ಒಟ್ಟು 57 ಕಡೆಗಳಲ್ಲಿ , 2 ದಾಸರು , 57 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯ ನಿನ್ನ ಸಮರನ್ಯಾರ ಕಾಣೆ ಪ ತರತಮ ಪಂಚಭೇದವರ ಮಾರ್ಗವ ತೋರೋ ಅ.ಪ ತ್ರಿವಿಧ ಜೀವರಿಗೆ ಹರಿ ಕಾರಣ ಕರ್ತನೆಂದು ವಿವಿಧ ಗತಿಗಳೆಂದು ಶ್ರವಣ ಮನನ ಮಾಡಿಸೊ 1 ಪರಮಾತ್ಮ ಜೀವಾತ್ಮ ಪರಸ್ಪರ ಭೇದವೆಂದು ಅರುಹಿಸೊ ನಿನ್ನವರಿಂದನುದಿನ ಗುಣಸಿಂಧು 2 ನಿಜ ಸಿದ್ಧಾಂತ ಸುಜನರಿಗೆ ಬೋಧಿಸಿದ ಭುಜಗ ಶಯನನ ಭಕ್ತ ವಿಜಯ ರಾಮದಾಸವರ್ಯಾ 3 ಅಂಕಿತಗಳ ಕೊಟ್ಟು ಆದರಿಸುವೆ ಸದಾ 4 ಭಾಗ್ಯನಿಧಿ ದಾಸರ ಶಿಷ್ಯಾಗ್ರೇಸರ ಎನ್ನ ಯೋಗ್ಯತೆ ತಿಳಿಸಿ ಗುರುರಾಮವಿಠಲನ ತೋರೋ 5
--------------
ಗುರುರಾಮವಿಠಲ
ಗುರುವೇ ರಾಘವೇಂದ್ರ ಪ ಗುರುವೆ ಆಶ್ರಿತ ಸುರತರುವೆನುತಲಿನಿನ್ನ ಚರಣ ನಂಬಿದವರಿಗೆ ಪರಮಾನುಗ್ರಹ ಮಾಳ್ಪ ಅ.ಪ ಮಂತ್ರಾಲಯದಲಿ ನೀನಿಂತುನಿರಂತರ ಸಂತರಿಷ್ಟಾರ್ಥವ ಸಲಿಸುತಲಿರುವೆ 1 ದೃಢ ಮಾಡಿ ಅವರ ಆದರಿಸುವೆ ಸತತ2 ಭವ ದುರಿತವ ತರಿವೆ ಗುರುರಾಮವಿಠಲನ ಶರಣರಗ್ರಣಿಯೆ 3
--------------
ಗುರುರಾಮವಿಠಲ
ತಂದೆತಾಯಿ ನೀನೆ ಬಾ ಬೇಗನೆ ಪ ಮಂದರೋದ್ಧಾರ ಮನ್ಮಥ ಜನಕ ಆ- ಮಾಧವ ವಾಸುದೇವ ಗೋವಿಂದ ಮಧುಸೂಧನ ದಾಶರಥೇ ಸಂಕರ್ಷಣ ತ್ರಿವಿಕ್ರಮ ಹೃಷಿಕೇಶ ನಾರಸಿಂಹ ಪರಬ್ರಹ್ಮ 1 ಪದ್ಮನಾಭಾಚ್ಯುತ ದಾಮೋದರ ಜ- ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ- ರುದ್ಧ ವಿಷ್ಣು ಭೂಧರ ಉಪೇಂದ್ರ 2 ಅರಿತು ಚತುರ್ವಿಂಶತಿ ನಾಮವ ಶರಣರದುರಿತವ ಪರಿಹರಿಸುವನಮ್ಮ ಗುರುರಾಮವಿಠಲನೆ ನಿನ್ನನೆ ನಾಂ 3
--------------
ಗುರುರಾಮವಿಠಲ
