ಒಟ್ಟು 28 ಕಡೆಗಳಲ್ಲಿ , 15 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರಯತಿಗಳು ಗುರುರಾಯರ ನಂಬಿರೋ ರಾಘವೇಂದ್ರ ಗುರುರಾಯರ ನಂಬಿರೋ ಜಗದೊಳು ಪ. ಗುರುರಾಯರ ನಂಬಿ ವರಗಳ ಬೇಡಿರೊ ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ 1 ಆದಿ ಪ್ರಹ್ಲಾದರು ಮೋದದಿ ಹರಿಪದ ಆದರದಿಂದ ಜಗಕೆ ಸಾಧಿಸಿ ಬೀರಿದರೊ 2 ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ ಗತಪುರುಷೋತ್ತಮ ಗುಹ ಪಥದೊಳಗಿಪ್ಪರ 3 ತೃತೀಯ ರಾಘವೇಂದ್ರ ಪತಿತ ಪಾವನ ನಾಮ ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ ಬೇಗ 4 ಭೂತ ಪ್ರೇತಗಳ ಪ್ರೀತಿಯೊಳಳಿದು ಶ್ವೇತ ಕುಷ್ಠಗಳ ದೂರ ಮಾಳ್ಪವರ 5 ಪಾದ ಪಂಕಜ ದುರಿತ ದೂರ ಶ್ರೀ ಶ್ರೀನಿವಾಸನ ಭಜಿಪ ಗುರು 6
--------------
ಸರಸ್ವತಿ ಬಾಯಿ
ರಾಘವೇಂದ್ರರ ಸ್ತೋತ್ರ ಬಂದರಾ ರಾಘವೇಂದ್ರರಾಯರು ಮಂತ್ರ ಮಂದಿರ ವೆಂಬೀ ಸ್ಥಳಕೆ ವಿಭವದಿ ಪ ಇಂದು ಭಜಕ ದ್ವಿಜ ವೃಂದಕೆ ಪರಮಾ ನಂದ ಗರಿಯಲು ಶ್ಯಂದನವೇರಿ ಅ.ಪ ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ ಸಂದಣಿಸಿತು ಆನಂದದಿ ನೋಡುತಲಿ ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು- ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ ಬಂಧವ ಬಿಡಿಸಲು 1 ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು ಪಿಡಿದು ಸೇವಿಸುವ ಎಡಬಲದಲಿ ಸುಜನಾ ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ ಕಡು ವೈಭವದಲಿ 2 ಮಣಿ ಮುಕುಟ ದಿಂದ ದಿ- ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ- ಪೊಳೆಯುತ ಭಜಕರ ಕ- ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3 ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ- ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ ಪಾಲಿಸುವ ದೇವ ಸ್ವಭಾವ ಶರಣ ಸಂಜೀವ ಕರದಲ್ಲಿಗೆ ಬರುವ ಎನ್ನುತ ತುತಿಪರು ದೃಗ್ಭಾಷ್ಪವ ಸುರಿಸುತ ಮೈಮರೆಯುತ ಬಲು ನಿರ್ಮಲ ಅಂತರಂಗದಿತವ ಪದಂಗಳ ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4 ಪುರದರಸನು ತನ್ನ ಸಿರಿಪರಿವಾರದಲಿ ಚರಿಸುತ ಬರುತ ಕಾಣುತಲೆ ಗುರುವರ ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ ಗುರು ಪ್ರಹ್ಲಾದರು 5
