ಒಟ್ಟು 24 ಕಡೆಗಳಲ್ಲಿ , 16 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡುವೆನೋ ಗೋವಿಂದಾ ಬೇಡಬೇಡವೀ ಬಂಧ ಪ ಪಾಡಿಪಾಡಲಾನಂದಾ ನೋಡಿ ನೋಡಲತ್ಯಾನಂದ ಅ.ಪ ಕಡವರವೀಯಬೇಡ ಪೊಡವಿಯ ಸುಖಬೇಡ ಕಡುಲೋಭ ಮೋಹಬೇಡ ದೃಢ ಭಕ್ತಿಯನು ಮಾತ್ರ 1 ನರಕದ ಬಾಧೆಯು ಪರಿಹರಿಸಲು ಬೇಡ ನಿರುತ ನಿಮ್ಮಯ ನಾಮ ಸ್ಮರಣೆ ಸುಖವು ಮಾತ್ರ 2 ಜನನ ಮರಣಗಳ ಕೊನೆಗಾಣಿಸಲಿ ಬೇಡ ಅನಿತು ಜನುಮದಿ ನಿನ್ನ ನೆನೆವ ಬುದ್ಧಿಯು ಮಾತ್ರ 3 ಮಾಂಗಿರಿಯರಸನೆ ತುಂಗ ಕೃಪಾಂಗನೆ ಹಿಂಗದೆ ನೀನೆನ್ನಂತರಂಗದೊಳಿರುವುದ ಮಾತ್ರ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಕ್ತಿಯನು ಪಾಲಿಸುತ ಭಕ್ತರನು ಪಾಲಿಸುವ ಮುಕ್ತಿದಾಯಕ ಹರಿಯ ಸೇವೆಯನು ಮಾಳ್ಪೇ ಪ ಪಂಚೇಂದ್ರಿಯವ ಗೆದ್ದು ಪಂಚಾಮೃತಗಳಿಂದ ಕಂಚಿಪುರ ವಾಸಿಯ ಕಾಯವನು ತೊಳೆದೂ 1 ಆರು ಅಂಗಳ ಜೈಸಿ ಆರು ಶಾಸ್ತ್ರಗಳಿಂದ ಧಾರೆ ಪುರವಾಸಿಗೇ ಗಂಧ ಲೇಪಿಸುತಾ 2 ಚಾರು ವೇದಗಳಿಂದ ನಿತ್ಯ ಪುಷ್ಪವೇರಿಸುತ 3 ಎಂಟ ಕೀಳರ ಗೆದ್ದು ತುಂಟರೈವರ ಕೊಂದು ಬಂಟನಾಗುತ ಹರಿಯ ಮಹಿಮೆಯನು ಭಜಿಸಿ 4 ಶಾಪ ತಾಪವ ಕಳೆದು ತ್ರಿಪುರಾರಿ ವದ್ಯನಿಗೆ ಧೂಪದೀಪಗಳಿಂದ ಆರತಿಯ ಬೆಳಗೀ 5 ಅನುಮಾನವನು ತ್ಯಜಿಸಿ ಶ್ರೀ ಚೆನ್ನಕೇಶವನಿಗೆ ತನುಮನ ಧನದಿಂದ ಆತ್ಮವರ್ಪಿಸುವೇ 6
--------------
ಕರ್ಕಿ ಕೇಶವದಾಸ
ಭಾರ ನಿನ್ನದು ತಂದೆ ಸಿಂಧು ಎಂದೆಂದು | ಗುರುವರ್ಯ ಬಂದು ಕರುಣಿಸುವನು ಮದ್ಬಂಧೊ 1 ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು ಪೊಂಗಳಧರನ ತೋರಯ್ಯ | ಅಜರಾಯ ಭಂಗಬಡಲಾರೆ ಭವದೊಳÀು 2 ನಾರಾಯಣನ ಪುತ್ರ ನಾರಾಯಣಗೆ ಮಿತ್ರ ನಿರವದ್ಯ | ನೀಡಭಯ ಕರುಣಾತ್ಮ ಗುರುವೆ ಒಲಿದಿಂದು 3 ಕಾಮರೂಪನೆ ಹರಿಯನೇಮದಲಿ ಕಪಿಯಾಗಿ ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ ತಾಮಸರ ಹುರಿದೆ ಪುರದಲ್ಲಿ 4 ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ ಹರಿ ಅಂಗ ಸಂಗ ಪಡೆದಯ್ಯ 5 ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ ಕುಂದದೆ ಅಭಯ ಕೊಡಿಸಿದೆ | ದಯಸಿಂಧು ನಿಂದೆನ್ನ ಒಳಗೆ ಮುದವೀಯೊ 6 ದೇವೇಶನಾಜ್ಞೆಯಲಿ ಜೀವೇಶ ಸಂಜೀವ ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ ಮೊದಲೆಡೆಗೆ ಬಗೆದ ಕುಶಲಾತ್ಮ 7 ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ ಭೀಷಣಗೆ ರಾಷ್ಟ್ರ ಕೊಡಿಸಿದೆ 8 ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು ಕಾಯ ಬಿಡುತೀರೆ | ಉಳುಹಿದೆ ಶ್ರೀ ರಾಮನಾಗಮನ ತಿಳುಹೀಸಿ9 ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು ಪಾದ ಪಿಡಿಯಲು | ಭಕ್ತಿಯಲಿ ಪಟ್ಟಾಭಿರಾಮ ತನ್ನಿತ್ತ 10 ಆಖಣಾತ್ಮಕಾಯನೆ ಅಕಳಂಕ ಗುಣಧಾಮ ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ ಶ್ರೀಕೃಷ್ಣ ಭಕ್ತಾ ಕಲಿಭೀಮ 11 ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು ನಸುನಗುತ ಜನನಿಗಭಯವ | ನಿತ್ತಂಥ ಪಶುಪಾಲ ಪರನೆ ಪೊರೆಯೆನ್ನ 12 ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ ಸರ್ವಜ್ಞ ಭೀಮ ಬಿಡೆ ನಿನ್ನ 13 ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ ಪಶುವಂತೆ ವಧೆಯ ಮಾಡಿದಿ | ರಣದೊಳು ಸುಸ್ವಾದ ಗುಣಸಾರ ಮಹವೀರ 14 ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ ಪ್ರಾಣಸಖನಾಗಿ ಸಲಹಿದೆ | ಜಯಭೀಮ ಪಾಣೆ ಪಿಡಿಯೆನ್ನ ಮಹಘನ್ನ 15 ದುರಾರಾಧಕ ದುಷ್ಟ ಜರಸಂಧನ ಸೀಳಿ ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ ಪುರಾರಿ ವಂದ್ಯಾಗತಿ ನೀನೆ 16 ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ ಧೀರ ಎದುರಾಗಿ ನೀ ನಿಂತೆ 17 ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ ಮರಿಯದೆ ಅವನ ಅನುಜರ | ಸದೆಬಡಿದು ಮೋದ ನೀನಿತ್ತೆ 18 ಉರಗ ಬಂಧವ ಹರಿದು ಕರಿ ಮುಂದೆ | ನೀನಿಂತೆ ಸರ್ವನಿತ್ಯಾತ್ಮ ಕೃಷ್ಣಾತ್ಮ 19 ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ ಮುದದಿಂದ ನಲಿದೆ ಕಮಲಾಕ್ಷ 20 ಅರಗಿನ ಮನೆಯಲ್ಲಿ ವೈರಿಜನರ ಕೊಂದು ಪೊರೆದೆ ನೀ ಜನನಿ ಅನುಜರ | ಪಂಜರನೆ ಧರೆಯೊಳಗೆ ಎನ್ನ ಸಲಹಯ್ಯ 21 ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು ನಡೆದೇಕ ಚಕ್ರಪುರದಲ್ಲಿ | ಬಕನೊರಸಿ ನಡಕ ಬಿಡಿಸೀದಿ ಸುಜನರ 22 ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ ಲೇಸಾಗಿ ಮುಂದೆ ನಡೆದಯ್ಯ 23 ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು ವಾಸುದೇವನ ಕಂಡು ಆನಂದ | ತುಳುಕುತ್ತ ಆ ಸತಿಯ ತಂದೆ ವಿಜಯಾತ್ಮ 24 ರಾಜರೆಲ್ಲರ ಹಿಡಿದು ರಾಜಸೂಯಯಾಗವನು ಪೂಜೆಯನು ಮಾಡಿ ಮೆರದಯ್ಯ 25 ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ ದಕ್ಷನೆ ನೀನು ವನವಾಸ | ಅಜ್ಞಾತ ಪಕ್ಷವ ಕಳೆದು ಮರಳಿದೆ26 ಸಂಗರವ ನೀ ಹೂಡಿ ಭಂಗಿಸಿ ಕೌರವನ ರಂಗನ ಮುಂದೆ ಅರ್ಪಿಸಿ | ವಂದಿಸಿ ಮಂಗಳಾತ್ಮಕನೆ ಸಲಹೆಮ್ಮ 27 ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ ನಿರ್ಮೂಲಗೈದು ಅರಿಗಳ | ಕೊಂದ ಪರ ಧರ್ಮಪರರನ್ನು ಪೊರೆದಯ್ಯ 28 ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ ವಿದ್ಯಾಧಿಪತಿಯೆ ಸಲಹೆನ್ನ 29 ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ ಉಸರಲೇನಯ್ಯ ನಿನ್ನಲ್ಲಿ | ಜೀವೇಶ ಸೂಸುವ ಭಕ್ತಿ ನೀಡಯ್ಯ 30 ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ ಮಧ್ವಾಖ್ಯ ಗುರುವೆ ಪರಿಪಾಹಿ 31 ಸುರರು ದುಂದಭಿ ಮೊರೆಯೆ ದುರುಳರ ಎದೆಯು ನಡುಗಲು | ಹರುಷದಲಿ ಮೆರೆದು ನೆರೆದರು ಸುಜನರು 32 ಕೈವಲ್ಯ ನೀನಿತ್ತೆ ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ ನೀವಲಿದು ಹರಿಯ ತೋರಯ್ಯ 33 ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು ಗುಣಪೂರ್ಣ ಹರಿಯ ಪ್ರತಿಬಿಂಬ 34 ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ ವಿಪ್ರ ಸುರರು ಪೂಜಿಸೆ | ನಲವಿಂದ ಅವನಿಯೊಳು ಪೊಳೆದೆ ರವಿಯಂತೆ 35 ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ ಉದ್ಧರಿಸು ಎನ್ನ ದ್ವಿಜರತ್ನ 36 ಜನನಿ ಜನಕರು ತಡಿಯೆ ಅನುವಾದ ಸುತನಿತ್ತು ಘನವಾದ ತುರ್ಯ ಆಶÀ್ರಮ | ಕೈಗೊಂಡು ಸುನವ ಪದ್ಧತಿಯ ತೋರಿದೆ 37 ಅಚ್ಯುತ ಪ್ರೇಕ್ಷಕರಿಗೆ ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ ಅಚ್ಚುಮೆಚ್ಚುವ ನೀ ಹರಿಗೆಂದು 38 ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ ಛೇದಿಸಿ ಖಳರ ಮದವನ್ನು | ಹರಿಸಿದೆ ಸ್ವಾದ ಗುಣಸಿಂಧು ಮದ್ಬಂಧು 39 ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ ಕೊಳ್ಳುವದುಯೆಂದು ವರದಯ್ಯ 40 ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ ಬೋಧವೊ ಮಹಿಮೆಯೆಂದಾರು 41 ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು ಮುದದಲ್ಲಿ ಬಂದು ನಮಿಸಲು | ಶಿಷ್ಯಜನ ಯೈದಿ ಭಕ್ತಿಯನು ನಮೋ ಎಂದು 42 ಹರಿಯಂತೆ ನರಿಗಳನು ತುರಕ ದೂತರ ಜರಿದು ನರಪನಿಂದರ್ಧ ಮಹಿಮೆಯನ್ನು | ಪಡೆದಂಥ ಯರಡೇಳು ಭುವನ ಅಧಿಪತಿ 43 ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ ಭೃತ್ಯತ್ವಯೆನಗೆ ನೀಡಯ್ಯ 44 ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು ಈಶ ಸಲಹೆಂದು ಎರಗಲು | ಮನವುಬ್ಬಿ ಬಾ ಸುತನೆ ಎಂದು ತಬ್ಬಿದ 45 ಆನಂದ ಮೂರ್ತಿಯ ಆನಂದ ಸಂಗವನು ಆನಂದದಿಂದ ನೀ ಯೈದಿ | ನಂದ ಆನಂದ ತೀರ್ಥ ಕೊಟ್ಟೆಯೊ 46 ನಾರಾಯಣನಲಿ ಕರೆದೊಯ್ಯೆ ಬದರಿಪನ ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ ಗುರುರತ್ನ ಸಲಹೊ ಧನ್ಯಾತ್ಮ 47 ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ ಅಚ್ಯುತಾತ್ಮಾನೆ ಸಲಹೆನ್ನ 48
--------------
ಜಯೇಶವಿಠಲ
ಭಾರತಿದೇವಿ ಭಕ್ತಿಯನು ನೀಡಮ್ಮ ಭಾರತೀದೇವಿ ಪ. ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ. ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ 1 ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ 2 ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ 3
--------------
ಸಿರಿಗುರುತಂದೆವರದವಿಠಲರು
ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀಕೃಷ್ಣ ಹರಿ ವಿಠಲ | ಕಾಪಾಡೊ ಇವಳಾ ಪ ಹೇ ಕೃಪಾಕರ ಮೂರ್ತೆ | ಪ್ರಾರ್ಥಿಸುವೆ ಇದನಾ ಅ.ಪ. ಪತಿತ ಪಾವನರಂಗ | ಮತಿಮತಾಂವರರಂಘ್ರಿಶತಪತ್ರ ಸೇವೆಗಳ | ಸತತ ದೊರಕಿಸುತಾಸತತ ತವ ಸ್ಮರಣೆ ಸುಖ | ರತಿ ಪಾಲಿಸಿವಳೀಗೆಗತಿಗೋತ್ರ ನೀನೆಂದು | ಪ್ರಾರ್ಥಿಸುವೆ ಹರಿಯೇ 1 ಪತಿಸೇವೆ ದೊರಕಿಸುತ | ಕನನಗಭಯದನಾಗಿಪಥತೋರೋ ಸದ್ಗತಿಗೆ | ಕೃತಿರಮಣ ದೇವಾಹಿತವಹಿತ ದ್ವಂದ್ವಗಳ | ಸಮತೆಯಲಿ ಕಾಂಬಂಥಮತಿಯ ನೀ ಕರುಣಿಸುತ | ಕಾಪಾಡೊ ಹರಿಯೇ 2 ಪವನ ಮತ ಸುಜ್ಞಾನ | ದ್ರುವ ವರದ ಭಕ್ತಿಯನುದಿವಸ ದಿವಸದಿ ಕೊಟ್ಟೆ | ಉದ್ದರಿಸೊ ಇವಳಾಪವನಂತರಾತ್ಮ ಗುರು | ಗೋವಿಂದ ವಿಠಲನೆಇವಳ ಕೈಯನೆ ಪಿಡಿಯೆ | ಭಿನ್ನವಿಪೆ ಹರಿಯೇ 3
--------------
ಗುರುಗೋವಿಂದವಿಠಲರು
ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ ಸುರಪತಿಯ ನಾನೊಲ್ಲೆನೈ ಪ ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ 1 ಕುಸುಮಗಂಧಿಯರ ಓರೆನೋಟವೆಂಬ ಮಸೆದ ಕಣೆಯ ತಾನು ಪೂಡುತಲಿ ಎಸೆ ಮೋಹತಿಗೆ ನಾ ಸೈರಿಸಲಾರೆನೋ ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ 2 ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ ಭೃಂಗದಂತವರ ಬಲೆಗೆ ಬೀಳದಂತೆ ಸಂಗ ಸುಜನರಲ್ಲಿ ಇತ್ತು ಕಾಯೊ ದೇವ ಅಂಗಜಪಿತ ಶ್ರೀ ರಂಗೇಶವಿಠಲನೇ 3
