ಒಟ್ಟು 151 ಕಡೆಗಳಲ್ಲಿ , 47 ದಾಸರು , 143 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ ಎಂಥ ಆಟ ಶ್ರೀ ಕಂತುಜನಕ ಭ ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ ಮಡುವಿನೊಳಡಗಿರುವ ಉರಗನ ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ ಬಿಡದೆ ಸೇರಿ ಗಡಕಡಿದು ಮಾವನ ಶಿರ ತಡೆಯದೆಮನಪುರಪಥವ ಪಿಡಿಸಿದ್ದು 1 ಗೋವಳರೊಡಗೂಡಿ ಗೋವುಗಳ ಕಾಯಲ ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ ಗೋವರ್ಧನ ಗಿರಿಯೆತ್ತೆ ಏಳುದಿನ ಗೋವುಗಳನು ಮತ್ತು ಗೋವಳರೆಲ್ಲರ ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು 2 ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು 3 ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು ಪರಮಪಾಪಿ ವರ ಕರುಣಿಸಿದವನಿಗೆ ಮರುಳಮಾಡವನ ಕರವೆ ಅವನ ಮೇ ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು 4 ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ ವ್ರತಗಳನು ಹತಗೈದು ತ್ರಿಪುರದ ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ ಸತತದಿಂಥ ಮಹಪತಿತ ಮಹಿಮದಿಹ 5
--------------
ರಾಮದಾಸರು
ಎಂಥಾದ್ದು ರಾಮನ ರೂಪಿನ್ನೆಂಥಾದ್ದು ಪ ಎಂಥಾದ್ದು ಶ್ರೀರಾಮನ ರೂಪಾ ನಿಂತು ಭಜಿಪತ್ಯಾನಂದಗೊಳಿಪಾ ಸಂತ ಕುಮುದ ಮಿತ್ರನು ತಾನೆನಿಪಾ ಆಹಾ ಚಿಂತಿಪರ ಜಗತ್ರತ್ತಿವಾಸರು ನಿರುತದಿ ಅಂತರಂಗದ ಜ್ಞÁನ ಚಕ್ಷು ಗೋಚರ ರೂಪಿನ್ನೆಂಥದ್ದು1 ಸುಷ್ಟವಾದನಿಷ್ಟಗಳು ಎಷ್ಟು ಬಳಲಿಪವು ಪಗಲಿರುಳು ಕಷ್ಟಬಡುತಿಹವಷ್ಟಾಂಗಗಳು ಆಹಾ ದೃಷ್ಟಗೋಚರ ಸ್ವಾಮಿ ಕಷ್ಟಕಳೆದು ನಮ್ಮ ನಿಷ್ಟಪೊಯ್ದೋಡಿಸೆ ತುಷ್ಟಗೊಳಿಪ ರೂಪಿನ್ನೆಂಥಾದು 2 ಸ್ಥಿರಮೂರ್ತಿ ನೀನಹುದಲ್ಲೆ ಸುರವೃಂದಕೆ ನೀ ಚೆಂದನಲ್ಲೆ ಮರುಳು ಮನುಜ ನಾನು ಮರೆದು ಬಳಲಿಪೆನು ಕರವ ಮುಗಿವೆ ತೋರಂಥಾದು 3
--------------
ನರಸಿಂಹವಿಠಲರು
ಎನಗಳವೆ ನಿನ್ನ ಮಹಿಮೆಯನು ಪೊಗಳಲು ಹೀನಮತಿ ನಾ ಪನ್ನಂಗಶಯನ ಪ ನೀಲಶಾಮನೆ ನಿಮ್ಮ ಲೀಲೆ ಪೊಗಳಲ್ಕೆ ಬ್ರಹ್ಮ ಸಾಲವು ನಾಲ್ಕುವೇದವೆಂದು ನಾಲಿಗೆಯೋಳ್ವಾಣಿನಿಟ್ಟಿರುವನಂತೆ 1 ಸಾಸಿರ ಜಿಹ್ವೆಗಳಿಂದ್ಹೊಗಳಲ್ ಈಶಭಜನೆ ತೀರದೆಂದು ಶೇಷ ಇನ್ನು ಸಾಸಿರಜಿಹ್ವೆ ಆಶಿಸಿ ಬೇಡುವನಂತೆ2 ಪ್ರಾರ್ಥಿಸಲು ನಿಮ್ಮ ಚರಿತ ಶಕ್ತಿ ಸಾಲದಂಥವರಿಗೆ ಭಕ್ತಿಯಿಂ ಪೊಗಳುವೆನಿಷ್ಟೆ ಮುಕ್ತಿದಾಯಕ ಶ್ರೀರಾಮಯೆನುತ 3
--------------
ರಾಮದಾಸರು
ಏನನಾದರೂ ಬರೆಯೋ ಎನ್ನ ಪಣೆಯೊಳಗೆನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ಪ ಬಾಲತನದಲಿ ಬಹಳ ಭಾಗ್ಯ ಸಂಪದಗಳನುಮೇಲೆ ಯೌವನ ಬರಲು ಬಡತನವನುಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನುಹಾಲು ಅನ್ನವನಿಕ್ಕಿದವರಿಗೆ ಮುನಿವುದನು1 ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನುತುಪ್ಪವಿಲ್ಲದ ಭೋಜನದ ರುಚಿಯನುಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನುಕಪ್ಪುಗೊರಲನ ನೆನೆಯದೇ ದಿನವ ಕಳೆವುದನು 2 ಪರರೊಡವೆಯನು ತಿಂದ ಶರೀರವನೆ ಪೊರೆವುದನುಪರರ ನಿಂದೆಯ ಮಾಡಿ ಬಾಳುವುದನುವರ ಕೆಳದಿ ರಾಮೇಶ ನಿನ್ನ ಪಾದಾಂಬುಜವಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು 3
--------------
ಕೆಳದಿ ವೆಂಕಣ್ಣ ಕವಿ
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ ಸಾಧಿಸು ಮುಕ್ತೀಕರ ಪ ನೊಂದನು ಮಾಡದಿರೆ ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು ಪಾಲಿಸೋ ಹರಿಯೇ 1 ಕುಟ್ಟಿ ಕೊಂದರೆ ಪಣೆಯ ನಿನ್ನಿಷ್ಟವಮನ ದಣಿಯ ಪಡೆದಷ್ಟು ಉಣ್ಣಬೇಕಲ್ಲದೆ ಪೂಜಿಸೋ ಹರಿಯೆ 2 ಮಾತ್ರವು ಸುಖವಿಲ್ಲ ಜಗದೇಕ ವಂದ್ಯನ ನೆನೆಸು ಶ್ರೀ ಲಕ್ಷ್ಮೀಶನ ಭಜಿಸಿದರೆ ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3
--------------
ಕವಿ ಪರಮದೇವದಾಸರು
ಕರವ ಮುಗಿದು ಪ ಅಷ್ಟಸೌಭಾಗ್ಯ ಕೊಟ್ಟು ನೀ ಎನ್ನ ಕಟ್ಟುಬಿಡಿಸೆಂದು ಬೇಡೆನೊ ಕೃಷ್ಣರಾಯ 1 ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿ ಶಿಷ್ಟಜನರ ಸಂಗ ಕೊಟ್ಟ ರಕ್ಷಿಸು ಎಂದು 2 ಜ್ಞಾನಿಗಳರಸ ಜಾಣ ಪ್ರಾಣನಾಥ ವಿಠಲರಾಯ ಮಾನಿಯೆಂದೆನಿಸೆಂದು 3
--------------
ಬಾಗೇಪಲ್ಲಿ ಶೇಷದಾಸರು
ಕರುಣಾರ್ಣವ ಶ್ರೀ ಗುರುವರ ಕರುಣಿಸೊ ನೀ ಎನ್ನ ಕರುಣಾಗತ ರಕ್ಷಾಮಣಿ ತವ ಚರಣಾಂಬುಜ ತೋರಿನ್ನ ಪ ಆನತಜನತತಿಜ್ಞಾನದ ಎನ್ನ - ಙÁ್ಞನವ ಕಳೆದಿನ್ನ ಮಾನದಿ ಸಲಹೆನ್ನಾ 1 ಕಾಮಿತ ಫಲಪ್ರದ ಕಾಮ್ಯಾರ್ಥವನೂ ಕಾಮಿಪ ಜನಕಿನ್ನ ಪ್ರೇಮದಿ ಅವರಭಿಕಾಮವ ಪೂರ್ತಿಸಿ ಕಾಮಧೇನುತೆರ ತೋರುವಿ ಘನ್ನ 2 ಶಿಷ್ಟೇಷ್ಟ ಪ್ರದನಿಷ್ಟಘ್ನನೆ ನೀ ಕಷ್ಟವ ಪರಿಹರಿಸಿನ್ನಾ ಎಷ್ಟೆಂಥೇಳಲಿ ಸೃಷ್ಟಿ ಯೊಳಗೆ ನಿನ್ನ ಶ್ರೇಷ್ಠ ಮಹಿಮೆಗಳನ್ನಾ 3 ಶಿಷ್ಟನೆ ನೀ ಪರಮೇಷ್ಟಿಯ ಸತ್ಪದಾ - ಧಿಷ್ಟತನೆಂದಿನ್ನಾ ಪ್ರೇಷ್ಟನೆ ಎನ್ನಯಭೀಷ್ಟೆಯ ನಿತ್ತು ಶ್ರೇಷ್ಠನ ಮಾಡಿನ್ನಾ 4 ಪಾತಕವನಕುಲ ವಿತಿಹೋತ್ರ ಸುಖ ದಾತನೆ ನೀ ಇನ್ನಾ ಈತೆರ ಮಾಡದೆ ನೀತ ಗುರುಜಗ - ನ್ನಾಥವಿಠಲ ಪ್ರಪನ್ನಾ 5
--------------
ಗುರುಜಗನ್ನಾಥದಾಸರು
ಕರ್ಮ ಬೆನ್ನ್ಹತ್ತಿ ಕಾಡಲು ನೀ ಮಾಡುವುದೇನೊ ರಂಗ ಪ ಕೊಟ್ಟು ಕುದಿದೆನು ಮನದಿ ಇಟ್ಟ್ಹಂಗಿಸಿದೆ ಜವÀದಿ ಬಿಟ್ಟುಂಡೆನತಿಥಿಗಳೆಷ್ಟೆಷ್ಟೋ ನಾನು ಕೆಟ್ಟ ಕೃತ್ಯವ ಮಾಡಿ ಕೊಟ್ಟೆ ಪರರಿಗನಿಷ್ಟ ನಿಷ್ಠವಂತರ ಕಂಡು ನಿಷ್ಠೂರವಾಡಿದೆ 1 ಮತಿಭ್ರಷ್ಟನಾಗಿ ಪರಸತಿಯರಿಗೆ ಮನಸೋತೆ ಇತರ ವನಿತೆಯ ಗರ್ಭ ಪತನಗೈಸಿದೆನೊ ಕೃತಿಮಥನದಿ ಬಲುಹಿತಬೋಧವನೆ ಬೋಧಿ ಸುತ ನಾಶಗೈದೆನ್ನಹಿತಕಾಗಿ ಪರರ 2 ಕೊಡುವರಿಗೆ ಕಿಡಿಯಿಟ್ಟೆ ಬಡವರನು ಬಳಲಿಸಿದೆ ಒಡನುಡಿದ ಭಾಷೆಯ ನಡೆಸಲಿಲ್ಲೊಂದು ಒಡಗೂಡಿರ್ದರರೊಳು ಕೆಡಕುಹುಟ್ಟಿಸಿ ನಾನು ಜಡತನದಿ ದಿನಗಳೆದೆ ಕಡುಭ್ರಷ್ಟನಾಗಿ 3 ಪರಧನಪಹರಿಸಿದೆ ಪರರ ಗೃಹ ಮುರಿದೆನು ವರ ಮಾತಾಪಿತರ ಬಲ್ಪರಿಯಿಂ ನೋಯಿಸಿದೆ ಗುರುಹಿರಿಯರ ಜರೆದೆ ಪರನಿಂದೆಗೆಳಿಸಿದೆ ಗರುವದಿಂ ಚರಿಸಿದೆ ಶರಣಜನರೊಂದಿಸದೆ 4 ಕೃಪಣತ್ವ ಕಳಿಲಿಲ್ಲ ಚಪಲ ಚೇಷ್ಟಳಿಲಿಲ್ಲ ಚಪಲಾಕ್ಷನ ದಿನದಿ ಉಪವಾಸ ಗೈಯಲಿಲ್ಲ ಸುಪಥದಿ ಮನವಿಟ್ಟು ಶಪಿಸುತಲೆಡೆವಿಡದೆ ಜಪಿಸಿ ಶ್ರೀರಾಮಪಾದ ಕೃಪೆಯ ಪಡೆದವನಲ್ಲ 5
--------------
ರಾಮದಾಸರು
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಕಾಲ ಬಂದಿತೋ ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು ಮುಪ್ಪಾಗ ಕೊಂದೆ ಕೊಳಗಬತ್ತ ಸೊಪ್ಪ ಪಣಕೆ ಮಾರುವುದು ಅಚ್ಚೇರು 1 ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ ಲಾಪರೆ ಫಣವೊಂದೆ ಕಟ್ಟಿಲ್ಲ ರೂಪಾಯಿ ಕೊಡೆ ಪುಲಿಚರಮ ಪಾಪವು ಸುಲತಾಗಿ ಪಣವ ಕೊಡೆಂಬರು 2 ದುಡ್ಡು ಕೊಡಲು ಬೇಡ ಬೈಯುತ ಆನೆ ಗೂಡಿನ (ಆನೆಗೊಂದಿ) ದುಡ್ಡತಾರೆಂಬರು ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ? ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3 ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು ಎಪ್ಪತ್ತು ವರುಷ ಕೊದಗಿ ಬಂತು ಇಪ್ಪತ್ತು ವರುಷಕೀಕಾಲ ಬಂದಿದ್ದರೆ ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4 ಧಾರಣೆ ಪಾರಣೆ ಶಿವರಾತ್ರಿ ಹರಿದಿನ ಓರಂತೆ ಬಡವಗೆ ನೆಲೆಯಾಯಿತು ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ ಸೇರಿದ ಜನರ ಕಣ್ಣಲಿ ನೋಡುತೊಲಿದ 5
--------------
ಕವಿ ಪರಮದೇವದಾಸರು
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ ಭವ ನಷ್ಟವಗೈಸೋದು ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ ಯಾಸ ಬಡುತಲಿದ್ದೆ ಲೇಶವಾದರು ಸುಖ ಲೇಶಗಾಣದಿರಲು ಏಸು ಜನ್ಮದ ಪುಣ್ಯ ಸೂಸಿತೋ ನಿನ್ನಯ ದರುಶನ ಲಾಭವಾಗೆ ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ ಈ ಸುಲಭ ವೊಂದಿಸನುದಿನ ದು ರಾಶೆಯ ಬಿಡಿಸೆಂದು ನಾಶರಹಿತ ಗುಣರಾಶಿ ರಮೇಶ 1 ವೇದಪರಾಯಣ ಸಾಧುಗಳರಸಾ ವಿ ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು ನಾದ ಸನಕಾದಿ ಮುನಿವಂದಿತಾ ಮಾಧವ ಮಹಿಧರ ಯಾದವ ಕರುಣ ಪ ಯೋಧದಿ ಎನ್ನಪರಾಧವನೆಣಿಸದೆ ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು ಭೂದೇವರೊಡಿಯಾ 2 ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು ಕರದ ಮಾತಿಗೆ ಭಯಂಕರವ ಓಡಿಸಿ ಮಂದ ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ ತೋರಿಸೊ ಭಜಕರರೊಳಗಿಡುವುದು 3
--------------
ವಿಜಯದಾಸ
ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ. ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ. ಜನನವಾದ ಕಾಲದಿಂದ ಇನಿತು ಪರ್ಯಂಕಾರದಲ್ಲಿ ಅನುಭವಿಸಿದಂಥ ಕರ್ಮ ಗುಣನಿಧಿಯಾಧೀನವೆಂದು1 ಕಷ್ಟದಲ್ಲಿ ಕಳೆದ ಕಾಲ ಅಷ್ಟರಲ್ಲೆ ಪಟ್ಟ ಸುಖ ಕೊಟ್ಟ ಹರಿಯು ಎನಗೆ ಎನುತ ಕೆಟ್ಟ ವಿಷಯ ಮನಕೆ ತರದೆ 2 ಕಾಮ ಕ್ರೊಧ ಲೋಭ ಮೋಹ ಆ ಮಹಾ ಮದ ಮತ್ಸರಗಳು ಕಾಮಿಸಿ ಮನ ಕೆಡಿಸುತಿರಲು ಶ್ರೀ ಮನೋಹರನಾಟವೆಂದು 