ತಿಳಿಯದಾಯಿತು ವಯಸು ಕಳೆದು ಹೋಯಿತು ಪ ಕಳವಳಿಸುತ ಕಡೆಗಾಣದೆ ಬಳಲಿ ತೊಳಲಿ ಪಾಪ ಹೆಚ್ಚಿ ಅ.ಪ ಸತಿಸುತರೆಂಬ ಬಲೆಗೆ ಸಿಲುಕಿ ಅತಿಶಯ ಮೋಹದಲಿ ಮುಳುಗಿ ಪಥಿಕರಾಡುವಂತೆ ನಡೆದು ಪತಿತನಾಗಿ ನಿಜದ ಮರ್ಮಾ 1 ಕೆಲದಿನ ಆಟದಿ ಲಲನೆಯರ ಕೂಟದಿ ಹಲವು ವಿದ್ಯೆಯ ಕಲಿತು ಪರರ ಒಲಿಸಿ ಸ್ತ್ರೋತ್ರಮಾಡಿ ಬೇಡಿ ಫಲವ ಕಾಣಲಿಲ್ಲ ಕೊನೆಗೆ ಹಲುಬಿ ಹಲುಬಿ ಬಾಯಿನೊಂದು 2 ನೀತಿ ಹೇಳುತಾ ಪರರ ನಿಂದೆಗೆಯ್ಯುತಾ ಗುರುಮುಖದಲಿ ಪರಮತತ್ವ 3 ಮತ್ತನಾಗುತ ದುರಾಸಕ್ತನೆನಿಸುತ ನಿತ್ಯಕರ್ಮವನ್ನು ತೊರೆದು ಸತ್ಯಶಮದಮಗಳ ಮರೆದು ಚಿತ್ತದಲಿ ನಿರ್ಮಲನಾಗದೆ ಚಿಂತಿಸುತಲಿ ನಿಜದ ನೆಲೆಯ 4 ಗುರುರಾಮವಿಠಲನ ಶ್ರೀಚರಣಕಮಲ ಸ್ಮರಣೆಗೈದು ಹೊರಗು ಒಳಗು ಒಂದೆ ವಿಧದಿ ಚರಿಸಿ ಸೌಖ್ಯಪಡೆವ ಬಗೆಯ 5
--------------
ಗುರುರಾಮವಿಠಲ
ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ 1 ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ- ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ 2 ತಾಮಸಾದಿ ದುರ್ಗುಣ ನಿರ್ನಾಮವಾಗಿ ಪ್ರೇಮದಿಂ ಗುರುರಾಮವಿಠಲನ್ನ ನೆನೆವದಕ್ಕೆ 3
--------------
ಗುರುರಾಮವಿಠಲ
ಧನ್ಯನಾದೆನು ನಾಂ ಪ ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ಅ.ಪ ದೇಶದೇಶದಿಂದ ಸಕಲ ದಾಸಜನರು ಬಂದು ಸದಾ ಶ್ರೀಶ ಸಲಹೆಂದು ಕೂಗುವ ಘೋಷ ಕೇಳಿ ಕರ್ಣಗಳಿಂ 1 ವೈರಿ ವಿನುತ ಅರ್ಥ ಗಳಿಸುವವನ ಕಂಡು2 ಸತಿಯರೆಲ್ಲ ಮುತ್ತಿನಾ- ರತಿಯ ಬೆಳಗುವುದು ಕಂಡು 3 ಸಂತಸದಿ ಮಹಂತರು ಶ್ರೀ- ಕಾಂತನ ಗುಣರಾಸಿ ಪೊಗಳಿ ಸ್ವಾಂತನಿರ್ಮಲರಾಗಿ ಭಜಿಪ- ರಂತರಾತ್ಮನ ಕಂಡು 4 ಭೂಮಿಗಧಿಕ ಶೇಷಗಿರಿ ಧಾಮಪೂರ್ಣಕಾಮ ಭಕ್ತ- ಸ್ತೋಮವನ್ನು ಪಾಲಿಪ ಗುರು- ರಾಮವಿಠಲನ್ನ ಕಂಡು 5
--------------
ಗುರುರಾಮವಿಠಲ
ನೀನಾಗಿ ನಿನ್ನೊಳಗಿರುತಿರುವನ ಧ್ಯಾನಿಸುತಿರು ಜೀವಾ ಎಲ್ಲ ಅವನ ಸೇವಾ ಪ ಜ್ಞಾನಿಗಳೊಡನಾಡದೆ ಸಂಸಾರದಿ ನಾನೆಕರ್ತನೆಂದು ನರಕ ಪೊಂದುವೆ ಯಾಕೆ ಅ.ಪ ಜಾಗುಮಾಡದೆ ನಿರತಾ ನಾಗಶಯನ ವಿಶ್ವತೈಜ ಪ್ರಾಜ್ಞ ನಾಗಿನಿನಗೆ ಕೊಡುವನು ಎಂದರಿಯೊ 1 ಬಿಂಬನವನು ಪ್ರತಿಬಿಂಬನು ನೀನೆಂದು ಹಂಬಲಿಸುವುದುಚಿತಾ ಅಂಬುಜಾಕ್ಷಗರ್ಪಿಸಿ ಸುಖಿಯಾಗೊ2 ಸ್ವಾಭಾವ್ಯದಿ ಸತತಾ ವಿಭೇದ ಲ- ಕ್ಷ್ಮೀಭೂರಮಣ ಶ್ರೀಗುರುರಾಮವಿಠಲನು 3
--------------
ಗುರುರಾಮವಿಠಲ
ನೀನೆ ಕಾಮಿಸಿ ನಿರುತವು ಕೆಡುವೆ ಪ ಸ್ವರೂಪವರಿಯದೆ ನೀ ಕರೆಕರೆ ಪಡುವೆ 1 ಭ್ರಾಂತಿಯಪಡುತಲಿ ಬಾಯಿ ಬಾಯಿ ಬಿಡುವೆ 2 ನಾಯಂದದಿ ಪರಸ್ತ್ರೀಯರ ಬಯಸುತ ಹೇಯನೆನಿಸಿಕೊಂಡು ನೊಯ್ಯುವೆಯಲ್ಲದೆ 3 ಮಲಮೂತ್ರದಿ ನೀ ಮಲಗಿರಲಿಲ್ಲವೇ ಮರೆತು ಯೌವ್ವನ ಗರ್ವದಲಿ ತಲೆ ತೂಗುತ4 ಪರಿಪರಿವಿಧದಲಿ ಭಕ್ತರ ಪಾಲಿಪ ಗುರುರಾಮವಿಠಲನ ಚರಣವ ನಂಬದೆ 5
--------------
ಗುರುರಾಮವಿಠಲ
ಪರಿಪಾಹಿ ಪದ್ಮಸಂಭವ | ದೇವ ದೇವ ಪ ಕರುಣಾಂಬುನಿಧೆ ತವ ಚರಣವನ್ನು ನಂಬಿದವರ ಅ.ಪ ಸೃಷ್ಟಿಸ್ಥಿತಿಲಯವ ನಿನ್ನಿಷ್ಟದಂತೆ ಮಾಡಿ ಪರ- ಮೇಷ್ಟಿ ಪದದಲಿ ಬಹು ಶ್ರೇಷ್ಠನಾಗಿ ಶೋಭಿಸುವ 1 ಮೂರುಲೋಕಗಳಿಗೆ ಆಧಾರ ನೀನೆ ಎಂದು ನಿನ್ನ ಸಾರ ಸುಖವ ಕೊಡುವ ದೇವ 2 ಗುರುರಾಮವಿಠಲನ ಬಸುರೊಳು ಬಂದವನೆ3
--------------
ಗುರುರಾಮವಿಠಲ
ಪಾದ ಸರೋಜಯುಗಳವ ನೆರೆ ನಂಬಿದೆ ಜೀಯ್ಯ ಪ ತಿಮಿರ ಕಾನನ ಯತಿವರ್ಯ ಮಹಾಶೌರ್ಯ ಮೇರು ಸಮ ಧೈರ್ಯ ತ್ರಿವಿಧ ಜೀವರಿಗೆ ಆಚಾರ್ಯ ಅ.ಪ ರಾಮದೂತಾನಾಗಿ ಸೀತೆಗುಂಗುರವಿತ್ತೆ ಕಲಿಯುಗದಿ ಭೂಸುರಕುಲದಿ ಪುಟ್ಟಿ ನೀ ಮೆರೆದಿ ಆರ್ತಜನ ಕೃಪಾಶರಧಿ 1 ಅನುಸಂಧಾನ ಪೂರ್ವಕ ಕೊಡು ವಿಜ್ಞಾನ 2 ಮೂರವತಾರದಿ ಶ್ರೀರಾಮ ಕೃಷ್ಣ ವ್ಯಾಸ- ರಾರಾಧಿಸಿ ಗೈದ ಧೀರ ಶಿಖಾಮಣಿ ಭವ ಭಯನಾಶ ಕೊಡುವುದು ಲೇಸಾ ಗುರುರಾಮವಿಠಲನದಾಸ 3
