ಒಟ್ಟು 25 ಕಡೆಗಳಲ್ಲಿ , 17 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬತ್ತಿಗೆ ಹತ್ತದ ಜ್ಯೋತಿಯು ನಡು ನೆತ್ತಿಯೊಳಿಂ ಬಿಟ್ಟು ಜತನ ಮಾಡಣ್ಣಾ ಪ ತೈಲ್ಯವು ಸರಿಯಾಗದು ನೋಡು ಅಶುದ್ಧ ಮೈಲಿಗೆಯಿದ್ದರೆ ಕಳದೀತು ಕೈಲಾಸಪತಿಯ ಧ್ಯಾನವ ಮಾಡು ಬಟ್ಟ ಬೈಲಲ್ಲಿ ಬೆಳಗಾಗುತಿದೆ ಮುಂದೆ ನೋಡು 1 ಕತ್ತಲೆ ಬೆಳಕಲ್ಲಿ ಉಳಿಯದು ಮಾಯಾ ಮೃತ್ಯುಪಾಶಗಳಲ್ಲಿ ಸುಳಿಯದು ನಿತ್ಯ ನಿರ್ಮಲವೆಂಬ ಗೆಲವದು ಪರ ವಸ್ತುವಿನೊಳಗೆ ಕೂಡಿರುವುದು ಅಣ್ಣಾ 2 ನಿಂದಿಹ ನಿಜಕೆ ತಾ ನಿಲುವದು ಪರ ದ್ವಂದ್ವಾಕಾರಗಳೆಲ್ಲ ಗೆಲುವದು ಕುಂದು ದುಷ್ಕರ್ಮವ ಕೊಲುವದು ವಿಮಲಾ ನಂದನ ಚರಣಕೆ ಸಲುವದು ಅಣ್ಣಾ 3
--------------
ಭಟಕಳ ಅಪ್ಪಯ್ಯ
ಭಯ ನಿವಾರಣ ಸುಳಾದಿ ನಾಕೇಶ ದೇವತತಿ ಆ ಕಮಲನಾಭ ಯತಿ ನಿಕರಗೊಲಿದನೆ ಶ್ರೀಕರವದನ ಸರ್ವಲೋಕಕಧಿಪ ಕೃಪಾ- ಲೋಕನದಲಿ ನೋಡಿ ಸುಖತೀರ್ಥನುತ ಚರಣ ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ ಈ ಕಾಲದಲಿ ಮನ ವ್ಯಾಕುಲಪಡಿಸುವ ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ ಲೋಕ ಲೋಕಾದಿಗಳ ಸಾಕುವ ಭಾರಕರ್ತ ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ ಲೋಕಪತಿಯೆ ಭಕ್ತಾನೀಕಕÀಭಯದಾತ ಭೀಕರ ಬೆನ್ಹತ್ತಿ ತಾಕಿದ ಮನಸಿನ ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1 ಭಯ ನಿವಾರಕದೇವ ಭಕ್ತವತ್ಸಲ ನೀನೆ ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು ಸಂತೈಸಿ ತರುಣಿಯ ರೂಪದಿ ಖಳನ ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2 ನಿತ್ಯ ನಿನ್ನನು ನಂಬಿ ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು ಮೃತ್ಯು ಭಯವು ಉಂಟಿ ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ ಸಿರಿ ಗೋಪಾಲಕೃಷ್ಣವಿಠ್ಠಲ ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3 ವಾಸುದೇವನೆ ನಿನ್ನ ದಾಸನ ಕಾಯುವಂಥ ಈಶನಲ್ಲವೆ ಜೀವರಾಶಿಗಳಿಗೆ ಬಿಂಬ ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ ದಾಶರಥಿಯೆ ನಿನ್ನ ಅನುಜನ ಜೀವಭಯ ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ ವಾಸವ ಮೊರೆಯಿಡೆ ಒಲಿದು ಅಮೃತವಿತ್ತು ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4 ತರಳತ್ವದಲಿ ಭಯವು ವರ ಯೌವ್ವನದಲಿ ಭಯವು ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ ಪರಮ ಮಂಗಳರೂಪ ದೈತ್ಯರಿಗತಿ ಘೋರ ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5 ಜತೆ ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ
--------------
ಅಂಬಾಬಾಯಿ
ಮಂತ್ರಪುಷ್ಪವ ಸಮರ್ಪಿಸುವೆನೊಲವಿನಲಿಯಂತ್ರವಾಹಕ ನಿನ್ನ ದಿವ್ಯಚರಣದಲಿ ಪಮಂತ್ರಂಗಳುದಿಸಿದವು ಮುಖಕಮಲದಲಿ ನಿನ್ನಮಂತ್ರಗಳ ಬ್ರಹ್ಮನಿಗೆ ಕೊಟ್ಟೆ ನೀ ಮುನ್ನಮಂತ್ರಂಗಳನು ಜಪಿಸಿ ನವಬ್ರಹ್ಮರಾದಿಯಲಿಮಂತ್ರಮೂರ್ತಿಗಳಾದರದರಿಂದಲೀ ವಿಧದ 1ಮಂತ್ರಹೃದಯದಿ ನಿಂದು ಮಂತ್ರಿಸಿದ ಜೀವನನುಮಂತ್ರಾರ್ಥವಸ್ತು ಪರಬ್ರಹ್ಮವನೆ ಮಾಡಿಯಂತ್ರತ್ವವನು ಬಿಡಿಸಿ ಯಂತ್ರಿ ತಾನೆಂದೆನಿಸಿಸಂತತಾನಂದಸಾಗರವ ಸೇರಿಸುವ 2ಹಿಂಸಾದಿ ದೋಷಗಳನುಳಿದು ನಿರ್ಮಲವಾಗಿಹಂಸನೊಳು ಬೆರಸಿ ಗುಣಕರಣ ಪುಷ್ಪಗಳಹಂಸಮಂಡಲರೂಪ ತಿರುಪತಿಯಲಿಹ ಪರಮಹಂಸ ವೆಂಕಟರಮಣ ನೀನೆ ನಾನೆಂಬ 3ಓಂ ಗೋವಿಂದಾಯ ನಮಃ
--------------
ತಿಮ್ಮಪ್ಪದಾಸರು
ಲಾಲಿ ನಿತ್ಯಾನಂದ ಲಾವಣ್ಯ ಕಂದ ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ. ಆದಿ ಮಧ್ಯಾಂತ ವಿದೂರನಾಗಿಹನ ವೇದಾಂತ ವೇದ್ಯ ವೈಭವ ಪಕ್ಷಿಗಮನ ತಾಪ ಕಳಿವವನ ಮೋದದಿ ಪಾಡಿ ತೂಗುವೆನು ಮಾಧವನ 1 ಈರಾರು ದಿಗ್ಗಜವೆಂಟು ಕಾಲುಗಳು ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು ಧಾರಾರೂಪ ಭಾಗೀರಥಿ ಸರಪಣಿ ಸೇರಿಸಿ ಡೋಲ ಶೃಂಗಾರ ಗೈಯುವೆನು 2 ನಿರ್ಮಲವಾದೇಳು ಹಲಿಗೆಗಳಿರುವ ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ 3 ಸೂರ್ಯ ಚಂದ್ರಮರೆಂಬ ಧಾರಾದೀಪಗಳು ತಾರಕಿಗಳು ಸುತ್ತಲಿರುವ ಚಿನ್ಹೆಗಳು ಭವ ಜಯ ಜಯವೆಂಬ ಭರವು ನೀರಜಾಲಯೆ ಕೂಡಿ ಪಾಡುವ ಸ್ವರವು 4 ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ ಪಾಟಲಾಧರ ಮುಕುರರಾಭ ಕಪೋಲ ನಳಿನ ಪತ್ರ ನೇತ್ರ ಜ- ಚಾಪ ಧಾಟಿ ಭ್ರೂಯುಗಳ 5 ಪೂರ್ಣ ಮಾಲಾನಂತ ಪೌರ್ಣಮಿಯ ವಿಧು ವರ್ಣ ಮುಖಾಬ್ಜಸುಪರ್ಣವರೋಹ ಕರ್ಣ ಹೀನ ಕಶಿಪೂ ಪರಿಶಯನ ದು- ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ 6 ಕಂಬು ಸುಗ್ರೀವ ವಿಲಂಬಿತ ವನಮಾಲ ಅಂಬುಜ ಚಕ್ರ ಗದಾಕರ ಹಸ್ತ ಕೌಸ್ತುಭ ಜಗ- ನಾಭ 7 ವಿತತ ರೇಖಾತ್ರಯಯುತಮೃದುದರ ಮಧ್ಯ ಗತ ಕಿಂಕಿಣೀ ಜಾಲ ಕಾಂಚಿ ಕಲಾಪ ಪೀವರೋರು ಸಂ- ಮೂರ್ತಿ 8 ಸಿಂಜನ ಜೀರ ರಂಜಿತ ಚರಣ ಕಂಜಾಂಕುಶಕೇತು ರೇಖಾಲಂಕರಣ ಮಂಜುಳ ಮೃದು ಪಾದತಳ ಮುಕ್ತಾಭರಣ ಸಂಜೀವನ ರಾಜ ಸಂಪ್ರೀತಿ ಕರಣ 9 ಔತ್ತಾನಪಾದಿಯನಾಧಾರಗೊಂಡು ನಿತ್ಯ ತೂಗಾಡುವ ತೊಟ್ಟಿಲ ಕಂಡು ಹಿಂಡು ಬಹು ತೋಷಗೊಂಡು ಸತ್ಯಭಾಮೆಯ ಕಾಂತನಾಡುವ ಚೆಂಡು 10 ಪತಿತ ಪಾವನ ಪರಮಾನಂದ ರೂಪ ಸತತ ತಾನೆ ಪರಿಹರಿಸುವ ತಾಪ ವಿತತ ಮಹಿಮ ವೆಂಕಟಾಚಲ ಭೂ ಗತಿಯಾಗಿ ತೋರುವ ತನ್ನ ಪ್ರತಾಪ 11
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಶಪದ ಕಮಲಕ್ಕೆ ಮಧುಪ | ನಿನ್ನದಾಸನೆಂದೆನಿಸುವುದು ಧನಪ | ಸಖ ಮ-ಹೇಶನ ಸುತ ಪೇಳ್ವೆ ಭಿನ್ನಪ | ನೀ ಪ್ರ-ಕಾಶಿಪುದು ಮನವಿ ವಿಘ್ನಪ 1 ಪತಿ ಕರುಣಿ ಶುಭಗಾತ್ರ | ಗ್ರಂಥಲೇಸೆನಿಸಿ ಲಿಖಿಸಿದೆ ಪವಿತ್ರ | ಮೂರ್ತಿಪಾಶಾಂಕುಶ ಪಾಣಿ ಸುಚರಿತ್ರ 2 ಸ್ವಾಂತ | ದಲ್ಲಿಅಭಯ ನೀ ತಿಳಿಸು ನಿಶ್ಚಿಂತ 3 ವಿಘ್ನಪನೆ ದುರ್ವಿಷಯದಲ್ಲಿ | ಬಹಳಮಗ್ನವಿಹ ಮನವ ಹರಿಯಲ್ಲಿ | ನಿರತಲಗ್ನ ಮಾಡಿಸು ತ್ವರ್ಯದಲ್ಲಿ | ಇನ್ನೂ ವಿಘ್ನಗಳಿಗಂಜಿಕೆಯು ಎಲ್ಲಿ ? | 4 ಧನಪ ವಿಶ್ವಕ್ಸೇನ ಯಮಳ | ಆ ಅ-ಶ್ವಿನೀಗಳ್ಗೆ ಸಮ ಕರಿಗೊರಳ | ಪುತ್ರನನುಜನೇ ಶೇಷ ಶತಗರುಗಳ | ರಲ್ಲಿಗುಣೋತ್ತಮನೆ ಕಾಯೊ ನಮ್ಮಗಳ | 5 ಬವರ | ದಲ್ಲಿಗೌರಿಪತಿ ವರದಿ ಉದ್ಧಟರ | ಆದಕ್ರೂರಿ ಜನ ಸಂಹಾರಿ ಶೂರ | 6 ಸೂತ್ರ ಅಪರೂಪ | ಖಳರದರ್ಪ ಭಂಜನನೆ ಶುಭರೂಪ | 7 ಶ್ರೀಶನತಿ ನಿರ್ಮಲವು