ಒಟ್ಟು 38 ಕಡೆಗಳಲ್ಲಿ , 21 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆಪ. ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ1 ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ 2 ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ 3
--------------
ವಾದಿರಾಜ
ನೆನೆವವಗೆ ಹರಿಯುಂಟು ನೆನೆಯದವಗೆ ಮದ ವೆಂಟು ಪ ನೆನೆವ ಮನವಿರಲುಂಟು ಮುನಿಸುತನ ನಂಟು ಅ.ಪ ನೆನೆವ ಧೃವನೂ ಗೆದ್ದ ಶುಕಮಹಾಮುನಿಗೆದ್ದ ನೆನೆವ ಹನುಮನೂ ಗೆದ್ದ ಶರಭಂಗ ಮುನಿಗೆದ್ದ ನೆನೆವ ಗಜಪತಿಗೆದ್ದ ವಾಲಿತನಯನೂ ಗೆದ್ದ ಕನಕದಾಸನು ಗೆದ್ದ ಇದು ಸರ್ವಸಿದ್ಧ 1 ಧುರದಿ ರಾವಣ ಬಿದ್ದ ವರವಿಭೀಷಣ ಗೆದ್ದ ದುರುಳ ಕಶಿಪೂ ಬಿದ್ದ ಪ್ರಹ್ಲಾದ ಶಿಶುಗೆದ್ದ ಹಿರಿಯವಾಲಿಯುಬಿದ್ದ ಸುಗ್ರೀವ ಗೆದ್ದ 2 ಸುಲಭನೊ ಮಾಂಗಿರಿಯ ರಂಗ ಜಗದಾನಂದ ಫಲವ ಕೊಟ್ಟಳಿಗೊಲಿದ ವಿಷಧರೆಯ ಸದೆದ ಬಲು ಮೆರೆದ ಕೌರವನ ಕುಲವಿನಾಶವ ಗೈದ ಚೆಲುವ ಮಾಂಗಿರಿರಂಗ ಶರಣರಿಗೆ ವರದ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದ 1ಸುರರ ಮಣಿಮಕುಟಗಳು ಸೋಕಿ ಶೋಭಿಪ ಪಾದಪರಮ ಪಾವನೆ ಲಕ್ಷ್ಮಿ ಪಿಡಿದೊತ್ತುವ ಪಾದಧುರದಿ ನರರಥವೇರಿ ದೇದೀಪಿಸಿದ ಪಾದಹರಿವೈರಿಕರಗಳಲಿ ಹೊಳೆವ ಪಾದ 2ಸಿರಿಯುಳ್ಳ ಕುರುಪತಿಯ ಶಿರವೆರಗಿಸಿದ ಪಾದಪರಿದು ನಾಗನ ಶಿರಗಳೊಳು ಹೊಳೆದ ಪಾದಅರವಿಂದಮುಖಿಯರೊಡನತಿ ನರ್ತಿಸಿದ ಪಾದನೆರೆ ಜರೆದ ಶಿಶುಪಾಲನ್ನೊಳಗಿಟ್ಟ ಪಾದ 3ಕರುಗಳೊಡಗೂಡಿ ಕಾನನದಲಾಡಿದ ಪಾದಕರುಣದಿಂ ಪಾಂಡವರ ಕಾಯ್ದ ಪಾದಮರೆಯೊಕ್ಕ ಸುಜನರಿಗೆ ಮುಕ್ತಿಗೊಡುತಿಹ ಪಾದಸ್ಮರಿಸಲಘರಾಶಿಗಳ ಸಂಹರಿಪ ಪಾದ 4ಬಲಿ ಯಜ್ಞವಾಟಕ್ಕೆ ಬಂದು ನೆಲಸಿದ ಪಾದಬಲು ಬೆಳೆದು ಲೋಕಗಳ ಬಂಧಿಸಿದ ಪಾದಕಲಕಿ ಗಂಗೆಯ ಧರೆಗೆ ಕೋಡಿವರಿಸಿದ ಪಾದಸುಲಭದಿಂ ಭಕ್ತರಿಗೆ ಸುಖವೀವ ಪಾದ 5ಧ್ವಜರೇಖೆುಂ ಕೂಡಿ ಥಳಿಥಳಿಸುತಿಹ ಪಾದವಿಜಯವಹ ವಜ್ರದಿಂದೊಪ್ಪುತಿಹ ಪಾದಗಜವ ಶಿಕ್ಷಿಪಮುದ್ರೆ ಗೋಚರಿಸುತಿಹ ಪಾದನಿಜಪದ್ಮದಿಂ ಲೋಕನಿಧಿಯಾದ ಪಾದ 6ಅರೆಯಾದ ಸತಿಯನಂಗನೆಯ ಮಾಡಿದ ಪಾದಧರೆಯ ಧರಿಸಿಹ ಶೇಷ ಧ್ಯಾನಿಸುವ ಪಾದತರುಣನಾಯಕ ಪುರದಿ ಸ್ಥಿರದಿ ನೆಲಸಿದ ಪಾದತಿರುಪತಿಯ ವೆಂಕಟೇಶ್ವರ ನಿಮ್ಮ ಪಾದ 7ಓಂ ವೃಷಭಾಸುರ ವಿಧ್ವಂಸಿನೇ ನಮಃ
--------------
ತಿಮ್ಮಪ್ಪದಾಸರು
ಪಾಲಿಸೋಯನ್ನ ಪರಾತ್ಪರಾ - ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನ ಘಣಿಶೈಲ ನಿಲಯ-ಹರಿ ಅ.ಪ ಜಲಜಭವನ ನಿಜಕುಕ್ಷಿಯೊಳಿದ್ದ ಸುಲಲಿತ ವೇದಾಪಹಾರಿಯ ಕಂಡು ಜಲಜರೂಪಿನಿಂದಾ ಖಳ ಸಂಹರ ಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಅಂದು ದೂರ್ವಾಸನ ಶಾಪದಿ ಜಗವು ಇಂದಿರೆ ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ಧರಣಿಯನಪಹಾರಗೈಯ್ಯಲು ಬೇಗ ಸೂಕರ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ3 ಸರಸಿಜಜನ ವರದರ್ಪದಿ ಜಗವನುರುಹಿ ತರಳನ ಬಾಧೆಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ 4 ಬಲಿಯ ಮೂರಡಿಭೂಮಿ ದಾನವ ಬೇಡಿ ಅಳೆದು ಈರಡಿಮಾಡಿ ಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯ ಪೆತ್ತ ಚೆಲುವ ವಾಮನರೂಪ5 ಚಕ್ರಾಂಶನಾದ ಕಾರ್ತಿವೀರ್ಯನ ಭುಜ ಚಕ್ರದೊಡನೆ ದುಷ್ಟ ಭೂಪರ ಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ಕ್ರೂರ ರಾವಣ ಕುಂಭಕರ್ಣರ ಬಲು ಘೋರತನಕೆ ತ್ರಿವೇಶರ ದೊಡ್ಡ ದೂರ ಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀರಾಮ ಮೂರುತಿ 7 ಬಲಭದ್ರನೆಂಬುವ ನಾಮದಿ ಧುರದಿ ಹಲ ನೇಗಿಲುಗಳನು ಹಸ್ತದಿ ಪಿಡಿದು ಬಲವಂತರಾದ ದೈತ್ಯಕುಲವ ತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರನಿಭಚೇಲ 8 ಭಾರ ಸೃಷ್ಟೀಶನಲ್ಲಿ ದೂರಿಡೆ ಬಲು ಭ್ರಷ್ಟ ಕೌರವ ಯುಧಿಷ್ಠಿರಗೆ ವೈರ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ 9 ಕಲಿಯಿಂದ ಕಿಡೆ ನಿಜಧರ್ಮವು ಬಹು ಖಳರಿಂದ ವ್ಯಾಪಿಸೆ ಲೋಕವು ಆಗ ಲಲಿತ ತೇಜಿಯನೇರಿ ಕಲುಷಾತ್ಮಕರ ಕೊಂದು ವಿಲಸಿತ ಧರ್ಮವನು ಸಲಹಿದ ಕಲ್ಕಿರೂಪ 10 ಗಿರಿಜಾವಿವಾಹದಿ ತ್ವಷ್ಟ್ರನ ಶಾಪ ಶರಧಿಯೀಂಟಿದ ಮುನಿಗೈದಲು ಬೇಗ ವರವ್ಯಾಘ್ರ ಗಿರೀಶನೆ ಶರಣೆಂದ ಮುನಿಪಗೆ ವರವಿತ್ತು ಸಲಹಿದ ವರದವಿಠಲಹರಿ11
--------------
ವೆಂಕಟವರದಾರ್ಯರು
ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ ಪ . ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆಇಷ್ಟಾರ್ಥಗಳನಂದು ಕೊಟ್ಟು ಕಾಯನೆದುಷ್ಟತನದಿ ಧೃತರಾಷ್ಟ್ರತನಯ ತನ್ನಕಟ್ಟಲು ಹವಣಿಸೆ ಕಷ್ಟವನುಣಿಸನೆ 1 ಕಾಲಲಿ ತನ್ನ ಅಂಗವನೊದ್ದ ಮುನಿಪನಮೂಲೋಕವರಿಯೆ ಮುದ್ದಿಸಿ ಮೆರೆಯನೆತಾಳದೆ ನೃಪತಿಯ ತಾನೆಂದು ತಿಳಿಯನುಕಾಲಯವನ ಬಂದು ಕಾಳು ಮಾಡಿಸನೆ 2 ಪರವಶಚಿತ್ತನಾಗಿಫಲುಗುಣ ಜರೆಯಲುಹರಿ ದೂರಾಗದೆ ಹರಣವ ಕಾಯನೆಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ3 ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದಸುರವ್ರತÀಗಂದು ಶುಭವನೀಯನೆಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದಶರೀರ ಸಂಬಂಧಿಯ ಕೊಲಿಸನೆ 4 ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲಅಕಳಂಕನಂದು ಕಾವುದ ಬಿಟ್ಟನೆಈ ಕೃಷ್ಣ ಹಯವದನನಿಂದುಡುಪಿನ ಜನಕೆಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ5
--------------
ವಾದಿರಾಜ
ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ ಪ ಕೃಷ್ಣಗೆ ಮಾನಿನೀಯರು ಕಂಗಳಿಂದಲೆ ನೋಡಿಸುಖಿಸಿ ಕಮಲಮುಖಿಯರು ಅ.ಪ. ಕುಂಡಲ ಹಾರ ಪದಕ ಧರಿಸಿ ಕುಳಿತಿಹಾಪದಕ ಧರಿಸಿ ಕುಳಿತಿಹಾಸರಸಿಜಾಕ್ಷನೋಳ್ಪಜನನೆ ಹರುಷ ಕೊಡುತಿಹಾ 1 ಕಡಗ ಕಂಕಣ ವಂಕಿ ನಾಗಮುರಿಗೆ ಪೊಳೆವುದುನಾಗಮುರಿಗೆ ಪೊಳೆವುದುಜರದಗೊಂಡೆ ತಾಯತ ಮುತ್ತು ಸಿರಿಯು ತೂಗೊದು 2 ಕಾಲಕಡಗ ರುಳಿಯು ಗೆಜ್ಜೆ ಸಾಲು ಚರಣದಿಗೆಜ್ಜೆ ಸಾಲು ಚರಣದಿಭಾಳ ದನಿಯ ಮಾಡುತಿಹುದು ಕೇಳಿ ಕರ್ಣದಿ 3 ಕನಕ ವಸನ ಹೀರ ಕಾಂಚಿ ಕಟಿಯ ತಟದಲಿಕಾಂಚಿ ಕಟಿಯ ತಟದಲಿಮಿಂಚಿನಂತೆ ಮಿನುಗುತಿಹದೊ ನೋಡಿ ಸುಖದಲಿ 4 ಬೊಟ್ಟು ಹಿಡಿದು ಬಾಲನಿಂದ ಚರಿಸಿದಂದದಿಹಿಡಿದು ಬರಿಸಿದಂದದಿಕೃಷ್ಣ ವಿಷ್ಣು ಜಯದ ಸಿರಿಯು ಕೃಷ್ಣ ಜನ್ಯದೀ 5 ಕರವ ಪಿಡಿದು ಹಯದ ಷಣಶ ತಿರುಗುವಾ 6 ಹರಣ ಹರಣ ಮಾಡಿದಧುರದಿ ಪಾರ್ಥನ ಹೆಸರು ಮಾಡಿ ಹರಿಯ ನಡೆಸಿದಾ7 ಹರಿಯು ಮುಖವ ನೋಡಿ ರಾಜರು ಹರುಷಬಟ್ಟರುರಾಜರು ಹರುಷಬಟ್ಟರುಮುಖವ ದಯದಿ ಮೋಕ್ಷದ ಸಿರಿಯನುಂಡೆಯೋ 8 ನಿತ್ಯ ತಂದು ಸುಖಿಸುವೆ 9
--------------
ಇಂದಿರೇಶರು
