ಒಟ್ಟು 27 ಕಡೆಗಳಲ್ಲಿ , 17 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಜಾನಕಿದೇವಿ ನಿನ್ನ ನಾ ಧ್ಯಾನಿಪೆ ತಾಯಿ ಪ ಸುಜ್ಞಾಪ್ರದೆಯೆನ್ನ ಮನೋಭೀಷ್ಟವನೀಯ್ಯೆ ಅ.ಪ ಸಂಸಾರವಾರ್ಧಿಯೊಳಗೆ ಮುಳುಗಿ ಬಳಲುವೆನಮ್ಮ | ಇದು ಪಾರುಗಾಣೋದೆಂದಿಗೊ ನಿನ್ನ ಪತಿಯ ಕೇಳಮ್ಮ 1 ವಿನುತ ಪದಾಂಬುಜಯುಗಳೆ ಜಗದಂಬೆ ನಿನ್ನ ನಂಬಿದೆ ವಿಶ್ವಂಭರಪ್ರಿಯಳೆ 2 ಸಾಮಜರಾಜವರದ ಶ್ರೀಗುರುರಾಮವಿಠಲನ | ಹೃ ದ್ಧಾಮದಲ್ಲಿ ತೋರಿಸಿ ಪರಚಿಂತೆ ಬಿಡಿಸೆನ್ನ 3
--------------
ಗುರುರಾಮವಿಠಲ
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಸೂರ್ಯ ಪುತ್ರೀ |ತ್ರಿವಿಧ ತಾಪಂಗಳನು ಕಳೆವ ಶುಭಗಾತ್ರೀ ಪ ಕಾಳಕೂಟವ ಮೆದ್ದು ದೇವತತಿ ಸಲಹಿದಗುಕಾಲಾಖ್ಯ ಗರುಡಂಗು ಕಾಳ ಉರಗನಿಗೂ |ನೀಲಾಖ್ಯೆಯಂದದಲಿ ಪಂಚಗುಣದಿಂ ನ್ಯೂನಕಾಳಿಂದಿ ದೇವಿಯರಿಗಾ ನಮಿಪೆ ಸತತ 1 ಸಂಚಿತ ಸುಪಾಪಕ್ಕೆ ಅನುತಾಪವೆಂಬುವುದುಚಿಂತಿಸುವ ತತ್ವಗಳ ನಿರ್ಣಯಾದಿಗಳ |ಇಂತಪ್ಪ ಸತ್ಕರ್ಮ ಸಂತರಿಂ ತಿಳಿಸುತ್ತಚಿಂತಿಪುದೆ ಸತ್ತಪವು ಚಿತ್ತ ನಿಗ್ರಹವೆಂಬ 2 ಮೂರ್ತಿ ಕಾಣದಿಹ ಕಂಗಳಿನ್ನೇಕೇ 3 ಹರಿ ಕಥೆಯ ಕೇಳದವ ಬಧಿರನೇಸರಿ ಅವನುಹರಿಯೆ ನಿರ್ಮಾಲ್ಯ ಮೂಸದಿಂದ್ರಿಯ ವ್ಯರ್ಥ|ಹರಿಯ ನೈವೇದ್ಯಗಳ ರುಚಿಸದಿಹ ನಾಲಗೆಯುಹರಿಯಂಗ ಸ್ಪರ್ಶಿಸದ ಇಂದ್ರಿಯವು ವ್ಯರ್ಥ 4 ಮೂರ್ತಿ ಧ್ಯಾನಿಸದ ಮನಿಸಿನಿಂದ್ರಿಯ ವ್ಯರ್ಥಇನಿತು ದಶ ಕರಣಗಳ ವ್ಯಾಪಾರವಾ |ಗುಣಿಸಿ ತಪವೆಂದೆನುತ ಹರಿಯರ್ಪಣೆಂಬುವುದೆಘನ ತಪವು ಎಂದೆನುತ ಚಿಂತಿಪ ಸುಗಾತ್ರೀ 5 ಕಮಲ ದರ್ಶನವು ಎನಗೆಂದುಪರಿ ಪರಿಯ ಚಿಂತಿಸುತ ಚರಿಸಿ ಸತ್ತಪವಾ |ಹರಿಯ ದರ್ಶನ ಪಡೆದು ಹರಿಯನುಗ್ರಹದಿಂದಹರಿ ಮಡದಿ ನೀನಾಗಿ ಹರಿಗೆ ಪ್ರಿಯಳಾದೇ 6 ನಿತ್ಯ ಭಿನ್ನವಿಪೇ 7
--------------
ಗುರುಗೋವಿಂದವಿಠಲರು
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
