ಒಟ್ಟು 54 ಕಡೆಗಳಲ್ಲಿ , 15 ದಾಸರು , 50 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಾನಿಧೇ ಶ್ರೀ ರಾಘವೇಂದ್ರ ಗುರುವೇ ಕಾಮಿತ ಸುರತರುವೇ ಪ ಭವ - ಭಯಾ ಹರಿಸಿ ತವ ಪಾದ - ಪಯೋಜ ಯುಗ ತೋರೋ ಅ.ಪ ಧರಾತಳದಿ ಸುರ - ತರೂ ಸುರಭಿವರ ತೆರಾದಿ ಕಾಮಿತ - ಕರಾದು ಮೆರೆಯೋ 1 ಗಡಾನೆ ತವ ಪದ - ಜಡಾಜ ಭಜಿಸುವ ಧೃಡಾವೆ ಕೊಡೊ ಎ - ನ್ನೊಡೇಯ ನೀನೇ 2 ಎಷ್ಟೂ ಪೇಳಲಿ ಎನ್ನ - ಕಷ್ಟರಾಶಿಗಳ್ಯತಿ - ಶ್ರೇಷ್ಠಾನೆ ಕಳಿಯೊ ಉ - ತ್ಕ್ರಷ್ಠಾ ಮಹಿಮ ಗುರೋ 3 ಮೋಕ್ಷಾದ ಎನ್ನನು - ವೀಕ್ಷಿಸಿ ಈಗಲೆ ಸುಕ್ಷೇಮ ನೀಡುತ್ತಾ - ಪೇಕ್ಷಾಪೂರ್ತಿಸೊ ಗುರೋ 4 ದಾತಾನೆ ಎನ್ನಯ - ಮಾತಾನು ಲಾಲಿಸೊ ನೀತಾ ಗುರು ಜಗ -ನ್ನಾಥಾ ವಿಠಲ ಪ್ರಿಯ 5
--------------
ಗುರುಜಗನ್ನಾಥದಾಸರು
ದುರಿತ ತ್ಯಜಿಸಿರೋ ಪರಮ ಸಾಧ ಐಕೂರು ನರಸಿಂಹಾರ್ಯರ ಪ ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ 1 ತರುಳತನದಲಿ | ಸದ್ಗುರುವರೇಣ್ಯರ ಚರಣ ಸೇವಿಸಿ ಶಾಸ್ತ್ರವರಿತ ಧೀರರ 2 ಸತತ ನಂಬಿದ ಶಿಷ್ಯತತಿಗೆ ಹರಿಗುಣ ಹಿತದಿ ಸುರಿದ | ಅಪ್ರತಿಮ ಮಹಿಮರ 3 ಪವನ ಶಾಸ್ತ್ರವೇದ | ಕವನವೆನ್ನುತ ವಿವರಿಸುತ್ತಲಿ ತನ್ನವರ ಪೊರೆದರ 4 ಏನು ಬಂದರು ಮನದಿ ಶ್ರೀನಿವಾಸನ ಧ್ಯಾನ ಬಿಡದಿಹ | ಮಹಾನುಭಾವರ 5 ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ 6 ಭುವನ ಮೇಲಿಹ ಇವರು ದಿವಿ ಭವಾಂಶರು ರವಿ ನಿಭಾಂಗರು | ಜವನ ಭವಣೆ | ತರಿದರು 7 ಇವರು ಪೇಳುವ ವಚನ ಶ್ರವವಣಗೈಯಲು ಶೌರಿ ಭುವನ ಪಡೆವರು 8 ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ ದ್ಯಂತ ಬಲ್ಲರು ಪರಮ ಶಾಂತಿ ಶೀಲರು 9 ಮೌನಧ್ಯಾನದ ಜ್ಞಾನ ಖೂನ ತೋರದೆ ಹೀನರಂದದಿ ಹೊರಗೆ ಕಾಣಿಸುವರು 10 ಬಾಲಕೃಷ್ಣನ ದಿವ್ಯಲೀಲೆ ಚರಿತೆಯ ಕಾಲ ಕಳೆಯರು 11 ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ ಇಂದಿರೇಶನೆ ತಾನೆ ತಂದ ನೆಂಬರು 12 ಪಾದ ಪೊಂದಿದ ಜನಕೆ | ಮೋದಗರೆವರು ವ್ಯಾಧಿ ಕಳೆದರು ವೇದ ಬೋಧಿಸಿದರು 13 ವಿವಿಧ ವೈಭವ ಮೇಣ್ | ಕುವರ ಭಾಗ್ಯವ ವಿವಿಧ ಭೋಗವ ಶಿಷ್ಯ ನಿವಹಕಿತ್ತರು 14 ನಿತ್ಯ ಪೇಳುತ ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು 15 ಕಾಮವಾಸನೆ ಸುಟ್ಟು | ನೇಮ ಪೂರ್ವಕ ರಾಮನೊಲಿಮೆಯ | ವಿಶ್ವಪ್ರೇಮವೆಂಬರು 16 ಈ ಸುಮಹಿಮರ | ಸದುಪದೇಶ ಕೊಳ್ಳಲು ಕ್ಲೇಶಬಾರದು | ಯಮನು ಘಾಸೆÉಗೊಳಿಸನು 17 ನಿರಯ ಪಾತ್ರರು 18 ಇನಿತುಪಾಸನೆಗೈವ ಘುನ ಮಹಾತ್ಮರ ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ 19 ಅರುಣನುದಿಯದಿ | ಇವರ ಚರಣ ಕಮಲವ ಸ್ಮರಣ ಮಾಡಲು | ಹರಿಯ ಕರುಣವಾಹದು 20 ಸಾಮಜವರ ವರದ ಶಾಮಸುಂದರನ ಪ್ರೇಮಪಾತ್ರ ನಿಷ್ಕಾಮ ಪೂರ್ಣರು 21
--------------
ಶಾಮಸುಂದರ ವಿಠಲ
ದೃಷ್ಟಾಂತವಾಗಿದೆಯೈ ಪ ಕೃಷ್ಣಾ ನೀಮಾಡಿರ್ಪ ಸೃಷ್ಟ್ಯಾದಿಗಳೆಲ್ಲ ಅ.ಪ ಜನರು ನಡೆವದೀಗ ನೋಡಲ್ ಮನಕೇ ಬಂದಂತೆ ಕಾರ್ಯಂಗಳೊಡಗೂಡಲ್ 1 ಧೃಡವಾಗಿಯೇ ತೋರ್ಪುದು ನಡೆನುಡಿ ಮೊದಲಾದ ನರರು ಮಾಳ್ಪುದೆಲ್ಲ 2 ಚತುರಾವಸ್ಥೆಗಳಿಂದಲಿ ಹಿತವೇಬೇಕೆಂದರು ಅಹಿತವಾಗುತಿರುವುದು 3 ತನ್ನಿಂತಾನೆ ನಡೆವದು ಭಿನ್ನಾಭಿನ್ನವಾಗಿ ಭೇದ ಪ್ರಪಂಚವು 4 ಗುರುರಾಮವಿಠಲಾ ನೀ ಮಾಡಿರ್ಪ ಕಷ್ಟಗಳು 5
--------------
ಗುರುರಾಮವಿಠಲ
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ನಾನೇನಿನಗಂದೆನೋ ಬಿಡದೆ ಪವ ಮಾನ ಪಾಲಿಸೋ ಎನ್ನನು ಪ ದೀನರ ಪಾಲಿಪ ದಾನವಾಂತಕ ಎನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೊ ಅ.ಪ ಶರಧಿ ಲಂಘಿಸಿ ರಘು ವರನ ಕುಶಲವಾರ್ತೆಧರೆಜಾತೆಗೆ ಅರುಹಿ ದಶಾಶ್ಯನ ಪುರವ ದಹಿಸಿದಂಥ ಪರಮಸಮರ್ಥನೆಂದರಿತ ಕೊಂಡಾಡಿದೆನಲ್ಲದೆ || ತರು ಚರುವರನೆಂದಿನೆ | ಶಿರದಿ ಕಲ್ಲು ಧರಿಸಿ ತಂದವನೆಂದಿನೆ | ಬ್ರಹ್ಮಾಸ್ತ್ರಕೆ ಭರದಿ ಸಿಲ್ಕಿದಿ ಎಂದೆನೆ ಭಕ್ತೀಲಿ ಭಾವಿ ಸರಸಿಜಾಸ್ರನನೆಂದು ಸ್ಮರಿಸಿದೆನಲ್ಲದೆ 1 ಕೃತಯುಗದಲಿ ಕುಂತಿಸುತನಾಗಿ ಜನಿಸುತ ಪತಿ ಪಿತನಂಘ್ರಿ ಭಜಿಸುತಲಿ ಕ್ಷಿತಿ ಭಾರಕೆ ಖಳ ತತಿಯ ಸಂಹರಿಸಿದಾ ಪ್ರತಿಮಲ್ಲ ನೀನೆಂದು ಸ್ತುತಿಸಿದೆ ನಲ್ಲದೆ ಖತಿವಂತ ನೀನೆಂದಿನೆ ದುನುಜಾತೆಗೆ ಪತಿಯಾದವನೆಂದಿನೆ ಅವಳ ಕೂಡಿ ಸುತನ ಪೆತ್ತವನೆಂದನೆ ಯಾಮಿನಿಯಲಿ ಸತಿಯೆನಿನದವ ನೆಂದೆನೇ ನಿನ್ನನು ಬಿಟ್ಟು ಗತಿನಮಗಿಲ್ಲೆಂದು | ನುತಿಸಿದೆ ನಲ್ಲದೆ 2 ನಡುಮನಿಸುತನಾ ಪೊಡವಿಯೊಳಗೆ ಪುಟ್ಟ ಉಡುಪಿ ಕ್ಷೇತ್ರದಿ ಶಾಮಸಂದರನ ಧೃಡವಾಗಿ ಸ್ಥಾವಿಸಿ | ಜಡ ಕುಮಾಯ್ಗಳಗೆದ್ದ ಸಡಗರ ಮುನಿಸುತನಾಗಿ ಪೊಡೆವಿಯೊಳಗೆ ಪುಟ್ಟ ಉಡುಪಿ ಕ್ಷೇತ್ರದಿ ಶಾಮಸುಂದರನ ಧೃಡವಾಗಿ ಸ್ಥಾಪಿಸಿ | ಜಡ ಕುಮಾಯ್ಗಳಗೆದ್ದ ಸಡಗರ ಮುನಿ ಎಂದು ನುಡಿದೆನಲ್ಲದೆ ಹುರಳಿಮೆದ್ದ ಬಡದ್ವಿಜ ಶಿಶುವೇದಿನೆ | ಎತ್ತಿನ ಬಾಲ ಪಿಡಿದೋಡಿ ದವನೆಂದಿನೆ | ಬೆಸರದಿಂದ ಮಡದಿ ಬಿಟ್ಟವ ನೆಂದಿನೆ ಕಡಿಗೆ ಬೋರಿ ಗಿಡವ ಸೇರಿದಿ ತೋರೆಂದು ಅಡಿಗಳಿಗೆರಗಿದೆ ನಲ್ಲದೆ 3
--------------
ಶಾಮಸುಂದರ ವಿಠಲ
ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ ನರಹರಿ ಜ್ವರಹರ ಘೋರವ್ಯಾಧಿಯ ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ ಮೃಡನೆ ಪರನು ಎಂದು ನುಡಿದ ಕಶಿಪುವಿನ ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ ಧೃಡ ಭಕುತಗೆ ಬಂದೆಡರ ಬಿಡಿಸಿದೆ1 ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ ದೃಷ್ಟಿಯಿಂದ ಅನಿಷ್ಟ ನಿವಾರಣ ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ- ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2 ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ ವೇಂಕಟೇಶಾತ್ಮಕ ಭೀಕರ ರೂಪ ಶಂಕರಾಂತರ್ಗತ ಸಂಕರುಷಣ ಮೂರ್ತೇ ಮಂಕುಹರಿಸಿ ಪಾದಪಂಕಜ ತೋರಯ್ಯ 3
--------------
ಉರಗಾದ್ರಿವಾಸವಿಠಲದಾಸರು
ಪದ್ಯ ಅಥಃ ಪ್ರಥÀಮೋಧ್ಯಾಯ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ || ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ ಚಾರು ಕಥೆಯಾ ಪ ಸುರಮುಖಿವಂದಿತ ಸರಸಿಜ ಭವಪಿತ ಶರಧಿ ಕರಿವರದಾ | ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು ವರವ ಪಾಲಿಸು ದಯದಿಂದ 1 ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ ಪುರಹರ ವಂದಿತೆ ಖ್ಯಾತೆ || ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ ಗರಿಯೆ ವರವ ಸುಖದಾತೆ 2 ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ ನೆರೆನಂಬಿದೆನು ಮುದಿಂದ || ಹರಿಸುಚರಿತ್ರವು ಅರುಹಲು ಎನ್ನಗೆ ಸ್ಥಿರ ಬುದ್ಧಿಕೊಡು ವಾಯುಕಂದ 3 ಗಿರಿಜೇಶ ಶಚಿಪತಿ ಸುರತತಿಗೆರಗುವೆ ಪರಮ ಸುಭಕ್ತಿ ಪೂರ್ವಕದಿ || ಹರಿದಾಸ ವರ್ಗಕೆ ಶುಭನೀಡಲೆನಗೆಂದು ಶಿರಬಾಗಿ ಬೇಡುವೆ ಮನದಿ 4 ಘನತರ ನೈಮಿಷವನದೊಳು ವಾಸಿಪ ಮುನಿ ಸೂತನಲ್ಲಿಗೆ ಬಂದು | ವಿನಯದಲಿ ವಿಜ್ಞಾಪನ ಮಾಡಿಕೊಂಡರು ಶೌನಕಾದಿಗಳೆಲ್ಲ ನಿಂದು 5 ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ | ವ್ರತದಾವದ್ಹೇಳಿರೆನುತ || ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು ಕಥಿಸಿದನಾಗೆತಿ ಸೂತಾ 6 ಛಂದದಿ ಕೇಳಿರಿ ಒಂದೆ ಮನದಿ ಈಗಾ | ನಂದದಿ ನಾರದ ತಾನೂ || ಹಿಂದಕ್ಕೆ ಈತೆರ ನಂದನ ಗೋ ವಿಂದನ ಪ್ರಶ್ನೆ ಮಾಡಿದನೂ 7 ಕಾರುಣ್ಯದಿಂದಲಿ ಸಾರಸೋದ್ಭವಕು | ಮಾರ ನಾರದ ಮುನಿವರಗೆ || ಶೌರಿ ಪೇಳಿದ ಕಥೆ ಸಾಧುವೆ ಮೋದದಿ ನಿಮಗೆ 8 ವರಸುರ ಲೋಕಾದಿ ಚರಿಸುತ್ತನಾರದ | ಹರುಷದಿ ಭೂಮಿಗೆ ಬರಲು || ನರರತಿ ಕಷ್ಟದಿ ಮರುಗುವದಂ ನೋಡಿ | ಪೊರೆಟರು ಹರಿಗ್ಹೇಳಿ ಕೊಳಲು 9 ಪದುಮಜ ಸುತ ನಾರದ ಮುನಿ ವೇಗದಿ | ವಿದುಧರ ವಂದಿತನಾದ || ಯದುಪನಲ್ಲಿಗೆ ಬಂದು ಮುದಮನದಿಂದಲಿ | ವಿಧ ವಿಧದಲಿ ಸ್ತುತಿಗೈದಾ 10 ಅಗಣಿತ ಮಹಿಮನೆ ತ್ರಿಗೂಣ ವರ್ಜಿತ ತ್ರಿವಿಕ್ರಮನೆ || ಪೊಗಳುವ ತವ ಪದಯುಗಕೆರಗುತ ನಾನು ಜಗದುತ್ವತ್ತಿ ಕಾರಣನೆ 11 ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ | ಮಗನ ಮಗಳ ಮದುವ್ಯಾದಿ || ಮಗನ ಮಗನ ವರಪಡೆದಾತನ ಜೈಸಿ ಮಗನ ಮಗನ ನೀನು ತಂದಿ 12 ಸಿಂಧುಜರಿಪ್ರಸಖ ನಂದನ ಕೊಂದನ | ತಂದೆಯ ತಂದೆಯಾ ಸುತೆಯಾ || ನಂದಿನಿಯಳಿಗಾಗಿ ನೊಂದಿದಿ ನೀ ನರ ರಂದದಿ ಕವಿಗಣಗೇಯಾ 13 ಘನ್ನ ಮಹಿಮ ನಿನ್ನ ಅನಂತ ಚರಿಯವ ಬಣ್ಣಿಸ ಬಲ್ಲೆನೆ ದೇವಾ || ಪನ್ನಗರಾಜಗಾಗಣ್ಯವಾಗಿಪ್ಪುದು ಮನ್ನಿಸು ಎನ್ನ ಬಿನ್ನಪವಾ 14 ಬಾ ಮುದ್ದು ನಾರದನೆ ಬಾ ಮುನಿವರ್ಯನೆ ಬಾ ಮೂರು ಭುವನ ಸಂಚಾರಿ ನೇಮದಿಂದಲಿ ನಿನ್ನ ಕಾಮಿತ ಪೇಳೀಗ ಪ್ರೇಂದಿಂದಲಿ ವೀಣಾಧಾರಿ 15 ಮುರಹರ ನಿನ್ನಗೆ ಅರಿಯದ ವಾರ್ತೆಯು | ಧರಣಿ ತ್ರಯದಿ ಉಂಟೇನೋ || ನರರತಿ ಕಷ್ಟದಿ ಮರುಗುತಲಿಪ್ಪರು ಹರಿಪೇಳಿದಕುಪಾಯವನು 16 ಸತ್ಯಲೋಕೇಶನ ಪುತ್ರನೆ ನಿನ್ನಯ | ಉತ್ತಮ ಪ್ರಶ್ನೆಗೆ ನಾನು || ಚಿತ್ತೈಸು ಮುನಿವರ ನೀನು 17 ನಾರದ ಶ್ರೀ ಸತ್ಯನಾರಾಯಣ ವ್ರತ ಧಾರುಣಿಯೊಳಗಿನ ಜನರು ಆರು ತಮ್ಮ ಪರಿವಾರದಿಂದಲಿ ಗೈಯ್ಯೆ ಭೂರಿ ಸೌಖ್ಯದಿ ಮೆರೆವರೋ 18 ದೇವನೆ ಈ ನಿನ್ನ ಸೇವಕನಿಗೆ ಸತ್ಯ || ದೇವನೆ ವ್ರತದ ವಿಧಾನ || ಸಾವಧಾನದಿ ಪೇಳು ಭಾವ ಜಪಿತ ಏಕೋ ಭಾವದಿ ಕೇಳುವೆ ಮುನ್ನ 19 ಬುಧನುತ ನಾರದ ಘೃತಕ್ಷೀರ ಶರ್ಕರ | ಕದಳಿ ಗೋಧೂ ಮಾದಿಗಳನು || ಪದುಳದಿಂದಲಿ ಸುಪಾಕಗೈದು ಮೇಣ್ ವಿಧ ವಿಧ ಪಕ್ವಾದಿಗಳನು 20 ಪರಮ ಭಕ್ತಿಯಲಿಂದ ಪರಿವಾರ ಸಹಿತದಿ ಧರುಣಿಸುರನ ಪರಿಮುಖದಿ ತುರಧೂಳಿಕಾಲದಿ ಪರಿಪರಿ ಪೂಜಿಸಿ ಹರಿಗರ್ಪಿಸಲಿ ಬೇಕು ಮುದದಿ 21 ಈರೀತಿಗೈವರ ಕೋರಿಕೆಯನು ದಯ | ವಾರಿಧಿ ಶಾಮಸುಂದರನೂ || ನಿತ್ಯ ವಾರಿಜಸಹಿತದಿ ಸೇರಿ ತಾ ನಲಿದಾಡುತಿಹನೂ 22 ಇತಿ ಪ್ರಥಮೋಧ್ಯಾಯ ಸಂಪೂರ್ಣಂ ಅಥಃ ದ್ವಿತೀಯೋಧ್ಯಾಯಃ ಅತಿ ಮೋದದಿಂದಲಿ ಮತಿಯುತರೆ ಈಗ ಪೃಥವಿಯೊಳಗೆ | ಪೂರ್ವದಲಿ || ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ ಕಥಿಸುವೆ ಹಿತದಿಂದ ಕೇಳಿ 1 ಕಾಶಿಯೊಳಗೆ ಒಬ್ಬ ಭೂಸುರ ಬಡತನ ಕ್ಲೇಶದಿ ವಾಸಿಸುವದನು || ಶ್ರೀಶ ಅವನ ನೋಡಿ ಪೋಷಿಸಲು ವೃದ್ಧ ವೇಷದಿ ಮಾತನಾಡಿಸಿದನು 2 ಭೂತವಕದಿ ವಿಪ್ರನಾಥನೆ ತವ ಮುಖ ಪಾಥೋಜ ಬಾಡಿದ ಬಗೆಯಾ ಈ ತೆರ ದುಃಖದಿ ನೀ ತಿರಗುವಂಥ ಮಾತು ಪ್ರೀತಿಲಿ ಪೇಳಯ್ಯಾ 3 ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ | ಸ್ಥಿತಿಯಾ ಲಾಲಿಸು ಮನದಿಂದಾ || ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ ಅತಿ ಬಡತನ ದೆಶೆಯಿಂದಾ 4 ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ | ಥಟ್ಟನೆ ನೀ ಪೇಳುಪಾಯಾ || ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ ಮುಟ್ಟಿ ಸೇವಿಪೆ ಮಹರಾಯಾ 5 ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ | ಕಡಲಜಪತಿ ಕವಿಗೇಯಾ || ಕಡುದಯದಲಿ ಪೇಳ್ದ ಬಡತನ ಕಳೆಯುವ ಪೊಡೆವಿಯೊಳಿದ್ದ ಉಪಾಯಾ 6 ಸಾರುವೆ ಕೇಳಯ್ಯ ಮಾರಜನಕ ನಿಜ | ನಾರಾಯಣನ ಸು ವ್ರತವಾ ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು ದಾರಿದ್ರ್ಯ ಹರಿ ದೂರಗೈವಾ 7 ಮುದುಕನ ನುಡಿಕೇಳಿ ಮುದಮನದಿಂದಲಿ ಸದನಕ್ಕೆ ದ್ವಿಜ ಬಂದು ತಾನೂ ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ ವಿಧ ವಿಧದಲಿ ಮಾಡಿದನೂ 8 ಹರುಷದಿ ಈ ರೀತಿ ಧರಣಿ ದೇವನು ಮಾಡೆ | ಶಿರಿಸತಿ ಸುತರಿಂದ ತಾನೂ || ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ ಪಥ ಹಿಡಿದನೂ 9 ಸೂತರೆ ಅತ್ಯಂತ ಕೌತುಕವಾಗಿಹ ಧಾತ ಪಿತನ ಈ ವ್ರತವು ಭೂತಳದೊಳಗೆಂತು ಖ್ಯಾತಿಯ ಪೊಂದಿತು ಪ್ರೀತಿಲಿ ಪೇಳಿರಿ ನೀವು 10 ಸತಿಸುತ ಪರಿವಾರ ಸಹಿತಾ ಅತಿ ಹಿತದಲಿ ಮನೋರಥ ಪೂರೈಸುವ ಈ ವ್ರತ ಮಾಡುತಿರಲಾಗತ್ವರಿತಾ 11 ಚರಣನೋರ್ವನು ಶಿರದಿ ಕಾಷ್ಟಭಾರವ ಧರಿಸಿ ಮಾರಲು ಬೀದಿಗಳಲಿ ಬರುತಿರೆ ಮಾರ್ಗದಿ ಧರಣಿದೇವನೆ ಮಂ ದಿರ ಕಂಡ ಪರಮ ಮೋದದಲಿ 12 ಶ್ರೀನಿವಾಸನ ಘನಧ್ಯಾನದಿಂರ್ಚಿಪ ಕ್ಷೋಣಿ ಸುರನ ನೋಡಿ ಜವದಿ ಮಾನವ ಕೇಳಿದ ಏನಿದೆಂದೆನು ತಲಾಕ್ಷಣದಿ 13 ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು ಶುದ್ಧ ಮನದಿ ಚರಣೋಧ್ಭವ ಗೈದನಿ ಶುದ್ಧನ ಪಾದಾರ್ಚನವಾ 14 ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ ಪರಮ ಸೌಜನ್ಯದಿ ಇದ್ದು ಕೊನೆಗೆ ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ ಶಿರಿಶಾಮಸುಂದರನ ಪುರಿಗೆ 15 ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ ಅಥಾಃತೃತೀಯೋಧ್ಯಾಯ ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ ಪೆಸರಾದ ಇನ್ನೊಂದು ಕಥೆಯಾ ಉಸುರುವೆ ಕೇಳ್ವರ ವ್ಯಸನವು ಪರಿಹಾರ ಪುಸಿಯಲ್ಲಿ ಈ ನುಡಿ ಖರಿಯಾ 1 ವರ ಉಲ್ಕಮುಖನೆಂಬ ಧರಣೀಶನೋರ್ವನು ಹರುಚದಿಂದಲಿ ತನ್ನ ಹಿತದಾ ಶರಧಿ ತೀರದಿ ನಿಜ ಹರಿಯನ್ನು ಪೂಜಿಸುತಿರ್ದ 2 ಕ್ಷೋಣಿಪಾಲಕನಿದ್ದ ಆ ನದಿತೀರದಿ | ವಾಣಿಜ್ಯ ಮಧುನಾಯಕನೂ || ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ ಧಾನವೇನೆಂದು ಕೇಳಿದ 3 ಭೂಮಿಪಾಲಕ ಮಧುನಾಮಕ ವೈಶ್ಯನ ಆ ಮೃದು ನುಡಿಕೇಳಿ ಜವದಿ ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ ನೇಮವ ಪೇಳ್ವ ಸಮ್ಮುದದಿ 4 ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ ಲಕ್ಕುಮಿಯುತ ಮುದದಿಂದ ಮಕ್ಕಳೆನಗಾಗಲು ಚಕ್ರಿಯ ಸುವೃತ ಅಕ್ಕರದಲಿ ಮಾಳ್ಪೆನೆಂದ 5 ಈ ರೀತಿ ಧೃಡ ಬ್ಯಾಪಾರಿಯು ತಾಗೈದು ಶೌರಿ ಪ್ರಸಾದ ಸ್ವೀಕರಿಸಿ || ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ ನಾರಿಯ ಮುಂದೆ ವಿಸ್ತರಿಸಿ 6 ಸತಿ ಶಿರೋಮಣಿ ಲೀಲಾ ವತಿಯು ತನ್ನ ಮಂದಿರದಿ || ಪತಿ ಕರುಣದಿ ಗರ್ಭ ವತಿ ತಾನಾದಳಾಕ್ಷಣದಿ 7 ಹತ್ತನೆ ಮಾಸದ ಉತ್ತಮ ಪುತ್ರಿಯ ಪೆತ್ತಳು ಆ ನಾರಿ ತಾನೂ || ಅತ್ಯಂತ ಸನ್ಮುದ ಚಿತ್ತನಾಗಿ ಸಾಧು ಮರ್ತನು ಹರಿವ್ರತವನ್ನು 8 ಸತಿ ಲೀಲಾವತಿ ತನ್ನ ಪತಿಗಭಿವಂದಿಸಿ ನಿಂದು || ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು ಪತಿ ವ್ರತ ಮಾಡಬೇಕೆಂದು 9 ಸುದತಿಯ ನುಡಿಕೇಳಿ ಮಧುನಾಮಕ ಸಾಧು ವಿಧಿಸಿದ ಸುತೆ ಕಲಾವತಿಯಾ || ಮದುವೆಯ ಕಾಲದಿ ಉದುಪನರ್ಚಿಪೆನೆಂದು ಮುದದಿಂದ ಪೇಳ್ದನುಪಾಯಾ 10 ಪರಿಪರಿ ಸೌಖ್ಯದಿಂದಿರುತಿರೆ ವೈಶನ ತರುಳೆಗೆ ಪೂರ್ಣಯೌವನವು | ಬರಲು ಮಾಡಿದ ತಕ್ಕವರ ತಂದು ಲಗ್ನವ ಮರೆತು ಬಿಟ್ಟನು ಹರಿವ್ರತವಾ 11 ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ ಜಾಮಾತನೊಡನೆ ವ್ಯಾಪಾರಾ ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ ಆ ಮಹಾಪುರ ರತ್ನಸಾರಾ&ಟಿbs
--------------
ಶಾಮಸುಂದರ ವಿಠಲ
ಪಾದ ಪದುಮವ ನಿತ್ಯದಿ | ಭಜಿಸುವರ ಸತ್ಯಲೋಕೇಶನ ಪೆತ್ತ ಪರಮಾತ್ಮನು | ನಿತ್ಯದಿ ಕರಪಿಡಿವ ತಿಳಿ ಮಾನವಾ ಪ ರವಿಸನ್ನಿಭಾಂಗರು | ಭುವಿ ದಿವಿಜೇಂದ್ರರು | ಕವಿಗಣ ಸನ್ನುತರು | ಭವದೂರರು | ಭುವನದೋಳ್ ಧೃಡಚಿತ್ತದವರಾಗಿ | ತಪದಲ್ಲಿ ಧ್ರುವನಂತೆ ತೋರುವರು ಮಹಾತ್ಮರು1 ಭುಜಗಾಧಿಪನಯಂತೆ ಯೋಗ ಸುಸಾಧಕರು ಭುಜಗ ಭೂಷಣನಂತೆ ವಿಜಯಾನಂದದಿ | ದಿಗ್ವಿಜಯ ಶಾಲಿಗಳಿವರು 2 ನೇಮಪೂರ್ವಕವಾಗಿ | ನಿತ್ಯದಲ್ಲಿ ಶಾಮಸುಂದರ ಸೀತಾ ರಾಮನರ್ಚಿಸುತಲಿ | ಭೂಮಿಯೋಳು ಮೆರೆದಿಹರು ಸುಧೀರರು 3
--------------
ಶಾಮಸುಂದರ ವಿಠಲ