--------------
ಗುರುರಾಮವಿಠಲ
ಪುಷ್ಟಿ ಎಲ್ಲಿಯದು ಪ ದೃಷ್ಟಿ ಕಡಿಮೆಯು ಕಿವಿಯು ಕೇಳದು ಶ್ರೇಷ್ಠ ನಾನೆಂದು ಕುಣಿವುದಕೆಅ.ಪ ಪರಿವ್ರಾಜಕನಾಗಬೇಕೆಂ- ದುರುತರಾಶ್ರಮ ಧರ್ಮಶಾಸ್ತ್ರಗ- ಳೊರೆಯುತಿಹುದದರರ್ಥ ತಿಳಿಯದೆ 1 ಕಾಮ್ಯಕರ್ಮಳನು ತ್ಯಜಿಸಿ ಭ್ರಾಮ್ಯಜನಗಳ ನಡತೆ ಬಿಟ್ಟು ರಮ್ಯವೆಂದರಿಯುವುದು ಸೌಖ್ಯವು 2 ಎಮ್ಮೆಯೋಲ್ ತಿನ್ನುತಲಿ ಬಾಯಲಿ ಹೆಮ್ಮೆ ಮಾತುಗಳಾಡುತಿರುತಿಹ ಗ್ರಾಮ್ಯ ಜನಗಳ ಸಂಗವೆಂದಿಗು ಗತಿವಿದೂರನ ಮಾಡದೆ ಬಿಡದು 3 ಗಣ್ಯತಾನೆಂದುಕೊಳ್ಳದೆ ದಾ- ಅನ್ನಕೋಸುಗ ಪರರ ಪೊಗಳದೆ ಧನ್ಯರಡಿಗಳ ಠಾವಿನಲಿ ನಲಿ ಸುಖ 4 ಪಾಮರರು ಪ್ರತಿದಿನವು ದುಸ್ತರ ತಾಮಸ ನರಕದೊಳು ಮುಣುಗುತ್ತ ಸ್ವಾಮಿಯಾಗಿ ಮೆರೆವ ಶ್ರೀಗುರು- ರಾಮವಿಠಲನ ಮರೆತು ಕೆಡುವರು 5
--------------
ಗುರುರಾಮವಿಠಲ
ಪ್ರಾಣಪತೇ ಗುರುವರೇಣ್ಯಾಗ್ರಗಣ್ಯ ಪ ಕಾಣೇ ನಿನಗೆ ಸರಿಜಾಣರ ತ್ರಿಜಗದೊಳು ಅ.ಪ ರಾಮಕೃಷ್ಣ ವೇದವ್ಯಾಸ ನೀ ಮೂರವತಾರದಿ ಪ್ರೇಮದಿ ಮಾಡಿದೆ ನಿಷ್ಕಾಮ ಮಾರ್ಗಸ್ಥಾಪಕನೆ 1 ಧಾರಾಳವಾಗಿ ನಿಲ್ಲಿಸಿ ಕ್ರೂರರೆದೆಯವೊಡೆದೆ 2 ನಿನ್ನ ನಂಬಾದವ ಬನ್ನಬಡುವ ಭವದಿ ಚೆನ್ನಗುರುರಾಮವಿಠಲನ್ನ ಮಚ್ಚಿಸಿದೆ ಧೀರಾ 3
--------------
ಗುರುರಾಮವಿಠಲ
ಬಂದಿರುವೆನು ಭೂಜಾತೆ | ಶರ- ದಿಂದುವದನೆ ವೋ ಸೀತೆ ಪ ಕೂಗುವುದೇತಕೆ ನಿಮ್ಮಯ ಪೆಸರೇ ನೀಗ ತಿಳಿಸಿರೈ ಸ್ವಾಮಿ | ನುಡಿ ಭಾಗವತ ಜನಪ್ರೇಮಿ ಅ.