ಏನೊ ರಂಗ ನಿನ್ನ ವನಿತೆಯೊಳಪರಾಧಧ್ಯಾನಿಸಲು ದೊರಕೊಂಬುದೆನೀನಗಲಬೇಡ ತರಳೆಗಭಯವ ಕೊಟ್ಟುಮೌನದಲಿ ನಡೆಯೊ ಮನೆಗೆ ಬೇಗ ಪ.ಸ್ಮರನ ದಾಳಿಗೆ ಕಂದಿ ಕುಂದಿ ಬಳ್ಕಡಿಯಿಡುತವಿರಹಾಗ್ನಿಗನ್ನತೊರೆದು ಸ್ಮರಿಸುವಳುನಿರುತ ನಿನ್ನಯ ಗುಣಾವಳಿಗಳನುಕರಿಸೋತರಳೆಯ ಕೂಡೊ ಕೋಪ ಬೇಡೊ ನೋಡೊ 1ಪರಮಪುರುಷ ನೀ ಅವಳ ಜರಿದ ಕಾರಣಸೋಮಕಿರಣ ವಿಷಸಮ ಝಳದಪರಿತೋರಿ ಬಳಲುವಳು ಸಖಿಭೃಂಗ ಕಳಕಕೆತರಳೆ ಕೂಡೊ ಕೋಪ ಬೇಡೊ ನೋಡೊ 2ನಲ್ಲ ನಿನ್ನ ಸಂಗ ಬಯಕೆಗೆ ಕಣ್ಣ ತೇಲಿಸುವಳಲ್ಲೊ ತೊದಲ್ಲು ನುಡಿವಳಲ್ಲೊಮೆಲ್ಲನೆದೆ ನೋಡಿ ಸುಯಿಗರೆವಳು ಖಗಾಂಕಜನಬಿಲ್ಲಿಗೆಬಲಿಕೊಡಲಿ ಬಾರೊ ತೋರೊ3ಪಯನಿಧಿ ಒಡೆಯನ್ಯಾಕೆ ಬಾರನೆಂದವಳು ತನ್ನಯ ಸುದತಿಯರ ಬೈವಳುನಯನಧsರವಿರಸಿ ಕಂಬನಿದುಂಬುವಳು ಗಡಪ್ರಿಯಳರಸೆಜಾರವಿರಸಹರಿಸೊ4ನಿನ್ನ ನಂಬಿದಳಿಗಿಂತಾಗುತಿರೆ ಸುಮ್ಮನಿಹೆಎನ್ನ ಹೇಯ ಬಾರದೆನಲುಉನ್ನತ ಹಯವನೇರಿ ಬಂದವಳ ನೆರೆದ ಪ್ರಸನ್ನ ವೆಂಕಟನಾಯಕರಸಿಕ5
--------------
ಪ್ರಸನ್ನವೆಂಕಟದಾಸರು
ಮಂಗಳ ಅಂಜನ ಗಿರಿಪತಿಗೆಶುಭಮಂಗಳವೆನ್ನಿ ಸಿರಿಪತಿಗೆ ಪ.ಮಂಗಳ ಬಾಯೊಳು ಮಾತ ಕಚ್ಚಿದಗೆಮಂಗಳ ಅವಯವ ಮುಚ್ಚಿದಗೆಮಂಗಳ ಕೋರೇಲಿ ಪ್ರಿಯಳ ಹಚ್ಚಿದಗೆಮಂಗಳ ನಖದ್ಯಸು ಬಿಚ್ಚಿದಗೆ 1ಮಂಗಳಡಿಯೊತ್ತಿ ಬಿಂಕವ ಸೆಳೆದಗೆಮಂಗಳ ಭೂಗುರು ಕಳೆದಗೆಮಂಗಳೆಗೋಸುಗ ಖಳರನಳಿದಗೆಮಂಗಳಾಂಗಿಯರಂಬರ ಸೆಳೆದಗೆ 2ಮಂಗಳಾಂಗಕೆ ಉಡಿಗೆಯನೊಲ್ಲದಗೆಮಂಗಳ ಶೀಲವ ಸೊಲ್ಲಿದಗೆಮಂಗಳ ಪ್ರಸನ್ವೆಂಕಟೇಶ ಬಲ್ಲಿದಗೆಮಂಗಳಮಯ ಕೈವಲ್ಯದಗೆ 3
--------------
ಪ್ರಸನ್ನವೆಂಕಟದಾಸರು
ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4
--------------
ತುಳಸೀರಾಮದಾಸರು
ಲಕ್ಷ್ಮೀದೇವಿ151ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆಅಂಬುಜಾಯತಾಂಬಕನ ಇಂಬಲಿಹ ಬೊಂಬೆ ಪ.ಕಾವನಯ್ಯನ ಭಟರ ಕಾವೆ ವರವೀವೆದೇವಾದಿ ದೇವರ್ಕಳಿಗೆ ಕುಲದ ದೇವೆ ವಿ?