ಪಾರ್ವತೀ - ಶರ್ವನ ಜಾಯೆ - ಪಾರ್ವತೀ ಪ ದಿವಿಜ ಧ್ವಂಸ | ಶರ್ವಾದಿ ದಿವಿಜೇಡ್ಯಸಾರ್ವಭೌಮನ ಸ್ಮøತಿ | ಸಾರ್ವಕಾಲದಲೀಯೆ ಅ.ಪ. ಪತಿ ಮಾರ ಜನನಿ ತಾಯೇ 1 ಸುರಪ ಗಣಪರ ಮಾತೆ ಶರ್ವೇ | ನಿನ್ನವರ್ಣಿಸಿ ಪೊಗಳಲೆನ್ನಳವೇ | ನೀನೆಕರುಣದಿ ಪೇಳಿಸೆ ಬರೆವೇ | ಎನ್ನಉರುತರ ಅಜ್ಞಾನವ ಬಲ್ಲೆ | ಆಹಕರಣಗಳೊಳು ನಿಂತು | ನಿರುತ ಪ್ರೇರಕಳಾಗಿಹರಿಗುಣ ದ್ಯೋತಕ | ಸ್ಮರಣೆ ಸುಖವ ನೀಯೆ 2 ಮೃಡನಂತರಂಗಳೆ ತಾಯೇ | ಎನ್ನಕಡು ಕರುಣದಿಂದಲಿ ಕಾಯೇ | ಇನ್ನುಧೃಡ ಹರಿ ಭಕುತಿಯ ನೀಯೆ | ಅನ್ಯಬೇಡೆನು ನಾ ಪಾರ್ವತೀಯೇ | ಆಹಮೃಡವಂದ್ಯ ಗುರು ಗೋ | ವಿಂದ ವಿಠ್ಠಲನನಡು ಹೃದಯದಿ ನೋಳ್ಪ | ಧೃಡಮತಿಯನು ಕೊಡೆ 3
--------------
ಗುರುಗೋವಿಂದವಿಠಲರು
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪ್ರಾಣಪತಿ ಶ್ರೀನಿವಾಸ ವಿಠಲ ಪೊರೆ ಇವಳ ಪ ಆನತೇಷ್ಟ ಪ್ರದನು | ನೀನೆಂದು ಬಿನ್ನವಿಪೆಜ್ಞಾನ ಗಮ್ಯನೆ ದೇವ | ನೀನಾಗಿ ಪೊರೆಯೋ ಅ.ಪ. ಮಾನ್ಯ ಮಾನದ ಹರಿಯೆ | ಕನ್ಯೆಗಭಯದನಾಗಿಪುಣ್ಯ ಜೀವಿಯ ಸಲಹೆ | ಬಿನ್ನೈಪೆ ನಿನಗೇ |ನಿನ್ಹೊರತು ಜಗದೊಳಗೆ | ಅನ್ಯರನು ಕಾಣೆ ಕಾರುಣ್ಯ ನಿಧಿ ದಾನವಾ | ರಣ್ಯ ದಾವನಲಾ 1 ಭಾವಿಭಾರತಿ ಪತಿಯ | ಸೇವೆಯನೆ ಕೊಂಬಹಯಗ್ರೀವನೆ ನಿನ್ನ ಪದ | ತಾವರೆಯ ದಾಸ್ಯಾ |ಓದಿ ಬೇಡುತ್ತಿಹಳ | ತೀವರದಿ ಕೈ ಪಿಡಿಯೆದೇವ ನಿನ್ನಡಿಗಾನು | ಧಾವಿಸುತ ಬೇಡ್ವೇ 2 ಮಾರುತಾಂತರ್ಗತನೆ | ತಾರತಮ್ಯ ಜ್ಞಾನಮೂರೆರಡು ಭೇದಗಳ | ದಾರಿಯನೆ ತೋರೀ |ಸಾರತಮ ನೀನು ನಿ | ಸ್ಸಾರ ಜಗವೆಂತೆಂಬ ಚಾರುಮತಿಯನೆ ಇತ್ತು | ಪಾರು ಮಾಡಿವಳಾ 3 ವಿಷಯಗಳ ಅನುಭವದಿ | ಎಸೆವ ನಿನ್ನಯ ಸ್ಮರಣೆಹಸನಾಗಿ ನೀನಿತ್ತು | ಕೆಸರ ಕಳೆಯೋ |ಕುಶಲ ಕ್ಲೇಶಾದಿ ನಿ | ನ್ನೊಶವೆಂಬ ಧೃಡವಿರಲಿಬಿಸಜಾಕ್ಷ ಶ್ರೀರಾಮ | ಪ್ರಸರಿಸೋ ಜ್ಞಾನ 4 ದೇವ ದೇವೇಶ ಗುರು | ಸಾರ್ವಬೌಮರ ಪಾಲಶ್ರೀವರನೆ ಸರ್ವಜ್ಞ | ದುರ್ವಿಬಾವ್ಯಾ |ನೀವೊಲಿಯುತಿವಳಿನ್ನು | ಸಾರ್ವ ಕಾಲದಿ ಪೊರೆಯೊಗೋವಳರ ಪಾಲ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಬದರೀನಾಥ ವಿಠಲ | ಪೊರೆಯ ಬೇಕಿವನಾ ಪ ಸದಯ ಹೃದಯನೆ ಇವಗೆ | ಮುದವನ್ನೆ ಬೀರತಲಿಹದುಳದಲಿ ಕೈಪಿಡಿದು | ಕಾಪಾಡೊ ಹರಿಯೇ ಅ.ಪ. ಮೇಶ ಮಧ್ವೇಶ ಮಹಿ | ದಾಸ ನಿನ್ನಡಿ ದಾಸ್ಯಆಸಿಸುವ ಬಾಲಕನ | ಆಶೆಯನು ಸಲಿಸೀ |ಕ್ಲೇಶಗಳ ಪರಿಹರಿಸಿ | ನೀ ಸಲಹೆ ಭಿನ್ನವಿಪೆಹೇಸದಾಗತಿ ವಂದ್ಯ | ವಾಸವಾನುಜನೇ 1 ಲೌಕಿಕದ ಸಂಪತ್ತು | ಬೇಕಾದ ವರವಿತ್ತುಕಾಕು ಸಂಗವ ಕೊಡದೆ | ನೀಕಾಯ ಬೇಕೋ ||ತೋಕನಿಗೆ ನಿನ್ನಲ್ಲಿ | ಭಕುತಿ ಜ್ಞಾನಗಳಿತ್ತುಲೌಕಿಕವನೆಲ್ಲ ವೈ | ದೀಕ ವೆಂದೆನಿಸೋ 2 ಮೋದ ಕೊಡು ಸತತಾ 3 ಸ್ವಾಪದಲಿ ಮತ್ಸ್ಯಾದಿ | ರೂಪಗಳ ಸ್ತೋತ್ರವೆನೆವ್ಯಾಪಾರ ಮಾಡಿಸುತ | ಕೃಪೆ ತೋರ್ದೆ ಹರಿಯೇವೈಪರೀತ್ಸದ ಮನದ ಚಾಪಲ್ಯ ಕಳೆಯಲ್ಕೆಸ್ವಾಪದಲಿ ಸೂಚಿಸುತ | ನೀಪೇಳ್ದೆ ಧೃಡವಾ 4 ಪತಿ ವಿನುತ | ನಾರಾಯಣಾಖ್ಯ ಹರಿಘೋರಭವ ಕೂಪಾರ | ಪಾರಗಾಣಿಸುವಾಭಾರ ನಿನ್ನದು ಎಂದು | ಪೋರನ್ನ ಒಪ್ಪಿಸಿಹೆಧೀರ ಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಬರಿದೆ ಕಾಲಕಳಿಯ ಬ್ಯಾಡ ದುರುಳ ಮಾನವಾ ಪ ನರರು ಹಿಂದೆ ಪಟ್ಟಪಾಡು ಮರವರೇಜೀವಾ ಅ.ಪ ವಿಷಯದಾಸೆಯೋಳ್ ವಿಷಮ ಸಂಸಾರದಲ್ಲಿ ವಿವಿಧ ಚಿಂತೆಯೋಳ್ 1 ನೀಮನದಿ ಕೋರಿ ಕಾಮಕ್ರೋಧಲೋಭಾದಿಗಳು ಕಲುಷದದಾರಿ 2 ವಡೆಯಗೊಪ್ಪಿಸೊ ಧೃಡಮನದಿ ಗುರುರಾಮವಿಠಲ ನಡಿಗಳಸ್ಮರಿಸೂ 3
--------------
ಗುರುರಾಮವಿಠಲ
ಮಂಗಳ ಜಯಮಂಗಳ | ಶುಭಮಂಗಳ | ಮಂಗಳ ಮಹೀಪತಿ ಗುರುಮೂರ್ತಿಗೆ | ಮಂಗಳ ಶರಣರ ಸಾರಥಿಗೆ ಪ ಹಲವು ಸಾಧನದಿಂ ತೊಳಲುತ ತತ್ವದ | ನೆಲೆಗಾಣದವರನು ತಾರಿಸಲಿ | ಒಲಿದು ಶ್ರೀಗುರು ರೂಪದಿಂದಲಿ ನರದೇಹ | ಇಳೆಯೊಳು ಧೃಡಿಸ್ಯವತರಿಸಿದಗೆ 1 ಬೇಡಿದಿಷ್ಟಾರ್ಥವ ಕಾಮ್ಯ ಭಕುತರಿಗೆ | ನೀಡುತ ನಿರುಪಾಧಿಕ ಜನರಾ | ಮಾಡಿ ಜೀವನ್ಮುಕ್ತರ ನಿಜಬೋಧದ ಲಾಡುವ ಕರುಣಾಸಾಗರಗೆ 2 ಎಡಬಲದಲಿ ಯೋಗ ಭೋಗ ಚಾಮರದಿಂ | ದೃಢಸಿಂಹಾಸನ ಲೊಪ್ಪವಗೆ | ಪೊಡವಿಲಿ ಮೂಢ ನಂದನ ಕೈಯ್ಯವ | ಬಿಡನೆಂದಭಯವಿತ್ತ ಸ್ವಾನಂದಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಂ ಶ್ರೀರಂಗಗ ಮಂಗಳಂ ಇಂಗಿತ ಭಕ್ತರ ಅಂಗಸಂಗಾದವಗ ಪ ಸಿರಿತಳಕ ಮಂಗಳ ಕಾಲಿಯ ವರದನಾ ವರನಖಮಂಗಳ ಗಂಗೆ ಪಡಿದನಾ ಚರಣ ಕಮಂಗಳ ಅಹಿಲ್ಯ ಉದ್ಧಾರಗ ನೆರೆಜಂಘಗೆ ಮಂಗಳೆ ಶೊದಾನಂದನಾ 1 ತೊಡೆಗಳಿಗೆ ಮಂಗಳ ಗರುಡ ವಾಹನನಾ ನಡುವಿಗೆ ಮಂಗಳ ಧೃವ ಗೊಲಿದನ ಒಡಲ ಕಮಂಗಳ ಜಗವಳ ಕೊಂಬನಾ ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ 2 ಉರ ಸಕ ಮಂಗಳ ಉಪಮನ್ಯು ಪ್ರೀಯನಾ ಸಿರಿವಕ್ಷಕ ಮಂಗಳ ಭೃಗು ರಕ್ಷನಾ ಕರಗಳಿಗೆ ಮಂಗಳ ಕರಿರಾಜ ವರದನಾ ಕೊರಳಿಗೆ ಮಂಗಳ ತುಳಸಿ ಧರನಾ 3 ಇದು ಶೃತಿಗೆ ಮಂಗಳ ಹನುಮನೇ ಕಾಂತನಾ ವದನಕ ಮಂಗಳ ವಿದುರ ಗೊಲಿದನಾ ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ ಮದನ ಮೋಹನನಾ 4 ಸಿರಸಕ ಮಂಗಳ ಫಣಿರಾಜಶಯನನಾ ದೊರೆತನಕ ಮಂಗಳ ಶ್ರೀ ಭೂರಮಣನಾ ಗುರುತನಕ ಮಂಗಳ ಉದ್ಬವತಾರಕನಾ ಕರುಣಿಗೆ ಮಂಗಳಾರ್ಜುನ ಬೋಧನಾ 5 ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ ಅಭಯಕ ಮಂಗಳಾಜಮೀಳ ಪಾಲನಾ ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ 6 ಸಿರಿನಾಮಕ ಮಂಗಳ ನಾರದ ಪ್ರೀಯನಾ ಕ ಮಂಗಲ ಶಿವ ವಂದ್ಯನಾ ಗುರುವರ ಮಹಿಪತಿ ನಂದನಸಾರಥಿ ಬಿರದಿಗೆ ಮಂಗಳಾಂಬರೀಷ ನೊಡಿಯನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು