ಒಟ್ಟು 58 ಕಡೆಗಳಲ್ಲಿ , 26 ದಾಸರು , 54 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ಕೆಟ್ಟವರಿಲ್ಲವೊ, ರಂಗೈಯನನಂಬದೆ ಕೆಟ್ಟರೆ ಕೆಡಲಿ ಪ ಅಖಿಳ ಲೋಕೇಶನಕಂಬು ಕಂಧರ ಕೃಷ್ಣ ಕರುಣಾ ಸಾಗರನಅ.ಪ ತÀರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದಕರಿರಾಜನೊಬ್ಬ ಸಾಕ್ಷಿ ಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವ ರಹಿತನ ದೊರೆಯೂರು ಯೇರಬಂದ ಪುತ್ರನನ್ನುಕೊರಳಿÀ್ಹಡಿದ್ಹೊರಡಿಸಲು ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ಸಿರಿ
--------------
ವ್ಯಾಸರಾಯರು
ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ ಪ ನಂಬಿದ ಜನರಿಗೆ - ಬೆಂಬಲ ತಾನಾಗಿ ತುಂಬಿ ಕೊಡುವರನ್ನ ಅ.ಪ ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ - ಜಲವ ನಿತ್ತವರನ್ನ 1 ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು - ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖ - ವಿತ್ತು ಪೊರೆದಿಹರನ್ನಾ 2 ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ - ಘಟನಾ ಮಾಡುವ ನಮ್ಮ ಪಟು ಗುರುವರ ಹೃ - ತ್ಪುಟ ದಿರುವೋರನ್ನ 3
--------------
ಗುರುಜಗನ್ನಾಥದಾಸರು
ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೆ ಕಾಮಿಸಿ ನಿರುತವು ಕೆಡುವೆ ಪ ಸ್ವರೂಪವರಿಯದೆ ನೀ ಕರೆಕರೆ ಪಡುವೆ 1 ಭ್ರಾಂತಿಯಪಡುತಲಿ ಬಾಯಿ ಬಾಯಿ ಬಿಡುವೆ 2 ನಾಯಂದದಿ ಪರಸ್ತ್ರೀಯರ ಬಯಸುತ ಹೇಯನೆನಿಸಿಕೊಂಡು ನೊಯ್ಯುವೆಯಲ್ಲದೆ 3 ಮಲಮೂತ್ರದಿ ನೀ ಮಲಗಿರಲಿಲ್ಲವೇ ಮರೆತು ಯೌವ್ವನ ಗರ್ವದಲಿ ತಲೆ ತೂಗುತ4 ಪರಿಪರಿವಿಧದಲಿ ಭಕ್ತರ ಪಾಲಿಪ ಗುರುರಾಮವಿಠಲನ ಚರಣವ ನಂಬದೆ 5
--------------
ಗುರುರಾಮವಿಠಲ