ಭಾವಕರ ಜೀವೆ ಚಿದ್ಭವನೈದಿಸುವೆಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ 1ಮಾಯಾಗುಣಮಯ ಅಂಬಾ ತರುವ ಹೊಂದಿರುವೆತಾಯಂದಿರಖಿಳಾರ್ಥ ತಾಯಿ ನೀನೀವೆಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ ಎನ್ನಯ ಪ್ರಿಯಳೆ ಪೀಯೂಷನುಣಿಸುವೆ 2ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮಸುಮ್ಮನಸರ ಮನೋರಮ್ಮೆ ಶ್ರೀರಮ್ಮೆನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ 3
--------------
ಪ್ರಸನ್ನವೆಂಕಟದಾಸರು
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು
ವೃಂದಾವನವೇ ಮಂದಿರವಾಗಿಹಇಂದಿರೆಶ್ರೀ ತುಳಸಿ ||ನಂದನಂದನ ಮುಕುಂದಗೆ ಪ್ರಿಯಳಾದ |ಚೆಂದದ ಶ್ರೀ ತುಳಸಿ ಪತುಳಸಿಯ ವನದಲಿ ಹರಿಯಿಹನೆಂಬುದ |ಶ್ರುತಿಸಾರುತಲಿದೆಕೇಳಿ|ತುಳಸೀದರ್ಶನದಿಂದ ದುರಿತಗಳೆಲ್ಲವುದೂರವಾಗುವುವುಕೇಳಿ||ತುಳಸೀ ಸ್ಪರ್ಶವ ಮಾಡೆ ದೇಹ ಪಾವನವೆಂದುತಿಳಿದಿಲ್ಲವೇನು ಪೇಳಿ |ತುಳಸೀಸ್ಮರಣೆ ಮಾಡಿ ಸಕಲೇಷ್ಟಗಳ ಪಡೆದುಸುಖದಿಂದ ನೀವು ಬಾಳಿ 1ಮೂಲಮೃತ್ತಿಕೆಯನು ಮುಖದಲಿ ಧರಿಸಲುಮೂಲೋಕ ವಶವಹುದು |ಮಾಲೆ ಕೊರಳಲಿಟ್ಟ ಮನುಜಗೆ ಮುಕ್ತಿಯಮಾರ್ಗವು ತೋರುವುದು ||ಕಾಲಕಾಲಗಳಲಿ ಮಾಡುವ ದುಷ್ಕರ್ಮಕಳೆದು ಬೀಸಾಡುವುದು |ಕಾಲನ ದೂತರ ಕಳಚಿ ಕೈವಲ್ಯದಲೀಲೆಯ ತೋರುವುದು 2ಧರೆಯೊಳು ಸುಜನರ ಮರೆಯದೆ ಸಲಹುವವರಲಕ್ಷ್ಮಿ ಶ್ರೀ ತುಳಸಿ |ಪರಮಭಕ್ತರ ಪಾಪಗಳನೆಲ್ಲ ತರಿದು ಪಾ-ವನಮಾಡುವಳು ತುಳಸಿ ||ಸಿರಿಆಯು ಪುತ್ರಾದಿ ಸಂಪದಗಳನಿತ್ತುಹರುಷವೀವಳು ತುಳಸಿ |ಪುರಂದರವಿಠಲನಚರಣಕಮಲಗಳಸ್ಮರಣೆಯೀವಳು ತುಳಸಿ 3
--------------
ಪುರಂದರದಾಸರು
ಶ್ರೀತುಳಸಿ162ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರಭಾಗ್ಯವೆಂತೊ ಪ .ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ 1ಈ ಮನುಜ ದೇಹದಲಿದಾವಪ್ರಾಣಿಯು ಪಿತೃಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣತಾಮರಸಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವಸೋಂಕಿಬಂದಾ ಮರುತದಿಂದ ದೇಶ ಗ್ರಾಮಗಳು ಪಾವನವುಧೀಮಂತ ಮಾನ್ಯಳಾದ 2ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃಗಳಿಗನ್ನವಿತ್ತರಕ್ಷಯಫಲವು ಊಧ್ರ್ವಪುಂಡ್ರತಳದ ಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದಫಲ ಸಿದ್ಧವುನಿಲಯದಲಿ ಪತ್ರಮೃತ್ತಿಕೆಕಾಷ್ಠವಿರಲಲ್ಲಿಕಲಿಮುಟ್ಟಲಂಜಿ ತೊಲಗುವನು ಮಣಿಸರಗಳನುಗಳದೊಳಾಂತರಾಕಲುಷಸಂಹರವು ಸಹ ಸಲೆವಿಷ್ಣುಪದವಿಯನೀವ 3ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವುಪ್ರತಿದಿನದಿ ನಾಭಿಕಕರ್ಣದಲಿ ಶಿರದಲ್ಲಿ ಶ್ರೀಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು ಪತಿತಪಾವನಿಎನಿಸುವಾ 4ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯುನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನುಮಾಡಲುಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾಸಿರಕಾಲತಿರುಗಿ ಬಂದರೆ ಸತತ ಮಾಂಗಲ್ಯಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿವರದಂತೆ ಪದವ 5ಒಂದೊಂದುದಳಕೋಟಿ ಸ್ವರ್ಣಭಾರಕೆ ಮಿಗಿಲುಎಂದು ವಿಶ್ವಾಸದಲಿ ತಂದು ಸಾಸಿರನಾಮದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದಂದುಗವು ಮಾನಿಸರ್ಗೆಸುಂದರ ತುಲಸಿ ಮೂಲವನ್ನು ತೊಡಕಿರ್ದಕಳೆಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾನಂದವಿತ್ತರಾ ನೂರೊಂದು ಕುಲ ನರಕವನು ಹೊಂದಲೀಸರುಪುಣ್ಯದಾ 6ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳುಬಾವನ್ನಗಂಧಿಯಳ ಮಧ್ಯದಲಿ ಸುರನಿಕರಪಾವನಿಯಳಾ ಹರಿಯ ಕೊನೆಯಲಿಶ್ರುತಿಸಮೂಹಲಾವಣ್ಯ ಗುಣರಾಸಿಯುಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿತ್ತಾವ ಕಾಲಕ್ಕೆಹೊರೆವಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ7
--------------
ಪ್ರಸನ್ನವೆಂಕಟದಾಸರು