--------------
ಕಾರ್ಪರ ನರಹರಿದಾಸರು
ವೃಂದಾವನ ಪ್ರವೇಶಿಸಿದಂದವ ಚಂದದಿ ಪೇಳುವೆ ಪಾಲಿಪುದು ಪ ಇಂದಿರೆಯರಸನ ಪ್ರೇರಣೆಯಿಂದ ಯತಿ ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ ಒಂದು ದಿನವು ಶ್ರೀ ರಾಯರು ಶಿಷ್ಯರ ವೃಂದಕೆ ಪಾಠವ ಹೇಳುತಿರೆ ಅಂದು ವಿಮಾನದಿ ಕೃಷ್ಣದ್ವೈಪಾಯನ ಪ ರಂಧಾಮಕೈದಲು ನೋಡಿ ಕೈ ಮುಗಿದು 1 ಎಷ್ಟು ದಿನವು ನಾವಿಲ್ಲಿರಬೇಕೆಂದು ಶಿಷ್ಟ ಗುರುವರರು ಕೇಳಿದೊಡೆ ಕೃಷ್ಣದ್ವೈಪಾಯನರೆರಡು ಬೆಳಗುಳ ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು 2 ನೆರೆದ ಶಿಷ್ಯರದರರ್ಥವೇನೆನುತ ಗುರುಗಳನ್ನು ತಾವ್ ಕೇಳಿದೊಡೆ ಎರೆಡು ವರ್ಷ ತಿಂಗಳು ದಿನವೆರಡೆರಡು ಇರುವುದು ಧರೆಯೊಳಗೆಂದರು ರಾಯರು 3 ಆದವಾನಿಗೆ ಗುರು ಸಂಚಾರ ಪೋಗಿರೆ ಆ ದಿವಾನ ವೆಂಕಣ್ಣ ಬಲು ಆದರಿಸಿದ ಬಳಿ ತಾ ನವಾಬನಿಂದ ಮೋದದಿ ಕೊಡಿಸಿದ ಮಂಚಾಲೆಯನು 4 ಹಿಂದೆ ಪ್ರಹ್ಲಾದರು ಯಾಗವ ರಚಿಸಿದ ಸುಂದರ ಕ್ಷೇತ್ರವಿದೆಂಬುದನು ತಂದು ಮನಕೆ ಗುರುರಾಯರೀ ಕ್ಷೇತ್ರವ ನಂದು ಪಡೆದು ತಾವಿಲ್ಲಿಯೇ ನಿಂತರು 5 ಉತ್ತಮ ನೀಲವರ್ಣದ ಶಿಲೆಯಪಳಿರಿಸಿ ಕೆತ್ತಿಸಿ ವೃಂದಾವನತರಿಸಿ ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು 6 ವೃಂದಾವನದಲಿ ಸ್ಥಾಪಿಸಲೇಳ್ನೂರು ಚಂದದ ಸಾಲಿಗಾಮಗಳ ತಂದಿಟ್ಟರೆ ಸಿದ್ಧತೆಗಳು ಸಕಲವು ಕುಂದಿಲ್ಲದಂದೆ ನಡೆದಿರಲಾಗಲೆ 7 ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ ಸಂದಿಪ ವಿರಹದಿ ನೊಂದಿದ ಶಿಷ್ಯರ ವೃಂದವ ಬಲು ಸಂತೈಸಿದರಾಗಲೇ8 ನಲವತ್ತೇಳು ಸಂವತ್ಸರ ನಾಲ್ಕು ತಿಂ ಗಳು ಇಪ್ಪತ್ತೊಂಭತ್ತು ದಿನಕಾಲ ನಲವಿನಿಂದ ವೇದಾಂತ ಸಾಮ್ರಾಜ್ಯವ ಸಲಹಿ ಸುಕೀರ್ತಿಯ ಗಳಿಸಿದ ಬಳಿಕ 9 ಸಾವಿರದೈನೂರು ತೊಂಭತ್ಮೂರನೆ ಕ್ರತು ಸಂವತ್ಸರದ ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ ವಾಸರ ಮುಹೂರ್ತದಿ ಗುರುವರ 10 ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ ಹಸ್ತಲಾಘವವ ಸ್ವೀಕರಿಸಿ ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ ಅರ್ಥಿಯಲಿ ವೃಂದಾವನವ ಪ್ರವೇಶಿಸಿ 11 ಪದ್ಮಾಸನದಲಿ ಮಂಡಿಸಿ ಎದುರಲಿ ಮುದ್ದುಪ್ರಾಣೇಶನ ನೋಡುತಲಿ ಪದ್ಮನಾಭನ ಧ್ಯಾನದೊಳಿರೆ ಜಪಸರ ಬಿದ್ದು ಬಿಡಲು ಮುಚ್ಚಳಿಕೆಯನಿಡಲು 12 ನೆರೆದಿಹ ವಿಪ್ರರು ಜಯ ಜಯವೆನ್ನುತ ಪರಿಪರಿ ರಾಯರ ಪೊಗಳಿದರು ಕರಿಗಿರೀಶನ ಕರುಣ ಪಡೆದ ನಮ್ಮ ಗುರುಸಾರ್ವಭೌಮನ ಸರಿಯಾರಿಹರು 13
