ಒಟ್ಟು 96 ಕಡೆಗಳಲ್ಲಿ , 34 ದಾಸರು , 91 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಭೈರವ ಸ್ವಾಮಿಯೆ ಭಕ್ತಜನ- ರಾಳಿಗೆ ಸುಪ್ರೇಮಿಯೆ ಪ. ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ ಶೀಲರ ಕಾವ ಕೃಪಾಳುವೆ ಜಯ ಜಯ ಅ.ಪ. ರುದ್ರನಾಮಕ ಹರಿಯ ಪಾದಭಕ್ತಿ- ಮುದ್ರಾಂಕಿತ ನೀನಯ್ಯ ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ ಹೊಂದಿದೆನು ಶಾಂತೀರಮಣನನಿ- ರುದ್ಧನಂಘ್ರಿಸರೋಜ ಸ್ಮರಣೆ ಸ- ಮೃದ್ಧಿಯನು ನೀನಿತ್ತು ಒಳಹೊರ- ಗಿದ್ದು ಕಾಯೊ ಸುಭದ್ರದಾಯಕ 1 ಕಾಮಕ್ರೋಧ ಮುಂತಾದ ವೈರಿಜನ- ಸ್ತೋಮದಿಂದ ಬಹಳ ಬಾಧಾ ಶ್ರೀಮನೋರಮನ ಸುನಾಮಸ್ಮರಣೆಯನ್ನು ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು ವ್ಯೋಮಕೇಶನೆ ಧೀಮತಾಂವರ ಸೋಮಧರ ಸುತ್ರಾಮವಂದಿತ ತಾಮರಸಸಖ ತೇಜ ಸುಜನರ ಕಾಮಧೇನು ಮನೋಮಯನೆ ಜಯ 2 ಲಕ್ಷ್ಮೀನಾರಾಯಣನ ದಾಸಾರ್ಯ ಫಾ- ಲಾಕ್ಷ ಮಹೇಶಾನ ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ- ಪಕ್ಷದವರನು ಶಿಕ್ಷಿಸಿ ಶಿಷ್ಟರ ರಕ್ಷಿಸುವ ಸದಯಾದ್ರ್ರಹೃದಯ ಮು- ಮುಕ್ಷುಪ್ರಿಯ ಗುರುವರ್ಯ ಲೋಕಾ- ಧ್ಯಕ್ಷ ದಕ್ಷಮುಖಾಂತರ ಕರು-ಣೇಕ್ಷಣದಲಿ ನಿರೀಕ್ಷಿಸೆಮ್ಮನು3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಲಭೈರವ ಸ್ವಾಮಿಯೆ ಭಕ್ತಜನ- ರಾಳಿಗೆ ಸುಪ್ರೇಮಿಯೆ ಪ. ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ ಶೀಲರ ಕಾವ ಕೃಪಾಳುವೆ ಜಯ ಜಯಅ.ಪ. ರುದ್ರನಾಮಕ ಹರಿಯ ಪಾದಭಕ್ತಿ- ಮುದ್ರಾಂಕಿತ ನೀನಯ್ಯ ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ ಹೊಂದಿದೆನು ಶಾಂತೀರಮಣನನಿ- ರುದ್ಧನಂಘ್ರಿಸರೋಜ ಸ್ಮರಣೆ ಸ- ಮೃದ್ಧಿಯನು ನೀನಿತ್ತು ಒಳಹೊರ- ಗಿದ್ದು ಕಾಯೊ ಸುಭದ್ರದಾಯಕ 1 ಕಾಮಕ್ರೋಧ ಮುಂತಾದ ವೈರಿಜನ- ಸ್ತೋಮದಿಂದ ಬಹಳ ಬಾಧಾ ಶ್ರೀಮನೋರಮನ ಸುನಾಮಸ್ಮರಣೆಯನ್ನು ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು ವ್ಯೋಮಕೇಶನೆ ಧೀಮತಾಂವರ ಸೋಮಧರ ಸುತ್ರಾಮವಂದಿತ ತಾಮರಸಸಖ ತೇಜ ಸುಜನರ ಕಾಮಧೇನು ಮನೋಮಯನೆ ಜಯ 2 ಲಕ್ಷ್ಮೀನಾರಾಯಣನ ದಾಸಾರ್ಯ ಫಾ- ಲಾಕ್ಷ ಮಹೇಶಾನ ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ- ಪಕ್ಷದವರನು ಶಿಕ್ಷಿಸಿ ಶಿಷ್ಟರ ರಕ್ಷಿಸುವ ಸದಯಾದ್ರ್ರಹೃದಯ ಮು- ಮುಕ್ಷುಪ್ರಿಯ ಗುರುವರ್ಯ ಲೋಕಾ- ಧ್ಯಕ್ಷ ದಕ್ಷಮುಖಾಂತರ ಕರು- ಣೇಕ್ಷಣದಲಿ ನಿರೀಕ್ಷಿಸೆಮ್ಮನು 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ| ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ|| ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ| ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1 ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ| ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ| ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2 ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ| ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ| ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ| ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3 ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ| ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ| ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ| ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4 ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ| ಬಿಡದನಾವನರೋತ್ತುಮಾ| ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5 ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು| ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು| ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ| ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6 ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು| ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು| ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ| ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7 ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ| ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ| ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ| ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ಸುಕೃತ ಪ ಸುಕೃತ 1 ಕೌಸ್ತುಭ ಸುಕೃತ 2 ಕಸ್ತೂರಿಯಿಟ್ಟು ಕಂಗಳಿಗೆ ಕಾಡಿಗೆ ಹಚ್ಚಿಮತ್ತೆ ಕದಪಿನಲಿ ಕುಂಕುಮವನೊತ್ತಿಮುತ್ತಿನಂದದೊಳಿರುವ ಬೆವರ ಸೆರಗಿನೊಳೊರೆಸಿಮುತ್ತು ತಾರೈಯೆಂದು ಮುದ್ದಾಡುವೋ ಸುಕೃತ3 ಅಸುರಕುಲ ಹರಣನಿಗೆ ಅಂಗಿಯನು ತೊಡಿಸಿ ಬಲುಕುಶಲದಿ ಪೀತಾಂಬರವನ್ನು ಉಡಿಸಿಪೊಸ ರತುನ ಬಿಗಿದ ಮಣಿಮಯದ ಮಕುಟವ ಮಂಡೆ-ಗೊಸವಿಟ್ಟು ನಲಿ ನಲಿದು ಮುದ್ದಾಡುವೊ ಸುಕೃತ4 ಶಂಖ ಚಕ್ರಾಂಕಿತಗೆ ಭುಜಕೀರ್ತಿಯನೆ ಧರಿಸ್ಯ-ಲಂಕಾರದಲಿ ತಾರೆ ಮಣಿಯ ಕಟ್ಟಿಕಂಕಣವು ಕಡಗ ಥಳಥಳಿಪ ಪವಳದಿ ರಚಿಸಿಬಿಂಕದಲಿ ತೊಟ್ಟಿಲೊಳಗಿಟ್ಟು ತೂಗುವ ಸುಕೃತ5 ಮುಂಗೈಯ ಮುರಿ ಮುತ್ತಿನುಂಗುರವು ಥಳಥಳಿಸೆರಂಗು ಮಾಣಿಕದ ಒಡ್ಯಾಣ ಹೊಳೆಯೆಕಂಗೊಳಿಸುತಿಹ ಕಾಂಚಿದಾಮವಲಂಕರಿಸಿ ಸ-ರ್ವಾಂಗದೊಳು ಗಂಧ ಪರಿಮಳವ ಸೂಸುವ ಸುಕೃತ6 ಕಡಗ ಪೊಂಗೆಜ್ಜೆ ಕನಕದ ಘಂಟೆ ಸರಪಳಿಯಬಿಡದೆ ಶ್ರೀಹರಿಯ ಚರಣದಲ್ಲಿ ಧರಿಸಿಪೊಡವಿಯನು ಅಳೆದ ಶ್ರೀಪುರುಷೋತ್ತಮನಿಗೆ ಮೆ-ಲ್ಲಡಿಯನಿಡು ಎಂದೆನುತ ನಡೆಯ ಕಲಿಸುವ ಸುಕೃತ7 