ಒಟ್ಟು 429 ಕಡೆಗಳಲ್ಲಿ , 77 ದಾಸರು , 373 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತಚತುರ್ದಶಿಯ ದಿನದ ಪ್ರಾರ್ಥನೆ) ಪದ್ಮನಾಭ ಪರಿಪಾಲಿಸು ದಯದಿಂದ ಪದ್ಮಜಾದಿ ವಂದ್ಯ ಪರಮ ದಯಾಳೊ ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ ಸದ್ಮ ವೃತ್ತಿಪದಪದ್ಮವ ತೋರೊ ಪ. ಚಿಂತಿತದಾಯಕ ಸಂತರ ಕುಲದೈವ ಕಂತು ಜನನಿಯೊಡಗೂಡಿ ನೀನು ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು- ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1 ಆದಿ ಮಧ್ಯಾಂತವಿದೂರ ನಿನ್ನಲಿ ಮಹ ದಾದಿ ತತ್ವಗಳೆಲ್ಲ ನಿಂತಿಹವು ಆದಿ ಭೌತಿಕ ಮೊದಲಾದ ತಾಪಗಳನ್ನು ಶ್ರೀದ ನೀ ಬಿಡಿಸಲು ಸದರವಾಗಿಹವು 2 ಒಂದರಿಂದೊಂದಾದರಿಂದ ಮೂರು ಮೂರ್ತಿ ಇಂದಿರೆ ಸಹಿತಾವಿರ್ಭೂತನಾಗಿ ಮುಂದಿನ ಮಹದಾದಿ ತತ್ವವ ನಿರ್ಮಿಸಿ ನಿಂದನಂತಾಸಂತರೂಪನಾದವನೆ 3 ಭವ ಚಕ್ರದೊಳು ತಂದು ನವ ನವ ಕರ್ಮಗಳನೆ ಮಾಡಿಸಿ ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು ನಿತ್ಯ ತೃಪ್ತನಾಗಿರುವಿ 4 ಮಛ್ವಾದ್ಯನಂತವತಾರಗಳನೆ ಮಾಡಿ ಸ್ವೇಚ್ಛೆಯಿಂದ ಸುಜನರ ಸಲಹಿ ಕುಚ್ಛಿತ ಜನರಿಗೆ ತುಚ್ಛಗತಿಯನೀವೆ ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5 ನಾನಾವತಾರದಿ ನಂಬಿದ ಸುರರಿಗೆ ಆನಂದವಿತ್ತು ರಕ್ಷಿಪೆ ಕರುಣದಿ ದಾನವರಿಗೆ ಅಧ:ಸ್ಥಾನವ ನೀಡುವಿ ಮಾನವರನು ಮಧ್ಯಗತರ ಮಾಡಿಸುವಿ 6 ಹಿಂದೆ ಮುಂದಿನ ಭವದಂದವ ತಿಳಿಯದ ಮಂದಾಗ್ರೇಸರ ನಾನಾದೆಂಬುದನು ಅಂಧಕರಾರಣ್ಯದಿಂದ ಮೂಢನಾದಂ ದಿಂದ ಬಿನ್ನೈಪೆನು ಇಂದಿರಾಧವನೆ 7 ಮಾಡುವ ಕರ್ಮವು ನೋಡುವ ವಿಷಯಗ- ಳಾಡುವ ಮಾತು ಬೇಡುವ ಸೌಖ್ಯವು ನೀಡುವ ದಾನವೋಲ್ಯಾಡುವ ಚರ್ಯವ ನೋಡಲು ತಾಮಸ ಪ್ರಹುಡನಾಗಿಹೆನು 8 ಆದರು ನಿನ್ನಯ ಪಾದಾರವಿಂದ ವಿ- ನೋದ ಕಥಾಮೃತ ಪಾನದೊಳು ಸ್ವಾದ ಲೇಶದಾದರ ತೋರ್ಪದ- ನಾದಿ ಮೂರುತಿ ನೀನೆ ತಿಳಿಸಬೇಕದನೂ 9 ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ ಪದವ ಕಾಣುವೆನೆನುತೊದರುವೆನು ಹೃದಯ ಮಂಟಪದಿ ನೀ ಹುದುಗಿರುವುದರಿಂದ ಕದವ ತೆರೆದು ತೋರೊ ವಿಧಿಭವವಿನುತಾ 10 ಕನ್ನೆ ಸುಶೀಲೆಯ ಕರಸೂತ್ರ ರೂಪದ ನಿನ್ನ ತಿಳಿಯದೆ ಕೌಂಡಿಣ್ಯನಂದು ಮನ್ನಿಸದಿರೆ ಮದ ಮೋಹಗಳೋಡಿಸಿ ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11 ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು- ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12 ಅದು ಕಾರಣದಿಂದ ಪದುಮನಾಭ ನಿನ್ನ ಪದ ಕಮಲಗಳಲಿ ರತಿಯನಿತ್ತು ಸದರದಿ ಸಲಹಯ್ಯ ವಿಧುಶೇಖರಾರ್ಚಿತ ಮದನನಯ್ಯ ಮರುದಾದಿ ವಂದಿತನೆ 13 ದೋಷರಾಶಿಗವಕಾಶನಾದರೂ ಯೆನ್ನ ಶ್ರೀಶ ನಿನ್ನ ದಾಸದಾಸನೆಂದು ಘೋಷವಾದುದರಿಂದ ಪೋಷಿಸಬೇಕಯ್ಯ ಶೇಷಗಿರೀಶ ಸರ್ವೇಶ ನೀ ದಯದಿ 14
--------------
ತುಪಾಕಿ ವೆಂಕಟರಮಣಾಚಾರ್ಯ
