ಒಟ್ಟು 17 ಕಡೆಗಳಲ್ಲಿ , 13 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಮರುಗಿದರು ನಿನ್ನ ಹಣೆಯ ಬರೆಹಅಷ್ಟಲ್ಲದಿಲ್ಲ ಸ್ತುತಿ ವಚನದ ಫಲ ಕಂದಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅಂಬರದೊಳಾಡುವ ಪಕ್ಷಿ ತನ್ನ ವಶವಹುದೇಉಂಬುವರ ಕರುಬಿದಡೆ ಉದರ ತುಂಬುವುದೇಕಂಬಳಿಯ ಕೊಡಲು ಕನಕಾಂಬರ ತನಗಹುದೆಹಂಬಲಿಸಿ ಹಲವ ಹಲುಬಿದಡೆಸಿರಿಬಹುದೆ1ಇಲ್ಲದುದ ಬಯಸಿ ಬೇಡಿದೊಡೆ ಭಂಗಬಹುದೊಬಲ್ಲೆನೆಂದೊಡೆ ಮಣಿಸದೆ ಬಿಡಳು ವಿಧಿಯುಬಲ್ಲಿದನು ಬಡವನಿವನೆಂದು ನೋಡರುಸಿರಿವಲ್ಲಭನ ಮಗಳ ಮೀರುವರಾರು ಕಡೆಗೆ2ಸಿರಿಗೆ ಹಿಗ್ಗದೆ ಬಡತನಕೆ ಬೆಂಡಾಗದಿರುಸೇರಿದ ನೆಲೆಯಲಾ ಸುಖ ಸಾವ ಕಾಲದಲಿಶರಣ ಜನಾಶ್ರಿತ ನೆಲೆಯಾದಿಕೇಶವನಚರಣಕಮಲವ ಭಜಿಸಿ ಸುಖಿಯಾಗು ಮನವೆ3
--------------
ಕನಕದಾಸ
ತುಂಬಿತುಂಬಿತುಂಬಿದೆ ಮುಕ್ತಿಯುತುಂಬಿದೆ ಮುಕ್ತಿಯು ತುಂಬಿದೆ ಮುಕ್ತಿಯುತುಂಬಿಪಧಡಧಡ ಧಡಿಸುತ ದಟ್ಟಣೆಯಿಂದಲಿ ದಯೆಗೈಯುತಲಿದೆತುಂಬಿಎಡದೆರಹಿಲ್ಲದೆ ಏಕವೆ ಎನಿಸುತ ಎಲ್ಲೆಡೆ ತುಂಬಿದೆತುಂಬಿ1ಅಂಬರದೊಳು ಚಿದಂಬರವೆನಿಸುವ ಅಂಬರತಾನಿದೆತುಂಬಿಬಿಂಬದಿ ತೋರುವ ಬಿಂಬಂತೆಲ್ಲವನಿಂಬಿಡುತಿದೆತಾತುಂಬಿ2ಜ್ಞಾನಾಮೃತ ರಸರಸವನೆ ಬೀರುತ ಜ್ಞಾನಕೆ ದೂರಿದೆತುಂಬಿತಾನೆ ತಾನೆ ತಾನಾದ ಪುರುಷಗೆ ತಾನೆಯಾಗಿದೆತುಂಬಿ3ನಾದದ ಮನೆಯಲಿ ನಾದದಿ ಮರೆಸುವ ನಾದದಿಬೆರೆತಿದೆತುಂಬಿಭೇದಾಭೇದಗಳಹ ದೃಗ್‍ದೃಶ್ಯದ ಭೇದವ ಸಾಕ್ಷಿಪತುಂಬಿ4ಇಂದುಅಮೃತಕರ ಸೂಸುವ ತೆರದಲಿಹೊಂದಿರುವವರನು ತಾತುಂಬಿಮಂದಹಾಸ ಮಹಾಲೀಲಾತ್ಮಕಸಿಂಧುಚಿದಾನಂದತುಂಬಿ5
--------------
ಚಿದಾನಂದ ಅವಧೂತರು