ಒಟ್ಟು 132 ಕಡೆಗಳಲ್ಲಿ , 45 ದಾಸರು , 117 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸೋಜಿಗವಯ್ಯ ಪಂಪಾಪತೇ ಪ ನೀನೆ ಪರನೇಂಧ್ಹೇಳ್ವ | ದೀನ ಜನಗಳನೆರಹೀ ಅ.ಪ. ಹರಿಯಾಜ್ಞೆಯನುಸರಿಸಿ | ದುಶ್ಯಾಸ್ತ್ರ ಬಿತ್ತರಿಸಿಹರಿಪರನು ಎಂತೆಂಬ | ವರ ಜ್ಞಾನ ಮರೆಸೀ |ಸರ್ವ ತಮೋ ಯೋಗ್ಯ | ನರರಿಗ್ವರಗಳನಿತ್ತುಉರುತರೈಹಿಕ ಸುಖದಿ | ಮೆರೆಸುವಿಯೊ ಪರವಾ 1 ಜಂಗಮರು ಜೋಗಿಗಳು | ಲಿಂಗಗಳ ಧರಿಸಿಹರುಮಂಗಳಾತ್ಮಕ ನಿನ್ನ | ಅಂಗದೊಳಗೈಕ್ಯಾ |ಮಂಗನಂದದಿ ಬಯಸಿ | ಮಂಗಳವ ಕಳಕೊಂಡುಭಂಗ ಪಡುವರು ಪರದಿ | ಶೃಂಗಾರ ಮೂರ್ತೇ 2 ಹರಿಕಾರ್ಯ ಸಾಧಕರ5ಲೆರಡನೇ ಂiÀ5ನಾಗಿಪರಮ ವೈ5ವನೆನಿಸಿ | ಭೂ ಭುಜರಿಗೇಹರಿ ಪುರದ ದಾರಿಯನು | ತೋರಿಸುತ ಮೆರೆಯುತಿಹವಿರೂಪಾಕ್ಷ ನಿನಚರಣ | ಸರಸಿಜಕೆ ನಮಿಪೇ 3 ಮರುತಾತ್ಮ ಸಂಭೂತ | ವೈರಾಗ್ಯನಿಧಿ ಶಿವನೆಗಿರಿಜೆಯಳ ಪರಿಗ್ರಹಿಪ | ಕಾರ್ಯ ನಿರ್ವಹಿಸೀ |ಶರಣ ಜನ ಸಂದೋಹ | ನೆರಹಿ ವೈಭವದಿಂದಪರಮ ಮುದವನು ಈವೆ | ಹರಿಯ ಭಕುತರಿಗೆ 4 ಮಾಧವ ಗುರು | ಗೋವಿಂದ ವಿಠ್ಠಲನಸಂದರ್ಶನಾದಿಯಲಿ | ಛಂದದಲಿ ಗೈದೂ |ಬಂದು ನಿನ್ನಂಘ್ರಿಗಳ | ದ್ವಂದ್ವ ಕೆರಗುವ ಭಕ್ತವೃಂದಗಳಿಗೀವೆಯಾ | ನಂದ ಸಂದೋಹ 5
--------------
ಗುರುಗೋವಿಂದವಿಠಲರು
ಏಸು ಜನ್ಮದ ಸುಕೃತವದು ಬಂದು ಒದಗಿತೋದೇಶಿಕೋತ್ತಮನ ದಯದಿಆಸೆಗಳು ಮರೆಯಾಗಿ ಆಷ್ಟ ಪಾಶಗಳಳಿದುಈಶ ಸರ್ವೇಶನಾಗಿ ಹೋದೆ ಪ ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆಮಂಗಳವೆ ತೋರುತಿಹುದು ಅಹುದುತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-ದಿಂಗಳನೆ ಹರಡಿದಂತೆ ಅಂತುಕಂಗೊಳಿಸುತಿಹುದು ಬಗೆಬಗೆಯ ವರ್ಣಛಾಯೆಅಂಗ ವರ್ಣಿಸುವರಾರೋ ಆರೋಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದುಹಿಂಗದನುದಿನ ತೋರುವ ಗುರುವಾ 1 ಅಮೃತ ಕಳದಿ ಝಳದಿ 2 ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆಚಿತ್ತವೆಂಬುದು ಸಾಯೇ ಬೇಯೆಮತ್ತೆ ಮನ ದೃಗ್ ದೃಶ್ಯ ಧಾರಣರವರುಎತ್ತ ಹೋದರೋ ಎಲ್ಲರೂಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರುಎತ್ತುವರು ಇಲ್ಲದಾಯ್ತು ಹೋಯ್ತುಪ್ರತ್ಯಗಾತ್ಮನು ಚಿದಾನಂದ ಗುರು ತಾನಾದಅತ್ಯುಕ್ತಿ ಹೇಳ್ವುದೇನು ಏನು 3
--------------
ಚಿದಾನಂದ ಅವಧೂತರು
ಏಳು ಏಳು ಏಳು ಲೋಕದ ಒಡಿಯನೆ | ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ | ಅಪ್ರಾಕೃತ ಕಾಯಾ ಸುರಮುನಿ ಗೇಯಾ | ಏಳು ಗೋಪಾಲಕೃಷ್ಣ ಪ ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು | ಶರಧಿ ತೆರೆ ತಗ್ಗಿದವು ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ | ಸುರ ವೈರಿಗಳು ಅಡಗಲು | ಅರಳಿದವು ಅರವಿಂದ | ಝಂಕರಿಸಿ ಶುಕಪಿಕ ಮೃಗಾದಿ ಯೆ-| ಕರುಣಾಳುಗಳ ದೇವನೆ 1 ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ | ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ | ಕಲಿಸಿ ಮಂದಿರದೊಳಗೆ ಎಳೆಬಾಳೆ | ಶೃಂಗರಿಸಿದರು ಅರವಿಂದನಾಭ ಚೆಲುವ 2 ಪರಮ ಮಂಗಳವಾದ ದ್ವಾರ ದ್ವಾರಗಳಿಗೆ | ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು | ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ | ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು | ಮಕರವು ತುರ ತೊ ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ3 