(ಉ) ವಿಶೇಷ ಸಂದರ್ಭದ ಹಾಡುಗಳು 486 (1) ಹೆಜ್ಜಾಜಿಕೇಶವಸುಪ್ರಭಾತ ಏಳಯ್ಯ ಜಾಜಿಪುರೀಶ ಕೇಶವರಾಯ ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ ಕೋಟೆ ಚನ್ನಿಗನೆಂದು ಹೆಸರಾದವನೆ ಪೇಟೆ ಚನ್ನಿಗನಾಗಿ ನೆಲೆಸಿರುವವನೆ ಏಳಯ್ಯ ಬೆಳಗಾಯಿತು 1 ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು- ದುರೆ ವಾಹನನಾಗಿ ಊರೆಲ್ಲ ಕಾಯುವನೆ ಏಳಯ್ಯ ಬೆಳಗಾಯಿತು 2 ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ ಬಾಧೆಹೊತ್ತಾಜನರ ಹಾರೈಸುತಿರುವನೆ ಏಳಯ್ಯ ಬೆಳಗಾಯಿತು 3 ನಾರದರು ತುಂಬುರರು ದೇವತೆಗಳೆಲ್ಲ ಎ- ದುರಲಿ ನಿಂದು ವಂದಿಸುತಿಹರಲ್ಲ ಏಳಯ್ಯ ಬೆಳಗಾಯಿತು 4 ವಂದಿ ಮಾಗಧರು ಜಯಘೋಷ ಮಾಡುತ್ತ ಮಂದಿ ಮಂದಿಯೆ ನಿಂತು ನುತಿಸುತ್ತಿಹರು ಏಳಯ್ಯ ಬೆಳಗಾಯಿತು 5 ಭಂಟರು ಬಂದು ಮಂಗಳರವದಿಂದ ಗಂಟೆ ಜಾಗಟೆಗಳ ನುಡಿಸುತಲಿಹರು ಏಳಯ್ಯ ಬೆಳಗಾಯಿತು 6 ಮುನ್ನಿನ ರವಿಯು ಉದಯಿಸುತಿರುವನು ಹೊನ್ನಿನ ಕಿರಣಗಳ ಪಸರಿಸುತಿರಿವನು ಏಳಯ್ಯ ಬೆಳಗಾಯಿತು 7 ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು ಹಾದಿಯ ಸಿಂಗರಿಸಿ ಕಾಯುತಲಿರುವರು ಏಳಯ್ಯ ಬೆಳಗಾಯಿತು 8 ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು ಏಳಯ್ಯ ಬೆಳಗಾಯಿತು 9 ಕೊಂಬು ಕಹಳೆಗಳ ಊದುವರು ಕೆಲವರು ತುಂಬು ಮಂತ್ರಗಳ ಹೇಳುವರು ವೈಷ್ಣವರು ಏಳಯ್ಯ ಬೆಳಗಾಯಿತು 10 ಸುಮಂಗಲೆಯರು ಕಳಸ ಹೊತ್ತಿಹರು ಸುಮ್ಮಾನದಿ ಭಕುತರು ಕುಣಿಯುತಲಿಹರು ಏಳಯ್ಯ ಬೆಳಗಾಯಿತು 11 ಅಭಯ ಹಸ್ತನೆ ಏಳ ಕಮಲವದನನೆ ಏಳು ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು 12 ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು ಎನ್ನರಸ ಜಾಜಿಪುರ ವರದ ಕೇಶವರಾಯ ಏಳಯ್ಯ ಬೆಳಗಾಯಿತು 13
--------------
ನಾರಾಯಣಶರ್ಮರು
(ಜಗನ್ನಾಥದಾಸರು) ಇಂದು ಪ ಕಂಗಳ ಧಣಿ ರಂಗವೊಲಿದ ಮಹಾತ್ಮರ ಅ.ಪ ದ್ವಾಪರದಲ್ಲಿಯ ಶಲ್ಯರು ಇವರಂತೆ ತಪಸಿ ಪ್ರಹ್ಲಾದನ ಅನುಜರು ಇವರಂತೆ ಕಪಟರಹಿತ ಕಲ್ಕೀರ ಭೂಪನ ರೂಪರೇಶೆಯ ನಿರ್ಮಿಸಿ ಮೆರೆದವರ 1 ಎಂಥ ಪುಣ್ಯವಂತರು ನಮ್ಮ ಹಿರಿಯರು ಇಂಥ ಮಹಾತ್ಮರ ಸೇವಿಸಿ ಬದುಕಲು ನಿಂತು ಮನದಿ ಇವರ ನಾಮ ಭ್ರಾಂತಿಯಾಗಲು ಸಂತೋಷದಿ ಶಾಂತ ಹೊಳೆ ಹರಿಸುವರನು 2 ಶಿಷ್ಟ ಸದಾಚಾರ ಸೃಷ್ಟಿಸಿ ಜಗದಲಿ ಶ್ರೇಷ್ಠ ದಾಸರೆಂದು ಖ್ಯಾತರಾಗಿಹರ ಅಷ್ಟಮಾಂಗ ಸಾಷ್ಟಾಂಗದಿ ಎರಗಲು ಸೃಷ್ಟೀಶ ಸಿರಿವತ್ಸಾಂಕಿತನ ತೋರ್ಪರ 3
--------------
ಸಿರಿವತ್ಸಾಂಕಿತರು
(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
279ಹನುಮ ಭೀಮಾನಂದ ಮುನಿರಾಯ ಎನ್ನದು ಸಲಹೆಂದು ಬಿನ್ನೈಪೆವಿ ಜ್ಞಾನ ರೂಪ ವಿಜಿತಾತ್ಮ 1 280ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ ಬದಿಗನಾಗಿದ್ದು ಸಲಹುವಿ 2 281ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ ಭಯಹಾರಿ ರಣದೊಳು ಕಿ ರೀಟಿಯ ಕಾಯ್ದಿ ಧ್ವಜನಾಗಿ 3 282ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ ಪರಮೇಷ್ಟಿ 4 283ಚತುರವಿಂಶತಿ ತತ್ವ ಪತಿಗಳೊಳಗೆ ಗರುವ ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ ಕೃತ ಕೃತ್ಯನೆನಿಸೊ ಕೃಪೆಯಿಂದ 5 284ಮೂರೇಳು ಸಾವಿರದ ಆರ್ನೂರು ಮಂತ್ರವ ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ ದ್ಧಾರ ಗೈಸುವಿಯೊ ಸುಜನರ 6 285ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ ಅವರವರ ಗತಿಯ ಕೊಡುತಿಪ್ಪ 7 286 ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ ಮಿಶ್ರಗತಿಗಳನೆ ಕೊಡುತಿಪ್ಪೆ 8 287ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ ದಣಿಸುವಿಯೊ ಅವರ ದಿವಿಜೇಶ 9 288ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ ಕಾಲ ಕರ್ಮ ಅನುಸಾರ | ಅನುಸಾರವಿತ್ತು ಪಾಲಿಸುವಿ ಜಗವ ಪವಮಾನ10 289ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ ತೀಕಾಂತ ನಿನಗೆ ಬಹದೆಂತೊ 11 290 ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ ನೆಲ್ಲ ಕಾಲದಲ್ಲಿ ಸಲಹಯ್ಯ 12 291ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ ರಿನ್ನಾರು ಲೋಕದಲಿ ಜಯವಂತ 13 292ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸೊ 14 293ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ ಎಂದೆಂದು ವಿಷಯ ಚಿಂ ತನೆಯ ಕೊಡದೆನ್ನ ಸಲಹೆಂದು 15 294ತಾರತಮ್ಯ ಜ್ಞಾನ ವೈರಾಗ್ಯಭಕ್ತಿ ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು 16 295 ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ ದ್ಧರಿಸಬೇಕೆನ್ನ ಪರಮಾಪ್ತ 17 296ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ ತಸದಿ ಕಾಯೆನ್ನ ಮರುದೀಶ 18 297 ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ ವೀಯನೆಂದೆಂದು ಭಗವಂತ 19 298ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ ಭೀತಿಯನು ಬಿಡಿಸೊ ಭವ್ಯಾತ್ಮ 20 299 ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ ದ್ಬೊಮ್ಮಪದವಿಯಲಿ ಸುಖಿಸುವಿ 21 300ಮೂರೇಳು ಸಾವಿರದ ಆರುನೂರು ಹಂಸ ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ ಮೀರನ ಅಡಿಗೆ ಶರಣೆಂಬೆ 22 301ಅಂಜಿದವರಿಗೆ ವಜ್ರಪಂಜರನೆನಿಪ ಪ್ರ ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ ಭಂಜಿಸಿ ಕಾಯೊ ಬಹುರೂಪ 23 302ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ ಧವನಲ್ಲಿ ಕೊಟ್ಟು ಸಲಹಯ್ಯ24 303ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ ಸಿಂಧು ನಿ ನ್ನೊಲುಮೆಯೊಂದಿ ಹರಿಕಾಯ್ವ 25 304 ಭಾರತೀ ರಮಣ ಮದ್ಭಾರ ನಿನ್ನದು ಎನ್ನ ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ ಸಿಂಧು ಎಂದೆಂದು 26 305ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು ಶ್ವಾಸ ಜಪಮಾಡಿ ಹರಿಗೀವಿ 27 306ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ ತೀಶ ನಿನ್ನಡಿಗೆ ಶರಣೆಂಬೆ 28 307ಬಲದೇವ ನೀನೆ ಬೆಂಬಲವಾಗಿ ಇರಲು ದು ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ ಬಲು ಉಳ್ಳ ಜನರ ಜಗದೊಳು 29 308ಹಾಲಾಹಲವನುಂಡು