--------------
ವರಾವಾಣಿರಾಮರಾಯದಾಸರು
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ
ಸಕಲಕಾರ್ಯಾಂತರ್ಗತನಾಗಿ ಹರಿ ಭಕುತರ ಹೃದಯದಲಿ ನೆಲಸಿ ಭಕುತರ ಮನ ಬಂದಂತೆ ಕುಣಿಸೆ ಅವರನು ಹರಿ ಸಕಲಕಾಲದಲ್ಲೂ ಕಾದು ಕೊಂಡಿದ್ದು ಸಲಹುವ ಶ್ರೀ ಶ್ರೀನಿವಾಸ ಪ. ಯಾವಾಗ ಬರುವನೋ ಭಕ್ತರೆಡೆಗೆ ಹರಿ ಹರಿ ಆವಾಗಲಾಗಮಿಸುವುದೇ ಪರ್ವಕಾಲ ಹರಿಯ ಆವಾಗಲೇ ನೆನದು ಮಿಂದು ಧ್ಯಾನಿಸೆ ಆವಾಗಲೇ ಸಂಧ್ಯಾಸಕಲ ಕರ್ಮವ ನಡೆಸೆ ಯಾವಾಗಲೂ ಹರಿ ತಾ ತನ್ನ ಭಕ್ತರ ಕೈ ಬಿಡ ಯಾವ ಕಾಲದಲ್ಲೂ ಶ್ರೀ ಶ್ರೀನಿವಾಸ 1 ನಾನು ದೊಡ್ಡವ ನೀನು ದೊಡ್ಡವನೆಂದು ಹೊಡೆದಾಡದೇ ನಿಮಗೂ ನಮಗೂ ಮತ್ತೊಬ್ಬನಿಹನು ಹರಿ ನಿಮಗ್ಯಾತಕೀ ಛಲದ ವಾದ ಮನುಜರೇ ಅನುದಿನವೂ ನೆನೆಯಿರಿ ಶ್ರೀಹರಿ ಶ್ರೀ ಶ್ರೀನಿವಾಸನ್ನ ಸಕಲರಿಗೂ ದೊಡ್ಡವನವನೇ ಕೇಳಿ ಸಜ್ಜನರೇ 2 ಕಾಲ ಆ ಕಾಲವೆಂದಿಲ್ಲ ಹರಿಗೆ ತನ್ನ ಭಕ್ತರ ಸಾಕಲು ಈ ಸಮಯ ಆ ಸಮಯವೆಂದು ನೋಡನು ಹರಿ ಇಂಥಾ ಈ ಕರುಣದೊರೆಯೆಲ್ಲಾದರುಂಟೆ ಜಗದಿ ಈ ತನುವಿರುವ ತನಕ ಈ ಪರಮ ಪುರುಷನನು ಬೇಕಾದ ಕಾಲದಲಿ ಈ ಮನುಜ ಜಪಿಸುತಿರೆ ಕಮಲನಾಭ ಶ್ರೀ ಶ್ರೀನಿವಾಸ ಸಲಹದಿರನೇ ನಿನ್ನ ಆಪತ್ತಿಗಾಹ ಶ್ರೀಶ ಶ್ರೀ ವೆಂಕಟೇಶಾ 3 ಜಾಗರದಲೂ ಹರಿ ಕಾವ ನಿದ್ರೆಯಲೂ ಹರಿಕಾವ ಜಾಗರ ಸುಷುಪ್ತಿಯಲಿ ಹರಿ ಜಾಗರಮೂರುತಿ ನಿನ್ನ ಕಾವ ಜಾಗು ಮಾಡದೆ ಭಜಿಸು ಜಾನಕಿರಮಣ ಶ್ರೀ ರಾಮಚಂದ್ರನ್ನ ನಿತ್ಯ ಶ್ರೀ ಶ್ರೀನಿವಾಸನ್ನ ಮನವೆ 4 ಬುದ್ಧಿ ಬಂದಿದ್ದು ಅವನಿಂದ ಬುದ್ಧಿ ಅರಿವುದು ಅವನಿಂದ ಅಪ್ರಬುದ್ಧನಾಗದೇ ಬುದ್ಧಿ ಪೂರ್ವಕ ನೀ ನೆನೆದರೆ ಹರಿ ಬದ್ಧಕಂಕಣ ತೊಟ್ಟಿಹನು ಭಕ್ತರ ಕಾಯೆ ಆ ಶ್ರೀ ಶ್ರೀನಿವಾಸನ ಶುದ್ಧ ಮನದಿ ನೆನೆಮನವೆ 5 ವೈರಿ ಗೆಲ್ಲು ಮೊದಲು ನೀನವರ ವಶವಾಗದೆ ನಿನ್ನ ಮನ ಶುದ್ಧಮಾಡಿಕೊ ಮೊದಲು ನಿನ್ನ ಮನಸಿನಶ್ವಕ್ಕೆ ಬುದ್ಧಿಲಗಾಮು ಹಾಕು ನಿನ್ನ ಬುದ್ಧಿಯಲಿ ಮೊದಲನೆ ಕಾರ್ಯವಿದು ಎಂದರಿ ಈ ಮೊದಲು ನನಿಕಾರ್ಯ ನೋಡಿ ಶ್ರೀ ಶ್ರೀನಿವಾಸ ಒಲಿವ ನಿನಗೆಂದೆಂದು ಮನವೆ6 ಈ ತನವು ಈ ನುಡಿ ಈ ಕಾರ್ಯ ಈ ವಾರ್ತೆ ಈ ಕೃಪೆಯು ಶ್ರೀ ಶ್ರೀನಿವಾಸಗಲದೆ ಅನ್ಯತ್ರವಿಲ್ಲ ಹರಿ ಭಕ್ತರ ಸುಳಾದಿ ಭಕ್ತವತ್ಸಲ ಶ್ರೀ ಶ್ರೀನಿವಾಸಗರ್ಪಿತವೆಂದು ತಿಳಿ ಮನವೆ 7
--------------
ಸರಸ್ವತಿ ಬಾಯಿ
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
ಹರಿಯೇಕಾಯೋ ಶರಧಿಶಯನನೇ ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ ಪ ಬಿರುದ ಧರಿಸಿ ಮೆರೆಯವೆ ನೀ ಧರೆಯೊಳು ಶುಭಚರಿತನೆ ಅ.ಪ ವರರುಕ್ಮಾಂಗದ ಪ್ರಹ್ಲಾದರು ದ್ರೌಪದಿ ವಿಭೀಷಣಶ- ಸಿರಿ ನಾಮದ ಮಹಿಮೆಯು 1 ಬುದ್ಧಿವಂತರೆಲ್ಲ ಮನವ ತಿದ್ದಿಕೊಳುತಲಹರ್ನಿಶಿಯಲಿ ವುದ್ಧವಪ್ರಿಯ ನಿನ್ನಪಾದ ಪದ್ಮಮಧುಪರೆನಿಪರು 2 ಗಹನವಳವಡುವಡಲ್ಲವು ಮಹಿಯೊಳು ಪಾಮರರಿಗೆ 3 ಪರ ಸುಖವನು ತಾವ್ಕೋರದೆ ಸದ್ಭಕುತಿಯಿಂದ ಸೇವಿಪರು 4 ಹೊರಳಿ ಹೊರಳಿ ನೋಯ್ವರು ಶ್ರೀ ಗುರುರಾಮ ವಿಠಲನೇ 5
--------------
ಗುರುರಾಮವಿಠಲ
139-4ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಗುರುಗಳು ಏಕಾಂತದಲ್ಲಿ ಇತ್ತ ಉಪದೇಶಮರೆಯದೇ ಅನುಸರಿಸಿ ಭೀಮರತಿಯನ್ನುಸೇರಿ ವಿಹಿತದಿ ಸಂಕಲ್ಪಾದಿಗಳ ಮಾಡಿನೀರಲ್ಲಿ ಇಳಿದರು ಶ್ರೀನಿವಾಸಾಚಾರ್ಯ 1ಸರ್ವ ಜಗತ್ಪಾಲ ಶ್ರೀ ಪಾಂಡುರಂಗವಿಠ್ಠಲನುಪ್ರವಾಹ ಸುಳಿಯಿಂದ ಬಡುಗಾತ್ರ ಭಕ್ತನ್ನಕಾಯ್ವುದಕೆ ಗಂಡಾ ಶಿಲಾ ನಿರ್ಮಿಸಿದ ಅಲ್ಲಿದೇವಗುರುಸ್ಮರಣೆಯಿಂ ಇಳಿದರಾಚಾರ್ಯ2ನರಸಿಂಹ ವಿಠ್ಠಲದಾಸರು ತಂದೆಯಗುರುಗಳು ಗೋಪಾಲ ವಿಠ್ಠಲ ದಾಸರಪರಮಗುರುಗಳುವಿಜಯವಿಠ್ಠಲ ದಾಸರಪುರಂದರದಾಸರಾಜರ ಸ್ಮರಿಸಿದರು3ತೀರ್ಥಾಭಿಮಾನಿಗಳ ಭಾರತೀಪತಿಯಪದುಮೆ ಪದ್ಮೇಶ ಫಂಡರಿ ನಾಥ ಹರಿಯಮೋದಚಿನ್ಮಯ ಜಗನ್ನಾಥನ ಸ್ಮರಿಸುತ್ತಉದಕಪ್ರವಾಹದೊಳು ತನುವ ಅದ್ದಿದರು4ಸೀನಪ್ಪ ಶ್ರೀನಿವಾಸ ಶ್ರೀನಿವಾಸಪ್ಪ ಈಶ್ರೀನಿವಾಸಾಚಾರ್ಯ ಒಂದು ಸಲ ಮುಳುಗೇಳೆತನುಗತ ಒಳ ಹೊರಗಿನಕಲುಷಕಳೆದವುಪುನಃ ಮುಳಗೇಳಲು ಸುಪವಿತ್ರರಾದರು 5ಪುನಃ ಮುಳುಗಿ ಎದ್ದು ಅ ಘ್ರ್ಯವ ಅರ್ಪಿಸಲುಇನನ ಮಂಡಲದಿ ವರವಾಯು ಅಧಿಷ್ಠಾನದಲಿಶ್ರೀ ನಾರಾಯಣ ಸರ್ವಜನ ಹಿತಕರನಆನಂದ ಚಿನ್ಮಾತ್ರ ವಪುಷನ್ನ ಸ್ಮರಿಸಿದರು 6ಋಕ್ಸಾಮ ವೇದಗಳಿಂದ ವಾಣೀವಾಯುಸುಖಪೂರ್ಣ ನಾರಾಯಣನ ಸ್ತುತಿಸುವರುಆಕಳಂಕ ಉನ್ನಾಮಸಾಮನಾಮ ಹೀಂಕಾರಶ್ರೀಕೃತಿಪತಿ ಪ್ರದ್ಯುಮ್ನಾದಿ ಸ್ವರೂಪ 7ಸಪ್ತಕಾಲದಿ ಸಪ್ತಸಾಮ ಪ್ರತಿಪಾದ್ಯನುಸಪ್ತಸ್ವರೂಪನು ಆದಿತ್ಯಾಂತಸ್ತಪ್ರದ್ಯುಮ್ನವಾಸುದೇವವರಾಹನಾರಾಯಣಅನಿರುದ್ಧ ನರಸಿಂಹ ಸಂಕರುಷಣ 8ಪರಮಗುರುವಿಜಯದಾಸಾರ್ಯರ ಪ್ರೇರಣೆಯಿಂದಗುರುಗಳು