ಒಟ್ಟು 154 ಕಡೆಗಳಲ್ಲಿ , 5 ದಾಸರು , 139 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಸುಖವ ಕೃಷ್ಣನ ನೋಡಿನೋಡಿಸುಖಿಸುವ ಜನರು ಎಷ್ಷು ಎಷ್ಟು ಭಾಗ್ಯದಿಂದ ತುಷ್ಟರು ಉತ್ಕøಷ್ಟರಿವÀರು ಪ. ಬಾಜಾರದೊಳಗೆಲ್ಲ ತೇಜಿ ಆನೆಯ ಸಾಲುಕಾಜಿನ ಕಂಬ ಕಿಡಕಿ ಕಮಲಾಕ್ಷಿಕಾಜಿನ ಕಂಬ ಕಿಡಕಿ ಮಹಲೊಳು ಜೂಜಾಡುವರು ಕಡೆಯಿಲ್ಲ 1 ನೀಟಾದ ಬೀದೀಲಿ ಥಾಟಾದ ಮನೆಗಳುಮಾಟಾದ ಪಗಡಿ ಚದುರಂಗ ಕಮಲಾಕ್ಷಿಮಾಟಾದ ಪಗಡಿ ಚದುರಂಗ ಜೂಜಿನ ಆಟ ಆಡೋರು ಕಡೆಯಿಲ್ಲ2 ಹಿಂಡು ಕಡೆಯಿಲ್ಲ 3 ಲಿಂಬೆ ಪೊಪ್ಪುಳಿ ಸೀರೆಯನ್ನುಟ್ಟು ತುಂಬ ವಸ್ತ್ರಗಳಿಟ್ಟುಕಂಬು ಕಂದರನ ಪುರದೊಳು ಕಮಲಾಕ್ಷಿಕಂಬುಕಂದರನ ಪುರದ ಬೀದಿಯೊಳಗೆಗೊಂಬೆ ಯಾಡುವರು ಕಡೆಯಿಲ್ಲ 4 ಮ್ಯಾಲಿನ ಬೀದೀಲಿ ಬಾಲಕಿಯರಿಂದೆಷ್ಟುಶ್ರೀಲೋಲ ರಾಮೇಶನ ಪುರದೊಳಗೆ ಕಮಲಾಕ್ಷಿಶ್ರೀಲೋಲ ರಾಮೇಶನ ಪುರದ ಬೀದಿಯೊಳಗೆ ಗೋಲಿಯಾಡುವರು ಕಡೆಯಿಲ್ಲ 5
--------------
ಗಲಗಲಿಅವ್ವನವರು
ಏಳು ಲೋಕದಲಿ ಹೇಳುವರು ಅವರಕೀರ್ತಿಕೇಳಿ ಕೇಳಿ ಬಲ್ಲೆವಮ್ಮ ದೂತೆ ಬಹಳ ಬಹಳ ಭಾಗ್ಯವೇನೆ ದೂತೆ ಹೇಳಲ್ವಶವಲ್ಲವೇನೆ ದೂತೆ ಪ. ಕೃಷ್ಣನಂಘ್ರಿ ಕಮಲದಲೆ ನಿಷ್ಠನಾಗಿ ಧರ್ಮರಾಯ ಅಷ್ಟು ರಾಜ್ಯನಾಳುವನೇನ ದೂತೆ 1 ದಿಟ್ಟ ಧರ್ಮರಾಯ ದ್ರವ್ಯ ಶ್ರೇಷ್ಟ ದ್ವಿಜರಿಗೆ ಕೋಟಿಕೊಟ್ಟು ಕೊಟ್ಟು ಕಳಿಸೋನೇನೆ ದೂತೆ 2 ಮಾಧವನ ಭಕ್ತರಿಗೆ ಆದರದಿ ದ್ರವ್ಯ ಸಹಿತಗೋದಾನಗಳು ಕೊಡುವೊನೇನೆ ದೂತೆ 3 ನೀಲವರ್ಣನ ಭಕ್ತರಿಗೆ ಸಾಲಿಗ್ರಾಮ ಕೋಟಿ ಲಕ್ಷಮ್ಯಾಲೆ ದ್ರವ್ಯ ಕೊಡುವೋನೇನೆ ದೂತೆ 4 ಶ್ಯಾಮವರ್ಣನ ಭಕ್ತರಿಗೆ ಪ್ರೇಮದಿಂದ ದ್ರವ್ಯ ಸಹಿತ ಭೂಮಿದಾನ ಕೊಡುವೊನೇನೆ ದೂತೆ5 ಪನ್ನಂಗಶಯನನ ಭಕ್ತರ ಮನ್ನಿಸಿ ದ್ರವ್ಯಗಳಿಂದ ಕನ್ಯಾದಾನ ಮಾಡೋನೇನೆ ದೂತೆ 6 ಉತ್ತಮ ದ್ವಿಜರಿಗೆ ರಾಯ ಮುತ್ತು ಮಾಣಿಕರತ್ನ ಸಹಿತಛತ್ರ ಚಾಮರ ಕೊಡುವೋನೇನೆ ದೂತೆ 7 ಆನೆ ಕುದುರೆ ಅಂದಣವು ನಾನಾ ಭೂಷಣಗಳು ವಸ್ತ್ರಜ್ಞಾನಿಗಳಿಗೆ ಕೊಡುವೊನೇನೆ ದೂತೆ 8 ಸಂಪತ್ತು ದ್ವಿಜರಿಗೆ ಕೊಟ್ಟು ದಂಪತ್ತು ಪೂಜೆಗಳ ಮಾಡಿಗುಂಪು ಗುಂಪು ಕಳುಹೋನೇನೆ ದೂತೆ 9 ಮಿತಿ ಇಲ್ಲದೆ ಅನ್ನ ಮಧ್ವಮತದ ಜನಕೆ ಕೊಟ್ಟುಲಕ್ಷ್ಮೀಪತಿಗೆ ಅರ್ಪಿಸುವನೇನೆ ದೂತೆ 10 ಯದುಪತಿಯ ಭಕ್ತರಿಗೆ ಉದಕ ಪಾತ್ರೆ ಕೊಟ್ಟುರಾಯ ಅಧಿಕ ಕೀರ್ತಿ ಪಡೆಯುವನೇನೆ ದೂತೆ11 ತುಷ್ಟರಾಗಿ ಆಶೀರ್ವಾದ ಕೊಟ್ಟುರಾಯಗೆ ದ್ವಿಜರು ಕೃಷ್ಣಗರ್ಪಿಸೆಂಬೋರೇನೆ ದೂತೆ 12 ರತಿ ಇಟ್ಟು ರಾಮೇಶನಲ್ಲೆ ವ್ರತವ ಕೋಟಿ ಮಾಡಿರಾಯಕೃತ ಕೃತ್ಯನಾಗುವನೇನ ದೂತೆ13