ಪೊಂದಿ ಪ್ರಾರ್ಥಪೆನಯ್ಯಾ ಪ. ಬಂಧನದೊಳು ನೊಂದೆನಯ್ಯ ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ ಕುಂದುಗಳೆಣಿಸದಿರಯ್ಯಾ ಗುರು ಗಂಧವಾಹನ ವಜ್ರಕಾಯಾ ಅ.ಪ ನಾನು ನನ್ನದು ಎಂಬ ಮದ ಬಿಡಿಸೊ ಜ್ಞಾನ ಭಕ್ತಿ ವಿರಕ್ತಿ ಕೊಡಿಸೊ ಜಾನಕಿಪತಿ ಪದದಿ ಮನ ನಿಲಿಸೊ ಸಾನುರಾಗದಿ ಸತತ ಉದ್ಧರಿಸೊ 1 ನಿನ್ನ ದಯದಿಂ ರವಿಜ ಭಯ ಕಳೆದಾ ನಿನ್ನ ವಲಿಮೆಲಿ ಪಾರ್ಥ ಜಯ ಪಡೆದಾ ನಿನ್ನ ನಂಬದೆ ರಾವಣನು ತಾ ಮಡಿದಾ2 ಶ್ರೀಮದಾನಂದತೀರ್ಥ ಮಧ್ವೇಶಾ ಶಾಮಸುಂದರ ಸ್ವಾಮಿ ನಿಜದಾಸಾ ಕಾವಿತಾರ್ಥಗಳಿತ್ತು ಪೊರೆ ಅನಿ ಶಾ 3
--------------
ಶಾಮಸುಂದರ ವಿಠಲ
ಬರುವುದೆಲ್ಲವು ಬಂದು ತೀರಿ ಹೋಗಲಿ ಹರಿ ನಿನ್ನ ಸ್ಮರಣೆಯೆ ಸ್ಥಿರವಾಗಿರಲಿ ಪ ಕಳ್ಳನೆಂದು ಎನ್ನ ಮರಕೆ ಬಿಗಿಯಲಿ ಸುಳ್ಳನೆಂದು ಮೋರೆ ಮೇಲೆ ಉಗುಳಲಿ ತಳ್ಳಿಕೋರನೆಂದು ಎಳದಾಡಿ ಒದಿಲಿ ಎಲ್ಲಿನೋಡಿದಲ್ಲಿ ಹಾಸ್ಯಮಾಡಲಿ 1 ಡಂಭಕನಿವನೆಂದು ಬಿಡದೆ ನಿಂದಿಸಲಿ ನಂಬದೆ ಜನರೆನಗೆ ಇಂಬುಗೊಡದಿರಲಿ ಕುಂಭಿನಿಪರು ಎನ್ನ ಮುನಿದು ನೋಡಲಿ ಇಂಬು ಸಿಗದೆ ನಾನು ತೊಳಲಿ ಬಳಲಲಿ 2 ಸತಿಸುತರೆನ್ನನು ಬಿಟ್ಟು ಹೋಗಲಿ ಕ್ಷಿತಿಯೊಳೆನ್ನನು ಯಾರು ಸೇರದಂತಿರಲಿ ಪತಿತಪಾವನ ಸಿರಿಪತಿ ಶ್ರೀರಾಮನ ಪೂರ್ಣ ಹಿತವೊಂದೆ ಎನ್ನ ಮೇಲೆ ಬಿಡದಂತಿರಲಿ 3
--------------
ರಾಮದಾಸರು
ಬಾದರಾಯಣನ ಪಾದವ ನಂಬದೆ ಪ ತುಂಬಿ ತುಳುಕುತಿರೆ ವದನದಿ ಮಂತ್ರವ ಪಠಿಸಿ ಫಲವೇನು ಉದರ ಪೋಷಣೆಗಾಗಿಯೆ ಮಾಡುವ ಕರ್ಮ ನೋಡಿ ನಗುವರು 1 ಕಂಣನು ಮುಚ್ಚಿ ಮೌನದಿ ಕುಳಿತು ಪರ ಹೆಂಣಿನ ರೂಪವ ಮನದೊಳು ನೆನೆದು ಚಿಂಣತನದಿ ಅವಳ ಬೆರೆಯಲು ಯೋಚಿಸಿ ಹೊನ್ನು ಕೂಡಿಸುವ ಪರಿಯದಲ್ಲದೆ 2 ಗುಟ್ಟಲಿ ಪೂಜಿಪ ಗುರುತನು ಅರಿಯದೆ ಪಟ್ಟೆ ನಾಮವ ಹಚ್ಚಿ ಮಡಿಗಳನು ದಿಟ್ಟ ರಂಗೇಶವಿಠಲನ ಮರೆದು 3
--------------
ರಂಗೇಶವಿಠಲದಾಸರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ಪ ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು ಹಸ್ತು ಬಂದವನು ತುತ್ತನ್ನ ಕೇಳೆ ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ1 ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ ಆದರದಲಿ ಸ್ವಲ್ಪ ಸ್ಥಳವ ಕೇಳಿ ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು2 ಆವದೊಲ್ಲೆವೆಂದು ಆಡುವರು ನಿತ್ಯದಲಿ ಕಾವ ಕರುಣಿ ನೀನೆಂದು ತಿಳಿದು ಸಿರಿ ವಿಜಯವಿಠ್ಠಲ ನಿನ್ನ ಇಂದು 3
