ಒಟ್ಟು 52 ಕಡೆಗಳಲ್ಲಿ , 28 ದಾಸರು , 45 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೊ ಜಗನ್ನಾಥ ದಾಸಾ | ವರ್ಯಕಳೆಯೊ ಯನ್ನ ಕಲಿಕಲ್ಮಷ ಪ ಶೀಲ ಗೋಪಾಲನ ದಾಸಾರ್ಯರ ಕರಜನೆಲಾಲಿಸೋಗುಣನಿಧಿ ಬಾಲನ ಬಿನ್ನಪ ಅ.ಪ. ಹರಿಕಥಾಮೃತ ವಕ್ತಗುರುವೇ | ಕಾಯೊಪರಮ ಭಕ್ತರ ಕಲ್ಪತರುವೆ |ಹರಿಗುರು ಕರುಣ ಸಂಪೂರ್ಣಪಾತ್ರನೆ ಭವಸೆರೆಯ ಬಿಡಿಸಿ ಕಾಯೊ ಪರಮ ಪವಿತ್ರ1 ಅದ್ವೈತ ಗಜಸಿಂಹ 2 ಭವಜಲಧಿ ನವಪೋತ ಹರಿಯಾ | ಗುರುಗೋವಿಂದ ವಿಠಲನ ಪದವಾ |ಅವಿರತ ಹೃದಯದಿ ನೋಡುವ ಸೌಭಾಗ್ಯಜವದಿ ಪಾಲಿಸೊ ಜಗನ್ನಾಥ ದಾಸಾರ್ಯನೆ 3
--------------
ಗುರುಗೋವಿಂದವಿಠಲರು
ಬಾರೋ ಬಾರೋ ಪ್ರಾಣಕಾಂತ ತೋರೊ ಮುಖವ ನೋಡುವೆ ತೋರಿ ತೋರಿ ನಿನ್ನ ಪದವಾರಿಜವ ನಂಬಿದೆ ಪ ಮಾರ ಎನ್ನ ಘೋರಿಸುತಿರುವನು ಗಾರು ಮಾಡಬೇಡ ಎನ್ನ ಸೇರಿ ಆನಂದ ನೀಡೊ 1 ಕಂತು ಜನಕ ಲಾಲಿಸೊ ಅಂತರಂಗದ ಬಾಧಿಗೆ ನಾ ಚಿಂತೆ ಪಡುತಿರುವೆ 2 ವಾಸುದೇವವಿಠಲ ನಿನ್ನ ದಾಸಿಯಲ್ಲವೆ ನಾನು ಆಶೆಯಿಂದ ಬಂದೆ ಪರಿಹಾಸ ಮಾಡಬೇಡ 3
--------------
ವ್ಯಾಸತತ್ವಜ್ಞದಾಸರು
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ 1 ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ 2 ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ 3 ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ 4 ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ 5 ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ 6 ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ7 ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ 8 ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ 9 ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ 10 ಸದನ 11
--------------
ಗುರುಗೋವಿಂದವಿಠಲರು