--------------
ಗಲಗಲಿಅವ್ವನವರು
ಒಂದು ಮಾತ ನಾಡೋಣು ಬಾರೆ ನಗುತಲಿಮಾತನಾಡೋಣು ಬಾರೆ ಪ್ರೀತಿ ಹರುಷದಿಂದ ನೀತಿಯಿಂದ ನಲಿದಾಡುತ ಪ. ನೀಲ ನೀಲ ಮಾಣಿಕದ ಸರಗಳು ಸರಗಿಯನಿಟ್ಟುಬಾಲೆಯರು ಭಾಳೆ ಹರುಷದಿ1 ಸೂರ್ಯರಾಗದ ಸೀರೆ ಸಾಲೆವಲಿಯ ಕುಪ್ಪುಸ ತೋರ ಮಾಣಿಕದ ನೆನಿದಂಡೆ ತೋರ ಮಾಣಿಕದ ನೆನಿದಂಡೆ ತಂದೇವ ನಾರಿರುಕ್ಮಿಣಿಯೆ ಉಡುಬಾರೆ2 ಉದಯರಾಗದ ಸೀರೆ ಪದುಮರಾಗದ ಕುಪ್ಪಸ ಪದುಮದ್ಹೂವಿನ ನೆನೆದಂಡೆಪದುಮದ್ಹೂವಿನ ನೆನೆದಂಡೆ ತಂದೇವ ಪದುಮಾಕ್ಷಿ ಭಾವೆ ಉಡುಬಾರೆ 3 ತುರಗ ತಾಪತಿ ಭೇರಿ ಬಿರುದಿನ ಹೆಗ್ಗಾಳೆಬರಿಯ ಮಾಣಿಕದ ರಥಗಳುಬರಿಯ ಮಾಣಿಕದ ರಥಗಳು ಅಂಬಾರಿ ಆನೆಹಿರಿಯ ರುಕ್ಮಿಣಿಗೆ ಉಚಿತವ 4 ಛsÀತ್ರ ಚಾಮರ ದಿವ್ಯ ಮುತ್ತಿನ ಪಲ್ಲಕ್ಕಿಉತ್ತಮ ರಥವು ಹಿಡಿದೇಜಿಉತ್ತಮ ರಥವು ಹಿಡಿದೇಜಿ ರಾಮೇಶನ ಮಿತ್ರಿ ಭಾವೆಗೆ ಉಚಿತವ 5
--------------
ಗಲಗಲಿಅವ್ವನವರು
ಕಡಲಶಯನನ ಪುರÀದಿ ಬಡವ ರೊಬ್ಬರಿಲ್ಲಪಡೆಯಲಿ ಮುತ್ತು ಅಳೆದಳೆದು ಕೋಲಪಡೆಯಲಿ ಮುತ್ತು ಅಳೆದಳೆದು ರಂಗಯ್ಯಕೊಡವೋನು ದಾನ ಕಡೆಯಿಲ್ಲ ಕೋಲ 1 ಚಿಂತಾಮಣಿ ಕಾಮಧೇನು ಕಲ್ಪತರು ಎಂಬೊಶ್ರೀಕಾಂತನ ಕೈದಾನಕ್ಕೊಳಗಾಗಿ ಕೋಲ ಶ್ರೀಕಾಂತನ ಕೈದಾನ ಕ್ಕೊಳಗಾಗಿ ಸ್ವರ್ಗದ ಅಂತಃ ಪುರದಲ್ಲಿ ಅಡಗಿದವು ಕೋಲ2 ಒಂದಕ್ಕೊಂದು ತಾವು ನಿಂತು ಮಾತಾಡುತತಂದೆ ರಾಮೇಶನ ಅರಮನೆಗೆ ಕೋಲತಂದೆ ರಾಮೇಶನ ಅರಮನೆಗೆ ತಾವುಹೋಗೋದು ಛsÀಂದಲ್ಲವೆಂದು ಜರಿದಾವು ಕೋಲ3
--------------
ಗಲಗಲಿಅವ್ವನವರು
ಕಂಡು ಮನ ಹಿಗ್ಗೋದು ರಂಗಯ್ಯನ ಕೊಂಡಾಡಿಮನ ಉಬ್ಬೋದು ಪ. ಎಂಟು ದಿಕ್ಕಿಗೆ ದಿವ್ಯ ಮಂಟಪ ಮಣಿಯುಎಸೆಯೆ ಕಂಠದಿ ಸ್ವರವ ಕುಣಿಸುತಕಂಠದಿ ಸ್ವರವ ಕುಣಿಸುತಸಭೆಯೊಳು ನಟನೆ ಮಾಡುವರು ಕಡೆಯಿಲ್ಲ 1 ಛÀತ್ರ ಚಾಮರ ದಿವ್ಯ ಉತ್ತಮ ವ್ಯಜನವಸುತ್ತ ಬೀಸುವ ಸುಗುಣಿಯರುಸುತ್ತ ಬೀಸುವ ಸುಗುಣಿಯರುಸಭೆಯೊಳು ನರ್ತನ ಮಾಡೋರಮ್ಮ ಐವರು 2 ಕುಂದಣವುಳ್ಳ ಇಂದಿರೆರಮಣನಒಂದೊಂದು ಗುಣವ ವಿವರಿಸಿಒಂದೊಂದು ಗುಣವ ವಿವರಿಸಿಸಭೆಯೊಳು ವಂದಿಗರು