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ | ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1 ಧುರದಿ ರವಿಸುತ | ಉರುಗಗಳವನು ಭರದಿ ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ ಸಲಹಿದ ಶೌರಿಗೆ ಮುರವೈರಿಗೆ 2 ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ | ತಟತಸನ್ನಿಭ ಶಾಮಸುಂದರವಿಠಲಗೆ ವಿಪಗಮನಗೆ 3
--------------
ಶಾಮಸುಂದರ ವಿಠಲ
ಮನುಜಾವತಾರ ಶ್ರೀ ರಾಮನೆಂಬುದು ನಿಜವೆಮುನಿಮನಕೆ ನಿಲುಕದವನುಅನುಪಮನು ನಿಜಜನರನುದ್ಧರಿಸಬೇಕೆಂದುತನುವಿಡಿದು ತೋರಿಸಿದನು ತಾನು ಪದಶರಥಗೆ ಸುತನೆಂಬುದದು ವರವನಿತ್ತುದಕೆಸಸಿನೆ ಬಿಡೆ ಮುಕ್ತಿ ಪಥಕೆಎಸೆದು ವನದೊಳು ಹೊಳೆದುದದು ಮುನಿಗಳೆಲ್ಲರಿಗೆವಶವಾದನೆಂಬ ನೆವಕೆಶಶಿಮುಖಿಯನಗಲಿದುದು ನಿಜ ಭಕ್ತ ರಾವಣನಅಸುರ ಜನ್ಮದ ಭಂಗಕೆಕುಸುಮಶರ ವಶನಾದ ವಾಲಿ ವಧೆಯವನಘವನಶಿಸಿ ನಿಜವೀವದಕ್ಕೆ ನಿಲುಕೆ1ಸುಗ್ರೀವ ಮೊದಲಾದ ವಾನರರ ನೆರಹಿದುದುಸ್ವರ್ಗದವರವರಾಗಲುದುರ್ಗತಿಸ್ಥ ಕಬಂಧ ಮೊದಲಾದವರ ಶಾಪನುಗ್ಗುನುಸಿಯಾಗುತಿರಲುದುರ್ಗರೂಪದ ಮೋಕ್ಷ ಭಜಕರಿಗೆ ವಶವೆಂದುಮಾರ್ಗ ಸೇತುವ ತೋರಲುನುಗ್ಗಿ ಲಂಕಾದ್ವೀಪದೊತ್ತಿನಲಿ ನಿಂದು ಅಪವರ್ಗಧಸಿಗೆಯ ಮಾಡಲು ಕೊಡಲು 2ಕರುಣರಸವೇ ಬಾಣವೆಣಿಸೆ ಪುಷ್ಪಸಮಾನದುರಿತ ಮಾರ್ಜನ ಪಾವನಧರಣಿಯೊಳಗಿರಲೇಕೆ ಪುರವರಕೆ ಬಾಯೆಂದುಕರೆವ ಪರಿಯವರ ಗಾನಧುರದಿ ಸಾಕ್ಷಾತ್ಕಾರಿಪ ಛಲವಿಡಿದ ರಾವಣನುನೆರೆ ತನ್ನ ತಿಳಿದ ಜಾಣತಿರುಪತಿಯ ವೆಂಕಟನು ಸಕಲರಿಗೆ ಮುಕ್ತಿಯನುಕರುಣದಿಂ ಕರೆದಿತ್ತನು ತಾನು 3 ಓಂ ವತ್ಸ ವಾಟೀಚರಾಯ ನಮಃ
--------------
ತಿಮ್ಮಪ್ಪದಾಸರು
ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ ನೆರೆನಂಬಿದವ ಧನ್ಯನೊ ಪ ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ ಪುರದ ಕೋಟೆಯೊಳಿರಲು ಬಂದಿಹ ಅ.ಪ ಬಹುಭರದಿವಾರಿಧಿ ಲಂಘಿಸಿ ಹರಿಭಟನೆಂದು ತಿಳಿಸಿ ತ್ವರದಿ ರಾಮನಿಗರ್ಪಿಸಿ ಧೀರನೆ ಸುರವಿನುತ ತವ ಪರಿಮಳವಿರಚಿಸಿದ ಗುರುವರರ ನೋಡಿದೆ 1 ಗೋವಿಂದನಂಘ್ರಿಯ ಭಜಿಸಿ ಮನದಿ ಭಾವಿಸಿ ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ ಸಮರ್ಥ ತವಪದ ಕೊಂದಿಸುವೆ ಮನ ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2 