--------------
ವಿಜಯದಾಸ
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾಂಗ ಮನ್ನಿಸು ತಪ್ಪನು ರಂಗನಾಥ ರಕ್ಷಿಸೈ ತಂದೆ ಯೆನ್ನನು ಪ ಅಮಿತ ಕಮಲ ರವಿತನಾಗದ ಮನುಜನೇಕೆ1 ಕಣ್ಣು ಇಲ್ಲದ ರೂಪು ಯಾಕೆ | ರಂಗನಾಥ ಹೊನ್ನು ಇಲ್ಲದ ಬಾಳು ಯಾತಕೆ | ಮುನ್ನ ಮೂಗು ಇಲ್ಲದ ಮೊಗವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು 2 ದಾನವಿಲ್ಲದ ಧನವಿದೇತಕೆ | ರಂಗನಾಥ ಜ್ಞಾನವಿಲ್ಲದ ವಿದ್ಯೆ ಯಾತಕೆ ಆಣೆಯಿಲ್ಲದ ಅರಸು ತಾನು ಅಡವಿಪಾಲು ಆದರೇನು ದೀನಬಂಧು ನಿನ್ನ ನಂಬದ ಮಾನಹೀನ ಮನುಜನೇಕೆ 3 ಮಕ್ಕಳಿಲ್ಲದ ಮನೆಯು ಯಾತಕೆ | ರಂಗನಾಥ ಅಕ್ಕರಿಲ್ಲದ ಊಟ ಯಾತಕೆ ಸೊಕ್ಕಿ ನಡೆವ ಬಂಟನೇಕೆ ಮಿಕ್ಕು ಮೀರ್ವ ಶಿಷ್ಯನೇಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕು ನರ ಜನ್ಮವೇಕೆ ? 4 ಕಾಕು ಮಾಡಿಯೆ ವೈಕುಂಠ ನಗರದೊಡೆಯ ನಾರಸಿಂಹ ಏಕಭಕ್ತಿಯಿಂದಲಿರುವೆ ಏಕೆ ಕೈಯ ಬಿಡುವೆ ದೊರೆಯೆ 5
--------------
ಅನ್ಯದಾಸರು
ಮನವೆ ಶ್ರೀಗುರು ಪಾದವ ನಂಬು ನಿನಗಲ್ಯಾಹುದು ಘನ ಸುಖದಿಂಬು 1 ಅನುದಿನ ನೋಡಾ ನಂಬದೆ ನಿಜವನು ನೀ ಕೆಡಬ್ಯಾಡ 2 ಬ್ಯಾಡೆಂಬುದು ಈ ಮಾತನೆ ಕೇಳು ಬೇಡದೆ ಬಯಸದೆ ನಿಜದಲಿ ಬಾಳು 3 ಬಾಳುವದೀಪರಿ ಜನದಲಿ ಲೇಸು ತಿಳಿಯದೆ ಬಯಸುವದ್ಯಾತಕೆ ಸೋಸು 4 ಸೋಸ್ಹಿಡಿದರ ಬೇಕಾಹುದು ಜನ್ಮ ಕರ್ಮ 5 ಭವ ಬಂಧ ಮರ್ಮವ ತಿಳಿಯದವನೆ ತಾ ಅಂಧ 6 ಅಂಧಗ ತಿಳಿಯದು ಆತ್ಮದ ಗೂಢ ಸಂಧಿಸಿ ಬೀಳಲು ವಿಷದಲಿ ಮೂಢ 7 ಮೂಢಗೆಲ್ಲಿಹ್ಯ ಆತ್ಮದ ವಿಚಾರ ನೋಡುವ ನೋಟವು ಇದು ಬಲುದೂರ 8 ದೂರಕೇ ನೀ ದೂರಾಗಿಬ್ಯಾಡ ಅರಿಯಲು ತನ್ನೊಳು ಸಾರವೆ ನೋಡಾ 9 ನೋಡುವುದಿದು ಗುರುಙÁ್ಞನದ ಗುಟ್ಟು ಆಡಿದ ಅನುಭವ ಮಾತಿಗೆ ಮುಟ್ಟು 10 ಮುಟ್ಟಿದ ಖೂನವು ಮಿಸುಕಲಿ ಬ್ಯಾಡ ಘಟ್ಯಾಗಿ ನಿಜಘನ ಬೆರೆ ಗಾಢಾ 11 ಗಾಢಾಗಿಹುದು ನಿಜಗುರು ಙÁ್ಞನ ಮಾಡುವ ಧ್ಯಾನಕೆ ಅನುಸಂಧಾನ 12 ಉನ್ಮನದಲಿ ತಿಳಿವುದು ಗುರುಮುಖ 13 ಗುರು ಮುಖದಲಿ ಬೆಳಗಾಹುದು ಪೂರ್ಣ ಬೀರುವ ಪ್ರಭೆ ಸದ್ಗುರು ಕರುಣ 14 ಕರುಣದ ಸಾಗರ ಗುರುವರ ಮೂರ್ತಿ ಇರುಳ್ಹಗಲೆ ಕೊಂಡಾಡುವೆ ಕೀರ್ತಿ 15 ಕೀರ್ತಿಯ ಕೊಂಡಾಡುವನೀ ಮಹಿಪತಿ ಸಾರ್ಥಕವಿದು ಅನುಭವ ಮನೆಮೂರ್ತಿ 16
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೆ ಸದಾ ಚಿಂತಿಸುವೆ ವನಜನಾಭನ ನಂಬದೆ ಪ ಕೊನೆಗಾಣುವದೇನೊ ಫಲವೇನೊ ಅ.ಪ ಮದಮತ್ಸರ ಕಾಮಕ್ರೋಧ ಲೋ- ಭದಿ ಮಮತಾಸ್ಪದವಾಗಿ ಮರತೋಗಿ 1 ಗುರುಹಿರಿಯರು ನೋಡಿ ವಂದಿಸದೆ ನೀ ಮರುಳಾಟಗಳಾಡಿ ಪರರನಪಹಾಸಿಸಿ ಪಾಪಿ ಇವನೆನಿಸಿ ನರಕಕ್ಕೆ ಗುರಿಯಾಗುವೆ ವೋ ಚಪಲ ಮನವೇ 2 ವೇದಮಾರ್ಗವ ಬಿಟ್ಟು ಯಾವಾಗಲು ದು- ರ್ವಾದಗಳನು ಕೊಟ್ಟು ಆದಿಯನುತಲಿ ಅನಾದಿಯನುತಲಿ ಮುದಗೂಡಿ ಅತಿಭಾಷೆಗಳಾಡಿ 3 ತತ್ವ ತಿಳಿಯಬೇಕು ಜ್ಞಾನವೆಂಬೋ ಸಂ- ಪತ್ತಿನೊಳಿರು ಸಾಕು ನಿತ್ಯಾನಿತ್ಯವಿವೇಕ ಶ್ಯೂನವಾಗಿ ನಿತ್ಯ ಕೆಡಬೇಡೆಲವೋ ಚಪಲಾ 4 ತ್ರಿವಿಧ ಜೀ- ವರೊಳಿರುವನು ಮುಕುಂದ ಗುರುರಾಮವಿಠಲ ನಿಜ ಶರಣರಿಗೆಲ್ಲ ಪರಮಪದವಿ ಈವಾ ದೇವದೇವ 5
--------------
ಗುರುರಾಮವಿಠಲ
ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ. ಯಾಕೆ ಪಂಥ ಲೋಕೈಕನಾಥ ದಿ- ವಾಕರಕೋಟಿಪ್ರಭಾಕರ ತೇಜನೇ ಅ.ಪ. ಪೂರ್ವಾರ್ಜಿತ ಕರ್ಮದಿಂದಲಿ ಇರ್ವೆನು ನರಜನ್ಮ ಧರಿಸುತ ಗರ್ವದಿಂದ ಗಜರಾಜನಂತೆ ಮತಿ ಮರ್ವೆಯಾಯ್ತು ನಿನ್ನೋರ್ವನ ನಂಬದೆ ಗರ್ವಮದೋನ್ಮತ್ತದಿ ನಡೆದೆನು ಉರ್ವಿಯೊಳೀ ತೆರದಿ ಇದ್ದೆನಾದರೂ ಸರ್ವಥಾ ಈಗ ನಿಗರ್ವಿಯಾದೆಯಹ ಪರ್ವತವಾಸ ಸುಪರ್ವಾಣ ವಂದಿತ 1 ಯಾರಿಗಳವಲ್ಲ ಮಾಯಾ ಕಾರ ಮಮತೆ ಸಲ್ಲ ಸಂತತ ಸಾರಸಾಕ್ಷ ಸಂಸಾರಾರ್ಣವದಿಂದ ಪಾರಗೈದು ಕರುಣಾರಸ ಸುರಿವುದು ನತ ಮಮ ಕಾರ ಹೋಯ್ತೆ ಕಡೆಗೆ ಏನಿದು ಭಾರಿ ಭಾರಿ ಶ್ರುತಿ ಸಾರುವುದೈ ದಯ ವಾರಿಧಿ ನೀನಿರಲ್ಯಾರಿಗುಸುರುವುದು 2 ಬಾಲತ್ವದ ಬಲೆಗೆ ದ್ರವ್ಯದ ಶೀಲವಿತ್ತೆ ಎನಗೆ ಆದರೂ ಪಾಲಿಸುವರೆ ನಿನಗಾಲಸ್ಯವೆ ಕರು- ಸಾಲದೆರಡು ಮೂರು ನಿನ್ನಯ ಮೂಲ ಸಹಿತ ತೋರು ಮುನಿಕುಲ ಪಾಲ ಶ್ರೀಲಕ್ಷ್ಮೀನಾರಾಯಣ ಗುಣ ಶೀಲ ಕಾರ್ಕಳ ನಗರಾಲಯವಾಸನೇ 3
--------------
ತುಪಾಕಿ ವೆಂಕಟರಮಣಾಚಾರ್ಯ