ಒಟ್ಟು 57 ಕಡೆಗಳಲ್ಲಿ , 31 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರ ನೋಡದಿರೆಲೊ ರಂಗಯ್ಯಾ ಪ. ಭವ ಮಡುವಿನೊಳಗಿರುವೆನೋ ಪಿಡಿಯೆನ್ನ ಕೈಯ ತಡಮಾಡ ಬ್ಯಾಡಯ್ಯ ಅ.ಪ. ಹಿಂದೇಸು ಜನ್ಮಂಗಳು ಬಂದು ಪೋದಾವಯ್ಯ ಮುಂದಿನಾಗತಿಯು ತೋರದಯ್ಯಾ ತಂದೆ ತಾಯಿ ಸರ್ವ ಬಂಧು ಬಾಂದವಾ ಕಂದರ್ಪ ಪಿತನೆ1 ಆರು ಕಾಯುವರಿಲ್ಲಾ ಮುರಾರಿ ನಿನಗೆ ಸಾರಿದೆನಲ್ಲಾ ಸೇರಿಸೋ ಸಾಧು ಜನರ ಸಹವಾಸಾ ಹರಿ ನಿನ್ನಲ್ಲಿ ಮನಸು ನಿಲ್ಲಿಸು ಶ್ರೀಶಾ ಶ್ರೀನಿವಾಸಾ 2 ಯೆಷ್ಟು ಹೇಳಲಿ ಯನ್ನ ಕಷ್ಟ ಕೇಳುವರಿಲ್ಲ ಅರಿಷ್ಟ ಸಂಸಾರದೊಳೂ ಕೆಟ್ಟು ಪೋಗುವೆನು ದೃಷ್ಟಿಯಿಂದಲಿ ನೋಡೆನ್ನ ಕಾಳಿಮರ್ಧನಕೃಷ್ಣವಾ 3
--------------
ಕಳಸದ ಸುಂದರಮ್ಮ
ನಲಿನಲಿದರು ದ್ವಾರಕಾಪುರದಿ ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ. ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ. ಅಂಬರದಲಿ ಭೇರಿ ವಾದ್ಯಗಳೆಸಗೆ ತುಂಬುರು ನಾರದರು ಗಾನವ ಪಾಡೆ ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1 ವಿಪ್ರರು ವೇದ ಮಂತ್ರವ ಪಠಿಸೆ ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2 ದೇವಕಿ ವಸುದೇವನಿಗ್ಹರುಷವನಿತ್ತು ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ ಕಾವ ಸಕಲ ಜೀವರ ಹೃದಯನಿವಾಸ ದೇವ ಯಶೋದೆ ನಂದ ಕಂದನ ನೋಡಿ 3
--------------
ಸರಸ್ವತಿ ಬಾಯಿ
ನಿತ್ಯ ಸು- ಮಂಗಳೆಗತಿಶಯದಿ ಪ ಮಂಗಳಾರತಿ ಎತ್ತಿ ತುಂಗಮಹಿಮ ಶ್ರೀ ರಂಗನ ರಾಣಿಗೆ ಅಂಗನೆ ತುಳಸಿಗೆ ಅ.ಪ. ಕಡಲೊಳು ಸುಧೆ ಹಿಡಿದು | ಬಂದನು ಕಡು ಕರುಣಿಯು ಒಲಿದು ಕುಡಿಗಣ್ಣಿನ ಜಲ ಸಡಿಲಲು ಕಲಶದಿ ಒಡನೆ ಜನಿಸಿದಂತ ಮಡದಿ ಶ್ರೀ ತುಲಸಿಗೆ 1 ಸುರರು ಪೂಮಳೆಗರೆಯೆ | ಹರುಷದಿ ಕರವ ಪಿಡಿಯೆ ವರವನು ಪಡೆದಳು ಶರಣರ ಪೊರೆಯಲು ಧರೆಯೊಳು ಬಂದಿಹ ಕರುಣಿ ಶ್ರೀ ತುಳಸಿಗೆ 2 ನಿತ್ಯ | ಸೇವಿಪ ಸಕಲ ಜನಕೆ ಸತ್ಯ ಭಕುತಿ ಮುಕುತಿಯಿತ್ತು ಸುಕೃತರ ಮಾಡುವ ಲಕುಮಿಕಾಂತನ ಪ್ರೇಮಸಕುತೆ ಶ್ರೀ ತುಳಸಿಗೆ 3
--------------
ಲಕ್ಷ್ಮೀನಾರಯಣರಾಯರು
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ ಪರಮ ಪರತರ ತವಬಿರುದುಗಳರಿದು ಪ ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1 ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2 ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ ಬಿಡದಿರ್ದು ಕಾಯ್ವಂಥ ಕಡುದಯದ ದೇವ ದೃಢದಿಂದ, ನಂಬಿದೆ ಒಡಲಾಸೆ ಪೂರೈಸು ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3