ಪ ಹೀನತಮವ ಮುರಿದಜಗೆ ಶೃತಿಗಳಿತ್ತ ಮೀನಾವತಾರನೆ ನಾನು | ಬಾ ಜಾನಕಿ ಬೇಗನೆ ನೀನು ಮೀನಾದರೆ ನೀರೊಳಗಿರುವುದು ಸರಿ ಮಾನಿನಿಯಲಿ ಕಾರ್ಯವೇನು | ನಡಿ ದೀನ ಜನರ ಸುರಧೇನು 1 ಕಮಲನಯನೆ ನಾ ಪೂರ್ವದಿ | ಗಜ- ಗಮನೆಯೆ ನೋಡನುರಾಗದಿ ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ ಸಮಳೆ ನಿನಗೆ ನೀ ನೋಡು | ಸಂ ಭ್ರಮವಿದ್ದಲಿ ನಲಿದಾಡು 2 ವರಹಾರೂಪನೆ ಕಾಮಿನಿ | ಓ ತರುಣಿಯರೊಳಗೆ ಶಿರೋಮಣಿ ವರಾಹನಾದರೆ ಅಡವಿಯ ತಿರುಗುತ- ಲಿರದೇತಕೆ ಇಲ್ಲಿ ಬಂದೆ | ನಡಿ ಪರಿಪರಿ ಮೃಗಗಳ ಹಿಂದೆ 3 ಕರುಳ ಬಗೆದ ನರಸಿಂಹ | ನಾನು ಪರಮ ಪುರಷ ಪರಬ್ರಹ್ಮ ನರಸಿಂಹನು ನೀನಾದರೆ ನಡಿನಡಿ ಗಿರಿಗುಹೆಯೊಳಗಿರು ಹೋಗೈ | ಬಹು ಪರಿನುಡಿಗಳು ನಿನಗೇಕೈ 4 ಭೂಮಿಯ ದಾನವ ಬೇಡಿ ಬಲಿಯ ಗೆದ್ದ ವಾಮನ ನಾನೆಲೆ ನಾರಿ | ಸು ತ್ರಾಮಾದ್ಯರಿಗುಪಕಾರಿ ಬ್ರಾಹ್ಮಣನಾದರೆ ನಮಿಸುವೆ ಚರಣಕೆ ಹೋಮಧ್ಯಾನ ಜಪಮಾಡೈ | ನಿ ಷ್ಕಾಮ ಜನರ ಪಥನೋಡೈ 5 ದುರುಳನೃಪರ ಸಂಹರಿಸವನಿಯ ಭೂ ಸುರರಿಗೆ ಕೊಟ್ಟೆನೆ ದಾನವು | ಕೇಳ್ ಪರಶುರಾಮಾಭಿದಾನವು ವರಮಾತೆಯ ಶಿರವರಿದವ ನೀನಂತೆ ಸರಸವೇತಕೆನ್ನಲ್ಲಿ | ಮನ ಬರುವಲ್ಲಿಗೆ ತೆರಳಲ್ಲಿ 6 ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು ಪ್ರಿಯದಿ ವನದೊಳಗಿದ್ದೆನೆ | ದೈ ತ್ಯೇಯ ನಿಕರವನು ಗೆದ್ದೆನೆ ಸ್ರೀಯರಲ್ಲಿ ಹಿತವೇನು | ಕಮ ಲಾಯತಾಕ್ಷ ನಡಿ ನೀನು 7 ನಾರಿಯರನು ಕೂಡಿ ರಾಸ ಕ್ರೀಡೆಯೊಳ್ ತೋರಿದೆ ಪರಿಪರಿ ಚಿತ್ರವ | ವಿ- ಜಾರ ಪುರಷನಿಗೆ ಹೋಲುವಳಲ್ಲವು ಸಾರ ಪತಿವ್ರತೆ ನಾನು | ಇ- ನ್ನ್ಯಾರು ತಿಳಿಸು ಮತ್ತೆ ನೀನು 8 ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ ಪ್ರತಿಮ ಬುದ್ಧನೆ ಲತಾಂಗಿ | ಓ ಮತಿವಂತಳೆ ಮೋಹನಾಂಗಿ ಕೃತಕವಾಡದಿರು ಒಲ್ಲೆ | ಕೇ ಳತಿ ಮೋಹಕ ನೀ ಬಲ್ಲೆ 9 ಹಲವು ನುಡಿಗಳೇನು ಕಲಿಯುಗಾಂತದಲಿ ಮಲೆತ ಮನುಜರನು ಕೊಲ್ವೆನೆ | ಓ ಲಲನೆ ನೋಡು ಬಲು ಚೆಲ್ವನೇ ಕಲಿತನವ ತೋರಿಸದಿರು ಈ ಪರಿ ಹಲವು ವೇಷ ನಿನಗೇಕೆ | ಕೇ ಳೆಲವೊ ಸ್ವಾಮಿ ನುಡಿ ಜೋಕೆ 10 ವೇಷವಲ್ಲ ಸರ್ವೇಶ ನಾನು ಪರಿ- ಪೋಷಿಸುವೆನು ನಿಜಭಕ್ತರ | ಸಂ- ತೋಷಿಸುವೆನು ಧರ್ಮಯುಕ್ತರ ಪೋಷಿಸುವನು ನೀನಾದರೆಲ್ಲಿ ನಿನ್ನ ವಾಸಪೇಳು ನಿಜವೀಗಾ | ಪರಿ ಹಾಸವೇಕೆ ನುಡಿಬೇಗ 11 ಪರಮಾತ್ಮನು ನಾ ಕೇಳೆ | ಎನ್ನ ಮರತೆಯೇನೆ ಎಲೆ ಬಾಲೆ ಅರಿತೆನೀಗ ಬಹು ಸಂತಸವಾಯಿತು ಎರಗುವೆ ಚರಣಕೆ ನಾನು | ನಿನ್ನ ಸರಿಯಾರೈ ದೊರೆ ನೀನು 12 ಧರೆಯೊಳಯೋಧ್ಯಾ ಪುರದರಸನ ಮಗ ಗುರುರಾಮವಿಠಲನೆ ನಾನು | ಓ ತರುಣಿ ನಿನಗೊಲಿದು ಬಂದೆನು ಧರಣಿ ತನಯೆ ನಸುನಾಚಿಕೆಯಿಂದಲಿ ಣಗಳನು ತೊಳೆದಳು ಬೇಗ 13
--------------
ಗುರುರಾಮವಿಠಲ
ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ ಸರಸಿಜಾಕ್ಷನ ವಕ್ಷ ಮಂದಿರೆ ಇಂದಿರೆ ಸರಸಿಮುದವೆರಸಿ ನಿನ್ನರಸನೊಡನೆನೀ 1 ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ- ವ್ರಾತ ಮನಃ ಪದ್ಮ ವಿಹಾರಿಣಿ ಚೇತೋದ್ಭವ ಜನನೀ ಶ್ರೀತರುಣೀಮಣಿ 2 ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ- ಬ್ರಹ್ಮ ಗುರುರಾಮವಿಠಲನ ದಯಿತೆ 3
--------------
ಗುರುರಾಮವಿಠಲ
ಬಿಜಯಂಗೈವುದು ಹಸೆಗೀಗಾ ಪ ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ ಕೃಷ್ಣನ ಮೋಹದ ಪಟ್ಟದ ಜಾಯೆ ಅಷ್ಟ ಸೌಭಗ್ಯಗಳ ಅಮರರಿಗೀವಳೆ 1 ಶೃಂಗಾರ ಮಂಟಪದಿ ಅಂಗನೆಯರೆಲ್ಲರು ಸಂಗೀತವ ಪಾಡಿ ಸರಸದಲಿ ಮಂಗಳದೇವತೆ ಬಾರೆಂದು ಕರೆವರು 2 ಅರುಂಧತಿ ಶಚಿ ಮುಖರ್ನೆರದಿಹರು ಗುರುರಾಮವಿಠಲನ ತರುಣೀ ಮಣಿಯೆ ಬೇಗಾ 3
--------------
ಗುರುರಾಮವಿಠಲ