ನೆಲನ ಈರಡಿಮಾಡಿ ಬಲಿಯ ಮೆಟ್ಟಿದ ಪಾದಚೆಲುವ ಚರಣದಿ ಭೂಮಿಯಳೆದ ಪಾದಶಿಲೆಯೆಡಹಿ ಬಾಲೆಯನು ಮಾಡಿದ ದಿವ್ಯವಾದಒಲಿದಿಟ್ಟು ನಡೆಯೆಂದು ನಡೆಯ ಕಲಿಸುವ ಸುಕೃತ8 ಅಂದಿಗೆ ಪಾಯ್ವಟ್ಟು ಕುಂದಣದ ಕಿರುಗೆಜ್ಜೆಸಂದಣಿಸಿ ಕಿರಿಬೆರಳೊಳುಂಗುರಗಳುಚೆಂದದ ಕಡಗ ಪಾಡಗ ಘಂಟೆ ಸರಪಣಿಯುಮಂದಗಮನನ ಪಾದಪದ್ಮಕ್ಕಿಡುವೊ ಸುಕೃತ9 ಸುಕೃತ 10 ದಿನಕರ ನಿಭಾಂಗ ಕೇಶವ ರಾಮಚಂದ್ರ ಮುನಿಸನಕಾದಿವಿನುತ ಕುಣಿದಾಡು ಎನುತತನ್ನ ಕರಗಳಲಿ ತಕ್ಕೈಸಿ ಕೃಷ್ಣನ ದಿವ್ಯಘನ್ನ ಚರಿತೆಯ ಪಾಡಿ ಪೊಗಳುವ ಸುಕೃತ11
--------------
ವ್ಯಾಸರಾಯರು
ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು
ಚರಣವೆಂಬ ದುರ್ಗಮ ದುರ್ಗ ಸೇರಿದೆ ನಿಜಭಕ್ತ ಜನರಿಗೆ ಆಭಯವ ಕೊಡುವಂಥ ಧ್ವಜವುಳ್ಳ ಪುರವಿದು ಪರರಿಗಸಾಧ್ಯ 1 ತನ್ನ ನಂಬಿದ ಇಂದ್ರ ಗಣಪತಿ ಇಹರೆಂದು ಚನ್ನ ವಜ್ರಾಂಕುಶ ಧರಿಸಿದೆ ನಿಧಿ ಪೂರ್ಣ 2 ನಿತ್ಯ ನಿರ್ಮಲವಿದು ಅಜ ಮೊದಲಾದವರು ಇಲ್ಲೆ ಸೇರುವರಯ್ಯ 3 ಕೆಳಗ ರವಿಯ ಕಾಂತಿ ಮ್ಯಾಲರ್ಧಾ ಶಶಿ ಛವಿ ಸ್ಥಳವಿದೆ ಭಾಗ್ಯಾಭಿಮಾನಿ ದೇವತೆಗೆ 4 ಸವಿಯಾದ ನದಿ ಇಲ್ಲಿ ಜನಿಸಿದೆ ಫಲ ಪದ್ಮ ಯವ ಮೊದಲಾದವಿವೆ ವಾಸುದೇವವಿಠಲನ್ನ ಚರಣವೆ 5
--------------
ವ್ಯಾಸತತ್ವಜ್ಞದಾಸರು
ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಪ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ 1 ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ 2 ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ 3 ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು 4 ಜಂಗಮ ಸ್ಥಾವರಕಾಧಾರವಾಗಿಹಳುಭಂಗಪಡುವ ಜನರ ಕರ್ಮವ ಕಳೆವಳುಹಿಂಗದೆ ಜಗವ ಪಾವನವ ಮಾಡುವ ಪುಣ್ಯಗಂಗೆಯೆಂಬಾಕೆ ನಿಮ್ಮಯ ಮಗಳು ದೇವ 5 ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳುಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು 6 ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲಸಂತೋಷವಾಗಿಹುದು ನಿನ್ನ ಸ್ಮರಣೆಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆಕಂತುಪಿತ ಕಾಗಿನೆಲೆಯಾದಿಕೇಶವನೆ 7
--------------
ಕನಕದಾಸ
ಜಗದಾದಿವಂದ್ಯನಿಗೆ ಶರಣುಪ ಪನ್ನಗಾನಗದೊಡೆಯ ಶರಣು 1 ತವಪದನಖಾಗ್ರಕೆ ಶರಣು2 ಮೂಡಲಾಗಿರಿಗೆ ಶರಣು ಗಿರಿಯ ಅಡಿದಾವರೆಗಳಿಗೆ ಶರಣು3 ನಡೆರ್ವಡಿಗಳಿಗೆ ಶರಣು4 ಮೆಟ್ಟು ಮೆಟ್ಟಲಿಗೆ ಶರಣು ಮನಮುಟ್ಟ ಮೆಟ್ಟಲೇರುತಿಹ ನಿನ್ನಿಷ್ಟ ಭಕ್ತರಿಗೆ ಶರಣು 5 ತನುಕಷ್ಟ ಹರಿಸಿ ಮನತುಷ್ಟಿಯನು ತೋರ್ವ ಬೆಟ್ಟದಂದಕ್ಕೆಲ್ಲ ಶರಣು 6 ಪರಿವಾರಕ್ಕೆಲ್ಲ ಶರಣು7 ಸ್ವರಶಬ್ದವಾಚ್ಯತವ ಶರಣು 8 ಚೆಲ್ವ ಗಾಳಿಗೋಪುರ ದ್ವಾರಕ್ಕೆ ಶರಣು 9 ಲೀಲೆಯಿಂದಲಿ ನಿನ್ನನೋಲೈಪ ಭಕ್ತರ ಪಾದಪಲ್ಲವಂಗಳಿಗೆ ಶರಣು 10 ಗೋವಿಂದ ಸಚ್ಚಿದಾನಂದ ಮುಕುಂದನೆಂದು- ಚ್ಚರಿಪ ಭಕ್ತರಿಗೆ ಶರಣು11 ಹರಿ ಹರೀ ಹರಿ ಎಂದು ಹರಿದಾರಿ ಪಿಡಿದ ವರ ಅಡಿದಾವರೆಗಳಿಗೆ ಶರಣು 12 ಪರಿಪರಿ ಭಾಧೆಯಿಂ ತರಳನ್ನ ಕಾಯ್ದ ಶ್ರೀ ನರಹರಿಯ ಚರಣಾರವಿಂದಕ್ಕೆ ಶರಣು 13 ತಿರುದಾರಿ ಮೊಣಕಾಲ ಮುರಿಗೆ ಶರಣು 14 ಭಕ್ತರಾಪತ್ತಳಿವ ಶಕ್ತಿಸಂಪತ್ತೀವ ಉತ್ತಮೋತ್ತಮ ಭಕ್ತರಾ ಮಂಟಪಕ್ಕೆ ಶರಣು 15 ಭಕ್ತಿಯಿಂದಲಿ ಸಪ್ತಗಿರಿಯ ದಾಟಿದ ಹರಿ- ಭಕ್ತಜನಸಂದೋಹಗಳಿಗೆ ಶರಣು 16 ಭಕ್ತರುಧ್ಧರಿಸಲು ನಿಂದ ಸಮೀರನಿಗೆ ಶರಣು17 ಜೀವರಿವರೆನ್ನುವರು ದರುಶನವನೀಯೆಂದು ಕ- ರವ ಮುಗಿದು ಹರಿಯ ಸ್ತುತಿಸುವಗೆ ಶರಣು 18 ಪಾವನಾ ಮೂರ್ತಿಯನು ಮಾನಸದಿ ಧೇನಿಸಲು ಭಾವಶುಧ್ದಿಯನೀವ ಜೀವೇಶನಿಗೆ ಶರಣು 19 ಸಚ್ಚಿದಾನಂದಾತ್ಮ ಶ್ರೀ ಮುಕುಂದನ ದಿವ್ಯ ಅರಮನೆಯ ಮಹಾದ್ವಾರಕ್ಕೆ ಶರಣು 20 ಸಿರಿ ಅವ್ಯಾಕೃತಾಕಾಶಾವರಣಕ್ಕೆ ಶರಣು 21 ತೀರ್ಥಮಹಿಮೋಪೇತ ಸ್ವಾಮಿಪುಷ್ಕರಣೀ- ತಟವಿರಾಜಿತ ಅಶ್ವತ್ಥವೃಕ್ಷರಾಜನಿಗೆ ಶರಣು22 ಭೂದೇವಿಯಾರಮಣ ಆದಿಭೂವರಹ ಮೂರ್ತಿಯ ಶ್ರೀಪಾದಯುಗ್ಮಕ್ಕೆ ಶರಣು 23 ಬ್ರಹ್ಮಾಂಡದೊಡೆಯನ ದಿವ್ಯ ನಿಲಯದೊಳಿರುವ ಬಹಿರಾವರಣಕ್ಕೆ ಶರಣು 24 ಸರ್ವಗುಣಸಂಪೂರ್ಣ ವೈಕುಂಠಮಂದಿರನ ಸ್ವರ್ಣಮಯ ಸುಪರ್ಣಸ್ಥಂಭಕ್ಕೆ ಶರಣು 25 ಗಮನ ನಿರ್ಗಮನವುಳ್ಳ ಸುಮನಸರ ಭಕ್ತಜನಸಂಘಕ್ಕೆ ಶರಣು26 ಅಂತರಾವರಣಕ್ಕೆ ಶರಣು 27 ಕಾಂಚನರೂಪ ಸುವರ್ಣಮುಖರೀನದಿ ವಿ- ರಾಜಿತ ತೊಟ್ಟಿತೀರ್ಥ ಸಮಸ್ತ ತೀರ್ಥಗಳಿಗೆ ಶರಣು 28 ಸುಮನಸರು ಹೃನ್ಮನದಿ ಧೇನಿಸುವ ಕಾಂಚನ ವಿಮಾನದಲಿ ಬೆಳಗುತಿಹ ಶ್ರೀ ಶ್ರೀನಿವಾಸನಿಗೆ ಶರಣು 29 ಭೂಗಿರಿಯ ಸೇರಿದ ಶ್ರೀಹರಿಗೆ ಶರಣು 30 ವಾರಿಯೊಳಗ್ಯೋಲಾಡಿ ಶ್ರೀಶೈಲದೊಳು ನಿಂ- ತ ಶ್ರೀಲೋ¯ನಾಗಿರ್ಪಗೆ ಶರಣು31 ಶೇಷ್ಠನೆನಿಸಿದ ದಿಟ್ಟ ಮೂರುತಿಗೆ ಶರಣು 32 ಧರೆಯ ಕೆದರೀ ಬಂದು ಗಿರಿಯ ವರಹನ ಬೇಡಿ ಮರುಳುಮಾಡಿದ ಮಾಯಾರಮಣನಿಗೆ ಶರಣು 33 ತರಳರೂಪವ ಕೆಡಿಸಿ ಗಿರಿಯ ಹುದರಯೊಳಡಗಿ ಸುರಜೇಷ್ಠನೆಂದೀಗ ಪೂಜೆ ಗೊಂಬುವಗೆ ಶರಣು 34 ವಟಪತ್ರಶಾಯಿ ನೀ ವಟುವಾಗಿ ಬೇಡಿ ಭ- ವಾಟವಿಯ ದಾಟಿಸಲು ನಿಂದವಗೆ ಶರಣು 35 ಪೆತ್ತಮಾತೆಯ ಹರಿಸಿ ಮೆತ್ತನಿಲ್ಲಿಗೆ ಬಂದು ಉತ್ತಮಾಗತಿಪ್ರದ ಸರ್ವೋತ್ತಮಗೆ ಶರಣು 36 ಕ್ಷಿತಿಸುತೆಯ ಮಾತನು ಹಿತದಿ ಪಾಲಿಸೆ ವೇದ- ವತಿಯ ಪತಿಯಾಗಿ ನಿಂದವಗೆ ಶರಣು 37 ಗುಟ್ಟಾಗಿ ಪಾಲ್ಕುಡಿದು ಪೆಟ್ಟಿನಾ ನೆಪದಲ್ಲಿ ದೃಷ್ಟಿಗೋಚರನಾದ ಬೆಟ್ಟದೊಡೆಯನಿಗೆ ಶರಣು38 ಉತ್ತಮಾಸ್ತ್ರೀಯರಿಗೆ ನಾಚಿ ಬತ್ತಲೆಯಾಗಿ ಹುತ್ತದೊಳು ಅಡಗಿಯೆ ಮೆರೆದವಗೆ ಶರಣು 39 ಸಿರಿಯ ಹಯವನು ಮಾಡಿ ಚರಿಸಿ ಹರಿಸಿಕೊಂಡವನಿಗೆ ಶರಣು 40 ಹಿರಣ್ಯಗರ್ಭನ ಜನಕ ಸನ್ಮಹಿಯ ಸನ್ನಿಧಿಯ ಕನಕಮಯಕವಾಟಕ್ಕೆ ಶರಣು 41 ತಟಿಕ್ಕೋಟಿನಿಭ ಪೂರ್ಣ ಸಂಪೂರ್ಣ ಲಕ್ಷಣ ಸನ್ಮಾಂಗಳಾ ಸುಂದರ ಮೂರ್ತೇ ತವ ಶರಣು42 ಮುಕ್ತಾಮುಕ್ತಗಣ ವಂದಿತಾ ತವ ಶರಣು43 ನಂದಸುನಂದನ ಜಯವಿಜಯಾದಿ ಪಾ- ಸಂಸೇವ್ಯಮಾನ ತವ ಶರಣು44 ಸರ್ವಾಂಗುಳ್ಳಂಗುಷ್ಠದಳ ವಿಲಸಿತ ಸತ್ ಪಾದ- ಪಂಕಜ ಧ್ವಜ ವಜ್ರಾಂಕುಶಾದಿ ಸುಚಿಹ್ನ ಚಿಹ್ನಿತ ತವ ಶರಣು 45 ಗುಲ್ಫಾರುಣನಖ ಧೃತಾ ದೀಧಿತಿಯುಕ್ತ ತವ ಶರಣು 46 ಬೃಹತ್ ಕಟಿತಟಶ್ರೋಣಿ ಕರಭೋರು ದ್ವಯಾನಿಶ್ರ ತವ ಶರಣು 