ಪರಮ ಭಾಗವತರು ಬತ್ತೀಸರಾಗದಲಿ | ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ | ಪರಿ ಪರಿ ಕೊಂಡಾಡುತಿರಲು | ಕುಣಿಯುತಿದೆ ಸುರನಿಕರ ಪರಿಪಾಲಿಕ 4 ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ | ಕಿನ್ನರ ಸಾಮ | ಪರಮೇಷ್ಟಿ ವಾಲಗಕೆ ಬಂದು ಎ- ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು | ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ | ಹರಿವಾಣ | ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ 5 ಕರಿ ತುರಗ ರಥಪಾಯದಳವು ದಟ್ಟಡಿಯಾಗಿ | ನೆರದಿದೆ ಸಭೆಯಲಿ ಸಪ್ತಾಂಗದವರುಂಟು | ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ | ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ | ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ | ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ 6 ಸುರಿಗೆ ಪಾರಿಜಾತದ ಮಲ್ಲಿಗೆ | ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ | ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ | ಅರಗುಂದ ಕುಂತಾತಸಿದವನ ಮುಡಿವಾಳ | ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ | ಶಿರೋರತನವಾದ ಎಳದುಳಸಿ ಹಾರಗಳಿಗೆ | ಅರಿಗಳ ಮಸ್ತಕಾಂಕುಶಾ7 ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ | ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ | ಕಾಂಚಿ ದಾಮಾ | ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದÀಕ | ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ | ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ | ದರುಶನ ಭಕ್ತರಿಗೆ ಲಾಭಾ 8 ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ | ಕರಿ ಕಾಯಲಿ ಬಂದ ಭರದ ಉನ್ನತವು | ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ | ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ | ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ | ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ | ದರಿಲ್ಲವೆಂಬೊ ಘನವೊ9
--------------
ವಿಜಯದಾಸ
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ 1 ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ2 ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು 3 ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು 4 ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ 5 ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ 6 ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ವೀರನಾರಾಯಣ 7
--------------
ವೀರನಾರಾಯಣ
ಒಂದು ದಿನದಲಿ ಇಂದಿರೇಶನು ಚಂದದಿಂದಲಿ ವನಕೆ ಬಂದನು ಸುಂದರಾಂಗನು ಗೋಪ ವೃಂದದಿ ನಿಂದು ಕೊಳಲನು ಸ್ವರವಗೈದನು 1 ಕೊಳಲ ಧ್ವನಿಯನು ಕೇಳುತಾಕ್ಷಣ ಖಗಮೃಗಂಗಳು ಮಯ್ಯ ಮರತವು ತರುಣಿ ಮಣಿಯರು ಮನೆಯ ಕೆಲಸಕೆ ಮರತು ಮಯ್ಯನು ತೆರಳಿ ಬಂದರು 2 ಕೊಳಲ ಧ್ವನಿಯನು ಕೇಳಿ ಗೋಪೇರು ನಳಿನನಾಭನ ಬಳಿಗೆ ಬಂದರು ನಳಿನಮುಖಿಯರ ನೋಡಿ ಕೃಷ್ಣನು ಮುಗುಳುನಗೆಯಲಿ ಮಾತನಾಡಿದನು 3 ನಾರಿಮಣಿಯರೆ ರಾತ್ರಿ ವೇಳೆಯು ಈಗ ಇಲ್ಲಿಗೆ ಬಂದಿರೇತಕೆ ಮಾರನಯ್ಯನ ಮಾತುಕೇಳುತ ಮಡದಿ ಮಣಿಯರು ನುಡಿದರಾಗಲೆ4 ಬಾಲಕೃಷ್ಣನೆ ನಿನ್ನ ಕೊಳಲಿನ ಈಗಲೆಮ್ಮಯ ಮನವು ಹರುಷಿಸೆ ಬೇಗ ನಿನ್ನನು ಬೇಡಿಕೊಂಬೆವೊ 5 ಇಂತು ಕೃಷ್ಣನು ಸರಸವಾಡುತ ನಿಂತನವರಿಗೆ ಹರುಷ ತೋರುತ ಚಿಂತೆಯೆಲ್ಲವ ಬಿಟ್ಟು ಗೋಪೇರು ಅಂತರಾತ್ಮನ ಭಜಿಸುತಿದ್ದರು 6 ಏನು ಪುಣ್ಯವೊ ನಮ್ಮದೆನುತಲಿ ದಾನವಾರಿಯ ಸ್ಮರಿಸುತಿದ್ದರು ನಾರೇರೆಲ್ಲರ ನೋಡಿ ಕೃಷ್ಣನು ಬೇಗದಿಂದಲಿ ಅಂತರ್ಧಾನನಾದನು 7 ಸ್ಮರನ ಪಿತನನು ಸ್ಮರಿಸಿಪಾಡುವ ತರುಣಿಯರಿಗೆ ಮೈ ಸ್ಮರಣೆ ಮರೆತಿರೆ ಭರದಿ ಕಂಗಳ ತೆರೆದು ನೋಡಲು ಮುರಳೀಧರನ ಕಾಣದಲೆ ಚಿಂತಿಸಿ 8 ಜಾಜಿ ಸಂಪಿಗೆ ಸೂಜಿ ಮಲ್ಲಿಗೆ ರಾಜೀವಾಕ್ಷನ ಕಾಣಲಿಲ್ಲವೆ ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ ನಳಿನನಾಭನ ಸುಳಿವು ಕಾಣಿರಾ 9 ಸರಸದಿಂದಲಿ ಹರಿವ ಯಮುನೆಯೆ ಪಾದ ಕಾಣೆಯಾ ಚಿಗರಿ ಮರಿಗಳೆ ನಿಮ್ಮ ಕಂಗಳು ನಳಿನನಾಭನ ಸುಳವು ಕಾಣವೆ 10 ಯಾರ ಕೇಳಲು ಹರಿಯ ಕಾಣರು ನಾರಿಮಣಿಯರೆ ನಾವೆ ಕರೆಯುವ ಮುದ್ದು ಕೃಷ್ಣನೆ ಪದ್ಮನಾಭನೆ ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11 ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ ಜಯತು ಜಯತು ಶ್ರೀ ಗರುಡಗಮನನೆ ಜಯತು ಜಯತು ಶ್ರೀ ಉರಗಶಯನನೆ ಜಯತು ಜಯತು ಶ್ರೀ ಪರಮ ಪುರುಷನೆ 12 ಜಯತು ಜಾಹ್ನವಿಜನಕÀ ಶ್ರೀಶನೆ ಜಯತು ಭಕ್ತರ ಭಯವಿನಾಶನೆ ಜಯತು ಪಾವನ ಪುಣ್ಯ ಚರಿತನೆ ಜಯತು ಜಯತು ಲಾವಣ್ಯರೂಪನೆ 13 ಎಳೆಯ ಚಿಗುರಿನಂತಿರುವ ಪಾದವು ರುಳಿಯ ಗೆಜ್ಜೆಯು ಕಾಲಪೆಂಡೆಯು ಎಳೆಯ ಪಾದದಿ ಹೊಳೆವ ಪೈಜನಿ ಘಲಿರು ಘಲಿರು ಎಂದೆನುತ ಮೆರೆವುದು 14 ಪುಟ್ಟ ನಡುವಿಗೆ ಪಟ್ಟೆ ಮಡಿಗಳು ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ ಉಡುಗೆಜ್ಜೆಯು ಗಂಟೆ ಸರಪಳಿ ಒಪ್ಪಿ ಮೆರೆಯುವ ಕಾಂಚಿಧಾಮವು 15 ಚತುರ ಹಸ್ತದಿ ಶಂಖುಚಕ್ರವು ಗದೆಯು ಪದುಮವು ಹೊಳೆಯುತಿರುವುದು ಕಡಗ ಕಂಕಣ ತೋಳ ಬಾಪುರಿ ವಜ್ರದೊಂಕಿಯು ಮೆರೆಯುತಿರುವುದು 16 ಕೌಸ್ತುಭ ವೈಜಯಂತಿಯು ಸುರಗಿ ಸಂಪಿಗೆ ಸರಗಳೊಲಿಯುತ ಎಳೆಯ ತುಳಸಿಯ ಸರಗಳೊಪ್ಪುತ ಜರದವಲ್ಲಿಯು ಜಾರಿ ಬೀಳಲು 17 ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ ರತ್ನ ಪದಕಗಳೆಲ್ಲ ಶೋಭಿಸೆ ಮಕರ ಕುಂಡಲ ರತ್ನದ್ಹಾರಗಳಿಂದ ಒಪ್ಪಿರೆ 18 ಗುರುಳು ಕೂದಲು ಹೊಳೆವೊ ಫಣೆಯಲಿ ತಿಲುಕ ಕಸ್ತೂರಿ ಶೋಭಿಸುತ್ತಿರೆ ಎಳೆಯ ಚಂದ್ರನ ಪೋಲ್ವ ಮುಖದಲಿ ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19 ಪದ್ಮನೇತ್ರಗಳಿಂದ ಒಪ್ಪುತ ಪದ್ಮ ಕರದಲಿ ಪಿಡಿದು ತಿರುವುತ ಪದ್ಮಲೋಚನೆಯನ್ನು ನೋಡುತ ಪದ್ಮನಾಭನು ಕೊಳಲನೂದುತ 20 ರತ್ನ ಮುತ್ತಿನ ಕಿರೀಟ ಶಿರದಲಿ ಮತ್ತೆ ನವಿಲಿನ ಗರಿಗಳೊಪ್ಪಿರೆ ಹಸ್ತಿ ವರದನು ಎತ್ತಿ ಸ್ವರವನು ಮತ್ತೆ ಕೊಳಲನು ಊದೊ ದೇವನೆ 21 ಸುಂದರಾಂಗನೆ ಮಂದಹಾಸನೆ ಮಂದರೋದ್ಧರ ಬಾರೋ ಬೇಗನೆ ಇಂದಿರೇಶನೆ ಇಭರಾಜವರದನೆ ರಂಗನಾಥನೆ ಬಾರೊ ಬೇಗನೆ22 ಮದನ ಮೋಹನ ಪಾರಮಹಿಮನೆ ಬಾರೊ ಬೇಗನೆ ಶ್ರೀರಮಾಪತೆ ಶ್ರೀ ನಿಕೇತನ ವಾರಿಜಾಕ್ಷನೆ ಬಾರೊ ಬೇಗನೆ 23 ಹೀಗೆ ಗೋಪೇರು ಮೊರೆಯನಿಡುತಿರೆ ಮಂಗಳಾಂಗನು ಬಂದನೆದುರಿಗೆ ಧ್ವಜ ವಜ್ರಾಂಕುಶ ಪದ್ಮ ಪಾದವು ಅಡಿಯನಿಡುತಿರೆ ಧರಣಿ ನಲಿವಳು 24 ಹರಿಯ ನೋಡುತ ಪರಮ ಹರುಷದಿ ತರುಣಿಮಣಿಯರು ಹರುಷ ಪಡುತಲಿ ಪರಮ ಮಂಗಳ ಚರಿತ ದೇವಗೆ ಸ್ವರವನೆತ್ತಿ ಮಂಗಳವ ನುಡಿದರು 25 ಶುಭ ಕಂಬು ಕಂಠಗೆ ಮಂಗಳಂ ಮಹಾ ಮಾರನಯ್ಯಗೆ ಮಂಗಳಂ ಮಹಾ ಮುದ್ದುಕೃಷ್ಣಗೆ ಮಂಗಳಂ ಜಯ ಮಂಗಳಾಂಗಗೆ 26 ಕಮಲ ಮುಖಿಯರು ನಮಿಸಿ ಕೃಷ್ಣಗೆ ಸರಸವಾಡುತ ಹರುಷ ಪಡುತಲಿ ಕಮಲನಾಭ ವಿಠ್ಠಲನ ಕೂಡುತ ಮನದಿ ಸುಖವನು ಪಡುತಲಿದ್ದರು 27
--------------
ನಿಡಗುರುಕಿ ಜೀವೂಬಾಯಿ
ಒಬ್ಬಟ್ಟಿಗೆ ಮಂಗಳಜಯ ಮಂಗಳಂ ಶುಭೋದಯ ಮಂಗಳಂನಯ'ದರಿಗೊಪ್ಪಾದ ಒಬ್ಬಟ್ಟಿಗೆ ಪಐದು ದ್ರವ್ಯಂಗಳೊಡನೈದಿತೊ ಇಚ್ಛೆಯಲಿ ುೀ ಕೃತಿಯಾಗಿನಾದಿ ತೇಜೋಬ್ಧಿಯಲಿ ಸರ್ವಜನಕೆಐದಿಸುತ ಸುಖವ ಸಂಪಾದಿಸುತ ಗುರುವರನಪಾದಸ್ಮರಣೆಗೆ ಮತಿಯನೀಯುವುದಕೆ 1ಹರಿಸಮಾರಾಧನೆಯೊಳರಸಿ ನೋಡಿದರೆ ತಾನಿರದೆಡೆಯೊಳಿಲ್ಲ ಮಂಗಳವೆನಿಸುತಬೆರೆದಿರಲು ತಾನು ಸರ್ವರಿಗು ಹರುಷವನಿತ್ತುಪೊರೆದು ಚೆನ್ನಾುತೆನಿಸುವ ವಡವೆಗೆ 2ಮೆರೆದು ಚಿಕ್ಕನಾಗಪುರದಲಿ ತನ್ನ ಮ'ಮೆಯನುಗುರುವಾಸುದೇವ ಕೃಪೆಯನ್ನು ಪಡೆದುಪರಮ ಭಾಗವತ ಗಂಗಾಧರಯ್ಯನ ಹೊಣೆಯನಿರದೆ ಸಂಪಾದಿಸಿದ ಒಬ್ಬಟ್ಟಿಗೆ 3
--------------
ತಿಮ್ಮಪ್ಪದಾಸರು
ಓಂಕಾರ ರೂಪಿಣಿ ಭದ್ರಾಣಿ ಕಲ್ಯಾಣಿ ಪಂಕೇಜದಳಲೋಚನೀ ಅಂಬಾ ಪ ಶಂಕರ ಪ್ರಿಯರಾಣಿ ಗೀರ್ವಾಣೆ ರುದ್ರಾಣಿ | ಸ ರ್ವ ಮಂಗಳವಾಣಿ | ಕರುಣಿ ಶುಶ್ರೋಣಿ ಅ.ಪ ಹೈಮವತೀ ಮಾತೆ | ಹಿಮಗಿರಿ ತನುಜಾತೆ ಭಾಮೆ ಸ್ವಯಂಜಾತೆ | ಸುರಮೌನಿಗೀತೆ ಪ್ರೇಮ ರಸಾನ್ವಿತೇ | ರಾಮಾಭಿನಂದಯುತೆ ಶ್ರೀಮಾಂಗಿರೀಶ | ರಂಗಸಹಜಾತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂ||ಮಂಗಳವಾರದ ಪೂಜೆಗೆಮಂಗಳ ನೈರುತ್ಯದಲ್ಲಿ ಶಿವನಪ್ಪಣೆುಂಮಂಗಳ ನಾಮವ ಜಪಿಸುತಮಂಗಳವನ್ನೀಯುತೆಮಗೆ ಶೋಭಿಸುತಿಪ್ಪಳ್‍ನಿನ್ನ ಚರಣವ ನಂಬಿ ಭಜಿಸುತಿಹ ಭಕ್ತನಿಗೆ ುನ್ನುಂಟೆ ಗ್ರಹಗತಿಗಳು ಕೃಷ್ಣಾ ಪಉನ್ನತದ ಚಕ್ರವರ್ತಿಯ ಹೊಂದಿ ಬದುಕುವನಿಗನ್ಯರಟ್ಟುಳಿ ಬರುವದೇ ಕೃಷ್ಣಾ ಅ.ಪನೀನೊಬ್ಬನೇ ದೇವನೆಂದು ಪೇಳುತಲಿಹುದುಸಾನುನಯವುಳ್ಳ ಶ್ರುತಿಯು ಕೃಷ್ಣಾಏನೊಂದು ರೂಪಾಗಿ ತೋರಿದರು ಸಕಲವೂನೀನಲ್ಲದನ್ಯವುಂಟೇ ಕೃಷ್ಣಾಏನೆಂಬೆ ಚಿನ್ನ ಹಲವಂದದಾಭರಣದಲಿಕಾಣಿಸಿದರದು ಭೇದವೇ ಕೃಷ್ಣಾನೀನೇ ದೇವಾತ್ಮಕನು ನೀನೆ ಗ್ರಹರೂಪಕನುನೀನೊಲಿದ ನರಗೆ ಭಯವೇ ಕೃಷ್ಣಾ 1ಉತ್ತವನು ಬಿತ್ತುವನು ಬಿತ್ತಿದವನುಂಬವನುಮತ್ತೊಬ್ಬನದಕೆ ಬಹನೇ ಕೃಷ್ಣಾಉತ್ತು ಬಿತ್ತಿದೆ ಮಾಯೆಯೆಂಬ ಕ್ಷೇತ್ರದಿ ನಿನ್ನಚಿತ್ತೊಂದು ಬೀಜವನ್ನು ಕೃಷ್ಣಾಬಿತ್ತು ವೃಕ್ಷಾಕಾರವಾದಂತೆ ಲೋಕವಿದುವಿಸ್ತರದಿ ಬಹುವಾುತು ಕೃಷ್ಣಾಬಿತ್ತಿ ಬೆಳೆದುಂಬಾತನುತ್ತಮನು ನೀನಿರಲುಮತ್ತೊಂದು ಭಯವದೇಕೆ ಕೃಷ್ಣಾ 2ಇಂದ್ರಾದಿ ದಿಕ್ಪಾಲಕರ ರೂಪನಾಗಿರುವೆಚಂದ್ರಾದಿ ಗ್ರಹರೂಪನು ಕೃಷ್ಣಾಇಂದ್ರ ಚಂದ್ರಾದಿತ್ಯ ವರುಣಾದ್ರಿ ಗಗನಾದಿಇಂದ್ರಿಯಾಧೀಶ ನೀನೆ ಕøಷ್ಣಾಇಂದ್ರಿಯಾಧೀನರಾಗಿರುವರರಿಯರು ನಿನ್ನಮಂದಬುದ್ಧಿಯ ಮೂಢರು ಕೃಷ್ಣಾತಂದ್ರಿಯನು ಪರಿಹರಿಸಿ ಹೊಂದಿ ನಿನ್ನನು ಭಜಿಪಛಂದವನು ನೀ ತೋರಿಸು ಕೃಷ್ಣಾ 3ಒಡೆಯನೊಬ್ಬನು ಜಗಕೆ ಬಳಿಕಾತನಾಜ್ಞೆಯಲಿನಡೆವರೆಲ್ಲರು ಮೀರದೆ ಕೃಷ್ಣಾನಡೆಯಲರಿಯದು ಹಲಬರೊಡೆಯರಾಗಲು ನೀತಿಕೆಡುವುದದು ಕದನಮುಖದಿ ಕೃಷ್ಣಾನುಡಿದು ಭೇದವ ನಿತ್ಯ ಕದನವನು ಮಾಡುತಿಹಜಡರ ಮಾತದು ಸತ್ಯವೇ ಕೃಷ್ಣಾಬಿಡಿಸಿ ಭೇದವನೊಬ್ಬನೊಡೆಯನೆಂದುರು ಸಾರ್ವಸಡಗರದ ಶ್ರುತಿ ನಿತ್ಯವು ಕೃಷ್ಣಾ 4ಬಿಡದೆ ನಿನ್ನಂಘ್ರಿಯನು ದೃಢವಾಗಿ ಭಜಿಸುವರುಜಡತೆಯಳಿದ ಮಹಾತ್ಮರು ಕೃಷ್ಣಾಬಿಡುವದವರಿಗೆ ಲೋಕ ನಡೆವ ನಡತೆಯ ಭ್ರಮೆಯುನಡತೆಯದು ನಿನ್ನ ನಿಜವು ಕೃಷ್ಣಾನಡೆದು ಬಳಿಕಾ ಮಾರ್ಗವನು ಹೊಂದಿದವ ನಿಪುಣಬಿಡಬೇಕು ಮೂಢಮತವ ಕೃಷ್ಣಾಪೊಡವಿಯೊಳು ತಿರುಪತಿಯ ವಾಸ ವೆಂಕಟರಮಣಕೊಡು ನಿನ್ನ ಭಜಿಪ ಮತಿಯ ಕೃಷ್ಣಾ 5ಓಂ ಅವ್ಯಕ್ತ ಗೀತಾಮೃತ ಮಹೋದಧಯೇ ನಮಃ
--------------
ತಿಮ್ಮಪ್ಪದಾಸರು
ಕಟ್ಟಿದಳು ಕಂಕಣವ ನಾರಿ ಲಕುಮಿವಿಷ್ಣು ಮೂರುತಿ ಕರಕೆ ವೈಕುಂಠರಾಣಿ ಪ.ಅವಿಯೋಗಿಯಾದ ಶ್ರೀ ಸತಿಯ ಸೇವೆಗೆ ಒಲಿದುಪವಮಾನನೊಡೆಯ ವರ ಬೇಡೆನ್ನಲುಭುವನೇಶ ನಿನ್ನ ಕೃಪೆ ಪೂರ್ಣಳಾನೆಂದೆನುತಹವಣೆಯಿಂ ಕೇಳ್ದಳೆರಡೊರವ ಲೋಕೋದ್ಧಾರಿ 1 ಶರಣಾಗತ ರಕ್ಷಕನು ಎಂಬ ಬಿರುದೊಂದುಶರಣಾಗತ ವತ್ಸಲನು ಎಂಬುದೊಂದುಧರಿಸು ಈ ಬಿರುದು ಹರಿ ವರವು ಅದೆ ಎನಗೆನಲುಕಿರುನಗೆಯ ನಗುತ ಒಲಿದನು ಸತಿಯ ನುಡಿಗೆ 2 ನಾರಿರನ್ನಳೆ ನಿನ್ನ ಕೋರಿಕೆಯ ತೆರನಂತೆಆರಾಧನೆಯ ಮಾಳ್ಪ ಶರಣರಿಗೆ ಒಲಿವೆತೋರಲೀ ಬಿರುದುಗಳು ನಿನ್ನ ಕರಗಳಲೆಂದುಶ್ರೀ ರಮೆಯ ಕರಕೆ ಕಂಕಣಗಳನೆ ತೊಡಿಸಿದನು 3 ನಾರಿ ಈ ಕಂಕಣವ ನಿನಗ್ಯಾಕೆ ಅರ್ಪಿಸಲುತೋರದೆನ್ನುತ ನಟನೆಗೈವನಿತರೊಳ್‍ಕ್ಷೀರಸಾಗರ ಮಥನ ಕಾಲದಲಿ ಜನಿಸುತಲಿಶ್ರೀ ರಮೇಶಗೆ ಒಲಿದು ಮಾಲೆ ಹಾಕಿದಳು 4 ಭಕ್ತಿ ಪ್ರೇಮಕೆ ಒಲಿದು ಭಕ್ತವತ್ಸಲ ಅಭಯಹಸ್ತವನು ಶಿರದಲ್ಲಿ ಇಡಲು ನಾರಿಚಿತ್ತದಲಿ ಆನಂದಪುಳಕಾಂಕುರಿತಳಾಗಿಚಿತ್ತದೊಲ್ಲಭನ ಮುಖಕಮಲ ವೀಕ್ಷಿಸುತ 5ಈಕ್ಷಿಸಲು ಶ್ರೀ ಹರಿಯ ಕರಕಮಲ ಲಕ್ಷಣವಲಕ್ಷ್ಮಿ ಬೆರಗಾಗಿ ಮುನ್ನಿನಕಿಂತ ಅಧಿಕಅಕ್ಷಯದ ಸಾಮುದ್ರಿ ಲಕ್ಷಣವ ಕಾಣುತಲಿಪಕ್ಷಿವಾಹನನ ಮೊಗ ಈಕ್ಷಿಸುತ ನಗುತ 6 ನೀನಿತ್ತ ವರದಾನ ಕಂಕಣದ ಬಂಧನವನಿನಗರ್ಪಿಸುತ ಧನ್ಯಳಾಗ್ವೆನೆಂದುಆನಂದದಲಿ ಮಾಡಿ ಕಂಕಣವ ಕಟ್ಟಿದಳು 7 ಜಗವನಾಡಿಸುವಂಥ ಸೂತ್ರವನೆ ಹದಿನಾರುಬಗೆ ಕಲೆಗಳೆಂಬ ಎಳೆ ಮಾಡಿ ಹಳದಿಮಿಗೆ ಕಾಂತಿ ಬಣ್ಣದಲಿ ಮಂಗಳಾಕಾರದಜಗಕೆ ವಿೂರಿಸಿದಂಥ ಕಂಕಣವ ಕಟ್ಟಿದಳು 8 ಕರಿ ಕೆಂಪು ಬಿಳುಪು ವರ್ಣವು ಪ್ರಳಯ ಕಾಲದಲಿಇರಲಾರದೆಂದು ತ್ಯಜಿಸುತ ಹಳದಿಯವರಕಾಂತಿ ಬಣ್ಣವನು ಪೂಸಿ ಮಂಗಳವದನೆಸರದಿಂ ಮೂರು ಗ್ರಂಥಿಯ ಬಿಗಿದಳಾಗ 9 ಪರಿ ಏನು ಪೇಳೆಂದು ಸರಸದಲಿ ಹರಿ ಕೇಳೆ ಹರಿಣಾಕ್ಷಿಯು ಪರಮ ಪುರುಷನೆ ನೀನು ಅರಿಯದಿನ್ನುಂಟೆ ಕೇಳ್ ಸರಸವಾಣಿಯಲಿ ಪೇಳ್ಪೆನು ದೇವ ದೇವ 10 ಒಂದು ಮುಕ್ತಿಯ ಗ್ರಂಥಿ ಒಂದು ಕರ್ಮದ ಗ್ರಂಥಿ ಒಂದು ಅಜ್ಞಾನ ನಿನ್ನ ಬಂಧಕರ ಗ್ರಂಥಿ ಇಂದಿರೇಶನೆ ಇದರ ಗುಟ್ಟು ಅರುಹುವÉ ಕೇಳು ಒಂದೊಂದು ವಿವರಗಳ ವಂದ್ಯ ಬ್ರಹ್ಮಾದಿ 11 ಕರ್ಮಗ್ರಂಥಿಯು ಬ್ರಾಹ್ಮಣರ ಯಜ್ಞದುಪವೀತ ಕರ್ಮ ಬಿಡುಗಡೆ ಇದು ಯತಿರತ್ನಗಳಿಗೆ ನಿಮ್ಮ ಬಂಧಕರ ಗ್ರಂಥಿ ಅಜ್ಞಾನಿ ಹೃದಯಕ್ಕೆ ನಿಮ್ಮ ಕೃಪೆಯಿಂದ ಬಿಡುಗಡೆ ಕೇಳು ಜೀವರಿಗೆ 12 ಮುಕ್ತರಿಗೆ ಸಂಸಾರ ಮತ್ತೆ ಬರದಂದದಲಿ ಕತ್ತರಿಸಿ ಲಿಂಗವನು ಕಾಯ್ದು ನಾನು ಚಿತ್ತಜಾಪಿತನೆ ನಿನ್ನಸ್ತಕೊಪ್ಪಿಸಿ ಬಿಗಿದು ಸುತ್ತಿ ಕಗ್ಗಂಟು ಹಾಕಿರುವೆ ನೀ ಗ್ರಂಥಿ 13 ಬಿಚ್ಚಲಾರೆಯೊ ನೀನು ಬಿಚ್ಚಲಾರೆನೊ ನಾನು ಬಿಚ್ಚಿಕೊಳಲಾರರೊ ಮುಕ್ತ ಜನರು ಅಚ್ಯುತನೆ ಇದೆ ನಿನಗೆ ಹೆಚ್ಚಿನಾ ಬಿರುದು ನಾ ಮೆಚ್ಚಿ ಕಟ್ಟಿರುವೆ ನೀ ಗ್ರಂಥಿ ಕಂಕಣವ 14 ಎರಡು ಗ್ರಂಥಿಯ ತೊಡಕು ಹರಿದು ಭಕ್ತರ ಕಾಯ್ದು ಪರಮ ಆನಂದ ಮುಕ್ತರಿಗೆ ಶರೆ ಮಾಡಿ ಮೆರೆಯೊ ಶರಣಾಗತರ ರಕ್ಷಕನೆ ಎಂದೆನುತ ಸಿರಿ ಮುತ್ತಿನಾರತಿಯನೆತ್ತಿದಳು 15 ಸಿರಿಹರಿಯ ಏಕಾಂತ ಸರಸ ವಚನಗಳಿದನು ಅರಿತವರು ಯಾರೆಂಬ ಅನುಮಾನ ಬೇಡಿ ಹರಿಶಯನನಾದವನು ಅರಿತು ಧೈರ್ಯದಿ ಜಗದಿ ಹರಹಿದುದ ಸಜ್ಜನರು ಅರಿತು ಆನಂದಿಸಲಿ 16 ಸಿರಿ ಒಲಿಯೆ ಶ್ರೀಹರಿಯು ತ್ವರಿತದಲಿ ಒಲಿಯುವನು ಮರುತ ಒಲಿಯಲು ಸಿರಿಯು ತಾ ಒಲಿವಳು ಗುರುವು ಒಲಿಯಲು ಮರುತ ಮರುಕ್ಷಣದಿ ಒಲಿಯುವನು ಅರಿವುದಿದರಿಂ ಗುರುವ ಒಲಿಮೆ ಅಧಿಕೆಂದು 17 ಪರಮ ಸುಜ್ಞಾನದಿಂದರಿತು ತತ್ವಾರ್ಥಗಳ ಶರಣ ನಾ ನಿನಗೆನಲು ವಾತ್ಸಲ್ಯದಿ ಸಿರಿಯರಸ ತನ್ನಭಯ ಹಸ್ತ ಶಿರದಲಿಟ್ಟು ಶರಣರನು ಪಾಲಿಸುವ ಮುಕ್ತಿ ಪದವಿಯನಿತ್ತು 18 ಹರಿಸಿರಿಯ ಲೀಲೆಗಳ ಗುರುಕರುಣ ಬಲದಿಂದ ಅರುಹಿದ ಮಹಿಮೆ ಧರೆಯಲ್ಲಿ ಮೆರೆದು ಪರಮ ಮಂಗಳ ಕೊಡಲಿ ನಿರುತ ಸದ್ಭಕ್ತರಿಗೆ ಕರುಣಾಳು ಗೋಪಾಲಕೃಷ್ಣವಿಠ್ಠಲನ ದಯದಿ 19
--------------
ಅಂಬಾಬಾಯಿ
ಕಂಡೆ ನಾ ಕಣ್ಣೆದುರಲಿ ಕೃಷ್ಣನಾ ಪ ಕಂಡೆ ನಾನೀಗ ಬ್ರಹ್ಮಾಂಡದೊಡೆಯ ತಾ ತಾಂಡವಾಡಿ ಭೂಖಂಡದಿ ಮೆರೆದನ ಅ.ಪ ಜಯಮುನಿಹೃತ್ಕುಮುದಾಲಯದಿ ಸುಲೀ- ಲೆಯಾಡುತಿಹ ವಾಯ್ವಂತರ್ಗತ ಕೃಷ್ಣ ಜಯಜಯಜಯ ಶ್ರೀ ವಿಜಯಸಾರಥಿ ಭವ- ಭಯಹಾರಿ ಭಕ್ತರಭಯಪ್ರದಾಯಕ ದಯವನಧಿಯೆ ಮನದಾಮಯ ಕಳೆದು ನಿ- ರ್ಭಯ ದೊಳು ಕಾಯುವ ಜಗದೊಡೆಯಾ ಧೇಯವು ನಿನಗಿದು ಸದ್ಭಕುತರಾಶ್ರಯ ತಟಿತಕೋಟಿ ನಿಭಕಾಯ ಶ್ರೀಭೂಕಾಂತ ದೈತ್ಯಕೃತಾಂತ ಜಗದಾದ್ಯಂತ ನಿಂತು ಜೀವರಾದ್ಯಂತ ಕೃತ್ಯಗಳ್ ಸಂತತನಡೆಸುವ ಕಂತುಪಿತನ ನಾ 1 ಶ್ರೀಕಳತ್ರ ಪರಲೋಕೈಕನಾಥ ಜಗ- ದೇಕವಂದ್ಯನೆ ನರಲೋಕದ ಕ್ರೀಡೆಯೊಳ್ ಭೀಕರಿಲ್ಲದೆ ಬಕಶಕಟಾಕಂಸಾದಿಗಳ ಏಕಘಳಿಗೆ ಯೊಳು ನೀ ಕೊಂದು ನಲಿದು ನಿಂದೆ ಪಾಕಶಾಸನ ದಿವೌಕಸವಂದ್ಯನೆ ಪ್ರಕಟನಹುದೊ ನಿಪ್ಕುಟಿಲರಿಗೆ ದಿಟ್ಟತನದಿ ಹೃತ್ತಟದಲಿ ಧೇನಿಸೆ ತಟಿತದಂದದಲಿ ಒಳಗೇ ಭಟಜನರುಗಳಾ ಕಂಟಕದೆಡರಾಕಟಕಪರಿಹರ ವಿಟ್ಟು ಕರುಣಾಕಟಾಕ್ಷದಿಂದ ಸಂತ ವಿಟ್ಟು ನಟಿಸುವಾ ಸೃಷ್ಟಿಕರ್ತನ ನಾ 2 ರಂಗಾ ನಿನ್ನವರುಗಳಿಂಗಿತದಂತೆ ಮಾ- ತಂಗವರನ ನಿನ್ಹಾಂಗೆನಡೆಸಿ ಶುಭಾಂಗ ಸದ್ಭಕ್ತಕೃ- ಪಾಂಗ ಮಂಗಳಾಂಗ ತುಂಗಮಹಿಮ ಸ- ಪ್ತಾಂಗ ಏಕೋನವಿಂಶತಿ ಮಂಗಳವಿಶ್ವನೆ ಕಂಗಳಲಿದ್ದು ಜಗಂಗಳ ಕಾರ್ಯಂಗಳಿಗೀವೆ ಹಿಂಗಿಸಿ ಅಂಗದ ಕಾರ್ಯವ ನೀ ಮನ ಕಂಗಳಿಗಿತ್ತು ಎಂದಿಗು ಪೊರೆವಾ ಮಂಗಳ ಪ್ರಾಜ್ಞಭೋಗಂಗಳ ಪ್ರಜ್ಞ ಆಗದುಸೂಜ್ಞ ರಂಗನಾಥ ಹೃದ್ರಂಗದಿ ನಲಿಯುತ ಹಾಂಗೆ ನಿಂದಿಹ ಈ ಶ್ರೀವೇಂಕಟೇಶನ ನಾ 3
--------------
ಉರಗಾದ್ರಿವಾಸವಿಠಲದಾಸರು
ಕನ್ನಡ ಮಂತ್ರ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ ನಾರಾಯಣ ನರಕಾಂತಕ ನಾರದಪ್ರಿಯ ನರಸಖನಾದ ನಾರಸಿಂಹಮೂರ್ತಿಗೆ ನಮಸ್ಕಾರಗಳು ಗೋಕುಲದರಸು ಯಾದವಶಿರೋಮಣಿಯೆನ್ನ ಬಿನ್ನಪವ ಲಾಲಿಸಿ ಕೇಳಯ್ಯ ಕೃಷ್ಣ ಕಾಮ ಕ್ರೋಧ ಮದ ಮತ್ಸರ ದುರ್ಬುದ್ಧಿ ದುರಾಚಾರ ದುರ್ವಿಷಯಗಳ ಮೋಹ ಲೋಭಗಳ ಮರೆಸಿ ಮುಂದೆ ಬಿರುದಿನಿಂದ ಭಕÀ್ತಜನ ಬಂಧು ನೀ ದಯಾಸಿಂಧು ನಾ ಬೇಡಿಕೊಂಬುವೆನು ಬಂದು ಸಜ್ಜನರಕ್ಷಕ ದುರ್ಜನಶಿಕ್ಷಕ ಅರ್ಜುನ ಸಾರಥಿಯಾದ ನಿತ್ಯ ಮುಕ್ತ ದ್ವಾರಾವತೀ ಮಧ್ವಮುನಿಗೊಲಿದಂಥ ಮೂರ್ಜಗಾಧೀಶ ಉದ್ಧಾರ ಮಾಡಯ್ಯ ಉರಗಾದ್ರಿವಾಸ ಪದ್ಮಾವತೀಕಾಂತ ಶ್ರೀ ವೆಂಕಟೇಶ ಜ್ಞಾನಭಕ್ತಿ ಘನ ವೈರಾಗ್ಯ ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ಶ್ರೇಷ್ಠವಾದ ಸಂತಾನ ಸಕÀಲಾಭೀಷ್ಟಗಳ ಕೊಡುವನೆಂದು ನಾ ಬೇಡಿಕೊಂಬುವೆನು ಬಂದು ಎನ್ನಬಾರ ಎನ್ನ ಪರಿವಾರ ನಿನ್ನಗೊಪ್ಪಿಸುವೆನು ಮನ್ಮಥನಪಿತ ಎನಗೆ ಇನ್ನು ಧರ್ಮಾರ್ಥ ಕಾಮಿತ ಫಲಗಳನು ಸನ್ಮಾನದಲಿ ಕೊಟ್ಟು ಮನ್ನಿಸಿ ನೀಡೆನಗೆ ಮಂಗಳವ ಅನುದಿನದಿ ಸುಜ್ಞಾನಿಗಳೊಡೆಯ ಸುರರಿಂದ್ವಂದಿತವಾದ ನಿನ್ನ ಪದ್ಮಪಾದಗಳಿಗೆ ಬಿದ್ದೆ ್ಹೀಳಿಕÉೂಂಬುವೆನು
--------------
ಹರಪನಹಳ್ಳಿಭೀಮವ್ವ