ಬಂದು ಹೊಗಳೋರು3 ಭಾಗೀರಥಿ ಜಲವ ಬ್ಯಾಗ ಗಿಂಡಿಯ ತುಂಬಿಸಾಗರಶಯನನ ಅಭಿಷೇಕಸಾಗರಶಯನನ ಅಭಿಷೇಕ ಮಾಡುವಪನ್ನಂಗವೇಣಿಯರು ಕಡೆಯಿಲ್ಲ 4 ಮಲ್ಲಿಗೆ ತುರುಬಿನ ಮಲ್ಲಮುಷ್ಠಿಕರೆಲ್ಲಗುಲ್ಲು ಮಾಡುತಲೆ ಸಭೆಯೊಳು ಗುಲ್ಲು ಮಾಡುತಲೆ ಸಭೆಯೊಳು ಅಲ್ಲಲ್ಲೆಬಿಲ್ಲನೆತ್ತುವರು ಕಡೆಯಿಲ್ಲ 5 ಬಾಲೆಯರು ಅಂಗಾಲು ಲಾಲಿಸಿ ಒರೆಸುತಮ್ಯಾಲೆ ಪನ್ನೀರು ಎರೆಯುತ ಮ್ಯಾಲೆ ಪನ್ನೀರು ಎರೆಯುತ ರಂಗಯ್ಯನಕಾಲಿಗೆ ಎರಗುವರು ಐವರು 6 ಹರದೆಯರು ಅಂಗಾಲು ಸೆರಗಿಲೆ ಒರೆಸುತ ಕಿರುಗೆಜ್ಜೆ ರುಳಿಯ ಸರಿಸುತಕಿರುಗೆಜ್ಜೆ ರುಳಿಯ ಸರಿಸುತ ರಾಮೇಶನ ಎರಕಿ ನಿಂತವರು ಕಡೆಯಿಲ್ಲ7
--------------
ಗಲಗಲಿಅವ್ವನವರು
ಕತ್ತಲೆಗಂಜುವುದೇನುಮೈದುನ ನಿನ್ನ ಬತ್ತಲೆ ಮಾಡಿದನ ಚಿತ್ತ ಸ್ವಸ್ಥ್ಯವಾದ ಚಪಲಾಕ್ಷಿ ನೀ ಇಂಥಕತ್ತಲೆಗಂಜುವುದೇನ ಪ. ಪುನುಗಿನ ಪರಿಮಳ ಬಿನುಗು ಬೆಕ್ಕಿಗೆ ಉಂಟೆನಿನ್ನ ಮನದಿ ಪಾಂಡವರು ಸರಿಯೆಂದು ದ್ರೌಪತಿನಿನ್ನ ಮನದಿ ಪಾಂಡವರು ಸರಿಯೆಂದು ಕೈ ಹಿಡಿದಿಜನರೆಲ್ಲ ನಗರೆ ಜಗದೊಳು ದ್ರೌಪತಿ1 ಗಿಳಿಯಂಥ ಕಳೆಯ ಹೊಳೆಯ ಬಲ್ಲುದೆ ಗುಬ್ಬಿತಿಳಿದು ನಿನ್ನ ಗರವು ಬಿಡು ಕಂಡ್ಯಾ ದ್ರೌಪತಿತಿಳಿದು ನಿನ್ನ ಗರವು ಬಿಡು ಕಂಡ್ಯಾ ಐವರೂ ಹಳಿದುಕೈ ಹೊಯಿದು ನಗರೇನ ದ್ರೌಪತಿ2 ಆತುರವಾಗಿದ್ದ ಕೀಚಕನಿಗೆಮಾತು ಕೊಟ್ಟವನ ಮಡುಹಿದಿಮಾತು ಕೊಟ್ಟವನ ಮಡುಹಿದ ನಿನ್ನಂಥಫಾತಕಳುಂಟೆ ಜಗದೊಳು ದ್ರೌಪತಿ3 ಮಾಯಗಾರುತಿ ಪತಿಯ ದಾಯದಾಟಕೆ ಹಚ್ಚಿಕಾಯದ ಕಾಂತಿ ಅಡಗಿಸಿಕಾಯದ ಕಾಂತಿ ಅಡಗಿಸಿ ಮೆರೆಸಿದಿಯಾವ ಕಚ್ಚೆತನ ಪರಿಯಲೆ ದ್ರೌಪತಿ4 ಸೃಷ್ಟಿಕರ್ತನೆಂಬೊ ಧಿಟ್ಟ ಗಂಡನ ಒಯ್ದುಅಟ್ಟು ಹಾಕುವನ ಪರಿಯಲಿಅಟ್ಟು ಹಾಕುವನ ಪರಿಯಲಿ ಕೈಯೊಳುಹುಟ್ಟು ಕೊಟ್ಟವನ ಮೆರೆಸೀದಿ ದ್ರೌಪತಿ 5 ಕಳೆಯ ಸುರಿಯುವ ಮುದ್ದು ಎಳೆಯ ಚನ್ನಿಗಪತಿಗೆಬಳೆಯನೆ ಇಡಿಸಿ ಜನರೊಳುಬಳೆಯನೆ ಇಡಿಸಿ ಜನರೊಳು ರೂಪವ ತಿಳಿಯದಂತವನ ತಿರುಗಿಸಿ ದ್ರೌಪತಿ 6 ರಾಜಪುತ್ರನ ಒಯ್ದುತೇಜಿ ಕೆಲಸಕೆ ಇಟ್ಟಿಸೋಜಿಗವಲ್ಲ ಜನರೊಳು ಸೋಜಿಗವಲ್ಲ ಜನರೊಳು ರೂಪವಮಾಂಜುಕೊಂಡವನ ಮೆರೆಸಿದಿ ದ್ರೌಪತಿ7 ಘನ ಗಂಭೀರನ ಒಯ್ದು ದನದ ಕೆಲಸಕೆ ಇಟ್ಟಿಜನರೆಲ್ಲ ನಗರೆ ಜಗದೊಳುಜನರೆಲ್ಲ ನಗರೆ ಜಗದೊಳು ದ್ರೌಪತಿಮನಬುದ್ಧಿ ಎಂದು ಬರಬೇಕು8 ಅತಿ ಅಂತಃಕರಣಿ ಹಿತದ ಅಗ್ರಜನ ಒಯ್ದುರಥಿಕನ ಮಾಡಿ ಮೆರೆಸಿದಿ ದ್ರೌಪತಿರಥಿಕನ ಮಾಡಿ ಮೆರೆಸಿದಿ ರಾಮೇಶನ ಪತಿಗಳಭಿಮಾನ ಇರಲುಂಟೆ ದ್ರೌಪತಿ9