ಪಾಲಿಸಿದೆ ಜಗವ ಕರು ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ ಲೋಲನಲಿ ಕೊಟ್ಟು ಸಲಹಯ್ಯ 30 309ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ ಪೊರೆದಂತೆ ಪೊರೆಯೆನ್ನ ನೀನಿಂತು ಕ್ಷಣದಿ ಕೃಪೆಯಿಂದ 31 310ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಸುಖವೀಯೊ ಭಾವಿ ಲೋ ಕಪಿತಾಮಹನೆ ಎನಗೆ ದಯವಾಗೊ 32 311 ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ
--------------
ಜಗನ್ನಾಥದಾಸರು
Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು
ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1 ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2 ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3
--------------
ಕನಕದಾಸ
ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು 1 ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು 2 ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು 3 ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ | ಕೊಳದ ಯಿದ್ದ ಹೀನ ನರನು 4 ಪೊಡವಿಯರಸ ಕೇಶವನ್ನ | ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |5 ಸಿರಿ | ವಿಠ್ಠಲನ ಮುಂದೆ ತಂದು | ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು6 ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ | ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು 7 ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ | ಕಂಸಾರಿ ಎನದ ಹೀನ ನರನು 8 ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು | ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು 9 ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ | ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು 10 ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ | ಸೊಲ್ಲು ಪೇಳಿ ಬಾಳದವನು 11
--------------
ವಿಜಯದಾಸ
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ರಾಗ ಭೂಲೋಕವನು ಜೈಸುತ ಬಲದಿಂದಾ ಇಂದ್ರನೇ ಮೊದಲಾದ ಬೇಗಾ ದೇವೇಂದ್ರ ನಾಸನಕೆ 1 ಉಗ್ರಶಾಸನ ಮಾಡು ಮಾಡುವಂಥಾ ಉಗ್ರಶಾಶನ ಶೀಘ್ರದಿಂ ಹರಿಗೆ 2 ಬಿಡದೆ ದಯದಿ ಅನಂತ ಇಂಥ ಕಾಲಕೆ ಎಲ್ಲಿ `ಅನಂತಾದ್ರೀಶನೆ ' ನಿಂತು ನುಡಿದನು ಅಂತರಿಕ್ಷದಲಿ 3 ರಾಗ ಅಂಜಬೇಡಿರಂಜ ಬೇಡಿರೋ ನೀವಿನ್ನು ಮೇಲೆ ಪ ಪಂಜರದೊಳಗಿರುವೆ ನಿಮ್ಮನಂಜಿಸುವನ ಭಂಜಿಸುವೆನು ಅ.