ಭವ ಎನಗೆ ಹರಿುತುಸದಯ ಗೋಪಾಲಾರ್ಯನ ಪದ ಕರುಣವಾಯ್ತೆನಗೆ ಪಮೊದಲು ಬಹು ಜನ್ಮಂಗಳಲ್ಲಿ ಮಾಡಿದ ಪುಣ್ಯಒದಗಿತೀ ಸಮಯದಲಿ ಧನ್ಯನಾದೆಸದಸದ್ವಿವೇಕ ಸಂಪತ್ತಿ ಮುಂತಾದ ಸತ್ವದ ಸಾಧನಂಗಳೊದಗಿದವೀಗಲೆನಗೆ 1ದೇವ ಋ ಪಿತೃ ಋಣಂಗಳು ತಿದ್ದಿದವು ಶುದ್ಧಭಾವನಾದೆನು ಕುಲ ಪವಿತ್ರವಾುತೆನ್ನಾಪಾವನತೆಯಾಗಿ ಜನನೀ ಜನಕರಿಗೆ ದೇವದೇವ ಪದವಾುತು ಕೃತಕತ್ಯ ನಾನಾದೆ 2ಸಕಲ ಸಂದೇಹಗಳಳಿದು ದೇಹಾತ್ಮ ಮತಿವಿಕಲವಾದುದು ನಿತ್ಯ ತೃಪ್ತಿಯಾುತುಪ್ರಕಟ ಗೋಪಾಲಾರ್ಯ ಪದವ ಸಾಕ್ಷಾತ್ಕರಿಸಿಸುಕರ ಸತ್ಯಾನಂದ ರೂಪ ನಾನಾದೆ 3
--------------
ಗೋಪಾಲಾರ್ಯರು
ಭವ ಎನಗೆ ಹಿಂಗಿತು ಪ ಪದುಮನಾಭನ ಪಾದದೊಲುಮೆ ಎನಗಾಯಿತು ಅ ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು 1 ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದುರುಕುಮಿಣಿಯರಸ ಕೈವಶನಾದನೆನಗೆ 2 ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತುಮುಂದೆನ್ನ ಜನ್ಮ ಸಫಲವಾಯಿತುತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ 3
--------------
ಕನಕದಾಸ
ಭಾರತೀ ನೀ ಪರಿಪಾಲಿಸೇ ಪ ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ. ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು 1 ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ 2 ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು 3
--------------
ಗುರುಗೋವಿಂದವಿಠಲರು
ಮನವೆ ಸದಾ ಚಿಂತಿಸುವೆ ವನಜನಾಭನ ನಂಬದೆ ಪ ಕೊನೆಗಾಣುವದೇನೊ ಫಲವೇನೊ ಅ.ಪ ಮದಮತ್ಸರ ಕಾಮಕ್ರೋಧ ಲೋ- ಭದಿ ಮಮತಾಸ್ಪದವಾಗಿ ಮರತೋಗಿ 1 ಗುರುಹಿರಿಯರು ನೋಡಿ ವಂದಿಸದೆ ನೀ ಮರುಳಾಟಗಳಾಡಿ ಪರರನಪಹಾಸಿಸಿ ಪಾಪಿ ಇವನೆನಿಸಿ ನರಕಕ್ಕೆ ಗುರಿಯಾಗುವೆ ವೋ ಚಪಲ ಮನವೇ 2 ವೇದಮಾರ್ಗವ ಬಿಟ್ಟು ಯಾವಾಗಲು ದು- ರ್ವಾದಗಳನು ಕೊಟ್ಟು ಆದಿಯನುತಲಿ ಅನಾದಿಯನುತಲಿ ಮುದಗೂಡಿ ಅತಿಭಾಷೆಗಳಾಡಿ 3 ತತ್ವ ತಿಳಿಯಬೇಕು ಜ್ಞಾನವೆಂಬೋ ಸಂ- ಪತ್ತಿನೊಳಿರು ಸಾಕು ನಿತ್ಯಾನಿತ್ಯವಿವೇಕ ಶ್ಯೂನವಾಗಿ ನಿತ್ಯ ಕೆಡಬೇಡೆಲವೋ ಚಪಲಾ 4 ತ್ರಿವಿಧ ಜೀ- ವರೊಳಿರುವನು ಮುಕುಂದ ಗುರುರಾಮವಿಠಲ ನಿಜ ಶರಣರಿಗೆಲ್ಲ ಪರಮಪದವಿ ಈವಾ ದೇವದೇವ 5