47 ವೈಜಯಂತಿ ವನಮಾಲ ತವ ಶರಣು 48 ಪ್ರಲಯ ಪೀವರಭುಜ ತುಂಗಂಶೋರಸ್ಥ ಲಾಶ್ರಯ ತವ ಶರಣು 49 ನ್ವಿತ ತವ ಶರಣು50 ಚಾರುಪ್ರಸನ್ನವದನ ಮಂದಹಾಸ ನಿರೀಕ್ಷಣ ಸು- ಭದ್ರನಾಸ ಚಾರುಸುಕರ್ಣ ಸುಕಪೋಲಅರುಣ ತವ ಶರಣು 51 ಸಹಸ್ರ ಫÀಣಶಿರೋಮಣಿಪ್ರಭಾನ್ವಿತ ಶೇಷಶೈಲಸ್ಥ ಶಾಂತ ಪದ್ಮಪತ್ರಾಯತೇಕ್ಷಣ ತವ ಶರಣು 52 ಅನಂತವೇದೋಕ್ತ ಮಹಿಮೋಪೇತ ಸರ್ವಸ್ವರವರ್ಣ ಸರ್ವಶಬ್ದವಾಚ್ಯ ಪ್ರತಿಪಾದ್ಯ ಶರಣು 53 ಸಚ್ಚಿದಾನಂದಾತ್ಮ ಸರ್ವಸುಗುಣೋಪೇತ ಸರ್ವ ಹೃತ್ಕಮಲಸ್ಥಿತ ತವ ಶರಣು 54 ಅಣುತ್ರ್ಯಣು ತೃಟಿಲವ ಕ್ಷಣಾದಿಕಾಲ ಮಹ- ತ್ಕಾಲಾತ್ಮಕ ನಿತ್ಯನಿರ್ಮಲಮೂರ್ತೇ ತವ ಶರಣು 55 ಪರ ಮೇಷ್ಟಿವಂದಿತ ತವ ಶರಣು 56 ತೈಜಸ ಪ್ರಾಜ್ಞ ತುರ್ಯಾ ದ್ಯಷ್ಟರೂಪಾತ್ಮಕ ತವ ಶರಣು57 ಕಂಸಾರಿ ಮುರಾರಿ ಶ್ರೀಹರಿಯೆ ಶರಣು58 ಭವರೋಗಭೇಷಜ ಭಕ್ತಜನಬಂಧೋ ಮುಚುಕುಂದವರದ ಗೋವಿಂದ ಶರಣು 59 ಮುಕ್ತಾಮುಕ್ತಾಶ್ರಯ ಭಕ್ತಜನಸಂರಕ್ಷಣಾ ವ್ಯಕ್ತಾವ್ಯಕ್ತ ಮಹಿಮ ತವ ಶರಣು 60 ತತ್ತದಾಕಾರ ಜಗದಾಪ್ತ ಶರಣು 61 ಚೇತನಾಚೇತನ ವಿಲಕ್ಷಣ ಸ್ವಗತಭೇದವಿವ- ರ್ಜಿತ ಪತಿತಪಾವನಮೂರ್ತೇ ತವ ಶರಣು 62 ಕ್ಷರಾಕ್ಷರ ಪರುಷಪೂಜಿತ ಪಾದ ಪುರಾಣಪುರುಷೋತ್ತಮನೆ ಶರಣು 63 ರವಿಕೋಟಿಕಿರಣ ರತ್ನಕನಕಮಯ ಮುಕು- ಟಾನ್ವಿತ ತವಶಿರಸ್ಸಿಗೇ ತವ ಶರಣು 64 ಸುಂದರಾನಂದ ಆನನಕೆ ಶರಣು 65 ಶ್ರೀಲೋಲ ಶರಣು 66 ಪೂವಿಲ್ಲನಾ ಬಿಲ್ಲ ಪೋಲ್ವ ಹುಬ್ಬು ಕಂಜ - ದಳದೋಲ್ ಚಂಪಕಾಮುಗುಳಿಗೆಣೆನಾಸಿಕಕೆ ಶರಣು 67 ಮಕರ ಕರ್ಣಕುಂಡಲಾನ್ವಿತ ತವ ಕರ್ಣಕ್ಕೆ ಶರಣು 68
--------------
ಉರಗಾದ್ರಿವಾಸವಿಠಲದಾಸರು
ಜಯ ಜಯ ಜಯ ಜಯ ಜಯ ವಿಷ್ಣುಪಾದ ಜಯ ಶೇಷಗಿರಿಯಲ್ಲಿ ಮೆರೆವಂಥಾ ಪಾದ ಜಯ ಭಕ್ತಕೋಟಿ ಜೀವರ ಸಲಹುವ ಪಾದ ಸಿರಿ ಪಾದ 1 ಧ್ವಜ ವಜ್ರಾಂಕುಶ ಪದ್ಮ ಪಾದ ನಿಜದಿ ಸಲಹುವ ಗಂಗಾಜನಕನ ಪಾದ ಮದಗಜಗಮನನ ಪಾದ ಪಾದ 2 ಪೀತಾಂಬರಧರನ ಪಾದ ಪಾದ ಸೀತಾಪÀತೆ ದಿವ್ಯಹನುಮಾನುತ ಪಾದ ಪಾದ 3 ಹಾರ ಪದಕವಿಟ್ಟ ಪಾದ ತನ್ನ ನಾರಿ ಲಕುಮಿ ಸಹ ಮೆರೆವಂಥ ಪಾದ ಪಾರುಗಾಣಿಪ ದಿವ್ಯ ನೋಟದ ಪಾದ ಪಾದ ಭವವಾರುಧಿ ದಾಟಿಸುವ ದಿವ್ಯಪಾದ 4 ಮಕರ ಕುಂಡಲಧರನ ಪಾದ ತನ್ನ ಸಖ ಪಾಂಡವರಿಗೆ ಒಲಿದಂಥ ಪಾದ ಶಿಖೆಯೊಳು ಮಾಣಿಕ್ಯ ಕಿರೀಟನ ಪಾದ ಪಾದ 5 ಪಾದ ಪಾದ ಅಮೃತ ತಂದ ಪಾದ ಅಚ್ಚ ಭೂಮಿಯ ತಂದ ಪಾದ ಪಾದ 6 ಭೂಮಿಯನಳೆದಂಥ ಪಾದ ಭೂವ್ಯೋಮ ತ್ರಿವಿಕ್ರಮ ವಾಮನ ಪಾದ ಸ್ವಾಮಿ ಪರಶುಧರನ ಪಾದ ಪಾದ 7 ಗೋಕುಲನಂದನ ಪಾದ ಶ್ರೀಪತಿ ಬೌದ್ಧನ ಪಾದ ಪರಿ ನೆನಯಲಿ ಶ್ರೀಪ ಕಲ್ಕಿ ಪಾದ ಪಾದ 8 ಹತ್ತಾವತಾರ ಎತ್ತಿದ ಪಾದ ಭಕ್ತರನೆಲ್ಲಾ ಸಲಹುವ ಪಾದ ಮುಕ್ತಿದಾಯಕ ಕೃಷ್ಣನ ಪಾದ ಪಾದ 9 ಮೂರು ಹೆಜ್ಜೆ ಭೂಮಿ ಬೇಡಿದ ಪಾದ ತನ್ನ ಹಾರೈಸಿದ ಭಕ್ತರಿಗೋಸುಗ ಊರಿ ವೆಂಕಟಗಿರಿಯೊಳ್ ಮೆರೆವಂಥಾ ಭಕ್ತ ಪಾದ 10 ಪಾದ ಮಸ್ತಕದಿ ರಾರಾಜಿಸುವ ಕಿರೀಟನ ಪಾದ ಕಸ್ತೂರಿ ರಂಗನ ಪಾದ ಪಾದ 11
--------------
ಸರಸ್ವತಿ ಬಾಯಿ