3 ಪೊಂದಿದಂಥ ಮನುಜರಿಂದ ಕುಂದು ನಿಂದೆ ಒದಗುತಿರಲು ಇಂದಿರೇಶನ ಕರುಣವೆಂದು ಒಂದು ಮನಕೆ ತಾರದಂತೆ 4 ಮಾನ ಅಪಮಾನಗಳು ದೀನನಾಥನಧೀನವೆಂದು ಜ್ಞಾನಿಗಳ ವಾಕ್ಯ ನೆನೆದು ಮಾನಸದ ದುಃಖ ಕಳೆದು 5 ಹೊಟ್ಟೆ ಬಟ್ಟೆಗೊದಗುವಂಥ ಅಷ್ಟು ಕಷ್ಟ ಸುಖಗಳೆಲ್ಲ ವಿಷ್ಣುಮೂರ್ತಿ ಕೊಟ್ಟನೆಂದು ಮುಟ್ಟಿ ಮನದಿ ಹರಿಯ ಪದವ 6 ಹರಿಯ ಧ್ಯಾನ ಮಾಡುವುದು ಹರಿಯ ಧ್ಯಾನ ಅರಿಯುವುದು ಮೂರ್ತಿ ಕಾಣುವುದು ಹರಿಯಧೀನವೆಂದು ತಿಳಿದು 7 ಗುರುಕೃಪೆಯಿಂ ದತ್ತವಾದ ವರ ಸುಜ್ಞಾನವರೆಯ ತಿಳಿದು ಹರುಷ ಕ್ಲೇಶಾ ಮನಕೆ ತರದೆ ಮೂರ್ತಿ ಮನಕೆ ತಂದು 8 ನಿಷ್ಟೆಯಿಂ ಗೋಪಾಲ ಕೃಷ್ಣವಿಠ್ಠಲಾಧೀನ ಜಗವು ಇಟ್ಟ ಹಾಗೆ ಇರುವೆನೆಂದು ಗಟ್ಟಿಮನದಿ ಹರಿಯ ಪೊಂದಿ 9
--------------
ಅಂಬಾಬಾಯಿ
ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ ಗುಷ್ಟ ಭಜಿಸುವ ನಿಷ್ಠ ಜನರ ಉಚ್ಚಿಷ್ಟ ಎನಗದು ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ಪ ನರಲೋಕದ ಸುಖ ಪರಿಪರಿಯಲ್ಲಿ ಅರಿದೆನದರೊಳು ಪರಮ ಸೌಖ್ಯ ಎಳ್ಳರೆ ಅನಿತಿಲ್ಲ ಬರಿದೆ ಜನನ ಮರಣ ಪರಿಯಂತಾ ದುರಿತ ಧರೆಯೊಳಗೆ ನಿಂದಿಸಲಾರೆ ಸಾಕು ಶರಣು ಹೊಕ್ಕೆನು ಕರುಣಪಾಂಗನೆ ಕರವಿಡಿದು ಸಲಹೋ 1 ಆವುದುಂಟದು ದೇವ ಮಾಣಿಸು ಈ ವರವ ಕೊಂಡು ನಾ ಒಂದನು ವಲ್ಲೆ ಭಾವಶುದ್ಧ ವಾಕ್ಯವೆ ನಿಶ್ಚಯವೊ ಮಾನವ ಕಾವ ನೈಯನೆ ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ 2 ಹಡಗದೊಳಗಿಂದ ತಡಿಯದೆ ಬಂದಾ ಕಡಗೋಲ ನೇಣ ಪಿಡಿದ ಪಡುವಲಾ ಗಡಲ ತೀರದ ಉಡುಪಿನಲಿ ನಿಂದ ಅಡಿಗಡಿಗೆ ಪೂಜೆ ಬಿಡದೆ ಯತಿಗಳಿಂ ಉಘಡ ವಿಜಯ ವಿಜಯವಿಠ್ಠ ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ3
--------------
ವಿಜಯದಾಸ
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಕೊಡು ವರವಾ ಪಿಡಿ ಕರವಾ ಪ ಜಡಜ ಸದನೆ ಪಾಲ್ಗಡಲ ನಂದನೆ ಪೊಡವಿ ಜನನಿ ನಿಮ್ಮಡಿಗಳಾಂಬುಜವಾ ಧೃಡ ಸುಜ್ಞಾನದಿ ಬಿಡದೆ ಪೂಜಿಸುವೆ 1 ಇಕ್ಷುಶರನ ಪಿತ ವಕ್ಷನಿಲಯೆ | ಕಮ ಲಾಕ್ಷಿ ಕೋಮಲೆ ಮೋಕ್ಷದಾತಳೆ ಲಕ್ಷ್ಮಿಯ ಕರುಣ ಕಟಾಕ್ಷದಿಂದೀಕ್ಷಿಸಿ 2 ಧಿಟ್ಟ ಶಾಮಸುಂದರವಿಠಲನ ನಿಷ್ಟೆಯಿಂದಲಿ ಮನಭಜಿಸೊ ಸುಖ ಕೊಟ್ಟು ಭವ ಕಟ್ಟಿ ಓಡಿಸಿ 3
--------------
ಶಾಮಸುಂದರ ವಿಠಲ