ಕರಿಮುಖದ ಗಣಪತಿಯ ಚರಣಕ್ಕೆಯೆರಗಿ ಶಾರದೆಗೆ ಸೆರಗೊಡ್ಡಿ ವರವನು ವರವ ಬೇಡಿಕೊಂಡೆ ಸ್ಥಿರವಾದ ಭಕುತಿ ಕೊಡುಯೆಂದು 1 ವಾಯು ಬ್ರಹ್ಮ ಭಾರತಿಗೆ ಬಾಳ ಬೇಡಿಕೊಂಡ್ವೇ- ದವ್ಯಾಸರಿಗೆ ನಮೋಯೆಂಬೆ ನ- ಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ 2 ಅತ್ರಿ ಅಂಗೀರಸ ವಸಿಷ್ಠಗೌತಮ ವಿಶ್ವಾ- ಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನ ಭಾರದ್ವಾಜ ಬಕದಾಲ್ಭ್ಯರಿಗೆ ನಮಿಸುವೆ 3 ಪಂಡಿತ್ವಾಲ್ಮೀಕಿ ಕೌಂಡಿಣ್ಯ ಕೌಂಡಿಣ್ಯ ಅಗಸ್ತ್ಯಮುನಿ ಮರೀಚರಿಗೆ ನಾನು ನಮೋಯೆಂಬೆ4 ಶೇಷಗಿರಿವಾಸನ ಆಕಾಶನಳಿಯನೆ ವೆಂಕ- ಟೇಶ ನೀ ನಮ್ಮನೆ ದೈವ ಮನೆದೈ- ವ ಸಲಹೆನ್ನ ಪದ್ಮಾವತೀಶ ಪರಮಾತ್ಮ 5 ಮಂಗಳಾಂಗನೆ ನೀನು ಮಂಗಳಮಹಿಮನೆ ಮಂಗಳದೇವಿ ರಮಣನೆ ನೀನೆಮಗೆ ಜಯ ಮಂಗಳವ ಕೊಟ್ಟು ಸಲಹೆನ್ನ 6 ವಾಸುದೇವನೆ ನೀನು ವಾಸುಕಿಶಯನನೆ ವಾಸವಿಯ ರಥವ ನಡೆಸಿದೆ ನಡೆಸಿದಂಥ ಶ್ರೀನಿ- ವಾಸ ನೀನೆಮಗೆ ದಯಮಾಡು 7 ಎನ್ನಲ್ಲೆ ನೀನಿದ್ದು ನಿನ್ನಗುಣ ಬಹುರೂಪ- ವನ್ನು ತಿಳಿಸದಲೆ ಇರುವೋರೆ ಇರುವೋರೆ ನೀನು ಪ್ರ- ಸನ್ನನಾಗೆನಗೆ ದಯಮಾಡು 8 ಕಾಲ ಕಾಲಕೆ ನಿನ್ನ ನಾಮವನು ನಾಲಿಗೆ ಮ್ಯಾಲಿಟ್ಟು ನಿನ್ನ ನೆನೆವಂತೆ ನೆನೆವಂತೆ ಅನಿರುದ್ಧ 9 ಕಾಮಕ್ರೋಧವು ಮದ ಮಾತ್ಸರ್ಯ ಲೋಭಗಳು ಮೋಹ ಮಡುವಿನಲಿ ಮುಣುಗಿದೆ ಮುಣುಗಿದೆನೊ ಎನ್ನ ಕೈ ನೀನೆ ಪಿಡಿದೆತ್ತಿ ಕರೆದೊಯ್ಯೊ 10 ಐದು ಮಂದ್ಯೆನ್ನಲ್ಲಿ ಐದಾರೆ ಮಾರಾಯ ಬೈದರು ಬಿಡರೋ ಎನ್ನೀಗ ಎನ್ನೀಗ ಕಟ್ಟಿ ಕೊಂಡೊಯ್ದು ಹಾಕುವರೊ ಯಮನಲ್ಲಿ 11 ಆರು ಮಂದ್ಯರಿಗಳು ಕ್ರೂರ ಶತ್ರುಗಳುಂಟು ಘೋರಬಡಿಸುವರೊ ಅನುಗಾಲ ಅನುಗಾಲ ದುರ್ವಿಷಯ ತಾವೆನಗೆ ಕಲಿಸಿ ದಣಿಸೋರು 12 ಹತ್ತು ಮಂದಿ ಯೆನ್ನ ಸುತ್ತ ಮುತ್ತಿರುವರೊ ಕೂಪ ಭವದೊಳು ಭವದೊಳಗೆ ಬಳಲುವೆನು ಚಿತ್ತಕ್ಕೆ ತಂದು ದಯಮಾಡು 13 ಸಂಚಿತಾಗಾಮಿಗಳ ಮುಂಚೆ ದಹಿಸಿ ಈ ಪ್ರ- ಪಂಚವನು ಬಿಡಿಸೊ ಪರಮಾತ್ಮ ಪರಮಾತ್ಮ ನೀಯೆನ್ನ ವಂಚನಿಲ್ಲದಲೆ ಸಲಹೈಯ್ಯ 14 ಜ್ಞಾನ ಭಕ್ತಿ ಗಾನ ವೈರಾಗ್ಯ ಭಾಗ್ಯಗಳು ಜಾನಕಿರಮಣ ಜಗದೀಶ ಜಗದೀಶ ಜನಕನ ಜಾಮಾತ ನೀನೆ ತಿಳಿಸಯ್ಯ 15 ದ್ವಾಸುಪರುಣನಂತೆ ಈ ಶರೀರದೊಳಿದ್ದು ಏಸೇಸು ಜನ್ಮಕ್ಕಗಲದೆ ಅಗಲದಂತಿದ್ದು ಉ- ದಾಸೀನವ ಮಾಡೋದೊಳಿತಲ್ಲ 16 ಇಂದುಕುಲಜಾತ ನಿನ್ನೊ ್ಹಂದಿಕೊಂಡಿದ್ದು ಎಂದೆಂದಿಗು ಬಿಡದೆ ಗೆಳೆತನ ಗೆಳೆತನವಿದ್ದಲ್ಲಿ ಸಂದೇಹವ್ಯಾಕೊ ಸಲಹಲು 17 ಮುಕ್ತಿದಾಯಕ ನಿನ್ನ ಭಕ್ತರೇಸುಮಂದಿ ಹೆತ್ತಾಯಿಸುತರೇನವರೆಲ್ಲ ನಾ ಹುಟ್ಟಿದೆನೆ ಮತ್ತೆ ಮಲತಾಯಿ ಉದರದಿ 18 ಶ್ರೀಶನೆ ಕೇಳ್ ನಿನ್ನ ದಾಸರಂಗಳದಲ್ಲಿ ಬೀಸಿ ಬಿಸಾಕೊ ಎನ್ನನು ಎನ್ನ ಹರಿದಾಸರ ದಾಸತ್ವಯೆನಗೆ ಕೊಡಿಸಯ್ಯ 19 ಅಂಬರೀಷ್ವರದ ನಿನ್ನ ್ಹಂಬಲೆನಗಿರಲಯ್ಯ ಬಿಂಬ ಮೂರುತಿಯೆ ಬಿಡದೆನ್ನ ನಿನ್ನೂರಲ್ಲಿ ಇಂಬುಕೊಟ್ಟೆನ್ನ (ಅ)ಲ್ಲಿರಿಸಯ್ಯ 20 ಕಡಿದು ಹೊಡೆದು ಬಯ್ದು ಬಂದು ಕಾಲಿಂದೊದ್ದ- ರ್ಹಿಡಿಯದೆ ಅವರ ಅಪರಾಧ ಅಪರಾಧವೆಣಿಸದಿರೆ ನಡೆದರೊ ನಿನ್ನ ಪುರಕಾಗ 21 ಪುಟ್ಟ ಪ್ರಹ್ಲಾದ ಧ್ರುವ ಕೊಟ್ಟರೆಷ್ಟು ಭಾಗ್ಯ ಕಷ್ಟಕ್ಕೆ ಬಂದು ಒದಗಿದೆ ಒದಗಿ ಬಂದವರ ಆಪತ್ತು ಬಂಧನ ಬಿಡಿಸಿದೆ 22 ತನ್ನ ಮಗನ ಕರೆಯೆ ಎನ್ನ ಕರೆದನೆಂದು ನಿನ್ನ ದೂತರನು ಕಳಿಸಿದೆ ಕಳಿಸಿದ್ಯಜಮಿಳಗೆ ಮನ್ನಿಸಿ ಕೊಟ್ಟ್ಯೊ ನಿನಲೋಕ 23 ತಿರುಕ ತಂದವಲಕ್ಕಿ ಕರಕÀರನೆ ನೀಮುಕ್ಕಿ ದೊರೆತನವ ಕೊಟ್ಟು ದಾರಿದ್ರ್ಯ ದಾರಿದ್ರ್ಯ ಕಳೆದದ್ದು ಅರಿಕಿಲ್ಲವೇನೊ ಜನಕೆಲ್ಲ 24 ನಿಲ್ಲಬೇಕೆಂದಿಟ್ಟಿಕಲ್ಲು ಕೊಟ್ಟವಗೆ ಕೈ- ವಲ್ಯವನು ಕೊಟ್ಟ್ಯೋ ಕರುಣಾಳು ಕರುಣಾಳು ಬುಕ್ಕಿ ್ಹಟ್ಟು ಮಲ್ಲಿಗೆಯ ಮಾಲೆಗೊಲಿತೀಯೊ 25 ಕರೆದು ಕಂಸಗೆ ಕೊಟ್ಟು ಕೊಲಿಸಬಂದ- ಕ್ರೂರ(ಗೆ) ನದಿಯಲ್ಲೆ ನಿನ್ನ ನಿಜರೂಪ ನಿಜರೂಪ ತೋರಿದ್ದು ಇದುಯೇನು ನಿನ್ನ ಮಹಿಮೆಯು 26 ಗಂಧಕ್ಕೆ ಒಲಿದು ಕುಬ್ಜೆಯ ಡೊಂಕನೆ ತಿದ್ದಿ ಸುಂದರಿಯ ಮಾಡಿ ಸುಗುಣನೆ ಸುಗುಣನೆ ನೀನಾಕೆ- ಯಂಗಸಂಗ್ಯಾಕೆ ಬಯಸಿದಿ 27 ಕಲ್ಲಾದಹಲ್ಯೆಯನು ಕಡು ಚೆಲ್ವೆಯನು ಮಾಡಿ ಎಲ್ಲಿ ಮಲಗಿದ್ದ ಮುಚುಕುಂದ ಮುಚುಕಂದನ ಗುಹೆ- ಕೈವಲ್ಯ ಕೊಡಹೋದ್ಯೊ 28 ಮಗ್ಗವನೆ ಹಾಕಿ ಮಾರುಬಟ್ಟೆ ನೇದಿಲ್ಲ ರೊಕ್ಕವನೆ ಕೊಟ್ಟು ತರಲಿಲ್ಲ ತರಲಿಲ್ಲ ದ್ರೌಪದಿಗೆ