--------------
ಗಲಗಲಿಅವ್ವನವರು
ಕದನ ಕಠೋರಿ ಬಂದುಕಾಲುಕೆದರ ಬ್ಯಾಡ ಮದನನ ಮಾತಿಗೆ ಇದುರೇನ ಎಲ್ಲ ನೀ ನೋಡ ಪ. ಓಡಿ ಬಂದವಳೆಂದು ಆಡಿದೆ ನೀ ಎನಗೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಎಲೆ ನೋಡೆತಿರುಗಿ ಆಡಿದಲ್ಲೆ ಏನೂ ಹುರುಳಿಲ್ಲ ಸುಭದ್ರ ನೋಡಿಕೋನಿನ ಮನದಲ್ಲೆ ಎಲ್ಲ ನೋಡೆ1 ಅಣ್ಣನ ವಂಚಿಸಿ ಓಡಿ ಬಂದವಳೆಂದುಎನ್ನನೆ ನುಡಿದೆ ಸುಭದ್ರಾ ಎಲೆ ನೋಡೆಎನ್ನನೆ ನುಡಿದೆ ಸುಭದ್ರಾನಿನ್ನಂತೆ ಸನ್ಯಾಸಿಯೊಡನೆ ಬರಲಿಲ್ಲ ಎಲ್ಲಿ ನೋಡೆ2 ಅತ್ತೆಯ ಮಗಳೆಂದು ಹತ್ತೆಂಟು ತಾಳಿದೆ ಒಂದುತ್ತರ ನಿನಗೆ ಕೊಡತೇನ ಎಲೆ ನೋಡೆಒಂದುತ್ತರ ನಿನಗೆ ಕೊಡತೇನ ಸುಭದ್ರಾಚಿತ್ತಕ್ಕೆ ಹೋಗಿ ನಡುವಂತೆ ಎಲೆ ನೋಡೆ 3 ಒಂದು ನುಡಿದು ಹನ್ನೊಂದು ನುಡಿಸಿಕೊಂಡೆಕುಂದದಂಥsÀವಳೆ ನಿನ್ನ ಬಣ್ಣ ಎಲೆ ನೋಡೆಕುಂದದಂಥsÀವಳೆ ನಿನ್ನ ಬಣ್ಣ ಸುಭದ್ರಾಬಂದದಾರಿ ಹಿಡಿದು ತಿರುಗಿ ಹೋಗೆ 4 ಬಾಳುವರ ಮನೆ ಮುಂದೆ ಕೋಳಿ ಕೂಗಿದಂತೆವೀಳ್ಯವ ಕೊಟ್ಟು ಯಾತರಿಂದ ಎಲೆನೋಡೆವೀಳ್ಯವ ಕೊಟ್ಟು ಯಾತರಿಂದ ಹೊಡೆಸಿಕೊಂಡಿನಿಲ್ಲದೆ ಹೋಗೆ ಮನೆತನಕ ಎಲೆ ನೋಡೆ 5 ಕುದುರೆಯ ಸಂಗಡ ಕುರಿ ಹುಲ್ಲು ಮೆಯ್ದರೆಕುದುರೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಕುದುರೆ ಹಿಂಗಾಲಿಲೆ ಒದೆಯದೆ ಸುಭದ್ರಾಸುದತೆ ರುಕ್ಮಿಣಿಗೆ ಸರಿಯೇನೆ ನೋಡೆ6 ಆನೆಯ ಸಂಗಡ ಆಡು ಹುಲ್ಲು ಮೆಯ್ದೆರೆ ಆನೆ ಹಿಂಗಾಲಿಲೆ ಒದೆಯದೆ ಎಲೆ ನೋಡೆಆನೆ ಹಿಂಗಾಲಿಲೆ ಒದೆಯದೆ ಸುಭದ್ರಾನೀ ರಾಮೇಶನ ಮಡದಿಯ ಸರಿಯೇನೆ ಎಲೆ ನೋಡೆ 7
--------------
ಗಲಗಲಿಅವ್ವನವರು
ಕರವ ಜೋಡಿಸಿ ಎಲ್ಲರಿಗೊಂದಿಸಿ ಪ. ಎಲ್ಲರಿಗೊಂದಿಸಿ ಫುಲ್ಲನಾ¨sನÀ ಮುಖ್ಯವಲ್ಲಭೆಯರುನಾವು ಗೆಲ್ಲಬೇಕೆಂದುಅ.ಪ. ಮಡದಿ ಇಂದಿರಾದೇವಿ ಕಡೆಗಣ್ಣನೋಟದಿ ಪಡೆದಾಳು ಲೋಕಬ್ರಹ್ಮರುದ್ರಾದಿ ಪಾದಂಗಳಿಗೆ ನೀವೆ ಮಹಾಲಕ್ಷ್ಮಿಪಾದಂಗಳೆಗೆ ನೀವೆ ಮಹಾಲಕ್ಷ್ಮಿ ದೇವಿಯಶುಭಾಂಗಿಯ ಮೊದಲೆ ಬಲಗೊಂಬೆ 1 ಪರಮೇಷ್ಠಿ ಪರಮೇಷ್ಠಿ ಪಾದ ಪದ್ಮವನೆ ಮೊದಲೆ ಬಲಗೊಂಬೆ2 ವಾಣಿ ಅಜನ ಪಟ್ಟದರಾಣಿ ಪನ್ನಂಗ ವೇಣಿಜಾಣಿ ಕೊಡು ಎಮಗೆ ಮತಿಗಳಜಾಣಿ ಕೊಡು ಎಮಗೆ ಮತಿಗಳ ನಿನ್ನಪಾದರೇಣುವ ಮೊದಲೆ ಬಲಗೊಂಬೆ 3 ಪಾದ ವನಜವ ಮೊದಲೆ ಬಲಗೊಂಬೆ4 ಭಾರತಿ ನಿನ್ನ ಪಾದವಾರಿಜ ಚರಣವ ಬಾರಿ ಬಾರಿಗೆ ಸ್ಮರಿಸುವೆಬಾರಿ ಬಾರಿಗೆ ಸ್ಮರಿಸುವೆ ನಮಗಿನ್ನುತೋರೆ ಬೇಗ ಮತಿಗಳು5 ಇಂದ್ರನ ಗೆದ್ದು ಸುಧೆಯ ತಂದ ಮಾತೆಯ ಬಂಧನ ಕಡೆದ ಬಲು ಧೀರಬಂಧನ ಕಡೆದ ಬಲುಧೀರನಾದ ಖಗೇಂದ್ರನ ಮೊದಲೆ ಬಲಗೊಂಬೆ6 ಸಾಸಿರ ಮುಖದಿಂದ ಶ್ರೀಶನ ಸ್ತುತಿಸಿದವಾಸುದೇವಗೆ ಹಾಸಿಗೆವಾಸುದೇವಗೆ ಹಾಸಿಗೆ ಯಾದಶೇಷಗೆ ಮೊದಲೆ ಬಲಗೊಂಬೆ7 ಅಪಾರ ಮಹಿಮನೆ ತ್ರಿಪುರಸಂಹಾರಕಚಂದ್ರ ಶೇಖರನೆ ಸರ್ವೇಶ ಚಂದ್ರ ಶೇಖರನೆ ಸರ್ವೇಶ ನಿನ್ನಪಾದದ್ವಂದ್ವವ ಮೊದಲೆ ಬಲಗೊಂಬೆ 8 ವಾರುಣಿ ಅಪರ್ಣಾದೇವಿಯರು ಕರುಣಿಸಿನಮಗೆ ಕಾಲಕಾಲಕರುಣಿಸಿನಮಗೆ ಕಾಲಕಾಲಕೆರಾಮೇಶನ ತರುಣಿಯರೆ ಗೆದ್ದು ಬರಬೇಕ9
--------------
ಗಲಗಲಿಅವ್ವನವರು
ಕರೆತಾರೆ ಕರೆತಾರೆ ಕರೆತಾರೆ ಸಖಿಜರ ಜರತಾರಿ ನೀರೆ ಅವರ ಸುರತ ರಂಗಯ್ಯನ ಗುರುತದ ಮಡದಿಯರ ಕರೆ ತಾರೆ ಪ. ಸೃಷ್ಟಿಗಧಿಕವಾದ ಪಟ್ಟಾವಳಿಯ ಸೀರೆಘಟ್ಟಿ ಕಂಕಣವ ನಡುವಿಟ್ಟುಘಟ್ಟಿ ಕಂಕಣವ ನಡುವಿಟ್ಟು ತಂದೆವ ಧಿಟ್ಟ ದ್ರೌಪತಿಗೆ ಉಡುಗೊರೆ 1 ಖಡ್ಡಿ ಪೈಠಣ ಸೀರೆ ದೊಡ್ಡ ಮುತ್ತಿನ ದಂಡೆಕಡ್ಡಿ ಬಳೆ ದೋರೆ ನಡುವಿಟ್ಟುಕಡ್ಡಿ ಬಳೆ ದೋರೆ ನಡುವಿಟ್ಟು ತಂದೆವಗುಣಾಢ್ಯ ಸುಭದ್ರಾಗುಡುಗೊರೆ2 ಅತ್ತಿ ಹೂವಿನ ಸೀರೆ ಕುತನಿ ಕುಪ್ಪುಸ ಸುತ್ತು ಮುತ್ತಿನ ನೆನೆದಂಡೆ ಸುತ್ತು ಮುತ್ತಿನ ನೆನೆದಂಡೆ ತಂದೆವ ಮಿತ್ರಿ ವೃಂದಾಗೆ ಉಡುಗೊರೆ 3 ಮೋತಿ ಚೂರಿನ ಸೀರೆ ಜಾತಿ ಮುತ್ತಿನ ದಂಡೆ ನೂತನವಾದ ಚವರಿಯ ನೂತನವಾದ ಚವರಿ ರಾಗಟೆಗೊಂಡೆಯ ಕಂಠಿ ಕಾಳಿಂದಿಗೆ ಉಡುಗೊರೆ4 ಸಾರಸನ ಸೀರೆ ತೋರ ಮುತ್ತಿನ ದಂಡೆಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ತಂದೆವನಾರಿ ಲಕ್ಷಣಾಗೆ ಉಡುಗೊರೆ5 ಅಂಬುಜಾಕ್ಷಿಗೆ ತಕ್ಕ ಗೊಂಬಿ ಪೈಠಣಿಸೀರೆ ಜಂಬುದ್ವೀಪದ ನೆನಿದಂಡೆ ಜಂಬುದ್ವೀಪದ ನೆನಿದಂಡೆ ತಂದೆವಜಾಂಬವಂತಿಗೆ ಉಡುಗೊರೆ6 ಸಾವಿರಕಬೆಲಿಯಾದ ಸೇಲ್ಯಾವಲಿ ಜವಳಿವೀರ ರಾಮೇಶನ ಮನಮೆಚ್ಚಿವೀರ ರಾಮೇಶನ ಮನಮೆಚ್ಚಿ(ದ) ಹದಿನಾರು ಸಾವಿರ ನಾರಿಯರಿಗೆ ಉಡುಗೊರೆ7
--------------
ಗಲಗಲಿಅವ್ವನವರು