ಜಯದೇವ ಜಯದೇವ ಜಯ ವೆಂಕಟೇಶಾ| ಶ್ರಯ ಸುಖದಾಯಕ ಸ್ವಾಮಿ ಉರಗಾಚಲವಾಸಾ ಪ ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ| ಸುರವರ್ಧನ ಮುರಮರ್ದನ ಗೋವರ್ಧನಧಾರಿ| ವರಮಂದಿರ ಧೃತಕುಂದರ ಸುಂದರ ಸಹಕಾರಿ| ಶೌರಿ 1 ಜಗಕಾರಣ ಪರಿಪೂರಣ ಸುಂದರಸಾಕಾರಾ| ಅಘಹರಣಾ ಮುನಿ ಸ್ಫರಣಾತ್ರಯ ಭುವನಾಧಾರಾ| ನಗಧರಣಾ ತವಶರಣಾಭರಣಾ ಮಯೂರಾ| ಭೃಗುಚರಣಾಂಕಿತ ಚರಣಾಂಬುಜ ಶೋಭಿತ ಧೀರಾ 2 ಸುಖಕರ್ತಾ ದುಃಖಹರ್ತಾ ಸರಸೀರುಹ ನಯನಾ| ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ| ನಿಖಿಲಾಸುರ ತಮಭಾಸುರ ದುರಿತಾವಳಿ ಶಮನಾ| ಮಕರಾಂಕಿತ ಪಿತಮಹೀಪತಿ ನಂದನಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ. ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ 1 ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ 2 ಭವ ಚಾರು ಚರಣವ ತೋರು ಎನಗೆ 3
--------------
ಗುರುಗೋವಿಂದವಿಠಲರು
ದಯದೋರು| ದಯದೋರು | ದಯದೋರು | ಜನನಿ ಪ ಜಯ ಜಗನ್ಮಾತೆ ನೀ | ದಯದೋರಿ ಪೊರೆ ನೀ ಅ.ಪ ಆದಿ ನಾರಾಯಣಿ | ಮಾಧವಭಗಿನಿ || ಸಾಧುಸುಪ್ರೀತೆ ನೀ| ವೇದವಂದಿತೆ ನೀ 1 ಭುವನಪಾಲಿನಿ ದೇವಿ | ಭುವನವಂದಿತೆ ನೀ || ಭವಭಯಹಾರಿಣಿ | ಭುವನೇಶ್ವರಿ ನೀ 2 ಶಂಖಚಕ್ರಾಂಕಿತೆ | ಶಂಕರಿ ಸುಗುಣಿ | ವೆಂಕಟರಮಣನ | ಪ್ರೇಮದ ಭಗಿನಿ 3
--------------
ವೆಂಕಟ್‍ರಾವ್
ದಾಸರಾಗಿರಿ ದಾಸರಾಗಿರಿ ದಾಸರಾಗಿರಿ ಬೇಗನೆ ಪ. ದಾಸರಾಯರ ಪದವ ನಂಬಿ ವಾಸುದೇವಗೆ ಬೇಗನೆ ಅ.ಪ ದುಷ್ಟಮನ ಕಲ್ಮಷವ ಕಳದು ಸೃಷ್ಟಿಕರ್ತನ ಭಜನೆ ಮಾಡುತ ಕಷ್ಟಗಳನೀಡಾಡಿರಿ 1 ತಂದೆ ಮುದ್ದುಮೋಹನರೆಂ- ತೆಂದು ಮೆರೆಯುವ ಗುರುಗಳ ದ್ವಂದ್ವ ಪಾದವ ಭಜಿಸಿ ಈ ಭವ ಬಂಧನವನೀಗಾಡುತ 2 ಜನನ ಮರಣ ನೀಗುವುದಕೆ ಕೊನೆಯ ಮಾರ್ಗವು ದಾಸತ್ವ ಘನಮನದಿ ಸ್ವೀಕಾರ ಮಾಡಿ ವನಜ ನಯನನ ಪಾಡಿರಿ 3 ಅಂಕಿತವ ಸ್ವೀಕಾರ ಮಾಡಿರಿ ಶಂಕಿಸದೆ ಶ್ರೀಗುರುಗಳಿಂ ಶಂಖ ಚಕ್ರಾಂಕಿತನ ಗುಣಮನ ಪಂಕಜದೊಳು ಸ್ಮರಿಸಿರಿ 4 ಆದಿಯಿಂದಲಿ ಇಹುದು ಜೀವಗೆ ಶ್ರೀಧರನ ದಾಸತ್ವವು ಈ ಧರ್ಮ ತಿಳಿಯದಲೆ ಗರ್ವದಿ ಹಾದಿ ತಪ್ಪಲಿ ಬೇಡಿರಿ 5 ಜಗದೊಡೆಯ ಶ್ರೀ ಹರಿಯು ಸರ್ವದ ನಿಗಮಗಳಿಗಾಧಾರನು ಬಗೆಬಗೆಯ ಜೀವರೊಳಗಿರುತಲಿ ಸುಗುಣವಂತರ ಪೊರೆವನು 6 ಈ ಪರಿಯ ದಾಸತ್ವ ಹೊಂದಿ ನಿ ರ್ಲೇಪರಾಗಿರಿ ಕರ್ಮದಿಂ ಗೋಪಾಲಕೃಷ್ಣವಿಠ್ಠಲನು ರೂಪ ತೋರ್ವನು ಹೃದಯದಿ 7
--------------
ಅಂಬಾಬಾಯಿ
ದಾಸರಾಯರ ಪಾಡಿರೋ | ರಂಗನೊಲಿದ ಶ್ರೀ |ದಾಸರಾಯರ ಪಾಡಿರೋ ಪ ದಾಸರಾಯರ ಪಾಡಿ | ದೋಷಗಳೀಡಾಡಿಶಾಶ್ವತ ಲೋಕಗ | ಳಾಶಿಪ ಜನರೆಲ್ಲಾ ಅ.ಪ. ಮಾನವಿ ಕ್ಷೇತ್ರಸ್ಥಿತನೂ | ಘನಕರ್ಣೀಕ ನರಸಪ್ಪನೆಂಬ ದ್ವಿಜನೂ |ಜ್ಞಾನಿ ತಿಮ್ಮಣ್ಣನ ಸತಿಸಹಿತ ಸೇವಿಸೆಮಾನ್ಯ ಸಹ್ಲಾದ ತಾ ಸುತನಾಗಿ ಜನಿಸಿದ 1 ಶಾಲಿವಾಹನ ಶಕವೂ | ಮತ್ತೇಗಾಳಿಗಣಯುತ ಹತ್ತಾರ್ನೂರು |ಕೀಲಕವತ್ಸರ ಶುಕ್ಲ ಶ್ರಾವಣದಲ್ಲಿಶೀಲ ವೆರಡೆನೆ ದಿನ ಜನಿಸಿಹರನ್ನಾ 2 ಈತನು ಹರಿಭಕ್ತನೊ | ಪ್ರಹ್ಲಾದಗೆಪ್ರೀತಿಯ ಸೋದರನೋಧಾತ ಜನಕ ಹರಿ ಮಾತಿನಿಂದಲಿ ಇವಖ್ಯಾತನಾಗಿ ಶ್ರೀನಿವಾಸನೆಂದೆನಿಸಿದ 3 ಆದ ಸಕಾಲದಿ ದ್ವಿಜನು | ಸದ್‍ಬೋಧಿತ ವರದೇಂದ್ರರಿಂ |ಭೇದ ಮತದೊಳದ್ವಿತೀಯ ನೆಂದೆನಿಸುತ್ತವಾದಿ ನಿಗ್ರಹದೊಳತ್ಯಾದರವನೆ ಪೊತ್ತ4 ಒದಗಲುದ್ಧುøತ ಕಾಲವೂ | ಪ್ರಾಪ್ತಸಾಧು ವಿಜಯ ದಾಸರು | ಮುದದಿ ನರ್ತವಗೈದು ಕೀರ್ತನೆ ಪಾಡಲುಹದಗೆಟ್ಟನಿವನೆಂದು ಬಿರುನುಡಿ ನುಡಿದಂಥಾ5 ಒದಗಲುದರ ರೋಗವೂ | ಮುಂದೆಹದನ ಕಾಣದೆ ತಪಿಸಾಲು |ಮೋದ ತೀರ್ಥರ ರೂಪ ಆದರದಲಿ ಭಜಿಸಿಸಾಧು ಸೋತ್ತಮ ದ್ರೋಹ ಕಳವ ಮಾರ್ಗವ ತಿಳಿದ6 ವಿಜಯ ದಾಸರ ಪಾದವಾ | ತಮ್ಮಯನಿಜ ಶಿರದೊಳು ಪೊತ್ತು ಮೆರೆವಾ |ನಿಜ ಶಿಷ್ಯ ಗೋಪಾಲದಾಸರಲ್ಲಿಗೆ ಬಂದುಭಜಿಸೆ ಅವರ ಆಯು ನಾಲ್ವತ್ತು ಪಡೆದಂಥ 7 ಮಂತ್ರಿತ ಭಕ್ಕರಿಯಾ | ಭುಜಿಸೆ ದೇಹಯಂತ್ರ ಸಾಧನ ಕೊದಗಲೂ |ಮಂತ್ರೋಪದೇಶವ ಗೊಳ್ಳುತ ಮುದದಿಂದೆಯಂತ್ರೋದ್ಧಾರಕ ಪ್ರಿಯ ರಂಗನ ಒಲಿಸಿದ 8 ಇಂದು ಭಾಗದಿ ಸ್ನಾನವೂ | ಮಾಡುತಲಿರೆಸ್ಕಂಧಾ ರೋಹಿತ ಶಿಲೆಯಸ್ಥ |ಇಂದಿರಾ ರಮಣ ಶ್ರೀ ಜಗನ್ನಾಥ ವಿಠಲನಸುಂದರಾಂಕಿತವನ್ನು ಧರಿಸಿದ ಶಿರದಲ್ಲಿ 9 ಪಾಂಡುರಂಗನ ಕಾಣುತ | ತನ್ನಯದಿಂಡುಗೆಡಹಿದ ಆಕ್ಷಣಾ |ಅಂಡಜಾಧಿಪನುದ್ದುಂಡ ದೇವರ ದೇವಪುಂಡರೀಕಾಕ್ಷನ ಪಾದಕೆ ಶರಣೆಂದ 10 ಸ್ವಾದಿ ಕ್ಷೇತ್ರಕ್ಕ ಪೋಗೀ | ಪೂಜ್ಯರಾದವಾದಿರಾಜರ ಪೂಜಿಸೀ |ಸಾಧು ವರ್ಯರ ಆಜ್ಞಾಧಾರಕರಿವರಾಗಿಬುಧರಿಗೆ ಹರಿಕಥಾ ಸುಧೆಯ ಸಾರವನಿತ್ತ 11 ಪದ ಸುಳಾದಿಗಳಿಂದಲಿ | ಹರಿಯ ಪಾದಸದ್ವನಜವ ಸ್ತುತಿಸುತಲೀ |ಹೃದಯ ಸದ್ಮದಿ ತದ್ಧಿಮಿ ಧಿಮಿ ಧಿಮಿಕೆಂದುವಿಧಿಪಿತ ಹರಿಯನ್ನ ಕುಣಿಸಿ ಮೋದಿಸಿದಂಥ 12 ಸುವತ್ಸರವು ಶುಕ್ಲದೀ | ಸಿತಭಾದ್ರನವಮಿ ತಾರೆಯು ಮೂಲದೀ |ರವಿಯ ವಾರವು ಸಂದ ಶುಭದಿನದಲಿ ಗುರುಗೋವಿಂದ ವಿಠಲನ ಸೇರಿ ತಾಮೆರೆದಂಥ 13
--------------
ಗುರುಗೋವಿಂದವಿಠಲರು
ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ ನ್ನೆರಡನೆಯದಾವುದುಂಟು ಪ. ಪರಿಪರಿಯಲಿ ನೋಡೆ ಪರಮ ವೈಭವದಿಂದ ಧರಣಿಯೊಳು ಮೆರೆಯುತಿಹುದು ಇಹುದುಅ.ಪ. ಹಂಸನಾಮಕನಿಂದ ಹರಿದು ಬಂದಂಥ ಯತಿ ಸಂಸ್ಥಾನ ಸುರನದಿಯೊ ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ ಹಂಸಗಳು ಸುರಿಯುತಿರಲು ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ- ದ್ವಂಶರಿಗೆ ಸಾರುತಿರಲು ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ ವಂಶದಲಿ ಉದಿಸಿ ಬರಲು ಬರಲು 1 ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ ಹ್ಮಣ್ಯರಾ ಕರದಿ ಬೆಳೆದು ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ ಧನ್ಯಯತಿಯಾಗಿ ಮೆರೆದು ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ ಚನ್ನಾಗಿ ಮನನಗೈದು ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ ತನ್ನ ಭಕ್ತಿಯೊಳ್ ಕುಣಿಸಿ ನಲಿದು 2 ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ ದುರುಳ ಮತಗಳನೆ ಮುರಿದು ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು ಹರಹಿ ಪ್ರಕಾಶಗೈದು ಸರ್ವ ಸಜ್ಜನರ ಮನದಂದಕಾರವ ಕಳೆದು ಸಿರಿವರನ ಪ್ರೀತಿ ಪಡೆದು ತಿರುವೆಂಗಳೇಶನ ಪರಮ ಮಂಗಳ ಪೂಜೆ ವರುಷ ದ್ವಾದಶವಗೈದು ಮೆರೆದು 3 ಆರಸನಿಗೆ ಬಂದಂಥ ಆಪತ್ಕುಯೋಗ ಪರಿ ಹರಿಸಿ ಸಂಸ್ಥಾನ ಪಡೆದು ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು ಪರಮ ವೈಭವದಿ ಮೆರೆದು ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ ಅರಸನಿಗೆ ರಾಜ್ಯವೆರೆದು ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು ಮೊರೆಪೊಂದಿದವರ ಪೊರೆದು ಬಿರುದು 4 ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ ನಿಲ್ಲಿಸುತ ಪೂಜೆಗೈದು ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ ದಲ್ಲಿ ಬಂಧನವಗೈದು ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ ನಿಲ್ಲಿಸದೆ ದೂರಗೈದು ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ ಯಲ್ಲಿ ಶಿಷ್ಯರನು ಪಡೆದು ನಿಂದು 5 ನವಕೋಟಿ ಧನಿಕ ವೈರಾಗ್ಯ ಧರಿಸುತ ಭವದ ಬವಣೆಯಲಿ ನೊಂದು ಬಂದು ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ ಅವನಂತರಂಗವರಿದು ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ ನವ ಜನ್ಮವಿತ್ತು ಪೊರೆದು ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ ತ್ನವ ಪೂರ್ವಗುರುವಿಗೊರೆದು ಸುರಿದು 6 ಪುರಂದರ ಕನಕರೆಂ ಬತುಲ ಶಿಷ್ಯರ ಕೂಡುತಾ ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ ಸ್ಮøತಿ ಮರೆದು ಕುಣಿದಾಡುತಾ ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ ಮತಿಯೊಳ್ ನಾಲ್ವರುಗೈಯುತಾ ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ ಯತಿವರರ ಸೃಷ್ಟಿಸುತ್ತಾ | ಸತತ 7 ಅಂದು ವಿಜಯೀಂದ್ರರನು ಯತಿವರರು ಬೇಡÉ ಆನಂದದಲಿ ಭಿಕ್ಷವಿತ್ತ ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ ಮುಂದಾಳಲೆನುತಲಿತ್ತ ಪತಿ ವೆಂಕಟೇಶನ್ನ ಪೂಜೆ ವರ ಕಂದನಿಗೆ ಒಲಿದು ಇತ್ತ ಒಂದೊಂದು ವೈಭವವು ಕೈ ಸೇರೆ ವೈರಾಗ್ಯ ತಂದು ಅಭಿರೂಪ ಬಿಡುತಾ | ಕೊಡುತ 8 ನವವಿಧದÀ ಭಕ್ತಿಯಲಿ ಜ್ಞಾನ ವೈರಾಗ್ಯದಲಿ ಕವನದಲಿ ಶಾಂತತೆಯಲಿ ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ ಸವಿನಯವು ಸದ್ಗುಣದಲೀ ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ ಅವನಿ ಸಂಚಾರದಲ್ಲಿ ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ ಭುವನದಲಿ ಮೆರೆದ ಧನ್ಯಾ | ಮಾನ್ಯ 9 ಪಾಪಿಗಳ ಸಲಹಿ ಪಾವನ್ನಗೈಯುತ ಭವದ ಕೂಪದಿಂದುದ್ಧರಿಸಿದಾ ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ ಶ್ರೀಪಾದ ಪದುಮ ರಜದಾ ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು ತಾ ಪಾಲಿಸುತ ನುಡಿಸಿದ ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ ಗೋಪ್ಯಸ್ಥಳದಲಡಗಿದಾ 10
--------------
ಅಂಬಾಬಾಯಿ