--------------
ಹರಪನಹಳ್ಳಿಭೀಮವ್ವ
ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ ಶರಣ ಜನಕನು ಪೊರೆವ ಕಾರುಣ್ಯಧಾಮ ಪ. ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ ಕುಶಲದಿಂದಲಿ ಬಂದು ನಗರದಲ್ಲಿರಲೂ ಸತಿ ಅನುಜಸಹ ವನದಿ ನಸುನಗುತ ಚರಿಸಿ ರಕ್ಕಸರ ಸದೆಬಡಿದೆ 1 ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ ಹತಗೈದು ರಾವಣಾದಿಗಳನೆಲ್ಲ ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ 2 ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ ಇಷ್ಟಾರ್ಥವೀಯೊ ಸನ್ಮಂಗಳವನೂ ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ 3
--------------
ಅಂಬಾಬಾಯಿ
ಕಾಗಿಣಿ ತೀರದ ಯೋಗಿವರ್ಯ ಗುರುವೇ | ನಿನ್ನಲಿ ಮೊರೆಯಿಡುವೆ ಪ ಭೋಗಿಶಯನ ಗುಣ ಯೋಗದಿಂದ ಭಜಿಪಾ | ಹರಿ ಪದಾಬ್ಜ ಮಧುಪಾ ಅ.ಪ. ಸಿಂಗರವೆನಿಸಿದ ಮಂಗಳವೇಡಿಯಲಿ |ನೀನುದಿಸುತಲಲ್ಲೀಸಿಂಗರಿಸಿಹ ಬಲು ರಂಗ ಕುದುರೆ ನೇರಿ | ರಾವುತರೊಡಸೇರೀ ||ಕಂಗೆಡುತಲಿ ಬಲು ತುಂಗೆ ಕಾಗಿಣೀಯಾ | ಸಾರುತ ತನಹಯಾ ಹಿಂಗದೆ ನದಿಯಲಿ ಮಂಗಳ ಹಯವೇರಿ | ನೀರ್ಗುಡಿದ ಬಾಯಾರಿ 1 ಆಚೆ ತಟದಿ ಅಕ್ಷೋಭ್ಯಮುನಿಪ ನೋಡಿ | ಸ್ವಪ್ನದರ್ಥ ಮಾಡೀಸೂಚಿಸಿದನು ತವ ಶಿಷ್ಯನ ಕೈಯಲ್ಲೀ | ಬಂದ ಸಾದಿ ಅಲ್ಲೀ ||ಯಾಚಿಸಿದನು ಮುನಿ ಪದಕೇ ಬಾಗೀ | ತುರ್ಯಾಶ್ರಮಕಾಗೀಖೇಚರ ವಹನಾಜ್ಞೆಯೆಂದು ತ್ವರ್ಯಾ | ಮಾಡ್ದ ಸಾದಿ ಯತಿಯಾ 2 ತಂದೆ ಬಹು ಕೋಪದಿಂದ ಬಂದೂ | ಯತಿಯ ನಿಂದಿಸ್ಯಂದೂತಂದು ಮಗನ ಏಕಾಂತ ಗೃಹಕೆ ಆಗ | ಸತಿಯನು ಕೂಡಿಸಿ ವೇಗ ||ಅಂದು ಕಂಡು ಸರ್ಪಾಕೃತಿ ಪತಿಯಾ | ಚೀರಿದಳ್ ಬಲ್ಪರಿಯಾತಂದೆ ಕೊಂಡು ಮಗನರ್ಪಿಸಿದನುಯತಿಗೇ | ಕ್ಷಮೆ ಬೇಡಿದನಾಗೇ 3 ತ್ರ್ಯಕ್ಷನಂಶ ಅಕ್ಷೋಭ್ಯ ಮುನಿಪ ಆಗ | ಸನ್ಯಾಸ ವೇಗಭಿಕ್ಷುಕ ಮಧ್ವರ ಗ್ರಂಥ ಪೊತ್ತ ವೃಷಭ | ಎನುತೀತನ ಪ್ರಭಾ ||ಲಕ್ಷಿಸಿವರ ಕರೆದನೂ ನಾಮಾನ್ವರ್ಥ | ಯತಿಯನೆ ಜಯತೀರ್ಥಕುಕ್ಷಿಲಿ ಮೆರೆವರಗೋಳ ಗುಹೆಯು ಅಲ್ಲೀ | ರಚಿಸಿದ ಟೀಕೆಗಳಲ್ಲೀ4 ಮಧ್ವಭಾಷ್ಯಕೇ ರಚಿತ ಟೀಕಾ ಗ್ರಂಥಾ | ನೋಡಿದ ಮುನಿ ಮತ್ತವಿದ್ಯಾರಣ್ಯರ ಗೆದ್ದ ಆರ್ಯ ಧೀರಾ | ಅಕ್ಷೋಭ್ಯರ ಕುವರ ||ಅದ್ವೈತಾದಿಗಳೇಕವಿಂಶ ಪಂಥ | ಗೆಲ್ಲುತ ಸುಧೆ ಗ್ರಂಥಅದ್ವಿತೀಯ ಗುರುಗೋವಿಂದ ವಿಠ್ಠಲಗೇ | ಅರ್ಪಿಸಿದನು ಆಗೇ 5
--------------
ಗುರುಗೋವಿಂದವಿಠಲರು
ಕಾಣಿ ನಿನ್ನಂಥವಳ ಪ. ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1 ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2 ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3 ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4 ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5 ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6 ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7 ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8 ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9
--------------
ಗಲಗಲಿಅವ್ವನವರು