--------------
ರಾಮದಾಸರು
ನೆಲೆಗೊಂಡದೇನು ಮನಮೇಗಚಲಿಸುವೆ ನೀನು ಹಲವು ವಿಷಯದೊಳು ಪಸಿಲುಕಿದ ಬಗೆುಂದ ಹೊಲಬುದಪ್ಪಿತು[ಸಲೆ]ನಿನ್ನ ನಿಜವ ನೀ ಕಾಣು ಅ.ಪಗುರುವಿನಂಘ್ರಿಗೆ ನೀನು ನಮಿಸಿ ನಿನ್ನಮರವೆಯ ಭಾವವ ಕೆಡಿಸಿಕರಣವ ನಿಲುಕಡೆಗೊಳಿಸಿ ಬಹುಕರುಣವ ನಿನ್ನೊಳಗಿರಿಸಿಪರಮಾತ್ಮನಾಗ್ಯನ್ಯ ವಿಷಯಮೊಂದಲಾಶೆಪರಿದು ಭ್ರಾಂತಿಯಲೊಂದಿದ ಸುಖವ ಸೂಸಿ 1ಮನೆಯೊಂದು ನನಗಿಹುದೆಂದು ಅಲ್ಲಿಜನರೆಡೆಗೊಳೆ ದುಃಖ ಬಂದುಅನುಭವಿಪುದು ಯುಕ್ತವೆಂದು ಅದ[ಕನು]ಕೂಲವಾಗಬೇಕೆಂದುಅನುದಿನವನು ಸಂಧಾನದಿ ನಿಂದು ಗುರು ಕೊಟ್ಟಅನುಭವ ಬಯಲಾಗಿ ಭ್ರಮೆಗೆ ನೀ ಸಂದು 2ನೀನೊದು ಕೊಡಹೇಳಿ ಕೇಳಿ ಅಲ್ಲಿಹೀನತೆಯನು ಬಹುತಾಳಿದೀನರು ನೀವೆಂದು ಪೇಳಿ ಅನುಮಾನದ ಬಲು ಬಿರುಗಾಳಿಏನೆಂಬೆ ಬೀಸಲು [ತಾ] ನದರೊಳಗಾಳಿಜ್ಞಾನಹೋುತು ಭೇದ ಬುದ್ಧಿಯ ತಾಳಿ 3ಮಾಯಕವಾಗಿರೆ ಜಗವೂ ಬಹೂಪಾಯಗಳಿಂದ್ರಜಾಲಕವೂಆಯವರಿಯದದರಿರವೂ ತನ್ನತಾಯ ಕಾಣದ ಶಿಶುತನವೂಈಯಶೇಷವು ಸ್ವಪ್ನದನುಭವವಳಿವವುಬಾಯಮಾತಿನಜ್ಞಾನ ಕಪಟ ಸಂಭ್ರಮವೂ 4ಪರಮಾತ್ಮನೊಬ್ಬನಾಗಿಹನೂ ತಾನುಪರಿ ಪರಿ ರೂಪ ತೋರುವನುಅರಿತೆ ಭೇದವನಿದ ನೀನು ಬಹುಜರೆಯುತ ಗುಣದೋಷಗಳನುಗುರುವಾಸುದೇವರೂಪಿಲಿ ನಿನ್ನ ಕರವನುತಿರುಪತಿ ವೆಂಕಟ ಪಿಡಿಯೆ ಭ್ರಾಂತೇನು 5
--------------
ತಿಮ್ಮಪ್ಪದಾಸರು
ನೋಡಿದೆನು ಕೃಷ್ಣನ್ನ | ದಣಿಯ ನೋಡಿದೆನು ಕೃಷ್ಣನ್ನ | ಮನದಣಿಯ ಪ. ಪಾಡಿದೆನು ವದನದಲಿ ಗುಣಗಳ ಮಾಡುತಲಿ ಸಾಷ್ಟಾಂಗ ಕಡು ಕೃಪೆ ಬೇಡಿದೆನು ಹರಿಯ ಅ.ಪ. ಅರುಣ ಉದಯದ ಮುನ್ನ ಯತಿಗಳೂ ಶರಣವತ್ಸಲನನ್ನು ಪೂಜಿಸಿ ಕರದಿ ಕಡಗೋಲನ್ನು ಪಿಡಿದಿಹ ಬಾಲರೂಪನಿಗೆ ತರತರದ ನೇವೇದ್ಯವರ್ಪಿಸಿ ತುರುಕರುಗಳಾರತಿ ಗೈಯ್ಯುತ ಪರಮಪುರುಷಗೆ ವಂದಿಸಲು ಈ ಚರಿತ ಮತ್ಸ್ಯನ್ನಾ 1 ಮಧ್ವರಾಯರ ಹೃದಯವಾಸಗೆ ಮುದ್ದು ಯತಿ ಪಂಚಾಮೃತಂಗಳ ಶುದ್ಧ ಗಂಗೋದಕದ ಸ್ನಾನವಗೈಸಿ ಸಡಗರದಿ ಮಧ್ಯೆ ಮಧ್ಯೆ ನೈವೇದ್ಯವರ್ಪಿಸಿ ಮುದ್ದು ತರಳರಿಗ್ಹೆಜ್ಜೆ ಪಂಕ್ತಿಯು ಅಗಣಿತ ಕೂರ್ಮರೂಪನ್ನಾ2 ಉದಯಕಾಲದಿ ಸರ್ವ ಜನಗಳು ಮುದದಿ ಮಧ್ವ ಸರೋವರದೊಳು ವಿಧಿಯಪೂರ್ವಕ ಸ್ನಾನ ಜಪ ತಪವಗೈದು ಮಾಧವನಾ ಉದಯದಾಲಂಕಾರ ದರ್ಶನ ಪದುಮನಾಭಗೆ ನಮನಗೈವರು ವಿಧಿಕುಲಕೆ ಉದ್ಧಾರಕರ್ತನು