--------------
ರಂಗೇಶವಿಠಲದಾಸರು
ಹಂಸವಾಹನ ಜಾಯೆ ಕಾಯೆ ಪ ವಿಪಾಂಸಗನ ಪದಪಾಂಸು ಧರಿಸುವಳೆ ಮನ ಸಂಶಯವ ಕಳೆ ಅ.ಪ. ಸತಿ | ಅ-ಜ್ಞಾನ ನೀಗಿ ಸುಜ್ಞಾನ ವೀಯುತ |ಜ್ಞಾನ ಪೂರ್ಣ ಪ್ರಜ್ಞಾನ ಘನಗುಣಗಾನ ಮಾಳ್ಪ ವಿಜ್ಞಾನ ವೀವುದು 1 ಭಕ್ತಿರೂಪಿ - ಸುವ್ಯಕ್ತಿಗೈ ಹರಿಸಭಕ್ತಿಯನು ಗುರುಭಕ್ತಿಯೆನ್ನಲ್ಲಿ |ಶಕ್ತಿ ಕೊಟ್ಟಾಸಕ್ತಿಯಲಿ ವೇ-ದೋಕ್ತದಲಿ ಎನ ಯುಕ್ತ ನೆನಿಸಮ್ಮ 2 ವಾಣಿಯೇ ಬ್ರಹ್ಮಾಣಿಯೇ ವೇ-ದಾಣಿಯೇ ಸುಜ್ಞಾನಿಯೇ ಪೊರೆವೀಣೆ ಧರಿಸಿಹ ಪಾಣಿಯೇ ಸು-ಶ್ರೋಣಿಯೇ ಚತು | ರಾನನ ಪ್ರಿಯೆ 3 ನೆಲಸಿ ರಸನದಿ | ವಿಲಸಿತಾಮಲಲಲಿತ ಹರಿಗುಣ | ಫಲಿಸಿ ಕೀರ್ತಿಸುಅಲವ ಭೋದರ | ಲಲಿತ ಉಕ್ತಿಲಿಪುಳಕ ಪುಳಕದಿ | ನಿಲಿಸು ಮನ್ಮನವಾ 4 ಸನ್ನುತ ಕ | ಟಾಕ್ಷ ತೋರಿಸು 5
--------------
ಗುರುಗೋವಿಂದವಿಠಲರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀಚಪ್ಪರ ಶ್ರೀನಿವಾಸ ಪ.ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆದರ್ಪಕತಾತನೆ ತಾ ಸಜ್ಜನಪ್ರೀತ ಅ.ಪ.ಮಾಧವನಿನ್ನಯ ಮಹಿಮೆ ತಿಳಿಯದಪ-ರಾಧವ ಮಾಡಿದೆ ದಾರಿದ್ರ್ಯದಬಾಧೆಯಿಂದ ತವಪಾದದರುಶನದಗಾದಿಯ ಕಾಣದಾದೆ ನಾ ದ್ರೋಹಿಯಾದೆ 1ತ್ರಾಣವಿರುವಾಗಕಾಣಿಕೆಹಾಕಿದೆದೀನದಾರಿದ್ರ್ಯದ ಹೊತ್ತಿನಲಿಮೇಣದರಿಂದಲಿ ತೆಗೆದು ತೆಗೆದು ಪಂಚಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ 2ಮಂದವಾರದಿಕ್ಕೊಂದೂಟವ ಸತ್ತ್ವದಿಂದಿರುವಾಗ ನಾ ನೇಮಗೈದೆಮಂದಭಾಗ್ಯ ಜ್ವರದಿಂದ ಪೀಡಿತನಾದ-ರಿಂದೆರಡೂಟವನೂ ಮಾಡಿದೆ ನಾನು 3ಶನಿವಾರಕ್ಕೊಂದಾಣೆಕಾಣಿಕೆಹಾಕುತ್ತಮಿನುಗುವ ಡಬ್ಬಿಯ ನಾ ಮಾಡಿದೆಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದಹಣವೆಲ್ಲಗುಣನುಂಗಿತು ಪಾದಕೆ ಗೊತ್ತು4ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣಗುಡ್ಡೆಯ ಮೇಲಿರುವ ಮಹಾನುಭಾವ 5ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯುಮಂಡೆಯೊಳುರಿವುದು ಖಂಡಿತದಿಪುಂಡರೀಕಾಕ್ಷನೆ ಕರುಣಾಮೃತರಸಕುಂಡದೊಳ್ ಮೀಯಿಸಯ್ಯ ವೆಂಕಟರಾಯ 6ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆಕೆಡುಕು ಮಾಡುವುದೇನುಜಡಜನಾಭಕಡಲಶಯನ ಲಕ್ಷ್ಮೀನಾರಾಯಣ ನ-ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