ಗೋಪಾಲದಾಸಾರ್ಯರುಅರುಪಿದಅನುಸಂಧಾನಕ್ರಮದಿಂದಲೇಗುರುತಮ ಸಮೀರನಲಿ ಹರಿಯ ಸ್ಮರಿಸಿದರು 9ಸೂರ್ಯನೊಳಿಪ್ಪಸಮೀರಅಧಿಷ್ಠಾನಸ್ಥಸೂರಿಜನ ಪ್ರಾಪ್ಯ ಋಕ್ ಸಾಮಾದಿಸ್ತುತ್ಯಸೂರ್ಯತೇಜಃ ಪುಂಜ ಸ್ಫೂರ್ತಿದ ಜಗತ್ಕರ್ತ ಶ್ರೀಶ್ರೀನಾರಾಯಣಗಘ್ರ್ಯ ಅರ್ಪಿಸಲು ಒಲಿದ 10ಝಗಝಗಿಪ ತೇಜಸ್ಸು ಶಿರೋಪಕಂಡರುಮೂಗಿನಿಂದೊಂದಡಿ ಶಿರದ ಮೇಲೆಜಗನ್ನಾಥವಿಠ್ಠಲ ಎಂದು ಪ್ರಜ್ವಲಿಸಿತುಹೇಗೆ ವರ್ಣಿಸುವೆ ಆ ಅದ್ಭುತ ದೃಶ್ಯ 11ಸರ್ವ ಜಗದ್ರಕ್ಷಕ ವಿಠ್ಠಲನು ತತ್ಕಾಲಪ್ರವಾಹವ ತಡೆಯಲು ನಿರ್ಮಿಸಿದ ಶಿಲೆಯುಪ್ರಜ್ವಲಿಪ ಈ ದಿವ್ಯ ಹರಿನಾಮ ಅಂಕಿತಕ್ಕೆಐವತ್ತು ಅಂಗುಲ ಹಿಂದೆ ನಿಂತಿತ್ತು 12ಕ್ಷಣಮಾತ್ರದೊಳಗೆ ಈತಟಿತ್ಕೋಟಿನಿಭಜ್ಯೋತಿಫಣೆಮುಂದೆ ನಿಂತಿತು ಆಗ ಆಚಾರ್ಯಚೆನ್ನಾಗಿ ನೋಡಿದರುಹರಿಇಚ್ಛಾಶಕ್ತಿಯಿಂಶ್ರೀನಿವಾಸವಿಜಯಗೋಪಾಲ ವಿಠ್ಠಲನ13ಶ್ರೀ ಶ್ರೀನಿವಾಸನೇವಿಜಯವಿಠ್ಠಲನಾಗಿಶ್ರೀ ಶ್ರೀನಿವಾಸ ಗೋಪಾಲ ವಿಠ್ಠಲನಾಗಿಶ್ರೀ ಶ್ರೀನಿವಾಸ ಶ್ರೀ ಜಗನ್ನಾಥ ವಿಠ್ಠಲನಾಗಿಶಿರಿ ಜಗನ್ನಾಥ ದಾಸಾರ್ಯರು ನೋಡಿದರು 14ಶ್ರೀ ಶ್ರೀನಿವಾಸನೆ ಪ್ರಸನ್ನನು ಆಗಿತೋರಿಹನು ಜಗನ್ನಾಥ ವಿಠಲನೆನಿಸಿತಿರುಪತಿ ಶ್ರೀನಿಧಿಯೇ ಪಂಡರಿ ವಿಠ್ಠಲನುಸೂತ್ರನೋಡಿ ನಸ್ಥಾನ ತೋಪಿ15ಶ್ರೀ ರುಕ್ಮಿಣೀಪತಿ ಪರಂಜ್ಯೋತಿ ಪರಂಬ್ರಹ್ಮಉರುಅಖಿಳಸಚ್ಛಕ್ತ ಜಗನ್ನಾಥ ವಿಠ್ಠಲಶಿರಿ ಜಗನ್ನಾಥದಾಸರ ಹೃದಯ ¥ದ್ಮದೊಳುಸೇರಿದನು ಜ್ವಲಿಸುತಿಹ ಸರ್ವೋತ್ತಮ ಅಲ್ಲಿ 16ಎಂಟುಅಕ್ಷರಮೂಲಮಂತ್ರದಿ ನಾರಾಯಣನವಿಠ್ಠಲ ಹಯಗ್ರೀವ ವೆಂಕಟೇಶಾದಿಷಡಕ್ಷರಿ ವಿಷ್ಣು ರಾಮ ಕೃಷ್ಣಾದಿಗಳಕ್ರೋಡನರಸಿಂಹಾದಿಗಳನು ಜಪಿಸಿದರು17ಗುರುಪರಮಗುರುಪೇಳ್ದ ರೀತಿಯಲಿ ಜಪಚರಿಸಿಶ್ರೀ ರುಕ್ಮಿಣಿ ವಿಠ್ಠಲ ಮಂದಿರಕೆ ಪೋಗಿಪುರಂದರಾರ್ಯರ ನಮಿಸಿಗುರುಪರಮಗುರುಗಳಸ್ಮರಿಸಿ ಒಳಪೊಕ್ಕರು ವಿಠ್ಠಲನ್ನ ನೋಡೆ 18ಶ್ರೀ ಮಧ್ವರಮಣ ನಿನ್ನ ಅದ್ವಿತೀಯ ಮಹಿಮೆಈ ಮಹೋತ್ತಮಕೃತಿಪುರಂದರದಾಸರದುಅಮಲ ಭಕ್ತಿಯಲ್ಲಿದನ್ನ ಅರ್ಥ ಅರಿತು ಪಠಿಸಿಶ್ರೀಮಂದಿರದೊಳು ಪ್ರವೇಶ ಮಾಡಿದರು 19ತ್ರಿಜಗದೀಶನಪಾದಪದ್ಮಗಳ ನೋಡುತ್ತನಿಜಭಕ್ತಿ ಭಾವದಲಿ ಸಾಷ್ಟಾಂಗ ನಮಿಸಿಅಜಭವೇಂದ್ರಾದಿ ಸುರವಂದ್ಯನ್ನ ಕೇಶಾದಿರಾಜೀವಪಾದಾಂತ ದರುಶನ ಮಾಡಿದರು20ಜ್ವಲಿಸುವ ಕಿರೀಟ ಸುಳಿಗುರುಗಳು ಫಣಿಯ ತಿಲಕಬಿಲ್ಲುವೋಲ್ ಸುಂದರ ಭ್ರೂ ಮುಖಕಮಲಜಲಜೇಕ್ಷಣ ಮುಗುಳುನಗೆಯು ತಟಿದಂದಿಪೊಳೆವ ಕುಂಡಲಕರ್ಣ ಕಂಬುಗ್ರೀವ 21ವನಮಾಲೆ ಎಳೆ ತುಳಸಿದಳ ಹಾರ ಕೊರಳಲ್ಲಿಘನಬಾಹು ವಿಸ್ತಾರವಕ್ಷ ಶ್ರೀವತ್ಸಸ್ವರ್ಣಮಣಿ ಗ್ರೈವೇಯಕೌಸ್ತುಭರತ್ನವುಕಣ್ಣಾರ ಕಾಣಲಾನಂದ ಸೌಂದರ್ಯ 22ಮೂರುಗೆರೆ ಉದರದಲಿವನರುಹನಾಭಿಯುಕರಗಳು ಕಟಿಯಲ್ಲಿ ಶಂಖಾರವಿಂದಪುರುಟಮಣಿ ಗಣಸೂತ್ರ ಪೀತಾಂಬರ ಉಡಿಸ್ಫುರದ್ರತ್ನ ನೂಪುರ ಸಮಪಾದದ್ವಯವು 23ತಟಿತ್ಕೋಟಿನಿಭ ತನ್ ಕಾಂತಿಯಲಿ ಜ್ವಲಿಸುವಸಾಟಿಯಿಲ್ಲದ ಸುಂದರಾಂಗ ಶ್ರೀರಮಣವಿಠ್ಠಲ ಕೃಪಾನಿಧಿ ಶರಣಜನ ಪಾಲನ್ನಹಾಡಿ ಸ್ತುತಿಸಿದರು ಜಗನ್ನಾಥ ದಾಸಾರ್ಯ 24ಫಣಿಪಶಾಯಿಯ ಅನಂತ ಪದ್ಮನಾಭನು ತನ್ನಆನಂದಲೀಲೆಯಲಿ ಜಗವ ಪಡೆಯುವನುಆನಂದಲೀಲೆಯಲಿ ಅವತಾರ ರೂಪಗಳತಾನೇ ಪ್ರಕಟಿಸಿ ಸಜ್ಜನರ ಪಾಲಿಸುವ 25ದೇಶಗುಣಕಾಲ ಅಪರಿಚ್ಛಿನ್ನನು ಅನಂತನುಶ್ರೀಶಸರ್ವೇಶ ಚಿನ್ಮಯನುಅನಘಐಶ್ವರ್ಯ ಪೂರ್ಣಜಗದೇಕ ಪಾಲಕನುಅಸಮ ಸರ್ವೋತ್ತಮನು ಸುಖಮಯನು ಸುಖದ 26ಮೀನಕೂರ್ಮಸ್ತ್ರೀ ಅಜಿತ ಧನ್ವಂತರಿಕ್ರೋಢಶ್ರೀನಾರಸಿಂಹ ವಟುಭೃಗು ರಾಮರಾಮಕೃಷ್ಣ ಜಿನಸುತ ಕಲ್ಕಿ ಠಲಕ ವೆಂಕಟರಮಣಆನಂದಚಿತ್ತನು ಅನಂತ ಅವತಾರ 27ದಾಸೋಹಂ ತವ ದಾಸೋಹಂ ಎಂದುದಾಸವರ್ಯರು ಬಿನ್ನೈಸಿ ಸ್ತುತಿಸಿದರುನಸುನಗುತ ವಾತ್ಸಲ್ಯದಿಂದ ವಿಠ್ಠಲನುವಿಶೇಷಾಪರೋಕ್ಷ ಅನುಗ್ರಹಿಸಿದನುದಯದಿ 28ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್ಕು ವಿದಿಕ್ಕುಗಳ ರಂಜಿಸುವರೂಪದಿಂದ ಪಾಲ್ಗಡಲಲಿ ಆವಿರ್ಭವಿಸಿದ ಶ್ರೀಇಂದಿರೆಯೆ ರುಕ್ಮಿಣಿ ಸೌಂದರ್ಯಪೂರ್ಣೆ 29ಮಾಯಾಜಯಾಕೃತಿಶಾಂತಿ ಸೀತಾಲಕ್ಷ್ಮಿತೋಯ ಜಾಲಯ ಚಿತ್ಪ್ರಕೃತಿ ಭೂದುರ್ಗಾತೋಜಯಾಕ್ಷಿವೇದವತಿದಕ್ಷಿಣಾ ಶ್ರೀಜಯಂತಿ ಸತ್ಯಾರುಕ್ಮಿಣಿ ಸುಂಧುಕನ್ಯಾ 30ಸರ್ವ ಜಗಜ್ಜನನಿಯು ಸರ್ವ ವಿಧದಲಿ ಹರಿಯಸೇವಿಸುತಿಹಳು ಸದಾ ನಿತ್ಯಾವಿಯೋಗಿನಿದೇವದೇವೋತ್ತಮ ರಾಜರಾಜೇಶ್ವರನು ವಿಠ್ಠಲನುದೇವಿ ಶ್ರೀ ರಾಜರಾಜೇಶ್ವರಿಯು ರುಕ್ಮಿಣಿಯು 31ಜ್ವಲಿಸುವ ಮುತ್ತು ನವರತ್ನದಿ ಕಿರೀಟಒಳ್ಳೆ ಪರಿಮಳ ಹೂವು ಮುಡಿದಂತ ತುರುವುಫಾಲದಲಿ ಶ್ರೇಷ್ಠತಮ ಕಸ್ತೂರಿ ತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬೊಟ್ಟು 32ಅಂಬುಜಾಕ್ಷಿ ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯದ ಕೃಪಾನೋಟಕಂಬುಕಂಠದಿ ಮಂಗಳಸೂತ್ರಕರಯುಗದಿಅಂಬುಜವರಕೊಡುವಅಭಯಹಸ್ತಗಳು33ಕಂಧರದಲಿ ಪರಿಮಳಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟೆವಸ್ತ್ರವು ಸ್ವರ್ಣಸರ್ವಾಭರಣ ಭೂಷಣವುಪಾದಉಂಗುರ ಪೆಂಡೆ ಕಂಡು