--------------
ಗುರುರಾಮವಿಠಲ
ಮರೆಯದಿರು ಪದಾಂಬುಜ ಮರೆಯದೋಳು ಪದವಾ ಪ ಧಾರುಣಿಯನೆ ಅಳೆದೀರಡಿ ಮಾಡಿದ ಘನಪದವಾ ಮುಕಾರಿಯು ತಳ್ತ ವಾರಿಯ ಪಡದನುಪಮ ಪದವಾ 1 ಕಾಲಿಡುತಲೆ ಕಲ್ಲನು ಬಾಲೆ ಮಾಡಿದ ಪದವಾ ಕಾಳುರಗನ ಪೆಡೆಯಲಿ ಲೀಲೆಯಾಡಿದತುಳ ಪದವಾ 2 ವರಶರಣರ ನಾಲಿಗೆ ನಿರುತದಿ ನುತಿಸುವ ಪದವಾ ಉರೆ ದುರಿತವದುರಿಪ ನರಸಿಂಹವಿಠ್ಠಲನ ಪದವಾ 3
--------------
ನರಸಿಂಹವಿಠಲರು
ಯಾತರ ಸುಖವಯ್ಯಾ ಇದು ಇನ್ಯಾತರ ಸುಖವಯ್ಯಾ ಪ ಶ್ರೀ ತರುಣೀಶನ ಮರೆತು ಸಂಸಾರದಿ ಬಾಳುವುದೆಂತೆನೆ ಅ.ಪ. ಹಣ ಉಳ್ಳ ಮನುಜಂಗೆ ಗುಣವುಳ್ಳ ಸತಿಯಿಲ್ಲ ಗುಣವುಳ್ಳ ಸತಿಯಿರೆ ಗುಣಡೊಂಕುಪತಿಯು ಅನುಕೂಲವಿರೆಎರಡು ತನಯರೊಬ್ಬರು ಇರರು ಗುಣಿಸಿ ನೋಡಲು ಎಲ್ಲು ನ್ಯೂನತೆ ಸರಿಯೈ 1 ವಿತ್ತವಿದ್ದರೆ ಹಿತರು ಬಂಧು ಬಳಗವೆಲ್ಲ ವಿತ್ತವಿಲ್ಲಾದಿರಲು ನಿಂದಿಸಿ ನಗುತಿಹರು ಬತ್ತಲೆ ಬಂದುದು ಬತ್ತಲೆ ಪೋಪುದು ಮತ್ತೆ ಮಮತೆ ಯಾಕೊ ಮಧ್ಯೆ ಮತ್ತಿದ್ದುದಕೆ 2 ಸಂತೆಯತೆರಸರಿ ಸತಿಸುತ ಪರಿಜನ ನಿಂತು ಪೋಪರು ತಮ್ಮಯ ಋಣತೀರೆ ಅಂತ್ಯವಿಲ್ಲ ಸಂಸಾರದ ಶರಧಿಗೆ ಸಂತಸಪ್ರದವೆಂಬ ಭ್ರಾಂತಿಯ ನೀಗಯ್ಯ 3 ಜನನ ಮರಣವೆಂಬ ದುಃಖವೆ ತಾಕಿರೆ ದಿನದಿನ ಪ್ರತಿದಿನ ರೋಗದ ಕಾಟಗಳು ಗುಣಿಸಿ ನೋಡಲು ಮತ್ತೆ ಮನಕೆ ನೆಮ್ಮದಿ ಇಲ್ಲ ಅನಿಲ ಮಂದಿರ ನೊಲಿಸಿ ಗುಣದೂರನಾಗಯ್ಯ 4 ಕಾಲನೆಡೆಗೆ ಜನ ಬೀಳ್ಪುದು ನೋಡಿಯು ಬಾಳು ಸ್ಥಿರವೆಂದು ಕೇಳಿಲಿ ಮುಳುಗುವುದೇ ಬಾಲ ಯೌವ್ವನ ಮತ್ತೆ ಮುಪ್ಪಿಲಿ ಬೀಳುವ ಸ್ಥೂಲ ಶರೀರವೆ ಗೋಳಿನ ಸೆರೆಮನೆಯೈ5 ಊಟ ತಿಂಡಿಗೆ ಮೇಲ್ನೋಟದ ಕೀಟಗೆ ಕರ್ಮ ಮೂಟೆಯ ಘಳಿಸುವರೇ ಭವ ಕಾಟಕ ದಾಟಲು ಘೋಟಕಾಸ್ಯನ ಪದವಾರಿಜ ಪಿಡಿಯೈಯ್ಯ 6 ಮಂದನಾಗದೆ ಬಹು ಮುಂದಿನ ಗತಿ ನೋಡು ವಂದಿಸಿ ಜಯತೀರ್ಥ ವಾಯ್ವಾಂತರ್ಗತ ಪತಿ ಕೃಷ್ಣವಿಠಲನ ಭಜಿಸಲು ಕುಂದುಗಳಿಲ್ಲದೆ ಶಾಶ್ವತಾನಂದವು ಕೇಳಯ್ಯ 7