ವರಹನೆಂದಿವನಾ 3 ಪಾಲಿಸಲು ಬಾಲನ ಶ್ರೀ ಗೋ ಪಾಲಕೃಷ್ಣನು ಕಂಭದಲಿ ಲೀಲೆಯಿಂದಲಿ ಉದಿಸಿ ಖೂಳನ ಸೀಳೀ ತೊಡೆಯಲ್ಲಿ ಬಾಲೆಯನು ಕುಳ್ಳಿರಿಸಿಕೊಂಡಘ ಜಾಲಗಳ ಸುಡುವಂಥ ದೇವನು ಬಾಲರೂಪವ ಧರಿಸಿ ನಿಂತಿಹ ಲೋಲ ನರಹರಿಯ 4 ಅದಿತಿ ದ್ವಾದಶವರ್ಷ ತಪಸಿಗೆ ವಿಧಿ ಜನಕ ತಾ ಕುವರನಾದನು ಅದರ ತೆರದಲಿ ವ್ರತವ ಗೈದ ವೇದವತಿಗಿನ್ನು ಚದುರ ತನಯನ ವರವನಿತ್ತನು ಯದುಕುಲಾಗ್ರಣಿ ಅವರ ಭಕ್ತಿಗೆ ಒದಗಿ ಬಂದ ಮೂರ್ತಿವಾಮನನೆಂಬ ವಟುವರನ5 ದುಷ್ಟ ಕ್ಷತ್ರಿಯರನ್ನೆ ಕೊಲ್ಲುತ ಅಷ್ಟು ಭೂಮಿಯ ದಾನಗೈಯುತ ದಿಟ್ಟ ತಾನೆಲ್ಲಿರಲಿ ಎಂಬುವ ಯೋಚನೆಯ ತಳೆದು ಅಟ್ಟಿ ಅಬ್ಧಿಯ ಪುರವ ನಿರ್ಮಿಸಿ ಪುಟ್ಟ ರೂಪವ ತಾಳಿ ಬರುತಲಿ ಮೆಟ್ಟಿ ನಿಂತಿಹ ರಜತ ಪೀಠದಿ ಶ್ರೇಷ್ಠ ಭಾರ್ಗವನ 6 ಪಿತನ ಆಜ್ಞೆಯ ಪೊತ್ತು ಶಿರದಲಿ ಸತಿ ಅನುಜ ಸಹಿತದಿ ಜತನದಲಿ ವನವಾಸ ಮುಗಿಸುತ ದಶಶಿರನ ಕೊಂದ ಅತಿ ಸಹಾಯವ ಗೈದ ಶರಧಿಗೆ ಪ್ರತಿಯುಪಕಾರವನು ಕಾಣದೆ ಜತನದಲಿ ತಾ ನಿಲ್ಲೆ ನೆಲಸಿದ ಜಾನಕೀಪತಿಯ7 ಗೋಪಿಯರ ಉಪಟಳಕೆ ಸಹಿಸದೆ ಗೋಪನಂದನರೊಡನೆ ಕಾದುತ ತಾಪಪಡಿಸುವ ಕಂಸರನುಚರರಿಂದ ಕಳದೋಡಿ ಗೋಪಿ ಮೊಲೆ ಕೊಡುತರ್ದದಲಿ ಬಿಡೆ ಈ ಪರಿಯ ತಾಪಗಳ ಸಹಿಸದೆ ತಾಪಸರ ಪೂಜೆಗಳ ಬಯಸುತ ಬಂದ ಗೋಪತಿಯ 8 ವೇದ ಬಾಹಿರರಾದ ದುರುಳರು ವೇದ ಮಾರ್ಗವ ಪಿಡಿಯೆ ಸುರತತಿ ನೀ ದಯದಿ ಸಲಹೆಂದು ಪ್ರಾರ್ಥಿಸೆ ಜಿನ ವಿಮೋಹಕನೂ ವೇದರ್ಥವ ಗುಪ್ತದಲಿ ತಾ ಬೋಧಿಸುತ ಮೋಹಕವ ಕಲ್ಪಸಿ ಬುದ್ಧ ಪ್ರಮೋದನೆಂಬುವನಾ 9 ಚತುರ ಪಾದವು ಕಳದು ಧರ್ಮವು ಅತಿಮಲಿನವಾಗುತಲಿ ಕಲಿಜನ ಚತುರ ಜಾತಿಯ ಕಲೆತು ಕಂಗೆಡೆ ಭಕ್ತವರ್ಗಗಳು ಗತಿಯು ನೀನೆ ಪೊರೆಯೊ ಎಂದೆನೆ ಸತಿಯ ಹೆಗಲೇರುತಲಿ ಖಡ್ಗದಿ ಹತವಗೈಯ್ಯುತ ಖಳರ ಸುಜನರ ಪೊರೆದ ಕಲ್ಕಿಯನು10 ನೋಡಿದೆನು ವರ ಮಚ್ಛ ಕೂರ್ಮನ ನೋಡಿದೆನು ಧರಣೀಶ ನೃಹರಿಯ ನೋಡಿದೆನು ವಾಮನನ ಭಾರ್ಗವ ರಾಮಚಂದ್ರನನೂ ನೋಡಿದೆನು ಕಡಗೋಲ ಕೃಷ್ಣನ ಬುದ್ಧ ಕಲ್ಕಿಯ ನೋಡಿದೆನು ಗುರು ವರದ ಗೋಪಾಲಕೃಷ್ಣವಿಠ್ಠಲನ 11
--------------
ಅಂಬಾಬಾಯಿ
ಪಾರ್ಥಸಾರಥಿ ಪಾಲಿಸೆನ್ನ ಶ್ರೀಹರಿಯೆ ಪ ಅಂದು ಗಜನು ತಾನು ಬಂದು ತಾ ಬಂಧು ಬಳಗವ ಕೂಡಿ ಸೊಂಡಿ- ಲಿಂದ ನೀರನು ಕಲಕಲಾಕ್ಷಣ ಒಂದು ಮಕರ್ಹಲ್ಲಿಂದ ಪಿಡಿಯೆ ಮು- ಕುಂದ ನೀನೆ ಗತಿಯೆಂದರಾಕ್ಷಣ ಬಂದು ಒದಗಿದ್ಯೊ ಸಿಂಧುಶಯನನೆ 1 ದುರುಳಾಸುರನು ತನ್ನ ಕರುಳ ತನ ಕರುಳನಿಟ್ಟುರಿಯಲ್ಲಿ ಗರಳ ಹಾಕಿ ಬಾಧಿಸಲು ಖಳನು ಕಾರಣ ಕಂಬದಲಿ ಬಂದೆಳೆದು ಅವನುರ ಕರುಳ ಮಾಲೆಯ ಕರಾಳವದನವ ತೆರೆದು ತನ್ನಯ ಕೊರಳಲ್ಲಿರಿಸಿದ ಕೋಮಲಾಂಗನೆ 2 ಪಿತನ ತೊಡೆಯಲಿದ್ದ ಸುತನ ಕಂಡು ಸುತನ ಸುರುಚಿಯು ತಾನಾಗ ಹಿತದಂತ್ವಾಕ್ಯಗಳನು ನುಡಿಯಲು ಅತಿಬ್ಯಾಗದಲಜಸುತನ ನುಡಿ ಕೇ ಳುತಲಿ ತಪವನು ಚರಿಸಲಾಕ್ಷಣ ಪತಿತಪಾವನ ಪರಮ ಕರುಣದಿ ಸುತ ಧ್ರುವಗೆ ಸುಖವಿಟ್ಟ ಶ್ರೀಹರಿ3 ಬಾಡಿ ಬಳುಕುವ ದ್ವಿಜನ ನೋಡಿ ತಾ ನೋಡಿ ತಂದವಲಕ್ಕಿ ಬೇಡಿ ಆಡಿ ಭಕ್ತನ ಕೂಡ ನಯನುಡಿ ಮಾಡಿ ಕರುಣವ ತನ್ನ ದಯ ಸೂ- ರ್ಯಾಡಿ ಸಖಗೀಡಿಲ್ಲದರ್ಥವ ನೀಡಿದ್ಯೊ ಬಹು ರೂಢಿಗಧಿಕನೆ 4 ಕಡುಚÉಲ್ವೆಕರೆಯಲುಟ್ಟುಡುಗೆ ಉಟ್ಟ ಉಡುಗೆ ಸೆಳೆಯಲು ಕೃಪ್ಣೆ(ಯಿ)ದ್ದೆಡೆಗೆ ನಡೆದಸುರ ಪಿಡಿದೆಳೆಯೆ ಸೀರೆಯ ಕಡೆಯ ಕಾಣದೆ ಖಳನು ಧರೆಯೊಳು ಯುಡುಗೆಗಕ್ಷಯ ನುಡಿದ ಕೃಷ್ಣನೆ 5 ಸಿಂಧುಶಯನಾರವಿಂದನಯನಾರ- ವಿಂದ ನಯನ ಅಸುರರಿಗತಿ ಭಯಂಕರನಾ- ಗೆಂದಿಗಾದರು ನಿನ್ನ ನಾಮಸುಧೆ ಯಿಂದ ಸುಖ ಸುರಿವಂತೆ ಮಾಡು ಮು- ಕುಂದ ಭೀಮೇಶಕೃಷ್ಣ ನಿನ್ನ ಪ- ದಾಂಬುಜವ ತೋರಾನಂದದಿಂದಲಿ 6
--------------
ಹರಪನಹಳ್ಳಿಭೀಮವ್ವ
ಪಿಡಿಯೆನ್ನ ಕೈಯ ಬಿಡಬೇಡೆನ್ನಯ್ಯ ಮೃಡನ ಭಕ್ತರ ಒಡೆಯ ಪಂಢರಿರಾಯ ಪ ಘೋರ ಬಡುವೆ ಸಂಸಾರಶರಧಿಯೊಳು ಮೀರಿತು ಈ ಬಾಧೆ ಸೈರಿಸೆ ಮಹರಾಯ 1 ಹಲವು ವಿಧದಿ ಕಷ್ಟಕ್ಕೊಳಗಾಗಿ ಅತಿಶಯ ಬಳಲುವ ಬಾಲನ ಉಳಿಸಿಕೊ ಮಹರಾಯ 2 ಬರುವ ಸಂಕಟದೆನ್ನ ಪಾರುಮಾಡುವಂಥ ಭಾರನಿನ್ನದು ಸರ್ವಧೀರ ಶ್ರೀರಾಮಯ್ಯ 3
--------------
ರಾಮದಾಸರು
ಪುರಂಜನೋಪಾಖ್ಯಾನ ಲಾವಣಿ ಗೆರಗಿ ಮಹೇಶ್ವರನಾ ಶಾರದೆಯ ಸರಸಿಜಸಂಭವನಾ | ಇಂದಿರೆ ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ ಕರುಣಿಪುದು ಜ್ಞಾನ | ಚರಣಗಳಿಗೆ ಬಿನ್ನೈಸುವೆನಾ 1 ಯತಿಗಣಪ್ರಾಸೊಂದಾದರು ತಿಳಿಯದು ಮತಿಹೀನನು ನಾನು | ನಾನಾಚಮ- ತ್ಕøತಿಗಳರಿಯದವನು | ಆದರೀ ಕೃತಿಯಲಿ ತಪ್ಪೇನು | ಮತಿವಂತರಾಲಿಸುವುದು ನೀವಿದನು 2 ಒಂದರೊಳಗೆ ಎರಡಾಗಿ ಎರಡರೊಳು ಹೊಂದಿ ಮೂರ್ನಾಲ್ಕೈದಾಗಿ ಆರೇಳೆಂಟೊಂಬತ್ತುಗಳಾಗಿ | ಸಕಲದೊಳು ಹೊಂದಿರುವುದುತಾಗಿ ಕುಂದಿಲ್ಲದೆ ಇರುತಿರುವ ಮಹಾತ್ಮನ ರಂದವ ಚನ್ನಾಗಿ | ತಿಳಿದು ಸುಖ ತಂದವನೇಯೋಗಿ 3 ಮೊದಲು ಮಹತ್ ಸೃಷ್ಟಿಯಲಿ ಎಲ್ಲತ- ತ್ವದಲಿ ತೋರುತಿಹುದು ಬೇರೆಬೇರಾಗಿ ಕಾಣಿಸುವುದು ಅದುಭುತವಾಗಿಹ ಅನಾದಿ ಕರ್ಮತ್ರಿ- ವಿಧದಿ ಭಾದಿಸುವುದು | ಅದರೊಳು ಬಿ- ಡದೆ ತಾ ಮುತ್ತುವುದು ಎಂದಿಗು ನಿಜವತಿ ರಹಸ್ಯವಿದು 4 ಮೊಟ್ಟೆವೊಂದು ದಶಸಾವಿರವರುಷಗ ಳಿಟ್ಟು ಜಲದಿತಾನು | ಅದಕೆ ಕೈ- ಗೊಟ್ಟು ಎಬ್ಬಿಸಿದನು | ನಾನಾ ವಿಧ ವೆಷ್ಟಿ ಸಮಷ್ಟಿಗಳೆರಡೆಂದದರೊಳು ಗುಟ್ಟಂಗಡಿಸಿದನು | ಗುರಿಯಮಾ ಡಿಟ್ಟು ಚೇತನಗಳನು | ಅನೇಕವು ಪಟ್ಟಣ ರಚಿಸಿದನು 5 ಈ ಪಟ್ಟಣಕಾರ್ ಮಂದಿ ಇರುವರತಿ ಕಾಪಾಡುವರದರೊಳು ವ್ಯಾಪಾರಗಳನು | ಬಹುವಿಧಮಾಡುವ- ರಾಪುರ ಜನರುಗಳು | ಇವರುನಡೆ ಕೋಪಿಸೆ ಹಗಲಿರುಳು 6 ಎರಡು ಮಾರ್ಗದೊಳಿರುತಿಹರೆಲ್ಲರು ಹುರುಡಿಲ್ಲವುನೋಡೆ | ಗಜಿಬಿಜಿಯು ತರತರದಲಿಮಾಡೆ | ನಮಗಿದೆ ಸ್ಥಿರವೆನ್ನುತ ಕೂಡೆ | ಪರಿಪರಿ ಬಗೆಯಲಿ ಭೇದ ಪುಟ್ಟುವುದು ಕರೆಕರೆಯಂದುಡೆ | ವಳಗೆಕೆಲ ಬರುಹರುಷದಿ ನೋಡೆ | ಯುವಶೃಂ- ಗರುವು ಇದಕೆ ಈಡೆ 7 ಇದೆತನ್ನದೆನುತೋರ್ವಳು ಮಾನಿನಿ ಚದುರತನದಿ ಬಂದು | ಊರ ಮುಂದಿರುವ ವನದಿ ನಿಂದು | ಅವಳಿಗಿರು ವುದು ಜನ ಹನ್ನೊಂದು ಚದುರೆಯೈದುತಲೆ ಸರ್ಪವಾಡಿಸುತ ಜಾಣೆಯಿರುವಳಂದು | ತಾನೊಬ್ಬನ ಇಂದು | ಸುಖದೊಳಾ- ಳ್ಬೇಕುರಾಜ್ಯವೆಂದು 8 ಅರಸನೊಬ್ಬ ವಿಜ್ಞಾತನೆಂಬ ಭೂ- ಸುರನಸಹಿತನಾನಾ | ದೇಶಗಳ ತಿರುಗುತ ಉದ್ಯಾನ | ವನದಿಕಂ- ಡನು ಆತರುಣಿಯನ ಪರಮ ಮಿತ್ರನಹ ಬ್ರಾಹ್ಮಣನ ಮರೆತು ಹರುಷದಿ ಪೊಕ್ಕುವನ | ಸ್ಮರಶರಕೆ ತರಹರಿಸುತಲಿರೆ ಮನ | ಕೇಳಿದನು ನಗುತಲಿ ನಾರಿಯನ 9 ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ- ರೇನು ಪೇಳೆ ಹೆಣ್ಣೆ | ಮಾತನಾ- ಡೆಲೆ ತಾವರೆಗಣ್ಣೆ | ನಿನ್ನ ಮೈ- ಸುಲಿದ ಬಾಳೆಯ ಹಣ್ಣೆ ಯಾರದು ಈ ಜನ ಉರಗವೇನು ವನ- ವಾರದು ಶಶಿವದನೆ | ಈ ಪುರವ- ನಾಳುವನಾವವನೆ | ಒರ್ವಳಿ- ಲ್ಲಿರುವುದಕೇನ್ಹದನೆ 10 ಎನಲು ನಸುನಗುತವನಿತೆನುಡಿದಳೀ ಜನಗಳು ನನ್ನವರು | ಇಲ್ಲಿಕಾ- ಣುವ ಪುರ ನನ್ನೂರು | ಸರ್ಪನ- ನ್ನದು ಇದಕಿನ್ನಾರು | ಅರಸರಿಲ್ಲ ನಾನೊಬ್ಬಳಿರುವೆನೀ ವನದೊಳು ನೀನ್ಯಾರು | ನಿನ್ನಕಥೆ ವಿವರಿಸೆನಗೆ ತೋರು | ಯನ್ನ ಬಳಿ- ಗಿಷ್ಟವಿರಲುಸಾರು 11 ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ- ನೆನ್ನ ಪುಷ್ಪಶರನು | ನೀನುಪೇ- ಪರಿ ವಲ್ಲಭನನು ಮಾಡಿಕೊ ಎನ್ನನು ಬಹು ಬಲ್ಲಿಯಳೆ ನೀನು | ನಿನ್ನಸರಿ ಚಲ್ವೆಯರಾರಿನ್ನು | ಇಬ್ಬ- ರಾಳ್ವೆಯೀವೂರನ್ನು 12 ಎನಲು ಹರುಷಗೊಂಡಾಕೆ ಸಮ್ಮತಿಸಿ ಜನವೆರಗಿತಂದು | ನುಡಿದಳಾಮೊಗದ- ಲಿನಗೆತಂದು | ನಿನ್ನಮೇಲ್ ಮನಸಾಯಿತುಯಿಂದು ನಿನ್ನನು ಮಾನವೇತಕಿಂದು | ಆಳು ಜನಸಹಿತ ಪುರವ ಮುಂದು ನೀನು ನಾನಿರುವೆವಾಗಿವಂದು 13 ಸರ್ವವನ್ನು ಭವದಿ ಆದರಿಸುತತತ್ಪುರ ಮಧ್ಯ | ದೊ ಳುಪ್ಪರಿಗೆಯೇರಿ ತ್ವರದಿ | ಸರ ಸಗಳನಾಡಿ | ಬಹುತರದಿ ಮುಳುಗಿ ಸಂಸಾರವೆಂಬಶರಧಿ 14 ಅನ್ನಪಾನಾಭರಣ ಕುಸುಮ ವಿನ್ನು ಗಂಧಧೂಪ | ತಾಂಬೂಲಗಳ ಮನ್ನಣೆಯಲಿ ಭೂಪ | ಪೊಂದಿದ ಸುಖ ವನು ನಾನಾರೂಪ | ನನ್ನದು ಎನ್ನುತಲಿ ಪ್ರತಾಪ | ಶಾಲಿತಾ- ರಾಜ್ಯವಾಳಿದನಾಗುತಭೂಪ 15 ದ್ವಾರಗಳೊಂಭತ್ತಾಪುರಕಿರುವುದು ಮೂರು ಪೂರ್ವದಲ್ಲಿ | ಮೇ- ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ ಕಟ್ಟಿಹುದು ಕನ್ನಡಿಯಲಿ ತೋರುವುದುತ್ತರದಕ್ಷಿಣದೊಳೆರಡು ದ್ವಾರ ಪಶ್ಚಿಮದಲಿ ಕಾರಣವದರಲ್ಲಿ 16 ಮತ್ತದರೊಳಗಾರ್ಸುತ್ತು ಕೋಟೆ ಒಂ- ಬತ್ತು ಬಾಗಿಲ ಪುರದಿ | ಅನೇಕವು ಗೊತ್ತನಾವವಿಧವಿ | ಉತ್ತಮವಹಪುರದಿ | ಮುಖ್ಯವಾ- ಗಿರುವದೆರಡು ಬೀದಿ | ದೊರೆಯಮನೆ- ಯಿರುವುದು ವಿಸ್ತರದಿ17 ಇಂತರಮನೆಯಲಿ ದೊರೆ ಕಲಿಯಾಗುತ ಕಾಂತೆಯೊಡನೆ ಸೇರಿ | ಸದಾಸು- ಸ್ವಾಂತನಾಗಿಮೀರಿ | ಸೌಖ್ಯಹೊಂ- ದುತಲಾವೈಯ್ಯಾರಿ ನಿಂತರೆ ನಿಲುವನು ಕುಳಿತರೆ ಕೂಡುವ ಮಲಗಿದರೆ ನಾರಿ | ತಾನು ಮಲಗುವಯೇಕದಿ ಸೇರಿ | ಉಂಡ- ರುಣ್ಣುವನು ಅವಳನುಸಾರಿ 18 ಮನದಿಯೋಚಿಸದನೂ | ಈಗಲೆ ಮೃಗಯಾತ್ರೆಗೆತಾನೂ | ಸೊಗಸಿಂದ ಸೈನ್ಯವ ಕೂಡುತ ಪುಂ- ಚಪ್ರಸ್ಥವನವನು | ಪೊಕ್ಕು ಅ- ಲ್ಲಿರುವಮೃಗಗಳನ್ನು | ಹೊಡೆದು ಸಂ- ತೋಷದಿ ಸುಖಿಸುವೆನು 19 ಮೂರೆರಡು ಕುದುರೆಯೈದು ಮೇಲ್ ಮೂರು ಪತಾಕಿಗಳು | ಅ- ಚ್ಚೆರಡು ಎರಡು ಕೂಬರಗಳು | ಚಕ್ರ ವೆರಡುವರೂಥಗಳೇಳು ಆರಥಕೊಪ್ಪುವದೇ- ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ ಸಾರಥಿ ಎರಡು ಗತಿಗಳು | ಬಿಗಿಸಿಹುದು ಕನಕಭೂಷಣಗಳು 20 ಪುರಂಜನ ಭೂ- ಕಾಂತಕರದಿ ಧನುವ | ಪಿಡಿದುಸು- ಸ್ವಾಮತದಿಂದಲನುವಾ | ಗಿಬಹ ಹನ್ನೊಂ- ದು ತನ್ನ ಜನನ | ಸಂತಸದಲಿ ಕೂ- ಡುತ ಹೊರಡುತ ತಾ ಪೊಕ್ಕನು ಕಾನನವಾ | ಶರಗಳಿಂ- ದ್ಹೊಡದು ಮೃಗನಿವಹವಾ | ಮೇರೆಯಿಲ್ಲ- ದೆ ತಟ್ಟುತ ಭುಜವಾ 21 ಇನಿತು ಬೇಟೆಯಾಡುವ ಕಾಲದಿ ತನ್ನ ಮನದಿ ನೆನೆದು ಸತಿಯಾ | ತಕ್ಷಣವೇ ಬಂದು ಸೇರಿ ಮನೆಯ | ಕಾಣದೆ ಹುಡುಕಿದನು ಯುವತಿಯ ಮಂಚದೊಳಿಹ ಸತಿಯ | ಕಂಡುಲಾ- ಲಿಸುತ ಚಮತ್ಕøತಿಯಾ | ನುಡಿಯಲುಪ- ಚರಿಸಿದನಾಕಾಂತೆಯ 22 ನೂರುವರುಷವೀರೀತಿಯವಳೊಡನೆ ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ- ಸಾರದಿ ಕಾಲವನು | ಯಾರೆ- ಮೀರಿ ಹೋದುದಿನ್ನು | ಮೊಮ್ಮಕ್ಕಳ ಪಡೆದನನೇಕರನು ದೇಶತುಂಬಿಸಿದ ತನ್ನ | ವರನು 23 ಉತ್ತರ ದಕ್ಷಿಣ ಪಾಂಚಾಲಗಳಾ ಳುತ್ತಲಿವನು ತನ್ನ | ಸುತರಬೆರೆ- ಯುತ್ತಸದಾ ಚಿನ್ನ | ಬೆಳ್ಳಿ ನವ- ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ- ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ ಚಿಂತೆಯಿಲ್ಲದೆ ನಾ | ಬಲು ಪುಣ್ಯವಂತನೆ | ನ್ನುತ್ತತಿಳಿದಿರುವನಾ 24 ಚಂಡವೇಗವೆಂಬುವರಾ ತಮ್ಮತಮ್ಮ ಹೆಂಡಿರುಗಳು ತಾವು | ಸೇರಿಮು- ನ್ನೂರರವತ್ತು ಜನವು | ಗಂಧರ್ವರು ಬಂಡೆಬ್ಬಿಸಿ ಪುರವು | ದಂಡು ಮುಂದಾಗೆ ರಿಪುಬಲವು | ಕ್ಷೀಣಗತಿ ಹೊಂದುತಲಿರೆ ಪುರವು 25 ಸ್ತ್ರೀಜಿತನಾಗಿಹಕಾರಣದಲಿಯಾ ರಾಜಪುರಂಜನಗೆ | ಯತ್ನವಿ- ಲ್ಲದೆ ತನ್ನಯಪುರಿಗೆ | ಕೇಡುಬಂ- ದರು ತೋರದು ಕೊನೆಗೆ | ಶೋಕದಿ ಮನದೊಳಗೆ | ಮಿ ಡುಕುತಲಿರಲಾನೃಪತಿಮೇಗೆ | ಮತ್ತು ಶತ್ರುಗಳುನೆರೆಯೆ ಹೀಗೆ 26 ಯವನೇಶ್ವರನೊಬ್ಬನುಭಯಪ್ರಜ್ವಾ ರಾದಿ ಸೈನಿಕರನು | ಕಾಲಕನ್ಯಾಖ್ಯ ಯುವತಿಯನ್ನು | ಕರೆದುಕೊಂ- ಡೀಪುರವ ಸೇರಿದನು | ಬವರದಿ ಗೆದ್ದನು ಭವಿಸಿದನಾ ಕನ್ಯಾಮಣಿಪಟ್ಣವನು | ಭೋಗಿಸಿದ- ಳಾಪ್ರಜ್ವಾರನನು | ಸುಡಲುಪುರಿ ಕಂಡು ಪುರಂಜನನು 27 ಕಾಲಕನ್ಯೆ ತಾ ಲೀಲೆಯಿಂದಲಿ ನೃ- ಪಾಲನ ಹತ್ತಿಗೆಯಾ | ಪಿಡಿಯೆ ಹಾ- ಹಾಯೆನಲಾರಾಯಾ | ಅಬಲತೋ- ರದು ಮುಂದೆ ಉಪಾಯ | ಬಾಲಕರನು ಪತ್ನಿಯ | ನುಕೂಗಿಬಿಡು-
--------------
ಗುರುರಾಮವಿಠಲ
ಪೊರೆಯಬೇಕೋ ಎನ್ನ ಶ್ರೀ ನರ ಹರಿಯೆ ಕೇಳೋ ಮುನ್ನಾ ಪ ನೀ ಪೊರೆಯದಿರಲು ಈ ಪೊಡವಿಯೊಳಗೆ ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ ನೀರ ಪೊಕ್ಕರು ಬಿಡೆನೋ ಬೆನ್ನಲಿ ಭಾರ ಪೊತ್ತರು ಬಿಡೆನೋ ಕೋರೆಯ ಬೆಳೆಸಿ ನೀ ಘೋರ ರೂಪನಾಗಿ ತಿರುಕನೆಂದು ಪೇಳಲು ಬಿಡೆನೋ 1 ಕೊಡಲಿ ಪಿಡಿಯೆ ಬಿಡೆನೋ ನೀ ಘನ ಅಡವಿ ಸೇರಲು ಬಿಡೆನೋ ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ ಉಡುಗಿ ಜರಿದು ತುರುಗೇರಲು ಬಿಡೆನೋ 2 ಪಾಪಿ ಎಂದು ಎನ್ನ ಜರಿಯದೆ ಕಾಪಾಡೆಲೊ ಘನ್ನ ಶ್ರೀ ನರಹರಿಯ ನಾಮಕೆ ಪೋಪದ ಪಾಪಗಳುಂಟೆ ಜಾಲವ ಮಾಡದೆ 3
--------------
ಪ್ರದ್ಯುಮ್ನತೀರ್ಥರು
ಪೋಗುವೆವಮ್ಮ ಪ ಉದಯವಾಗದ ಮುನ್ನ ಬರುವ ಕಣಮ್ಮ ಕದವ ಬಾರಿಸಿ ಒಳಪೊಕ್ಕ ಕಣಮ್ಮ ಮೊದಲೆನ್ನ ಮಗಳ ತಕ್ಕೈಸಿದನಮ್ಮ ಸದರದಲಿ ಮೊಸರನೆಲ್ಲ ಕುಡಿದ ಕಣಮ್ಮ 1 ಉಟ್ಟ ಸೀರೆಯ ಬೆಲೆ ಏನೆಂದಮ್ಮ ಪಟ್ಟೆ ಕುಪ್ಪಸಕೇನು ಪಣವೆಂದನಮ್ಮ ತೊಟ್ಟು ಕೊಂಡೆನ್ನನು ಬಿಡದೆ ಕಾಣಮ್ಮ 2 ನಸುಗಪ್ಪಿನೊಳು ಸಜ್ಜೆಮನೆಯೊಳಗಮ್ಮ ಮೊಸರು ಪಾಲ್ಬೆಣ್ಣೆಯ ಮೆದ್ದ ಕಾಣಮ್ಮ ಸೊಸೆಯು ಪಿಡಿಯೆ ಬಿಗಿದಪ್ಪಿದನಮ್ಮ ನಸು ಬೆವರಿಡೆ ತನು ಬಿಡದೆ ಕಾಣಮ್ಮ 3 ಜಾರ ಜೋರರ ಶಿಖಾಮಣಿಯಿವನಮ್ಮ ಯಾರೆಂದು ಹೊರಗೊಬ್ಬ ಕರೆಯೆ ಗೋಪಮ್ಮ ಚೋರ ಗಂಡಿಯ ಪೊಕ್ಕು ಓಡಿದನಮ್ಮ 4 ಊಚು ನೀಚುಗಳೇನು ಇವಗಿಲ್ಲವಮ್ಮ ನಾಚಿಕೆನಮಗಾಗುತಿದೆ ಹೇಳಲಮ್ಮ ಕೀಚಕರಿಪು ಕೋಣೆ ಲಕ್ಷ್ಮೀಶಗಮ್ಮ ವಾಚಿಸೆ ನೀನೊಂದ ಮಾತ ನಮ್ಮಮ್ಮ 5
