ಒಟ್ಟು 56 ಕಡೆಗಳಲ್ಲಿ , 29 ದಾಸರು , 48 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಪುರುಷನ ನೆನೆಯಿರೋ | ನರಕ ಭೀತ ಕಳ್ಳನರರೇ ನೀವು || ಶರಣಾಗತಾರ್ಥ ಪಾಲಕನೆಂಬಬಿರುದು ಇವನಿಗಲ್ಲದಿನ್ನೊಬ್ಬಗುಂಟೇ ಪ ಹರಿಯೆಂದು ಹೃದಯದಲಿ ಸ್ಮರಿಸಿ ಕರಿರಾಜ ಕರವೆತ್ತಿಕರೆಯೆ | ಉರದಲೊರಗಿಹ ಸಿರಿಗೆ ಸರಿಸಿ | ಸಾರಂಗರಿಯ ಧರಿಸಿಗರುಡನ ಮರೆತು | ಬರಿ ಗಾಲಿಲೆ ಬರುವಾ 1 ಮಂಗಳನು ಜರಿದು ಜಗವು ಕರುಣವಿಲ್ಲದೆ |ಕರಿಣಿಗಳುದಕದ ಹೊಲಸು ಹೇಸಿಕೆಗೆ |ಬೇಸರಗೊಳ್ಳದೆ ಬಂದವನ ಪುಷ್ಕರವೆತ್ತಿ |ಚಕ್ರದಿ ನಕ್ರನ ಮುಖ ಕಡಿವ 2 ಸುರರು ಕಿನ್ನರರು ಬೆರಗು ಬೀರುತಲಿರಲುವರ ಚತುರ್ಭುಜ ರುಕ್ಮ ವಸನಗಳು ಕೊಡುವ3
--------------
ರುಕ್ಮಾಂಗದರು
ಫಲವೇನೊ ಫಲವೇನೊ ಫಲವೇನೊ ಮನುಜ ಪ ಫಲವೇನೊ ಬಾಳಿ ಹರಿದಾಸನಾಗದ ಮೇಲೆ ಅ.ಪ. ಆಧಿಕಾರವನು ಮಾಡಿ ಮಧುವೈರಿಯನು ಮರೆತು ಎದುರಿಲ್ಲ ಎನಗೆಂದು ಬಲು ಮದದಿಂದ ಮೆರೆದೆ1 ಬಡವಾರ ಬಡಿಯುತ ಕಡುದುಷ್ಟನಿವನೆನಿಸಿ ಹೆಡಿಗೇಲಿ ಹೊನ್ನ ತಂದು ನಿನ ಮಡದೀಗೆ ಕೊಡಲು 2 ಮಡದಿ ಮಕ್ಕಳು ನಿನ ಹಡೆದ ತಾಯ್ತಂದೆ ಕಡು ಸುಖಪಟ್ಟಾರು ನಿನ ಒಡಗೂಡಿ ಬರುವಾರೆ 3 ಅನುದಿನದÀಲಿ ನೀನು ತನುವ ಪೋಷಿಸುತ ಅನುರಾಗದಿಂದಾಲಿ ನಿನ್ನ ಮನಸಿನಂತಿದ್ದು 4 ನರಜನ್ಮವನು ಕೊಟ್ಟ ರಂಗೇಶವಿಠಲನ ಹರುಷದಿಂ ಪಾಡುವ ಹರಿದಾಸನಾಗದ ಮೇಲೆ 5
--------------
ರಂಗೇಶವಿಠಲದಾಸರು
ಬರತಾರಂತ್ಹೇಳೆ ಹರಿಪಾದ ದರ್ಶನಕೆತ್ವರಿತದಿ ಪಾಂಡವರು ಪ. ಹದಿನಾಲ್ಕು ಲೋಕದ ಪದುಮಗಂಧಿಯರೆಲ್ಲಮದನನಯ್ಯನ ಮನೆನೋಡಲುಮದನನಯ್ಯನ ಮನೆನೋಡೋ ವ್ಯಾಜ್ಯದಿಮುದದಿಂದ ಮುಯ್ಯ ತರುತಾರೆ1 ಸುರನಾರಿಯರು ನಾನಾ ಪರಿಯ ಭೂಷಣವನಿಟ್ಟುಹರಿಯ ಮನೆ ನೋಡೋ ಹರುಷದಿಹರಿಯ ಮನೆ ನೋಡೋ ಹರುಷದಿ ಮುಯ್ಯವತರತಾರೆ ತಾವು ತವಕದಿ2 ನಾರಿಯರೆಲ್ಲರು ನಾನಾ ವಸ್ತಗÀಳಿಟ್ಟುಸಾರಾವಳಿಗಳ ನಿರಿದುಟ್ಟು ಸಾರಾವಳಿಗಳ ನಿರಿದುಟ್ಟು ಹೊರಡೆ ಸೂರ್ಯಮುಳಗಿದನೆ ಆಕಾಶದಲಿ 3 ಅಕ್ಕತಂಗಿಯರು ತಾವು ಚಕ್ಕನೆ ವಸ್ತಗಳಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟುಮಕ್ಕಳಿಗೆ ಬಾಲ್ಯ ಉಡಿಗೆಯಿಟ್ಟು ಹೊರಡಲುಅರ್ಕ ಮುಳುಗಿದ ಆಗಸದಿ 4 ಮಂದ ಗಮನೆಯರೆಲ್ಲ ತುಂಬಿದೊಸ್ತಗಳಿಟ್ಟುಕಂದರಿಗೆ ಬಾಲರ ಉಡುಗೆ ಇಟ್ಟುಕಂದರಿಗೆ ಬಾಲರ ಉಡುಗೆಯಿಟ್ಟು ಹೊರಡಲುಚಂದ್ರಜ್ಯೋತಿಗಳು ಹಿಡಿದಾವೆ 5 ಸುಮನಸೆಯರೆಲ್ಲ ಯಮುನಾದೇವಿಯ ದಾಟಿಧಿಮಿ ಧಿಮಿ ಭೇರಿ ಹೊಯಿಸುತಧಿಮಿ ಧಿಮಿ ಭೇರಿ ಹೊಯಿಸುತ ಬರುವಾಗಭುವನದ ಬೆಳಕು ಹರವಿತು6 ಆನೆಗಳು ಕುಂಭಿಣಿ ಜಡಿದು ಬರತಾವೆ ಕುಂಭಿಣಿ ಜಡಿದು ಬರತಾವೆ ರಾಮೇಶನ ಪದಾಂಬುಜ ನೋಡೊ ಭರದಿಂದ7
--------------
ಗಲಗಲಿಅವ್ವನವರು
ಬರಿದೆ ಚಿಂತಿಸಬೇಡ ಮನವೆ ಭಯಗೊಂಡು ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ ಬಲ್ಲನೊ ಅರಿಯನೋ ಇದನೆಲ್ಲವೆನುತ ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು 1 ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ ಮರೆವಿನೊಳಜಾಮಿಳನು ಕರೆಯಲಾಗಿ ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ ಉರಗ ಗಿರಿವಾಸ 2 ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ ಉಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ 3 ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು ಕಡಸಾರ ಬಂದವಳು ಕಾಲು ಸುತ್ತಿ ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು ಬಿಡಿಸಿ ಸಲಹಿದರಾರು ಜಡನಾದ ಮನವೆ 4 ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು ಕರೆದು ಈವನು ನಮಗೆ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಬಲ್ಲಿದರ ತಿಳಿವಾ ಬಲ್ಲವರ್ಗೆ ವಲಿವಾ ಬಲ್ಲಿದರ ಆಪತ್ತಿಳಿದು ನಿಲ್ಲದೆ ತಾ ಬರುವಾ ಪ ಪಾಂಡುಸುತನ ಕಾಯ್ದ ಪುಂಡರ ತಾನ್ಹೊಯ್ದು ಉಂಡೆನೆಂಬೊ ಗೆಳೆಯಗೆ ಉಂಡು ಉಣ್ಣಿಸಿದಾ 1 ಗಜವರ ಕರೆದಾ ಅಜಮಿಳ ನೆನೆದಾ ಭಜಕರ ಕಾಮಧೇನು ನಿಜಕರ ತೋರ್ದಾ 2 ಸಲ್ಲಲಿತ ಮನವಾ ನಿಲ್ಲದೆ ತಾನೀವಾ ಬಲ್ಲಿದ ನರಸಿಂಹ ವಿಠಲ ಸಲ್ಲುವರ ಪೊರೆವಾ 3