ಪ ಎಂದು ದ್ವೇಷ ಮಾಡುವನೋ ಅಂದಿಗವನ ಕೊಂದÀು ಬಿಡುವೆ 1 ದ್ವೇಷವನ್ನು ಮಾಡಿದವನು ಉಳಿಯ ಮುನ್ನ ಬಹಳ ದಿವಸ ಸತ್ಯ 2 ಪ್ರಹ್ಲಾದ ಇದ್ದ ಸ್ಥಳದಲ್ಲಿರುವೆ ನಾನು 3 ವಚನ ಶ್ರೀ ಲಲಾಮನವಾಣಿ ಕೇಳಿ ಉಳಿದವನಲ್ಲ ಕಾಲ ಹಿರಣ್ಯಕನಿಂದ ಬಾಲ ಕಾಲಕಾಗುವದೆಂದು ಕಾಲವನು ನೋಡುತಲೆ ಕಾಲಗಳೆದರು ಲೋಕಪಾಲಕರು ಎಲ್ಲಾ 1 ರಾಗ ಕೈಯಲಿಕೊಟ್ಟು ನಕ್ಕು ನುಡಿದಾನು 1 ಇರಲಿ ಬುದ್ಧಿವಂತನಾಗಲಿ ಪ್ರಸಿದ್ಧನಾಗಲಿ2 ಆಗ ಪ್ರಹ್ಲಾದನ್ನ ಕರದ್ಹೇಳಿದರು ಆಹ್ಲಾದದಿಂದಾ3 ಸಂಭ್ರಮದಿಂದ ಉತ್ತಮ ಶ್ರೀ ಹರಿನಿಂದಾ ಶಾಸ್ತ್ರ ನುಡಿದರು 4 ತ್ರೈವರ್ಗಿಕ ಶಾಸ್ತ್ರ ನುಡಿದರು 5 ಪಾಠಮಾಡಲಿಲ್ಲ ಸವಿದು ಹರಿ ಚರಿತಾಮೃತವನ್ನು ಸವಿ ಇನ್ನೊಂದನರಿಯಾ 6 ನುಡಿದನು ಅವನು ನವನೀತ ಧಾಂಗಿರುವಂಥಾದು ನವವಿಧ ಭಕ್ತಿ 7 ಅವರಿಗೆ ಮತ್ತಾರಿಗಾದರು ಅವನಂಜುವನಲ್ಲಾ 8 ಅವನು ಚಲುವ ನಂತಾದ್ರೀಶನಲ್ಲೆ ಛಲ ಬಿಟ್ಟನಲ್ಲಾ 9 ವಚನ ಕೂಡಿಸಿಕೊಂಡು ಮಂದ ಮುಂದ್ಹೇಳು ಇಷ್ಟುದಿನ ಒಂದು ಬಿಡದಲೆ ಹೀಗೆ ಅಂದ ಮಾತಿಗೆ ಮತ್ತೆ ಕಂದ ಪ್ರಹ್ಲಾದ ಹೀಗೆಂದನಾಗ 1 ರಾಗ ಬರೆಯಲಿಲ್ಲ ಓದಲಿಲ್ಲವೋ ಅಪ್ಪಯ್ಯ ನಾನು ಪ ಹರಿಯ ನಿಂದಿಸುವ ಶಾಸ್ತ್ರ ಬರೆಯಲ್ಹ್ಯಾಗೆ ಓದಲ್ಹ್ಯಾಗೆ ಅ.ಪ ಹರಿಯ ಗುಣಗಳನ್ನು ಮಾಡುವೆನು ಹರಿಯಪಾದ ಹರಿಯ ವಂದಿಸುವೆ ನಿತ್ಯಾ 1 ಅಂಥಾದು ಎನ್ನ ಮನಸು ಮನಸಿಲ್ಲೆ ವಿಷಯಗಳನ್ನು ನೆನೆಸುವೆ ಸುಹರಿಯ ರೂಪಾ2 ಗೆಳೆಯನಾದ ತಾನು ಅಂತರಂಗದಲ್ಲಿ ತಾನು ನಿಂತು ಪ್ರೇರಿಸುವ ಅಂತರಂಗದಂತೆ ಇರುವೆ 3 ವಚನ ಸಿಟ್ಟು ಮಾಡುತಲಿಂಥ ಥಟ್ಟನ್ಹೇಳಿರಿಯೆನಲು ಥಟ್ಟ ನಾವಲ್ಲ ಕೊಟ್ಟವರು ಕೊಟ್ಟ ಬುದ್ಧಿಯು ಅಲ್ಲ ರಾಗ ಕೇಳಿರಿ ನೀವೆಲ್ಲ ಭಾಳ ಭಕುತಿಯಲಿ ಕೇಳಿರಯ್ಯಾ ಪ ಬಾಳ ಮಾತುಗಳೇಕೆ ಹೇಳುವೆ ಸಾರಾಂಶ ಕೇಳಿರಯ್ಯಾ ಅ.ಪ ಅಲ್ಲ ಕೇಳಿರಯ್ಯಾ ದಿಟ್ಟಾಗಿ ಶ್ರೀ ಹರಿಯು ಕೊಟ್ಟ ಬುದ್ಧಿಯು ಇದು ಕೇಳಿರಯ್ಯ 1 ಶ್ರೀ ಜಗದೀಶನಿಂದೀ ಜಗ ತಿರಗೋದು ಕೇಳಿರಯ್ಯಾ 2 ಅನಂತಾದ್ರೀಶನು ತಾನೆ ಆಡುವದು ಕೇಳಿರಯ್ಯಾ 3 ವಚನ ದೈತ್ಯ ಅಡಿಯಿಟ್ಟು ನೀತಿಯಲಿ ಕಿಡಿಗಣ್ಣಿನೊಳು ನೋಡಿ ಒಡಲೊಳಗೆ ಸಿಟ್ಟಿನಲಿ ದೃಢವಾಗಿ ಇರುವಂಥ ಭೃತ್ಯರುಗಳಿಗೆ ನುಡಿದನೀಪರಿಯ 1 ರಾಗ ಕಡಿದ್ಹಾಕಿರೀತನ ||ಪಲ್ಲ|| ಬಗೆ ದುಷ್ಟಮಾತುಗ- ವಿಷ್ಣುವ ಸೊಗಸಾಗಿ ಪೂಜಿಸಿ ನಗುತಿಪ್ಪನ 1 ಸುತನಾಗದಿದ್ದರೂ ಸುತನವನೆ ಅತಿರಭಸದಲೆ ವಿಶ್ರುತವಾಗಿ ಹುಟ್ಟಿದ ವಿತತರೋಗ ತನಗ್ಹಿತವಾಗಿರುವದೇನು 2 ನಾನಾರೀತಿಗಳಿಂದ ಹಾನಿಯ ಅನಂತಾದ್ರೀಶನ ಧ್ಯಾನದಲ್ಲಿರುವನ 3 ರಾಗ ಆಗೆಲ್ಲ ಮಂದಿಗಳನ ನೆರಸಿದಾ1 ಮುರಿದು ಅವನ ಭಯ ಬಿಡಿಸಿದಾ 2 ಹರಿಯು ಬಂದು ಉಳಿಸಿದಾ3 ಸರ್ಪಶಯನ ಬಂದು ಭಯವಾ ಬಿಡಿಸಿ4 ವಿಷವ ತಂದು ಯತ್ನದಿಂದ ಕುಡಿಸಿದಾ ಹರಿ ತಾ ವಿಷವಮೃತ ಮಾ ಡಿ ಸೌಖ್ಯ ಬಡಿಸಿದಾ 5 ಘಟ್ಟ್ಯಾಗ್ಹಿಡಿದು ಶ್ರೀಹರಿ ಸಾಕಿದಾ 6 ತಾನೆ ತಾರಿ ಸಿದಾ7 ಶೀತಾಗಿ ಸೌಖ್ಯ ಬಡಿಸದಾ 8 ನಾನಾರೀತಿಯಿಂದಲವನನು ಸರಿಸಿದಾ ಅಚ್ಯುತನಂತಾದ್ರೀಶನು ಸೌಖ್ಯ ಸುರಸಿದಾ 9 ವಚನ ಮಾಡಿದರಿವಗೆ ಇನ್ನದೇನು ಪಾಯವುಯೆಂದು ಮಾನಿತರು ಗುರುಗಳಾ ದಾನವೇಂದ್ರ ನೀನು ದೀನನಾಗುವದು ಮುಂದೆ ನೀನು ತಿಳಿಯೊ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ನಾಲ್ಕು ತೃಣಾವರ್ತ ಪ್ರಾಣಾಪಹತ್ರ್ತೇ ನಮಃ ಶ್ರೀ ಗುರುಭ್ಯೋ ನಮಃ ಪದ ರಾಗ:ದೇಶಿ ಅಟತಾಳ ಸ್ವರ ಷಡ್ಜ ಛಂದಾದುತ್ಸವ ಬರಲು ಆನಂದದಿಂದಿರುತಿಹಳು|| 1 ದ್ವಿಜವೃಂದಕ್ಕ ಭೋಜನವು|| ಕೊಂಡವರಿಂದ ಆಶೀರ್ವಾದವು|| 2 ಖಡುನಿದ್ರಿ ನೋಡಿದಳು| ಭಂಡಿಯ ಬುಡಕಮಲಗಿಸಿದಳು 3 ಮತ್ತ ಪೂಜಿಸುತಿಹÀಳು|| ಮತ್ತುಡಿತುಂಬಿದಳು|| 4 ಭಾಳಾಗಿ ರೋದನವು | ಕೇಳಲಿಲ್ಲ ಶಬ್ದವು|| 5 ಕಾಲಿಲೆ ಒದ್ದನಾಗೆ| ಬುಡಮೇಲಾಗಿಬಿದ್ದಿತಾಗೆ|| 6 ಕಡ ಶಬ್ದ ಮಾಡುತಲೆ|| ಕೊಡಗಳು ಒಡದವಲ್ಲೆ||7 ನೆರೆದು ಮಾತಾಡಿದರು| ಮುರಿದಂಥವರು ದಾರಿರದೆ ಭಂಡಿಯುತಾನೆ ಮುರದಿತು ಹ್ಯಾಗೆಂದರು|8 ಬಾಲಕರಂದರಾ ಕಾಲಕ್ಕೆ ಈ ಕೂಸಿನ ಕಾಲಿಲೇ ಒದ್ದಿತ್ತೆಂದು| ಬಾಲರನುಡಿಗೆ ಗೋಪಾಲರು ನಕ್ಕರು ಬಾಲರ ಮಾತೆನ್ಯಂದು|| 9 ಗೋಪಿ ಬಿಡದಪ್ಪಿ ಕೂಂಡಳಾಗೆ || ಬಿಡದೆ ಆಡಿಸಿದಳಾಗೆ|| 10 ಧಿಟ್ಟನಂದಗೋಪ ಥಟ್ಟನೆ ಭಂಡಿಯ ಮುಚ್ಚಿ ಪೂಜಿಸುತಿಹನು| ದಿಟ್ಟಾಗಿ ದ್ವಿಜರಿಗೆ ಕಟ್ಟ ಇಲ್ಲದಲೆ ಕೊಟ್ಟಾನು ಗೋಗಳನು||11 ಕಜ್ಜಲಾದಿಗಳಿಂದ ದುರ್ಜನದೃಷ್ಟಿ ವಿಸರ್ಜನ ಮಾಡಿಸುವಾ| ಸಜ್ಜನರಿಂದ ಸುಪೂಜ್ಯ ಮಂತ್ರಿಗಳಿಂದ ಮಾರ್ಜನ ಮಾಡಿಸುವಾ||12 ಖಳರನ್ನು ಕೊಲುವನು| ಬೆಳುವಾನಂತಾದ್ರೀಶನು||13 ಪದ್ಯ ಮಂದ ಗಮನಿಯು ತನ್ನ ಕÀಂದನ ಎತ್ತಿ ಆನಂದದಿಂದಾಡಿಸಲು ಕಂದನಾದನು ಭಾರದಿಂದ ಬೆಟ್ಟದ ಘಾಳಿಯ ರೂಪದಿಂದಲಿ ತೃಣಾವರ್ತ ಮುಂದ ಚಕ್ರದ ಕಂದನಾ ಎತ್ತಿ ತ್ವರದಿಂದ ಬಿಡದಲೆ ವೈದ ಮುಂದ ಗಗನಕ್ಕೆ|| 1 ತಿಳಿವುತಲೆ ಮರ್ತೆಲ್ಲ ಚಿಂತಿಗಳ ಮರ್ತಳಾಗೆ|| 2 ಶ್ರೀಕಾಂತನಾ ಜನನಿ ತೋಕ ಗೋವಿಂದನು ಮೊಲಿಯು ತಾ ಕುಡುತಲಿರುತಿರಲು ಆ ಕಾಲದಲ್ಯವನು ಆಕಳಿಸಿದನು ಬಾಲ ಆಕ್ಯವನ ಬಾಯ ಒಳಗೆ ತಾಕಂಡಳೆಲ್ಲ ಭೂಲೋಕ ಬಿಸ್ತರವು| ಆ ಮ್ಯಾಲಕೊಂದು ದಿನ ಆ ಮಹಾತ್ಮನು ಗರ್ಗನೇಮಿಷ್ಯಲ್ಲಿಗೆ ನಾಮಕರಣವ ಮಾಡಿ ನೇಮಿಸ್ಹೇಸರಿಟ್ಟ ಬಲರಾಮ ಕೃಷ್ಣೆಂದು|| 3 ಸಂಭ್ರಮದಿ ಮುಂದವರು ಅಂಬಿಗಾಲಿಕ್ಕಿ ಬಹಳ್ಹಬಲವತೋರಿ ಆಯತ ತಾಯಿ ಎಂಬುವರು ತೊಡಿಯ ಅವಲಂಬಿಸಲು ನೋಡುವರು ಸಂಭ್ರಮದಿ ಎತ್ರದ್ಯಕೊಂಬುವರು ಬ್ಯಾಗೆ| ಅಂಬುಜೋದ್ಭವಪಿತನು ಸ್ತಂಭಾದಿಗಳನು ಅವಲಂಬಿಸುತ ನಡಿದಾಡಿ ಹಂಬಲಿಸಿ ಮುಂದ ತನ್ನ ನಂಬಿದ್ದ ಗೆಳೆಯರನ ನಂಬಿಗೋಕುಲದಲ್ಲಿ ತುಂಬೆ ಓಡ್ಯಾಡಿದನು ಅಂಬುಜಾಕ್ಷಾ|| 4 ಮುಂದ ಬಹು ಮಂದಿಗಳ ಮಂದಿರದ ಒಳಘೋಗಿ ಸಂದೇಹ ಇಲ್ಲದಲೆ ಛಂದಾದ ಬೆಣ್ಣಿಯನು ತಿಂದಿರುವ ತಿಂದು ಇಲ್ಲಂದಿರುವ ಮನಿಯಲ್ಲಿ ಬಂದಿರುವ ಕಲಹವನು ತಂದಿರುವ ನಿತ್ಯಾ| ನಂದನಂದನವ ಒಂದೂಂದು ಅಪರಾಧವನು ನಂದ ಪತ್ನಿಗೆ ತಿಳಿಯತಿಂದು ಮನದಲಿ ಮಾಡಿ ಒಂದು ದಿನ ಎಲ್ಲಾರು ಒಂದಾಗಿ ಮನಿಮುಟ್ಟ ಬಂದು ಗೋಪಿಯರು ಹೀಗೆಂದರಾಗೆ|| 5 ಪದ, ರಾಗ :ಶಂಕರಾಭರಣ ತಾಳ ತ್ರಿವಡಿ ಅಟ್ಟುಳಿ ಕುಡುವನೋಡಮ್ಮಾ| ಈ ಕೃಷ್ಣ ನಿನ್ನ ಮಗ| ಅಟ್ಟುಳಿ ಯಥೇಷ್ಟ ಇರುವದು ಸ್ಪಷ್ಟ ನಾನಿನಗೆಷ್ಟು ಪೇಳಿದರಷ್ಟೆ ತಾ ಮತ್ತಿಷ್ಟು ಮಾಡುವಾ|| ಪ ಸಿಕ್ಕ ಮನಿಮನಿ ಹೊಕ್ಕು ನೋಡುವನೆ| ತಾ ಸಿಕ್ಕದಿರುವವ ತತ್ಕ ತುಡಗಿವ ಠಕ್ಕನಾಗಿಹನೆ ಅಕ್ಕಕೇಳ್ಬಹಳಕ್ಕರದಿ ಕೈಯಿಕ್ಕಿ ಕಡದಿಹ ಚೊಕ್ಕ ಬೆಣ್ಣಿÂಯ ಚಿಕ್ಕ ಬಾಲಕರಿಗಿಕ್ಕಿ ತಿಂಬುವ ಮಿಕ್ಕ ಬೆಣ್ಣಿಯ ಬೆಕ್ಕಿಗ್ಹಾಕುವಾ|| 1 ಅಡಗಿ ಮನಿಯಲಿ ಅಡಗಿ ಕೊಂಡಿರುವಾ | ಅಲ್ಲಿರುವ ಭಾಂಡವು ಬುಡವು ಮೇಲಾಗ್ಯಾಡಕಲೇರಿಸುವಾ| ಅಡಿಗಳನು ಅಲ್ಲಿಡುತ ನೆಲೆವಿನಲಿಡುವ ಪಾಲ್ಮಸರ್ಕುಡುವ ಗೆಳೆಯರಿಗಿಡುವ ತೀರಲು ಬಿಡದೆ ಮತ್ತಾ ಗಡಗಿಯನು ನಿಂತು ನಗುವನಂತಾದ್ರೀಶನು 2 ಆರ್ಯಾ ಪರಿ ಗೋಪಿ ಯಶೋದಿಯು ತಾ ನಕ್ಕು|| ಕೋಪಿಸಲಿಲ್ಲವು ವ್ಯಾಪಕನಾಗಿಹ ಆ ಪುತ್ರನ ಸ್ನೇಹದಿ ಸಿಕ್ಕು|| 1 