ಕಾಣಿ ನಿನ್ನಂಥವಳ ಪ. ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1 ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2 ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3 ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4 ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5 ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6 ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7 ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8 ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9
--------------
ಗಲಗಲಿಅವ್ವನವರು
ಕಾಂತೆಯರುತುಂಬಿದ ನಗರಿಯಲಿ ಎಂಥ ಸೊಗಸಮ್ಮ ಬಾಹೋದೆಂಥ ಸೊಗಸಮ್ಮ ಪ. ಗಂಧ ಕಸ್ತೂರಿ ಧರಿಸಿರಾಯರು ಪರಿಮಳ ತುಂಬಿದ ನಗರಿಯಲಿ ಎನುತ 1 ರಾಶಿ ಮಲ್ಲಿಗೆ ಸಂಪಿಗೆ ಮುಡಿದು ಸೂಸಿದ ನಗರಿಯಲಿ ಎನುತ 2 ಮಿತಿ ಇಲ್ಲದೆ ಹಗಲು ಬತ್ತಿ ಶತ ಕೋಟಿ ದೀವಟಿಗಿ ದೀಪ ಪ್ರತಿಯಿಲ್ಲ ತಾಯಿ 3 ಹಾದಿ ಬೀದಿ ದ್ವಾರ ಜಗಲಿ ಸಾದಿನಥಳಿ ಕೊಟ್ಟಾವಮ್ಮ ಮಾಧವ ಬರಲಿಕ್ಕೆ ಎನುತ 4 ವಿಸ್ತರಿಸಿದ ರಂಗವಲ್ಲಿ ಜತ್ತಾಗಿ ತೋರುವವು ಎನುತ 5 ಕೇರಿ ಕೇರಿ ನಾರಿಯರೆಲ್ಲ ಸೀರೆ ಕುಪ್ಪಸ ವಸ್ತಗಳಿಟ್ಟು ವೀರರ ನೋಡಲು ಎನುತ 6 ಎತ್ತೆತ್ತ ನೋಡಿದರೂ ಜನರು ಮುತ್ತುರತ್ನದ ವಸ್ತಗಳಿಟ್ಟು ಹತ್ತಿಗೋಪುರ ಅಟ್ಟಾಲಗಳ ಧಿಟ್ಟೆಯರು ನಿಂತಾರೆ ಎನುತ 7 ಝಲ್ಲೆ ಮುತ್ತಿನ ವಸ್ತಗಳಿಟ್ಟು ಅಲ್ಲೆಲ್ಲೆ ಉಪ್ಪರಿಗೆ ಏರಿ ಚಲ್ವರ ನೋಡಲು ಎನುತ 8 ಮಲ್ಲಿಗೆ ಸಂಪಿಗೆ ಫಲಗಳ ಹಿಡಿದು ಅಲ್ಲೇ ನಿಂತಾರೆ ಎನುತ 9 ಭೆಟ್ಟಿಯ ಸೌಭಾಗ್ಯ ನೋಡಿ ಎಷ್ಟು ಹರುಷ ಬಟ್ಟೇವೆಂದು ಧಿಟ್ಟೆಯರು ನಿಂತಾರೆ ಬೀದಿಲಿ10 ಶ್ರೀ ಲೋಲ ರಾಮೇಶನ ಭಕ್ತರು ವಾಲಗೈಸೋರಮ್ಮ ಎನುತ 11
--------------
ಗಲಗಲಿಅವ್ವನವರು
ಕೈ ಮುಗಿವೆ ಕೈ ಮುಗಿವೆ ಕೈಮುಗಿವೆನುಸಖಿ ವೈಭವದ ಗುರುಗಳು ಕೈವಲ್ಯನೀವನಮ್ಮ ಕವಿಗಳ ಚರಣಕ್ಕೆ ಪ. ಪದ್ಮನಾಭ ಮಾಧವ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ಸಖಿಯೆ 1 ಪ್ರಶಿದ್ದ ಜಯತೀರ್ಥ ವಿದ್ಯಾಧಿರಾಜಕವೀಂದ್ರ ವಾಗೇಶ ರಾಮಚಂದ್ರರೆ ಸಖಿಯೆ ವಾಗೇಶ ರಾಮಚಂದ್ರ ವಿದ್ಯಾನಿಧಿಗಳಪಾದಪದ್ಮವ ಮೊದಲೆ ಬಲಗೊಂಬೆ ಸಖಿಯೆ 2 ರಘುನಾಥ, ರಘುವರ್ಯ, ರಫೂತ್ತಮ ತೀರ್ಥರವೇದವ್ಯಾಸ ವಿದ್ಯಾಧೀಶರೆ ಗೆಲಿಸಲಿವೇದವ್ಯಾಸ ವಿದ್ಯಾಧೀಶರ ಚರಣವಭಕ್ತಿಯಿಂದಮೊದಲೆ ಬಲಗೊಂಬೆ ಸಖಿಯೆ3 ಅಗಣಿತ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರೆ ಸಖಿಯೆಸತ್ಯನಿಧಿ ಸತ್ಯನಾಥರ ಚರಣವ ಅತ್ಯಂತವಾಗಿ ಬಲಗೊಂಬೆ ಸಖಿಯೆ4 ಸತ್ಯಾಭಿನವತೀರ್ಥ ಸತ್ಯಪೂರ್ಣತೀರ್ಥರಸತ್ಯ ವಿಜಯ ಸತ್ಯಪ್ರಿಯರ ಸಖಿಯೆಸತ್ಯ ವಿಜಯ ಸತ್ಯಪ್ರಿಯತೀರ್ಥರಚರಣವ ಅತ್ಯಂತವಾಗಿ ಬಲಗೊಂಬೆ ಸಖಿಯೆ 5 ಸತ್ಯಬೋಧ ಸತ್ಯಸಂಧ ಸತ್ಯವರರಚಿತ್ತಶುದ್ಧಿಯಲಿ ಬಲಗೊಂಬೆಚಿತ್ತಶುದ್ದಿಯಲಿ ಬಲಗೊಂಬೆ ಸಭೆಯೊಳುಸತ್ಯವಾಕ್ಯಗಳ ನುಡಿಸಲಿ ಸಖಿಯೆ 6 ಯತಿಮುನಿರಾಯರ ಅತಿಭಕ್ತರಾಗಿದ್ದಗತಿಪ್ರದರಾದ ಗುರುಗಳ ಸಖಿಯೆಗತಿ ಪ್ರದರಾದ ಗುರುಗಳುರಾಮೇಶನ ಅತಿಭಕ್ತರ ಮೊದಲೆ ಬಲಗೊಂಬೆ 7
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲ ಕೃಷ್ಣ ನೀಮದನಗೋಪಾಲನಾಗಿಮೆರೆದಿಯಲೊ ಕೃಷ್ಣ ಪ. ಅಂಬರ ತಕ್ಕ ಸುರುಳಿಯ ಮುಂಡಾಸಮುರಿಗಿಯವಂಕಿ ನಡುವಿಟ್ಟುಮುರಿಗಿಯವಂಕಿ ನಡುವಿಟ್ಟು ರುಕ್ಮಿಣಿಯವರಪುತ್ರ ಪ್ರದ್ಯುಮ್ನಗೆ ಉಡುಗೊರೆ1 ಮುತ್ತಿನಾಭರಣ ಹೆಚ್ಚಿನ್ಹೆಚ್ಚಿನ ಜವಳಿಮತ್ತೆ ಕೃಷ್ಣಯ್ಯನ ಸಭೆಯೊಳು ಮತ್ತೆ ಕೃಷ್ಣಯ್ಯನ ಸಭೆಯೊಳು ಇಟ್ಟೆವಪಾರ್ಥನು ಕೊಟ್ಟ ಉಡುಗೊರೆ 2 ಬೆಳಕಿನಂತೊಪ್ಪುವ ಥಳಥಳಿಸುವ ಜವಳಿ ನಳಿನಾಕ್ಷಿಯರು ಕುಳಿತ ಸಭೆಯಾಳು ನಳಿನಾಕ್ಷಿಯರು ಕುಳಿತ ಸಭೆಯಾಳಗೆ ಇಟ್ಟೆವಕುಳಿತ ಜನಕೆಲ್ಲ ಉಡುಗೊರೆ 3 ಅಂದವಾದ ಬಲು ಚಂದ ಚಂದದ ಜವಳಿ ತಂದೆ ಕೃಷ್ಣಯ್ಯನ ಸಭೆಯೊಳು ತಂದೆ ಕೃಷ್ಣಯ್ಯನ ಸಭೆಯೊಳಗೆ ಇಟ್ಟೆವಬಂದ ಜನಕೆಲ್ಲ ಉಡುಗೊರೆ 4 ಸಾಸಿವೆ ಬಣ್ಣದ ಸೀರೆ ಕುಸುಬೆ ಬಣ್ಣದ ಕುಪ್ಪುಸ ಲೇಸಾದ ಅಡಿಕೆ ನಡುವಿಟ್ಟುಲೇಸಾದ ಅಡಿಕೆ ನಡುವಿಟ್ಟು ರುಕ್ಮಿಣಿಯದಾಸಿಯರಿಗೆಲ್ಲ ಉಡುಗೊರೆ 5 ಹತ್ತೆಂಟು ಸಾವಿರ ಸುತ್ತುವ ಮುಂಡಾಸ ಮತ್ತ ಬೆಟ್ಟಡಕಿ ನಡುವಿಟ್ಟುಮತ್ತ ಬೆಟ್ಟಡಕಿ ನಡುವಿಟ್ಟು ರಂಗಯ್ಯನ ಭೃತ್ಯರಿಗೆಲ್ಲ ಉಡುಗೊರೆ6 ಸುಳಿಬಳ್ಳಿಯಂತೊಪ್ಪುವ ಬಿಳಿ ಚೀಟಿನ ಜೂಲು ಎಳೆ ಮಾವುಗಳ ನಡುವಿಟ್ಟುಎಳೆ ಮಾವುಗಳ ನಡುವಿಟ್ಟು ರಂಗಯ್ಯನ ಗಿಳಿಗಳಿಗೆಲ್ಲ ಉಡುಗೊರೆ 7 ಅಕ್ಕರದಿಂದ ಹೊಸ ಚಿಕ್ಕ ಚೀಟಿನ ಜೂಲುತಕ್ಕ ಕುಲಾಯಿ ಮುರುವಿಟ್ಟುತಕ್ಕ ಕುಲಾಯಿ ಮುರುವಿಟ್ಟು ರುಕ್ಮಿಣಿಯ ಬೆಕ್ಕಿಗೆ ಕೊಟ್ಟ ಉಡುಗೊರೆ 8 ಅಷ್ಟೂರಿಗೆ ಉಡುಗೊರೆ ತಕ್ಕಷ್ಟು ಕೊಟ್ಟೆವಕೃಷ್ಣಯ್ಯನ ಮನಕೆ ಬರಲಿಲ್ಲಕೃಷ್ಣಯ್ಯನ ಮನಕೆ ಬರಲಿಲ್ಲ ಕುಬ್ಚಿಎಂಬೊ ಸೊಟ್ಟ ಸ್ತ್ರೀಯಳ ಕರೆಸಿಲ್ಲ9 ಎಲ್ಲರಿಗುಡಗೊರೆ ಬಲ್ಲಷ್ಟು ಕೊಟ್ಟೆವಚಲುವನ ಮನಕೆ ಬರಲಿಲ್ಲಚಲುವನ ಮನಕೆ ಬರಲಿಲ್ಲ ಗೋಕುಲದಗೊಲ್ಲ ನಾರಿಯರ ಕರೆಸಿಲ್ಲ10 ತರಹ ತರಹದ ಜವಳಿ ದುಂಡು ಮುತ್ತಿನ ಪದಕಪೆಂಡಿ ಸರಗಳ ನಡುವಿಟ್ಟುಪೆಂಡಿ ಸರಗಳ ನಡುವಿಟ್ಟು ರಾಮೇಶನಿನ್ನ ಪಂಡಿತರಿಗೆಲ್ಲ ಉಡುಗೊರೆ 11
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ. ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ 1 ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ2 ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ3 ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ 4 ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ 5 ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ 6 ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ 7 ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ 8 ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ9
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲಕೋಲ ಕೋಲೆನ್ನ ಕೋಲಕೋಲಾಹಲವ ಮಾಡಿ ಬಾಲೆಯರು ಪಾರ್ಥಗೆ ಕೋಲ ಪ ಕಟ್ಟಿ ಜಾನ್ಹವಿಯಲ್ಲಿ ಬಿಟ್ಟು ಬದುಕಲು ಭೀಮ ಥಟ್ಟನೆ ಮಗ್ಗಲ ಹಚ್ಚಿ ಬಿಟ್ಟಿತು ಸರ್ಪಪ್ರಾಣ1 ಕುಸುಮದಂಥವಳಿಗೆ ಸವಳ ಪುರುಷನು ವಿಷದ ಲಡ್ಡಿಗೆ ತಿಂದು ಭಸ್ಮ ಮಾಡಿದ ಭೀಮ2 ಲಜ್ಜೆ ಬಿಟ್ಟು ಅರ್ಜುನ ಖೋಜಾನೆಂದೆನಿಸಿಕೊಂಡಿವಜ್ರ್ಯವಾಯಿತು ಮಾನ ನಿರ್ಜರೋತ್ತಮ ನಕ್ಕ3 ಹೆಣ್ಣಲ್ಲ ಗಂಡಲ್ಲ ಬಣ್ಣ ವಿಷ್ಟ್ಯಾಕೊ ನಿನಗೆ ಸಣ್ಣದಿ ನೆನೆದು ಕೀರ್ತಿ ಅಣ್ಣ ಬಲರಾಮನಕ್ಕನು 4 ಶೂರತನ ವೆಲ್ಲ ನೀಗಿ ಸೀರೆಯನುಟ್ಟುಕೊಂಡಿಬಾರದೆ ನಾಚಿ ನಿಂತೆಶೌರಿ ರಾಮೇಶನಕ್ಕನು ಕೋಲ5
--------------
ಗಲಗಲಿಅವ್ವನವರು