--------------
ಕವಿ ಪರಮದೇವದಾಸರು
ಪ್ರಾಣಪತಿ ಶ್ರೀನಿವಾಸ ವಿಠಲ ಪೊರೆ ಇವಳ ಪ ಆನತೇಷ್ಟ ಪ್ರದನು | ನೀನೆಂದು ಬಿನ್ನವಿಪೆಜ್ಞಾನ ಗಮ್ಯನೆ ದೇವ | ನೀನಾಗಿ ಪೊರೆಯೋ ಅ.ಪ. ಮಾನ್ಯ ಮಾನದ ಹರಿಯೆ | ಕನ್ಯೆಗಭಯದನಾಗಿಪುಣ್ಯ ಜೀವಿಯ ಸಲಹೆ | ಬಿನ್ನೈಪೆ ನಿನಗೇ |ನಿನ್ಹೊರತು ಜಗದೊಳಗೆ | ಅನ್ಯರನು ಕಾಣೆ ಕಾರುಣ್ಯ ನಿಧಿ ದಾನವಾ | ರಣ್ಯ ದಾವನಲಾ 1 ಭಾವಿಭಾರತಿ ಪತಿಯ | ಸೇವೆಯನೆ ಕೊಂಬಹಯಗ್ರೀವನೆ ನಿನ್ನ ಪದ | ತಾವರೆಯ ದಾಸ್ಯಾ |ಓದಿ ಬೇಡುತ್ತಿಹಳ | ತೀವರದಿ ಕೈ ಪಿಡಿಯೆದೇವ ನಿನ್ನಡಿಗಾನು | ಧಾವಿಸುತ ಬೇಡ್ವೇ 2 ಮಾರುತಾಂತರ್ಗತನೆ | ತಾರತಮ್ಯ ಜ್ಞಾನಮೂರೆರಡು ಭೇದಗಳ | ದಾರಿಯನೆ ತೋರೀ |ಸಾರತಮ ನೀನು ನಿ | ಸ್ಸಾರ ಜಗವೆಂತೆಂಬ ಚಾರುಮತಿಯನೆ ಇತ್ತು | ಪಾರು ಮಾಡಿವಳಾ 3 ವಿಷಯಗಳ ಅನುಭವದಿ | ಎಸೆವ ನಿನ್ನಯ ಸ್ಮರಣೆಹಸನಾಗಿ ನೀನಿತ್ತು | ಕೆಸರ ಕಳೆಯೋ |ಕುಶಲ ಕ್ಲೇಶಾದಿ ನಿ | ನ್ನೊಶವೆಂಬ ಧೃಡವಿರಲಿಬಿಸಜಾಕ್ಷ ಶ್ರೀರಾಮ | ಪ್ರಸರಿಸೋ ಜ್ಞಾನ 4 ದೇವ ದೇವೇಶ ಗುರು | ಸಾರ್ವಬೌಮರ ಪಾಲಶ್ರೀವರನೆ ಸರ್ವಜ್ಞ | ದುರ್ವಿಬಾವ್ಯಾ |ನೀವೊಲಿಯುತಿವಳಿನ್ನು | ಸಾರ್ವ ಕಾಲದಿ ಪೊರೆಯೊಗೋವಳರ ಪಾಲ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ
ಬಾರೋ ನಲಿದಾಡೋ ಜಿಹ್ವೆಯಲಿ ಮೂರಧಿಕಾರೊಡೆಯನೆ ಬಾರೋ ನಲಿದಾಡೋ ಜಿಹ್ವೆಯಲಿ ಪ ದಾಸಾ ಬಹು ಮೋಸಕ್ಕೊಳಗಾಗಿಹೆನು ಶ್ರೀಶಾ ಕರಪಿಡಿಯೆನ್ನ ದೋಷ ಮಹದಾಶಾ ವಹಿಸಿರುವೇನು ಘಾಸಿಯಾದೇನು ಮಾಡೋ ಕರುಣಾರ್ಣವದಿ ಈಶಾ ಘನವೇಷಾ ಬಹುತೋಷ ದಾಸನ ಮಾಡಿಕೊ ಎನ್ನ 1 ಕಂದೀ ನಾ ಕುಂದೀ ಗೃಹದೊಳಗೆ ಮಂದಿಯಾ ಶೇರಿದೆ ನೊಂದೇ ಬಹು ಬೆಂದೇ ಮನದೊಳಗೆ ಬಂಧನದೊಳು ಶಿಲ್ಕಿ ಸುಂದರ ಮೂರುತಿ ಸಂದಣಿಯದೆ ನಾ ಹೊಂದಿದೆನಿನಭವ ಭವ ನಾಯಿಂದೂ ದ್ವಂದ್ವಾಪದವಿಡಿದಿದೆ 2 ಘೋರಾ ನಿಸ್ಸಾರ ಭವದೊಳಗೆ ದಾರಿಗಾಣೆನು ಮಾರಾ ಬಹುದೀ ರಾಮನದೊಳಗೆ ಶೇರಿ ಕುಣಿವಾನು ಮಾರಜನಕ ನಿನ್ ಹಾರೈಶನುದಿನ ಶೇರಿ ಭಜಿಸಿ ನಿನ್ನ ನರಸಿಂಹವಿಠ್ಠಲ ಸಾರಿ ನಿನ ಕೋರಿ ಪದಶೇರಿ ಆರಾಧಿಸುವೀಗಳೆ 3
--------------
ನರಸಿಂಹವಿಠಲರು