--------------
ನರಸಿಂಹವಿಠಲರು
ಭಕುತ ಜನ ಮುಂದೆ ನೀನವರ ಹಿಂದೆ ಪ ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಅ ಪ ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? 1 ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?2 ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ | ಸತ್ಸಂಗತಿಗೆ ಹರಿದಾಸರೆಲ್ಲ || ಸಿರಿ ವಿಜಯವಿಠ್ಠಲ ವೆಂಕಟಾಧೀಶ ವತ್ಸ ಮುಂದಲ್ಲದೆ ಧೇನು ತಾ ಮುಂದೆ ? 3
--------------
ವಿಜಯದಾಸ
ಭೂಮಿಸುರರ ಘನ | ಸ್ತೋಮವಂದಿತ ಮಹಾ ಮಹಿಮಾ ಮಹಾಮಹಿಮ ಸಜ್ಜನ - ತತಿ - ಪ್ರೇಮಾ ಪ ಕಾಮಧೇನು ಸುಕಲ್ಪತರು ಚಿಂ - ತಾಮಣಿಯು ತಾನೆನಿಸಿ ಸರ್ವದ ಕಾಮಿತಾರ್ಥವನಿತ್ತು ಮೆರೆವನು ಈ ಮಹಿಯೊಳು ಸಾರ್ವಭೌಮನು ಅ.ಪ ಪ್ರಾಣತನಯ ವಿಷ್ವಕ್ಸೇನ ಶ್ರೀಹರಿ ಶಾಪದಿಂದ ಶಾಪದಿಂದ ಭೂತಳದಲಿ ಬಂದಾ ಮಾಣವಕ ಪ್ರಹ್ಲಾದನೆನಿಸಿ - ಪ್ರಾಣದೇವಾವೇಶ ಶೇಷನು ಕ್ಷೋಣಿಯೊಳು ಶಿರಿವ್ಯಾಸನೆನಿಸೀ ಮಾಣದಲೆ ಗುರುರಾಘವೇಂದ್ರನು 1 ಅಲವಬೋಧರ ಮತ - ಜಲಧಿಚಂದಿರನೆನಿಪನೀತಾ ನೆನಿಪನೀತ ಲೋಕದಿ ಬಹು ಖ್ಯಾತಾ ಲಲಿತ ವೃಂದಾವನದಿ ನಿಂತು ಹಲವು ಭಕುತರಭೀಷ್ಠಕಾರ್ಯವ ಸಲಿಸಿ ಸುಜನರ ಸಲಹೊಗೋಸುಗ ಸುಲಭತರನಾಗಿರುವ ಗುರುವರ 2 ಕಿಟಜಸರಿದ್ವರ - ತಟದಿ ಸಂತತ ತಾನಿರುವ ತಾನಿರುವ ಭಕ್ತರು ಕರೆಯೆ ಬರುವಾ ಧಿಟ ಸುಭಕ್ತರ ಬಿಡದೆ ತಾನು ಪ್ರ - ಕಟನಾಗಿ ಮಹಿಮೆ ತೋರುವ ಧಿಟ ಗುರು ಜಗನ್ನಾಥ ವಿಠಲನ ಭಟಜನಾಗ್ರಣಿ ಎನಿಸಿ ಮೆರೆವ 3
--------------
ಗುರುಜಗನ್ನಾಥದಾಸರು
ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ ಶೋಣಿತ ಪುರಧೀಶÀಗೆ ಮಂಗಳ ಗುರುವರಗೆ ಪ ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ 1 ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ 2 ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ 3 ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ 4 ವರಧೀರ ಹನುಮೇಶವಿಠಲನಾ ನಿಜದಾಸಾ ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ 5
