾಣಾದಿಪಂಚಕವು ಕೂರ್ಮ ಕೃಕಳಾದಿ ಪಂಚವಾಯುಗಳು ಪರ್ಣಗಳು ಹತ್ತೆನಿಸಿ ವೃಕ್ಷಕೆ ದುಃಖ ಸುಖವೆಂಬೆರಡು ಮೋಕ್ಷಗಳೆಂಬÉೂ ರಸಗಳು ಪಕ್ಷಿಗಳು ವಿಹರಿಸುತಲಿಹವು ಕರ್ಮಫÀಲವನು ಕಟಾಕ್ಷವಿಲ್ಲದೆ 2 ಅಡಿ ಮೇಲಾಗಿಹ ಗಿಡದೊಡೆಯ ನೀ ಗಿಡದೊಳು ಅಡಿಗಡಿಗೆ ಜೀವರೊಡಗೂಡಿ ಬಂದವರನು ನಿನ್ನೊಡಗೂಡಿ ಒಂದೇ- ಕಡೆಯಾಡುತಿಹ ಬಡಜೀವಿ ನಾನಯ್ಯ ಪಡೆದ ಫಲವದು ಬೆಂಬಿಡದೆ ಭೋಗಕೆ ಬರುತಲಿಹುದಯ್ಯ ಬಡಿದು ಉಣಿಸುವೆಯೊ ಬಿಡದಿರುವೆ ಎನ್ನೊಡೆಯಾ ಒಡೆಯ ನಿನ್ನೆದುರಿನಲಿ ನಾ ಪರಿಹರಿಸಿ ರಕ್ಷಿಸೊ ಮೃಡನುತ ಶ್ರೀ ವೇಂಕಟೇಶಾ 3
--------------
ಉರಗಾದ್ರಿವಾಸವಿಠಲದಾಸರು
ಹರಿಯೆ ನಿನ್ನದ್ಭುತ ಚರಿಯವನರಿವುದು ವರಗುರಿಯಿಂದಹರೆ ಕರುಣಿಸೆನ್ನೊಳು ದೊರೆಯೆ ಪ. ನಾನಾ ಯೋನಿಗಳಲ್ಲಿ ಪೋಗುವ ಸೂನುಗಳಿಂತು ಮಾಳ್ಪ ಶಿವ ಭಾನು ನಾಮಗಳಿಂದಲಿ ಸಾನುರಾಗದಿ ಕೊಂಡು ಸಕಲಪಿತರುಗಳಿಗಾನಂದ ಪಾಲಿಸುವಿ 1 ಬುದ್ಧಿಪೂರ್ವಕವಾಗಿ ಮಾಡುವ ಕರ್ಮವ ಶುದ್ಧಭಾವಗಳಿಂದಲಿ ತದ್ದಿನ ಕಾಲದಿ ನಡೆಸುತ ತಾನೆಂಬ ಬದ್ಧಹಂಕೃತಿ ತಾಳದೆ ವಾಸುದೇವ ನೀನುದ್ಧರಿಸೆನ್ನನುತ ತಿದ್ದಿ ಸಮರ್ಪಣೆ ಗೈದವರೆಲ್ಲ ಸರಿ ಶುದ್ಧ ಮಾಡುವ ವಿತತ 2 ಈ ವಿಧದಲಿ ಕರ್ಮಕೋವಿದರಾಡಿದ ಭಾವವೆ ನಿಜವೆನ್ನುತ ಸಾವಧಾನದಿ ನಿನ್ನ ಪಾದಕಂಜವೆ ಭವನಾವೆವೆಂಬೆನು ಸತತ ಶ್ರೀವರ ಶೇಷಾದ್ರಿ ಶಿಖರಾದ್ರಿವಾಸ ಪರಾಪರಗಣ ವಿನುತ ಕಾವಾತ ನೀನೆ ಕರ್ಮಗಳ ಕುಂದುಗಳಿಂದ ಪಾವನಾತ್ಮಕ ಸ್ವರತ 3
--------------
ತುಪಾಕಿ ವೆಂಕಟರಮಣಾಚಾರ್ಯ
ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮಕನೆಂದೆಂಬೆವೀಣಾಸ್ವರ ಕೇಳಲು ದುರ್ಗುಣವುಡಗಿ ಪೋಗುವುವು ಎಂದೆಂಬೆಪನಾದಬ್ರಹ್ಮವನಾಲಿಸುತಿಹನನು ನರನಲ್ಲವು ನಾನೆಂಬೆನಾದಬ್ರಹ್ಮವನಾಲಿಸುತಿರಲಿಕೆ ನಾನಾಗುಣವು ಲಯವೆಂಬೆ1ಘಂಟಾ ಸ್ವರವನು ಕೇಳುತ ಸುಖವನು ಅನುಭವಿಸುವನ ಗುರುವೆಂಬೆಘಂಟಾಘೋಷದಿಜನನ ಮರಣವು ಮುಳುಗಿಹವು ಎಂದೆಂಬೆ2ಭೇರಿನಾದವ ಕೇಳುತಲಿರುವನ ಭಾಗ್ಯವಂತನು ಎಂಬೆಧೀರ ಚಿದಾನಂದ ಸದ್ಗುರುನಾದದಿ ಲಯವಿಹನು ಎಂದೆಂಬೆ3
--------------
ಚಿದಾನಂದ ಅವಧೂತರು