--------------
ಕೃಷ್ಣವಿಠಲದಾಸರು
ವಾಯುದೇವರು ಮಾರುತೀ ಮತ್ಪ್ರಾಣೇಶ ಮಾರುತೀ ಪ ಮಾರುತಿ ನಮಿಪೆ ನಾ ನಿನ್ನಾ ಭವಭಾರವನಿಳಿಸು ನೀ ಯೆನ್ನ | ಗತಿ ತೋರು ಸದ್ಗುಣ ಸಂಪನ್ನಾ | ಬೇರೆ ಯಾರಿಲ್ಲ ಪೊರೆವರು ಯನ್ನಾ | ನಿನ್ನೀ ಚಾರುಚರಿತೆಯ ಪಾಡಿ ಕೊಂಡಾಡುವೆ | ಸೇರೆ ರಾಮನ ಪದವಾರಿಜ ತೋರಿಸು ಅ.ಪ ಲಂಕಾ ಪತಿಯನು ಕಂಡೆ 1 ಪುರದಿ ಭೂಜಾತೆಯನರಸೀ ಕಾಣದರಿತು ವನವ, ತಲೆ ದುರುಳ ರಾವಣನ ಪರಿಕಿಸಿ | ಆಹಾ | ಭರದಿ ಮುದ್ರಿಕೆಯಿತ್ತು | ಪುರವನುರಿಸಿ | ರಘು | ವರನಡಿಗಳ ಕಂಡ | ಧುರಧೀರರರಸನೇ 2 ದೊಡೆಯನಿಗೆಡೆಗುಡೆ ಶರಧೀ | ಲಂಕೆ ಯೆಡೆಯೊಳ್ರಕ್ಕಸರ ಸಮರದಿ | ಕೊಲ್ಲುತಡುವ ಭೂತಗಳುಣ್ಣೆ ಅಡಿಯೊಂದಿಗೊರೆಸಿ ರಾಘವನ ಮೆಚ್ಚಿಸಿದ 3 ನರವರಗ್ಹ ಸ್ತಿನ ಪುರದೀ | ವರನೊಡಗೂಡಿ ಕಾಳಗದೀ | ದುರುಳ ಕೌರವರ ಬೇರೊರೆಸಿದ ಬಲಭೀಮ ||4 ಪುಟ್ಟಿ | ಬಲಿದರ ಶಾಸ್ತ್ರ ಬಲದೀ | ಸ್ಥಾಪಿಸಿ ನೀ ನಲಿದೀ | ಭಲ | ಭಳಿರೆ ರಜತಪುರಿಯರಸನ ರಘುರಾಮವಿಠಲ ದೂತ 5
--------------
ರಘುರಾಮವಿಠಲದಾಸರು
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ ಶಿವ ಶಿವ ಎಂಬೊ ಎರಡಕ್ಷರವು ಭವರೋಗಕೆ ಇದು ಮೂತೌಷಧವು ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1 ಪಾತಕ ಪಹರಿನಿತು ಪೋತ ಮಾರ್ಕಂಡೇಯಗಾಯುವ ನೀಡಿತು ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2 ಹರನ ದಿವ್ಯಪದವಾರಿಜ ಧ್ಯಾನ ಪರ ಚರ ಮುಕುತಿ ಪಥಕೆ ಸೋಪಾನ 3
--------------
ಶಾಮಸುಂದರ ವಿಠಲ
ಶ್ರೀ ರಾಮನಾಮ ಸ್ಮರಿಸೀಕ್ಷಕಾರಿ ಘೋರಾವತಾಪಗಳದಾಗಳದಾ ಪುರಾರಿ ಆರಾದರೇನು ಜಪಿಸೀ ಜಪಸೀದ ಯೋಗಿ ಸಾರುವೆ ನೊಡಿ ಸುಖವಾ ಸುಖವನು ನೀಗಿ1 ಸೋಕಲು ರಾಮಪದವಾ ಪದವನು ನೀಗಿ ತಾಕನ್ಯಳಾದಳರಿಯಾ ಅರಿಯಾದ ಹೋಗಿ ನೀ ಕೇಳಿ ಕೇಳಿ ಮರವೇ ಮರವೇನೋ ನೀನು ಲೋಕೇಶಗ್ಹೋಗುಶರಣಾ ಶರಣಾಗುವನು 2 ಏನಿತ್ತಳಂದು ಶಬರಿ ಬರಿಯಹಣ್ಣಾ ತಾನುಂಡುಕೊಟ್ಟು ಭವವಾಭವವಾರಿಸಣ್ಣಾ ಅನಾಥಬಂದು ಮರಿಯಾಮರಿಯಾದಹೋಗಿ ಸ್ವಾನಂದಸಾಖ್ಯಗರೆವಾಗರೆವಾಗೊವಲ್ಲಿ 3 ಇಂದಿರೆ ಸುದ್ದಿ ಸುಧಿಯಾ ಸುಧಿಯಾದಲಿಂದಾ ತಂದಾರೆಪದ್ಮಭವನಾ ಭವಸಾದರಿಂದಾ ಆದನೇವೆ ಕೊಟ್ಟುಕರದೀ ಕರದೀಶನಾಥಾ ಮುಂದಿನಭಾವ್ಯ ಹನುಮಾ ಹನುಮಾವಿಧಾತಾ4 ರಾಮೆಂದುಕೂಗಿ ಗಿಳಿಯಾ ಗಿಳಿಯಾಗಣಿಕೆ ನೇಮದಲಿ ಮುಗುತಿಯಾ ಗತಿಯಾಬೇಕೆ ಪ್ರೇಮದಿ ಮಾನವರುತಾ ವರತಾತನೆಂದಾ ಕಾಮಾರ್ಥನೀವ ಚಲುವಾ ಚಲುವಾ ಮುಕುಂದಾ5 ಸುಗ್ರೀವ ಬಂದು ಅಡಿಯಾ ಅಡಿಯಾಗಲೆಂದು ಶೀಘ್ರದಿಶೀಳಿತರುವಾ ತರುವಾಯಲಿಂದು ಅಗ್ರಜನೊತ್ತಿ ಅವನೀ ಅವನೀಯ ರಾಮಾ ನುಗ್ರಹ ಮಾಡದರಿಯಾದರಿಯಾಗು ವಾತ್ಮಾ6 ಶುಭವಾಕ್ಯ ದೂರಿದನು ಜಾಣನು ಜಾಣನಾಗಿ ವಿಭೀಷಣಬಂದ ಕಣವೀಕ್ಷಣದಲಿ ಸಾಗಿ ವಿಭುಕೊಟ್ಟಲಂ ಕಾಶ್ರಯವಾಶ್ರಯವಾಗಿ ರಾಮಾ ಅಭಿವರ್ಣಿಸುದುರಸನಾ ರಸನದಿ ನೇಮಾ7 ಶೇವೆಯನು ಮಾಡಿ ತಣಲೀತಣಲೀಯ ನೋಡಿ ತಾವರಿ ಕೈಯ್ಯಳೆಳದಾಲೆಳದಾದಯ ಮಾಡಿ ಭಾವಾರ್ಥಿಯಾದ ನರನಾ ನರನಾಥವೇಷಾ ಕಾವನುಲೋಕಜನ ಕಾಜನಕಾತ್ಮಜೇಶಾ 8 ರಾಮಾಷ್ಟಕಾದ ಕವಿತಾ ಕವಿತಾನೆ ಆಗೀ ಶ್ರೀ ಮಹಿಪತಿ ವರದಾ ವರದಾತ ಯೋಗಿ ಕುಂದ ಗುರುತಾಗುರುತಾತ ಮಾಡಿ ನೇಮದಿ ಕಾವಕರುಣೀಕರುಣೀಯ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ1ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದಜ್ಞಾನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು2ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ 3ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ 4ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ 5
--------------
ಗೋಪಾಲಾರ್ಯರು
ಸ್ವಾಮಿ ನೀ ದಯಾಳುವಹುದೋ ವರಭಕ್ತೋದ್ಧಾರಕೃಷ್ಣ ಪ ಪ್ರೇಮಾಸ್ಪದವಾದ ಕೊಳಲಗಾನದಿ ಗೋಪಿಯರಿಗೊಲಿದ ಅ.ಪ ಸುರತರುವಿನ ಬಳಿಗೈದು ಬರಿಯ ಕೈಲಿಹೋಗುವರೆ ಹರಿಯ ಬೆರೆದು ಭೋಗಿಪಂತೆ ವರಿಸುಜಾಜಿಕೇಶವ 1
--------------
ಶಾಮಶರ್ಮರು