--------------
ಹನುಮೇಶವಿಠಲ
ಮನವೆ ಪೇಳುವೆ ಪ ಅಂತರಂಗದಲಿ ಚಿಂತಿಪರಘಶುಲಧ್ವಾಂತ ದಿವಾಕರನಾ ಶ್ರೀವರನಾ ಅ.ಪ ಎಂತು ಸುಕೃತವೂ ಸಿರಿಕಾಂತನುಯನ್ನೊಳು ನಿಂತಿರುವನು ಎನುತ ಪರ್ವತ ಸಂತೋಷದಲಿರುವಂತೆ ತೋರುವದು ಸು- ಕಾಂತ ಶಿಖರದಿಂದ ಛಂದ 1 ವರಶಿಲೆಯೊಳಿರುವ ಹರಿಯ ಶೇವಿಸಲು ಹರುಷದಿ ಸುರನಿಕರ ಭಾಸುರ ತರುಲತೆರೂಪದಿ ಇರುತಿಹರೆನ್ನುತ ಮೆರೆವನು ಗಿರಿರಾಜಾ ಸುತೇಜಾ2 ಗಿರಿನಾಥಾ ತೋರುತ ಅರಳಿದ ಪೂವಿನ ಪರಿಮಳ ಬೀರುವ ಸುರಚಿರ ತರುವ್ರಾತಾ ಶೋಭಿತ3 ಪವನ ಶೇವಿತನು ಭುವನೋದರ ತಾ ದಿವಿಜರಿಂದ ಸಹಿತ ಸೇವಿತ ಅವನಿಧರನು ಮಾಧವನ ತೆರದಿ ತೋ ರು ವೆನೆಂಬುಗರ್ವಾದಿಂದಿರುವ 4 ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ ಸಿದ್ಧಿದಾಯಕವೆಂದೂ ಬಂದೂ ಪದ್ಮಾಕ್ಷನ ಪದಪದ್ಮವ ಧ್ಯಾನಿಸು- ತಿದ್ದರು ಗುಹೆಗಳಲಿ ಪೂರ್ವದಲಿ5 ಮುನಿ ಮಾರ್ಕಾಂಡೇಯನು ಬಹುದಿನದಲಿ ಘನ ತಪವಾಚರಿಸಿ ಸೇವಿಸಿ ವನಜನಾಭನ ಪದವನಜ ಮಧುಪ ನೆಂ ದೆನಿಸುತಲಿರೆ ಗುಹದಿ ತಪೋನಿಧಿ6 ಗಿರಿಯ ಬಲದಿ ಅಹೋಬಲ ನರಸಿಂಹನ ದರ್ಶನವನು ಕೊಳುತ ನಿರುತ ಇರುತಿರಲೊಂದಿನ ಬರಲಾಷಾಢದ ಹರಿವಾಸರ ವೃತವಾ ಚರಿಸುವ 7 ದ್ವಾದಶಿ ಸಾಧನೆ ಬರಲು ಪ್ರತಿದಿನದಿ ಶ್ರೀದನ ದರ್ಶನದಾ ನೇಮದ ಸಾಧನೆ ವಿಷಯದಿ ಯೋಚಿಸುತಿರೆ ಹರಿ ಮೋದದಿ ಮುನಿಗೊಲಿದಾ ಸೂಚಿಸಿದಾ 8 ಅರುಣೋದಯದಲಿ ಸುರಗಂಗೆಯು ತಾ ವರ ಪುಷ್ಕರಣಿಯೊಳು ಬರುವಳು ತರುರೂಪದಿ ನಾ ಬರುವೆನು ಬಿಡದಿರು ಮರುದಿನದಾ ಚರಣೆ ಪಾರಣೆ9 ಎಂತು ಕರುಣವೊ ನಿರಂತರ ಭಜಿಪರ ಚಿಂತಿತ ಫಲವೀವ ಕೇಶವ ಇಂತು ಹರಿಯ ಗುಣ ಚಿಂತಿಸುತಿರಲು ನಿ ಶಾಂತದಿ ಸರೋವರದಿ ವೇಗದಿ10 ಭಾಗೀರಥಿ ಜಲದಾಗಮ ವೀಕ್ಷಿಸಿ ರಾಗದಿ ವಂದಿಸಿದ ತುತಿಸಿದ ಯೋಗಿವರನುತ ಸ್ನಾನವಮಾಡಿ ಬರುವಾಗಲೆ ಧ್ಯಾನಿಸಿದ ಹರಿಪದ11 ಆ ತರುವಾಯದಿ ಪಾರಿಜಾತ ತರು ವ್ರಾತವ ನೋಡಿದನು ವಂದಿಸಿದನು ಈತನೆ ನರಮೃಗನಾಥನೆನುತ ಮುನಿ ಪ್ರಾತ:ಪಾರಣವ ಮಾಡಿದ ಜವ12 ಮೀಸಲು ಮನದಲಿ ಶೇಷಶಯನಗಾ- ವಾಸಗಿರಿಯ ಸೇವಾ ಮಾಡುವ ಭೂಸುರ ಗಣದಭಿಲಾಷೆಗಳನು ಪೂರೈಸಿ ಪೊರೆವನೀತಾ ಪ್ರಖ್ಯಾತಾ 13 ಶ್ರೀಯುತ ಮಾರ್ಕಾಂಡೇಯರ ಚರಿತೆಯ ಗಾಯನ ಫಲವಿದನು ಪೇಳುವೆನು ಶ್ರೇಯಸ್ಸಾದನ ಕಾಯದಿ ಬಲದೀ- ಮಾನವ 14 ಸುರತರು ಕಾರ್ಪರ ಶಿರಿ ನರಸಿಂಹನೆ ಈತ ಎನ್ನುತ ನಿರುತ ಅನಂತನ ಗಿರಿಯ ಮಹಿಮೆಯನು ಸ್ಮರಿಸುವ ನರಧನ್ಯಾ ಸನ್ಮಾನ್ಯ 15
--------------
ಕಾರ್ಪರ ನರಹರಿದಾಸರು
ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ ಎಲ್ಲಿ ನೋಡಿದರಲ್ಲಿ ಇರುವಾತಾ ಎಲ್ಲರನು ಪೊರೆವಾತಾ ಬಲ್ಲಿದನು ಬಲಿಯ ತುಳದಾತಾ ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ 1 ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ ಉಬ್ಬಸವ ಬಡುವಾಗ ಸಲಹಿದವರ್ಯಾರೋ ಅಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ 2 ವರದ ಹನುಮೇಶವಿಠಲನ ಚರಣವ ನಂಬು ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ ಕರಿರಾಜ ಕರಿಯಲಾಕ್ಷಣಕೆ ಅವಸರದಲಿ ಗರುಡವಾಹನ ಕೃಷ್ಣ ಬರಲಿಲ್ಲವೇನೋ 3
--------------
ಹನುಮೇಶವಿಠಲ
ಮಾನವ ಅಜಹರವಿನುತ ನಿಜಪಾದ ಅನುದಿನವು ಭಜಸಿಬದುಕೆಲೊ ಪ ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ ಸುಜನ ಭಜಗಶಯನನ ಅ.ಪ ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ ಕೊಳಪಟ್ಟು ಕೆಡದಿರೆಲೊ ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ ಅಳಿವ ಸುಖದಾಸೆಗೆಳಸಿ ಕೆಡಬೇಡ ಜಲಜನಾಭನ ಒಲಿಸಿ ನಲಿಯೊ 1 ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ ಕರಕೊಂಡು ಧರೆಗೆ ಬಂದಿ ಅರಲವದ ಸುಖಕಾಗಿ ಮರೆದು ಎಲ್ಲವ ನೀನು ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ ಖರೆಯೆಂದೆನ್ವುದು ಸರಿಯಲ್ಲೆಲೊ ಇದು ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ 2 ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ ನೊಣಕ್ಹವಣಿಸುತಿರುವಂತೆ ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ ರಣೆಂಬ ದಣಿವು ಕಳೆವಂಥ ಜನಕಜಾತೆಯ ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ ಕುಣಿ ಕುಣಿದು ಧನ್ಯವಾಗೆಲೊ 3
--------------
ರಾಮದಾಸರು
ಮಾವಿನಕೆರೆ 8 ರಂಗಗಿರಿಯನೇರಿಬರುವಾ ತಂಗಿ ಬರುವೆಯಾ ಪ ಅಂಗನೆಯರು ಕುಣಿದು ಮಣಿವ ಸಂಗದೊಳಿರುವಾ ಅ.ಪ ಅವನ ಪಾದದ ನಡಗೆ ಚಂದ | ಧವಳಹಂಸ ಮನಕಾನಂದಾ ಅವನ ನಲಿವು ನವಿಲಿಗಂದ | ಅವನ ಉಲಿವು ಕೋಗಿಲೆಯಂದಾ 1 ಅವನ ಕರದ ವೇಣುಗಾನ ಭುವನಕೆಲ್ಲ ಅಮೃತಪಾನ ಅವನ ನಗೆಯ ತೋರ್ಪ ಭವವ ಕಳೆವ ಪುಣ್ಯಸದನ 2 ವಾರಿವಾಹ ವರ್ಣದವನು ಹಾರಪದಕ ಧರಿಸಿದವನು ಚಾರುಸುಂದರ ಪೀತಾಂಬರನು 3 ಹಿಂದೆ ನೀನು ನೋಡಲಿಲ್ಲ ಮುಂದೆ ನಾನು ಕರೆವುದಿಲ್ಲ ಇಂದು ಬಂದೆಬರುವನಲ್ಲ ಸಂದೇಹ ಎಳ್ಳಷ್ಟೂ ಇಲ್ಲ 4 ಬೊಮ್ಮನಪ್ಪನವನೆ ನೀರೆ ನಮ್ಮ ಮಾಂಗಿರಿಗೊಪ್ಪುವ ತಾರೆ ಹೊಮ್ಮಿದಾ ಸಂಪ್ರೀತಿಯ ಬೀರೆ ಸುಮ್ಮನೆ ನನ್ನೊಡನೆ ಬಾರೆ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೋಜು ಮಾಡಿದಿರ ರುಕ್ಮಿಣಿ ಭಾಮೆಮೋಜು ಮಾಡಿದಿರರಾಜಪುತ್ರರ ವಾಜಿಗಾಣುತಸೋಜಿಗಾಗೇದರಾಜ ರಾಜರ ಪ. ಚದುರೆ ದ್ರೌಪದಿದೇವಿ ಮುದದಿ ಮುಯ್ಯವ ತಾರೆಇದುರಿಗೆ ಬಾರದೆ ಕದವನಿಕ್ಕಿ ಬಹಳೆ1 ಚಿಕ್ಕ ಸುಭದ್ರಾತಾ ಅಕ್ಕರದಿ ಬರುವಾಗಹೊಕ್ಕು ಒಳಗೆ ಕದವ ನಿಕ್ಕಿಕೊಂಡು ಬಹಳೆ2 ವಸುಧೆರಾಯರು ನಿಮ್ಮ ಕುಶಲಕ್ಕೆ ಬೆರಗಾಗಿಮುಸು ಮುಸು ನಗುತಾರೆ ಮುಸುಕಿನೊಳಗೆ ಬಹಳೆ3 ಕತ್ತಲೆಗಂಜುತ ಮಿತ್ರೆಯರು ನಿಂತೆವುಪೃಥ್ವಿರಾಯರು ನಿಮ್ಮ ಅರ್ಥಿಗೆ ನಗುತಾರೆ ಬಹಳೆ 4 ಕೃಷ್ಣ ರಾಮೇಶನ ಪಟ್ಟದರಾಣಿಯರುಎಷ್ಟು ಶಾಣೇರೆಂದು ಅಷ್ಟ್ಟೂರು ನಗುತಾರೆ ಬಹಳೆ5
--------------
ಗಲಗಲಿಅವ್ವನವರು