ಪದ್ಯ ಒಂದು ದಿನದಲಿ ಸ್ನೇಹದಿಂದ ರಾಮಾದಿಗಳು ಛಂದಾಗಿ ಕೊಡಿ ಆನಂದ ದಿಂದಾಡುತಿರೆ ಮುಂದವರು ತಾಯಿಯ ಮುಂಧೇಳಿದರು ನಿನ್ನ ಕಂದ ಕೃಷ್ಣನು ಮಣ್ಣು ತಿಂದನೆಂದು ಅಂದ ಮಾತನು ಕೇಳಿ ಮಂದಗಮನಿಯು ತಾನು ಕಂದನಾ ಕೈ ಹಿಡಿದು ಮುಂದಕ್ಕೆ ಕರದು ಭಯದಿಂದ ಇರುವವನ ಕಣ್ಲಿಂದ ನೋಡುತಲೆ ಅಂದಳೀಪರಿಯು ಹಿತದಿಂದ ಬಣ್ಣೆಸುತಾ|| 1 ಪದ, ರಾಗ:ಶಂಕರಾಭರಣ ತಾಳ:ತ್ರಿವಿಡಿ ಮಣ್ಣ್ಯಾಕ ತಿಂಬುವಿಯೋ| ಅಪ್ಪಯ್ಯಾ ಕೃಷ್ಣಾ| ಮಣ್ಣ್ಯಾಕ ತಿಂಬುವಿ ಉಣ್ಣಂದರವಲ್ಲಿ|| ಪ ಅನ್ನದೊಳಗ ಸವಿ ಬೆಣ್ಣಿಯೊಳಗ ಸವಿ ಹಣ್ಣಿನೊಳಗ ಸವಿ ಮಣ್ಣೇನು ಸವಿ ಕೃಷ್ಣ|| 1 ಮಣ್ಣುತಿಂದಿಹನೆಂದು ಸಣ್ಣವರ್ಹೇಳೋರು ಕಣ್ಣತಿ ಕಂಡು ನಿಮ್ಮಣ್ಣ ಹೇಳುವ ಮತ್ತ|| 2 ಸಣ್ಣಕ್ಕಿ ಅನ್ನವು ಬೆಣ್ಣೆ ಕಾಶಿದ ತುಪ್ಪ ಉಣ್ಣೊ ಮತ್ತಿಷ್ಟು ನಮ್ಮಣ್ಣಾನಂತಾದ್ರೀಶಾ|| 3 ಆರ್ಯಾ ಜನನಿಯ ನುಡಿ ಸಜ್ಜನರೊಡಿಯನು ತಾ ಅನುಸರಿಸುತ ಮನಸಿಗೆ ತಂದು| ಜನನ ರಹಿತ ಆ ಜನನಿಗೆ ನುಡದನು ಅನುಮಾನವಿಲ್ಲದೆ ಹೀಗೆಂದ|| 1 ಪದ, ರಾಗ:ಶಂಕರಾಭರಣ ಮಣ್ಣು ತಿಂದಿಲ್ಲವÀಮ್ಮ| ತಿಂದಿಲ್ಲ ಮಣ್ಣು ಎಂದ್ಯಂದಿಲ್ಲವಮ್ಮ ಪ ಬಟ್ಟಹಚ್ಚಿಕೈಲೆ ಮುಟ್ಟಿಲ್ಲವಮ್ಮಾ| ಧಿಟ್ಟಾಗಿ ಹೆಜ್ಜೆ ಹೊರಗಿಟ್ಟಿಲ್ಲವಮ್ಮಾ|| 1 ಎಲ್ಲೆ ಹೋಗದೆ ನಾ ಇಲ್ಲಿದ್ದೇನಮ್ಮಾ | ಎಲ್ಲಾರು ಈ ಪರಿ ಸುಳ್ಳಾಡೋರಮ್ಮ|| 2 ಆಣಿ ಕಾಣಮ್ಮ|| 3 ಪದ್ಯ ಕಾಯಜನಪಿತ ತನ್ನ ಬಾಯಲೀ ಪರಿಯನಲು ತಾಯಿ ಆ ಕಾಲದಲಿ ಬಾಯಿನೋಡುವೆನೆನಲು ತಾಯಿ ನೀ ನೋಡೆಂದು ಆ ಯಶೋದಿಯ ಮುಂದ ಆ ಎಂದು ಬಾಯದೆಗೆದ ಆಯತಾಕ್ಷಾ| ಬಾಯವಳಗೆ ಕಂಡಳಾ ತಾಯಿ ಲೋಕಗಳೆಲ್ಲಾ ಬಾಯಿವಳಗ ಗೋಕುಲವು ತಾಯಿಇರುವಳಲ್ಲೆ ಭ್ರಮಿಸಿದಳು ಮಾಯವೊ ಇದು ಸ್ವಪ್ನ ಪ್ರಾಯವೂ ಬುದ್ಧಿ ವ್ಯವಸಾಯವೊ ಎಂದು|| 1 ಲಗಬಗಿಯ ಜ್ಞಾನಚಕ್ಷುಗಳಿಂದ ನೋಡಿ ರೋಮಗಳುಬ್ಬಿ ಗಂಟಲವು ಬಿಗಿದು ಸಂತೋಷದಲಿ ಮಗನಲ್ಲ ಇವ ಸರ್ವ ಜಗದೊಡೆಯನೆಂತೆಂದು ಬಗಿಬಗಿಯ ಸ್ತುತಿಮಾಡಿ ಕೈಮುಗಿದಳಾಗೆ | ಜಗದೀಶ ಮತ್ತ ಲಗಬಗಿಯ ಮೋಹಪಾಶ ಬಿಗದು ಕಟ್ಟಿದನಾಗೆ ಮಗನೆಂದು ತಿಳಿದಾಕಿ ಬಿಗಿದಪ್ಪಿ ಮುದ್ದಾಡಿ ಹಗಲಿರುಳು ತಾನು ಕಾಲವನು ಕಳದಳಾ ಮಗನಾ ಸಂಭ್ರಮದಿ|| 2 ಖಡುನಂದಗೋಪನಾ ಮಡದಿ ಒಂದಿನದಲಿ ಬಿಡದೆ ದಾಸಿಯಕಿಲ್ಲ ಬಿಡಿಗೆಲಸ ಮಾಡುತಿರೆ ಖಡು ಹರುಷದಲಿ ದೂಸರು ಕಡವುವಳು ತಾನೇವ ನಡುವೆ ಕೃಷ್ಣನ ಲೀತಿ ನುಡುವುತಿಹಳು| ಧಡಿಯ ಪೀತಾಂಬರವು ಶಡಗರದಿ ಉಟ್ಟಿಹಳು ಮಡಿಯ ಕುಪ್ಪಸವು ಬಿಗಧಿಡದು ತೊಳ್ಳಿಹಳು ಆ ಮಡಿಯ ಕುಪ್ಪಸದೊಳಗ ಅಡಗಿರುವ ಶುಚವೆರಡು ಬಿಡದೆ ಮಗನಲಿ ಸ್ನೇಹ ತೊಡಕಿ ತೊರದಿವಹು|| 3 ನಡವಿನೊಡ್ಯಾಣ ಬಡನಡುವಿನಲಿ ಇಟ್ಟಿಹಳು ಕಡಗ ಶಂಕಣ ಕೈಲೆ ಕಡಗೋಲಧಗ್ಗವನು ಹಿಡಿದೆಳೆದು ಶ್ರಮದಿಂದ ಕಡುವಂಥ ಕಾಲದಲಿ ನಡುಗುತಿಹವೆರಡೂ ಕುಚ\ ಬಡನಡವು ಬಳಕುವುದು ಬಿಡದೆ ಮುಖದಲ್ಲಿ ಬೆವರು ಬಿಡುವುದದು ತುರಬಿನಲಿ ಮುಡಿದ ಮಲ್ಲಿಗಿ ಹೂವು ಸಡಲುತಿಹವು| ಗಡಬಡಿಸಿ ಕೃಷ್ಣ ಮಲಿ ಕುಡಿಯ ಬೇಕೆನುತ ಆ ಕಡುವ ಕಾಲಕ ಬಂದು ದೃಢವಾಗಿ ಕಡಗೋಲು ಹಿಡಿದು ಮಾತಾಡಿದನು| ಕಡುವ ಈ ಕೆಲಸ ನೀ ಬಿಡು ಅಮ್ಮ ಎನಗಮ್ಮಿ ಕೂಡು ಬ್ಯಾಗ ಎಂದು|| 4 ಬಿಟ್ಟು ಆ ಕೆಲಸವನು ಥಟ್ಟನೆ ಆ ಮಗನ ಘಟ್ಟ್ಯಪ್ಪಿಕೂಂಡು ಮುದ್ದಿಟ್ಡು ಮುಖ ನೋಡುತಲೆ ದಿಟ್ಟಾಗಿ ತೂಡೆಯ ಮ್ಯಾಲಿಟ್ಟು ಬಹುಸಂಭ್ರಮ ಬಟ್ಟು ತೊರದಿಹÀ ಮೊಲಿಯ ಕಟ್ಟಕಡಿಗ್ಯಾಪಾತ್ರ ಬಿಡ್ಹೊರಗ ಛಲ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಭಿಮಾನ ಕಳೆವಂಥ | ಸುಲಭ ಮಾರ್ಗವನೇ |ಪ್ರಭುವೆ ಹರಿ ನಿನ್ನ ಸ್ಮøತಿ | ಸರ್ಬದಲಿ ಈಯೋ ಪ ಕರ್ಮ | ಸೃಷ್ಟಿ ನಡೆಸುವಲಿ |ಇಷ್ಟು ತತ್ವೇಶರನು | ಸುಷ್ಠು ಕರ್ಮವ ನಡೆಸೆಭ್ರಷ್ಟ ಎನ್ನಿಂದೆಂಬ | ಕರ್ತೃತ್ವದಲ್ಲಿರುವಾ 1 ಕರ್ಮ ಕರ್ಮ ನಾಮಕನೇ 2 ತನುನಿಷ್ಠ ತತ್ವೇಶರ | ಗಣಿತದ ಕರ್ಮಗಳತನು ತಮ್ಮ ಇಂದ್ರಿಯದಿ | ಅನುನಯದಿ ಗೈಯ್ಯೋ |ಎನ ತನುವು ಇಂದ್ರಿಯವೆ | ಕಾರಣವು ಎಂಬಂಥಹೀನ ಕಾರಕ ಸ್ವಾಮ್ಯ | ಮಾನವೆಂಬಂಥಾ 3 ಹಲವು ತತ್ವರು ದೇಹ | ದಲಿ ನಿಂತು ಕರ್ಮಗಳಹಲವು ಗೈಯುತ ಹರಿಗೆ | ಒಲಿದು ಅರ್ಪಿಸುತಿರೇ |ಫಲವು ಹಂಚಿಪ ಹರಿಯ | ಫಲಸ್ವಾಮ್ಯ ತಿಳಿಯದಿಹತಿಳಿಗೇಡಿ ಯೆನ್ನ ಭ್ರಮ | ಒಲಿದು ನೀ ಕಳೆಯೋ 4 ಅಹಿಕ ಪಾರತ್ರಿಕವು | ವಿಹಿತ ಸುಖವೆರಡರಲಿಅಹಿಕ ದುಃಖದ ವಿರಲು | ಬಹುದು ಮೋಕ್ಷೆರಿ ಬಾ |ಅಹಿತ ಮತಿ ಕಳೆಯುತ | ಶ್ರೀಹರಿಯೆ ನಿನ್ವೊಲಿಮೆಮಹಿತ ಮೋಕ್ಷದವೆಂಬ | ವಿಹಿತ ಮತಿ ಈ ಯೋ 5 ವಿಷಯದಲಿ ಮೈ ಮೆರೆತು | ವಿಷಯೋಪ ಭೋಗಗಳೆಅಸಮ ಪುರುಷಾರ್ಥಗಳ | ಲೇಸು ಪ್ರದವೆಂಬಾ |ವಿಷಯಾಭಿಮಾನಗಳು | ನಶಿಪಂತೆ ನೀ ಮಾಡಿವಿಷಯಾದಿಗಳಿಗೆಲ್ಲ | ಈಶ ನೀವೆನೆ ತಿಳಿಸೋ 6 ಕಕ್ಕಸದ ಅಭಿಮಾನ | ಷಟ್ಕಗಳ ನೀ ಕಳೆದುಅಕ್ಕರದಿ ತಾಯ್ತನ್ನ | ಮಕ್ಕಳನು ಪೊರೆವಂತೇ |ಲೆಕ್ಕಿಸದಲೆನ್ನಯ | ಲಕ್ಷ ಅಪರಾಧಗಳ ಕ್ಷಮಿಸಿಚೊಕ್ಕ ಗುರು ಗೋವಿಂದ | ವಿಠ್ಠಲನೆ ಸಲಹೋ 7
--------------
ಗುರುಗೋವಿಂದವಿಠಲರು
ಅರಸಕೇಳಲೈ ಸರಸಿಯೊಳಗೆ ತಾ ಸರಸವಾಡುತಾ ಕರಿವರನಿರೆÉ ಪರಮ ಭೀಕರ ಪ್ರಬಲ ನಕ್ರವು ಕರಿಯ ಕಾಲನು ಪಿಡಿದು ಸೆಳೆಯಿತು 1 ಚಕಿತನಾಗುತ ಚತುರ ದ್ವಿಪವರ ಮಕರಿ ವದನದಿಂ ಮುಕ್ತನಾಗಲು ಸಕಲ ಸಾಹಸಗೈದನಕ್ಕಟ ವಿಕಲವಾಯಿತಾ ಯತ್ನವೆಲ್ಲವು 2 ನಕ್ರ ಸೆಳೆತವು ಪ್ರಬಲವಾಗಲು ದಿಕ್ಕು ತೋರದೆ ಕೂಗಿಕೊಂಡನು ಮಿಕ್ಕ ಗಜಗಳು ಕೂಡಿ ಬಿಡಿಸಲು ಶಕ್ತಿಮೀರಿ ಸಾಹಸಗೈದುವು 3 ಆನೆಗಳು ಒಂದೆಡೆ ಎಳೆಯಲು ನೆಗಳು ಒಂದೆಡೆ ಎಳೆಯಲು ಏನನೆಂಬೆ ಹೋರಾಟವೀ ಪರಿ ಏನು ನಡೆದರೂ ವಿಫಲವಾಯಿತು 4 ಹಿಂಡು ಬಳಗಗಳೆಲ್ಲ ನೋಡುತ ದಂಡೆ ಮೇಲೆ ತಾವ್ ನಿಂತುಬಿಟ್ಟವು ಜೊಂಡು ಹುಲ್ಲು ತಾ ಪಿಡಿದು ತನ್ನಯ ಶುಂಡಾಲ ಗೆದ್ದನು 5 ನಕ್ರಬಾಧೆಯು ಬಿಡಿಸಲಾರಿಗೂ ಶಕ್ಯವಾಗದೆ ಹೋಯಿತಕ್ಕಟ ದಿಕ್ಕುಗೆಟ್ಟು ತಾ ದೈನ್ಯದಿಂದಲೇ ದುಃಖಪಡುತ ಭೋರಿಟ್ಟು ಕೂಗಿದ 6 ಉದಿಸಿತಾಗ ಸುಜ್ಞಾನವವನೊಳು ಸುದತಿ ಮಕ್ಕಳು ಸಲಹರೆಂಬುದು ಬದಲು ಬಯಸದ ಬಂಧು ಕರಿಗಿರಿ ಸದನನೆಂದು ತಾನಂಬಿ ನೆನೆದನು 7
--------------
ವರಾವಾಣಿರಾಮರಾಯದಾಸರು
ಅರಿತ ಗುರುಗಳನೀಗ ಹುಡುಕಿ ಹೊಂದು ಎಚ್ಚರಿಂದುಮರುಳ ಗುರುಗಳನೀಗ ಸೇರೆ ನರಕ ತಪ್ಪದೋ ಪ ಒಳ್ಳೆ ನಾವೆಯೊಳು ಕಲ್ಲು ಹಾಕಿ ನದಿಯನು ದಾಟಿಪುದುಕಲ್ಲಿಗೆ ಕಲ್ಲು ಕಟ್ಟಿ ಮುಂದೆ ನಡೆಯದು ಮುಳುಗಿಹೋಗುವುದೋ1 ಜಾರುವವನ ಕಾಲು ಹಿಡಿಯೆ ಜಾರುತ ನೀನು ಬೀಳುವೆಪೋರ ಗುರುವ ನಿಂತು ಸೇರೆ ಕೆಟ್ಟುಹೋಗುವೆ ಭವಕೆ ಸೇರುವೆ2 ತಾನು ಮೂರ್ಖ ಮೂರ್ಖನ ಕೂಡಲು ಇಹುದು ಕೇಡು ಮುಂದೆಜ್ಞಾನಿ ಚಿದಾನಂದ ಬಗಳೆ ಚರಣ ಹೊಂದೆ ಮುಕ್ತಿಯ ಅಂದೇ3
--------------
ಚಿದಾನಂದ ಅವಧೂತರು