ನಮಿಸಿದರು34ಜಗನ್ನಾಥ ವಿಠ್ಠಲನೂ ಜಗನ್ಮಾತೆ ರುಕ್ಮಿಣಿಯೂಜಗನ್ನಾಥದಾಸರಿಗೆ ಔತಣ ಮಾಡಿದ್ದುಜಗತ್ತಲ್ಲಿ ಭಕ್ತಜನರೆಲ್ಲ ಪೇಳ್ತಿಹರುಜಗದೀಶ ಪಂಢರೀ ವಿಠ್ಠಲನ ಮಹಿಮೆ 35ಕೇಶವ ನಾರಾಯಣಮಾಧವಗೋವಿಂದಶ್ರೀಶ ವಿಷ್ಣು ಮಧುಸೂದನ ತ್ರಿವಿಕ್ರಮಈಶ ವಾಮನ ಶ್ರೀಧರ ಹೃಷಿಕೇಶರಮೆಯರಸಪದ್ಮನಾಭದಾಮೋದರ36ಸಂಕರುಷಣ ವಾಸುದೆವ ಪ್ರದ್ಯುಮ್ನ ನಮೋಅಕಳಂಕ ಅನಿರುದ್ಧ ಪುರುಷೋತ್ತಮನಿಷ್ಕಳಅಧೋಕ್ಷಜನರಸಿಂಹಅಚ್ಯುತಶ್ರೀಕರ ಜನಾರ್ದನ ಉಪೇಂದ್ರ ಹರಿಕೃಷ್ಣ 37ರಮಾಪತಿ ರಮಾಯುತನು ಶ್ರೀಹರಿಯ ರೂಪಗಳಬ್ರಹ್ಮವಾಯು ವಾಣೀಭಾರತಿ ಉಮೇಶಉಮಾ ತತ್ವದೇವದಿಕ್ಪಾಲಕರು ಗಂಗಾಕರ್ಮಮಾನಿ ಪುಷ್ಕರಾದಿಗಳೊಳ್ ತಿಳಿದರು 38ಭೋಜನ ಪದಾರ್ಥದಲು ತದ್ಗತ ಶಬ್ದಂಗಳಲುಭೋಜ್ಯಗಳ ಬಡುಸುವರಲ್ಲೂ ಕ್ಷೇತ್ರದಲ್ಲೂಭೋಜಭಿಮಾನಿಗತ ಖಂಡಾಖಂಡಗನುಭಜನೀಯ ಸ್ಥೂಲಭುಕ್ ಅವ್ಯಯನ ಕಂಡರು 39ಕರುಣಾಬ್ಧಿ ಶ್ರೀ ಹರಿಯ ಔದಾರ್ಯ ಏನೆಂಬೆಶ್ರೀ ಶ್ರೀನಿವಾಸನು ಅಂದು ತಿರುಪತಿಯಲ್ಲಿಶಿರಿ ವಿಜಯಾರ್ಯರ ರೂಪದಿ ಪ್ರೇರಿಸಿಧಾರೆಯೆರಿಸಿದ ಆಯಸ್ ಗುರುಗಳ ಕೈಯಿಂದ 40ಶ್ರೀ ಶ್ರೀನಿವಾಸನ ಮಹಾದ್ವಾರಕೆದುರಾಗಿಹಾರೆ ಕಲ್ಲುಮಂಟಪ ಆಗ್ನೇಯ ದಿಕ್ಕುಎರಡನೆಯದೋ ಮೂರನೆಯದೋ ಅಂಕಣದ ಖೋಲಿಹರಿದಾಸರು ಇದ್ದ ಮುಖಾಮಿ ಬಿಡಾರ 41ಎಳೆಕೆಂಪು ರೋಜ ಊದಾವರ್ಣದಿ ಅಂಚುಬಿಳಿರೇಷ್ಮೆ ವಸ್ತ್ರವ ಮೇಲ್ ಹೊದ್ದುಕೊಂಡುಮಲಗಿ ಚಲಿಸದೆ ನಿತ್ರಾಣನಾಗಿದ್ದವಗೆಒಲಿದು ಆಯುರ್ದಾನ ಮಾಡಿಸಿದ ಕರುಣಿ 42ಗುರುಗಳು ಗೋಪಾಲದಾಸರ ರೂಪದಿಂದ ಬಂದುಶಿರಿವರನು ತಾನೇನೆ ಅನ್ನಪ್ರಸಾದಕರದಲ್ಲಿ ಇತ್ತನು ಅವನೇವೆಇಂದುಶಿರಿಸಹ ಅಮೃತಾನ್ನ ಔತಣವನ್ನಿತ್ತ 43ಶಿರಿಯ ವಾತ್ಸಲ್ಯ ದಯೆ ಏನೆಂದು ಪೇಳಲಿಚಾರುದೇಷ್ಣಾಹ್ವಯ ತನ್ನಸುತ ಈಗವರಗೋಪಾಲದಾಸರುಅವರಶಿಷ್ಯರಿವರೆಂದು ಪ್ರೀತಿಯಲಿ ಔತಣ ಮಾಡಿಹಳು 44ಈ ರೀತಿ ಹರಿಶಿರಿ ಇತ್ತ ಔತಣ ಮತ್ತುಹರಿಯ ಕೈಯಿಂದ ಹರಿಗರ್ಪಿತ ಮಾಲಾದಿಹರಿಪ್ರಸಾದವ ಕೊಂಡು ಫಂಡರಿಪುರದಿಂದಹೊರಡಲಾದರು ಜಗನ್ನಾಥದಾಸಾರ್ಯ 45ನರಸಿಂಹಾದಾಸಾರ್ಯರಾದ ತನ್ನ ತಂದೆಗೆಗುರುಗಳುಪುರಂದರದಾಸಾರ್ಯರೆಂದುಪರಮಗುರುವಿಜಯದಾಸಾರ್ಯರ ಗುರುಯೆಂದುಚರಣವಂದಿಸಿ ಹೊರಡೆ ಅಪ್ಪಣೆ ಕೊಂಡರು46ಪರಮಗುರು ವಿಜಯದಾಸಾರ್ಯರ ಸ್ಥಳಕೆಸ್ಮರಣೆ ಪೂರ್ವಕ ಮನಸಾ ಪೋಗಿ ಸನ್ನಮಿಸಿಗುರುಗಳಚರಣಆಕಾಂಕ್ಷಿಗಳು ತ್ವರಿತದಿಹೊರಟರು ಶ್ರೀ ಜಗನ್ನಾಥನ್ನ ಸ್ಮರಿಸುತ್ತ 47ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 48- ಇತಿ ಪಂಚಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಏನು ಕೌತಕ ಕೃಷ್ಣ ತಾನೆ ಕನಸಿನೊಳು |ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |ಮುಂದೆ ಅದರಂದವನು ಎಲ್ಲ ತಾಪೇಳ್ದ ||ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |ತಿಂದ ಮೀಸಲಕೊಡೆನು ಎಂದು ಹೇಳಿದೆನು 1ಮೋಸಹೋದೆನು ನಾನು ದೋಸೆಯನು ಹರಿಗೆ-ಆ-ಪೋಶನವನಿಕ್ಕದೇ ಪೋಷಿಸಿದೆನು ||ಮಿಸಲಾದರು ಅಹುದು ದೋಷವಿಲ್ಲೆಂದೆನುತ |ಆಸುರದ ಮಾತುಗಳ ವಾಸಿತೋರಿಸಿದನು 2ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4ಈ ಮಹಾಮೂರ್ತಿಯನು ಜಾವಪರ್ಯಂತರದಿ |ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||ಆ ಮಹಾ ಹರಿಯು ಪರಧಾಮವನು ಕೈಕೊಂಡು |ಭೂಮಿಪತಿಯಾಗಿರ್ದ ಪುರಂದರವಿಠಲ........................... 5
--------------
ಪುರಂದರದಾಸರು
ಬುತ್ತಿಯ ಕಟ್ಟೊ - ಮನುಜಾ ||ಬುತ್ತಿಯ ಕಟ್ಟೊ ಪ.ಬುತ್ತಿಯನ್ನು ಕಟ್ಟಿದರೆ |ಎತ್ತಲಾದರುಣ್ಣಬಹುದು ಅಪಧರ್ಮವೆಂಬ ಮಡಿಕೆಯಲ್ಲಿ |ನಿರ್ಮಲ ಗಂಗೆಯನುತುಂಬಿ ||ಸುಮ್ಮಾನದಿಂದಲಿ ಬೇಗ |ಒಮ್ಮನಕ್ಕಿಯ ಅನ್ನಬಾಗಿ 1ಅರಿವು ಎಂಬ ಅರಿವೆಯ ಹಾಸಿ |ಗರಿಮೆ ಹಾಲ - ಮೊಸರ ತಳಿದು ||ಪರಮವೈರಾಗ್ಯದಿಂದ |ಸಿರಿಹರಿಗರ್ಪಿತವೆಂದು 2ಕರ್ತು ಪುರಂದರವಿಠಲನ |ತತ್ತ್ವವೆಂಬ ಬುತ್ತಿಯನ್ನು ||ಹತ್ತಿರ ತಂದಿಟ್ಟುಕೊಂಡು |ನಿತ್ಯವುಂಡು ತೃಪ್ತಿಪಡೆಯೊ 3
--------------
ಪುರಂದರದಾಸರು
ಮಾಯೆಯನ್ನು ಗೆದ್ದೆನೆಂದು ಮುರುಕಿ ಮುರುಕಿ ಕಿರುಚುವಮೂರ್ಖನವನಮಂದಮತಿಯನೇನ ಹೇಳಲಿರಾಯರಾದ ಮೂರು ಮಂದಿ ಮೊರೆಯ ಹೊಕ್ಕಿಹರು ಬಗಳಮಾಯೆಯನ್ನು ಗೆದ್ದೆನೆನಲು ಲಜ್ಜೆಯಿಲ್ಲವೆಪಮೋಡದಾ ಮಿಂಚಿನಂತೆ ಮೋಹಕವೆ ಬೆಳಗುತಿರಲುಗೂಢವಿಹ ಮುನಿಯು ತಪಿಸಿ ಮುಳುಗಿಹೋದರುರೂಢಿಯಲ್ಲ ಮೋಹನದಿ ಮುಳುಗಿ ತೇಲಲು ಆ-ರೂಢ ಆರಕ್ಷಕರುದಯದಲಾದರು1ತಾನದಾರು ತಾನದೆಲ್ಲಿ ತನ್ನ ಸ್ಥಳವು ಎತ್ತಲುತಾನು ನಾನು ಎಂಬುದಕ್ಕೆಠಾವುಇಲ್ಲವುತಾನು ಗೆದ್ದೆ ಗೆದ್ದೆನೆಂದು ಹೇಳಿಯಾಡೆಏನು ರೂಪು ನಾಮಕ್ರಿಯೆ ಜೀವ ಶಿವರು ಮಾಯೆಯು2ತಾನೆ ಸಾಕ್ಷಿಯಾಗಿ ಪ್ರಪಂಚ ನಾಶವಾಗಿಏನೇನುವಾಸನೆಹುಟ್ಟದಾಗಿಯುತಾನು ಜಗವು ಸರ್ವವಾಗಿ ಸರ್ವಜಗವುತಾನೆಯಾಗಿ ತಾನೆ ಚಿದಾನಂದ ಬಗಳೆ ತಾನಾದರಲ್ಲದೆ3
--------------
ಚಿದಾನಂದ ಅವಧೂತರು