ಮೋಸಗೊಳ್ಳದಿರು ಮನವೆ ಹೇಸಿಕೆಯಲಿ ದೋಷವನ್ನು ತಿಳಿಯದೆ ಕೀಳಾಸೆ ಕೆಲಸ ಮಡುವಿನಲ್ಲಿ ಪ. ಫುಲ್ಲ ಪದ್ಮದಂತೆ ಪೊಳೆವ ಚೆಲ್ವ ಮುಖವೆಂಬೀ ಸುರಿವ ಜೊಲ್ವಿ ಶೀಗೆಬೀಜ ಪೋಲ್ವ ಹಲ್ಲ ಸಾಲನೆಲ್ಲಿ ಮರತಿ 1 ಗೆಜ್ಜೆ ಕಾಲುಂಗುರಗಳಿಟ್ಟು ಲಜ್ಜೆ ತೋರಿ ನಗುತ ಬರಲು ಹೆಜ್ಜೆಯನ್ನೆ ನೋಳ್ಪೆ ಹೊಲಸು ಖಜ್ಜಿಯ ಕಲೆಯ ಮರೆತಿ 2 ವಿಟರ ನೋಡುತ ಘಟ ಘಟನೆ ಬರುವಾಕೆಯ ಘಟನೆ ಬಯಸಿ ದುಸ್ಸಂ- ಕಟಗೊಂಬದ್ಯಾಕೆ ಮರೆತಿ 3 ಅಕ್ಷಿಯನ್ನು ತಿರುಹುತ್ತ ಸೂಕ್ಷ್ಮ ವಸ್ತ್ರ ಸುತ್ತಿ ವೇಶ್ಯಾ ಲಕ್ಷಣವ ಕಂಡು ಶುಂಭ ಮಕ್ಷಿಕಾ ವಿಹಾರ ಬಲದಿ 4 ವರನಾರಿಯೆಂಬುದೊಂದೆ ಮರುಳು ಭಾವನೆ ಮೋಹ ಕರವಲ್ಲದೆ ಬೇರೊಂದು ಸರಸತನವಿಲ್ಲಿಂದು 5 ಈಶನಿತ್ತದುಂಡು ನಿತ್ಯ ತೋಷಗೊಳ್ಳದಹೋರಾತ್ರಿ ಘಾಸಿ ಮಾಡದಿರು ಭಾರ- ತೀಶನ ಪದವ ಸೇರು 6 ಬೇಡ ಬೇಡವಿನ್ನು ಭ್ರಾಂತಿ ಮಾಡು ಮೋಹಾಗ್ನಿಗೆ ಶಾಂತಿ ಬೇಡು ಶೇಷಾದ್ರೀಶನಡಿಯ ಕೊಡುವಾಭೀಷ್ಟ ನಮ್ಮೊಡೆಯ7
--------------
ತುಪಾಕಿ ವೆಂಕಟರಮಣಾಚಾರ್ಯ
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ. ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1 ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2 ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3 ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4 ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5 ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6 ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7 ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8 ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9 ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10 ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11
--------------
ಗಲಗಲಿಅವ್ವನವರು