ಪುಟ್ಟಿಯತಿರೂಪವನೆಧರಿಸಿ ಕ್ಷಿತಿಯೊಳಗಖಿಲ ದುರ್ಮತಗಳೆಂಬುವ ಮೇಘತತಿಗೆ ಮಾರುತನೆನಿಸಿ ಪ್ರತಿಪಾದ್ಯನೆಂದು ತಿಳಿಸಿ ಸುಖ ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ ಅತುಳ ಮಹಿಮನೆನುತಿಸುವೆನು ಸತತ ಪಾಲಿಸೋ 3 ತನುಮರೆಯಲು ಧುರದಿ ಜೀವನವಿತ್ತಕಾರಣದಿ ವನಜನಾಭನು ದಯದಿ ತನ್ಮೂರ್ತಿ ಸಹಿತದಿ ತಟಿತ್ಕೋಟಿ ಸೇವಕಜನರ ಸಲಹುವಿ ಕೊಳುತಲಿ ಮೆರೆವದೇವನೆ 4 ಶಿರದಿ ಮುಕುಟ ಮಂಡಿತ ಮೂರ್ತಿ ದರುಶನವನೆ ಕೊಳ್ಳುತ ವಿಸ್ತರ ಮಂಟಪದಿರಾಜಿತ ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ ಕರುಣವ ಪಡೆದ ಧೀರನೆ 5
--------------
ಕಾರ್ಪರ ನರಹರಿದಾಸರು
ಮಾನವ ಪ ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ ಶರಧಿ ಚಂದಿರನಾದ ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ ಪರಮ ಸಾಧು ಸಹ್ಲಾದ ಅ.ಪ ತರಣಿ ತನಯನ ಸೂತ ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ ಮರುತ ದೇವನ ಪದಕೆ ಬರುವ ಯತಿಗಳ ದೂತ ವರದೇಂದ್ರ ತೀರ್ಥರಿಗೆ ಪ್ರೀತ || ಗುರುಧೇನು ಪಾಲ ವಿಜಯ ದಾಸವರ್ಯರ ಮಮತ ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ ನಮಗೀತ ಗತಿ ಪ್ರದಾತ 1 ದುರಿತ ವಿದೂರ ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ ಸಾರಿದಂಥ ಸುಧೀರ || ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ ಸುಜನ ಕೋರಿಕೆಯ ಮಂದಾರ ಭೂರುಹದ ತೆರದಿ ಘುನ ಸೂರೆ ಕೊಡುವನುದಾರ ದುರಿತವಿಪಿನ ಕುಠಾರ 2 ಇವರ ಕವನ ಪಠಣ ಶ್ರವಣ ಮನನಗಳಿಂದ ಲವಕೇಶವಾಗದು ಜವನ ಭವನದ ಬಂಧ ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ ಗೈದ ಮನಜ ದಿವಾಂಧ | ಭುವನದೊಳು ಬೆಳಗುತಿಹ ಇವರ ಮಹಿಮಾನಂದ ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ ನೆಲಸಿಹವು ನಲವಿಂದ 3 ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ ಹರಿಗೆ ಪಂಚಪ್ರಾಣ || ಅರುಹಲೇನಿವರ ಚರಣನಂಬಿದ ಸುಜನ ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ ಸೇರಿದರು ನಿಜ ಸ್ಥಾನ 4 ಶಾಮಸುಂದರ ವಿಠಲ ಸ್ವಾಮಿಗತಿ ಪ್ರಿಯದಾಸ ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ ತಿಮಿರ ದಿನೇಶ ಭೂಮಿ ವಿಬುಧರ ಪೋಷ || ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ ಸೋಮಸುಪ್ರಭೆಯಂತೆ ಪಸರಿಸುತÀ ಸಕಲದೇಶ ಸುಜನ ಕುಮುದ ವಿಕಾಸ ಗೊಳಿಸಿಗರೆದುದುಲ್ಹಾಸ 5
--------------
ಶಾಮಸುಂದರ ವಿಠಲ
ಮುಖ್ಯಪ್ರಾಣ ಕರವೆತ್ತಿ ನಿಂದ ಪ ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ. ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು ವರಕಪಿಗಳೊಡಗೂಡಿ ಸಿರಿದೇವಿಯನರಸುತ ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ ಪರಿತೋರದಿರ್ದ ಹರಿವರರಿಗಭಯವಿತ್ತು 1 ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ ಸಿರಿ ರಾಮ ನೋಡುತ ಮರುಗುತಿರಲಂದು ವರ ಜಾಂಬವನ ಸುಮತಿಯಲಿ ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2 ಭರದಿ ದಶಶಿರನು ತಾನರಿಯದೆ ಹನುಮನ ಬಲ ಭರವಸದಲಿ ಮಾಡಿ ಮೂರು ಗುದ್ದಿನ ಪಂಥ ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3 ದುರುಳ ಕೀಚಕನಂದು ಕರಿಗಮನೆಯನು ಕಂಡು ಸ್ಮರಶರಹತಿಯಿಂದ ಉರುತರದಲಿ ನೊಂದು ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4 ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5 ಹರಿಹರರು ಸರಿಯೆಂದು ಹರಟುತಿರ್ದವರನು ಗುರುತರ ವಾಕುಗಳೆಂಬ ಬಿರುಬಾಣದಿಂದ ಗರ ಹೊಡೆದವರ ಮಾಡಿ ಪರತತ್ವವನು ಪೇಳಿ ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6 ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು ಸಿರಿ ರಂಗೇಶವಿಠಲನ ದುರಿತ ಭಯವಿಲ್ಲೆಂದು 7
--------------
ರಂಗೇಶವಿಠಲದಾಸರು
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು
ಯಾರ ಪಾಡಿದರೇನು ಯಾರ ಬೇಡಿದರೇನು ಯಾರು ಕೈಹಿಡಿದೆತ್ತಿ ಪಾಲಿಸುವನು ಪ ನೀರಜಾಸನ ನೊಂದು ನೂರುವರ್ಷ ಬಾಳೆಂದ ಕರ್ಮ ಕಳೆಯಲೆಂದು ಅ.ಪ ವೀರಪಾರ್ಥನು ಧುರದಿ ಹೊರಾಡಬೇಕೆಂದ ಮಾರುತಿಯಶ್ರೀರಾಮ ಕರುಣೆ ಬರಲೆಂದ ನಾರದನು ನಾರಾಯಣನ ಮಂತ್ರ ಭಜಿಸೆಂದ ಕಾರಣದಿ ಮಣಿವೆ ಮಾಂಗಿರಿಯರಂಗ ಗೋವಿಂದ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ವೆಂಕಟರಮಣ ವೇದಾಂತಕೋಟಿವಂದ್ಯ ಪತಿ ಏಳೆನ್ನುತ ಪ. ಪಂಕಜಮುಖಿ ಪದ್ಮಾವತಿ ಸರ್ವಾ- ಲಂಕಾರದ ನಿದ್ದೆ ಸಾಕೆನ್ನುತ ಅ.ಪ. ಮಂಗಲಚರಿತ ಭುಜಂಗಶಯನ ನಿ- ನ್ನಂಗದಾಯಾಸವ ಪರಿಹರಿಸಿ ಪೊಂಗಲಶದಿ ಉಷ್ಣೋದಕ ಗಂಧ ತೈಲಾ- ಮೂರ್ತಿ 1 ದಧಿಯ ಪೃಥುಕದಲಿ ಹದಗೈದು ಮಧುರದಿ ಮಧುಸೂದನ ನಿನ್ನ ಪದದ ಮುಂದೆ ಸದ್ ಹೃದಯರು ತಂದಿಹರು ಸಮರ್ಪಿಸೆ ಮದಜನಕ ನಿನ್ನ ಓಲೈಸುವರಯ್ಯ 2 ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ ಚೆನ್ನಾದ ಗೋಕ್ಷೀರವನ್ನು ತಂದು ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು- ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3 ವಿಧವಿಧ ಷಡುರಸಭರಿತ ಮನೋಹರ ಸುಧೆಗೆಯಿಮ್ಮಡಿ ಮಧುರತ್ವದಲಿ ಮೃದುವಾದ ಉದ್ದಿನ ದೋಸೆಯ ಸವಿಯೆಂದು ಪದುಮನಾಭನೆ ನಿನ್ನ ಹಾರೈಸುವರಯ್ಯ 4 ಕದಳಿ ಉತ್ತಮ ಫಲಗಳ ತಂದು ರಕ್ಕಸವೈರಿಯೆ ನಿನ್ನ ಮುಂದೆ ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ ವಾಸುದೇವ ನೀನೇಳಯ್ಯ5 ಸಾರಹೃದಯ ಗೌಡಸಾರಸ್ವತ ವಿಪ್ರ ಭೂರಿ ವೇದಾದಿ ಮಂತ್ರದ ಘೋಷದಿ ಶ್ರೀರಮಣನೆ ದಯೆದೋರೆಂದು ಕರ್ಪೂರ- ದಾರತಿಯನು ಪಿಡಿದಿಹರು ಶ್ರೀಹರಿಯೇ 6 ಭಾಗವತರು ಬಂದು ಬಾಗಿಲೊಳಗೆ ನಿಂದು ಭೋಗಿಶಯನ ಶರಣಾದೆನೆಂದು ಜಾಗರದಲಿ ಮದ್ದಳ ತಾಳರಭಸದಿ ರೇಗುಪ್ತಿರಾಗ ಸಂಗೀತ ಪಾಡುವರಯ್ಯ 7 ಕರುಣಾಸಾಗರ ನಿನ್ನ ಚರಣದ ಸೇವೆಯ ಕರುಣಿಸೆಂದೆನುತಾಶ್ರಿತ ಜನರು ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ- ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8 ನಾನಾ ಜನರು ಬಂದು ಕಾಣಿಕೆ ಕಪ್ಪವ ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ ದಾನವಾಂತಕ ನಿನ್ನ ದಯವೊಂದೆ ಸಾಕೆಂದು ಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9 ನೀನೆ ಗತಿಯೆಂದು ನಿನ್ನ ನಂಬಿಹರು ಲ- ಕ್ಷ್ಮೀನಾರಾಯಣ ಪುರುಷೋತ್ತಮನೆ ಮಾನದಿ ಭಕ್ತರ ಸಲಹಯ್ಯ ಸಂತತ ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ತುಪಾಕಿ ವೆಂಕಟರಮಣಾಚಾರ್ಯ