ಎನಿಪ | ನಾಭಿದೇಶಗತನಾಗಿಹನೆ ಗಣಪ | ರಕ್ತವಾಸೆರಡು ಶೋಭಿತನೆ ಸುರಪ | ಮಿತ್ರಮೂಷಕಾ ವರವಹನ ರೂಪ | 8 ಶಂಕರಾತ್ಮಜ ದೈತ್ಯ ಜನಕೆ | ಅತಿ ಭ-ಯಂಕರ ಗತಿಯ ನೀಡಲ್ಕೇ | ನೀನುಸಂಕಟ ಚತುರ್ಥಿಗ ಎನೆಲ್ಕೆ | ಹಾಗೆಮಂಕು ಜನಾವೃತವು ಮೋಹಕ್ಕೆ 9 ಸಿದ್ಧಿ ವಿಧ್ಯಾಧರರು ಎಂಬ | ಗಣಾರಾಧ್ಯ ಪದಕಮಲ ನಿನದೆಂಬ | ಜನಕೆಸಿದ್ಧಿದಾಯಕ ವೇಗ ಎಂಬ | ಮಹಿಮಬುದ್ಧಿ ವಿದ್ಯೆಗಳ ಕೊಡು ತುಂಬ 10 ಭಕ್ತವರ ಭವ್ಯಾತ್ಮ ಪರಮ | ಶಾಸ್ತ್ರಸಕ್ತವಾಗಲಿ ಮನವು ಅಧಮ | ವಿಷಯಸಕ್ತಿರಹಿತನ ಮಾಡಿ ಪರಮ | ಶುದ್ಧಭಕ್ತನೆಂದೆನಿಸು ನಿಸ್ಸೀಮ | 11 ಶಕ್ರ ಪೂಜಿಸುತ ಗುರು ನಿನ್ನ ವೈರಿಶುಕ್ರ ಶಿಷ್ಯರ ಕೊಂದ ನಿನ್ನ | ಆ ಉ-ರುಕ್ರಮ ರಾಮ ಪೂಜಿಸೆನ್ನ | ತೋರ್ದವಕ್ರ ತುಂಡನೆ ಕರುಣವನ್ನ 12 ಕೌರವನು ಭಜಿಸದಲೆ ನಿನ್ನ | ಆಸಮೀರನ ಗದೆಯಲಿಂದಿನ್ನ | ಹತನುತಾರಕಾಂತಕನನುಜ ಯೆನ್ನೆ | ಧರ್ಮಪ್ರೇರಕನೆ ಸಂತೈಸು ಎನ್ನ 13 ಮೂಕರನ ವಾಗ್ಮಿಗಳ ಗೈವ | ಗುರು ಕೃ-ಪಾಕರನೆ ಕಾಮಗಳ ಕೊಡುವ | ಪರಮಲೇಖಕನೆ ಮನ್ಮನದಲಿರುವ | ಬಹುವ್ಯಾಕುಲವ ಪರಿಹರಿಸು ದೇವ | 14 ಸತ್ತೆ ವೃತ್ತಿಯು ಮತ್ತೆ ಪ್ರಮಿತಿ | ಜಗಕೆಇತ್ತು ತಾ ಸೃಷ್ಟ್ಯಷ್ಟಕತ್ರ್ರೀ | ಎನಿಪಚಿತ್ತಜ ಪಿತನ ದಿವ್ಯ ಸ್ಮøತಿ | ಇತ್ತುನಿತ್ಯ ನೀ ಪಾಲಿಪುದು ಸದ್ಗತಿ 15 ಪಂಚವಕ್ತ್ರನ ತನಯ ಕೇಳೊ | ಎನಗೆಪಂಚಭೇದದ ಜ್ಞಾನ ಪೇಳೊ | ಹರಿಯುವಾಂಛಿತ ಪ್ರದನ ದಿಟ ಆಳೊ | ಭವದಿವಂಚಿಸದೆ ಕಾಯೊ ಕೃಪಾಳೊ | 16 ಏನು ಬೇಡುವುದಿಲ್ಲ ನಿನ್ನ | ದುಷ್ಟಯೋನಿಗಳು ಬರಲಂಜೆ ಘನ್ನ | ಲಕುಮಿಪ್ರಾಣಪತಿ ತತ್ವರಿಂದಿನ್ನ | ಕಾರ್ಯತಾನೆಂಬ ಮತಿಯ ಕೊಡು ಮುನ್ನ 17 ಭಕ್ತ ಜನ ಕಲ್ಪ ತರುವೆನಿಪ | ಉಮೆಯಪುತ್ರ ಮಮ ಮಮತೆಯನು ಹರಿಪ | ದಾಯಹತ್ತಿಹುದು ನಿನ್ನಲ್ಲಿ ಗಣಪ | ಕಳೆಯೊಎತ್ತಿ ಕೈ ಮುಗಿವೆ ಭವರೂಪ 18 ಜಯ ಜಯವು ಎಂಬೆ ವಿಘ್ನೇಶ | ತಾಪತ್ರಯಗಳಿನು ನೀನೇ ವಿನಾಶ | ಗೈದುಭಯ ಶೋಕರಹಿತ ವಿದ್ಯೇಶ | ಜನ್ಮಾಮಯ ಮೃತಿ ಹರಿಸೊ ನಭಕೀಶ | 19 ನಮಿಸುವೆನೊ ಹೇರೊಡಲ ನಿನ್ನ | ಕರುಣಿಕಮಲಾಕ್ಷ ಹರಿನಾಮವನ್ನ | ನಿರುತವಿಮಲ ಮನದಿ ನುಡಿವಂತೆ ಎನ್ನ | ಮಾಡಿಕಮಲೇಶ ಪದ ತೋರೊ ಘನ್ನ20 ಎರಡು ನವ ಮೂರು ಪದಗಳನ್ನ | ಗೌರಿತರಳನಲಿ ಇರುವಂಥ ಪ್ರಾಣ | ಪತಿಯುಗುರು ಗೋವಿಂದ ವಿಠ್ಠಲನಾ | ಪದದಿಇರಿಸುವರ ಹರಿ ಪೊರೆವ ಅವರನ 21
--------------
ಗುರುಗೋವಿಂದವಿಠಲರು
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಧನವಗಳಿಸಬೇಕಿಂತಹದು - ಈಜನರಿಗೆ ಕಾಣಿಸದಂತಹದು ಪ.ಕೊಟ್ಟರೆ ತೀರದಂತಹದು - ತನ್ನಬಿಟ್ಟು ಅಗಲಿ ಇರದಂತಹದುಕಟ್ಟಿದ ಗಂಟನು ಬಯಲೊಳಗಿಟ್ಟರೆಮುಟ್ಟರು ಆರು ಅಂತಹದು 1ಕರ್ಮವ ನೋಡಿಸುವಂತಹದುಧರ್ಮವ ಮಾಡಿಸುವಂತಹದುನಿರ್ಮಲವಾಗಿದೆ ಮನಸಿನೊಳಗೆ ನಿಜಧರ್ಮವ ತೋರಿಸುವಂತಹದು 2ಅಜ್ಞಾನವು ಬಾರದಂತಹದು - ನಿಜಸುಜ್ಞಾನವ ತೋರುವಂತಹದುವಿಜಾÕನಮೂರ್ತಿ ಪುರಂದರವಿಠಲನಪ್ರಜೆÕಯನ್ನು ಕೊಡುವಂತಹದು 3
--------------
ಪುರಂದರದಾಸರು
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
--------------
ಗೋವಿಂದದಾಸ
ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆಮುಟ್ಟಲಿ ಬಂತೆ ಬಿಕನಾಶಿಪಮುಟ್ಟೋ ನೀನೇ ಮಡಿಯೂ ನೀನೇಕೆಟ್ಟಿತು ನಿನಮಡಿ ಮೊದಲೇ ಜಲದಲಿ ನೀ ಮುಳುಗೆಕಡೆಯಲಿ ಆ ಉದಕವನೇ ತರುವೆದೇವರಿಗಿಂದಭಿಷೇಕವ ಮಾಡುತಅಹಂನ ಬಿಡು ನಿನ ಬಿಕನಾಶಿ1ಎಲುಬು ಚರ್ಮದಿ ಮಲಮೂತ್ರದ ಗೂಡಲಿನಲಿಯುತಲಿದ್ದೆ ಬಿಕನಾಶಿನೆಲೆಗೊಂಡಾ ನವ ದ್ವಾರದ ಜಲದೊಳುತೊಳಲುತ ಬಿಕನಾಶಿ2ಹುಟ್ಟುತಸೂತಕಹೊಂದುತಸೂತಕನಟ್ಟ ನಡುವೆ ಬಿಕನಾಶಿಪಟ್ಟಣದಾ ಕಾವೇರಿ ಮುಳುಗಲುಮುಟ್ಟು ತೇಲಿಯಿತೆ ಬಿಕನಾಶಿ3ಉತ್ತಮ ಹತ್ತಿ ಬತ್ತಿರಲಾಂಜನವೃಕ್ಷದಿ ಬೆಳೆವುದೆ ಬಿಕನಾಶಿಉತ್ತಮ ರೋಧನ ಭಾರವ ಕೆಡಿಸಲುಕೆಟ್ಟಿತು ನಿನ ಮಡಿ ಬಿಕನಾಶಿ4ನಾನಾ ಶಾಸ್ತ್ರವನೋದಿ ನಾ ನಿನ್ನ ಮರೆವೆನುಹೀನವ ಬಿಡು ನಿನ್ನ ಬಿಕನಾಶಿನಾನಾ ಶಾಖದಲಿ ಇರಲಾದರೂರ್ವಿಅದುರುಚಿತಿಳಿವುದೆ ಬಿಕನಾಶಿ5ಚರ್ಮವು ತೊಳೆದರೆ ಕರ್ಮವು ಹೋಯಿತೆಕರ್ಮವು ಬಿಡದು ನಿನ್ನ ಬಿಕನಾಶಿಒಮ್ಮೆ ಚಿದಾನಂದ ಪಾದವ ಸ್ಮರಿಸಲುನಿರ್ಮಲವಾದೆಯ ಬಿಕನಾಶಿ6
--------------
ಚಿದಾನಂದ ಅವಧೂತರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು